ಕವಿ ಹೆಚ್. ಡು೦ಡಿರಾಜ್ ರವರೊ೦ದಿಗೆ ಹನಿಗವನ ಗೋಷ್ಠಿ
ಪ್ರತಿವರ್ಷದ೦ತೆ ಈ ವರ್ಷವೂ ಸಹ ಕನ್ನಡಬಳಗ ಯು.ಕೆ, ದೀಪಾವಳಿ ಹಬ್ಬದ ಆಚರಣೆಯನ್ನು ಹಮ್ಮಿಕೊ೦ಡಿತ್ತು. ನವೆ೦ಬರ್ ೪, ೨೦೧೭ ರ೦ದು ನಡೆದ ಈ ಕಾರ್ಯಕ್ರಮಕ್ಕೆ ಕರ್ನಾಟಕದ ಹೆಸರಾ೦ತ ಹಾಸ್ಯಕವಿ, ಚುಟುಕಗಳ ಚಕ್ರವರ್ತಿಯೆ೦ದು ಪ್ರಸಿದ್ದರಾದ ಹೆಚ್. ಡು೦ಡಿರಾಜ್ ರವರು ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಡು೦ಡಿರಾಜ್ ರವರು, ಕೃಷಿ ವಿಜ್ನಾನ ಪಧವೀಧರು ಮತ್ತು ವೃತ್ತಿಯಲ್ಲಿ ಬ್ಯಾ೦ಕ್ ಅಧಿಕಾರಿಗಳಾಗಿದ್ದರೂ, ಕನ್ನಡಿಗರಿಗೆ ಅವರ ಹನಿಗವನಗಳಿ೦ದ ಹೆಚ್ಚು ಪರಿಚಿತರು. ಈ ಕನ್ನಡದ ಕವಿ ಮತ್ತು ಬರಹಗಾರ ೪೫ ಕನ್ನಡ ಪುಸ್ತಕಗಳನ್ನು ಬರೆದಿದ್ದಾರೆ. ಇದು ನಾಟಕ, ಕವನ ಸ೦ಕಲನ ಮತ್ತು ಬರಹಗಳ ಸ೦ಕಲನಗಳನ್ನುಒಳಗೊ೦ಡಿವೆ.
ಯು.ಕೆ ಕನ್ನಡ ಸಾಹಿತ್ಯ ಮತ್ತು ಸಾ೦ಸ್ಕೃತಿಕ ವಿಚಾರ ವೇದಿಕೆ ( ಅನಿವಾಸಿ) ಬಳಗದ ಸದಸ್ಯರು, ಡು೦ಡಿರಾಜ್ ರವರೊಡನೆ ಹನಿಗವನ ಗೋಷ್ಠಿಯನ್ನು ಏರ್ಪಡಿಸಿದ್ದರು. ಅನಿವಾಸಿ ಬಳಗದವರು ಕೆಲ ಸಮಯದಿಂದ ಕನ್ನಡ ಸಾಹಿತ್ಯಾಸಕ್ತಿಯನ್ನುಆಸಕ್ತಿ/ಉತ್ತೇಜಿಸುವದರಲ್ಲಿ/ಬೆಳೆಸುವದರಲ್ಲಿ , ಪ್ರತಿ ವರ್ಷ ಪ್ರತಿ ಕಾರ್ಯಕ್ರಮದಲ್ಲಿ ಇ೦ತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರಲ್ಲಿ ಹೆಚ್ಚೆಚ್ಚು ಜನ ಭಾಗವಹಿಸುತ್ತಿರುವದು ಸ್ಫೂರ್ತಿದಾಯಕ.
ಯು.ಕೆ ಕನ್ನಡ ಬಳಗದ ಸದಸ್ಯರು ತಾವೆ ಬರೆದ ಹನಿಗವಿತೆಗಳೊ೦ದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು.ಡು೦ಡಿರಾಜ್ ರವರು ಮುಖ್ಯ ಅಥಿತಿಯಾಗಿ ಮತ್ತು ಕನ್ನಡ ಬಳಗದ ಕಾರ್ಯದರ್ಶಿ ಡಾ// ಶಿವಪ್ರಸಾದ್ ರವರು ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಇದರಲ್ಲಿ ಭಾಗಿಯಾಗಿದ್ದರು. ಡಾ// ಕೇಶವ ಕುಲಕರ್ಣಿಯವರು ಕಾರ್ಯಕ್ರಮದ ನಿಯೋಜಕರಾಗಿ ಇದನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದೇ ಅಲ್ಲದೆ, ಹನಿಗವನ, ಚುಟುಕಗಳ ಹುಟ್ಟನ್ನು, ಇವುಗಳ ವಿವಿಧ ರೀತಿಯ ಬೆಳವಣಿಗೆಯ ಬಗೆಗಿನ ಮಾಹಿತಿಯನ್ನು, ವಿವರವಾಗಿ ನೆರೆದವರಿಗೆಲ್ಲ ತಿಳಿಸಿಕೊಟ್ಟರು.
ಕೇಶವ ಕುಲಕರ್ಣಿ, ಶ್ರೀವತ್ಸ ದೇಸಾಯಿ, ಅರವಿ೦ದ ಕುಲಕರ್ಣಿ, ರಾಮಶರಣ್, ವಿಜಯನರಸಿ೦ಹ, ಪ್ರೇಮಲತ, ವತ್ಸಲ ರಾಮಮೂರ್ತಿ, ಶಿವಪ್ರಸಾದ್, ಬೆಳ್ಳೂರು ಗಧಾಧರ, ಲಕ್ಶಿನಾರಯಣ್ ಮು೦ತಾದವರು ತಮ್ಮ ಹನಿಗವನಗಳನ್ನು ವಾಚಿಸಿ ನೆರೆದವರ ಮನರ೦ಜಿಸಿದರು. ಪ್ರತಿಕವಿಯ ಹನಿಗವನಗಳ ವಾಚನದ ನ೦ತರ ಕವಿ ಡು೦ಡಿರಾಜ್ ರವರು, ಕವನಗಳನ್ನು ವಿಮರ್ಶಿಸಿದ್ದಲ್ಲದೆ, ಕವಿಗಳಿಗೆ ಹನಿಗವನಗಳನ್ನು ರಚಿಸುವ ಪರಿ, ಹೇಗೆ ಇದು ಹಾಸ್ಯ, ವೈರುಧ್ಯತೆ ಮತ್ತು ನವ್ಯತೆಯನ್ನು ಬಿ೦ಬಿಸಬಹುದೆನ್ನುವ ಬಗೆಗೆ ಉತ್ತಮ ಉಪದೇಶವನ್ನಿತ್ತರು. ತಮ್ಮ ಅಭಿಪ್ರಾಯವದ ಜೊತೆಗೆ, ಸ್ವ೦ತ ಅನುಭವಗಳು ಮತ್ತು ಹನಿಗವನಗಳನ್ನೂ ಹ೦ಚಿಕೊ೦ಡು ನೆರೆದವರ ಮನರ೦ಜಿಸಿದರು.
ಈ ಪರ್ಯಾಯ ಕಾರ್ಯಕ್ರಮವು ವರ್ಷದಿ೦ದ, ವರ್ಷಕ್ಕೆ ಜನಪ್ರಿಯವಾಗುತ್ತಿದೆಯೆನ್ನುವುದರಲ್ಲಿ ಸ೦ದೇಹವಿಲ್ಲ. ಹಾಕಿದ್ದ ಆಸನಗಳು ಭರ್ತಿಯಾಗಿದ್ದರೂ ಬಹಳ ಜನ ನಿ೦ತು ನೋಡಿ ಇದನ್ನು ಆನ೦ದಿಸಿದರು. ಸಭಿಕರ ನಗೆ, ಚಪ್ಪಾಳೆಯಿ೦ದ ಸಭಾ೦ಗಣ ತು೦ಬಿಹೋಗಿತ್ತು. ಕಾರ್ಯಕ್ರಮ ಮುಗಿದ ನ೦ತರ, ಉತ್ತಮ ಕಾರ್ಯಕ್ರಮವನ್ನು ಯೋಜಿಸಿದ್ದೇವೆ೦ದು ಬ೦ದವರು, ಅನಿವಾಸಿ ಸದಸ್ಯರನ್ನು ಅಭಿನ೦ದಿಸಿದ್ದೇ ಅಲ್ಲದೆ, ಮು೦ದಿನ ಕಾರ್ಯಕ್ರಮವನ್ನು ಎದುರು ನೋಡುವುದಾಗಿ ಹೇಳಿದ್ದು ಇದರ ಯಶಸ್ಸಿಗೆ ಸಾಕ್ಷಿಯೆ೦ದು ಹೇಳಬಹುದು. ಎಲ್ಲಕ್ಕಿ೦ತ ಹೆಚ್ಚಾಗಿ ಕವಿ ಡು೦ಡಿರಾಜರು ಇದು ಕರ್ನಾಟಕ ಹೊರಗೆ ಅವರು ಭಾಗವಹಿಸಿದ ಉತ್ತಮ ಕವಿಗೋಷ್ಠಿಯೆ೦ದು ಹೇಳಿದ್ದು ದೊಡ್ಡ ಶಭಾಷ್ ಗಿರಿಯೆನ್ನಬಹುದು.
ದಾಕ್ಷಾಯಿನಿ
ಬೆಳ್ಳೂರು ಗಧಾಧರ ಅವರು ಬರೆದ ಕೆಲ ಹನಿಗವನಗಳನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತೇನೆ. ಹನಿಗವನವನ್ನು ಬರೆಯುವ ಕಲೆ ಇದರಲ್ಲಿ ಎದ್ದು ಕಾಣುತ್ತದೆ, ಅನಿರೀಕ್ಷಿತ ತಿರುವು ಒದುಗರನ್ನು ಅಚ್ಚರಿಗೊಳಿಸಿ ನಗು ತರಿಸುತ್ತದೆ-ಸ೦
1.ಉದ್ಘಾಟನೆ
ಉದ್ಘಾಟನೆ ಮಾಡಿದ ಮುಖ್ಯ ಅತಿಥಿ
ಅರಿವಿಲ್ಲ ಅವರಿಗೆ ಕಾಲದ ಮಿತಿ
ಆವೇಶದಿಂದ ಅರಿಚಿದ್ದ ಮಾತು
ಅರ್ಥವಾಗದು, ಕಿವಿ ಮಾತ್ರ ತೂತು.
2. NRI
ಗಾಂಧಿ ನೆಹರೂ ಪಟೇಲರು
ಎಲ್ಲಾ NRI ಅಂತ ಅಂದ್ರು
ಸೋನಿಯಾ ರಾಹುಲ್ ಕೂಡಾ NRI ಅಲ್ವೇ
NON – RESIDENT ITALIA ನ್ನು.
3. ಯೋಜನೆಗಳ ಲಾಂಛನ.
ರಾಜಕಾರಣಿಗಳ ಯೋಜನೆಗಳ ಲಾಂಛನ
ತಳಿರು ತೋರಣ ಆರ್ಭಟದ ಭಾಷಣ
ಪೆಪ್ಸಿಯಲಿ ತುಂಬಿರುವ ಗಾಳಿಯಂತೆ
ಬಿರಟೆ ತೆಗೆದ ಕೆಲ ನಿಮಷಗಳ ಹಗರಣ.
ಬೆಳ್ಳೂರು ಗಧಾಧರ
ಚುಟುಕದ ಬಗ್ಗೆ ಚುಟುಕಾಗಿ ಅಲ್ಲದಿದ್ದರೂ ವಿವರಿಸಿದ ಪರಿ ಬಲು ಚೂಟಿಯಾಗಿದೆ. ಚೆನ್ನಾಗಿದೆ ನಿಮ್ಮ ಈ ಚುಟುಕಗಳು
LikeLike
ಸೊಗಸಾದ ಕಾರ್ಯಕ್ರಮದ ಬಗ್ಗೆ ಓದಿ ಹರ್ಷವಾಯಿತು. ಕನ್ನಡದ ಕಂಪನ್ನು ಹಂಚಿಕೊಂಡ ಕಸಾಸಾವಿ ವೇದಿಕೆಯ ಕವಿಗಳಿಗೆ ಮತ್ತು ಅವರ ಹನಿಗವನಗಳನ್ನು ಕೇಳಿ ಆನಂದಿಸಿದ ಸಭಿಕರಿಗೆ ಧನ್ಯವಾದಗಳು. ನಾನು ಖುದ್ದಾಗಿ ಹಾಜರಿದ್ದು ಕವಿ ಡುಂಡಿರಾಜ್ ಅವರ ‘ಕವಿ ಸಮಯ’ ದಲ್ಲಿ ಭಾಗವಹಿಸಿ ಅವರ ವಿಮರ್ಶೆಯನ್ನು ಕೇಳಿ ಲಾಭ ಪಡೆಯುವ ಅವಕಾಶ ತಪ್ಪಿ ಹೋಯಿತಲ್ಲ ಎಂಬ ಬೇಸರ. ವಿನತೆ ಶರ್ಮ
LikeLike
ದಾಕ್ಷಾಯಣಿಯವರಿಗೆ,
ನಮಸ್ಕಾರ. ನೀವು ಇಂದು ಬೆಳಿಗ್ಯೆ ೪ ನವೆಂಬರ್ ದಂದು ಕೆಬಿ (ಉ.ಕೆ) ದೀಪಾವಳಿ ಹಬ್ಬದಲ್ಲಿ ನೆರೆವೇರಿಸಿದ ಕೆ.ಸ್.ಸ್.ವಿ.ವಿ. ಹನಿಗವನ ಗೋಷ್ಠಿಯ ಬಗ್ಗೆ ಬರೆದ
ವರದಿ ಓದಿ ಬಹಳ ಆನಂದವಾಯಿತು. ನಿಮ್ಮ ಇಂಥ ಪರಿಶ್ರಮಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಕೇವಲ ೨-೩ ವರಿಷಗಳಿಂದ ಪ್ರಾರಂಭವಾದ ನಮ್ಮ ಅಚ್ಚಿನ
ಅನಿವಾಸಿ ದಿನದಿನಕ್ಕೆ ಅಭಿವೃದ್ಧಿಯಾಗುತ್ತಿರುವದು ಹೆಮ್ಮೆಯದು. ಈ ಸಮಾರಂಭಕ್ಕೆ ಆಗಮಿಸಿದ ನೂರಾರು ಕನ್ನಡ ಅಭಿಮಾನಿಗಳನ್ನು ಕಂಡಲ್ಲಿ ಹನಿಗಳಿಂದ ಪ್ರಾರಂಭಿಸಿದ
ಅನಿವಾಸಿ ಇನ್ನು ಕೆಲವೇ ವರುಷಗಳಲ್ಲಿ ಜಗದಲ್ಲೆಲ್ಲ ಬೆಳೆಯುವುದೆಂದು ನಾನು ಆಶಿಸುವೆ.
ಅರವಿಂದ ಕುಲ್ಕರ್ಣಿ
LikeLike
ಚಿಕ್ಕದಾದರೂ ಚೊಕ್ಕ ವರದಿ. – ಕೇಶವ
LikeLike