ಚಿತ್ರ-ಬರಹ: ಬಿಂಬ-ಪ್ರತಿಬಿಂಬ – ಶ್ರೀವತ್ಸ ದೇಸಾಯಿ

ಈ ಕೆಳಗಿನ ಚಿತ್ರದಿಂದ ಪ್ರೇರಿತರಾದ ಇಬ್ಬರ (ಡಾ ದಾಕ್ಷಾಯಣಿ ಮತ್ತು ಡಾ ರಾಜಾರಾಮ್) ಕವನ ಮತ್ತು ಬರಹಗಳನ್ನು ಓದಿರಿ:

(22-9-2014  ಇಂದು ಇದೇ ಚಿತ್ರಕ್ಕೆ ಡಾ ಸುದರ್ಶನ ಗುರುರಾಜರಾವ್ ಬರೆದ ಇನ್ನೊಂದು ಕವನವನ್ನೂ ಪ್ರಕಟಿಸಿದ್ದೇವೆ. -ಸಂ)

BimbaPratibimba
Photo: Siri Gowda

   (೧)  ಬಿಂಬ, ಪ್ರತಿಬಿಂಬ

ನೋಡಿ ಪ್ರತಿಬಿಂಬ, ಮೂಡಿದೆ ಪರಿಪೂರ್ಣವಾಗಿ

ಎಂದ ವಿಚಾರವಾದಿ ಹುಡುಗ.

ನನ್ನ ಕಣ್ಣಲಿ ಮೂಡಿದ ಬಿಂಬ ನೋಡದೆ ಹೋದನೆ,

ನಿಡುಸುಯ್ದಳು ಭಾವುಕ ಹುಡುಗಿ.

Read More »

ನೋಡು ಬಾ ನಮ್ಮೂರ ಸರಣಿ: ಮೈಸೂರೆಗೊಳುವ ಮೈಸೂರು! – ಉಮಾ ವೆಂಕಟೇಶ್

“ಚಿನ್ನದ ನಾಡಿದು ಮೈಸೂರು, ಶ್ರೀಗಂಧದ ಬೀಡಿದು ಮೈಸೂರು, ವೀಣೆಯ ಬೆಡಗಿನ ಮೈಸೂರು, ನಾಲ್ವಡಿ ಕೃಷ್ಣನ ಮೈಸೂರು” ಈ ಪದ್ಯದ ಸಾಲುಗಳಲ್ಲಿ ನನ್ನೂರ ಹಿರಿಮೆ, ಗರಿಮೆ, ಸಿರಿ-ಸಂಪತ್ತು ಮತ್ತು ಸೌಂಧರ್ಯಗಳು ತುಂಬಿ ತುಳುಕುತ್ತವೆ. ಸರ್ ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ಪಡೆದಿದ್ದ ನನ್ನೂರು, ತನ್ನ ವೈಭವದ ಪರಾಕಾಷ್ಠೆಯಲ್ಲಿದ್ದಾಗ, ಮಾದರಿ ಮೈಸೂರು” ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಒಡೆಯರ್ ಮನೆತನದಿಂದ ಆಳಲ್ಪಟ್ಟ ಈ ಊರಿನಲ್ಲಿ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ವಿಧ್ಯಾಭ್ಯಾಸ ಹೀಗೆ ಒಂದೇ ಎರಡೇ, ಎಲ್ಲಾ ರಂಗಗಳಲ್ಲೂ ತನ್ನ ಹಿರಿಮೆಯನ್ನು ಮೆರೆದ ಈ ಮಹಿಷಪುರದಲ್ಲಿ, ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ ನನ್ನ ಮನದಲ್ಲಿ, ಅಲ್ಲಿನ ನೆನಪುಗಳು ಇನ್ನೂ ಹಚ್ಚಹಸಿರಾಗಿಯೇ ಉಳಿದಿದೆ.

Read More »