‘ಮಾತೆಯರ ದಿನಕ್ಕೊಬ್ಬ ಮಮತಾಮಯಿಯ ಕಥನ’ – ವೈಶಾಲಿ ದಾಮ್ಲೆ ಬರೆದ ಲೇಖನ

ನೆನ್ನೆ ದೇಶವಿದೇಶಗಳಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಸಂಭ್ರಮ. ನಾಡಿದ್ದು (೧೧-೩-೨೦೧೮) ಬ್ರಿಟನ್ ಮುಂತಾಗಿ ಹಲವು ದೇಶಗಳಲ್ಲಿ ಮಾತೆಯರ (Mother’s Day)ದಿನ. ಆ ದಿನದಲ್ಲಾದರೂ ’ಮಲ್ಟಿಟಾಸ್ಕಿಂಗ್’’ ಮಹಿಳೆಗೆ ಬಿಡುವು ಸಿಕ್ಕೀತೋ! ಎಲ್ಲೆಲ್ಲಿ ತಂದೆ ತಾಯಿಗಳಿಂದ ದೂರ ವಾಸಿಸಿಸುವ  ಗಂಡಹೆಂಡಿರಿಬ್ಬರೂ ಕೆಲಸ ಮಾಡುತ್ತಾರೋ ಅಲ್ಲಲ್ಲಿ ಈ ಕಾಲದಲ್ಲಿ ಮಕ್ಕಳನ್ನು ನೋಡಿಕೊಳ್ಳಲು (child care) ಬೇರೆಯವರನ್ನು ಅವಲಂಬಿಸಬೇಕಾದ ಪ್ರಸಂಗಗಳು ಬರುತ್ತವೆ. ಅದೂ ಒಂದು ಲಾಟರಿ, ಯಾರು ಸಿಗುತ್ತಾರೋ, ಅದು ಅವರವರ ಅದೃಷ್ಟದ ಪ್ರಕಾರ. ಅದರ ಅನುಭವ ನನಗೂ ಇದೆ. ಇಲ್ಲಿ ವಾಸಿಸುವ ಡಾಕ್ಟರ್ ದಂಪತಿಗಳು ಅನೇಕ. ಅವರಲ್ಲೊಬ್ಬರಾದ ಡಾ. ವೈಶಾಲಿಯವರು ತಮಗೆ ದೊರಕಿದ (a surrogate mother) ಅಸಾಧಾರಣ ಮಹಿಳೆ, (ಅವರ ’ನಾನ್ನಿ’)ಯ ಪರಿಚಯಮಾಡಿಸುತ್ತಿದ್ದಾರೆ. ಓದಿ ನೋಡಿ, ನಿಮ್ಮ ಅನುಭವವನ್ನೂ ಹಂಚಿಕೊಳ್ಳಿ! (- ಸಂ)

”ಯತ್ರ ನಾರ್ಯಸ್ತು ಪೂಜ್ಯ೦ತೇ, ರಮಂತೇ ತತ್ರ ದೇವತಾಃ” (ಎಲ್ಲಿ ಸ್ತ್ರೀಯರನ್ನು ಪೂಜನೀಯರೆಂದು ಪರಿಗಣಿಸುತ್ತಾರೋ, ಅಂತಹ ಸ್ಥಳದಲ್ಲಿ ದೇವತೆಗಳು ನೆಲೆಸುತ್ತಾರೆ) ಇದು ಬಾಲ್ಯದಲ್ಲಿ ನನ್ನ ಮೇಲೆ ಬಹಳ ಪ್ರಭಾವ ಬೀರಿದ ಸಂಸ್ಕೃತ ಶ್ಲೋಕಗಳಲ್ಲೊಂದು. ಸಂಜೆಯ ಹೊತ್ತು ನಮ್ಮನ್ನುಇಕ್ಕೆಲಗಳಲ್ಲಿ ಕುಳ್ಳಿರಿಸಿಕೊಂಡು ನಮ್ಮ ತಂದೆ ಅಥವಾ ತಾಯಿ ಸೀತೆ, ದ್ರೌಪದಿ, ಮಂಡೋದರಿಯಂಥ ಪೌರಾಣಿಕ ಮಹಿಳೆಯರ ತ್ಯಾಗದ ಕಥೆಗಳನ್ನೂ, ಝಾನ್ಸಿ ರಾಣಿ, ಕಿತ್ತೂರು ಚೆನ್ನಮ್ಮ, ಉಳ್ಳಾಲದ ಅಬ್ಬಕ್ಕನಂಥ ವೀರವನಿತೆಯರ ಐತಿಹಾಸಿಕ ಕಥೆಗಳನ್ನೂ ಮನಮುಟ್ಟುವಂತೆ ಹೇಳುವುದು ರೂಢಿಯಾಗಿತ್ತು. ಇವೆಲ್ಲವನ್ನೂ ಕೇಳಿ ಬೆಳೆಯುತ್ತಿದ್ದಂತೆ, ವೇದಗಳ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಯನ್ನು ಯಾಕೆ ಪೂಜನೀಯಳೆಂದು ಪರಿಗಣಿಸಲಾಗುತ್ತದೆ ಎಂಬ ಅರಿವು ತನ್ನಿಂದ ತಾನೇ ಆಗಿತ್ತು. ಸ್ತ್ರೀಯು ತನ್ನ ತ್ಯಾಗ, ವೀರತೆ, ಪಾತಿವ್ರತ್ಯ, ರೂಪ, ಶೃಂಗಾರ, ಬುದ್ಧಿಮತ್ತೆ ಹೀಗೆ ಹತ್ತು- ಹಲವು ಗುಣಗಳಿಂದ ಗುರುತಿಸಿಕೊಳ್ಳುತ್ತಾಳಾದರೂ, ಇವೆಲ್ಲಕ್ಕಿಂತಲೂ ಶ್ರೇಷ್ಠವಾದ ಗುಣ ಆಕೆಯ ನಿರ್ವ್ಯಾಜ್ಯ ಅಂತಃಕರಣ. ತಮ್ಮ ಜೀವನವನ್ನು ಇನ್ನೊಬ್ಬರ ಉನ್ನತಿಗಾಗಿಯೇ ಮುಡಿಪಾಗಿಟ್ಟ, ತಮ್ಮ ಸೇವಾ ಮನೋಭಾವ ಹಾಗೂ ಸಮಾಜಕಲ್ಯಾಣದ ಕಾರ್ಯಗಳಿಂದ ಹೆಸರುವಾಸಿಯಾದ ಹಲವು ಅಸಾಮಾನ್ಯ ಮಹಿಳೆಯರನ್ನು ನಾವು-ನೀವೆಲ್ಲರೂ ಬಲ್ಲೆವು. ಅಂತೆಯೇ, ಸ್ತ್ರೀಸಹಜವಾದ ಕರುಣೆ, ಪ್ರೀತಿ, ಪ್ರೇಮಗಳನ್ನು ಇನ್ನೊಬ್ಬರಿಗೆ ಸದಾ ಹಂಚುತ್ತಾ, ನೊಂದವರ ಬಾಳಿಗೆ ಬೆಳಕಾಗುತ್ತಾ, ಜೀವನ ಎಸೆದ ಸವಾಲುಗಳಿಗೆ ಹೆದರದೆ ದಿಟ್ಟತನದಿಂದ ಮುನ್ನಡೆಯುತ್ತಾ ಇರುವ ‘ಸಾಮಾನ್ಯರಲ್ಲಿ ಅಸಾಮಾನ್ಯ’ ವ್ಯಕ್ತಿಗಳೂ ಹಲವರಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s day) ಹಾಗೂ ತಾಯಿಯರ ದಿನ (Mother’s Day)ದ ಸಂಭ್ರಮಾಚರಣೆಯ ಈ ಸಮಯದಲ್ಲಿ ಇಂತಹ ಒಬ್ಬ ಕರುಣಾಮಯಿ ನಾರಿಯ ವ್ಯಕ್ತಿ ಪರಿಚಯ ಇಲ್ಲಿದೆ.

ಇವರು ಸವಿತಾಜೀ.

ಬಹು ಕಾರ್ಯಕಾರಿ (multitasking) ಮಹಿಳೆ

ಕಳೆದ ಕೆಲವು ತಿಂಗಳುಗಳಿಂದ ನನ್ನ ೭ ವರ್ಷದ ಮಗಳು ಧಾತ್ರಿಯನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬರುತ್ತಾರೆ. ಅವಳನ್ನು ಸ್ವಿಮ್ಮಿಂಗ್, ಡ್ಯಾನ್ಸ್ ಮುಂತಾದ ತರಗತಿಗಳಿಗೆ ಕರೆದುಕೊಂಡು ಹೋಗುತ್ತಾರೆ. ಸಮಯ ಉಳಿದರೆ ನಮಗೊಂದಿಷ್ಟು ಚಪಾತಿ, ಪಲ್ಯಗಳನ್ನು ಮಾಡಿಡುತ್ತಾರೆ. ನನ್ನ ಮಕ್ಕಳಿಗೆ ಇವರೆಂದರೆ ಬಹಳ ಇಷ್ಟ ಹಾಗೂ ಗೌರವ. ಕೇವಲ ದುಡ್ಡಿಗೆಂದು ಕೆಲಸ ಮಾಡುವ ಹೆಂಗಸು ಅವರಲ್ಲ. ನಾನು ಬರುವುದು ಸ್ವಲ್ಪ ತಡವಾದರೆ ಧಾತ್ರಿಗೆ ಹೋಮ್ ವರ್ಕ್ ಮಾಡಿಸಿ, ಊಟ ಮಾಡಿಸಿರುತ್ತಾರೆ. ಒಣಗಿದ ಬಟ್ಟೆಗಳಿದ್ದರೆ ಮಡಿಸಿ  ಇಡುತ್ತಾರೆ. ಅವರ ಮನೆಯಲ್ಲೇನಾದರೂ ತಿಂಡಿ ಮಾಡಿದಾಗ, ತಪ್ಪದೆ ನಮಗೂ ತಂದುಕೊಡುತ್ತಾರೆ. ಅವರು ಮಾಡಿದಷ್ಟು ರುಚಿಯಾದ ಈರುಳ್ಳಿ ಬೋಂಡಾ ನಾನು ಇನ್ನೆಲ್ಲಿಯೂ ತಿಂದಿಲ್ಲ. ಮಕ್ಕಳೆಂದರೆ ಇವರಿಗೆ ಬಹಳ ಪ್ರೀತಿ. ಸವಿತಾಜಿ ಎತ್ತಿ ಆಡಿಸುತ್ತಾರೆಂದರೆ ನನ್ನ ಎರಡು ವರ್ಷದ ಮಗಳು ಧೃತಿಗೆ ಹಿಗ್ಗೋ ಹಿಗ್ಗು. ಒಂದು ದಿನ ಅವರು ಬರದಿದ್ದರೆ ‘ವೇರ್ ಈಸ್ ಸವಿತಾ ಆಂಟಿ‘ ಎಂದು ಮನೆಯಿಡೀ ಹುಡುಕುತ್ತಾಳೆ. ಅವಳ ಆಟದ ಫೋನ್  ತೆಗೆದುಕೊಂಡು “ಆಂಟಿ ಪ್ಲೀಸ್ ಕಮ್ ಹೋಮ್” ಎಂದು ಫೋನ್ ಮಾಡುತ್ತಾಳೆ.

ಕೆಲವು ತಿಂಗಳುಗಳ ಹಿಂದೆ ಇವರ ಪರಿಚಯವಾದಾಗ ”ಎಲ್ಲರಂತಲ್ಲ ಈಕೆ. ಇವರಲ್ಲೇನೋ ವಿಶೇಷ ಗುಣವಿದೆ. ಸಾತ್ವಿಕತೆಯ ಪ್ರತಿಮೆಯಂತಿದ್ದಾರೆ” ಎನ್ನಿಸಿತ್ತು.

ದಿನ ಕಳೆದಂತೆ ಅವರ ಬಗ್ಗೆ ಹಲವಾರು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಕೇಳಿದಷ್ಟೂ ನನಗೆ ಅವರ ಮೇಲಿನ ಗೌರವ ಹೆಚ್ಚುತ್ತಾ ಹೋಗುತ್ತದೆ. ೬೦ ವರ್ಷ ವಯಸ್ಸಿನ ಅವರು ಚಳಿಯಿರಲಿ, ಹಿಮಪಾತವಿರಲಿ ತಿಂಗಳಿಗೆರಡು ಬಾರಿಯಾದರೂ ಇಲ್ಲಿಂದ ೨೦೦ ಮೈಲಿ ದೂರದಲ್ಲಿರುವ ಲಂಡನ್ ಗೆ ಒಬ್ಬರೇ ಕಾರಿನಲ್ಲಿ ಹೋಗಿ ಬರುತ್ತಾರೆ! ಅಲ್ಲಿರುವ ವೃದ್ಧ ತಂದೆ-ತಾಯಿಯರ ಹಾಗೂ ಮಕ್ಕಳು-ಮೊಮ್ಮಕ್ಕಳ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತಾರೆ. ೨೫ ವರ್ಷಗಳ ಕಾಲ ಮಾಂಚೆಸ್ಟರ್ ನಲ್ಲಿ ದಿನಸಿ ಅಂಗಡಿ ನಡೆಸಿ, ಖರೀದಿಸಿದ ಮನೆಯ ಮೇಲಿನ ಸಾಲವನ್ನೆಲ್ಲಾ ತೀರಿಸಿದ್ದಾರೆ. ಮದುವೆಯಾಗಿ ಕೈಹಿಡಿದ ಗಂಡ ಕಷ್ಟ-ಸುಖ ಯಾವುದರಲ್ಲೂ ಭಾಗಿಯಾಗದವನೆಂದು ಅರಿವಾದಾಗ, ಧೃತಿಗೆಡದೆ ೫ ಜನ ಮಕ್ಕಳನ್ನು ಸ್ವಂತ ದುಡಿಮೆಯಿಂದ ಬೆಳೆಸಿ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಹೆಣ್ಣುಮಕ್ಕಳ ಮದುವೆ ಮಾಡಿ, ಅಂಗಡಿಯನ್ನು ಇನ್ನೊಬ್ಬರಿಗೆ ವಹಿಸಿ ಕೊಟ್ಟ ಮೇಲೆ ಗಂಡನಿಂದ ವಿಚ್ಛೇದನ ಕೇಳುವ ದಿಟ್ಟ ನಿರ್ಧಾರ ತೆಗೆದು ಕೊಂಡಿದ್ದಾರೆ. ಆದರೆ ಗಂಡ, ಮನೆಯನ್ನು ಬಿಟ್ಟುಕೊಡುವುದಿಲ್ಲ ಎಂದಾಗ, ತಾನು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದ ಕೊಂಡ ಮನೆಯನ್ನು ಆತನಿಗೆ ಬಿಟ್ಟು ಹೊರನಡೆದ ಧೈರ್ಯವಂತೆ ಇವರು.

ವರ್ಷಗಳ ನಂತರ, ವಿವಾಹಿತನಾದ ಮಗನೂ ತಂದೆಯ ಹಾದಿಯನ್ನೇ ಹಿಡಿದಾಗ ಸೊಸೆಯ ಬೆನ್ನೆಲುಬಾಗಿ ನಿಂತವರು ಇವರು. ಮುಂದೊಂದು ದಿನ ಸೊಸೆ ತನ್ನ ಗಂಡನಿಂದ ಬೇರಾಗುವ ನಿರ್ಧಾರ ತೆಗೆದುಕೊಂಡಾಗ ಇಡೀ ಸಮಾಜವೇ ಆಕೆಯನ್ನು ನಿಂದಿಸಿದರೂ, ಅವಳಿಗೆ ಆಸರೆ ಕೊಟ್ಟು, ತಾನು ಹೆತ್ತ ಮಗನಿಂದಲೇ ದೂರಾಗಿದ್ದಾರೆ. ಕೆಲವು ತಿಂಗಳುಗಳ ನಂತರ ಒಳ್ಳೆಯ ಹುಡುಗನೊಬ್ಬನನ್ನು ಹುಡುಕಿ ತಾವೇ ಮುಂದೆ ನಿಂತು ಸೊಸೆಗೆ ಎರಡನೇ ಮದುವೆ ಮಾಡಿಸಿದ ಧೀಮಂತ ವ್ಯಕ್ತಿತ್ವ ಇವರದ್ದು. ಈಗಲೂ ಆ ಹುಡುಗಿಯನ್ನು ತನ್ನ ಮಗಳಂತೇ ನೋಡಿಕೊಳ್ಳುತ್ತಾರೆ. ಆಕೆ ಕೆಲಸದಿಂದ  ಬರುವಾಗ ತನ್ನ ಮನೆಯಲ್ಲಿ ಅವಳಿಗೂ ಸೇರಿಸಿ ಅಡಿಗೆ ಮಾಡಿಡುತ್ತಾರೆ. ಮೊಮ್ಮಗ ಸಣ್ಣವನಿದ್ದಾಗ ಅವನನ್ನು ಶಾಲೆಯಿಂದ ಕರೆದುಕೊಂಡು ಬರುವುದು, ಶಾಲಾನಂತರದ ತರಗತಿಗಳಿಗೆ ಕರೆದುಕೊಂಡು ಹೋಗುವುದು ಇತ್ಯಾದಿಗಳನ್ನು ಮಾಡುತ್ತಿದ್ದವರೂ ಅವರೇ.

ಅವರು ನನಗೆ ಈ ಘಟನೆಗಳ ವಿವರಗಳನ್ನೆಲ್ಲಾ ಹೇಳಿದಾಗ “ನಿಜಕ್ಕೂ ನಿಮ್ಮ ವ್ಯಕ್ತಿತ್ವ ಬಹುದೊಡ್ಡದು ಸವಿತಾಜೀ. ಸೊಸೆಯಾಗಿದ್ದವಳನ್ನು ಈಗಲೂ ಇಷ್ಟೊಂದು ಪ್ರೀತ್ಯಾದರಗಳಿಂದ ನೋಡಿಕೊಳ್ಳುವ ನಿಮ್ಮ ಗುಣ ಎಲ್ಲರಿಗೂ ಆದರ್ಶಪ್ರಾಯವಾದದ್ದು” ಎಂದೆ. ಅದಕ್ಕವರು “ಮೈನೆ ಹಮೇಶಾ ಮೇರಿ ಬಹೂ ಕೋ ಬಹೂ ಕೀ ತರಹ್ ನಹೀ, ಬೇಟಿ ಕೀ ತರಹ್ ದೇಖಾ. ಕೋಯಿ ಭಲಾ ಅಪ್ನೆ ಬೇಟಿ ಕೀ ಬುರಾಯೀ ಚಾಹೇಗಾ ಕ್ಯಾ” (‘’ನಾನು ನನ್ನ ಸೊಸೆಯನ್ನು ಎಂದೂ ಸೊಸೆ ಎಂದು ಪರಿಗಣಿಸಲೇ ಇಲ್ಲ. ಅವಳನ್ನು ಮಗಳೆಂಬ ದೃಷ್ಟಿಯಿಂದಲೇ ನೋಡಿದ್ದೇನೆ. ಯಾರಾದರೂ ಅವರ ಸ್ವಂತ ಮಕ್ಕಳಿಗೆ ಕೆಟ್ಟದಾಗಲಿ ಎಂದು ಬಯಸುವುದುಂಟೇ?’’) ಅಂದರು. ಮುಂದುವರೆದು “ಮೈನ್ ಕಭೀ ಗಲತ್ ಇನ್ಸಾನ್ ಕಾ ಸಾಥ್ ನಹೀ ದೇ ಸಕ್ತಿ. ವೋ ಗಲತ್ ಇನ್ಸಾನ್ ಚಾಹೇ ಮೇರಾ ಪತಿ ಹೀ ಕ್ಯೋ ನ ಹೋ, ಯಾ ಫಿರ್ ಮೇರಾ ಬೇಟಾ” (”ನಾನು ಎಂದಿಗೂ ನೀಚ ವ್ಯಕ್ತಿಯ ಪಕ್ಷ ವಹಿಸಲಾರೆ. ಆ ಕೆಟ್ಟ ವ್ಯಕ್ತಿ ನನ್ನ ಪತಿಯಾದರೇನಂತೆ, ಅಥವಾ ಮಗನಾದರೇನಂತೆ”) ಎಂದರು!

ಮೊನ್ನೆ ಒಂದು ದಿನ ”ಏಪ್ರಿಲ್ ನಲ್ಲಿ ೨ ವಾರ ಭಾರತಕ್ಕೆ ಹೋಗಿಬರಬೇಕೆಂದಿದ್ದೇನೆ. ೨ ವಾರದ ಮಟ್ಟಿಗೆ ಧಾತ್ರಿಯನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಪರ್ಯಾಯ ವ್ಯವಸ್ಥೆ ಮಾಡಲು ನಿನಗೆ ಸಾಧ್ಯವಾ?” ಎಂದರು. ”ಖಂಡಿತಾ ಮಾಡುತೇನೆ ಸವಿತಾಜೀ. ನೀವು ಹೋಗಿ ಬನ್ನಿ” ಎಂದೆ. ಮೂಲತಃ ಭಾರತೀಯರಾದರೂ ಅವರು ಹುಟ್ಟಿ-ಬೆಳೆದದ್ದು ತಾಂಜಾನಿಯಾ ದೇಶದಲ್ಲಿ, ಕಳೆದ ಸುಮಾರು ೪೦ ವರ್ಷಗಳಿಂದ, ಅವರ ತಂದೆ-ತಾಯಿ, ಅಣ್ಣ-ತಂಗಿಯರೆಲ್ಲಾ ಇಂಗ್ಲೆಂಡಿನಲ್ಲೇ ಇದ್ದಾರೆ ಎನ್ನುವ ವಿವರಗಳನ್ನು ನನಗವರು ಈಗಾಗಲೇ ಹೇಳಿದ್ದರು. ಹಾಗಾಗಿ ಕುತೂಹಲ ತಡೆಯಲಾರದೆ ”ಭಾರತದಲ್ಲಿ ಯಾರನ್ನು ಭೇಟಿಯಾಗಲು ಹೋಗುತ್ತಿದ್ದೀರಿ? ದೂರದ ನೆಂಟರಿಷ್ಟರಿರಬೇಕಲ್ಲವೇ?” ಎಂದೆ. ಅದಕ್ಕವರು ”ಇಲ್ಲ. ನನ್ನ ಅತ್ತೆಯನ್ನು (ಗಂಡನ ತಾಯಿ) ಭೇಟಿಯಾಗಲು ಹೋಗುತ್ತಿದ್ದೇನೆ. ಆಕೆಗೆ ಇತ್ತೀಚೆಗೆ ಆರೋಗ್ಯ ಬಹಳ ಹದಗೆಟ್ಟಿದೆ. ಹಾಗಾಗಿ ಮನೆಯಲ್ಲೇ ಅವರ ಆರೋಗ್ಯ ನೋಡಿಕೊಳ್ಳವಂತಹ ನರ್ಸ್ ಒಬ್ಬಳನ್ನು ನೇಮಿಸಿ ಬರೋಣವೆಂದಿದ್ದೇನೆ. ನನ್ನ ಗಂಡ ಎಂದೂ ತಾಯಿಯ ಯೋಗಕ್ಷೇಮವನ್ನು ವಿಚಾರಿಸಕೊಂಡದ್ದೇ ಇಲ್ಲ. ಹಾಗಾಗಿ ಮದುವೆಯಾದಾಗಿನಿಂದಲೂ, ಆಕೆಯ ಜೀವನ ನಿರ್ವಹಣೆಯ ವೆಚ್ಚವನ್ನು ನಾನೇ ಇಲ್ಲಿಂದ ಕಳಿಸಿಕೊಡುತ್ತಿದ್ದೇನೆ. ಗಂಡನ ಸಂಬಂಧ ಕಡಿದುಕೊಂಡರೂ, ಆಕೆಯನ್ನು ದೂರಮಾಡುವುದು ನನಗೆ ಸಾಧ್ಯವಿಲ್ಲ. ನಡೆದುಹೋದುದರಲ್ಲಿ ಆಕೆಯ ತಪ್ಪೇನೂ ಇಲ್ಲವಲ್ಲ” ಎಂದರು. ಮತ್ತೊಮ್ಮೆ ಅವರ ಉನ್ನತ ವಿಚಾರಧಾಟಿಗೆ ಬೆರಗಾಗುವ ಸರದಿ ನನ್ನದು.

ತಾವು ಒಂದಷ್ಟು ಓದಿಕೊಂಡ ತಕ್ಷಣ, ಒಂದು ನೌಕರಿ ಸಿಕ್ಕ ತಕ್ಷಣ, ಅಥವಾ ಒಂದಿಷ್ಟು ಹೆಸರು ಬಂದ ತಕ್ಷಣ, ಸಕಲ ಶಾಸ್ತ್ರ-ಪುರಾಣಗಳನ್ನೂ ಅರೆದು ಕುಡಿದವರಂತೆ ವರ್ತಿಸುವ, ಲೋಕಕ್ಕೆಲ್ಲಾ ಬುದ್ಧಿವಾದ ಹೇಳುತ್ತಾ, ಇನ್ನೊಬ್ಬರ ತಪ್ಪುಗಳನ್ನು ಎತ್ತಿ ತೋರಿಸುತ್ತಾ, ತಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರ ಇವಾವುದನ್ನೂ ಪಾಲಿಸದೆ, ‘ಹೇಳುವುದು ಶಾಸ್ತ್ರ, ತಿನ್ನುವುದು ಬದನೇಕಾಯಿ’ ಎಂಬಂತೆ ಬದುಕುವ ಆಷಾಢಭೂತಿಗಳೇ ಜಾಸ್ತಿಯಾಗಿರುವ ಈಗಿನ ಸಮಾಜದಲ್ಲಿ ಸವಿತಾಜೀ ಬಹು ಎತ್ತರದವರಾಗಿ ನಿಲ್ಲುತ್ತಾರೆ. ಸೊಸೆಯನ್ನು ಮಗಳಂತೆ ಬಿಡಿ, ಸ್ವಾಭಿಮಾನವಿರುವ ಒಬ್ಬ ಮನುಷ್ಯಳಂತೆ ಕೂಡಾ ಸ್ವೀಕರಿಸದ, ತಮ್ಮ ಮಕ್ಕಳೆಂದರೆ ಪ್ರಶ್ನಾತೀತರೆಂಬ ಧೋರಣೆಯಿರುವ ಅತ್ತೆ-ಮಾವ, ಅಪ್ಪ-ಅಮ್ಮಂದಿರ ನಡುವೆ ಇವರ ವ್ಯಕ್ತಿತ್ವ ಬಹು ಉದಾತ್ತವೆನಿಸುತ್ತದೆ. ಹಾಗೆಯೇ, ಪತಿಯ ತಂದೆ-ತಾಯಿಯರನ್ನು ಕಾಲ ಕಸಕ್ಕಿಂತಲೂ ಕೀಳಾಗಿ ಪರಿಗಣಿಸುವ ಸೋ ಕಾಲ್ಡ್ ವಿದ್ಯಾವಂತ ಸೊಸೆಯಂದಿರೂ ಕೂಡಾ ಇವರಿಂದ ಕಲಿಯುವುದು ಬಹಳಷ್ಟಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಕೆಲವು ಮೌಲ್ಯಗಳು ಹಾಗೂ ಸಿದ್ಧಾಂತಗಳಿರುತ್ತವೆ; ಈ ಸಿದ್ಧಾಂತಗಳನ್ನು ತಮಗೆ ಹೇಗೆ ಬೇಕೋ ಹಾಗೆ ತಿರುಚುವ, ಬೇಕೆಂದಾಗ ಹಿಡಿದುಕೊಳ್ಳುವ, ಬೇಡವೆಂದಾಗ ಗಾಳಿಗೆ ತೂರುವ ಅವಕಾಶವಾದಿಗಳೇ ಹೆಚ್ಚು. ಆದರೆ, ಪರಿಸ್ಥಿತಿ ತನ್ನ ವ್ಯತಿರಿಕ್ತವಾಗಿದ್ದರೂ, ತನ್ನ ಮೌಲ್ಯಗಳನ್ನು ಬಿಡದೆ ಒಬ್ಬಂಟಿಯಾಗಿ ಮುನ್ನಡೆದ, ತನ್ನ ನೊಂದ ಸೊಸೆಗೊಂದು ಹೊಸ ಬಾಳು ಸಿಗುವ ಅವಕಾಶ ಮಾಡಿಕೊಟ್ಟ, ಜೀವನದ ಸಂಧ್ಯಾಕಾಲದಲ್ಲಿರುವ ಹಿರಿ-ಜೀವಕ್ಕೆ ಆಸರೆಯಾಗಿ ನಿಂತಿರುವ ಸವಿತಾಜೀ ಒಬ್ಬ ಅಪರೂಪದ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ವೈಶಾಲಿ ದಾಮ್ಲೆ

ಬ್ರಿಟನ್ ಪಾರ್ಲಿಮೆಂಟ್ ನ ಇತಿಹಾಸ ಮತ್ತು ಕೆಲವು ಆಸಕ್ತಿದಾಯಕ ಸಂಗತಿಗಳು: ಲೇಖನ– ರಾಮಮೂರ್ತಿ

(ಎಷ್ಟೋ ಸಲ ನಮ್ಮ ನಾಡಿನ ಬಗ್ಗೆಯಾಗಲಿ ವಾಸಿಸುವ ಊರು ಅಥವಾ ದೇಶದ ಬಗೆಗಿನ ಸಂಗತಿಗಳೇ ನಮಗೆ ಗೊತ್ತಿರುವದಿಲ್ಲ – ಇನ್ನೊಬ್ಬರು ಎತ್ತಿ ತೋರಿಸುವ ತನಕ. ಬ್ರಿಟಿಶ್ ಪಾರ್ಲಿಮೆಂಟಿನಲ್ಲಿ ಪ್ರಜೆಗಳಿಗೆ Strangers galleryಯಲ್ಲಿ ಉಚಿತ ಪ್ರವೇಶವಿದೆ. ಅಲ್ಲಿಗೆ ಭೆಟ್ಟಿ ಕೊಟ್ಟು ಟೂರ್ ಮಾಡುವಾಗ ಸಂಗ್ರಹಿಸಿದ ಸ್ವಾರಸ್ಯಕರ  ಸಂಗತಿಗಳನ್ನು ಈ ಲೇಖನದಲ್ಲಿ ನಮ್ಮ ಹಿರಿಯ ಮಿತ್ರರಾದ ರಾಮಮೂರ್ತಿ ಹಂಚಿಕೊಂಡಿದ್ದಾರೆ. ಜೊತೆಗೆ ಓದುಗರಲ್ಲಿ ಹೊಸಬರಿದ್ದರೆ ಅವರಿಗಾಗಿ”ಪಾರ್ಲಿಮೆಂಟುಗಳ ತವರಿನ’ potted history ಸಹ ಕೊಟ್ಟಿದ್ದಾರೆ. ನಿಮ್ಮ ಅನಿಸಿಕೆಗಳಿಗೆ ಸ್ವಾಗತವಿದೆ. ಅವಶ್ಯ ಬರೆಯಿರಿ. -ಸಂ)

ಈ ದೇಶದ ಪಾರ್ಲಿಮೆಂಟ್ ನ  ಇತಿಹಾಸ ಮತ್ತು ಕೆಲವು ಆಸಕ್ತಿದಾಯಕ ಸಂಗತಿಗಳು

ನಾವೆಲ್ಲಾ ಬಹುಪಾಲು ಲಂಡನ್ ನಲ್ಲಿ ಇರುವ ಪಾರ್ಲಿಮೆಂಟ್ ನೋಡಿದ್ದೀವಿ ಮತ್ತು ಕೆಲವರು ಒಳಗೂ ಹೋಗಿ ಅದರ ಚರಿತ್ರೆ ಮತ್ತು ವಾಸ್ತುಶಿಲ್ಪವನ್ನು ನೋಡಿ ಆಶ್ಚರ್ಯ ಪಟ್ಟಿರಬಹುದು. ಅಂದರೆ ಬಹುಶಃ ಈ ಬರಹ ನಿಮಗಲ್ಲ. ಆದರೂ ಓದಿ ಪರವಾಗಿಲ್ಲ !

ಬ್ರಿಟಿಷ್ ಪಾರ್ಲಿಮೆಂಟ್ ಈ ದೇಶದ ಸರ್ವೋಚ್ಛ ಸಂಸ್ಥೆ. ಇಲ್ಲಿ  ಎರಡು ಭಾಗಗಳಿವೆ -ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್  ಕಾಮನ್ಸ್. ಇಂಡಿಯಾದಲ್ಲಿ ರಾಜ್ಯಸಭಾ ಮತ್ತು ಲೋಕ್ ಸಭಾ ಇದ್ದಹಾಗೆ. ಹೌಸ್ ಆಫ್ ಲಾರ್ಡ್ಸ್ ನಲ್ಲಿ ೭೯೯ ಮತ್ತು ಕಾಮನ್ಸ್ ನಲ್ಲಿ ೬೫೦ ಸದಸ್ಯರಿದಾರೆ. ಲಾರ್ಡ್ಸ್ನನ  ಸದಸ್ಯರು ಚುನಾವಣೆಯಿಂದ ಗೆದ್ದವರಲ್ಲ. ಚರ್ಚ್ ಆಫ್ ಇಂಗ್ಲೆಂಡ್ ನ ಬಿಷಪ್ ಗಳು ಮತ್ತು ತಲಾಂತರ  ಅಥವಾ ಅನುವಂಶಿಕ   (hereditary) ಹಕ್ಕಿನವರು. ಮಿಕ್ಕವರು ಪ್ರಧಾನ ಮಂತ್ರಿ ಗಳು ನೇಮಿಸದವರು. ಆದರೆ ಕಾಮನ್ಸ್ ನ ಸದಸ್ಯರು ಚುನಾವಣೆ ಯಲ್ಲಿ ಗೆದ್ದವರು.

Palace of Westminster

ಬ್ರಿಟನ್ನಿನ ಪಾರ್ಲಿಮೆಂಟಿನ ಸಂಕ್ಷಿಪ್ತ ಇತಿಹಾಸ

ಪಾರ್ಲಿಮೆಂಟ್  ಮೂಲ ೧೦೬೬ ಅಂದರೆ ತಪ್ಪೇನಿಲ್ಲ. ಆ ವರ್ಷದಲ್ಲಿ  ನಾರ್ಮಂಡಿಯ ವಿಲಿಯಮ್ಮ್ಸ್ ಈ ದೇಶದಲ್ಲಿ   ಬ್ಯಾಟಲ್ ಆಫ್ ಹೇಸ್ಟಿಂಗ್ಸ್  ಯುದ್ಧದ ನಂತರ ತನ್ನ ಆಡಳಿತವನ್ನು ಸ್ಥಾಪಿಸಿದ. ಹೊಸ ಕಾನೂನು ಜಾರಿಗೆ ಬರುವ ಮುಂದೆ ತಾನು ನೇಮಿಸಿದ ಸಲಹಾ ಸಮಿತಿ ಜೊತೆ ಚರ್ಚೆ್ ಮಾಡುತಿದ್ದ .  ಆದರೆ  ಸುಮಾರು ೨೦೦ ವರ್ಷಗಳ ಮೇಲೆ ಬಂದ ಕಿಂಗ್ ಜಾನ್ ತನಗೆ ಬೇಕಾದಹಾಗೆ ರಾಜ್ಯಭಾರ ಮಾಡುವ ರೀತಿಯಿಂದ ಅವನ  ಸಲಹಾ ಸಮಿತೆಗೆ  ತೀರಾ ಅಸಮಾಧಾನ ವಾಗಿ  ೧೨೧೫ ರಲ್ಲಿ ಮಾಗ್ನಾ ಕಾರ್ಟ(Magna Carta ) ಅನ್ನುವ ಕಾನೂನು ಜಾರಿಗೆ ತಂದರು. ಇದರ ಪ್ರಕಾರ ಕಿಂಗ್ ಜಾನ್ ಈ ಸಮಿತಿಗೆ ಒಪ್ಪಿಗೆ

Magna_Carta_(British_Library_Cotton_MS_Augustus_II_106)
ಮ್ಯಾಗ್ನಾ ಕಾರ್ಟಾ (ಬ್ರಿಟಿಶ್ ಲೈಬ್ರರಿಯಲ್ಲಿಯ ಪ್ರತಿ)

ಇಲ್ಲದೆ ಏನೂ ಮಾಡಲು ಅಧಿಕಾರ ಇರಲಿಲ್ಲ. ನೀವು ಈ ಒಪ್ಪಂದ ಪತ್ರವನ್ನು  ಸಾಲಿಸ್ಬರಿ ಮತ್ತು  ಲಿಂಕನ್  ಕ್ಯಥೀಡ್ರಲ್  (Salisbury and Lincoln Cathedral ) ನಲ್ಲಿ   ನೋಡಬಹುದು. ಇನ್ನೆರಡು ಪ್ರತಿಗಳು ಬ್ರಿಟಿಷ್ ಲೈಬ್ರರಿನಲ್ಲಿ  ಇವೆ. ಈ ಒಪ್ಪಂದ ಥೇಮ್ಸ್ ನದಿಯ ದಡಲ್ಲಿರುವ ರನ್ನಿಮೀಡ್ ಅನ್ನುವ ಸ್ಥಳ ದಲ್ಲಿ ನಡೆಯಿತು. (೧೫ ಜೂನ್ ೧೨೧೫)

ಹಿಂದಿನ ಕಾಲದಲ್ಲಿ, ರಾಜರು ಬಹಳ ಬಲಿಶಾಲಿಗಳಾಗಿದ್ದರು. ಅವರು ಹೇಳಿದ್ದೇ ವೇದವಾಕ್ಯ. ಆಗಾಗ್ಗೆ ಇವರು ದೇಶದ ಶ್ರೀಮಂತರು ಮತ್ತು ಪ್ರಭಾವಶಾಲಿ ಜನಗಳನ್ನೂ ಸೇರಿಸಿ ಚರ್ಚೆ ನಡೆಸುತ್ತಿದ್ದರು.  ಮುಖ್ಯವಾಗಿ ರಾಜರಿಗೆ ಇತರೆ ದೇಶದಮೇಲೆ ನಡೆಸುವ ಯುದ್ಧಕ್ಕೆ ಧನಸಹಾಯ ಬೇಕಿತ್ತು ಅಷ್ಟೆ. ಜನಗಳ ಕಲ್ಯಾಣ ಅಥವಾ ಯೋಗಕ್ಷೇಮ ಇವರ ಗಮನಕ್ಕೆ ಬರುತ್ತಿರಲಿಲ್ಲ ಇಂತಹ ಸಭೆಗಳಿಗೆ Parliament ಅಂತ  ನಾಮಕರಣ ಮಾಡಿದರು.

೧೨೬೫ ರಲ್ಲಿ ಸೈಮನ್  ಮಂಟಫರ್ಡ್ ಅನ್ನುವರು ಮೊಟ್ಟ ಮೊದಲನೆಯ ಚುನಾಯಿತ ಸಲಹಾ ಮಂಡಳಿ  Westminster ಪಾರ್ಲಿಮೆಂಟ್ ( ಹೌಸ್ ಆಫ್ ಕಾಮನ್ಸ್ )ಆರಂಭಿಸಿದರು. ೧೫೩೫-೪೨ ರಲ್ಲಿ ವೇಲ್ಸ್ ದೇಶವವನ್ನು ವಶಪಡಿಸಿಕೊಂಡು ಅಲ್ಲಿನ ಸದಸ್ಯರನ್ನು ಇಂಗ್ಲೆಂಡ್  ಪಾರ್ಲಿಮೆಂಟ್ಗೆ ಸೇರಿಸಿದರು

೧೫೪೧ ರಲ್ಲಿ ೮ನೇ ಹೆನ್ರಿ ಐರ್ಲೆಂಡ್ ದೇಶವನ್ನು ತನ್ನ ರಾಜ್ಯವೆಂದು ಘೋಷಿಸಿ ಅದರ ಸದಸ್ಯರನ್ನು ಇಂಗ್ಲೆಂಡ್ ಪಾರ್ಲಿಮೆಂಟ್ ಬರುವುದಕ್ಕೆ ಅಪ್ಪಣೆ ಕೊಟ್ಟ. ಅವನ ಮಗಳು  ಪ್ರಥಮ ಎಲಿಜಬೆತ್ ರಾಣಿ  ತೀರಿಕೊಂಡ ಮೇಲೆ  ೧೬೦೩ನಲ್ಲಿ  ಸ್ಕಾಟ್ಲೆಂಡ್ ನ  ೬ನೆಯ ಜೇಮ್ಸ್, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಎರಡಕ್ಕೂ ರಾಜರಾದರೂ ಈ ದೇಶಗಳ  ಪಾರ್ಲಿಮೆಂಟ್ಗಳು ಒಂದುಗೂಡಲಿಲ್ಲ

೧೬೪೨ರಲ್ಲಿ ನಡೆದ ಆಂತರಿಕ ಯುದ್ಧದ (ಸಿವಿಲ್ ವಾರ್ ) ನಂತರ ಆಲಿವರ್ ಕ್ರಾಮವೆಲ್  ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ದೇಶಗಳನ್ನು ಕೂಡಿಸಿ ಒಂದೇ ಪಾರ್ಲಿಮೆಂಟ್ ಸ್ಥಾಪಿಸಲು ಮಾಡಿದ ಪ್ರಯತ್ನ ಅನೇಕ ಕಾರಣಗಳಿಂದ ಸಾಧ್ಯವಾಗಲಿಲ್ಲ.  ಇವನ ಕಾಲದಲ್ಲಿ  ಪಾರ್ಲಿಮೆಂಟ್ ಮತ್ತು ರಾಜಪ್ರಭುತ್ವ (Monarchy) ಸಹ ರದ್ದಾಯಿತು ಮತ್ತು ದೇಶದ್ರೋಹದ ಅಪರಾದದ ಮೇಲೆ ೧೬೪೯ ಜನವರಿ ೩೦ರಂದು ಮೊದಲನೆಯ ಚಾರ್ಲ್ಸ್ ದೊರೆಯ ಶಿರಚ್ಛೇದ ಆಯಿತು

ಬಹಳ ವರ್ಷ ಹೌಸ್ ಆಫ್ ಲಾರ್ಡ್ಸ್ ನವರು ತುಂಬಾ  ಪ್ರಬಲಶೀಲರಾಗಿದ್ದರು.  ಆದರೆ ೧೯ನೇ ಶತಮಾನದಲ್ಲಿ ಹೊಸ ಶಾಸನಗಳು ಬಂದು ಎಲ್ಲಾ ಕ್ಷೇತ್ರದಿಂದ ಸರಿಯಾದ ಚುನಾವಣೆ ನಡೆಸಿದ ಮೇಲೆ  ಹೌಸ್ ಆಫ್ ಕಾಮನ್ಸ್ ಗೆ  ಬಲ ಬಂತು.

೧೭೦೭ ನಲ್ಲಿ( Act of  Union ) ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ದೇಶಗಳು ಒಂದಾಗಿ  ಪಾರ್ಲಿಮೆಂಟ್  ಆಫ್  ಗ್ರೇಟ್ ಬ್ರಿಟನ್  ಪ್ರಾರಂಭವಾಯಿತು. ೧೯ ನೇ ಶತಮಾನದಲ್ಲಿ ಬಲವಂತದಿಂದ  ಐರ್ಲೆಂಡ್ ಸಹ ಸೇರಿಸಿ  ಪಾರ್ಲಿಮೆಂಟ್ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ಆಯಿತು. ಆದರೆ ಕ್ಯಾಥೋಲಿಕ್ ಪಂಗಡದ ಐರ್ಲೆಂಡ್ ದೇಶದಲ್ಲಿ ಸ್ವಾತಂತ್ರದ ಹೋರಾಟ ಪ್ರಭಲವಾಗಿ ನಡೆದು ೧೯೨೨ರಲ್ಲಿ ಈ ದೇಶ ಎರಡು ಭಾಗವಾಗಿ ಉತ್ತರ ಐರ್ಲೆಂಡ್ ಮಾತ್ರ ಬ್ರಿಟಿಷ್ ಸರ್ಕಾರಕ್ಕೆ ಸೇರಿತು. ೧೯೨೭ ರಲ್ಲಿ  ಪಾರ್ಲಿರ್ಮೆಂಟ್ ಆಫ್  ಗ್ರೇಟ್ ಬ್ರಿಟನ್ ಮತ್ತು ನಾರ್ದನ್ ಐರ್ಲೆಂಡ್ ಆಗಿ ಮುಂದೆ ವರೆಯಿತು.

೧೮೩೪ ರಲ್ಲಿ ಭಾರಿ ಅಗ್ನಿ ಅನಾಹುತವಾಗಿ  ಪಾರ್ಲಿಮೆಂಟಿನ  ಮುಕ್ಕಾಲು ಭಾಗ ನಾಶವಾಯಿತು. ನಂತರ  ಹೊಸ ಕಟ್ಟಡದ  ಕೆಲಸ ಶುರುಮಾಡಿ ಸುಮಾರು ಹತ್ತು ವರ್ಷಗಳ ಮೇಲೆ ಸಂಪೂರ್ಣ ಮಾಡಿದರು. ಆದರೆ ಎರಡನೇ ಮಹಾಯುದ್ಧದಲ್ಲಿ ಬಾಂಬ್ ದಾಳಿಯಿಂದ ಹಾನಿಯಾದ ಈ ಕಟ್ಟಡದ ಕೆಲವು ಭಾಗಗಳನ್ನು  ಪುನಃ ನಿರ್ಮಾಣ ಮಾಡಬೇಕಾಯಿತು.

೧೯೧೮ ನಲ್ಲಿ ೩೦ ವರ್ಷದ ಮೇಲಿನ ಮಹಿಳೆಯರಿಗೆ ಮಾತ್ರ ಮತದಾನದ ಹಕ್ಕು ಬಂತು. ಪಾರ್ಲಿಮೆಂಟಿನ  ಮೊಟ್ಟ ಮೊದಲನೆಯ ಮಹಿಳಾ ಸದೆಸ್ಯೆ ಐರ್ಲೆಂಡ್ ಇಂದ  ಆಯ್ಕೆಯಾದರೂ ಈಕೆ ಕ್ಯಾಥೋಲಿಕ್ ಮತ್ತು  ಶಿನ್ಫೇನ್ ಪಕ್ಷದವಳಾಗಿದ್ದರಿಂದ ಪಾರ್ಲಿಮೆಂಟ್ ನಲ್ಲಿ ಕೂರಲಿಲ್ಲ. ಇವತ್ತಿಗೂ ಉತ್ತರ ಐರ್ಲೆಂಡ್ ನಿಂದ ಚುನಾವಣಾ ಯಲ್ಲಿ ಗೆದ್ದ  ಶಿನ್ಫೇನ್ ಪಕ್ಷದ  ಸದಸ್ಯರು ಪಾರ್ಲಿಮೆಂಟಿಗೆ

ಬರುವುದಿಲ್ಲ.  ಕಾರಣ ಅವರು ಬ್ರಿಟಿಷ್ ರಾಣಿಯ ಹೆಸರಿನಲ್ಲಿ  ಪ್ರಮಾಣವಚನ ಸ್ವೀಕರಿಸುವುದಿಲ್ಲ.  ೧೯೧೯ ರಲ್ಲಿ ಲೇಡಿ ಆಸ್ಟರ್ ಅನ್ನುವರು ಪ್ಲಿಮತ್ ಕ್ಷೇತ್ರದಿಂದ ಆಯ್ಕೆ ಆಗಿ  ಪಾರ್ಲಿಮೆಂಟ್ ಪ್ರವೇಶಿಸಿದ ಮೊದಲೆಯ ಮಹಿಳಾ ಸದಸ್ಯೆ ಆದರುRead More »