ದಂಪತಿಗಳ ಸರಸ ಸಲ್ಲಾಪ

ಅನಿವಾಸಿ ಗುಂಪಿನಲ್ಲಿ ಕಥೆಗಾರರು, ಕವಿಗಳು, ಹರಟೆಮಲ್ಲರು, ಇತಿಹಾಸ ಪ್ರಿಯರು ಪ್ರಬಂಧಕಾರರು ಹೀಗೆ ಹಲವು ಬಗೆಯ ವಿಶೇಷತೆಯ ಸದಸ್ಯರಿದ್ದಾರೆ. ಅವರೆಲ್ಲರ ನಡುವೆ, ಲಘು ಹಾಸ್ಯ ಭರಿತ ಲೇಖನ, ಕವನಗಳನ್ನು ಬರೆದು, ಎಲೆಯ ಮರೆಯ ಕಾಯಿಯಂತಿರುವವರು ವತ್ಸಲಾ. ಕಣ್ಣಲ್ಲೇ ನಸುನಗುವನ್ನು ಸೂಸುವ ಶೈಲಿ ಅವರದ್ದು. ಘನ ವಿಷಯವನ್ನು ಲಘುವಾಗಿ ಮನಮುಟ್ಟುವಂತೆ ಬರೆಯಬಲ್ಲರು ವತ್ಸಲಾ. ಈ ವಾರದ ಸಂಚಿಕೆಯಲ್ಲಿ ಅವರು ಬರಹವನ್ನು ನೀವು ಓದಿ, ಮುಗುಳ್ನಗುವಿರೆಂಬ ಭರವಸೆ ನನಗಿದೆ. ಇದು ಮುದ್ದಣ-ಮನೋರಮೆಯ ಸರಸ ಸಲ್ಲಾಪವೇ? ಅವರು ಕೇಳುವ ಪ್ರಶ್ನೆಗೆ ನಿಮ್ಮಲ್ಲಿ ಉತ್ತರವಿದೆಯೇ?


ಏನುಂದ್ರೆ ನಾನು ಹೇಳಿದ್ದು ಕೇಳಿಸಿತೆ ?
ಹೂಂ ಕಣೆ ಕೇಳಿಸಿತು.
ನಾನು ಹೇಳಿದ್ದು ಏನುೊಂತ ಗೊತ್ತಾಯಿತೆ?
ನೀನು ಹೇಳಿದರೆ ತಾನೆ ಗೊತ್ತಾಗುವುದು.
ಏನುಂದ್ರೆ ನಾನು ಹೇಳೋದೇನಂದರೆ,
ಅಯ್ಯೋ! ರಾಮ! ಹೇಳೆ ಏನುಂತ ಮಹಾತಾಯಿ!
ಅದೇ ಕಣ್ರಿ ಗೊತ್ತಾಯಿತಾ?
ಗಂಡನಿಗೆ ತಲೆ ಬಿಸಿಯಾಗಿ ತಣ್ಣಗೆ ನೀರು ಕುಡಿದ.
ಅಲ್ಲಾಂದ್ರೆ ನಾನು ನೆನಪಿಸುತ್ತಿರುವುದು “ಏನೂಂದ್ರೆ ಹೇಳಿ ನೋಡೋಣ”
ಅಮ್ಮ ಮಹಾಕಾಳಿ, ನಿನ್ನ ಮನಸ್ಸಿನಲ್ಲಿ ಏನಿದೆಯೆಂದು ಒದರುವಂತವಳಾಗು!
ಅದೇರಿ ಅವತ್ತು ಸಾಯಂಕಾಲ ಬೆಂಗಳೂರಿನ ಕೆಟ್ಟಗಾಳಿ ಕುಡಿಯಲು ಹೋಗಿದ್ದೆವೆಲ್ಲಾ ನೆನೆಪಿದೆಯೇನ್ರಿ?
ಇಲ್ಲ ಕಣೆ, ಏನುಂತ ನೀನೇ ಹೇಳಬಾರದೆ
ಅದೇ ಕಣ್ರಿ ಅಲಸೂರು ಕೆರೆ ಹತ್ತಿರ ಹೇಳಿದೆನಲ್ಲಾ ನೆನಪು ಬಂತೇನ್ರಿ?
ಅದೇರಿ, ನಾವಿಬ್ಬರು ಬೆಂಚಿನ ಮೇಲೆ ಕುಳಿತು ಹುರಿದ ಕಡಲೆಬೀಜ ತಿಂತಾಯಿರಲ್ಲಿಲ್ಲವೇ?
ಏನುಂದ್ರೇ ತುಕಡ್ಸಿತ್ತಿದ್ದೀರಾ? ನಾನು ಹೇಳಿದ್ದು ಗೊತ್ತಾಯಿತಾ?
ಹೂಂ ಕಣೆ  ಸುತ್ತಿ ಬಳಸಿ ಮಾತನಾಡಬೇಡ , ಏನು ಹೇಳು: ಗಂಡ ಗದರಿದ.
ಏನುಂದ್ರೇ !
ಏನೂಯಿಲ್ಲ ಬೆಲ್ಲ ಇಲ್ಲ. ಅದೇನು ಹೇಳೇ ಬೇಗ: ಗಂಡ ಗುಡುಗಿದ.
ಅದೇರಿ ಕಳ್ಳೆಕಾಯಿ ತಿನ್ನುತ್ತಾ ಇರಬೇಕಾದರೆ ಒಂದು ಹೊಸ ದಂಪತಿಗಳು ಬಂದ್ರಲ್ಲಾ?
ಗಂಡ ಚುರುಕಾದ. ಹೌದು ಕಣೆ, ಆ ಹುಡುಗಿ ಎಷ್ಟು ಸುಂದರವಾಗಿದ್ದಳು ಅಲ್ಲವೇನೆ?
ಬೆಳ್ಳಗೆ, ತೆಳ್ಳಗೆ, ಹಸಿರು ಸೀರೆ ಉಟ್ಟು ಗಲಗಲಾಂತ ನಗುತ್ತಾ ಗಂಡನ ಕೈ ಹಿಡಿದುಕೋಂಡು ಹೋಗುತ್ತಿದ್ದಳು
ಅವಳ ಜಡೆ ನಾಗರ ಹಾವಿನಂತೆ ಉದ್ದಕ್ಕಿತ್ತು ಅಲ್ಲೇನೆ? ಅವಳು ಬಳಕುತ್ತಾ ನಡೀತಾ ಇದ್ರೆ!
ಹೆಂಡತಿ ಕೆಂಡಕಾರಲು ಸಿದ್ದವಾಗಿದ್ದಳು.
ಆದರೆ ಹಾಗೆ ಮಾಡಲಿಲ್ಲ, ಯಾಕೆ ಗೊತ್ತಾ?
ಮುಂದಿನ ಮಾತು ಕೇಳಿ.
ಅರೇ! ನಿಮಗೆ ಬೇಕು ಅಂದ್ರೆ ನೆನಪು ಎಷ್ಟು ಚೆನ್ನಾಗಿ  ಎಳೆ ಎಳೆಯಾಗಿ ಬರುತ್ತೆ ಅಲ್ಲೇನ್ರಿ?
ಹೂಂ ಕಣೆ ಹುಡುಗಿ ತುಂಬಾ ಚೆನ್ನಾಗಿ ಕಳಕಳಂತ ಇದ್ದಳು ಅಲ್ಲೇನೆ?
ಹೂಂರೀ ! ಅವಳ ಕತ್ತಿನಲ್ಲಿ ಯಾವ ನೆಕ್ಲೇಸ್‌ ಇತ್ತು ಗೊತ್ತಾ?
ಅದೇ ಕಣೆ! ಹಂಸದಂತ ಕತ್ತಿನಲ್ಲಿ ಕೆಂಪು ಮುತ್ತಿನ ನೆಕ್ಲೇಸ್, ವಜ್ರದ ಓಲೆ, ಬಳೆ ಏಲ್ಲಾ ಹಾಕಿಕೊಂಡು
ಮಂಗಳ ಗೌರಿಯಂತೆ ಇದ್ದಳು ಅಲ್ಲೇನೇ?
ಹೆಂಡತಿಗೆ ಕೋಪ ನೆತ್ತಿಗೇರಿತು. ಆದರೂ,
ಹೌದೂರೀ ಆವಾಗ ನಾನು ಏನು ಕೇಳಿದೆ ಹೇಳಿ?
ಅಯ್ಯೊ! ಬಿಡೆ ನೀನು ಏನೇನೋ ಕೇಳ್ತಾ ಇರುತ್ತಿ ನಂಗೆ ನೆನಪು ಇಲ್ಲ ಹೋಗೆ
ಸರಿ ಬಿಡಿ , ನಾನೇಕೆ ನೆನಪಿಸ ಬೇಕು?
ಇಲ್ಲ ಕಣೆ ಹೇಳೆ ರಾಣಿ!
ಹೆಂಡತಿ ವೈಯ್ಯಾರದಿಂದ “ಆ ಹುಡುಗಿ ಹಾಕಿಕೊಂಡಂತ ನೆಕ್ಲೇಸ್ ಇಲ್ಲೇ ಪಕ್ಕದ ಅಂಗಡಿಯಲ್ಲಿದೆಯಂತೆ,
ಆ ಹುಡುಗಿ ಹೇಳಿದಳು. ಸುಮ್ಮನೆ ನೋಡಿಕೊಂಡು ಬರೋಣ ಅಂತ ಹೋಗಿ ನೋಡಲ್ಲಿಲ್ಲವೇ?,
ಬೆಪ್ಪ ಗಂಡ, ಹೌದು ಹೋಗಿ ನೋಡಿದೆವು. ನಂತರ ಮನೆಗೆ ಬಂದು ಊಟಮಾಡಿ ಮಲಗಿಕೊಂಡೆವು ಅಷ್ಟೇ.
ಹೂಂ ಕಣ್ರಿ ! ನಾನು ನೆನ್ನೆ ಆ ಅಂಗಡಿಗೆ ಹೋಗಿ Necklace order ಮಾಡಿದೆ. ನಿಮಗೂ ತುಂಬಾ ಇಷ್ಟ ಆಯ್ತು ಅಲ್ಲವೇನ್ರಿ?
ಏನೊಂದ್ರೆ ನಾನು ಹೇಳಿದ್ದು ಕೇಳಿಸಿಕೊಂಡ್ರ?
ಆಫೀಸಿನಿಂದ ಬರಬೇಕಾದರೆ ದುಡ್ಡು ಮರೀಬೇಡಿ ಗೊತ್ತಾಯಿತಾ?
ಗಂಡ ಪಾಪ! ಬಡ ಕಾರಕೂನ. ಬೆಪ್ಪನಾದ!
ಹೆಂಡತಿ “ಏನುಂದ್ರೆ ಹೇಳಿದ್ದು ಕೇಳಿಸಿತಾ”
ಗಂಡ ಏನು ಹೇಳಿದ ನಂಗೆ ಗೊತ್ತಿಲ್ಲ.
ನಿಮಗೆ ಗೊತ್ತಿದ್ದರೆ ಹೇಳಿ.

ವತ್ಸಲಾ ರಾಮಮೂರ್ತಿ

ಊರ ಮಳೆ,ಮತ್ತದರ ಸುತ್ತ – ಅಮಿತ ರವಿಕಿರಣ್

 ಹೊಸ ಪರಿಚಯಅಮಿತ ರವಿಕಿರಣ್

ಅಮಿತ  ಮತ್ತು ಕುಟುಂಬ

ಉತ್ತರ  ಐರ್ಲ್ಯಾಂಡಿನ  ಬೆಲ್ ಫಾಸ್ಟ್ ನಲ್ಲಿ ನೆಲೆಸಿರುವ  ಶ್ರೀಮತಿ ಅಮಿತ ರವಿಕಿರಣ್ ಹುಟ್ಟಿ ಬೆಳದಿದ್ದು ಉತ್ತರ ಕನ್ನಡದ ಮುಂಡಗೋಡದಲ್ಲಿ. ಬೆಳೆದಿದ್ದು ಉಡುಪಿಯ ಸಾಲಿಗ್ರಾಮದಲ್ಲಿ. ಹಿಂದುಸ್ತಾನಿ ಸಂಗೀತದಲ್ಲಿ ಪದವಿ ಮತ್ತು ಜಾನಪದ ಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು ಅವರ ಮತ್ತೊಂದು ತವರಾದ ಧಾರವಾಡದಲ್ಲಿ! ಹಾಡುವುದು ರಂಗೋಲಿ,ಮೆಹೆಂದಿ ವರ್ಲಿ,ಹಸೆ ಯಂಥ ಜನಪದ ಕಲೆಗಳು  ಇವರ ಆತ್ಮೀಯ ಸ್ನೇಹಿತರು.ಇವೆಲ್ಲ ಭಾರವಲ್ಲದ ಆದರೆ ಅವರು ಹೋದಲ್ಲೆಲ್ಲ ಜೊತೆಯಾಗುವ ಲಗ್ಗೇಜುಗಳು ಎನ್ನುತ್ತಾರೆ ಅಮಿತಾ! ಅಪ್ರತಿಮ ಹಾಡುಗಾರ್ತಿಯಾದ ಅಮಿತ ಹಲವು ಗಝಲ್ , ಹಿಂದೂಸ್ತಾನ ಸಂಗೀತ ಮತ್ತು ಭಾವಗೀತೆಗಳ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಕರ್ನಾಟಕದ ಜನಪ್ರಿಯ ಸಂಗೀತ ಕಾರ್ಯಕ್ರಮವಾದ ‘ಸರಿಗಮಪ’ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಇವರ ಪ್ರತಿಭೆಯನ್ನು ನೋಡಿದ ಪ್ರಸಿದ್ದ  ಹಿರಿಯ ಕಲಾವಿದೆ ಬಿ. ಜಯಶ್ರೀ ಯವರು ಅಮಿತಾರಿಗೆ ಇಪ್ಪತ್ತು ಸಾವಿರ ರೂಪಾಯಿಗೂ ಹೆಚ್ಚಿನ ನಗದು ಬಹುಮಾನ ಕಳಿಸಿ ಮೆಚ್ಚಿಗೆ ,ಅಭಿಮಾನ ವ್ಯಕ್ತಪಡಿಸಿದ್ದು ಅವರ ಹಾಡುಗಾರಿಕೆಗೆ ಸಾಕ್ಷಿ!

ಬರವಣಿಗೆ ನನಗೆ ಇಷ್ಟ ಯಾಕಂದ್ರೆ, ಬರೆದಷ್ಟು ನಾ ಹಗುರ ವಾಗುತ್ತೇನೆ, ಓದುದಿದಷ್ಟು ಉಲ್ಲಸಿತಳಗುತ್ತೇನೆ ಎನ್ನುವ ಇವರು ತಮ್ಮ ಬರವಣಿಗೆಗಳನ್ನೆಲ್ಲ ಸೇರಿಸಿ  http://bhavanaloka.blogspot.co.uk   ಎನ್ನುವ ಬ್ಲಾಗ್ ನ್ನು ಹೊಂದಿದ್ದಾರೆ. ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ .ಅಡುಗೆಯ ಕಲೆಯಲ್ಲಿ ಆಸಕ್ತಿ ಇರುವ ಇವರದ್ದೊಂದು ಫುಡ್ ಬ್ಲಾಗ್  ಕೂಡ ಇದೆ –http:// tastytwist4all.blogspot.com ತಮ್ಮ ಕಲೆಗಳಿಂದಾಗಿ  ಉತ್ತರ  ಐರ್ಲ್ಯಾಂಡಿನ ಫೆಲ್ಲೋಶಿಪ್ ಗಳಿಸಿದ್ದಾರೆ. ಭಾರತೀಯ ಕಲೆಗಳನ್ನು  ಉತ್ತರ  ಐರ್ಲ್ಯಾಂಡಿ ಹರಡುತ್ತಿರುವ ಇವರದು ಹುಮ್ಮಸ್ಸಿನ ಬದುಕು!!-ಸಂ

Read More »