ಬೃಹತ್ ಬೆಂಗಳೂರು
ಬೆಳೆದಿದೆ ನಮ್ಮ ಬೆಂಗಳೊರು
ಇತಿಮಿತಿಗಳಿಲ್ಲದೆ, ಪರಿಮಿತಿಯ ಅರಿವಿಲ್ಲದೆ
ಹಬ್ಬಿದೆ ಕಾಡ್ಗಿಚ್ಚಿನ ಬೆಂಕಿಯಂತೆ
ಕಬಳಿಸಿದೆ ಸುತ್ತಲ ಹಳ್ಳಿ ಹೊಲ ಗದ್ದೆಗಳ
ಬೆಳೆದಿದೆ ನಮ್ಮ ಬೆಂಗಳೊರು
ನೆಲ ಕಬಳಿಸುವ ಭ್ರಷ್ಟರ ದುರಾಸೆಯತ್ತ
ಸಾಫ್ಟ್ವೇರ್ ಕಂಪನಿಗಳ ಹಿತಾಸಕ್ತಿಗಳತ್ತ
ಮಧ್ಯಮವರ್ಗ ಜನರ ಹೊಂಗನಸಿನತ್ತ
ಪ್ರಗತಿಯ ಹೆಸರಲ್ಲಿ ಎಲ್ಲವು ಅಸ್ಥವ್ಯಸ್ಥ!
ಕಂಡಕಡೆ ತಲೆಯತ್ತಿವೆ ಎತ್ತರದ ಫ಼್ಲಾಟ್ ಗಳು
ಕಾಂಕ್ರಿಟ್ ಅರಣ್ಯದಲಿ ರೋದಿಸಿವೆ ಮರಗಳು
ತಂಪಾಗಿದ್ದ ಉದ್ಯಾನ ನಗರಿಯಲ್ಲಿ
ಬೆವರು ಜಿಗುಪ್ಸೆ ಅಪಸ್ವರಗಳು
ಉಸಿರು ಕಟ್ಟಿಸುವ ಕಿಕ್ಕಿರಿದ ರಸ್ತೆಗಳು
ಮೆಟ್ರೋ ಹಾದಿಗೆ ಅಗೆದ ಕಲ್ಲು, ಮಣ್ಣು, ಧೂಳು
ಲಂಗು ಲಗಾಮಿಲ್ಲದ ಕುದುರೆಯಂತೆ
ಮುನ್ನುಗ್ಗುವ ವಾಹನಗಳು
ಅಸಮಾಧಾನದ ಕರ್ಕಶ ಗೊಂದಲಗಳು
ನಗಾರಭಿವೃದ್ದಿ ಕಛೇರಿಗಳಲಿ ಲಂಚಾವತಾರ
ಕನ್ನಡೇತರರಿಗಿದು ನೆಚ್ಚಿನ ಆಗರ
ಗುರುತಿಸಲಾರೆ ನಗರದ ಅಂತರಂಗ ಆಕಾರ
ಬೆಳವಣಿಗೆಯ ನೆಪದಲ್ಲಿ ನಗರವಾಗಿದೆ ವಿಕಾರ!
Shivaprasad’s poem gives a very true picture of this city which once was called Garden city of India! Today most part of this city reeks of stench from uncleared garbage. A very sorry picture!
LikeLike
True reflection of Bangalore’s growth. There is nothing to suggest that Urban planners at at work. There is nothing to regulate the growth. This growth is not sustainable. I think all systems will fail one day, if grows at this pace.
LikeLike