ವಚನ, ದಾಸ ಮತ್ತು ಭಕ್ತಿ ಸಾಹಿತ್ಯದ ಪರಂಪರೆ- ಭಾಗ 1, ರಾಮಮೂರ್ತಿ

( ಸಾಹಿತ್ಯ ಎನ್ನುವ  ಮಹಾ ಸಾಗರದ  ಹನಿಗಳು ಜನಸಾಮಾನ್ಯರಿಗೆ ದೊರಕತೊಡಗಿದ್ದು ಆಯಾ ದೇಶಗಳಲ್ಲಿ ಇದು ಆಡುಭಾಷೆಯಲ್ಲಿ ದೊರಕತೊಡಗಿದಾಗ.ಈ ಕಾರ್ಯ ನಡೆಯದೇ ಹೋಗದಿದ್ದಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಇವತ್ತು ಬೆರಳೆಣಿಕೆಯಲ್ಲಿ ಮಾತ್ರ ಇರುತ್ತಿತ್ತೇನೋ? ಸವಿದಷ್ಟೂ ಸಿಹಿ ಸಾಹಿತ್ಯದ್ದು.  ಪಡೆದಂತೆಲ್ಲ ಮತ್ತೆ ಸಂಪಾದನೆಯಾಗಬಲ್ಲಂತದ್ದು. ಸಮಾಜವೊಂದಕ್ಕೆ ಒಳಿತು ಕೆಡುಕುಗಳನ್ನು ಮನದಟ್ಟು ಮಾಡಿಸಿ, ಮಾರ್ಗದರ್ಶನವನ್ನು ನೀಡುವಂತದ್ದು.

ಸಂಸ್ಕೃತವೊಂದೇ ಬಳಕೆಯಲ್ಲಿದ್ದಿದ್ದರೆ ಕನ್ನಡ ಭಾಷೆ ಬೆಳೆಯುತ್ತಿರಲಿಲ್ಲ. ಸಾಹಿತ್ಯದಲ್ಲಿ ಕನ್ನಡ ಭಾಷೆ ಪ್ರವರ್ದಮಾನಕ್ಕೆ ಬಂದಾಗ  ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಸಂಸ್ಕೃತ ಭಾಷೆ ಹಿಂದೆ ಸರಿದದ್ದು ಈಗ ಇತಿಹಾಸ. ಹಾಗೆಯೇ ಸಾಹಿತ್ಯ ಆಡು ಭಾಷೆಯಲ್ಲಿದ್ದಾಗ ಅತಿ ಹೆಚ್ಚು ಜನರಿಗೆ ತಲುಪಿ ಹೆಚ್ಚು ಜನಪ್ರಿಯವಾಗಬಲ್ಲದೆಂಬುದಕ್ಕೆ ನಿದರ್ಶನ.

ಕನ್ನಡದಲ್ಲಿ ವಚನಸಾಹಿತ್ಯ ಮತ್ತು ದಾಸ ಸಾಹಿತ್ಯಕ್ಕಿರುವ ಮಹತ್ವ ಅಷ್ಟಿಷ್ಟಲ್ಲ. ಇವನ್ನು ಬರೆದವರೆಲ್ಲ ಪಂಡಿತರಲ್ಲ ನೂರಾರು ಜನಸಾಮಾನ್ಯರು, ಓದು ಗೊತ್ತಿಲ್ಲದವರು ನುಡಿರೂಪದಲ್ಲಿ  ತಮ್ಮ ಬದುಕನ್ನು, ಆಧ್ಯಾತ್ಮ, ಪಾರಮಾರ್ಥ, ಧ್ಯೇಯ ಮತ್ತು ಭಕ್ತಿಯನ್ನು ಸರಳ ನುಡಿರೂಪದಲ್ಲಿ ಬರೆದ ಕಾರಣವೇ  ವಚನ ಸಾಹಿತ್ಯ ಅಗಾಧ ಮಟ್ಟದಲ್ಲಿ ಬೆಳೆಯಿತು. ಮನೆಯಲ್ಲೂ ದುಡಿದು, ಹೊರಗಿನ ದುಡಿಮೆಗೂ ಕೈ ಹಚ್ಚಿದ ಹೆಂಗೆಳೆಯರ ಸಾಹಿತ್ಯ ಮೊದಲಬಾರಿಗೆ ದಾಖಲಿತ ರೂಪದಲ್ಲಿ  ಲಭ್ಯವಾಗಿರುವುದೇ ವಚನಗಳಲ್ಲಿ. ಹಾಗಾಗಿ ಮಹಿಳಾ ಸಾಹಿತ್ಯ ಶುರುವಾದದ್ದೇ ವಚಗಳ ಮೂಲಕ.

ವಚನ ಮತ್ತು ದಾಸ ಸಾಹಿತ್ಯಗಳು ಆರಿಸಿಕೊಂಡಿದ್ದು  ಮುಖ್ಯವಾಗಿ ಭಕ್ತಿಮಾರ್ಗವನ್ನು. ಆದರೆ ದೇಹ, ಬದುಕು, ಸಮಾಜದ ಒಳಿತು -ಕೆಡುಕುಗಳು,ಆಧ್ಯಾತ್ಮ,ಬುದ್ದಿ ಮಾತು, ಪರವಶತೆ, ಪಾರಮಾರ್ಥಿಕತೆ ಎಲ್ಲವನ್ನೂ ಒಳಗೊಂಡಿವೆ,  ಅಲ್ಲಮ ಪ್ರಭು ಖಗೋಳ ಶಾಸ್ತ್ರದಂತಹ ಕ್ಲಿಷ್ಟ ವೈಜ್ಞಾನಿಕ ವಿಚಾರಗಳ ಬಗ್ಗೆ ಬರೆದರೆ, ಶಿಶುನಾಳ ಶರೀಷರು ತಮ್ಮ ನಿಗೂಢ ನುಡಿಗಟ್ಟುಗಳ  ಮೂಲಕ ಜನರ ಪ್ರಭುದ್ದತೆಯನ್ನು ಕೆಣಕಿದರು.

ಮೊದಲು ಬಂದದ್ದು ವಚನ ಸಾಹಿತ್ಯ. ನಂತರ ಬಂದದ್ದು ದಾಸ ಸಾಹಿತ್ಯ. ಅದೇ ಪ್ರಕಾರದಲ್ಲಿ ಈ ಕುರಿತ ಬರಹವನ್ನು ಎರಡು ಕಂತುಗಳಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ.

ಈ ಲೇಖನಗಳನ್ನು ಬರೆದವರು ಅನಿವಾಸಿಯ ಅದಮ್ಯ ಉತ್ಸಾಹದ ಬರಹಗಾರರಾದ  ರಾಮಮೂರ್ತಿಯವರು. ಇವರ ಬರಹಕ್ಕೆ ಆಧಾರ ಎ.ಕೆ. ರಾಮಾನುಜಂ ಅವರ ಪುಸ್ತಕಗಳು. ರಾಮಮೂರ್ತಿಯವರ ಪುಸ್ತಕ ಪ್ರೇಮ, ನಾವು  ವಚನ ಮತ್ತು ದಾಸಸಾಹಿತ್ಯದ ಉಗಮ, ಬೆಳವಣಿಗೆ ಮತ್ತು ಈ ಸಾಹಿತ್ಯಪ್ರಕಾರಗಳ ಹರಿಕಾರರಾದ ಹಲವರ ಬಗ್ಗೆ  ಮತ್ತೊಮ್ಮೆ ತಿಳಿದುಕೊಳ್ಳಲು ಅವಕಾಶ ನೀಡಿದೆ.- ಸಂ)

———————————————————————————————————————————————————–

ವಚನ, ದಾಸ ಮತ್ತು ಭಕ್ತಿ ಸಾಹಿತ್ಯದ  ಪರಂಪರೆ

ನಮ್ಮ ಕರ್ನಾಟಕದಲ್ಲಿ ಈ ಸಾಹಿತ್ಯ ಒಂದು ಸಾವಿರ ವರ್ಷದ ಹಿಂದೆ ಪ್ರಾರಂಭವಾಯಿತು ಅನ್ನುವ ವಿಚಾರ ಎಲ್ಲಾ ಕನ್ನಡಿಗರ ಹೆಮ್ಮೆಯ ವಿಷಯ. ೯ನೇ ಶತಮಾನದಲ್ಲೇ ಕನ್ನಡದ ಮೊದಲನೆಯ ಸಾಹಿತ್ಯ ನೃಪತುಂಗನ ಕವಿರಾಜ್ಯಮಾರ್ಗ. ಆದರೆ ಇದು ಸಾಮಾನ್ಯ ಜನಗಳಿಗೆ ಬರೆದಿದ್ದಲ್ಲ ಅಂದರೆ ತಪ್ಪಲಾಗರಾದು. ವೇದ ಮತ್ತು ಉಪನಿಷದ್ಗಳು  ಸಂಸ್ಕೃತ ದಲ್ಲಿ ಇದ್ದಿದ್ದರಿಂದ ಅಕ್ಷರಸ್ತ ರಾದ ಬ್ರಾಹ್ಮಣ ಪಂಗಡವರಿಗೆ ಮಾತ್ರ ಇದರ ಅರಿವು ಇತ್ತು. ಇಂಗ್ಲೆಂಡಿನಲ್ಲಿ ಸಹ  ಬೈಬಲ್ ಲ್ಯಾಟಿನ್ ಭಾಷೆ ಯಲ್ಲಿ ಮಾತ್ರ ಇತ್ತು ಆದ್ದರಿಂದ  ಇಂಗ್ಲೆಂಡಿನ ಜನ ಸಾಮಾನ್ಯರಿಗೆ ಅವರ ಧರ್ಮದ ಗ್ರಂಥ ಬಗ್ಗೆ  ಇಂಗ್ಲಿಷ್ ನಲ್ಲಿ ೧೭ ಶತಮಾನದಲ್ಲಿ ಪ್ರಕಟವಾಗುವವರೆಗೂ   ಏನೂ ಗೊತ್ತರಿಲಿಲ್ಲ. . ಆದರೆ ಕರ್ನಾಟಕದಲ್ಲಿ ೧೦೦೦ ವರ್ಷದ ಹಿಂದೆಯೇ ಈ ಸಮಸ್ಯೆ ಪರಿಹಾರವಾಗಿತ್ತು , ವಚನಗಾರರು ಸರಳ ಕನ್ನಡದಲ್ಲಿ ಜೀವನ ಮತ್ತು ಭಕ್ತಿಯ ಮೇಲೆ  ಕೀರ್ತನೆಗಳು ಮತ್ತು ಉಪನ್ಯಾಸ ಗಳಿಂದ ಸಾಮಾನ್ಯ ಜನರಿಗೆ ಅರಿವು ಮಾಡಿಸಿದರು. ಸಮಾಜದಲ್ಲಿದ್ದ ಮೂಢನಂಬಿಕೆ ಮತ್ತು ತಾರತಮ್ಯಗಳನ್ನು ಅಂತ್ಯ ಮಾಡಿಮಾಡುವ ಪ್ರಯತ್ನ ಮೊದಲಬಾರಿಗೆ  ಈ ವಚನಗಳಿಂದ ಪ್ರಾರಂಭವಾಯಿತು. ವಚನಗಳು ಅಂದರೆ ನಮಗೆ ಜ್ಞಾಪಕ ಬರುವುದು ೧೨ನೇ ಶತಮಾನದ ಬಸವಣ್ಣ, ಅಲ್ಲಮ ಪ್ರಭು ಮತ್ತು ಅಕ್ಕಮಹಾದೇವಿ ಇಂಥವರು. ವೀರಶೈವ ಧರ್ಮದ ತ್ರಿಮೂರ್ತಿಗಳೆಂದರೆ ಇವರು ಮೂವರು.

ಆದರೆ ಇವರಿಗೆ ಮುಂಚೆ ೧೨ ನೇ ಶತಮಾನದಲ್ಲಿದ್ದ ಜೇಡರ ಅಥವಾ ದೇವರ ದಾಸಿಮಯ್ಯ ಎಂಬುವ ಶಿವ ಭಕ್ತನಿಂದ ಈ ಸಾಹಿತ್ಯ ಶುರುವಾಯಿತು ಅನ್ನುವ ನಂಬಿಕೆ, ಈತ ಉತ್ತರ ಕರ್ನಾಟಕದ ಯಾಡಿಗಿರಿ ಜಿಲ್ಲೆಯ ಶೋರಾಪುರ ತಾಲೂಕಿನ  ಮುದನೂರ್ ಎಂಬ ಹಳ್ಳಿಯಲ್ಲಿ  ಸುಮಾರು ೧೧೪೦ ನಲ್ಲಿ ಹುಟ್ಟಿದವನು, ಇವನ  ಮನೆತನೆದವರು ನೇಕಾರ  ( weaver ) ಈಗಿನ  ದೇವಾಂಗ ಸಮುದಾಯದವರು .  ಶಿಕ್ಷಣ ಶ್ರೀಶೈಲದ ಹತ್ತಿರದಲ್ಲಿದ್ದ ಒಂದು ಗುರುಕುಲದಲ್ಲಿ. ಮುದನೂರು  ಹಳ್ಳಿ ಯಲ್ಲಿ ರಾಮನಾಥ ದೇವಸ್ಥಾನವಿದೆ. ಪುರಾಣದ ಪ್ರಕಾರ ರಾಮ ಶಿವನ ಪೂಜೆ ಮಾಡುವನು ಆದ್ದರಿಂದ ರಾಮಾನಾಥ ಶಿವ, ದಾಸಿಮಯ್ಯನ ಅಂಕಿತ ನಾಮ ರಾಮನಾಥ ಇವನ ವಚನಗಳು ಆ ಪ್ರದೇಶಗಳಲ್ಲಿ ತುಂಬಾ ಜನಪ್ರಿಯವಾಯಿತು. ಕೆಲವರ ಪ್ರಕಾರ ಪ್ರಾಚೀನ ವೀರಶೈವ ಧರ್ಮ ಈತನಿಂದ ಹರಡಿತು.  ಆಗಿನ ಚಾಲುಕ್ಯ ದೊರೆ ಜಯಸಿಂಹನ ಪತ್ನಿ ಯನ್ನು ದಾಸಿಮಯ್ಯ ಶಿವ ಭಕ್ತನಳಾಗಿ ಪರಿವರ್ತಿಸಿದನಂತೆ.  ಇದುವರಿಗೆ  ಇವನ ೧೭೫ ವಚನಗಳು ಪ್ರಚಾರದಲ್ಲಿದೆ.

ಈ ವಚನಗಳಲ್ಲಿ ಸಾಮಾನ್ಯ ಜನರ ಅನುಭವಗಳನ್ನು ಚರ್ಚಿಸಲಾಗಿದೆ.

“ಇಂದು ನಾಳಿನ ಚಿಂತೆ ಬೇಡ ” 

ಇಂದಿಗೆಂತು ನಾಳೆಗೆಂತೆಂದು ಚಿಂತಸಲೇಕೆ 

ತಂದಿಕ್ಕುವ ಶಿವಂಗೆ ಬಡತನವೇ ರಾಮನಾಥ 

 

       ಬಸವಣ್ಣನವರು 

ಇವರು ಬಾಗಲಕೋಟೆ ಜಿಲ್ಲೆಯ ಬಾಗೇವಾಡಿ ಅನ್ನುವ ಸ್ಥಳದಲ್ಲಿ ೧೧೦೬ ನಲ್ಲಿ ಜನಿಸಿದರು. ( ಕಾರ್ತಿಕ ಶುದ್ಧ ಪೂರ್ಣಿಮಾ ಶಿದ್ದರ್ಥಿಮ ಸಂವತ್ಸರ) ಕೆಲವರ ಅಭಿಪ್ರಾಯ ಇವರು ಇಂಗಳೇಶ್ವರ ದಲ್ಲಿ ಹುಟ್ಟಿದವರು ಅನ್ನುವ ಪ್ರತೀತಿಯೂ ಇದೆ, ಕೆಲವು ಇತಿಹಾಸಕಾರರು ಬಸವಣ್ಣನವರ ತಂದೆ ತಾಯಿ ಚಿಕ್ಕಂದಿನಲ್ಲೇ ತೀರಿದ ಕಾರಣ ಅವರ ಅಜ್ಜಿ ಆಶ್ರದಲ್ಲಿ ಬೆಳೆದು ನಂತರ  ಶ್ರೀ ಮಾದರಸ ಮತ್ತು  ಮಾದಲಾಂಬಿಕೆ ಇವರನ್ನು ಬೆಳಸಿದರು ಅನ್ನುವ ವಿಷಯ ಪ್ರಸಿದ್ಧ ಕವಿ ಮತ್ತು ಸಾಹಿತಿ ಶ್ರೀಯುತ ರಾಮಾನುಜಂ ಅಭಿಪ್ರಾಯ ಪಟ್ಟಿದ್ದಾರೆ ( Speaking of  Shiva by AK Ramanujam ) .   ಅಕ್ಕ ನಾಗಮ್ಮ ಮತ್ತು ಆಕೆಯ ಗಂಡ ಶಿವಸ್ವಾಮಿ ಜೊತೆಯಲ್ಲಿ ಅವರ ಬಾಲ್ಯವನ್ನು ಕಳೆದರು. ಚಿಕ್ಕ ವಯಸಿನ್ನಲ್ಲೋ ಈತನಿಗೆ ವೈದಿಕ ಕರ್ಮಾಚರಣಗಳಲ್ಲಿ ನಂಬಿಕೆ ಇರಲಿಲ್ಲ. ಹುಟ್ಟಿದ ಬ್ರಾಹ್ಮಣ ಸಂಪ್ರದಾಯದಂತೆ ಇವರ ೮ ವರ್ಷದಲ್ಲಿ (೧೧೧೪) ಉಪನಯನದಲ್ಲಿ ಹಾಕಿದ ಜನಿವಾರವನ್ನು ನಾಗಮ್ಮನಿಗೆ ಕೊಡುವಂತೆ ಹೇಳುತ್ತಾರೆ. ಜನಿವಾರ ಪುರುಷರಿಗೆ ಮಾತ್ರ ಎಂದು ಹೇಳಿದಾಗ ಪುರುಷ /ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ಕೂಡಲಸಂಗಮಕ್ಕೆ ಹೊರಡುತ್ತಾರೆ. ಇಲ್ಲಿ ಈಶನ್ಯ ಗುರುಕುಲ ವನ್ನು ಸೇರಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಸಂಸ್ಕೃತ ಮತ್ತು ಕನ್ನಡ ದ  ಪಾಂಡಿತ್ಯ ವನ್ನು ಪಡೆದರು. ಅವರ ಹದಿನೆಂಟನೇ ವರ್ಷದಲ್ಲಿ ಇವರ ತಾಯಿ ತಮ್ಮ ಬಲದೇವನ  ಮಗಳು ಗಂಗಾಂಬಿಕೆ ನ್ನು ಮಾಡುವೆ ಮಾಡಿಕೊಂಡರು. ಬಲದೇವ ಬಿಜ್ಜಳ ದೇಶದ  ಮಂತ್ರಿ. ನಂತರ ಬಿಜ್ಜಳ ರಾಜಧಾನಿ ಕಲ್ಯಾಣ ನಗರದಲ್ಲಿ ಆ ಸರ್ಕಾರದಲ್ಲಿ ಕಾರಕೂನರಾಗಿ ಕೆಲಸಕ್ಕೆ ಸೇರಿ ಅವರ ದಕ್ಷತೆಗೆ ರಾಜ್ಯದ ದೊರೆಗಳು ಮೆಚ್ಚಿ ಬಸವಣ್ಣನವರನ್ನು ಮುಂದೆ ತಂದರು. ಕೆಲವು ವರ್ಷಗಳ ನಂತರ ಬಲದೇವನು ತೀರಿದನಂತರ ಬಸವಣ್ಣನವರನ್ನ  ಮಂತ್ರಿ ಗಳಾಗಿ ನೇಮಿಸಿದರು. ಇವರು ರಾಜ್ಯದ ಭಂಡಾರಿ  (Treasurer ) ಅಲ್ಲದೆ ಭಕ್ತಿ ಭಂಡಾರಿ ಸಹ ಆಗಿ ಜನಸಾಮಾನ್ಯರ ಮನ್ನಣೆ ಪಡೆದರು. ಅನುಭವ ಮಂಟಪ ಎನ್ನುವ ಹೊಸ ಯೋಜನಯಲ್ಲಿ ದೇಶದ ಪ್ರಜೆಗಳು, ಯಾರೇ ಆಗಿರಲಿ ತಮ್ಮ ಅಭಿಪ್ರಾಯವನ್ನು ಭಯ ಇಲ್ಲದೆ ವ್ಯಕ್ತ ಪಡಿಸುವ ಅವಕಾಶ ಇತ್ತು. ಈ ಕಾಲದಲ್ಲಿ ಶಿವ ಭಕ್ತರು, ಅಂದರೆ ವೀರಶೈವರ ಸಂಖ್ಯೆ ಹೆಚ್ಚಾಗಿದ್ದು ಬಸವಣ್ಣನವರು ತೋರಿಸಿದ ಮಾರ್ಗದಿಂದ .   ಆದರೆ ಕೆಲವರಿಗೆ ಈ “ಚಳುವಳಿ” ಅಂದರೆ ಜಾತಿ ಭೇದ ಅಥವಾ ಲಿಂಗ ತಾರತಮ್ಯ ಇಲ್ಲದ ಸಮಾಜ ಇಷ್ಟವಾಗದೇ ರಾಜ್ಯದಲ್ಲಿ ಕ್ರಾಂತಿಯೇ ಶುರುವಾಗಿ   ಇವರು ಬರೆದ ವಚನಗಳನ್ನು ನಾಶ ಮಾಡುವ ಪ್ರಯತ್ನ ನಡೆಯಿತು.  ಬಸವಣ್ಣನವರ  ಪ್ರೇರಣೆಯಿಂದ ಒಂದು ಅಂತರ ಜಾತಿಯ ಮದುವೆ ನಡಯಬೇಕಾಗಿತ್ತು  ಆದರೆ  ಸಾಂಪ್ರದಾಯಿಕ ವಾದಿಗಳು ಇದನ್ನು ವಿರೋಧಿಸಿ ಬಿಜ್ಜಳ ದೊರೆಗಳಿಗೆ  ದೂರು  ನೀಡಿ ಶಿಕ್ಷೆ ಕೊಡುವಂತೆ ಒತ್ತಾಯ ಮಾಡಿದಾಗ ವೀರಶೈವ ಜನಾಂಗದವರು ಸಂಪ್ರದಾಯಿಗಳ ಮೇಲೆ ಹಲ್ಲೆ ನಡೆಸುವ ಪ್ರಯತ್ನ ನಡೆಯಿತು.  ಅಹಿಂಸಾತ್ಮಕ ಬಸವಣ್ಣನರು ಇದನ್ನು ನಿಲ್ಲಿಸುವ ಪ್ರಯತ್ನ ಪಟ್ಟರೂ ಆಗಲಿಲ್ಲ.  ಕೆಲವರು ಬಿಜ್ಜಳ ರಾಜನಿಗೆ ಇವರನ್ನು ಮಂತ್ರಿ ಪದವಿಯಿಂದ  ತೆಗೆಯಿರೆಂದು ಒತ್ತಾಯ  ಮಾಡಿದರು. ಇದನ್ನು ಕೇಳಿ ಬಸವಣ್ಣನವರು ಬೇಸರಿದಿಂದ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಮುಂದೇನು ಮಾಡುವುದು ತೋಚದೆ ಕೂಡಲಸಂಗಮಕ್ಕೆ ಈಶನ್ಯ ಆಶ್ರಮಕ್ಕೆ ಹಿಂತಿರಿಗಿದರು. ಆದರೆ ಈಶಾನ್ಯ ಮುನಿಗಳು ಆಗಲೇ  ತೀರಿದ್ದರು. ಇಷ್ಟರಲ್ಲಿ ಬಿಜ್ಜಳ ರಾಜನ ಕೊಲೆಯೂ ಆಗಿದ್ದು  ಕೇಳಿ ಬಸವಣ್ಣನವರಿಗೆ ಬಹಳ ಬೇಸರವಾಗಿ ” ಸಾಕು ಮಾಡು ತಂದೆ ಲೋಕದಿಂದ” ಎನ್ನುವ ವಚನದಿಂದೆ  ಊಟ ನೀರು  ಬಿಟ್ಟು ಉಪವಾಸ ಮಾಡಿ ತಮ್ಮ ಪ್ರಾಣ ವನ್ನು ತ್ಯಜಿಸಿದರು , ಇದು ೧೧೬೭/೮ ನಲ್ಲಿ .

ಸಾವಿರ ವರ್ಷದ ಹಿಂದೆ ಬಸವಣ್ಣನವರ ತೋರಿಸಿದ ಆದರ್ಶ ಮಾರ್ಗವನ್ನು ಮುಂದುವರೆಸಿದ್ದರೆ ಈಗಿನ ಕರ್ನಾಟಕದಲ್ಲಿ ಮಾತ್ರ ಅಲ್ಲ ಇಡೀ ಭಾರತದಲ್ಲೇ   ಜಾತಿ ಮತಗಳ ಹಾವಳಿ ಇಲ್ಲದ ಸಮಾಜವನ್ನು ನೋಡಬಹುದಾಗಿತ್ತು. ಆದರೆ ದುರದೃಷ್ಟದಿಂದ ಸಾಧ್ಯವಾಗಲಿಲ್ಲ

ಬಸವಣ್ಣನವರ  ಕಾರ್ಯವೇ ಕೈಲಾಸ ಎಂಬುವುದು ಇವತ್ತಿಗೂ ಸತ್ಯ. ಇವರು ಮತ್ತು ಇತರ ೨೪೯ ವಚನಗಾರರು  ರಚಿಸಿದ ವಚನಗಳು  ೨೦೨೪೯ ಅನ್ನುವುದಕ್ಕೆ ದಾಖಲೆ ಇದೆ.

ಹರಿಹರ (೧೧೬೦-೧೨೦೦) ಬಸವಣ್ಣನವರ ಸಮಕಾಲೀನ, ಇವನು ಬರೆದ ಬಸವರಾಜದೇವರ ರಗಳೆ ಇವರ  ಚರಿತ್ರೆ. ಇವನು ಬರೆದ ೨೫ ಸಂಪುಟದಲ್ಲಿ ೧೫ ಮಾತ್ರ ಇದೆ.  ಈತನಿಗೆ ಬಸವಣ್ಣನವರ ಪರಿಚಯ ಇತ್ತೋ ಇಲ್ಲವೋ ಅನ್ನುವುದು ಸಂಶಯವೇ. ಇದಲ್ಲದೆ ೧೩ನೇ ಶತಮಾನದಲ್ಲಿ ತೆಲಗು ಭಾಷೆಯಲ್ಲಿ  ಪಾಲ್ಕುರಿಕಿ ಸೋಮನಾಥ ಬರೆದ ಬಸವ ಪುರಾಣ ದಿಂದ ಬಸವಣ್ಣನವರ ಕೀರ್ತಿ ಇನ್ನೂ ಹರಡಿತು. ೧೩೬೯ ನಲ್ಲಿ ಬಸವ ಪುರಾಣ ವನ್ನು ಕನ್ನಡದಲ್ಲಿ ಭೀಮ ಕವಿ ಭಾಷಾಂತರಿಸಿದ. ಇದು ವೀರಶೈವ ಧರ್ಮದಲ್ಲಿ ಇಂದಿಗೂ ಪವಿತ್ರವಾಗಿದೆ.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ 

ಮುನಿಯ ಬೇಡ, ಅನ್ಯರಿಗೆ ಅಸಹ್ಯ ಬಡಬೇಡ 

ತನ್ನ ಬಣ್ಣಿಸ ಬೇಡ, ಇದ್ದೀರ ಹಳಿಯಲು ಬೇಡ 

ಇದೇ  ಅಂತರಂಗ-ಶುದ್ದಿ, ಇದೇ ಬಹಿರಂಗ ಶುದ್ದಿ 

ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ  

 

       ಅಲ್ಲಮ ಪ್ರಭು

ಅಲ್ಲಮ ಪ್ರಭು ಬಸವಣ್ಣನವರ  ಸಮಕಾಲೀನವರು.  ಹುಟ್ಟಿದ ಸ್ಥಳ ಶಿವಮೊಗ್ಗ  ಜಿಲ್ಲೆಯ ಬನವಾಸಿ ಹತ್ತಿರರದ  ಬಳ್ಳಿಗಾವಿ  ಗ್ರಾಮ , ೧೨ ನೇ ಶತಮಾನದಲ್ಲಿ ಆದರೆ ಸರಿಯಾದ ಮಾಹಿತಿ ಇಲ್ಲ. ತಂದೆ ನಿರಶಂಕರ (ನಿರಂಕಾರ )  ತಾಯಿ ಸುಜನನಿ ( ಸುಜ್ಞಾನ). ೧೫ನೇ ಶತಮಾನದ ಹರಿಹರ  ಬರೆದ ಇವರ ಜೀವನ ಚರಿತ್ರೆಯಲ್ಲಿ ತಂದೆ ಸ್ಥಳೀಯ ಗುಹೇಶ್ವರ ದೇವಸ್ಥಾನದಲ್ಲಿ ಸಂಗೀತ ಮತ್ತು ನೃತ್ಯದಲ್ಲಿ ಶಿಕ್ಷಣ ಕೊಡುವ ವೃತ್ತಿ ಯಲ್ಲಿದ್ದವರು. ಅಲ್ಲಮ ಸಹ ಮದ್ದಳೆ (ಡೋಲು) ಬಾರಿಸುವ ಚಾತುರ್ಯವನ್ನು ಪಡದಿದ್ದ. ಊರಿನ ನರ್ತಕಿ ಕಮಲತೆ ಎಂಬಾಕೆಯನ್ನು ಪ್ರೀತಿಸಿ ಮದುವೆಯಾದ ಆದರೆ ಈಕೆ ಬಹಳ ವರ್ಷ ಬದಕಲಿಲ್ಲ, ಈ ನೋವಿನಿಂದ ಅಲ್ಲಮ ದಿಕ್ಕಿಲ್ಲಿದೆ ಅಲೆದು ಕೊನೆಗೆ ಹತ್ತಿರದ ಒಂದು ಗುಹೆಯಲ್ಲಿ ನೆಲಸಿದ್ದ ಅನಿಮಿಷ ಎಂಬ ಯೋಗಿಯ ಪರಿಚಯವಾಗಿ  ಅವರ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡಿ ಅವರಿಂದ ಇಷ್ಟ ಲಿಂಗವನ್ನು ಪಡದ ಮೇಲೆ ಅಲ್ಲಮನವರ  ಬದುಕು ಪ್ರಬುದ್ಧವಾಯಿತು. ಇವರ ವಚನಗಳು ಜನಪ್ರಿಯವಾಗಿ   ಕೊನೆಗೆ ಬಸವಣ್ಣನವರಿದ್ದ  ಕಲ್ಯಾಣ ದಲ್ಲಿ ನೆಲಸಿದರು.  ಇತರ ವಚನಗರರು ಇವರನ್ನು ಗುರುಗಳು ಅಥವಾ ಪ್ರಭುಗಳು ಎಂದು  ಭಾವಿಸಿ ಅಲ್ಲಮ ಪ್ರಭು ವಾದರು.  ಕಲ್ಯಾಣದಲ್ಲಿದ್ದ ಅನುಭವ ಮಂಟಪದ ಸ್ಟಾಪಿಕರು ಬಸವಣ್ಣ ಆದರೂ ಅದರ ಅಧ್ಯಕ್ಯ ಅಲ್ಲಮ ಪ್ರಭುಗಳು.  ಕಲ್ಯಾಣದಲ್ಲಿ  ಬಸವಣ್ಣನವರು ರಾಜ್ಯದ ಜವಾಬ್ದಾರಿ ವಹಿಸಿದ್ದರೆ  ಅಲ್ಲಮ ಪ್ರಭುಗಳು ಆದ್ಯಾತ್ಮಿಕ ವಿಚಾರದ ಹೊಣೆ ಇತ್ತು.  ಇವರು  ರಚಿಸಿದ ೧೨೯೪ ವಚನಗಳು ಇಂದಿಗೂ ಪ್ರಸಿದ್ದಿಯಾಗಿದೆ. ಇವರ ಅಂಕಿತ ನಾಮ ಗುಹೇಶ್ವರ, ಇವರ ವಚನಗಳು ಸಹ ಸಮಾಜದಲ್ಲಾಗುವ ಅನ್ಯಾಯ ಮತ್ತು ಅಸಮಾನತೆ ಬಗ್ಗೆ.  ನಂತರ ಬಂದ (೧೪೩೦ ) ಎರಡನೇ ದೇವರಾಯನ ಆಸ್ಥಾನದಲ್ಲಿದ್ದ  ವಿಜಯನಗರದ  ಕವಿ ಚಾಮರಸ  ಪ್ರಭುಲಿಂಗಲೀಲೆ ಅಲ್ಲಮ ಪ್ರಭುಗಳ ಜೀವನ ಮತ್ತು ಅವರು ರಚಿಸಿದ ವಚನಗಳನ್ನು ಬಗ್ಗೆ ಬರೆದಿದ್ದಾನೆ.  ಇದು ಅತ್ಯಂತ ಜನಪ್ರಿಯವಾದ್ದರಿಂದ ದೇವರಾಯ ಈ ಕೃತಿಗಳನ್ನು ತೆಲಗು ಮತ್ತು ತಮಿಳು ಭಾಷೆಗಳಿಗೆ ಭಾಷಾಂತರ ಮಾಡಿಸಿದ .

 A K ರಾಮಾನುಜಂ ನವರ Speaking of Shiva ಕೃತಿಯಲ್ಲಿ ೯೭೨ ವಚನಗಳನ್ನು ಇಂಗ್ಲಿಷ್ ಗೆ ಭಾಷಾಂತರಿಸಿದ್ದಾರೆ.

ಅಲ್ಲಮ ಪ್ರಭುಗಳ  ವಚನಗಳಲ್ಲಿ ಇತರೆ ವಚನಗಾರ  ಮೇಲೆ ಟೀಕೆ  ಮಾಡಿದ್ದಾರೆ. ಬಸವಣ್ಣ ಮತ್ತು ಅಕ್ಕಮಹಾದೇವಿಯರನ್ನು ಸಹ. ಅಕ್ಕನ ನಗ್ನತೆ ಬಗ್ಗೆ  ಒಂದು ವಚನದಲ್ಲಿ ಪ್ರಸಾಪಿಸಿದ್ದಾರೆ.   ವೀರಶೈವ ಧರ್ಮದ ಬೌಧಿಕ (intellectual ) ನಾಯಕರು ಅಲ್ಲಮಪ್ರಭು ಅನ್ನುವುದರಲ್ಲಿ ಏನೂ  ಸಂಶವಿಲ್ಲ.

ಅಲ್ಲಮಪ್ರಭುಗಳ ಕೊನೆ ದಿನಗಳು ಶ್ರೀಶೈಲದ ಹತ್ತಿರ  ಕಡಲಿ ವನದಲ್ಲಿ ಕಳೆದರು. ಆದರೆ ಯಾವ ವರ್ಷ ಅಥವಾ ಮಾಸದ ಬಗ್ಗೆ ಮಾಹಿತಿ ಇಲ್ಲ ೧೨/೧೩ ಶತಮಾನ ದಲ್ಲಿ.

         ಅಕ್ಕ ಮಹಾದೇವಿ 

ವಚನಗಾರರಲ್ಲಿ ಈಕೆಯ ಹೆಸರು ಶಾಶ್ವಿತ ವಾಗಿದೆ, ಬಸವಣ್ಣನವರ ಸಮಕಾಲೀನರಾದರೂ ಇವಳ ಹಿನ್ನಲೆ ಬಗ್ಗೆ ಅಷ್ಟೇನು ಗೊತ್ತಿಲ್ಲ. ಆದರೆ ಮಹದೇವಿಯ ವಚನಗಳ ಬಗ್ಗೆ ಸಾಕಷ್ಟು ತಿಳಿದಿದೆ. ಇವತ್ತಿಗೂ ಈ ವಚನಗಳನ್ನು ಕರ್ನಾಟಕದಲ್ಲಿ ಎಲ್ಲರಿಂದಲೂ ಕೇಳಬಹುದು. ಈಕೆ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ  ಹತ್ತಿರ ಉಡುತಡಿ (ಉಡುಗಣಿ )ಎಂಬ ಸಣ್ಣ ಗ್ರಾಮ. ೧೨ ನೇ ಶತಮಾನದ ಚರಿತ್ರೆಕಾರ ಹರಿಹರನಿಂದ  ಇವಳ ತಂದೆ ನಿರ್ಮಲಶೆಟ್ಟಿ ಮತ್ತು ತಾಯಿ ಸುಮತಿ ಎಂದು ತಿಳಿದು ಬರತ್ತೆ. ಹುಟ್ಟಿದ್ದು ಬಹುಶ ೧೧೩೦. ಮನೆಯವರು ವೀರಶೈವ ಧರ್ಮವನ್ನು ಅನುಸರಿ ಬಂದವರಿಂದ ಮಹಾದೇವಿ ಚಿಕ್ಕ ವಯಸ್ಸಿನಲ್ಲೇ ಹತ್ತಿರದಲ್ಲೇ ಇದ್ದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ  ಶಿವನ ಭಕ್ತನಾದಳು.  ಶಿವನ ಮೇಲಿನ ಪ್ರೀತಿಗೆ ಮಲ್ಲಿಕಾರ್ಜುನ ಚೆನ್ನಮಲ್ಲಿಕಾರ್ಜುನ ಆಗಿ ಈಕೆ ಮುಂದೆ ಬರೆದ ವಚನಗಳಲ್ಲಿ ಇದು ಅವಳ ಅಂಕಿತ ನಾಮವಾಯಿತು

ವಯಸ್ಸಿಗೆ ಬಂದ  ತುಂಬಾ  ಸುಂದರವಾಗಿದ್ದ ಈ ಹುಡುಗಿಗೆ  ಮಾಡುವೆ ಮಾಡುವ ಪ್ರಯತ್ನ ನಡೆಯಿತು ಆದರೆ ಮಹದೇವಿ ತನಗೆ ಮಾದುವೆ ಅಗಿದೆ ಶಿವನೇ ನನ್ನ ಗಂಡ ಎಂದು ವಾದಿಸಿದಳು.  ಆಗಿನ ಕೌಶಿಕ ಜೈನ ದೊರೆ ಈಕೆಯನ್ನು ಬಲವಂತ ಮಾಡಿ ವರಿಸಿದ ಮಾತ್ರ ಅಲ್ಲ ಈಕೆಯ ಶಿವನ ಮೇಲಿನ ಭಕ್ತಿಯನ್ನುಮೆಚ್ಚಲಿಲ್ಲ, ಈ ಭಕ್ತಿಯನ್ನು ತನ್ನ ಮೇಲೆ ತೋರಿಸಬೇಕೆಂದು ಈ ದೊರೆ ಮಹದೇವಿಗೆ ಆಜ್ಞೆ ಮಾಡಿದಾಗ ಈಕೆ ಅರಮನೆ ಬಿಟ್ಟು ಎಲ್ಲವನ್ನು ತ್ಯಾಗಮಾಡಿ ಶ್ರೀಶೈಲಂ ಕಡೆ ನಡೆದಳು, ದಾರಿಯಲ್ಲಿ ಬಸವಣ್ಣನವರಿದ್ದ ಕಲ್ಯಾಣ ದಲ್ಲಿ ಬೇಟಿಯಾಗಿ ಅವರ ಅನುಭವ ಮಂಟಪದಲ್ಲಿ ತನ್ನ ಅನುಭವಗಳನ್ನು ಹಂಚಿಕೊಂಡಳು.  ಆದರೆ ಅಲ್ಲಮಪ್ರಭು ಈಕೆಯನ್ನು ಮೊದಲು ಅಂಗೀಕರಸಿಲಿಲ್ಲ, ಇವಳ ವೇಷ ಅಂದರೆ ನಗ್ನತೆ ಕಾರಣ ಇರಬಹುದು (ತನ್ನ ದೇಹವನ್ನು ತಲೆ ಕೂದಲನಿಂದ ಮಾತ್ರ ಮುಚ್ಚಿಟ್ಟುದ್ದಳು ಬಟ್ಟೆಯಿಂದ ಅಲ್ಲ) ಅವಳ ಶಿವ ಭಕ್ತಿ ಮತ್ತು ವಚನಗಳ  ಪ್ರಬಲದಿಂದ ಅನುಭವ ಮಂಟಪದಲ್ಲಿ ಹಿರಿಯ ಸ್ಥಾನವನ್ನು ಸಂಪಾದಿಸಿದಳು ಮತ್ತು ಅನೇಕರಿಗೆ ಇವಳು “ಅಕ್ಕ” ಆದಳು.

ಇವಳ ಕೊನೆ ದಿನಗಳನ್ನು ಶ್ರೀಶೈಲಂ ಗುಡ್ಡಗಳಲ್ಲಿ  ನೈಸರ್ಗಿಕವಾಗಿ  ಅಸ್ತಿತ್ವದಲ್ಲಿದ್ದ ಶಿವಲಿಂಗವನ್ನು ಪೂಜೆ ಮಾಡಿ ತನ್ನ ಕೊನೆ ದಿನಗಳನ್ನು ಕಳೆದಳು ಇದು ೧೧೬೦ ನಲ್ಲಿ ಅನ್ನುವ ನಂಬಿಕೆ.  ಅಕ್ಕನನ್ನು ಮದುವೆಯಾಗಿದ್ದ ಕೌಶಿಕ ದೊರೆ ಇಲ್ಲಿ ಬಂದು ಇವಳ ಕ್ಷಮೆ ಕೇಳಿದ ಅಂತ ಕೆಲವರ ಊಹೆ. ಇದಕ್ಕೆ ಸಮಂದಿಸಿದ ಒಂದು  ಅಕ್ಕನ ವಚನ ಇದೆಯಂತೆ

(ಅಕ್ಕಮಹಾದೇವಿ ಗುಹೆ ಗಳು ಶ್ರೀಶೈಲಂ ನಿಂದ ಸುಮಾರು ೧೦ ಕಿಲೋಮೀಟರ್ ನಲ್ಲಿ ಕೃಷ್ಣ ನದಿಯ ಹತ್ತಿರ ಇದೆ, ಈಗ ಈ ಪ್ರದೇಶ ತೆಲಂಗಾಣ ಕ್ಕೆ ಸೇರಿದೆ)

ಇವಳ ಸುಮಾರು ೪೩೦ ವಚನಗಳು ಬಹಳ ಜನಪ್ರಿಯವಾಗಿ ಜನರು  ಮಹಾದೇವಿಯನ್ನು ಅಕ್ಕ ಎಂದು ಗೌರಿಸಿದರು.

ಸಾವಿರ ವರ್ಷದಿಂದ ರಚಿಸಿದ ಅಕ್ಕನ ಒಂದು ವಚನ ಇವತ್ತಿಗೂ ಹೇಗೆ ಅನ್ವಯಿಸುತ್ತೆ ನೋಡಿ.

ಪುರುಷನ ಮುಂದೆ ಮಾಯೆ 

ಸ್ತ್ರೀಎಂಬ ಅಭಿಮಾನವಾಗಿ ಕಾಡುವುದು 

ಸ್ತ್ರೀ ಮುಂದೆ ಮಾಯೆ 

ಪುರುಷನೆಂಬ ಅಭಿಮಾನವಾಗಿ ಕಾಡುವುದು 

ಲೋಕವೆಂಬ ಮಾಯೆಗೆ ಶರಣಚಾರಿತ್ಯ ಮರುಳಾಗಿ ತೋರುವುದು 

ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ ಮರಹಿಲ್ಲ ಅಭಿಮಾನವು ಇಲ್ಲ 

AK Ramanujam ನವರ  Speaking of Shiva ಕೃತಿಯಲ್ಲಿ  ವಚನಗಾರರ  ನೂರಾರು ವಚನಗಳನ್ನು ಇಂಗ್ಲಿಷ್ ನಲ್ಲಿ ಭಾಷಾತರಿಸಿದ್ದಾರೆ.

—— ರಾಮಮೂರ್ತಿ, ಬೇಸಿಂಗ್ ಸ್ಟೋಕ್

                (ಚಿತ್ರಗಳು- ಗೂಗಲ್ ಕೃಪೆ)

5 thoughts on “ವಚನ, ದಾಸ ಮತ್ತು ಭಕ್ತಿ ಸಾಹಿತ್ಯದ ಪರಂಪರೆ- ಭಾಗ 1, ರಾಮಮೂರ್ತಿ

  1. ನಮ್ಮ ಸಾಹಿತ್ಯ ಪರಂಪರೆಯ ಬಗ್ಗೆ ಮತ್ತೆ ಮತ್ತೆ ಓದದಿದ್ದರೆ ಅದು ಹಾಗೆಯೇ ಮರೆತುಹೋಗುತ್ತದೆ. ಅದನ್ನು ತಿಳಿಯಲು ವಯಸ್ಸು ಅಡ್ಡ ಬರುವುದಿಲ್ಲ. ವಯಸ್ಸಾಗಿಯೂ ತಿಳಿದಿರದಿದ್ದರಷ್ಟೇ ಮುಜುಗರ. ಅನಿವಾಸಿ ಸಾಹಿತ್ಯ ಜಗಲಿಯಲ್ಲಿ ಕನ್ನಡ ಸಾಹಿತ್ಯದ ಭಕ್ತಿಮಾರ್ಗದ ಬಗ್ಗೆ ಇಷ್ಟೆಲ್ಲ ಓದಿ, ಇತ್ತೀಚೆಗಷ್ಟೇ ಕನ್ನಡ ಟೈಪ್ ಮಾಡಲು ಕಲಿತು ನೀವು ಬರೆದಿರುವ ಈ ಲೇಖನಗಳು ಅತ್ಯಂತ ಶ್ಲಾಘನೀಯ. ಇಲ್ಲಿ ನಮ್ಮದು ಎಂತಹ ವ್ಯಾವಹಾರಿಕ ಜೀವನವೆಂದರೆ ಯಾವಾಗಲೂ ಸಮಯಕ್ಕೆ ಅಭಾವ. ಇದ್ದರೆ, ಯಾವುದಕ್ಕೆ ಉಪಯೋಗಿಸುವುದು ಎನ್ನುವ ಪ್ರಶ್ನೆ. ಇಂತದ್ದರಲ್ಲಿ ಹಲವಾರು ಪುಸ್ತಕಗಳನ್ನು ಓದಿ ಅವುಗಳಿಂದ ಟಿಪ್ಪಣಿ ಮಾಡುತ್ತ ಅನಿವಾಸಿಗೆ ಲೇಖನ ಬರೆಯುವುದು ನಿಮ್ಮ ಹಿರಿತನ. ಸಣ್ಣ ಪುಟ್ಟ ತಪ್ಪುಗಳಾಗುವುದು ಸಹಜ. ಅದಕ್ಕೂ ಸ್ವಾಗತ ಆದರೆ ನಿಮ್ಮ ಸಾಹಿತ್ಯ ಪ್ರೇಮ, ಬರೆಯುವ ಉತ್ಸಾಹವನ್ನು ಮುಂದುವರೆಸಿ.

    Like

    • ನಾನು ತಪ್ಪುಹುಡುಕುತ್ತಿಲ್ಲ. ( ಅದು ತೀಕ್ಷ್ಣ ಆಪಾದಾನೆ!). ಸತ್ಯವೆಂದರೆ ನಿಮ್ಮ ಲೇಖನ ನನ್ನ ಆಸ್ಥೆ ಹೆಚ್ಚಿಸಿ ಉತ್ಸಾಹ ಬೆಳಸಿದ್ದಕ್ಕೆ ತಾನೇ ಆ ಎಲ್ಲ ವಚನಕಾರರಬಗ್ಗೆ ಮತ್ತೆ ಓದಿ ಉಜಳನೆ ಮಾಡುವಂತಾಯಿತು. ಆಗ ನನಗಾದ ಸಂಶಯನಿವಾರಣೆಗೆಂದೇ ನನ್ನಲ್ಲಿಯ ಆಧಾರ ಗ್ರಂಥ ಮತ್ತು ಇಂಟರ್ನೆಟ್ ನಲ್ಲಿ cross reference ಮಾಡುವಾಗ ಒಂದೆರಡು ವಿಷಯಗಳ ಬಗ್ಗೆ ಸ್ಪಷ್ಠತೆ ಅರಸಿ ತಿಳಿದು ಕೊಂಡೆ . ಧನ್ಯವಾದಗಳು. ಎರಡು ಮೂರು ವರ್ಷಗಳಿಂದ ನಿಮ್ಮ ಲೇಖನಗಳನ್ನು ಓದಿ ಪ್ರಕಟಿಸುವ ಸುದೈವ ನನ್ನದಾಗಿತ್ತು ಎಂದು ಹೇಳಬಲ್ಲೆ. ಮೇಲೆ ಹೇಳಿದಂತ ಎರಡನೆಯ ಭಾಗವನ್ನು ಎದುರು ನೋಡುತ್ತಿರುವೆ. ನಾನೀಗ ಭಾರತದಲ್ಲಿರುವದರಿಂದ ಪ್ರ ವಾಸದಲ್ಲಿ ಇಂಟರ್ನೆಟ್ ಸೌಲಭ್ಯದ ಭರವಸೆ ಇರುವದಿಲ್ಲ , ಕ್ಸಮಿಸಿ.

      Like

  2. One can see the effort behind this account of people who shaped our language, tradition and sanskara. Kudos to RamaMurthy. A typo(?) about the century of the times of Allama and. a couple here and there could be looked into. Willlook forward to Part 2. Shrivatsa Desai

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.