೧ಜಗದ ಕೊಳೆಯತೊಳೆಯೆಇಳೆಗೆ ಬಂದೇ ಏನೇಇಬ್ಬನಿ?೨ರಾತ್ರಿಯೆಲ್ಲ ಬಿಕ್ಕಳಿಸಿಜಾರದೇ ಉಳಿದ ಕಂಬನಿಇಬ್ಬನಿ೩ರಾತ್ರಿಯೆಲ್ಲಅಪ್ಪಿತಬ್ಬಿಅಪ್ಪಿತಪ್ಪಿಉಳಿದ ಮುತ್ತಿನ ಹನಿಇಬ್ಬನಿ೪ಮುಂಜಾವಿನ ಕೊರಳಿಗೆವಜ್ರದ ಹರಳುಇಬ್ಬನಿ೫ನೇಸರನ ಸ್ವಾಗತಕೆಥಳಿ ಹೊಡೆದ ನೀರುಇಬ್ಬನಿ೬ರಾತ್ರಿಯ ಸೆಕೆಗೆಮೂಡಿದ ಬೆವರುಇಬ್ಬನಿ೭ಪ್ರೇಮಿಯ ಕೂದಲಿನಅಂಚಿಗೆ ಉಳಿದ ಹನಿಇಬ್ಬನಿ೮ಕಣ್ಣು ಬಿಟ್ಟ ಮಗುಅಮ್ಮನನ್ನು ಕಂಡ ಖುಷಿಯಲ್ಲಿಮೂಡಿದ ಕಣ್ಣಂಚಿನ ಪಸೆಇಬ್ಬನಿ೯ಮುಂಜಾವಿನೆದೆಯಿಂದಉ ದು ರಿಬೀಳುವ ಹನಿಇಬ್ಬನಿ೧೦ಮತ್ತೆ ಬೆಳಗಾಯಿತುಮತ್ತೆ ಹೊಸಜೀವ ಬಂದಿತುನಿಸರ್ಗದ ಆನಂದ ಬಾಷ್ಪಇಬ್ಬನಿ೧೧ರಾತ್ರಿ ಹೊತ್ತುಯಾವುದೋ ಕೀಟ ಮಾಡಿದ ಗಾಯಕ್ಕೆಎಲೆ ಮೇಲೆ ಮೂಡಿದ ಗುಳ್ಳೆಇಬ್ಬನಿ೧೨ಅನಂತದಲಿ ಬಿಂದುಬಿಂದುವಿನಲಿ ಅನಂತಒಂದು ಮಂಜಿನ ಹನಿಯೊಳಗೊಂದು ಬ್ರಹ್ಮಾಂಡ೧೩ಎಲೆಯ ಮೇಲೆಮುಂಜಾವಿನಮುತ್ತಿನ ಗುರುತುಸ್ವಲ್ಪ ಹೊತ್ತುಹಾಗೇ ಇರಲಿ ಬಿಡು೧೪ಪದಗಳಲ್ಲಿಹುಡುಕಿದರೂ ಸಿಗದ ಕವಿತೆಪುಟ್ಟ ಹುಲ್ಲಿನೆಳೆಯ ಮೇಲೆಮುಂಜಾವಿನ ಮಂಜಿನೊಳಗೆನಗುತ್ತ ಕಣ್ಬಿಡುತ್ತಿತ್ತು
*****
ʼಹೋದಲೆಲ್ಲ ಹಾದಿ ʼ ಸರಣಿ:
೧. ಬೆಂಚಿನ ಸ್ವಗತ
೧ಮುಂಜಾವಿನ ಬಾಗಿಲು ಅದೇ ತೆರೆದಿತ್ತುಅರ್ಲಿಮಾರ್ನಿಂಗ್ ವಾಕಿನ ಮಧ್ಯವಿರಾಮಕ್ಕೆಬಂದು ನನ್ನ ಮೇಲೆ ಕೂತರು ಇಬ್ಬರುವಯಸ್ಸು ಎಪ್ಪತ್ತೋ ಎಂಬತ್ತೋಒಬ್ಬರು ತಮ್ಮ ತೀರಿಹೋದ ಹೆಂಡತಿಯನ್ನುಪರದೇಶಕ್ಕೆ ಹೋದ ಮಕ್ಕಳನ್ನು ನೆನಯುತ್ತ‘ನನ್ನ ಬದುಕು ಈ ಬೆಂಚಿನಂತೆ ಒಂಟಿ,’ ಎಂದು ಹಲುಬಿದರು.ಇನ್ನೊಬ್ಬರು ಸಮಾಧಾನ ಮಾಡುತ್ತಿದ್ದರು೨ಕಾಲೇಜಿಗೆ ಚಕ್ಕರ್ನನ್ನ ಮೇಲೆ ಹಾಜರ್ಕಿಲಿಕಿಲಿ ನಗುಚಿಲಿಪಿಲಿ ಮಾತುಕದ್ದು ಕದ್ದು ಮುತ್ತುಹುಸಿಮುನಿಸುಅಳುನಟನೆತುಂಟನಗು‘ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ?’ ಎಂದಳು‘ಈ ಬೆಂಚು ಇಲ್ಲಿರುವವರೆಗೂ,’ ಎಂದಅವನ ಕೆನ್ನೆಗೊಂದು ಮುತ್ತು ಸಿಕ್ಕಿತು೩ಲಂಚ್ ಬ್ರೇಕಿನಲ್ಲಿ ಹತ್ತಿರದ ಆಫೀಸಿನಿಂದ ಬಂದುಡಬ್ಬಿ ಬಿಚ್ಚಿದರು; ಅವನ ಡಬ್ಬ ಇವನುಇವನ ಡಬ್ಬ ಅವಳು ಹಂಚಿಕೊಂಡರುಇವನ ಹೆಂಡತಿ ಕೊಡುವ ಕಾಟ ಅವಳು ಕೇಳಿಸಿಕೊಂಡಳುಅವಳ ಗಂಡ ಕೊಡುವ ಕಷ್ಟ ಇವನು ಕೇಳಿಸಿಕೊಂಡ‘ನಮ್ಮ ಬದುಕು ಈ ಬೆಂಚಿನಂತೆಎಲ್ಲೂ ಹೋಗುವುದಿಲ್ಲ, ಏನೂ ಆಗುವುದಿಲ್ಲ,’ ಎಂದರುಮತ್ತೆ ಆಫೀಸಿಗೆ ಹೋಗುವ ಸಮಯವಾಯಿತು೪ಈಗ ರಾತ್ರಿಯ ನೀರವಮೌನದಲ್ಲಿಬೀದಿದೀಪಗಳ ಮಬ್ಬುಬೆಳಕಲ್ಲಿಒಂಟಿಯಾಗಿದಿನದ ನೂರಾರು ಕತೆಗಳ ನೆನೆಯುತ್ತದಿನದ ಸಾವಿರಾರು ಕವನಗಳ ಕನವರಿಸುತ್ತನಿದ್ದೆ ಬರದೇಕೂತೇ ಇದ್ದೇನೆ
೨. ಎಲ್ಲಿ ಹೋಗುವಿರಿ ಹೇಳಿ ಹಾದಿಗಳೇ
ಕಲ್ಲು ಮುಳ್ಳಿನ ಹಾದಿಯನೆನಪುಗಳು ಕಳೆದಿಲ್ಲಬಿದ್ದು ಕಲ್ಲಿನ ಮೇಲಾದ ಗಾಯದ ಗುರುತುಗಳುಚುಚ್ಚಿಸಿಕೊಂಡ ಅಪಮಾನಗಳುಇಲ್ಲಿ ಎಲ್ಲ ಒಳ್ಳೆಯವರುಎಂಬ ನಂಬಿಕೆಯಲ್ಲಿಹಲ್ಲು ಕೊರೆದ ಹಾದಿಯಲ್ಲಿಜೊತೆಗೆ ಬಂದವರುನನಗಿಂತ ಸ್ವಲ್ಪ ಹೆಚ್ಚೇ ನೋವುಂಡವರುಹೂವಿನ ದಾರಿಯ ಮೇಲೆನಡೆಸುವೆ ಎಂದು ಭರವಸೆ ಕೊಟ್ಟವರುಹೂವಿನ ಜೊತೆ ಮುಳ್ಳೂ ಇರುತ್ತದೆಎಂದು ಹೇಳುವುದನ್ನು ಮರೆತರುನನಗೆ ಅರಿವಾಗುವಷ್ಟರಲ್ಲಿ ಅವರಿದ್ದೂ ಇರಲಿಲ್ಲಅಲ್ಲಿಯೂ ಸಲ್ಲಲಿಲ್ಲಇಲ್ಲಿಗೂ ಒಗ್ಗಿಕೊಳ್ಳಲಿಲ್ಲದೇಶಬಿಟ್ಟ ಪರದೇಸಿಕಲ್ಲಿಗಿಂತ ಕಲ್ಲಾಗಿಪರಸಿಕಲ್ಲಿನ ಹಾದಿಯ ಮೇಲೆಅಂಗಡಿ ಅಂಗಡಿಗಳಲ್ಲಿನಡೆವ ಜನರ ಮುಖಗಳಲ್ಲಿಸುಖ ಸಂತೋಷ ಹುಡುಕುತ್ತೇನೆಹಾದಿಹೋಕ ನಾನುಹಾದಿಹೋಕನಾಗಿಯೇ ಉಳಿದಿದ್ದೇನೆವಾರಾಂತ್ಯಕ್ಕೆ ಬಿಡುವು ಹುಡುಕುತ್ತೇನೆಹುಲ್ಲುಹಾಸಿನ ಹಾದಿಯಫೋಟೋ ತೆಗೆದುಫೋನಿನ ವಾಲ್-ಪೇಪರ್ ಮಾಡಿಕೊಳ್ಳುತ್ತೇನೆಹೈವೇಯ ಸೈನ್-ಬೋರ್ಡುಗಳುಈಗ ನನ್ನ ಮಿತ್ರರುನನ್ನ ಕಾರಿನ ದಾರಿ ಹೇಳಿಕೊಡುವವರುಹಗಲು ಸಂಜೆ ಅದೇ ಹಾದಿಕಾರಿಗಿಂತ ಯಾಂತ್ರಿಕವಾಗಿ ಬದುಕು ನಡೆಸುತ್ತೇನೆ*ಕಾಲ ಮಾಗುತಿದೆದಾರಿ ಸವೆಯುತಿದೆತಾಣದ ಮರೀಚಿಕೆಹಾಗೇ ಉಳಿದಿದೆಹಾಗೇ ಉಳಿದರೇ ಬದುಕೆ?
ಮೇ ೧೯ ಗಿರೀಶ್ ಕಾರ್ನಾಡ್ ಅವರ ೮೪ ನೇ ಜನ್ಮ ದಿನೋತ್ಸವ. ಕಾರ್ನಾಡರು ಭಾರತದ ಒಬ್ಬ ಶ್ರೇಷ್ಠ ನಾಟಕಕಾರ, ಲೇಖಕ, ನಟ, ಚಿತ್ರ ನಿರ್ದೇಶಕ ಮತ್ತು ಸಮಾಜವಾದಿ. ೧೯೯೮ ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು. ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ ಸಮ್ಮಾನ ಮತ್ತು ಇನ್ನೂ ಅನೇಕ ಪ್ರಶಸ್ತಿಯನ್ನು ಪುರಸ್ಕಾರಗಳನ್ನು ಪಡೆದವರು. ಇಂಗ್ಲೆಂಡಿನ ಕೆಲವು ಅನಿವಾಸಿ ಕನ್ನಡಿಗರಿಗೆ ಕಾರ್ನಾಡರು ಲಂಡನ್ನಿನ ನೆಹರು ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿದ್ದಾಗ ಅವರ ಪರಿಚಯವಿರಬಹುದು. ಯಯಾತಿ, ತುಘಲಕ, ಹಯವದನ, ನಾಗಮಂಡಲ, ತಲೆದಂಡ ಹೀಗೆ ಇನ್ನು ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅವರ ನಾಟಕಗಳು ಭಾರತದ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿವೆ. ಕಾರ್ನಾಡರಿಗೆ ತಮ್ಮ ಕಾಲೇಜ್ ದಿನಗಳಲ್ಲಿ ಒಬ್ಬ ಕವಿಯಾಗ ಬೇಕೆಂಬ ತೀವ್ರ ಹಂಬಲ ಇತ್ತು. ಅದೇ ವಿಚಾರವಾಗಿ ಅವರ ಆಡಾಡತ ಆಯುಷ್ಯ ಎಂಬ ಆತ್ಮಕಥೆಯಲ್ಲಿ ಹೀಗೆ ಬರೆದಿದ್ದಾರೆ; "ನನಗೆ ನೆನಪಿದ್ದಾಗಿನಿಂದಲೂ ನಾನು ಬಯಸಿದ್ದು ಕವಿಯಾಗಬೇಕು ಎಂದು. ಕಾಲೇಜಿನಲ್ಲಿ ಕವಿತೆಗಳನ್ನು ಬರೆದೆ, ಓದಿದೆ, ಅನುಕರಿಸಿದೆ, ಕವಿಗಳನ್ನು ಕಂಡು ಅಸೂಯೆ ಪಟ್ಟೆ. ಆದರೆ ಈಗ ಹಿಂದಿರುಗಿ ನೋಡಿದಾಗ ನನ್ನ ವ್ಯಕ್ತಿತ್ವದ ವಿಕಾಸವಾದದ್ದೆಲ್ಲ ನಾಟಕಗಳಿಂದಾಗಿಯೇ ಎಂಬುದು ಅರಿವಾಗುತ್ತದೆ." ಬಹಳ ಎಳೆ ವಯಸ್ಸಿನಿಂದ ನಾಟಕ ಯಕ್ಷಗಾನ ನೋಡಿಕೊಂಡು ಬೆಳೆದ ಕಾರ್ನಾಡರಿಗೆ ತಾವು ನಾಟಕ ಬರೆಯುವವರೆಗೆ ಅವರ ಸಾಮರ್ಥ್ಯದ ಅರಿವು ಬಹುಶ ಇರಲಿಲ್ಲ. ಅವರ ಮೊದಲ ನಾಟಕ ಯಯಾತಿ ಬರೆದಾಗ ಅವರಿಗೆ ಕೇವಲ ೨೨ವರ್ಷ ವಯಸ್ಸಾಗಿತ್ತು. ಆ ನಾಟಕ ಬರೆಯುವ ಹೊತ್ತಿಗೆ ಗಿರೀಶ್ ಕಾರ್ನಾಡರು ಇಂಗ್ಲೆಂಡಿಗೆ ಹೊರಟು ನಿಂತಿದ್ದರು. ಅವರ ತಂದೆ ತಾಯಿ ಅವರಿಗೆ ಇಂಗ್ಲೆಂಡಿನಲ್ಲಿ ನೆಲೆಸಬಾರದು, ಅಲ್ಲಿ ಬಿಳಿ ಹೆಂಗಸೊಂದಿಗೆ ಮದುವೆ ಮಾಡಿಕೊಳ್ಳಬಾರದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದು ಈ ನಾಟಕ ಬರೆಯಲು ಪ್ರೇರಣೆ ನೀಡಿತು ಎಂಬುದಾಗಿ ತಿಳಿಸಿದ್ದಾರೆ. ಯಯಾತಿ ನಾಟಕದಲ್ಲಿ ತಂದೆಗಾಗಿ ಯೌವನ್ನವನ್ನು ತ್ಯಜಿಸುವ ಮಗ, ಮತ್ತು ತಂದೆ ತಾಯಿಯ ನಿರೀಕ್ಷೆ ನಿರ್ಬಂಧಗಳ ನಡುವೆ ತ್ಯಾಗ ಮನೋಭಾವದಿಂದ ಇಂಗ್ಲೆಂಡಿಗೆ ಹೋರಾಟ ಯುವಕ ಕಾರ್ನಾಡ್ ಈ ಎರಡು ಸನ್ನಿವೇಶದಲ್ಲಿ ಅವರು ಸಾದೃಶ್ಯವನ್ನು ಕಂಡುಕೊಳ್ಳುತ್ತಾರೆ. 'ಈ ನಾಟಕ ಬರೆಯುವ ವೇಳೆಗೆ ಯಾವುದೋ ಅಗೋಚರ ಶಕ್ತಿ ಮೈಮೇಲೆ ಬಂದು ಆವರಿಸಿಕೊಂಡಿತ್ತು. ಕಣ್ಣೆದುರೇ ಯಯಾತಿ, ಪುರು ಈ ಪಾತ್ರಗಳೆಲ್ಲ ಮಾತನಾಡಲು ಶುರು ಮಾಡಿತ್ತು. ನಾನು ಒಬ್ಬ ಗುಮಾಸ್ತನಂತೆ ಈ ಸಂಭಾಷಣೆಗಳನ್ನು ಬರೆಯುತ್ತಿದೆ' ಎಂದು ಹೇಳಿದ್ದಾರೆ.
ಅಲ್ಲಿಂದ ಮುಂದಕ್ಕೆ ಕಾರ್ನಾಡರ ಯಯಾತಿಗೆ ಉತ್ತಮ ಪ್ರತಿಕ್ರಿಯೆಗಳ ಪ್ರವಾಹವೇ ಹರಿದುಬಂತು. ಇಂಗ್ಲೀಷಿನಲ್ಲಿ ಬರೆಯುವ ಮತ್ತು ಇಂಗ್ಲೆಂಡಿನಲ್ಲಿ ನೆಲೆಸುವ ತೀವ್ರ ಆಸೆ ಇದ್ದ ಕಾರ್ನಾಡರಿಗೆ ಭಾರತ ಬಿಟ್ಟು ವಿದೇಶದಲ್ಲಿ ನೆಲಸಬೇಕು ಎಂಬ ಯೋಚನೆ ನಿರರ್ಥಕ ಮಾತ್ರವ್ಲಲ ತಕ್ಕ ಮಟ್ಟಿಗೆ ಆತ್ಮಘಾತಕವೆಂಬಂತೆ ಮನದಟ್ಟಾಯಿತು. ಅವರಿಗೆ ಆಕ್ಸ್ ಫೋರ್ಡ್ ಮುಗಿಸಿ ಭಾರತಕ್ಕೆ ಮರಳುವುದು ಎಂಬ ನಿರ್ಧಾರ ಮಾಡುವುದು ಸುಲಭವಾಯಿತು. (ಆಡಾಡತಾ ಆಯುಷ್ಯ ಪುಟ ೧೨೦) ಯಯಾತಿ ನಾಟಕ ಕಾರ್ನಾಡರ ಲೇಖನಿಯಿಂದ ಬಂದದ್ದು ಅವರ ಬದುಕಿನ ದಿಕ್ಕನ್ನೇ ಬದಲಿಸಿತು, ಒಬ್ಬ ಶ್ರೇಷ್ಠ ಲೇಖಕನ ಪ್ರತಿಭೆ ಅನಾವರಣ ಗೊಂಡಿತು, ಕನ್ನಡ ಸಾಹಿತ್ಯಲೋಕ ಹಾಗೂ ರಂಗಭೂಮಿ ಶ್ರೀಮಂತಗೊಂಡಿತು. ಸಾಹಿತ್ಯ, ರಂಗಭೂಮಿ, ಚಿತ್ರಕಲೆ ಈ ಕ್ಷೇತ್ರಗಳಲ್ಲಿ ಇಷ್ಟೊಂದು ಸಾಧನೆ ಮಾಡಿದ ಮಾನವತಾವಾದಿ, ಬಾಲಿವುಡ್ಡಿನ ಗ್ಲಾಮರ್ ತಾರೆಗಳ ನಡುವೆ ಹೆಸರು ಮಾಡಿದ್ದ ಜನಪ್ರಿಯ ನಟ, ನಿರ್ದೇಶಕ, ಬಹುಮುಖ ಪ್ರತಿಭೆ ಕಾರ್ನಾಡರು ಸಾವಿನಲ್ಲಿ ಯಾವುದೇ ಆಡಂಬರ, ಅಲಂಕಾರ, ಮೆರವಣಿಗೆ, ಗಣ್ಯರ ಶ್ರದ್ಧಾಂಜಲಿ ಇವೆಲ್ಲವನ್ನು ತಿರಸ್ಕರಿಸಿ ಸದ್ದಿಲ್ಲದೆ ಮುಳುಗುವ ಸೂರ್ಯನಂತೆ ಜಾರಿಕೊಂಡದ್ದು ಅವರ ವಿನಯ ಶೀಲ ಬದುಕಿಗೆ ಸಾಕ್ಷಿಯಾಗಿತ್ತು.
ಅವರ ಈ ೮೪ ಹುಟ್ಟು ಹಬ್ಬದ ಸಂಧರ್ಭದಲ್ಲಿ ಯಯಾತಿ ನಾಟಕದ ಬಗ್ಗೆ ಕೇಶವ್ ಕುಲಕರ್ಣಿ ತಮ್ಮ ಒಂದೆರಡು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸ್ಮರಣೀಯ ಸಾಲುಗಳನ್ನು ಉಲ್ಲೇಖಿಸಿದ್ದಾರೆ.
*
ಕಾರ್ನಾಡರ ಹಯವದನ ನಾಟಕದ ಗೀತೆ 'ಬಂದಾನೋ ಬಂದ ಸವಾರ' ಮತ್ತು 'ಗಜವದನ ಹೇ ರಂಭಾ' ಈ ರಂಗಗೀತೆಗಳನ್ನು ನಾಟಕದಲ್ಲಿ ಅಥವಾ ಬರಿ ಗೀತೆಯಾಗಿ ನೀವೆಲ್ಲಾ ಕೇಳಿರಬಹುದು. ಬಿವಿ ಕಾರಂತರ ಸಂಗೀತ ನಿರ್ದೇಶನದಲ್ಲಿ ಈ ಗೀತೆಗಳು ಅತ್ಯಂತ ಜನಪ್ರಿಯವಾಗಿವೆ. ಇಲ್ಲಿ ಅಳವಡಿಸಿರುವ ಜಾನಪದ ಶೈಲಿ ಮತ್ತು ಕೋರಸ್ ಬಹಳ ಪರಿಣಾಮಕಾರಿಯಾಗಿದೆ. ಖ್ಯಾತ ರಂಗ ನಟಿ, ಗಾಯಕಿ ಶ್ರೀಮತಿ ಬಿ ಜಯಶ್ರೀ ಅವರು 'ಗಜವದನ ಹೇ ರಂಭಾ' ಎಂಬ ಗೀತೆಯನ್ನು ಕನ್ನಡ ಬಳಗದ ಯುಗಾದಿ ಕಾರ್ಯಕ್ರಮವೊಂದರಲ್ಲಿ ಹಾಡಿದ್ದು ಹಲವರ ನೆನಪಿನಲ್ಲಿ ಉಳಿದಿರಬಹುದು. ಅಮಿತ ಅವರು ಇಂದಿನ ಕಾರ್ನಾಡರ ಜನ್ಮ ದಿನೋತ್ಸವ ಸಂಚಿಕೆಯಲ್ಲಿ 'ಬಂದಾನೋ ಬಂದ ಸವಾರ' ಗೀತೆಯನ್ನು ಪ್ರಸ್ತುತ ಪಡಿಸಿದ್ದಾರೆ.
- ಸಂಪಾದಕ
ಕಾರ್ನಾಡರ ಯಯಾತಿ - ಡಾ. ಕೇಶವ್ ಕುಲಕರ್ಣಿ
ಪುರಾಣ, ಜನಪದ ಮತ್ತು ಇತಿಹಾಸದ ಪುಟಗಳಿಂದ ತಮಗೆಷ್ಟು ಬೇಕೋ ಅಷ್ಟನ್ನು ತೆಗೆದುಕೊಂಡು, ತಾವು ನಂಬಿಕೊಂಡಿರುವ ವಾದಗಳನ್ನು ಎತ್ತಿಕೊಂಡು, ಅವುಗಳನ್ನು ಆಧುನಿಕ ರಾಜಕೀಯ, ಸಾಮಾಜಿಕ ಮತ್ತು ಮಾನಸಿಕ ಕಾಲಕ್ಕೆ ಪ್ರಚಲಿತವನಿಸುವಂತೆ ಬರೆದು ಭಾರತದ, ಅದರಲ್ಲೂ ಕನ್ನಡದ, ಓದುಗರನ್ನು, ನಾಟಕದ ಪೇಕ್ಷಕರನ್ನು ಮತ್ತು ಒಂದು ಜನಾಂಗದ ರಂಗಕಲಾವಿದರನ್ನು ಬಡಿದೆಬ್ಬಿಸಿದರು ಕಾರ್ನಾಡರು.
ಅವರ ಮೊದಲ ನಾಟಕ, `ಯಯಾತಿ`; ಬರೆದದ್ದು ೧೯೬೧ ರಲ್ಲಿ, ಅದೂ ಇಂಗ್ಲೆಂಡಿನ ಆಕ್ಸ್-ಫರ್ಡ್-ನಲ್ಲಿ ವ್ಯಾಸಾಂಗ ಮಾಡುತ್ತಿರುವಾಗ. ವಿ.ಸ. ಖಾಂಡೇಕರ್ ಅವರು `ಯಯಾತಿ` ಕಾದಂಬರಿಯನ್ನು ಬರೆದದ್ದು ೧೯೫೯ರಲ್ಲಿ, ಕಾರ್ನಾಡ್ ಅವರಿಗೆ ಮರಾಠಿಯೂ ಬರುತ್ತಿತ್ತು. `ಯಯಾತಿ` ನಾಟಕವನ್ನು ಬರೆಯುವ ಮೊದಲು `ಯಯಾತಿ` ಕಾದಂಬರಿಯನ್ನು ಅವರು ಓದಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಕಾರ್ನಾಡರ `ಯಯಾತಿ`ಗೂ ಖಾಂಡೇಕರರ ‘ಯಯಾತಿ`ಗೂ ಸಾಕಷ್ಟು ಸಾಮ್ಯತೆಗಳಿವೆ. ಹಾಗೆಯೇ ಬೇಧಗಳೂ ಇವೆ. ಇದರ ಬಗ್ಗೆ ಯಾರಾದರೂ ಕನ್ನಡ ಅಥವಾ ಭಾರತದ ವಿಮರ್ಶಕರು ಬರೆದಿದ್ದಾರೆ ಎಂದುಕೊಂಡಿದ್ದೇನೆ. `ಯಯಾತಿ`ಯನ್ನು ಪ್ರಕಟಿಸಿದ್ದು ಧಾರವಾಡದ ಪ್ರಸಿದ್ಧ `ಮನೋಹರ ಗ್ರಂಥಮಾಲೆ` (ಅಲ್ಲಿಯೇ ನಾನು ಕಾರ್ನಾಡರನ್ನೂ ಭೀಟಿಯಾಗಿದ್ದೆ ಎನ್ನುವುದೂ ನನಗೆ ಮರೆಯಲಾಗದ ಅನುಭವ).
ನಾನು `ಯಯಾತಿ’ ನಾಟಕವನ್ನು ನೋಡುವ ಮೊದಲು ಓದಿರಲಿಲ್ಲ. ಆಗ ನನಗಿನ್ನೂ ಹದಿನಾರೋ ಹದಿನೇಳೋ ವಯಸ್ಸು. ವಿಚಿತ್ರವೆಂದರೆ ಅದೇ ಸಮಯದಲ್ಲಿ ಕನ್ನಡ ವಾರಪತ್ರಿಕೆಯಲ್ಲಿ (ತರಂಗ ಇರಬೇಕು) ಖಾಂಡೇಕರರ `ಯಯಾತಿ` ಧಾರಾವಾಹಿಯಾಗಿ ಬರುತ್ತಿತ್ತು ಅಥವಾ ಬಂದಿತ್ತು. ಈ ಎರಡೂ ಕೃತಿಗಳು ಬರೆದ ಸುಮಾರು ೨೫ ವರ್ಷಗಳಾದ ಮೇಲೆ ನಾನು ಅವುಗಳನ್ನು ನೋಡಿದ್ದು ಮತ್ತು ಓದಿದ್ದು. ಅದೇ ಹರೆಯಕ್ಕೆ ಕಾಲಿಡುತಿದ್ದ ನನ್ನ ಮೇಲೆ ಈ `ಯಯಾತಿಗಳು` ಮಾಡಿದ ಪ್ರಭಾವ ಅಪಾರ, ಅಲ್ಲೋಲಕಲ್ಲೋಲ ಅಗಾಧ.
ಕಾರ್ನಾಡರ `ಯಯಾತಿ` ನಾಲ್ಕು ಅಂಕಗಳ ನಾಟಕ. ಯಯಾತಿಯ ಕತೆಯು ಎಲ್ಲರಿಗೂ ಗೊತ್ತಿರುವದರಿಂದ ಅದನ್ನು ಬರೆದು ಬೋರು ಹೊಡೆಸುವುದಲ್ಲ. ಆದರೆ ಈ ನಾಟಕದಲ್ಲಿ ಬರುವ ಕೆಲವು ಸಂಭಾಷಣೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ:
ಸೂತ್ರಧಾರ ಆರಂಭದಲ್ಲೇ, `ನಾವು ಕಟ್ಟಿದ ಅಜ್ಜಿಯ ಕತೆಯನ್ನು ನಾವೇ ಬಾಳಬೇಕು.` ಎಂದು ಸ್ವವಿಮರ್ಶೆಯೊಂದಿಗೇ ನಾಟಕವನ್ನು ಆರಂಭಿಸುತ್ತಾನೆ.
ಯಯಾತಿಗೆ ಶರ್ಮಿಷ್ಠೆ ಹೇಳುತ್ತಾಳೆ,` ನೀವು ನನ್ನ ಕತೆಯನ್ನು ನಂಬಬೇಕೆಂದು ಹಟವಿಲ್ಲ. ದೇವಯಾನಿ ತನ್ನ ಕತೆಯನ್ನು ನಿಮಗೆ ಹೇಳಿರಬಹುದು. ಅದನ್ನು ನಂಬರಿ.`
ಇನ್ನೊಂದು ಸಲ ಶರ್ಮಿಷ್ಠೆ ಹೇಳುತ್ತಾಳೆ, `ಈಗ ದಾಸ್ಯ ನನಗೆ ಚಟವಾಗಿ ಬಿಟ್ಟಿದೆ. ದಾಸ್ಯದಲ್ಲಿ ಹೊಣೆಯ ಭಾರವಿಲ್ಲ. ಈಗ ನನಗೆ ಸ್ವಾತಂತ್ರ್ಯದಲ್ಲೇ ಶೃಂಖಲೆ ಕಾಣುತ್ತಿದೆ.`
ದೇವಯಾನಿ ಇನ್ನೊಂದು ಸಲ ಶರ್ಮಿಷ್ಠೆಗೆ ಹೇಳುತ್ತಾಳೆ, `ನಿನ್ನನ್ನು ದಾಸ್ಯದಿಂದ ಬಿಡಿಸಿದ್ದೇನೆ. ಬೇಕಿದ್ದರೆ ಈ ಸ್ವಾತಂತ್ರ್ಯದಿಂದ ಉರುಲು ಹಾಕಿಕೊ.`
ಪುರುವಿನ ಪತ್ನಿ ಚಿತ್ರಲೇಖೆ ಒಂದು ಕಡೆ ಹೇಳುತ್ತಾಳೆ, `ಹೇಡಿಗಳಿಗೆ ಮತ್ತು ಸುಳ್ಳು ಹೇಳುವವರಿಗೆ ತರ್ಕ ಅನಿವಾರ್ಯವಾಗುತ್ತದೆ.`
ಕಾರ್ನಾಡರು ಯಯಾತಿ ಮತ್ತು ಪುರು ಎನ್ನುವ ಎರಡು ಗಂಡು ಪಾತ್ರಗಳು ಮತ್ತು ಶರ್ಮಿಷ್ಠೆ, ದೇವಯಾನಿ, ಚಿತ್ರಲೇಖೆ ಮತ್ತು ದಾಸಿ ಎನ್ನುವ ಹೆಣ್ಣು ಪಾತ್ರಗಳ ಮೂಲಕ ಒಂದು ಸಂಕೀರ್ಣವಾದ ತೊಳಲಾಟವನ್ನು ನಮ್ಮೊಳಗೆ ಉರಿಯಲು ಬಿಟ್ಟು ನಾಟಕವನ್ನು ಮುಗಿಸುತ್ತಾರೆ.
`ಯಯಾತಿ` ನಾಟಕವು ಮೊದಲ ಬಿಡುಗಡೆ ಆದಾಗ, ಮೊದಲ ಸಲ ರಂಗಪ್ರಯೋಗವಾದಾಗ ರಂಗಭೂಮಿಯಲ್ಲಿ ಸಂಚಲನವನ್ನೇ ಉಂಟುಮಾಡಿತ್ತು ಎಂದು ಓದಿದ್ದೇನೆ. ಬಹುಭಾಷಾ ಕೋವಿದರೂ ಆಗಿದ್ದ ಕಾರ್ನಾಡರು ತಮ್ಮ ಸಾಮಾಜಿಕ ಸಂಪರ್ಕಗಳ ಮೂಲಕ, ತಮ್ಮ ಅಕಾಡೆಮಿಕ್ ಹಿನ್ನೆಲೆಯ ಮೂಲಕ ಪ್ಯಾನ್-ಇಂಡಿಯನ್ ನಾಟಕಕಾರರಾದರು. `ಯಯಾತಿ` ಹಿಂದಿಯ ರಂಗಭೂಮಿಯಲ್ಲೂ ಅಗಾಧವಾದ ಪ್ರಭಾವವನ್ನು ಬೀರಿತು. ನಾಟಕವನ್ನು ಕನ್ನಡದಲ್ಲಿ ಬರೆದರೂ ಮೊದಲ ನಾಟಕದಲ್ಲೇ ಕಾರ್ನಾಡ್ ಇಡೀ ಭಾರತವನ್ನು ಆವರಿಸಿದರು. ಮುಂದೆ ಆದದ್ದು ಈಗ ಇತಿಹಾಸ. ಹಿಂದಿಯ ಮೋಹನ್ ರಾಕೇಶ್, ಮರಾಠಿಯ ವಿಜಯ್ ತೆಂಡೂಲ್ಕರ್ ಅವರಿಗೆ ಸರಿಸಮಾನರಾಗಿ ಕಾರ್ನಾಡ್ ಭಾರತದ ರಂಗಭೂಮಿಯನ್ನು ಬೆಳೆಸಿ ಭಾರತದ ರಂಗಭೂಮಿಯಲ್ಲಿ ಒಂದು ಶಾಶ್ವತ ಸ್ಥಾನವನ್ನು ಪಡೆದರು. ಈಗ ಈ `ಯಯಾತಿ` ನಾಟಕ ಎಷ್ಟರ ಮಟ್ಟಿಗೆ ಪಸ್ತುತ ಎನ್ನುವುದನ್ನು ಈಗಿನ ಓದಗ ಮತ್ತು ಪ್ರೇಕ್ಷಕ ನಿರ್ಧರಿಸಬೇಕು.