“ಅಕ್ಕ” ವಿಶ್ವ ಕನ್ನಡ ಸಮ್ಮೇಳನ 2014 – ಉಮಾ ವೆಂಕಟೇಶ್ ಅವರ ವರದಿ

ಸಿಲಿಕಾನ್ ಕಣಿವೆಯಲ್ಲಿ ಸಿಡಿದ ಸಿರಿಗನ್ನಡದ ಸಿಡಿಮದ್ದು !

                            ಡಾ ಉಮಾ ವೆಂಕಟೇಶ್

AKKA Razzmatazz
Photo: Uma Venkatesh

“ಸಾಧನೆ. ಸಂಭ್ರಮ. ಸಂಕಲ್ಪ” ಈ ನುಡಿಗಳ ಧ್ಯೇಯ ವಾಕ್ಯವನ್ನು ಹೊತ್ತ ೮ನೆಯ ಅಕ್ಕ ವಿಶ್ವ ಕನ್ನಡ ಸಮ್ಮೆಳನವನ್ನು, ಉತ್ತರ ಕ್ಯಾಲಿಫ಼ೋರ್ನಿಯಾದಲ್ಲಿನ, ಸಿಲಿಕಾನ್ ಕಣಿವೆಯ ಪ್ರಸಿದ್ಧ ನಗರಿ, ಸ್ಯಾನ್ ಹೊಸೆಯಲ್ಲಿ ನೋಡುವ ಸುವರ್ಣಾವಕಾಶವೊಂದು, ಆಂಗ್ಲ ಕನ್ನಡತಿಯಾದ ನನಗೆ ದೊರಕಿತು. ೫೦ ರಾಜ್ಯಗಳ ವಿವಿಧ ಕನ್ನಡ ಕೂಟಗಳ ಆಗರದ, ಈ ಕನ್ನಡ ಹಬ್ಬವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ, ಅಮೆರಿಕೆಯ ವಿವಿಧ ದಿಕ್ಕುಗಳಲ್ಲಿ ನಡೆಸುವ ಈ ಸಮಾರಂಭದಲ್ಲಿ, ಇಲ್ಲಿರುವ ಸಹಸ್ರಾರು ಕನ್ನಡಿಗರು ಒಂದೆಡೆ ನೆರೆಯುತ್ತಾರೆ. ಇವರಲ್ಲಿ ಎಷ್ಟೇ ವಿಭಿನ್ನ ಅಭಿಪ್ರಾಯಗಳಿದ್ದರೂ, ಅವೆಲ್ಲವನ್ನೂ ಆಚೆ ತಳ್ಳಿ, ೩ ದಿನಗಳು ಎಲ್ಲರೂ ಒಮ್ಮನದಿಂದ ಕಲೆತು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಒಟ್ಟಾಗಿ ಮೆರೆಸುವ ಇವರ ವೈಖರಿಗೆ, ಯಾರಾದರೂ  ತಲೆದೂಗಲೇ ಬೇಕು. ಸಂಖ್ಯೆಯಲ್ಲಿ ದೊಡ್ಡದಾಗಿದ್ದರೆ ಅದರಲ್ಲಿರುವ ಲಾಭ ಮತ್ತು ಅನುಕೂಲತೆಗಳು ಏನೆಂಬುದು ನನಗೆ ಕಳೆದ ವಾರ ನಡೆದ ಈ ಸಮಾರಂಭದ ಮೂರು ದಿನಗಳಲ್ಲಿ ಚೆನ್ನಾಗಿ    ಅರಿವಾಯಿತು. ಕೇವಲ ಹಣವೊಂದೇ ಅಲ್ಲ, ಮನುಷ್ಯ ಪ್ರಯತ್ನ ಮತ್ತು ಇನ್ನಿತರ ಸಂಪನ್ಮೂಲಗಳ ಅನುಕೂಲಗಳು ಅನೇಕ ಪಟ್ಟು ಹೆಚ್ಚಿ, ಈ ದೊಡ್ಡ ಕಾರ್ಯವನ್ನು ವೈಭವದಿಂದ ಆಚರಿಸಲು ಸಹಾಯಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Read More »

ಸುದರ್ಶನ ಗುರುರಾಜರಾವ್ ಅವರಿಂದ ‘ಗುರುವಂದನೆ’

ಇಂದು ಗುರು ಪೌರ್ಣಮಿಯ ದಿನದ ಕಾಣಿಕೆ.

ಗುರುವಂದನೆ

ನಮ್ಮ ವೈದ್ಯಕೀಯ ಶಿಕ್ಷಣಾರಂಭದ ೨೫ ನೇ ವರ್ಷ ತುಂಬಿದ, ಬೆಳ್ಳಿ ಹಬ್ಬದಾಚರಣೆಯ ಸಂದರ್ಭದಲ್ಲಿ ಗುರುವಂದನೆ ಹಮ್ಮಿಕೊಂಡಿದ್ದೆವು. ಆ ದಿನ ನಾನು ಮಾಡಿದ ಸ್ವಾಗತ ಭಾಷಣದ ಲೇಖನ ರೂಪ

ಪೂರ್ವ ಪೀಠಿಕೆ

(ಸೆಪ್ತೆಂಬರ್ ೫ನೇ ತಾರೀಖು ಶಿಕ್ಷಕರ ದಿನ ನಮ್ಮ ಹೆಮ್ಮೆಯ  ಡಾ. ರಾಧಾಕೃಷ್ಣನ್ ಅವರ ಜನ್ಮದಿನದ ಸಂದರ್ಭದಲ್ಲಿ ಆಚರಿಸಲ್ಪಡುವ ದಿನ .  ಇದಕ್ಕೆ ಸ್ವಲ್ಪ ಮೊದಲಲ್ಲಿ  ಗುರುಪೂರ್ಣಿಮೆಯೂ ನಮ್ಮ ಪರಂಪರೆಯಲ್ಲಿ ಆಚರಿಸಲ್ಪಡುತ್ತದೆ. ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಒಂದು ವಿಶಿಷ್ಟ ಅಂಗ. ಚೀನಾ ನಾಗರೀಕತೆಯಲ್ಲಿ ಹೊರತು ಬೇರೆಲ್ಲ  (ಪ್ರಮುಖವಾಗಿ ಯೂರೋಪದಲ್ಲಿ) ನಾಗರೀಕತೆಗಳಲ್ಲಿ ಶಿಕ್ಷಣ ಎನ್ನುವುದು ಒಂದು ವಹಿವಾಟಿನಂತೆ ಆಚರಿಸಲ್ಪಡುತ್ತಿದ್ದ ಕಾಲದಲ್ಲಿ ಹಾಗೂ ಅದಕ್ಕೆ ಬಹಳ ಹಿಂದೆ ಭಾರತದಲ್ಲಿ ವಿದ್ಯೆಯನ್ನು ವಿದ್ಯೆ ಕಲಿಸುವುದಕ್ಕಾಗಿಯೇ, ಯಾವ ಪ್ರತಿಫಲದ ಅಪೇಕ್ಷೆ ಇಲ್ಲದೆ ಕಲಿಯುವುದಕ್ಕೆ ಹಾಗೂ ಕಲಿಸುವುದಕ್ಕೆ ತಕ್ಕ ವಿದ್ಯಾರ್ಥಿ ಸಿಕ್ಕಲ್ಲಿ ಹೇಳಿಕೊಡುವ ಪರಿಪಾಠ ಇತ್ತು; ಕಡಿಮೆಯಾದರೂ ಈಗಲೂ ಇದೆ. ಗುರು ಶಿಷ್ಯ ಸಂಬಂಧಿತ ಕಥೆಗಳು ನಮ್ಮ ಪುರಾಣದಲ್ಲಿ ಸಾಕಷ್ಟಿವೆ.)

Read More »