ಎರಡನೆ ಪೀಳಿಗೆಯ ಇಂಗ್ಲಂಡಿನ ಯುವ-ಕನ್ನಡಿಗರು ಏನು ಹೇಳುತ್ತಾರೆ? – ಆಶೀರ್ವಾದ್ ಮೆರ್ವೆ, ಅನನ್ಯಾ ಪ್ರಸಾದ್ ಮತ್ತು ರವಿಶಂಕರ್ ಸರಗೂರ್ (ತರ್ಜುಮೆ: ಉಮಾ ವೆಂಕಟೇಶ್)

 

ಇದರ ಇಂಗ್ಲಿಷ್ ಆವೃತ್ತಿಗೆ ಈ ಕೊಂಡಿ ನೋಡಿ: http://wp.me/p4jn5J-fY

ಈ ವರ್ಷದ ಕನ್ನಡ ಬಳಗ ಯು.ಕೆ ಆಯೋಜಿಸಿದ್ದ ದೀಪಾವಳಿಯ ಸಮಾರಂಭದಲ್ಲಿ, ಮೊದಲನೆಯ ದಿನದಂದು, ಮೊತ್ತ ಮೊದಲ ಬಾರಿಗೆ, ಕನ್ನಡ ಬಳಗದ ಆಶ್ರಯದಲ್ಲಿ  “ಯುವ-ಜನ ಕಾರ್ಯಕ್ರಮವನ್ನು” ಒಂದು ಪರ್ಯಾಯ ಸಭೆಯನ್ನಾಗಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು, ಡಾ ರವಿಶಂಕರ್ ಸರಗೂರ್, ಕು. ಅನನ್ಯಾ ಪ್ರಸಾದ್, ಹಾಗೂ ಡಾ ಆಶೀರ್ವಾದ್ ಮೆರ್ವೆ ಅವರು ಉತ್ತಮ ರೀತಿಯಲ್ಲಿ ನಿರ್ದೇಶಿಸಿ ನಡೆಸಿದರು.

KBUK 2014 Youth programme 2ಈ ಕಾರ್ಯಕ್ರಮದ ಮುಖ್ಯ ಉದ್ದೇಶವು, ಹದಿಹರೆಯದವರು ಮತ್ತು ಯುವಜನರನ್ನು ಅವರದೇ ಆಸಕ್ತಿ ಮತ್ತು ಅಭಿರುಚಿಯಿರುವ ವಿಷಯಗಳಲ್ಲಿ ಉದ್ಯುಕ್ತರನ್ನಾಗಿಸಿ, ಕನ್ನಡ ಬಳಗ, ಯು.ಕೆ ಸಂಘವು ಅವರಿಗೆ ಯಾವ ರೀತಿಯಲ್ಲಿ ಸಂಗತವಾಗಬಹುದು ಎನ್ನುವ ಬಗ್ಗೆ ಅವರ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳುವುದಾಗಿತ್ತು. ಈ ಕಾರ್ಯಕ್ರಮವು, ಯು.ಕೆಯಲ್ಲಿ ವಾಸವಾಗಿರುವ ಎರಡನೆಯ ಪೀಳಿಗೆಯ ಯುವ-ಕನ್ನಡಿಗರಿಗೆ ಸಂಬಂಧಿಸಿದ ಹಲವಾರು ಕಾರ್ಯೋಪಯೋಗಿ ವಿಷಯಗಳ ಬಗ್ಗೆ ನಡೆಸಿದ ಚರ್ಚೆಯನ್ನು ಒಳಗೊಂಡಿತ್ತು. ಈ ಕಾರ್ಯಕ್ರಮವನ್ನು, ರಸಪ್ರಶ್ನೆಗಳ ಒಂದು ಆಸಕ್ತಿಪೂರ್ಣ ಸ್ಪರ್ದೆಯ ಮೂಲಕ ಅಂತ್ಯಗೊಳಿಸಲಾಯಿತು.
Read More »