ಚಿತ್ರ – ಬರಹ: ಒಸಗೆ

ಲಾಕಾರರಿಗೆ ಸ್ಫೂರ್ತಿ ಬೇಕೆ? ಚಿತ್ರಗಳು ಪಾಶ್ಚಿಮಾತ್ಯ ಸಂಗೀತಗಾರರಿಗೆ ಪ್ರೇರಣೆ ಕೊಟ್ಟ ಉದಾಹರಣೆಗಳೆಷ್ಟೋ. ಮಸ್ಗೋರ್ಸ್ಕಿ, ರಾಕ್ಮಾನಿಕೋವ್, ಬೇಥೋವನ್ ಇವರ ಇಂಥ ಕೃತಿಗಳು ಪ್ರಸಿದ್ಧವಾಗಿವೆ. ಇದೊಂದು ಪ್ರೇಮಲತಾ. ಬಿ ಅವರ ಹೊಸ ಪ್ರಯೋಗ. ನಮ್ಮ ವೇದಿಕೆಯ ಸದಸ್ಯರಿಗೆ  ಒಂದು ಚಿತ್ರವನ್ನು ಕೋಟ್ಟು ಅವರ ಮನದಲ್ಲೆಬ್ಬಿಸಿದ ಭಾವನೆಗಳನ್ನು ಬರಹದಲ್ಲಿ ಮೂಡಿಸಲು ಹೇಳಿದರು. ಪದ್ಯ-ಗದ್ಯ ಯಾವುದೂ ಸರಿ ಎಂದರು. ಅವೆರಡರಲ್ಲಿ ಎರಡನ್ನು ಇಲ್ಲಿಗೆ ಕೊಟ್ಟಿದೆ. ಮುಂದಿನ ‘ತರಂಗ’ದಲ್ಲಿ ಇನ್ನೆರಡು.           Photo: Shrivatsa Desai                                                                         

                ೧)   ಒಸಗೆBoat on the lake

ನೀಲಿ ಆಗಸ, ನೀಲಿ ನೀರು

ಕೈಯಲಿ ಪದ್ಯ, ಪಾನ; ಜೊತೆಗೆ

ಒಲಿದ-ಬೆಸೆದ ಜೀವಗಳು

ತೇಲಿದೆ ಉಮರನ ಸ್ವರ್ಗವೇ ಇಲ್ಲಿ!

 

ವಿಹಾರವೋ ಪಯಣವೋ, ಇದು ಚಂದವೇ ಇಂದು

ವಿಚಾರಾರ್ಹ ಇದೆಲ್ಲ ಶಾಶ್ವತವೇ ಎಂದು

ಅಲ್ಲಿ ಕಾದಿದೆ ನಿಮ್ಮ ಸ್ಥಾನ, ಮೇಲೆ

ಸಲ್ಲಬೇಕು; ಏರಬೇಕು, ಅದೇ ಮುಕ್ತಿ!

ಶ್ರೀವತ್ಸ ದೇಸಾಯಿ

Read More »

ಮನೆಯ ಉಪ್ಪಿನಕಾಯಿ – ರಾಜಾರಾಮ ಕಾವಳೆಯವರ ಅನುಭವಗಳು

[ಉಪ್ಪಿನಕಾಯಿಯ ನೆಪದಲ್ಲಿ ರಾಜಾರಾಮ ಕಾವಳೆಯವರು ಅನಿವಾಸಿ ಕನ್ನಡಿಗರನ್ನು ಸದಾ ಸತಾಯಿಸುವ ಪ್ರಶ್ನೆಗಳಾದ ’’ನಮ್ಮ ಮನೆ ಯಾವುದು?ನಮ್ಮ ಊರು ಎಲ್ಲಿದೆ?” ಇದರ ಬಗ್ಗೆ ಸೀರಿಯಸ್ಸಾಗಿ ವಿಚಾರ ಲಹರಿ ಹರಿಸಿದ್ದಾರೆ.-ಸಂ]

ಲವು ವರ್ಷಗಳ ಹಿಂದೆ ನಾವು ಈಗಿರುವ ಮನೆಗೆ ಹಲವು ಸ್ನೇಹಿತರು ಬಂದಿದ್ದರು. ಮಾತುಕತೆ ಉಪಚಾರಗಳ ನಂತರ ನಾವೆಲ್ಲರೂ ಊಟಕ್ಕೆ ಕುಳಿತಿದ್ದೆವು. ನನ್ನಪತ್ನಿ ತಯಾರಿಸಿದ್ದ ರುಚಿಕರವಾದ ಊಟವನ್ನು ಸ್ವಾರಸ್ಯವಾಗಿ ಎಲ್ಲರೂ ಸವಿಯುತ್ತಿದ್ದಾಗ, ಉಪ್ಪಿನಕಾಯಿಯನ್ನು ಇಡುವುದನ್ನು ಮರೆತಿದ್ದನ್ನು ಕಂಡು ಪದ್ಮಳು ನನಗೆ ಹೇಳಿದಳು- ‘ರೀ, ಉಪ್ಪಿನಕಾಯಿಯನ್ನು ತಂದಿಡ್ರೀ’.

ಅದಕ್ಕೆ ಕಬ್ಬೋರ್ಡಿನಲ್ಲಿದ್ದ ಅನೇಕ ಉಪ್ಪಿನಕಾಯಿಗಳನ್ನು ನೋಡಿ ನಾನು ಅವಳನ್ನು ಕೇಳಿದೆ- ‘ಯಾವ ಉಪ್ಪಿನಕಾಯಿ ತರಲಿ?’ ಅದಕ್ಕೆ ಅವಳು, ‘ಅದೇ ಮನೇ ಉಪ್ಪಿನಕಾಯಿ ತನ್ನಿ’ ಎಂದಳು. ಅಲ್ಲಿದ್ದ ಅನೇಕ ಅಂಗಡಿಯಿಂದ ಕೊಂಡ ಉಪ್ಪಿನಕಾಯಿಗಳ ಜತೆಗಿದ್ದ, ನಮ್ಮ ಮನೆಯಲ್ಲೇ ಬೆಳೆದ ಸೇಬಿನಿಂದ, ನಾನೇ Picklesತಯಾರಿಸಿದ ಆ ಉಪ್ಪಿನಕಾಯಿಯ ಬಾಟಲನ್ನು ತಂದು ನಮ್ಮ ಅತಿಥಿಗಳ ಮುಂದಿಟ್ಟೆನು. ಅದಕ್ಕೆ ನನ್ನ ಸತಿ ‘ಏನ್ರಿ, ಎಲ್ಲಾಬಿಟ್ಟು ನೀವು ಮಾಡಿದ ಆ ಹಾಳು ಹುಳುಕಟ್ಟೆಯ ಕೊಳೆತ ಉಪ್ಪಿನ ಕಾಯಿ ತಂದ್ರಲ್ಲ್ರೀ’ ಎಂದಳು. ಎಲ್ಲಾ ಉಪ್ಪಿನಕಾಯಿಗಳು ಅಂಗಡಿಯಿಂದ ತಂದದ್ದಾದರಿಂದ, ಅವಳಿಗೆ ಇನ್ನಾವುದೂ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಇಲ್ಲವೆಂದು ಹೇಳಿದಾಗ ಆಕೆ- ‘ಅದೇರೀ ಬೆಂಗಳೂರಿನಿಂದ ನಮ್ಮಮ್ಮನ ಮನೆಯಿಂದ ತಂದ ಆ ದೊಡ್ಡ ಬಾಟಲು, ಪ್ಲಾಸ್ಟಿಕ್ಕವರಿನಿಂದ ಮುಚ್ಚಿರುವ ಬಾಟಲು ಫ್ರಿಜ್ಜಿನಲ್ಲಿ ಇದೆಯಲ್ಲಾ ಅದೇ ಮನೇ ಉಪ್ಪಿನ ಕಾಯಿ’ ಎಂದಳು.Read More »