ಸೂರ್ಯಾಸ್ತ
Phot: © Shrivatsa Desai
ಪಡುವಣ ಬಾನಲಿ ಮೂಡಿದೆ ನಸುಗೆಂಪು
ಧರೆಯಂಗಳಕಿದೊ ದುಮ್ಮಿ ಕ್ಕಿದೆ ಇರುಳ ಕಪ್ಪು
ಆವರಿಸಿದೆ ಆಗಸಕೆ ಕೌತುಕಗಳ ಬೆಡಗು
ಮುಸುಕಿದ ಮಸುಕಿನಲು ಕಾಡು ಸೊಬಗು
ಸೂರ್ಯಾಸ್ತ
Phot: © Shrivatsa Desai
ಪಡುವಣ ಬಾನಲಿ ಮೂಡಿದೆ ನಸುಗೆಂಪು
ಧರೆಯಂಗಳಕಿದೊ ದುಮ್ಮಿ ಕ್ಕಿದೆ ಇರುಳ ಕಪ್ಪು
ಆವರಿಸಿದೆ ಆಗಸಕೆ ಕೌತುಕಗಳ ಬೆಡಗು
ಮುಸುಕಿದ ಮಸುಕಿನಲು ಕಾಡು ಸೊಬಗು
ಮಟ ಮಟ ಮಧ್ಯಾನ. ಪಾತ್ರೆ ಅಂಗಡೀಲಿ ಗುಂಡು ಇಡ್ಲಿ ಪಾತ್ರೆ, ಮಿಕ್ಸಿ ತಗೊಳೋಣ ಅಂತ ಹೋಗಿದ್ದೆ. “ಎಲ್ಲಿದ್ದೀರ ಮೇಡಂ?”ಪಾತ್ರೆ ಅಂಗಡಿ ಮಾಲೀಕ ಕೇಳಿದ.
“ಇಲ್ಲೆ ವಿಜಯನಗರ ಕಣಪ್ಪ” ಅಂದೆ.
“ಅಲ್ಲ ಮೇಡಂ,ಎಲ್ಲಿಂದ ಬಂದಿದ್ದೀರ ಅಂತ ಕೇಳಿದ್ದು” ಅಂದ!
‘ಎಲ ಇವನ? ಇನ್ನುರೈವತ್ತು ರೂಪಾಯಿ ಚೂಡಿದಾರ ಹಾಕಿದ್ದೀನಿ, ಕನ್ನಡದಲ್ಲಿ ಮಾತಾಡ್ತ ಇದ್ದೀನಿ, ನೋಡಕ್ಕೆ ಇವನ ಥರಾನೆ ಇದೀನಿ, ಪಟ್ ಅಂತ ಪರದೇಸಿ ಅಂತ ಕಂಡು ಹಿಡಿದನಲ್ಲ! ಭಾರೀ ಚುರುಕು ‘ ಅಂದುಕೊಂಡೆ.
ಮಗನಿಗೆ ದೇಸಿ ಬಟ್ಟೆ ತಗೋಳೋಣ ಅಂತ ಹೋದಾಗ್ಲು ಇದೇ ಅನುಭವ. ಈ ಸರ್ತಿ ಇನ್ನು ಚಿಕ್ಕ ವಯಸ್ಸಿನವನು!. ಜೊತೇಲಿದ್ದ ಅಕ್ಕ “ಬಹುಶಃ ನೀನು ಕನ್ನಡದಲ್ಲಿ ಮಾತಾಡಿದ್ದಕ್ಕೆ ಅವನಿಗೆ ತಿಳೀತು ಅನ್ನಿಸುತ್ತೆ” ಅಂದಳು. ಇದ್ಯಾವ ನ್ಯಾಯ ಸ್ವಾಮಿ, ಪರದೇಶದಲ್ಲಿ ಬರೀ ಆಂಗ್ಲ ಭಾಷೇಲಿ ಮಾತಾಡಿ, ಕರ್ನಾಟಕಕ್ಕೆ ಹೋಗಿ ಬಾಯ್ತುಂಬ ಕನ್ನಡ ಮಾತ್ತಾಡಂಗೂ ಇಲ್ವ? ಅಥವಾ ಮಾತಾಡಿದ್ರೆ ನಮ್ಮ ಪರದೇಶಿ ಸ್ತಾನ ಬಟಾಂಬಯಲಾ?
ದೂರದ ದೇಶದಲ್ಲಿ ಪರಕೀಯರಿರಲಿ, ನಮ್ಮ ದೇಶದಲ್ಲು ಪರಕೀಯರಾಗಿ ಬಿಟ್ವಲ್ಲ ಅಂತ ಹಪಹಪಿಸಿದೆ.