೧ಜಗದ ಕೊಳೆಯತೊಳೆಯೆಇಳೆಗೆ ಬಂದೇ ಏನೇಇಬ್ಬನಿ?೨ರಾತ್ರಿಯೆಲ್ಲ ಬಿಕ್ಕಳಿಸಿಜಾರದೇ ಉಳಿದ ಕಂಬನಿಇಬ್ಬನಿ೩ರಾತ್ರಿಯೆಲ್ಲಅಪ್ಪಿತಬ್ಬಿಅಪ್ಪಿತಪ್ಪಿಉಳಿದ ಮುತ್ತಿನ ಹನಿಇಬ್ಬನಿ೪ಮುಂಜಾವಿನ ಕೊರಳಿಗೆವಜ್ರದ ಹರಳುಇಬ್ಬನಿ೫ನೇಸರನ ಸ್ವಾಗತಕೆಥಳಿ ಹೊಡೆದ ನೀರುಇಬ್ಬನಿ೬ರಾತ್ರಿಯ ಸೆಕೆಗೆಮೂಡಿದ ಬೆವರುಇಬ್ಬನಿ೭ಪ್ರೇಮಿಯ ಕೂದಲಿನಅಂಚಿಗೆ ಉಳಿದ ಹನಿಇಬ್ಬನಿ೮ಕಣ್ಣು ಬಿಟ್ಟ ಮಗುಅಮ್ಮನನ್ನು ಕಂಡ ಖುಷಿಯಲ್ಲಿಮೂಡಿದ ಕಣ್ಣಂಚಿನ ಪಸೆಇಬ್ಬನಿ೯ಮುಂಜಾವಿನೆದೆಯಿಂದಉ ದು ರಿಬೀಳುವ ಹನಿಇಬ್ಬನಿ೧೦ಮತ್ತೆ ಬೆಳಗಾಯಿತುಮತ್ತೆ ಹೊಸಜೀವ ಬಂದಿತುನಿಸರ್ಗದ ಆನಂದ ಬಾಷ್ಪಇಬ್ಬನಿ೧೧ರಾತ್ರಿ ಹೊತ್ತುಯಾವುದೋ ಕೀಟ ಮಾಡಿದ ಗಾಯಕ್ಕೆಎಲೆ ಮೇಲೆ ಮೂಡಿದ ಗುಳ್ಳೆಇಬ್ಬನಿ೧೨ಅನಂತದಲಿ ಬಿಂದುಬಿಂದುವಿನಲಿ ಅನಂತಒಂದು ಮಂಜಿನ ಹನಿಯೊಳಗೊಂದು ಬ್ರಹ್ಮಾಂಡ೧೩ಎಲೆಯ ಮೇಲೆಮುಂಜಾವಿನಮುತ್ತಿನ ಗುರುತುಸ್ವಲ್ಪ ಹೊತ್ತುಹಾಗೇ ಇರಲಿ ಬಿಡು೧೪ಪದಗಳಲ್ಲಿಹುಡುಕಿದರೂ ಸಿಗದ ಕವಿತೆಪುಟ್ಟ ಹುಲ್ಲಿನೆಳೆಯ ಮೇಲೆಮುಂಜಾವಿನ ಮಂಜಿನೊಳಗೆನಗುತ್ತ ಕಣ್ಬಿಡುತ್ತಿತ್ತು
*****
ʼಹೋದಲೆಲ್ಲ ಹಾದಿ ʼ ಸರಣಿ:
೧. ಬೆಂಚಿನ ಸ್ವಗತ
೧ಮುಂಜಾವಿನ ಬಾಗಿಲು ಅದೇ ತೆರೆದಿತ್ತುಅರ್ಲಿಮಾರ್ನಿಂಗ್ ವಾಕಿನ ಮಧ್ಯವಿರಾಮಕ್ಕೆಬಂದು ನನ್ನ ಮೇಲೆ ಕೂತರು ಇಬ್ಬರುವಯಸ್ಸು ಎಪ್ಪತ್ತೋ ಎಂಬತ್ತೋಒಬ್ಬರು ತಮ್ಮ ತೀರಿಹೋದ ಹೆಂಡತಿಯನ್ನುಪರದೇಶಕ್ಕೆ ಹೋದ ಮಕ್ಕಳನ್ನು ನೆನಯುತ್ತ‘ನನ್ನ ಬದುಕು ಈ ಬೆಂಚಿನಂತೆ ಒಂಟಿ,’ ಎಂದು ಹಲುಬಿದರು.ಇನ್ನೊಬ್ಬರು ಸಮಾಧಾನ ಮಾಡುತ್ತಿದ್ದರು೨ಕಾಲೇಜಿಗೆ ಚಕ್ಕರ್ನನ್ನ ಮೇಲೆ ಹಾಜರ್ಕಿಲಿಕಿಲಿ ನಗುಚಿಲಿಪಿಲಿ ಮಾತುಕದ್ದು ಕದ್ದು ಮುತ್ತುಹುಸಿಮುನಿಸುಅಳುನಟನೆತುಂಟನಗು‘ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ?’ ಎಂದಳು‘ಈ ಬೆಂಚು ಇಲ್ಲಿರುವವರೆಗೂ,’ ಎಂದಅವನ ಕೆನ್ನೆಗೊಂದು ಮುತ್ತು ಸಿಕ್ಕಿತು೩ಲಂಚ್ ಬ್ರೇಕಿನಲ್ಲಿ ಹತ್ತಿರದ ಆಫೀಸಿನಿಂದ ಬಂದುಡಬ್ಬಿ ಬಿಚ್ಚಿದರು; ಅವನ ಡಬ್ಬ ಇವನುಇವನ ಡಬ್ಬ ಅವಳು ಹಂಚಿಕೊಂಡರುಇವನ ಹೆಂಡತಿ ಕೊಡುವ ಕಾಟ ಅವಳು ಕೇಳಿಸಿಕೊಂಡಳುಅವಳ ಗಂಡ ಕೊಡುವ ಕಷ್ಟ ಇವನು ಕೇಳಿಸಿಕೊಂಡ‘ನಮ್ಮ ಬದುಕು ಈ ಬೆಂಚಿನಂತೆಎಲ್ಲೂ ಹೋಗುವುದಿಲ್ಲ, ಏನೂ ಆಗುವುದಿಲ್ಲ,’ ಎಂದರುಮತ್ತೆ ಆಫೀಸಿಗೆ ಹೋಗುವ ಸಮಯವಾಯಿತು೪ಈಗ ರಾತ್ರಿಯ ನೀರವಮೌನದಲ್ಲಿಬೀದಿದೀಪಗಳ ಮಬ್ಬುಬೆಳಕಲ್ಲಿಒಂಟಿಯಾಗಿದಿನದ ನೂರಾರು ಕತೆಗಳ ನೆನೆಯುತ್ತದಿನದ ಸಾವಿರಾರು ಕವನಗಳ ಕನವರಿಸುತ್ತನಿದ್ದೆ ಬರದೇಕೂತೇ ಇದ್ದೇನೆ
೨. ಎಲ್ಲಿ ಹೋಗುವಿರಿ ಹೇಳಿ ಹಾದಿಗಳೇ
ಕಲ್ಲು ಮುಳ್ಳಿನ ಹಾದಿಯನೆನಪುಗಳು ಕಳೆದಿಲ್ಲಬಿದ್ದು ಕಲ್ಲಿನ ಮೇಲಾದ ಗಾಯದ ಗುರುತುಗಳುಚುಚ್ಚಿಸಿಕೊಂಡ ಅಪಮಾನಗಳುಇಲ್ಲಿ ಎಲ್ಲ ಒಳ್ಳೆಯವರುಎಂಬ ನಂಬಿಕೆಯಲ್ಲಿಹಲ್ಲು ಕೊರೆದ ಹಾದಿಯಲ್ಲಿಜೊತೆಗೆ ಬಂದವರುನನಗಿಂತ ಸ್ವಲ್ಪ ಹೆಚ್ಚೇ ನೋವುಂಡವರುಹೂವಿನ ದಾರಿಯ ಮೇಲೆನಡೆಸುವೆ ಎಂದು ಭರವಸೆ ಕೊಟ್ಟವರುಹೂವಿನ ಜೊತೆ ಮುಳ್ಳೂ ಇರುತ್ತದೆಎಂದು ಹೇಳುವುದನ್ನು ಮರೆತರುನನಗೆ ಅರಿವಾಗುವಷ್ಟರಲ್ಲಿ ಅವರಿದ್ದೂ ಇರಲಿಲ್ಲಅಲ್ಲಿಯೂ ಸಲ್ಲಲಿಲ್ಲಇಲ್ಲಿಗೂ ಒಗ್ಗಿಕೊಳ್ಳಲಿಲ್ಲದೇಶಬಿಟ್ಟ ಪರದೇಸಿಕಲ್ಲಿಗಿಂತ ಕಲ್ಲಾಗಿಪರಸಿಕಲ್ಲಿನ ಹಾದಿಯ ಮೇಲೆಅಂಗಡಿ ಅಂಗಡಿಗಳಲ್ಲಿನಡೆವ ಜನರ ಮುಖಗಳಲ್ಲಿಸುಖ ಸಂತೋಷ ಹುಡುಕುತ್ತೇನೆಹಾದಿಹೋಕ ನಾನುಹಾದಿಹೋಕನಾಗಿಯೇ ಉಳಿದಿದ್ದೇನೆವಾರಾಂತ್ಯಕ್ಕೆ ಬಿಡುವು ಹುಡುಕುತ್ತೇನೆಹುಲ್ಲುಹಾಸಿನ ಹಾದಿಯಫೋಟೋ ತೆಗೆದುಫೋನಿನ ವಾಲ್-ಪೇಪರ್ ಮಾಡಿಕೊಳ್ಳುತ್ತೇನೆಹೈವೇಯ ಸೈನ್-ಬೋರ್ಡುಗಳುಈಗ ನನ್ನ ಮಿತ್ರರುನನ್ನ ಕಾರಿನ ದಾರಿ ಹೇಳಿಕೊಡುವವರುಹಗಲು ಸಂಜೆ ಅದೇ ಹಾದಿಕಾರಿಗಿಂತ ಯಾಂತ್ರಿಕವಾಗಿ ಬದುಕು ನಡೆಸುತ್ತೇನೆ*ಕಾಲ ಮಾಗುತಿದೆದಾರಿ ಸವೆಯುತಿದೆತಾಣದ ಮರೀಚಿಕೆಹಾಗೇ ಉಳಿದಿದೆಹಾಗೇ ಉಳಿದರೇ ಬದುಕೆ?
ಬದುಕಿನ ಪ್ರತಿ ಕ್ಷಣದಲ್ಲೂ ಕಲಿಕೆಯ ಅವಕಾಶವಿದೆ. ನಮ್ಮ ಹಲವಾರು ಕಲಿಕೆಗಳು ಇತರರ ಸಜ್ಜನಿಕೆಯಿಂದ, ಆದರ್ಶದಿಂದ, ಸರಳ ಬದುಕಿನ ರೀತಿ ನೀತಿಗಳಿಂದ ಉಂಟಾಗುತ್ತವೆ. ಈ ರೀತಿಯ ಕಲಿಕೆ ಸಾಮಾನ್ಯವಾಗಿ ನಾವು ಕಿರಿಯರಾಗಿದ್ದಾಗ ನಮ್ಮ ವಿವೇಚನಾ ಶಕ್ತಿಯನ್ನು ಬೆಳಸಿಕೊಳ್ಳಲು ಗುರು-ಹಿರಿಯರ ಮಾರ್ಗದರ್ಶನದಿಂದ ನಮಗೆ ಒದಗಿಬರುತ್ತದೆ. ಇದು ಗುಣಾತ್ಮಕ ಕಲಿಕೆ. ನಮ್ಮ ಬಾಲ್ಯಾವಸ್ಥೆಯಿಂದ ಆಚೆ ಬೆಳೆದಾಗ ನಮ್ಮ ಸಮಾಜದಲ್ಲಿ ಇತರರ ದುಷ್ಟತನ, ಅಹಂಕಾರ, ಸ್ವಾರ್ಥ, ದ್ವೇಷ ಈ ಲಕ್ಷಣಗಳನ್ನು ಗುರುತಿಸಲು ಸಮರ್ಥರಾಗಿರುತ್ತೇವೆ. ಬದುಕಿನ ಹಲವಾರು ಸನ್ನಿವೇಶಗಳನ್ನು ಭಾವನೆಗಳನ್ನು ನಮ್ಮ ಒಳ ಮನಸ್ಸಿನ ಸೂಕ್ಷ್ಮ ತೀಕ್ಷ್ಣ ತಕ್ಕಡಿಯಲ್ಲಿ ಇಟ್ಟು ಅಳೆಯಲು ಪ್ರಾರಂಭಿಸುತ್ತೇವೆ. ಹಲವಾರು ನಕಾರಾತ್ಮಕ ಅನುಭವಗಳು ನಮಗೆ ಪಾಠ ಕಲಿಸುತ್ತವೆ. ಹೀಗೆ ಪರಿಪಕ್ವವಾದ ಮನಸ್ಸು ತನ್ನ ವಿವೇಚನಾ ಶಕ್ತಿಯನ್ನು ರೂಢಿಸಿಕೊಳ್ಳುತ್ತದೆ. ಇದನ್ನು ಮನೋವಿಕಾಸ ಎಂದು ಕರೆಯಬಹುದು. ಇಲ್ಲಿ ಒಂದು ನೈತಿಕ ಜವಾಬ್ದಾರಿ ಉಂಟಾಗಿರುತ್ತದೆ. ಒಬ್ಬ ಹಿರಿಯ ಕವಿ ಹೇಳಿದ ಹಾಗೆ "ದೇವ ದಾನವ ಗುಣದ ಮಿಲನದಿ ಮೂಡಿ ಬಂದನೋ ಮಾನವ" ಕೆಲವೊಮ್ಮೆ ಆ ಮಾನವನ ದೈವತ್ವವು ಹಿಮ್ಮೆಟ್ಟಿ ಕ್ಷುದ್ರ ಸ್ವಾರ್ಥದ ದಾನವನಾಗುತ್ತಾನೆ. ತನ್ನ ಸ್ವಾರ್ಥಕ್ಕಾಗಿ ಆ ನೈತಿಕ ಮೌಲ್ಯಗಳನ್ನು ಪ್ರಜ್ಞಾ ಪೂರ್ವಕವಾಗಿ ಗಾಳಿಗೆ ತೂರುತ್ತಾನೆ. ಒಂದು ವೈಯುಕ್ತಿಕ ನೆಲೆಯಲ್ಲಿ ಶುರುವಾಗುವ ಈ ಅಹಂಕಾರ, ಸ್ವಾರ್ಥ ಒಂದು ಸಂಸಾರವನ್ನು, ಒಂದು ಸಮುದಾಯವನ್ನೂ ಆವರಿಸಿಕೊಳ್ಳಬಹುದು. ಒಬ್ಬರು ಇನ್ನೊಬ್ಬರನ್ನು ವಂಚನೆ, ಸುಲಿಗೆ ಇವುಗಳ ನೆಪದಲ್ಲಿ ಶೋಷಿಸಿದಾಗ ಶೋಷಿಸುವವನು ಜಾಣನೆಂದು ಶೋಷಿತಗೊಂಡವನು ಪೆದ್ದನೆಂದು ಪರಿಗಣಿಸುತ್ತೇವೆ. ಕೆಲವೊಮ್ಮೆ ಪರಿಸ್ಥಿತಿಯ ಪರಿಣಾಮಗಳಿಂದಾಗಿ, ಸಂಕೀರ್ಣತೆಯಿಂದಾಗಿ ನಾವು ಸಹನೆಯಿಂದ ವರ್ತಿಸಬೇಕಾಗುತ್ತದೆ. ಇನ್ನೊಬ್ಬರ ಸಣ್ಣತನದ ಬಗ್ಗೆ ಆಕ್ರೋಶಕ್ಕಿಂತ ವ್ಯಥೆ ಮತ್ತು ಕನಿಕರದ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಬೇಕಾಗುತ್ತದೆ.ಅರಿವಿನಲ್ಲೂ ಮುಗ್ಧತೆ ಎಂಬ ಮುಖವಾಡವನ್ನು ಧರಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಅಮಿತ ಅವರ 'ಕಲಿಯಬೇಕಿದೆ' ಎಂಬ ಕವನವನ್ನು ನಾವು ಓದುವುದು ಉಚಿತ. ಬದುಕಿನ ಹಲವಾರು ಸನ್ನಿವೇಶಗಳ ಮೂಲಕ ಈ ಮೇಲಿನ ಅಂಶಗಳನ್ನು ಪರಿಣಾಮಕಾರಿಯಾಗಿ ಕವನದಲ್ಲಿ ಕಟ್ಟುಕೊಟ್ಟಿದ್ದಾರೆ.
-ಸಂಪಾದಕ
ನಾನು ಕಲಿಯಬೇಕಿದೆ,ಇಂಥವರ ನಡುವೆ
ಬೆಳೆಯಲು ಬೆಳಗಲು
ಮುಂದೆ ನಗುತ್ತಲೇ ಇರುವುದು
ಅವರು ತೆರಳಿದ ಬೆನ್ನಿಗೆ
ಉಫ್ಫ್!! ಎಂದು ಉಸಿರುಬಿಟ್ಟು,
ಚಾಡಿ ಮಾತಾಡಿ ಅದರಲ್ಲೇ ಊಟ ,
ನಿದ್ದೆಯ ಸುಖ ಪಡೆಯುವುದನ್ನ.
ನಾನು ಕಲಿಯಬೇಕಿದೆ
ಗೊತ್ತಿಲ್ಲದ್ದನ್ನು ಗೊತ್ತಿದೆ …
ಎಲ್ಲಾ ನನಗೇ ಗೊತ್ತಿದೆ
ಮತ್ತೆ ನನಗಲ್ಲದೆ ಇದು ಯಾರಿಗೂ ಗೊತ್ತಿರಲು
ಸಾಧ್ಯವೇ ಇಲ್ಲ ಎಂದು ವಾದಿಸುವ ಕಲೆಯನ್ನ....
ಕಲಿಯಬೇಕಿದೆ
ಸುಳ್ಳುಗಳ ಮೂಟೆಯಲ್ಲಿ ಸತ್ಯ ಹುಡುಕುವ
ವ್ಯರ್ಥ ಪ್ರಯತ್ನ ಮಾಡುವುದನ್ನ
ಮಿಥ್ಯದ ಕನ್ನಡಿಯಲ್ಲಿ ಸತ್ಯ ತೋರಲು ಒದ್ದಾಡಿ,
ಇಲ್ಲದ್ದನ್ನು ಇದೆ ಎಂದು ತೋರುವ ವಿದ್ಯೆಯನ್ನ
ಕಲಿಯಬೇಕಿದೆ
ಏಳಿಗೆ ಆದರೆ ಅದು ನನ್ನದೇ ಆಗಬೇಕು,
ಜಗದಲ್ಲಿ ನನ್ನ ಹೊರತು ಏಳಿಗೆಗೆ ಅರ್ಹರ್ಯಾರು?
ಎಂದು ಬೀಗುವುದನ್ನ...