ಹಸಿರೇ ಉಸಿರು – ಗಿರೀಶ್ ಪ್ರಸಾದ್

ಪ್ರಿಯ ಓದುಗರೇ ! ಈ ವಾರದ ಸಾಪ್ತಾಹಕ ಸಂಚಿಕೆಯಲ್ಲಿ ಯುನೈಟೆಡ್ ಕಿಂಗ್ಡಮ್ ನ ಮಿಲ್ಟನ್ ಕೇನ್ಸ್ ನಿವಾಸಿಯಾದ ಹಾಗು ನಮ್ಮ್ ರೇಡಿಯೋ ವಾಟ್ಸ್ ಅಪ್ ಯು.ಕೆ? ಕಾರ್ಯಕ್ರಮದ RJ ಗಿರೀಶ್ ಪ್ರಸಾದ್ ಅವರ ‘ಹಸಿರೇ ಉಸಿರು’ ಶೀರ್ಷಿಕೆಯಡಿಯಲ್ಲಿ ಒಂದು ಪುಟ್ಟ ಲೇಖನ. ಓದಿ ಪ್ರತಿಕ್ರಿಯಿಸಿ. -ಸವಿ. ಸಂ

ಲೇಖಕರ ನುಡಿಗಳು

ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಗಿರೀಶ್ ಪ್ರಸಾದ್, ಯುನೈಟೆಡ್ ಕಿಂಗ್ಡಮ್ ನ ಮಿಲ್ಟನ್ ಕೇನ್ಸ್ ನಿವಾಸಿ. Astra Zeneca ಎಂಬ ಸಂಸ್ಥೆಯಲ್ಲಿ ಕೋವಿಡ್-೧೯ ಲಸಿಕೆಯ ಪ್ರಯೋಗ ತಂಡದಲ್ಲಿ ವಿಜ್ಞಾನಿಯಾಗಿ ನನ್ನ ವೃತ್ತಿ. ‘ನಮ್ಮ್ ರೇಡಿಯೋ’ ಖ್ಯಾತಿಯ ವಾಟ್ಸ್ ಅಪ್ ಯು.ಕೆ? ಕಾರ್ಯಕ್ರಮದಲ್ಲಿ RJ ಗಿರೀಶ್ ಪ್ರಸಾದ್ ಧ್ವನಿ ತಮಗೆಲ್ಲ ಚಿರ ಪರಿಚಿತ. ನನ್ನ ಈ ಇತ್ತೀಚಿನ ವೃತ್ತಿಪರ ಪ್ರಯೋಗದ ಅನುಭವ ಪ್ರಕೃತಿಯ ಹಸಿರಿನ ಮೌಲ್ಯ ಎಷ್ಟು ಪ್ರಮುಖ ಎಂದು ಅರಿವಾಯಿತು. ನನ್ನ ಈ ಒಂದು ಚಿಕ್ಕ ಲೇಖನ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ .

💚💚 ಹಸಿರೇ ಉಸಿರು 💚💚

ಕೆಲವಾರು ವರುಷಗಳಿಂದ ಎಲ್ಲಾ ದಿನ ಪತ್ರಿಕೆಗಳಲ್ಲಿ, ಸುದ್ದಿ ಮಾಧ್ಯಮದಲ್ಲಿ , ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಸದ್ದು ಮಾಡಿರುವ, ಮಾಡುತ್ತಿರುವ  ಸುದ್ದಿಎಂದರೆ  “ಕಾಂಕ್ರೀಟ್ ಕಾಡಿನಿಂದಾಗಿ ಮುಂದೊಂದು ದಿನ ಆಮ್ಲಜನಕ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು ” ಎಂದು ! ಈ ಸುದ್ದಿಗೂ , ನಮಗೂ , ಯಾವುದೇ ರೀತಿಯ ಸಂಬಂಧವೇ ಇಲ್ಲ  ಎನ್ನುವಂತೆ ಬುದ್ಧಿವಂತ ಮರೆವನ್ನು ಪ್ರದರ್ಶಿಸಿ, ಪ್ರಕೃತಿ ವಿನಾಶದ ಕಡೆ ಅಲಕ್ಷ್ಯ ಮಾಡಿದ ನಮಗೆಲ್ಲಾ ಕನಸಿನಲ್ಲೂ ಊಹಿಸದ ಆ ದಿನ ಇಷ್ಟು ಬೇಗ ಎದುರಾಗಿದ್ದು ದುರಂತವೇ ಸರಿ. ಯಾರ ಮಾತನ್ನೂ ಕೇಳದ ಅತಿಜಾಣ ಮಾನವನಿಗೆ  ಒಂದು ಸಣ್ಣ ವೈರಾಣು  ‘ಹಸಿರಿಂದಲೇ ಉಸಿರು. ಹಸಿರಿಲ್ಲದ ಕಡೆ ಉಸಿರೂ ಇಲ್ಲ  ಎಂಬ ನಿತ್ಯ  ಪಾಠ ಕಲಿಸಿದ್ದು ವಿಪರ್ಯಾಸವೇ ಸರಿ.

ಚಿತ್ರ ಕೃಪೆ : ಗಿರೀಶ್ ಪ್ರಸಾದ್


💚💚ಪಾಶ್ಚಿಮಾತ್ಯ ದೇಶಗಳನ್ನು ಎಲ್ಲಾ ವಿಷಯದಲ್ಲೂ ಅನುಸರಿಸೋ ನಾವುಗಳು. ಅದ್ಯಾಕೋ ಪರಿಸರ ಸಂರಕ್ಷಣೆ ವಿಚಾರದಲ್ಲಿ ಮಾತ್ರ ಕಡೆಗಣಿಸುತ್ತೇವೆ. ‘ವಿದೇಶದಲ್ಲಿ ರಸ್ತೆಗಳು ಬಹಳ ಸ್ವಚ್ಛವಾಗಿರುತ್ತವೆಯಂತೆ’ ,  ‘ ಮನೆ ಸುತ್ತ ಉದ್ಯಾನವನಗಳಿರುತ್ತವಂತೆ’ , ‘ವಿದೇಶದಲ್ಲಿ ಎಲ್ಲಿ ನೋಡಿದರೂ ಹಸಿರು ಕಂಗೊಳಿಸುತ್ತದೆಯಂತೆ’  ಎಂದು ಮಾತಾಡುತ್ತಲೇ ನಮ್ಮ ಮನೆ ಅಂಗಳದಲ್ಲಿರುವ ತಾತನ ಕಾಲದ ಮರಗಳನ್ನು ನೆಲ ಸಮ ಮಾಡಿ ಆ ಜಾಗದಲ್ಲಿ ಒಂದು ರೂಮ್ , ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡುವುದರಲ್ಲಿ ವ್ಯಸ್ಥವಾಗುತ್ತ ಇರೋದು ಸೋಜಿಗವೇ ಸರಿ.  ಈ ಕರೋನ ಮಹಾಮಾರಿಯನ್ನು  ಪಾಶ್ಚತ್ಯ ದೇಶಗಳು, ಅಲ್ಲಿನ ಜನರು  ಎದುರಿಸಲು ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು  ಈ “ಹಸಿರೇ “.  ಇಂದಿಗೂ ತನ್ನನ್ನೇ ನಂಬಿರುವ ಜನರ ಕೈ ಬಿಡದೆ , ಶುದ್ಧ ಆಮ್ಲಜನಕವನ್ನು  ‘ಉಸಿರಾಗಿ’ ಕೊಡುತ್ತಿರುವ , ಸಸ್ಯಶಾಮಲೆಗೆ ಸಮರಾರು ? ಒಂದು ಸಣ್ಣ ವೈರಾಣು ಕಲಿಸಿರುವ ಜೀವನ ಪಾಠವನ್ನು ಈ ಜನ್ಮದಲ್ಲಿ ಮರೆಯದೇ ,  ಹಸಿರೇ ಉಸಿರು ಎಂಬ ಮಂತ್ರವನ್ನು ನಿತ್ಯಮಂತ್ರವಾಗಿಸಿಕೊಂಡು ಇನ್ನು ಮುಂದಾದರೂ ಹೆಚ್ಚು ಹೆಚ್ಚು ಗಿಡ-ಮರಗಳನ್ನು ಬೆಳೆಸಿ, ಉಳಿಸೋಣ.  ಬನ್ನಿ ಉಸಿರಾಡೋಣ …🌴🌱🌲🍀🌴🌳

– ಗಿರೀಶ್ ಪ್ರಸಾದ್

ಸೀರೆಯೋಟ – ಶಾರದ ಸಕ್ರೆಮಠ್

ಅನಿವಾಸಿಯ ನೆಚ್ಚಿನ ಓದುಗರೇ !
ಈ ವಾರದ ‘ಹಸಿರು ಉಸಿರು’ ಪ್ರವರ್ಗದ ವಿಶೇಷ ಸಾಪ್ತಾಹಿಕ ಸಂಚಿಕೆಯಲ್ಲಿ ಕಳೆದ ಎರಡು ವರ್ಷಗಳಿಂದ ಓಟಗಾರ್ತಿ, ಟೆಲ್ಫೋರ್ಡ್ ನಿವಾಸಿಯಾದ ಶಾರದ ಸಕ್ರೆಮಠ್ ಅವರು ಸೀರೆಯಲ್ಲಿ ೫ಕಿ.ಮೀ , ೧೦ ಕಿ.ಮೀ ಮ್ಯಾರಥಾನ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಹೆಮ್ಮೆಯ ಕನ್ನಡತಿಯ ರೋಚಕ ಲೇಖನ ನಿಮ್ಮ ಮುಂದೆ. ಓದಿ ಪ್ರತಿಕ್ರಿಯಿಸಿ. -ಸವಿ.ಸಂ

ನನ್ನ ಹೆಸರು ಶಾರದ ಸಕ್ರೆಮಠ್. ಯುನೈಟೆಡ್ ಕಿಂಗ್ಡಂ ನ ಟೆಲ್ಫೋರ್ಡ್ ನಿವಾಸಿ. ಹಾಗೇರ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಿಗಳಾಗಿ ಕೆಲಸ ಮಾಡುತ್ತಿದೇನೆ.

ಬಾಲ್ಯದಿಂದಲೂ ನಾನೋರ್ವ ಪರಿಸರ ಪ್ರೇಮಿಯಾಗಿದ್ದು ಧೀರ್ಘಚಾರಣ ಮಾಡುವುದೆಂದರೆ ಬಹುಉತ್ಸಾಹಿ. ಕರ್ನಾಟಕದ ಖ್ಯಾತ ಕವಿಗಳಾದ ಬೇ೦ದ್ರೆ ಅಜ್ಜರ ತವರೂರಾದ ಧಾರವಾಡ ಜಿಲ್ಲೆಯಲ್ಲಿರುವ ಕರ್ನಾಟಕ್ ಕಾಲೇಜ್ ಧಾರವಾಡ (KCD) ಒಳವಲಯದಲ್ಲಿ ಹಾಗು ಡಿ.ಸಿ ಕಾಂಪೌಂಡಿನೊಳಗೆ ಅಮ್ಮನೊಡಗೂಡಿ ಬಾಲ್ಯದಿಂದಲೂ ಧೀರ್ಘಚರಣಿಸಿದ್ದು ಇನ್ನೂ ಸವಿನೆನಪಾಗಿ ಉಳಿದಿವೆ. ಯಾವುದೇ ಸತ್ಕಾರ್ಯ ಪ್ರಾರಂಭಿಸಲು ಶ್ರೀಗಣೇಶನ ಆಶೀರ್ವಾದ ಅತ್ಯವಶ್ಯಕ ಅಲ್ಲವೇ? ಹಾಗಾಗಿ ನನ್ನ ಈ ಚಾರಣ ಪ್ರಾರಂಭಿಸಿದ್ದು KCD ವೃತ್ತದಲ್ಲಿರುವ ಗಣೇಶನ ದೇವಸ್ಥಾನದಿಂದ. ಪ್ರಾಕೃತಿಕ ಪರಿಸರದ ಆವರಣದಲ್ಲಿ ಚಾರಣಿಸುವುದರಿಂದ ದೈಹಿಕ ಚೈತನ್ಯ ಮತ್ತಷ್ಟು ಇಮ್ಮಡಿಯಾಗುವುದು.

ಚಿತ್ರ ಕೃಪೆ : ಶಾರದ ಸಕ್ರೆಮಠ್


ಮೊದಲು ಚಾರಣದಿಂದ ಪ್ರಾರಂಭಿಸಿ ನಂತರ ಓಡ ಬೇಕೆಂದು ನಿರ್ಧರಿಸಿದೆ. ಪ್ರಾರಂಭದಲ್ಲಿ ಕ್ಲಿಷ್ಟಕರವಾದರೂ ಅದನ್ನು ಸವಾಲಾಗಿ ತೆಗೆದುಕೊಂಡು ದಿಟ್ಟ ಮನಸ್ಸು ಮಾಡಿ ಪ್ರಥಮವಾಗಿ ಅಕ್ಟೋಬರ್,೨೦೧೯ ರಲ್ಲಿ ೫ಕಿ.ಮೀ ಓಟದ ಸಾಹಸಕ್ಕಿಳಿದು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರಿಂದ ನನ್ನ ಆತ್ಮಸ್ತೈರ್ಯಮತ್ತಷ್ಟು ಹೆಚ್ಚು ಮಾಡಿತು. ತದ ನಂತರ ಕೊಂಚ ವಿಭಿನ್ನವಾಗಿ, ವಿಶೇಷವಾಗಿ ಮಾಡಬೇಕೆಂದು ಅನಿಸಿತು. ಹೇಗೆ ಎಂದು ಯೋಚನೆ ಮಾಡುವಾಗ ಹೊಳೆದದ್ದು ನನ್ನ ವಸ್ತ್ರಾಭೂಷಣ. ಓಡುವಾಗ ಸಾಮಾನ್ಯವಾಗಿ ಎಲ್ಲರೂ ಜಾಗಿಂಗ್ ವಸ್ತ್ರದಲ್ಲಿ ಓಡುತ್ತಾರೆ. ಹಾಗೆ ಮಾಡುತ್ತಿದ್ದವಳು ಸೀರೆಯಲ್ಲಿ ಮಾಡಬೇಕೆಂದು ಹೊಳಿಯಿತು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಸೀರೆ ನಾರಿಯ ಸಾಂಕೇತಿಕ ಮಹತ್ವದ ವಸ್ತ್ರವಾಗಿದ್ದು ಅದರದೆಯಾದ ವೈಶಿಷ್ಟ್ಯ ಹೊಂದಿದೆ.ಸೀರೆ ಉಡುವುದರಿಂದ ನಾರಿಯ ಸೌಂದರ್ಯ ಇಮ್ಮಡಿಯಾಗುವುದು. ಸೀರೆ ಉಡುವಾಗೆಲ್ಲ ತಾಯಿ,ತವರು ಹಾಗು ತಾಯ್ನಾಡಿನ ಹಂಬಲ ಹೆಚ್ಚಾಗುವುದು. ಸೀರೆ ಉಡುವುದೆಂದರೆ ಏನೋ ಸಂಭ್ರಮ ಸಡಗರ. ಅದರಲ್ಲೂ ಅಮ್ಮನ ಸೀರೆಯೆಂದರೆ ಏನೋ ಮನೋಲ್ಲಾಸ, ಮುದ ನೀಡುವುದು. ಅದರ ಸ್ಪರ್ಶವೇ ಅಮ್ಮ ನಮ್ಮೊಟ್ಟಿಗೆ ಇದ್ದಂತೆ. ತವರಿನ ಸವಿನೆನಪುಗಳು ಕಣ್ಣಮುಂದೆ ಬರುತ್ತವೆ. ನನಗೆ ಸೀರೆಯ ಮೇಲೆ ಅಪಾರ ಒಲವು. ಅದರಲ್ಲೂ ಇಳ್ಕಲ್ ಸೀರೆ, ರೇಷ್ಮೆ, ಮೈಸೂರು ರೇಷ್ಮೆ ಎಂದರೆ ತುಂಬ ಇಷ್ಟ.

ಚಿತ್ರ ಕೃಪೆ : ಶಾರದ ಸಕ್ರೆಮಠ್

ನಮ್ಮ ಭಾರತೀಯ ಇತಿಹಾಸದಲ್ಲಿ ಮಹಿಳೆಯರು ಸೀರೆಯುಟ್ಟು ಯುದ್ಧಭೂಮಿಯಲ್ಲಿ ಹೇಗೆ ಹೋರಾಡುಡ್ಡಿದ್ದಾರೆಂಬುದು ಅಚ್ಚರಿಗೊಳಿಸುವುದು. ಅದನ್ನು ವೀಕ್ಷಿಸುವುದೇ ರೋಚಕ. ಹಾಗಾಗಿ ನನಗೆ ಪ್ರೇರಣೆಯಾಗಿದ್ದು ಕರುನಾಡಿನ ವೀರ ಕಿತ್ತೂರು ರಾಣಿ ಚೆನ್ನಮ್ಮ.
ಹಾಗಾಗಿ ಮೊದಲು ಈ ಸೀರೆಯುಟ್ಟು ಪ್ರಸಿದ್ದವಾದ ಟೆಲ್ಫರ್ಡ್ ಪಾರ್ಕ್ ಓಟದಲ್ಲಿ ಇತರೆ ಮಹಿಳೆಯರೊಂದಿಗೆ ೫ ಕಿ.ಮೀ ಓಟ ಓಡುತ್ತಿದ್ದೆ. ದಿನದಿಂದ ದಿನಕ್ಕೆ ಉತ್ಸುಹಕಳಾಗಿ ಮಾಡುವಾಗ ನನಗೆ ಓಟದ ಆಯೋಜಕರಿಂದ ಹಾಗು ಸಹಓಟಗಾರ್ತಿಯರಿಂದ ಪ್ರಶಂಸೆ ಹಾಗು ಉತ್ತೇಜನ ದೊರೆಯುತ್ತಿತ್ತು. ನನ್ನ ಬಗ್ಗೆ ನನಗೇ ಹೆಮ್ಮೆಯೆನಿಸುತ್ತಿತ್ತು. ಏಕೆಂದರೆ ನಮ್ಮ ಟೆಲ್ಫೋರ್ಡ್ ನ ಸ್ಥಳೀಯ ಪತ್ರಿಕೆಯಲ್ಲಿ ಪ್ರತಿ ವಾರ ಪ್ರಕಟವಾಗುತ್ತಿತ್ತು.ಸತತ ಪಾರ್ಕ್ ಓಟದಿಂದ ಕರುನಾಡಿನ ಕಾವಿಡ್ ರಿಲೀಫ್ ಫಂಡ್ ಗಾಗಿ ಫಂಡ್ ಗಳನ್ನೂ ಸಹ ಸಂಗ್ರಹಿಸಿದೆ. ಅಲ್ಲದೆ ನಾನು ಓಡುವಾಗ ಸ್ಪೋರ್ಟ್ಸ್ ಇಂಗ್ಲೆಂಡ್ ತಂಡದವರು ನನ್ನನ್ನು ಗುರುತಿಸಿ ‘ THE GIRL CAN CAMPAIGN’ ಎಂಬ ಕಾರ್ಯಕ್ರಮಕ್ಕೆ ಸಂದರ್ಶನ ನೀಡಲು ಹುರಿದುಂಬಿಸಿದರು. ಈ ಲಕ್ಷ್ಯಗಳು ಪೂರ್ಣಗೊಳಿಸಿ ಯುನೈಟೆಡ್ ಕಿಂಗ್ಡಮ್ ನ ಪ್ರಖ್ಯಾತ ಮ್ಯಾರಥಾನ್ ಗಾಗಿ ಓಡಲು ನನ್ನ ಹೊಂಗನಸ್ಸಾಗಿತ್ತು . ಹಾಗಾಗಿ EDINBURGH MARATHON 2020 ಗಾಗಿ ನೋಂದಾಯಿಸಿ ನನ್ನ ಓಟ ಮತ್ತಷ್ಟು ವೈಶಿಷ್ಟ್ಯ , ವೈವಿಧ್ಯಮಯವಾಗಿರಲೆಂದು ಬರಿಗಾಲಿನಲ್ಲಿ ಅಭ್ಯಾಸ ಮಾಡಲಾರಂಭಿಸಿದೆ. ಇದರಿಂದ ನನ್ನ ಆತ್ಮಸ್ತೈರ್ಯ ಪ್ರಬಲವಾಗುತ್ತ ಹೋಯಿತು.

ಆದರೆ ಕೋವಿಡ್-19 ನ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಸರ್ವರಿಗೂ ಪ್ರಭಾವ ಬೀರಿದಂತೆ ಈ ಓಟಕ್ಕೂ ಸಹ ಕಡಿವಾಣ ಹಾಕಿತು. ಹಾಗಾಗಿ ಮೇ ೨೦೨೧ಕ್ಕೆ ಮುಂದೂಡಲಾಯಿತು. ನಾನು ಕುಗ್ಗದೆ ಇನ್ನಷ್ಟು ಅಭ್ಯಾಸ ಮಾಡತೊಡಗಿದೆ. ಇದಕ್ಕೆ ನನ್ನ ಪತಿ ಹಾಗು ಪುತ್ರನಿಂದ ಬೆಂಬಲ ಪ್ರತಿ ಬಾರಿ ದೊರಕುತ್ತಿತ್ತು. ಪುತ್ರನಂತೂ ನನ್ನ ೧೦ ಕಿ.ಮೀ ಸೀರೆಯೋಟದಲ್ಲಿ ನನ್ನ ಬದಿಯಲ್ಲಿ ತನ್ನ ಸೈಕಲ್ ನಲ್ಲಿ ಚಲಿಸಿ ಉತ್ತೇಜಿಸಿದ. EDINBURGH MARATHON ಓಟವು ವಸ್ತುತಃ ಓಟವಾಗಿ ಬದಲಾಗಿ ಸಹ ಓಟಗಾರರಿಲ್ಲದೆಯೇ ಏಕಾಏಕಿ ಓಡುವುವುದೆಂದು ನಿರ್ಧರಿಸಲಾಯಿತು .

ಚಿತ್ರ ಕೃಪೆ : ಶಾರದ ಸಕ್ರೆಮಠ್

ಆ ದಿನ ನಾನು ಕರುನಾಡ ಧ್ವಜದ ಸಾಂಕೇತಿಕ ಬಣ್ಣಗಳಾದ ಹಳದಿ ಹಾಗು ಕೆಂಪು ಬಣ್ಣದ ಸೀರೆಯನ್ನುಟ್ಟು ನಮ್ಮ ಮನೆಯ ಆಸುಪಾಸಿನಲ್ಲಿರುವ ತೋಟದ ಬೀದಿಗಳಲ್ಲಿ ಓಡಲಾರಂಭಿಸಿದೆ. ಅರ್ಧ ಮ್ಯಾರಥಾನ್ ನಂತರ ತುಂತುರು ಹನಿಗಳು ಪ್ರಾರಂಭವಾಯಿತು. ಆದರೂ ಕುಗ್ಗದೆ ಮುಂದುವರಿಸಿದೆ. ಈ ಪಯಣದುದ್ದಕ್ಕೂ ಪತಿ ಹಾಗು ಪುತ್ರನ ಆಗಾಗಿನ ಆರೈಕೆಯಿಂದ ಹುರಿದುಂಬಿಸಿದರು. ೪೨.೪ ಕಿ.ಮೀ ನ ಈ ಮ್ಯಾರಥಾನ್ ಅಂತೂ ಸ್ಪೂರ್ತಿದಾಯಕವಾಗಿ ಯಶಸ್ವಿಯಾಗಿ ೫ಗಂಟೆ ೫೦ನಿಮಿಷಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಿದೆ. ನಂತರ ನಮ್ಮ ಭಾರತ ದೇಶದ ತಿರಂಗ ಧ್ವಜ ಮೇಲೆತ್ತಿಡಿದು ಛಾಯಾಚಿತ್ರದ ಭಂಗಿಗೆ ಹೆಮ್ಮೆಯಿಂದ ನಿಂತೆ.
ನನ್ನ ಈ ಆತ್ಮಸ್ತೈರ್ಯ ನಮ್ಮ ಭಾರತೀಯ ಸಂಸ್ಕೃತಿಯೊಂದಿಗೆ ಮತ್ತಷ್ಟು ಸಾಹಸಗಳೊಂದಿಗೆ ಮುಗಿಲೇರುವ ಆಸೆ !!

ಸ್ನೇಹಿತರೆ ! ನಮ್ಮ ಸಂಸ್ಕೃತಿ ನಮ್ಮ ಹಿರಿಮೆ ನಮ್ಮ ಅಸ್ತಿತ್ವ .
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ !
ಜೈ ಕರ್ನಾಟಕ ಜೈ ಹಿಂದ್ .

ಶಾರದ ಸಕ್ರೆಮಠ್

  1. ರಾಂ, ನಿಮ್ಮ ಒಳಹೊಳಹುಯುಕ್ತ ಕಮಂಟಿಗೆ ಧನ್ಯವಾದಗಳು. ನನ್ನ ಲೇಖನವನ್ನು ಬರೆಯುವಾಗಿನ ರಿಸರ್ಚ್ ಮಾಡಿದಲ್ಲಿನಿಮ್ಮ ಲೇಖನವನ್ನು ಸಹ ( ಕನ್ನಡ ಬಳಗ ಸಂಭ್ರಮ pdf. ಪುಟ ೬೬, link…

  2. ದೇಸಾಯಿಯವರ ಪ್ರಬಂಧಗಳನ್ನು ಓದುವುದೆಂದರೆ ಇತಿಹಾಸ ಮತ್ತು ವರ್ತಮಾನಗಳ ಅಪೂರ್ವ ಸಂಗಮ. ಅವರಷ್ಟು ಇಂಗ್ಲೆಂಡನ್ನು ಆಳವಾಗಿ ಬಲ್ಲವರನ್ನು ನಾನು ಯಾರಲ್ಲೂ ನೋಡಿಲ್ಲ. ಇಂಗ್ಲೆಂಡಿನಲ್ಲಿ ಎಲ್ಲಿ ಹೋದರೂ ಸಿಗುವ ಕಾಲುವೆಗಳ ಬಗ್ಗೆ…

  3. ಇಂಗ್ಲೆಂಡಿನ ಪ್ರಸಿದ್ಧ ನಾಲೆಗಳನ್ನು ನೆವ ಮಾಡಿಕೊಂಡು ಹಳೆಯ ಕೃತಿಯನ್ನು ಹಾಸ್ಯಮಯವಾಗಿ ಪರಿಚಯಿಸಿದ ಶೈಲಿ ತುಂಬಾ ಇಷ್ಟವಾಯಿತು. ಈ ಕೃತಿಯ ತುಣುಕುಗಳು ಇದನ್ನು ಓದಲು ಪ್ರೇರೇಪಿಸುತ್ತವೆ. ಎಲ್ಲ ಕೃತಿಗಳಲ್ಲೂ…

  4. ಅನಿವಾಸಿ ಗುಂಪಿನ ಅತ್ಯಂತ ಸೃಜನಶೀಲರಲ್ಲಿ ಒಬ್ಬರಾದ ಅಮಿತಾ ಅವರು ದೂರದಿಂದ ಹಾರಿಕೊಂಡು ಬಂದು ನಾಂದಿಗೀತೆಯನ್ನು ಹಾಡಿದ್ದು ಅನಿವಾಸಿಯ ಬಳಗಕ್ಕೆ ತುಂಬ ಖುಷಿ. ಸಂಗೀತದಲ್ಲಿ, ಚಿತ್ರಕಲೆಯಲ್ಲಿ, ಫೋಟೋಗ್ರಾಫಿಯಲ್ಲಿ, ಬರವಣೀಗೆಯಲ್ಲಿ…