ಜಿಎಸ್ಸೆಸ್ ನೆನಪು — ಅವರ ಒಂದು ‘ಸ್ಪೆಷೆಲ್‘ ಕವನ ಮತ್ತು ಡಾ. ಜಿ. ಎಸ್. ಶಿವಪ್ರಸಾದ್ ಅವರ ’ಶ್ರದ್ಧಾಂಜಲಿ’

ರಾಷ್ಟಕವಿ ಜಿ ಎಸ್ ಶಿವರುದ್ರಪ್ಪನವರು ಕಣ್ಮರೆಯಾಗಿ ಇಂದಿಗೆ ಸರಿಯಾಗಿ ಎರಡು ವರ್ಷಗಳಾದವು. ಈ ಸಂದರ್ಭದಲ್ಲಿ ಅವರ ಒಂದು ವಿಶಿಷ್ಟ ಕವನವನ್ನು ‘ಅನಿವಾಸಿ‘  ಪ್ರಕಟಿಸುತ್ತಿದೆ. ಎಷ್ಟೋ ತಂದೆಯರು ಮಕ್ಕಳಿಗೆ ಬಟ್ಟೆ ಹಣ ಇತ್ಯಾದಿ ಉಡುಗೊರೆ ಕೊಡುವದು ಸಾಮಾನ್ಯ. ಆದರೆ ಜಿಎಸ್ಸೆಸ್ ಅವರು ಮಗನಿಗೆ ಕೆಳಗಿನ ಕವನವನ್ನು ಸ್ಪೆಷೆಲ್ ಉಡುಗೊರೆಯಾಗಿ ಕೊಟ್ಟರು. ಕಳೆದ ಭಾನುವಾರದ ವರೆಗೆ ಇದು ಪ್ರಕಟವಾಗಿರಲಿಲ್ಲ.

GSS Photo Prasad cropped

 

 

 

 

 

Poem

 

 

 

 

 

 

 

 

 

 

 

 

(ಚಿತ್ರ: ಡಾ ಶಿವಪ್ರಸಾದ. ಹಕ್ಕುಗಳನ್ನು ಕಾದಿರಿಸಲಾಗಿದೆ)

 

(ಈ ಕವನವನ್ನು ಉಡುಗೊರೆಯಾಗಿ ಪಡೆದ ಮಗ ಶಿವಪ್ರಸಾದ ಹೇಳುತ್ತಾರೆ: ”ನಾನು ೨೦೦೯ ದೀಪಾವಳಿ ಸಮಯಕ್ಕೆ ಬೆಂಗಳೂರಿಗೆ ಭೇಟಿ ನೀಡೀದಾಗ ಅವರನ್ನು ಪರಿವಾರದೊಂದಿಗೆ ಬಂಡಿಪುರ ಹಾಗು ಉದಕಮಂಡಲ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದೆ. ಪ್ರವಾಸದಿಂದ ಬಂದ ನಂತರ ನಾನು ಇಂಗ್ಲಂಡಿಗೆ ಹೊರಡುವ ಮುನ್ನ ತಂದೆಯವರು ನನ್ನನ್ನು ಕೋಣೆಯೊಳಗೆ ಕರೆದು ತಾವು ಬರೆದ ’To Prasad ಸಫಾರಿ ನೆನಪಿಗೆ’ ಎಂಬ ಕವನವನ್ನು ನನಗೆ ಒಪ್ಪಿಸಿದರು. ಈ ಕವನಕ್ಕೆ ಒಂದು ಔಪಚಾರಿಕ (formal) ಶೀರ್ಷಿಕೆ ಇಲ್ಲವೆಂಬುದನ್ನು ಗಮನಿಸಬಹುದು. ಈ ಕವನ ಜಿಎಸ್ಸೆಸ್ ಅವರು ನನಗೆ ಕೊಟ್ಟ ವಿಶಿಷ್ಟವಾದ ಉಡುಗೊರೆ ಎಂದು ನಾನು ಭಾವಿಸಿದ್ದೇನೆ. GSS ಅವರ ಹಸ್ತಾಕ್ಷರಗಳನ್ನುಕೆಲವು ಆಪ್ತರು ಗುರುತಿಸಬಹುದು.)

*              *                    *                   *                         *                         *                   *

ಶ್ರದ್ಧಾಂಜಲಿ

ದೀಪವಿರದ ದಾರಿಯಲ್ಲಿ
ಭರವಸೆಯ ದೀಪವಿರಿಸಿ
ಸೋತು ನಿಂತ ಹೆಜ್ಜೆಗಳಿಗೆ
ಹೆಸರನಿಟ್ಟು, ಉಸಿರಕೊಟ್ಟು

ವೈಚಾರಿಕತೆಯ ತೈಲವನಿರಿಸಿ
ಜ್ಞಾನವೆಂಬ ಹಣತೆ ಹಚ್ಚಿ
ಪ್ರೀತಿ ಕರುಣೆಯಂಬ ಶಿಲೆಗೆ
ಕಾವ್ಯವೆಂಬ ಹೂವ ಮುಡಿಸಿ

ಸಮಾನತೆಯ ಮಂತ್ರ ಹಿಡಿದು
ಜಾತಿಯೆಂಬ ಕಳೆಯ ತೆಗೆದು
ಹಮ್ಮು ಬಿಮ್ಮು ಕಿತ್ತು ಎಸೆದು
ಅನುಕಂಪೆಯ ಹೃದಯ ತೆರೆದು

ನೋವು ನಲಿವುಗಳ ಕಣಿವೆ ಹಾದು
ಕಾಣದ ಕಡಲಿಗೆ
ಹಂಬಲಿಸಿ ಹಾತೊರೆದು
ನೀಲಿಯಲಿ ಕರಗಿ ನಮ್ಮೆಲ್ಲ ತೊರೆದು

ಸಾಹಿತ್ಯದ ಸಂಪುಟಗಳಲಿ
ಕನ್ನಡಿಗರ ಹೃದಯದಲ್ಲಿ
ಮಧುರ ಗೀತೆ ಸ್ವರಗಳಲ್ಲಿ
ಅಮರರಾಗಿ ಉಳಿದಿರಿಲ್ಲಿ.

                  –    ಡಾ. ಜಿ. ಎಸ್. ಶಿವಪ್ರಸಾದ್

 

 

 

 

”ಬ್ರಿಟಿಷ್ ಕನ್ನಡಿಗ” ಬೆಂಜಮಿನ್ ಲೂಯಿಸ್ ರೈಸ್ – ಬೇಸಿಂಗ್ ಸ್ಟೋಕ್ ರಾಮಮೂರ್ತಿ ಬರೆದ ಲೇಖನ

ನೀವು ಬೆಂಜಮಿನ್  ರೈಸ್ ನ ಬಗ್ಗೆ ಹೆಚ್ಚಿಗೆ ಕೇಳದಿದ್ದರೆ ಏನೂ ಆಶ್ಚರ್ಯ ಇಲ್ಲವೇನೋ. ಆದರೆ ಈತ ನಮ್ಮ ಹಳೆಯ ಮೈಸೂರ್ ದೇಶದಲ್ಲಿ ಸುಮಾರು ೧೨೦ ವರ್ಷಗಳ ಹಿಂದೆ ಮೊದಲನೆಯ ಬಾರಿಗೆ ಪ್ರಾಥಮಿಕ ಶಿಕ್ಷಣವನ್ನು (Primary Education)  ಸ್ಟಾಪಿಸಿದವರು. ಸಾವಿರಾರು ಹಳೆಯ ಕನ್ನಡ ಮತ್ತು ಸಂಸ್ಕೃತ ಗ್ರಂಥಗಳು ಮತ್ತು ಶಾಸನಗಳನ್ನು ಸಂಗ್ರಹಿಸಿ ಮೊದಲ ಬಾರಿಗೆ ಜನಗಳಿಗೆ ಪರಿಚಯ ಮಾಡಿದವರು.BL Rice

೧೭/೦೭/೧೮೩೭ ನಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಬೆಂಜಮಿನ್ ಹೋಲ್ಟ್ ರೈಸ್ ಅವರು ೧೮೦೦ ನಲ್ಲಿ ಇಂಗ್ಲೆಂಡ್ ನಿಂದ ಬಂದವರು. ಇವರು ಕನ್ನಡದಲ್ಲಿ ಪಾಂಡಿತ್ಯ ಪಡೆದು ನಮ್ಮ ಚರಿತ್ರೆ, ಭೂಗೋಲ ಮತ್ತು ಗಣಿತದ ಪುಸ್ತಕಗಳನ್ನು ಬರೆದರು. ಕನ್ನಡದಲ್ಲಿ ಮೊದಲ ಬೈಬಲ್ ಇವರದ್ದೆ. ಬೆಂಗಳೂರಿನಲ್ಲಿ ಈಗಲೂ Rice Memorial Church ಇದೆ. ಬೆಂಜಮಿನ್ ಲೂಯಿಸ್  ರೈಸ್ ಅವರ ಪ್ರಾಥಮಿಕ ವಿಧ್ಯಾಬ್ಯಾಸ ಬೆಂಗಳೂರಿನಲ್ಲಿ , ೧೮೬೦ ನಲ್ಲಿ ಕೇಂಬ್ರಿಜ್ ನಲ್ಲಿ  ಬಿ ಎ ಪದವಿ ಪಡೆದು ಮೈಸೂರಿಗೆ ಹಿಂತಿರಿಗಿ ಬೆಂಗಳೂರು ಸೆಂಟ್ರಲ್  ಹೈಸ್ಕೂಲ (ಈಗಿನ ಸೆಂಟ್ರಲ್ ಕಾಲೇಜ್ )ನ ಪ್ರಿನ್ಸಿಪಾಲ್ ಆಗಿ ಸೇರಿದರು.

ಈತ ಕನ್ನಡ, ಹಿಂದಿ, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿ ಪಾಂಡಿತ್ಯ ಪದೆದವರು. ೫ ವರ್ಷದ ನಂತರ Inspector of Schools ಆದರು. ಈ ಹುದ್ದೆಯಲ್ಲಿ ಮೈಸೂರು ಪ್ರಾಂತದ ಎಲ್ಲ ಭಾಗಗಳಿಗೂ ಹೋದಾಗ ನೂರಾರು ಶಿಲಾ ಶಾಸನ ಗಳನ್ನು ಸ್ಥಳೀಯ ಜನರ ಸಹಾಯ ದಿಂದ ಹಳೆ ಕನ್ನಡದಿಂದ ಅಧುನಿಕ ಕನ್ನಡಕ್ಕೆ ಭಾಷಾಂತರಿಸಿದರು. ಇದಲ್ಲದೆ  ಅನೇಕ ತಾಳೆಗೆರೆ ಮತ್ತು ತಾಮ್ರ ಶಾಸನಗಳನ್ನು ಸಹ ಸಂಗ್ರಹಿಸಿದರು. Chitradurga_ಇವೆಲ್ಲವನ್ನು Epigraphia Carnatica ದಲ್ಲಿ ೧೨ ಸಂಪುಟಗಳಲ್ಲಿ ಪ್ರಕಟಿಸಿದರು. ಅವರ ಸಂಗ್ರಹದಲ್ಲಿ ಸುಮಾರು ೯೦೦೦  ಶಾಸನಗಳ ಪ್ರತಿ ಇವೆ. ಇದರಿಂದ ಮೈಸೂರು ದೇಶದ ಎರಡು ಸಾವಿರ ವರ್ಷ ದ ಸಾಮಾಜಿಕ  ಜೀವನದ ಚರಿತ್ರೆ ಪರಿಚಯ ಉಂಟಾಯಿತು.

೧೮೭೩ ರಲ್ಲಿ ಡಿ ಪಿ ಐ (Director of  Public Instruction) ಆಗಿ, ಪ್ರಾಥಮಿಕ ಶಿಕ್ಷಣವನ್ನು( Primary Education)  ಸ್ಟಾಪಿಸಿದರು.ಪ್ರತಿ ಹೋಬಳಿ ಯಲ್ಲೂ ಒಂದು ಶಾಲೆ ಸ್ಥಾಪಿಸಿದವರು ಇವರೆ. ಆದರೆ ಇವರ ಗುರಿ ಇದ್ದುದು ಪ್ರತಿ  ಹಳ್ಳಿಯಲ್ಲಿ  ಸಹ ಶಾಲೆ ಇರಬೇಕು ಅಂತ.  ಆದರೆ ಸರಿಯಾದ ಉಪಾಧ್ಯಾಯರ ಕೊರತೆ ಇದ್ದದ್ದರಿಂದ ಈ ಯೋಜನೆ ಜಾರಿಗೆ ಬರಲು ಸ್ವಲ್ಪ ಕಷ್ಟ ಆಯಿತು. ಆಗಿನ  ಮಹಾರಾಜರ ಆಡಳಿತದಲ್ಲಿ ಇವರನ್ನು ಮೈಸೂರಿನ ಜನಗಣತಿ ಮಾಡಲು ನೇಮಿಸಲಾಯಿತು. ಮುಂದೆ, ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಇಡೀ  ಭಾರತದ ಶಿಕ್ಷಣ ನೀತಿಗೆ ( Education Policy) ನಾಂದಿ ಹಾಕಿದರು.

೧೮೮೪ ನಲ್ಲಿ   Director of Archaeology  ಆಗಿ ಕೆಲಸ ಶುರು ಮಾಡಿದರು. ಅಶೋಕನ ಕಾಲದ ಹಲವಾರು ಶಾಸನಗಳು, ರೋಂ ಸಾಮ್ರಾಜ್ಯದ ನಾಣ್ಯ ಮುಂತಾದವು ಸಿಕ್ಕಿದ ಮೇಲೆ ನಮ್ಮ ದೇಶದ ಚರಿತ್ರೆ ಅನೇಕರಿಗೆ ಪರಿಚಯ ವಾಯಿತು. ನೇಪಾಳದ ರಾಜವಂಶವನ್ನು ಪ್ರಾರಂಬಿಸಿದ ನನ್ಯದೇವ, ಕರ್ನಾಟಕದ ಗಂಗ ವಂಶದವನು ಅಂತ ಸಾಧಿಸಿದ್ದು ರೈಸ್ ಅವರ ಹೆಗ್ಗಳಿಕೆ.

೧೮೭೬ ಮತ್ತು ೧೮೯೭ ರಲ್ಲಿ Mysore Gazetteer ಇವರ ಇನ್ನೊಂದು ಮಹತ್ಸಾಧನೆ. ಇದರಲ್ಲಿ ಇವರು ಬರೆದ ಮೈಸೂರು ಮತ್ತು ಕೂರ್ಗ್ ಪ್ರದೇಶದ ಪಟ್ಟಣ ಮತ್ತು ಕೆಲವು ಹಳ್ಳಿಗಳ ಚರಿತ್ರೆ  ಸಿಗುತ್ತದೆ.Mysore and coorg_

೧೯೦೬  ಇವರು ನಿವೃತ್ತಿ ಆಗುವ ಮುಂಚೆ Bibliotheca Carnatica, a collection of all major literary Texts in Kannada ಎಂಬ ಲೇಖನ ಸಂಗ್ರಹವನ್ನು ೬ ಸಂಪುಟದಲ್ಲಿ ಪ್ರಕಟಿಸದರು ಸುಮಾರು. ಅದರಲ್ಲಿ ೩೦೦ ಕನ್ನಡ ಸಾಹಿತಿಗಳು ಮತ್ತು ಕವಿಗಳ ಬಗ್ಗೆ ವಿವರವಾಗಿ ಪ್ರಸ್ತಾಪನೆ ಮಾಡಿದ್ದಾರೆ. ರೈಸ್ ಅವರಿಗೆ ನಮ್ಮ ಭಾಷೆ, ಚರಿತ್ರೆ ಮತ್ತು ಧಾರ್ಮಿಕ ಸಹಿಷ್ಣುತೆ ಮೇಲೆ ಬಹಳ ಹೆಮ್ಮೆ ಇತ್ತು.

೧೯೦೬ ರಲ್ಲಿ  ತಮ್ಮ ೬೯ ನೆಯ ವಯಸ್ಸಿಗೆ ಹುಟ್ಟಿದ ಬೆಂಗಳೂರು ಬಿಟ್ಟು ಇವರು ಕುಟುಂಬ ಸಮೇತ ಇಂಗ್ಲೆಂಡ್ ಗೆ ತೆರಳಿದರು. ಅಲ್ಲೂ  ಕನ್ನಡ ಭಾಷೆ ಮರೆಯಲ್ಲಿಲ್ಲ. ೧೯೨೪ ರಲ್ಲಿ ಲಂಡನ್ ನಲ್ಲಿ ಒಂದು ವಸ್ತುಪ್ರದರ್ಶನ (exhibition) ದಲ್ಲಿ ಕೆಲ ಕನ್ನಡಿಗರನ್ನು ಭೇಟಿಯಾದರು. ಅವರಲ್ಲಿ ಒಬ್ಬಾತ ಇಂಗ್ಲಿಷ್ ನಲ್ಲಿ ಮಾತನಾಡಲು ರೈಸ್ ಅವರು “ಅಯ್ಯಾ ಕನ್ನಡದಲ್ಲಿ ಮಾತನಾಡೋಣ ,  ಮುದ್ದಿನ ಕನ್ನಡ ನನ್ನ ಕಿವಿಗೆ ಬಿದ್ದು ಬಹಳ ದಿನಗಳಾದವು” ಎಂಬ ಉದ್ಗಾರ ತೆಗೆದರಂತೆ!

ತಮ್ಮ ಸ್ನೇಹಿತರಾಗಿದ್ದ ಶ್ರೀ ನರಸಿಂಹಾಚಾರರಿಗೆ ೧೯೨೭ ಏಪ್ರಿಲ್ ನಲ್ಲಿ ಬರೆದ ಸಂದೇಶದಲ್ಲಿ ಹೀಗೆ ಬರೆದಿದ್ದಾರೆ: “remember me to all my love to Mysore is unending”

೧೦-೦೭-೧೯೨೭ ರಲ್ಲಿ ರೈಸ್ ಅವರು ನಿಧನರಾದರು. ಇವರು೪೩ ವರ್ಷಗಳ ಕಾಲ ಕನ್ನಡಕ್ಕೆ ಮಾಡಿದ ಸೇವೆ ಎಂದಿಗೂ ಮರೆಯುವ ಹಾಗಿಲ್ಲ.

ಆದರೆ ಕರ್ನಾಟಕದಲ್ಲಿ ಇವರನ್ನು ಈಗ  ನೆನಸುವವರು ಎಷ್ಟು ಜನ?