ವಿಜ್ಞಾನ ಮತ್ತು ಕಾಲ್ಪನಿಕ-ವಿಜ್ಞಾನದ ನಡುವಣ ಅನ್ಯೋನ್ಯತೆಯ ಪ್ರತೀಕವೆನಿಸಿದ ಒಂದು ಅದ್ಭುತ ಚಲನಚಿತ್ರ-“Interstellar”! — ಉಮಾ ವೆಂಕಟೇಶ್

 ಸುಮಾರು ೧೮ ವರ್ಷಗಳ ಹಿಂದೆ,ಕ್ಯಾಲಿಫೋರ್ನಿಯಾದ ಮಹಾನಗರ ಲಾಸ್ ಏಂಜಲೀಸ್ ಪಟ್ಟಣದ ಹೊರವಲಯದ ಪಸಡೀನಾದಲ್ಲಿರುವ, ಜಗತ್ಪ್ರಸಿದ್ಧ ಕ್ಯಾಲಿಫೋರ್ನಿಯಾದ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ (California Institute of Technology, CALTECH) ಸಂದರ್ಶಕ ವಿಜ್ಞಾನಿಯಾಗಿದ್ದ ನನ್ನ ಪತಿಯ ಜೊತೆಯಲ್ಲಿ ಸಹಭಾಗಿತ್ವ ಸಂಶೋಧನೆ ನಡೆಸಿದ್ದ ಅಲ್ಲಿನ ಪ್ರಸಿದ್ಧ ಸೈದ್ಧಾಂತಿಕ ಖಭೌತವಿಜ್ಞಾನಿ, ಪ್ರೋಫೆಸ್ಸರ್  ಕಿಪ್ ಥಾರ್ನ್, ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಸಿದ್ಧಿಯಾದವರು.

With Professor Kip Thorne,  (from left 5 th) Theoretical Astrophysicist, CALTECH, Pasadena, Scientific advisor & Executive producer Interstellar movie. at his house party
With Professor Kip Thorne, ( 5 th from left) Theoretical Astrophysicist, CALTECH, Pasadena, Scientific advisor & Executive producer Interstellar movie. at his house party. (CC. Prof. Bangalore Sathyaprakash)

1991ರಿಂದಲೇ, ಈ ವಿಜ್ಞಾನಿಯ ಹೆಸರು ನನಗೆ ಪರಿಚಿತವಿದ್ದು, 1996ರಲ್ಲಿ ಕಿಪ್ ಥಾರ್ನ್ ಅವರನ್ನು ಮುಖತಃ ಭೇಟಿಯಾಗುವ ಸೌಭಾಗ್ಯ ದೊರೆತಿತ್ತು. ಸಾಮಾನ್ಯ ಸಾಪೇಕ್ಷತೆ (General relativity),  ಗುರುತ್ವದ ಅಲೆಗಳು (Gravitational waves), ಹಾಗೂ ಕಪ್ಪು-ಕುಳಿಗಳ (Black holes) ಬಗ್ಗೆ ಅತ್ಯುನ್ನತ ಮಟ್ಟದ ಸಂಶೋಧನೆಯಲ್ಲಿ, ಸುಮಾರು ೪೦ ವರ್ಷಗಳಿಂದ ಕಾರ್ಯನಿರತರಾಗಿರುವ, ಈ ಖಭೌತವಿಜ್ಞಾನಿ, 2006 ರ ಸಮಯದಲ್ಲಿ ಹಾಲಿವುಡ್ಡಿನ ಚಲನಚಿತ್ರವೊಂದರಲ್ಲಿ, ವೈಜ್ಞಾನಿಕ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸುದ್ದಿ ಭೌತಶಾಸ್ತ್ರ ವಲಯದಲ್ಲಿ ಕಲರವವನ್ನೆಬ್ಬಿಸಿತ್ತು. ಈಗ ೮ ವರ್ಷಗಳಿಂದ ಆ ಚಿತ್ರದ ತಯಾರಿಕೆಯ ಬಗ್ಗೆ ನಮ್ಮ ಕುತೂಹಲ ಬಹಳವಾಗಿದ್ದು, ಇದರ ಬಿಡುಗಡೆಗಾಗಿ ನಾವೆಲ್ಲಾ ಕಾಯುತ್ತಿದ್ದೆವು. “Interstellar” ಅಂದರೆ, ಅಂತರತಾರಾ, ಅಥವಾ ಅಂತರನಕ್ಷತ್ರೀಯ, ಎಂಬ ಅರ್ಥವನ್ನು ಕೊಡುವ ಹೆಸರಿನ ಈ ಚಲನಚಿತ್ರ, ಕಳೆದ ನವೆಂಬರ್ ೫ನೆಯ ತಾರೀಖು,ಕ್ಯಾಲಿಫೋರ್ನಿಯಾ ಮತ್ತು ನವೆಂಬರ್ ೭ರಂದು ಜಗತ್ತಿನ ಎಲ್ಲೆಡೆ ಬಿಡುಗಡೆಯಾಯಿತು.
Read More »

ವೈಕುಂಠದಲ್ಲಿ ಕೋಲಾ(ಕ್ಲೋನಾ)ಹಲ! – ಸುದರ್ಶನ್ ಗುರುರಾಜರಾವ್ ಹರಟೆಕಟ್ಟೆ

ಕ್ಷೀರ ಸಾಗರದ ಮಧ್ಯದಲ್ಲಿ ಶೇಷ ಶಾಯಿಯಾಗಿ ಶ್ರೀ ಲಕ್ಷ್ಮಿಯ ಸೇವೆ ಪಡೆಯುತ್ತಿದ್ದ ಶ್ರೀಮನ್ನಾರಾಯಣನಿಗೆ ಡಿಸ್ಟರ್ಬ್ ಮಾಡುವ ಇರಾದೆ ಜಯ ವಿಜಯರಿಗೆ ಖಂಡಿತಾ ಇರಲಿಲ್ಲ. ತ್ರೇತಾ ದ್ವಾಪರ ಯುಗಗಳಲ್ಲಿ ಧರ್ಮಸಂಸ್ಥಾಪನೆಯನ್ನು ಮಾಡಿದ ನಂತರ ದೀರ್ಘ ವಿಶ್ರಾಂತಿಯಲ್ಲಿದ್ದ ಅವನು ಯಾವ ಕಿರಿ ಕಿರಿಯನ್ನೂ ನಿರೀಕ್ಷಿಸುತ್ತಿರಲಿಲ್ಲ. ಜಾಗತಿಕ ತಾಪಮಾನ ಏರುತ್ತಿರುವ ತೆರದಲ್ಲೇ ಮಾನವರ ಅನಾಚಾರಗಳೂ ಹೆಚ್ಚುತ್ತಿರುವುದು ಅವನಿಗೆ ತಿಳಿಯದ ವಿಷಯವಾಗಿರದಿದ್ದರೂ ಪ್ರಪಂಚವನ್ನು ಹಾಲು ಕಾಯಿಸಿದಂತೆ ತನ್ನಷ್ಟಕ್ಕೆ ತಾನು ಕಾಯ್ದು ಕೊಳ್ಳಲಿ, ಉಕ್ಕಿದಾಗ ನೋಡೋಣ ಎಂಬ ಎಣಿಕೆ ಅವನದು.ಅದೂ ಅಲ್ಲದೆ ದೇವಸ್ಥಾನಗಳ ಹುಂಡಿಯಲ್ಲಿ ಹಣದ ಮಹಾಪೂರವೇ ಹರಿಯುತ್ತಿರಲಾಗಿ ಧರ್ಮಕ್ಕೆ ಚ್ಯುತಿ ಬಂದಿರಲಾರದೆಂದು ಅವನ ಊಹೆ. ಇಷ್ಟಕ್ಕೂ ತಿರುಪತಿಯ ಹುಂಡಿಯಿಂದ ಕುಬೇರನ ಸಾಲಕ್ಕೆ ಹಣ ಚುಕ್ತಾ ಆಗುತ್ತಿರಲು ಒಂದು ರೀತಿಯ ನಿರಾಳವೇ ಅವನಲ್ಲಿತ್ತು.
Read More »