‘ಕನ್ನಡದ ಬೆಳವಣಿಗೆಗೆ ಎಷ್ಟು ದುಡಿದರೂ ಕಡಿಮೆಯೇ’ – ಶಿವರಾಂ ಸಂದರ್ಶನ: ಉಮಾ ವೆಂಕಟೇಶ್

ಉಮಾ ವೆಂಕಟೇಶ್: ಶಿವರಾಮ್ ಅವರೆ, ನೀವು ಕನ್ನಡ ಚಲನಚಿತ್ರ ರಂಗದಲ್ಲಿ ಮತ್ತು ರಂಗಭೂಮಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ, ನಟ, ನಿರ್ಮಾಪಕ, ನಿರ್ದೇಶಕನಾಗಿ ಬಹಳ ಒಳ್ಳೆಯ ಕಾರ್ಯಗಳನ್ನು ಈಗಾಗಲೇ ಮಾಡಿದ್ದೀರಿ. ಈ ರಂಗಗಳಲ್ಲಿ ಇನ್ನೂ ನಿಮಗೆ ಮಾಡಬೇಕು ಎಂದು ಅನಿಸಿರುವ ಕಾರ್ಯಗಳು ಇವೆಯೇ?

ಶಿವರಾಂ ಸಂದರ್ಶನದಲ್ಲಿ ಉಮಾ ವೆಂಕಟೇಶ್
ಶಿವರಾಂ ಸಂದರ್ಶನದಲ್ಲಿ ಉಮಾ ವೆಂಕಟೇಶ್

ಶಿವರಾಮ್: ಇನ್ನೂ ಬೇಕಾದಷ್ಟು ಕಾರ್ಯಗಳಿವೆ. ಇನ್ನೂ ಅಪೂರ್ಣವಾಗಿರುವ ಕಾರ್ಯಗಳು ಬೇಕಾದಷ್ಟಿವೆ. ನಮ್ಮ ಜೀವನವೇ ಒಂದು ರೀತಿಯಲ್ಲಿ ಅಪೂರ್ಣ.  ಇನ್ನೂ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಬೇಕು ಎಂಬ ಆಸೆಯಿದೆ, ನಾನು ಮೂಲತಹ ರಂಗಭೂಮಿಯಿಂದ ಬಂದವನು. ರಂಗಭೂಮಿಯಲ್ಲಿ ನಟಿಸುವ ಕೆಲಸ ಮಾಡಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ನಾನು ಸಿನಿಮಾರಂಗಕ್ಕೆ ಹೋದೆ. ನನಗೆ ಇನ್ನೂ ಬಹಳ ಒಳ್ಳೆಯ ನಾಟಕಗಳನ್ನು ಪ್ರದರ್ಶಿಸಿ, ಆ ನಾಟಕಗಳನ್ನು ರಾಜ್ಯದಾದ್ಯಂತ ಕೊಂಡೊಯ್ದು, ಅದರಿಂದ ಕಡೆಯ ಪಕ್ಷ ಒಂದು ಕೋಟಿ ರೂಪಾಯಿಗಳನ್ನಾದರೂ ಸಂಪಾದಿಸಿ, ಆ ಹಣವನ್ನು ರಂಗಭೂಮಿಯ ಕಲಾವಿದರ ಕ್ಷೇಮ ನಿಧಿಗಾಗಿ ಉಪಯೋಗಿಸ ಬೇಕು ಎನ್ನುವ ಒಂದು ಮಹದಾಸೆಯಿದೆ.  ನಾನು ಒಂದು ಕೋಟಿ ಸಂಪಾದಿಸಿದ ಮೇಲೆ, ನಮ್ಮ ಸರ್ಕಾರವನ್ನು ಕೇಳಿ ಅವರಿಂದ ಒಂದು ಕೋಟಿ ರೂಪಾಯಿಗಳ ಹಣವನ್ನು ಅದಕ್ಕೆ ಸೇರಿಸಿ, ರಂಗ ಭೂಮಿಯ ಕಲಾವಿದರು ಯಾರನ್ನೂ ಹಣ ಬೇಡದಿರುವಂತೆ ಅವರ ಕ್ಷೇಮನಿಧಿಯನ್ನು ಪ್ರಾರಂಭಿಸುವ ಯೋಜನೆ ನನಗಿದೆ.  ನನ್ನ ಜೊತೆಯ ಅನೇಕ ಕಲಾವಿದರು ಅನುಭವಿಸುವ ನೋವನ್ನು IMG_6247ದೂರ ಮಾಡಬೇಕು. ಇತ್ತೀಚೆಗೆ ನಿಧನರಾದ ಗಾಂಧಿ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ ಪ್ರಖ್ಯಾತ ಹಾಲಿವುಡ್ ನಿರ್ದೇಶಕ, ಸರ್ ರಿಚರ್ಡ್ ಅಟೆನ್ಬರೋ, ಭಾರತ ಸರ್ಕಾರಕ್ಕೆ ಒಂದು ಕೋಟಿ ರೂಪಾಯಿಗಳನ್ನು ಕಲಾವಿದರ ನಿಧಿಗೆಂದು ಕೊಟ್ಟರು. ಅದನ್ನು Senior artistes welfare fund of India ಎಂದು ಪ್ರಾರಂಭಿಸಿ, ಅದರಲ್ಲಿ ವಿನಿಯೋಗಿಸಿದ್ದಾರೆ. ಅದಕ್ಕೆ ಕರ್ನಾಟಕದಿಂದ ನನ್ನನ್ನು ಟ್ರಸ್ಟಿಯನ್ನಾಗಿ ಮಾಡಿದ್ದಾರೆ. ಇದಕ್ಕಾಗಿ ನಾನು ಕರ್ನಾಟಕದ ಸುಮಾರು ೨೫ ಅತ್ಯಂತ ಬಡ ಕಲಾವಿದರನ್ನು ಆರಿಸಿದೆ. ಈ ೨೫ ಮಂದಿಯಲ್ಲಿ, ಈಗ ಸುಮಾರು ೧೫ ಕಲಾವಿದರಿಗೆ ಪ್ರತಿ ತಿಂಗಳಿಗೆ ೧೦೦೦ ರೂಪಾಯಿಗಳ ಪಿಂಚಣಿ ಸಿಗುತ್ತಿದೆ.  ಇದರ ಜೊತೆಗೆ ರಂಗಭೂಮಿಯಲ್ಲಿ ಇನ್ನೂ ಅನೇಕ ಪ್ರಯೋಗಗಳನ್ನು ಮಾಡುವ ಆಸೆಯಿದೆ.

Read More »

‘ಕಂಪ್ಯೂಟರಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ ಮತ್ತು ಫೋನಿನಲ್ಲಿ ಕನ್ನಡದಲ್ಲಿ ಹೇಗೆ ಬರೆಯುವುದು?’ – ಕೇಶವ ಕುಲಕರ್ಣಿ

ಲ್ಯಾಟಿನ್/ ರೋಮನ್ ಲಿಪಿಯಲ್ಲಿ (ಇಂಗ್ಲೀಷ್ ಭಾಷೆಯನ್ನು ಬರೆಯುವ ಲಿಪಿ) ಕನ್ನಡವನ್ನು ಬರೆದರೆ ಅದನ್ನು ಓದಲು ಪಡುವ ಕಷ್ಟ ಹೇಳುವುದೂ ಕಷ್ಟ (Latin/ Roman lipyalli kannadavannu baredare adannu odalu paduva kashta heluvudu kashta).  ಕನ್ನಡವನ್ನು ಕನ್ನಡದಲ್ಲಿ ಬರೆದರೇ ಚೆಂದ, ಓದುವವರಿಗೂ ಅನುಕೂಲ. ಕನ್ನಡ ಲಿಪಿ ತುಂಬ ಸುಂದರ ಕೂಡ. ಕನ್ನಡವನ್ನು ಉಳಿಸುವ ಕೆಲಸ ಆಗಬೇಕು ಅಂತಿದ್ದರೆ ಕನ್ನಡದಲ್ಲಿ ಬರೆಯುವ ಕೆಲಸ ನಿರಂತರವಾಗಿ ನಡೆಯಬೇಕು. ಆದ್ದರಿಂದ ಕನ್ನಡವನ್ನು ಅದಷ್ಟು ಹೆಚ್ಚಾಗಿ ಬಳಸ ಬೇಕು.

cc-wiki

‘ಕಂಪ್ಯೂಟರಿನಲ್ಲಿ ಫೋನಿನಲ್ಲಿ ಕನ್ನಡದಲ್ಲಿ ಹೇಗೆ ಬರೆಯುವುದು?’, ಇದು ಬಹಳ ಜನ ಕನ್ನಡಿಗರು ಕೇಳುವ ಪ್ರಶ್ನೆ, ‘ಕಂಪ್ಯೂಟರಿನಲ್ಲಿ ಕನ್ನಡದಲ್ಲಿ ಬರೆಯಲು ಬರುತ್ತಾ?’ ಎಂದು ಹುಬ್ಬೇರಿಸುವವರನ್ನೂ ನೋಡಿದ್ದೇನೆ. ‘ಕನ್ನಡದಲ್ಲಿ ಯಾಕ್ರಿ ಬರೀಬೇಕು?’ ಎಂದು ಶುದ್ಧ ಕನ್ನಡದಲ್ಲೇ ಕೊಂಕು ನುಡಿದವರನ್ನೂ ಕೇಳಿದ್ದೇನೆ.

ಅದೆಲ್ಲ ಇರಲಿ… ಕಾಲವೊಂದಿತ್ತು. ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳು ಕಣ್ಣಿಗೆ ಬಿದ್ದರೆ ಆನಂದವಾಗುತ್ತಿತ್ತು. ಬರಬರುತ್ತ ತಂತ್ರಾಂಶ (software)ದಲ್ಲಿ ಬದಲಾವಣೆಗಳಾದವು, ಕನ್ನಡ ಭಾಷೆ ಜಾಲದಲ್ಲಿ ಕಾಣಿಸಿಕೊಳ್ಳಲು ಆರಂಭವಾಯಿತು. ಕನ್ನಡ ಭಾಷೆಯನ್ನು ಕಂಪ್ಯೂಟರಿನ ಕೀಲಿಮಣೆಯಲ್ಲಿ ಕುಟ್ಟಲು ಸುಮಾರು ತಂತ್ರಾಂಶಗಳು ಬಂದರೂ, ಕನ್ನಡ ಕೀಲಿಮಣೆಯನ್ನು ಕನ್ನಡಿಗರ ಮನೆ ಮನೆಗೆ ತಲುಪಿಸಿದ್ದು, ಬರಹ (www.baraha.com). ಸುಮಾರು ಒಂದೂವರೆ ದಶಕದ ನಂತರ ಕನ್ನಡಕ್ಕೀಗ ಯುನಿಕೋಡ್ ಸಿಕ್ಕಿದೆ. ಕನ್ನಡ ಲಿಪಿಯನ್ನು ಕಂಪ್ಯೂಟರಿಗೆ ತರಲು ಮಾಡಿದ ಸಾಹಸಗಳು, ಜಗಳಗಳು, ವಾದಗಳು, ಯುನಿಕೋಡ್ ಮಾಡುವವರೆಗಿನ ಪ್ರಯತ್ನಗಳು – ಅವೆಲ್ಲ ಇರಲಿ, ಅವುಗಳ ಬಗ್ಗೆ ಬರೆಯದೇ ಕನ್ನಡವನ್ನು ಕಂಪ್ಯೂಟರಿನಲ್ಲಿ, ಫೋನಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ ಹೇಗೆ ಕುಟ್ಟುವುದು ಎನ್ನುವುದನ್ನು ನೋಡೋಣ:

ಈ ಎಲ್ಲ ತಂತ್ರಾಂಶಗಳೂ ಮಾಡುವ ಸುಲಭದ ಕೆಲಸವೆಂದರೆ, ಕನ್ನಡ ಪದವನ್ನು ಇಂಗ್ಲೀಷಿನಲ್ಲಿ ಬರೆಯುತ್ತ ಹೋದರೆ ಸಾಕು, ಕನ್ನಡ ತಾನೇ ತಾನಾಗಿ ಮೂಡುತ್ತೆ!

ಉದಾಹರಣೆಗಳು:

‘ಗಮನ’ ಎಂದು ಬರೆಯಲು gamana ಎಂದು ಬರೆದರಾಯಿತು.kannada transliteration

ಘಮ = Gama ಅಥವಾ ghama

ಪರಿಮಳ = parimaLa

ಆಗಂತುಕ = aagaMtuka

ದೃಷ್ಟದ್ಯುಮ್ನ = dRShTadyumna

ಯಾವಾಗ ದೊಡ್ಡಕ್ಷರ (capital letter), ಯಾವಾಗ ಚಿಕ್ಕಕ್ಷರ (small letters) ದಲ್ಲಿ ಬರೆಯಬೇಕು ಎನ್ನುವುದನ್ನು ಸ್ವಲ್ಪೇ ಸ್ವಲ್ಪ ಪ್ರಯತ್ನ ಮಾಡಿ ಕಲಿಯಬಹುದು.

Read More »