ವನ್ಯ ಜೀವಿಗಳ ಜಾಡುಹಿಡಿದು- ಕರ್ನಾಟಕದ ವನಜೀವ ಜಾಲದ ತೌಲನಿಕ ಅವಲೋಕನ – ಸುದರ್ಶನ ಗುರುರಾಜರಾವ್ ಬರೆಯುತ್ತಾರೆ

ವನ್ಯ ಜೀವಿಗಳ ಜಾಡುಹಿಡಿದು- ಕರ್ನಾಟಕದ ವನಜೀವ ಜಾಲದ ತೌಲನಿಕ ಅವಲೋಕನ.
ಲೇಖಕರು: ಶ್ರೀಯುತ ಸಂಜಯ್ ಗುಬ್ಬಿ

vanyajeevi

vanyajeevi2

“ಜಯ ಸುಂದರ ನದಿವನಗಳ ನಾಡೆ” – ಕುವೆಂಪು
”ಬೆಳುವಲ ಮಲೆ-ಕರೆ ಸುಂದರ ಸೃಷ್ಟಿ”- ಚನ್ನವೀರ ಕಣವಿ
”ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ”- ನಿಸಾರ್ ಅಹ್ಮದ್
”ಚಿಮ್ಮುತ ಓಡಿವೆ ಜಿಂಕೆಗಳು-ಕುಣಿದಾಡುತ ನಲಿದಿವೆ ನವಿಲುಗಳು” ಗಂಧದ ಗುಡಿ
“ಹಸಿರೊಡೆದು ಉಸಿರಾಡಿ ನಗುತಿರುವ ನೆಲದಲ್ಲಿ ಕಾವೇರಿ ಮೈದೋರಿ ನಲಿದಿರುವಳು”- ಮಾಗಿಯ ಕನಸು
“ಮುಗಿಲೇರಿ ಮುತ್ತಿಡುವ ಆಗಸದ ಆಚೆಗೆ ಗಿರಿ ಸಾಲು ತಾನಾಗಿ ಮೆರೆದಾಡಿದೆ
ಚೆಲುವಿನ ರಾಶಿಯ ಗೆಲುವನೂ ಕಾಣಲು ಮಲೆನಾಡ ಮೈಸಿರಿಯು ನೆಲೆ ನಿಂತಿದೆ ..ಎಲ್ಲೆಲ್ಲೂ ನೀನೆ”- ಮಾಗಿಯ ಕನಸು

ಈ ಹಾಡುಗಳನ್ನು, ಕವಿತೆಯ ಸಾಲುಗಳನ್ನು ನಾವು ಓದಿ ಕೇಳಿ, ಸ್ವಲ್ಪ ಮಟ್ಟಿಗೆ ನೋಡಿ ಬಲ್ಲೆವು. ಈ ಸೌಂದರ್ಯದ ಒಳಗಿನ ನಿಜ ಆಳ ಅಗಲಗಳನ್ನು, ಅದರ ಸಂರಕ್ಷಣೆಗೆ ಇರುವ ಸವಾಲುಗಳನ್ನು, ತನು ಮನಗಳನ್ನು ಧಾರೆಯೆರೆದು ಇವುಗಳನ್ನು ಕಾಯಲು ನಡೆಯುತ್ತಿರುವ ತೆರೆಮರೆಯ ಪ್ರಯತ್ನಗಳನ್ನೂ ಸ್ವಂತ ಅನುಭವಗಳ ಮೂಲಕ, ದೃಷ್ಟಾಂತಗಳ ಮೂಲಕ ಉತ್ತಮ ಛಾಯಾಚಿತ್ರಗಳ ಮೂಲಕ ನಮ್ಮ ಮುಂದೆ ಅನಾವರಣಗೊಳಿಸುತ್ತಾ ಸ್ವಾರಸ್ಯಕರ ಭಾಷೆಯ ಲಹರಿಯಲ್ಲಿ ಓದಿಸಿಕೊಂಡು ಹೋಗುವ ಈ ಪುಸ್ತಕ ಅಕಸ್ಮಾತಾಗಿ ನನಗೆ ಸಿಕ್ಕಿದ್ದು ನಿಮಗೆ ಅದರ ಪರಿಚಯ ಮಾಡಿಸಲು ಈ ಲೇಖನ.

Read More »

ಹರಪ್ಪ ಪುಸ್ತಕ ಸರಣಿಯ ಹಿನ್ನೆಲೆ – ಡಾ ಶಂಕರ್ ಕಾಶ್ಯಪ್ ಅವರು ಬರೆದ ಲೇಖನ

ನಾನು ಇತ್ತೀಚೆಗೆ ಹರಪ್ಪ ನಾಗರೀಕತೆಯ ಪುಸ್ತಕಗಳ ಸರಣಿಯನ್ನು ಬರೆಯಲು ಪ್ರಾರಂಭ ಮಾಡಿದ್ದೇನೆ. ಈ ಸರಣಿಯ ಮೊದಲ ಪುಸ್ತಕ ”ಹರಪ್ಪ; ಸೋಮನ ಆಕರ್ಷಣೆ”  (The Lure of Soma)  ಕಳೆದ ವರ್ಷ (2013) ಪ್ರಕಟವಾಗಿದೆ

.Final Cover oct 3CiviltàValleIndoMappa

Map: CC Wiki

ನಾನೇಕೆ ಬರೆದೆ?

ಶಾಲೆಯಲ್ಲಿ ಹರಪ್ಪ ಮತ್ತು ಮೊಹೆಂಜೋದಾರೋ ಅವಶೇಷಗಳ ಬಗ್ಗೆ ಕಲಿತ ನಂತರದ ದಿನಗಳಿಂದಲೂ, ನಾನು ಭಾರತದ ಪ್ರಾಚೀನ ಇತಿಹಾಸದಿಂದ ಬಹಳಷ್ಟು  ‌ಆಕರ್ಷಿಸಲ್ಪಟ್ಟಿದ್ದೇನೆ.  ಆ ಸಮಯದಲ್ಲಿ, ಈ ವಿಷಯದ ಬಗ್ಗೆ ಲಭ್ಯವಿದ್ದ ಸಾಹಿತ್ಯ ಬಹಳ ವಿರಳವಾಗಿದ್ದು, ಅದನ್ನು ದೊರಕಿಸಿಕೊಳ್ಳುವುದು ಒಬ್ಬ ಶಾಲಾ ವಿದ್ಯಾರ್ಥಿಯ ಪಾಲಿಗಂತೂ ಅತ್ಯಂತ ಕಷ್ಟಕರವಾದ ಕಾರ್ಯವೆನಿಸಿತ್ತು.  ಅಲ್ಲಿಂದೀಚೆಗೆ, ಸಿಂಧೂ ಕಣಿವೆ ನಾಗರೀಕತೆಯ ಉತ್ಖನನದ ಕೆಲಸದ ಗತಿ ಚುರುಕಾಗಿ ನಡೆದಿದೆ, ಹಾಗೂ ಇದರಿಂದ, ಭಾರತೀಯ  ಪೂರ್ವ ಇತಿಹಾಸದ ಬಗ್ಗೆ ನಮಗಿರುವ ಗ್ರಹಿಕೆ ಅಗಾಧವಾಗಿ ಬದಲಾಯಿಸಿದೆ. ಶಾಲೆಯಲ್ಲಿ ನಮ್ಮ ಶಿಕ್ಷಕರು, ಈ ಮಹಾನ್ ಸಿಂಧೂ ಕಣಿವೆಯ ನಾಗರೀಕತೆಯ ಬಗ್ಗೆ ನಮಗೆ ಪಾಠ ಮಾಡಿದ್ದು ಈಗಲೂ ನೆನಪಿದೆ. ಅದೇನೆಂದರೆ, ಕ್ರಿ.ಪೂ 1500 ರಲ್ಲಿ,  ರಶಿಯಾದ ಸ್ಟೆಪ್ಪೀಸ್ ಹುಲ್ಲುಗಾಡು ಪ್ರದೇಶದಿಂದ ಬಂದ ಲೂಟಿಕೋರರಾದ ಆರ್ಯರು, ಈ ನಾಗರೀಕತೆಯನ್ನು ನಾಶ ಮಾಡಿದರು ಎಂದು.  ದುರದೃಷ್ಟವಶಾತ್, ಅನೇಕ ವಿದ್ವಾಂಸರು ಈಗಲೂ ವಿಶ್ವದಾದ್ಯಂತ ಇದೇ ಕಥೆಯನ್ನು ಪ್ರಚಾರ ಮಾಡುತ್ತಿದ್ದಾರೆ.ಆದರೂ ಸಹಾ, ಅವರಿಗೆ ಅಗಾಧವಾದ ವೇದ ಸಂಗ್ರಹಗಳ ಸೃಷ್ಟಿಯ ಕರ್ತೃತ್ವವನ್ನು ನೀಡಲಾಗಿದೆ.  ವೇದಗಳನ್ನು,  ಪ್ರಾಚೀನ ಜಗತ್ತಿನ ಅತ್ಯಂತ ಬೃಹತ್ ಮತ್ತು ಗಹನವಾದ ಜ್ಞಾನವುಳ್ಳ  ಗ್ರಂಥಗಳೆಂದು ಒಪ್ಪಿಕೊಂಡಿದ್ದಾರೆ.  ಗ್ರಂಥಗಳಲ್ಲಿ ಅಡಕವಾಗಿರುವ ಜ್ಞಾನ, ಎಷ್ಟೊಂದು ಪ್ರಗತಿಪರವಾಗಿದೆ ಎಂದರೆ, ಇವು, ಇಂತಹ ಪ್ರಾಚೀನ ಕಾಲದಲ್ಲಿ, ಉತ್ಪತ್ತಿಯಾಯಿತೆಂಬುದನ್ನು, ಗ್ರಹಿಸುವುದು ಕಠಿಣವಾಗಿದೆ.Read More »