ಕಾವ್ಯ ಅನುಸಂಧಾನ

“ಶಬ್ದವನ್ನು ಪೋಣಿಸಿ ರಚಿಸುವರು ಕಾವ್ಯ, ಸಾಹಿತ್ಯದ ಮಾಲೆಯನ್ನೇ ರಚಿಸಿದವರ ದರ್ಶನ ಲಭಿಸಿದ್ದು ನಮ್ಮೆಲ್ಲರ ಭಾಗ್ಯ!”

ನಿಜವಾಗಿಯೂ ಇದೊಂದು ಪುಣ್ಯ, ಭಾಗ್ಯ. ಸಾಹಿತಿಗಳ ದರ್ಶನ, ಅವರೊಂದಿಗೆ ಲಭಿಸಿದ ಒಡನಾಟ, ಅವರ ಮಾರ್ಗದರ್ಶನ ಪಡೆಯುವ ಸೌಭಾಗ್ಯ ಕನಸು ನನಸಾದ ಅನುಭವ…..

ಕನ್ನಡ ಬಳಗದಲ್ಲಿ ಸಾಹಿತ್ಯದ ಕೆಲಸ ಆಗುತ್ತಿಲ್ಲ, ಸಾಹಿತ್ಯಾಸಕ್ತರಿಗೆ ಭೇಟಿಯಾಗಿ, ವಿಚಾರ ವಿನಿಮಯ ಮಾಡುವ ಅವಕಾಶ ಬೇಕೆಂಬ ಒತ್ತಾಸೆಯಿಂದ ಉಮಾ, ಪ್ರಸಾದ್, ಶ್ರೀವತ್ಸ ಹಾಗೂ ಕೇಶವ್ ಮುಂದಾದರು; ಕನ್ನಡ ಸಾಹಿತ್ಯ, ಸಾಂಸ್ಕೃತಿಕ, ವಿಚಾರ ವೇದಿಕೆಗೆ ಬುನಾದಿ ಹಾಕಿದರು. ಮತ್ತೆ ಹಲವು ಸಮಮನಸ್ಕರನ್ನೊಡಗೂಡಿ ಜಾಲಜಗುಲಿಯಲ್ಲಿ ಕನ್ನಡ ವಾರಪತ್ರಿಕೆ ಪ್ರಾರಂಭವಾಯಿತು. ೨೦೧೪ರ ಅಕ್ಟೋಬರ್ ನಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಈ ಜಗುಲಿಯ ಉದ್ಘಾಟನೆ “ಅನಿವಾಸಿ” ಎಂಬ ಹೆಸರಿನೊಂದಿಗೆ ಪ್ರಸಿದ್ಧ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಂದ ಆದದ್ದನ್ನು ನೀವು ಓದಿದ್ದೀರ. ಆ ಸಮಾರಂಭದಲ್ಲಿ ಪ್ರಥಮ ಬಾರಿಗೆ ಕವಿ ಗೋಷ್ಠಿ ಸೊಗಸಾಗಿ ನಡೆದು, ವೇದಿಕೆಯ ಸದಸ್ಯರಲ್ಲದೇ, ಇತರ ಸಾಹಿತ್ಯಾಸಕ್ತರ ಗಮನ ಸೆಳೆಯಿತು; ವೇದಿಕೆಗೆ ಹೊಸ ಆಯಾಮ ಕೊಟ್ಟಿತು.

ಯುಗಾದಿ ಕಾರ್ಯಕ್ರಮಕ್ಕೆ ಹೊಸತನವಿರಬೇಕೆಂದು ಫೆಬ್ರುವರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಆಹ್ವಾನಿತ ಕವನಗಳನ್ನು ಅತಿಥಿಗಳಾದ ಬಿ.ಆರ್.ಲಕ್ಷ್ಮಣರಾಯರಿಗೂ, ಮಮತಾ ಸಾಗರ್ ಅವರಿಗೂ ಮೊದಲೇ ಕಳಿಸಿ, ಅವರ ಅನಿಸಿಕೆಗಳನ್ನೂ, ಕಾವ್ಯ ಕಮ್ಮಟವನ್ನೂ ನಡೆಸಿದರೆ, ನಮಗೆಲ್ಲ ಹೊಸ ಹುರುಪು ಬರುವುದು ಶತಃಸಿದ್ಧ ಎಂಬುದು ಎಲ್ಲರ ಒಮ್ಮತದ ಅನಿಸಿಕೆಯಾಗಿತ್ತು. ಈ ತರಹದ ಕಮ್ಮಟಗಳನ್ನು ನಡೆಸಿ ಅನುಭವವಿರುವ ಮಮತಾ ಸಾಗರ್ ನಮ್ಮೊಡನೆ ಕಾಲ ಕಳೆಯುವ ವಿಚಾರ ನಮ್ಮನ್ನು ಹುರಿದುಂಬಿಸಿದ್ದರಲ್ಲಿ ಸಂದೇಹವಿಲ್ಲ.  ಸಮಯ ಕಳೆದಂತೆ, ಚಿಮ್ಮಿದ ಹುರುಪಿನ ಒಸರೆ ಆರದಂತೆ ನಮ್ಮನ್ನೆಲ್ಲ ಪ್ರಸಾದ್ ಹಾಗೂ ಶ್ರೀವತ್ಸ ಪ್ರೋತ್ಸಾಹಿಸುತ್ತ ಕವನ ಬರೆಸಿದರು. ಬರೆದಿದ್ದನ್ನು ಮಮತಾ ಹಾಗೂ ಲಕ್ಷ್ಮಣರಾಯರಿಗೆ ಸಮಯಕ್ಕೆ ಸರಿಯಾಗಿ ಕಳಿಸಿ, ತೆರೆಮರೆಯಲ್ಲಿ  ಕಮ್ಮಟದ ಯಶಸ್ಸಿಗೆ ನಾಂದಿ ಹಾಡಿದರು.

Displaying image.jpgನಮಗೆಲ್ಲ ಬೆಳಗಿನಿಂದಲೇ ಕಾತರ. ಕಾರಣಾಂತರಗಳಿಂದ ತುಸು ತಡವಾಗಿಯೇ ಆರಂಭವಾದರೂ, ಪ್ರಸಾದರ ಪೀಠಿಕೆಯ ನಂತರ ಕಾರ್ಯಕ್ರಮವು ಕ್ಷಣಾರ್ಧದಲ್ಲಿ ತನ್ನ ಲಯವನ್ನು ಕಂಡುಕೊಂಡಿತು. ಲಯಕ್ಕೆ ಪೂರಕವಾಗಿ ಶ್ರೀವತ್ಸ ದೇಸಾಯಿ ಕಾರ್ಯಕ್ರಮವನ್ನು ಔಪಚಾರಿಕವಾಗಿ ಪ್ರಾರಂಭಿಸಿದರು. ಮುಖ್ಯ ಅತಿಥಿಗಳಾದ ಶ್ರೀಯುತ ಬಿ. ಆರ್. ಲಕ್ಷ್ಮಣರಾವ್ ಹಾಗೂ ಡಾ.ಮಮತಾ ಸಾಗರ ಅವರ ಪರಿಚಯವನ್ನು ಪ್ರೇಮಲತಾ ಮತ್ತು ರಾಮಶರಣ ಕ್ರಮವಾಗಿ ಮಾಡಿಕೊಟ್ಟರು.ರಾಮಶರಣ ಅವರು ಹೊಸಬರಿಗೆ ನಮ್ಮ ಜಾಲಜಗುಲಿ “ಅನಿವಾಸಿ”ಯ ಪರಿಚಯ ಮಾಡಿಸಿ ಕಳೆದ ದೀಪಾವಳಿ ಸಮಾರಂಭದಲ್ಲಿ  ಡಾ. ಹೆಚ್ ಎಸ್ ವೆಂಕಟೇಶ ಮೂರ್ತಿಯವರಿಂದ ಉದ್ಘಾಟನೆಯಾದದ್ದನ್ನು ನೆನಪಿಸಿ, ಇನ್ನೂ ಹೆಚ್ಚು ಹೆಚ್ಚು ಜನ “ಅನಿವಾಸಿ” ಜಗುಲಿಗೆ ಭೇಟಿ ನೀಡಿ ಎಂದು ಕಳಕಳಿಯಿಂದ ವಿನಂತಿಸಿದರು.

ಕಾರ್ಯಕ್ರಮದ ಆರಂಭವು ವೇದಿಕೆಯ ಉದಯೋನ್ಮುಖ ಕವಿಗಳ ಕವಿತೆ ವಾಚನದಿಂದ ಆಯಿತು. ಪ್ರೇಮಲತಾ ಅವರು ಮಗುವಿನ ನಗುವಿನ ಸಿಹಿಯನ್ನು ಕವಿತೆಯ ಮೂಲಕ ತುಂಬಾ ಸವಿಯಾಗಿ ಉಣಬಡಿಸಿದರು. ಸುದರ್ಶನರಾಯರು ಮಿತ್ರನಿಗೆ ಬರೆಯಲು ಹೊರಟ ಪತ್ರದ ಸನ್ನಿವೇಶವನ್ನು ನೈಜತೆಗೆ ಕನ್ನಡಿ ಹಿಡಿದಂತೆ ನಿರೂಪಿಸಿದರು. ಶ್ರೀವತ್ಸರ ‘ಅವಳ ನೆನಪು’, ಶಬ್ದಗಳು ಮಿತವಾಗಿದ್ದರೂ ಭಾವಪೂರ್ಣವಾಗಿದ್ದವು. ಸುಹಾಸ ಕರ್ವೆ ಅನಿವಾಸಿ ಭಾರತೀಯರ ಅಮ್ಮಂದಿರ ನಿಟ್ಟುಸಿರನ್ನು ತಮ್ಮ ‘ತಾಯಿ’ ಕವಿತೆಯಲ್ಲಿ ಹೊರಸೂಸುವಲ್ಲಿ ಯಶಸ್ವಿಯಾದರು.
ರಾಮಶರಣ ಅವರು ಬರೆದ ‘ವಿನ್ಸೆಂಟನ ನೆನಪು’ ಚಿತ್ರಕಾರ ವ್ಯಾನ್ ಗಾಘ್ ನ ಜೀವನವನ್ನು ಚಿತ್ರಿಸುವ ಪ್ರಯತ್ನ ಮಾಡಿತು. ಕೇಶವ ಕುಲಕರ್ಣಿ ‘ಮೈನೆ ಗಾಂಧಿ ಕೊ ನಹೀ ಮಾರಾ’ ಎಂಬ ಕವಿತೆಯಲ್ಲಿ ಸರಳವಾಗಿ ‘ಇದ್ದ, ಎದ್ದ, ಗೆದ್ದ, ಬಿದ್ದ’ ಪದಗಳನ್ನು ಅರ್ಥಪೂರ್ಣವಾಗಿ ಬಳಸಿ, ಗಾಂಧೀಜಿಯವರನ್ನು ನಮ್ಮ ಮಧ್ಯವೇ ಹುಟ್ಟಿಸಿ, ಬೆಳೆಸಿ, ಬೀಳಿಸಿದರು. ಪ್ರಸಾದರ ‘ಭರವಸೆ’ – ಆತಂಕ, ಭಯೋತ್ಪಾದನೆ ನಡುವೆಯೂ ಆಶಾಭಾವನೆಯನ್ನು ಚೆನ್ನಾಗಿ ನಿರೂಪಿಸಿತು.ಸುಧಾ ಮಧುಸೂದನ ಅವರ ‘ಆಕಾಶ ದೀವಿಗೆ’ ಹೊಸ ಬೆಳಕಿನೊಂದಿಗೆ ನವ ಉತ್ಸಾಹದ ಕಿರಣಗಳ ಜೊತೆಗೆ ಮುಗಿಲೆತ್ತಕ್ಕೇರುವ ಭಾವವನ್ನು ವರ್ಣಿಸಿದರು. ಹೇಮಾ ಅವರು ಲಯಬದ್ಧವಾಗಿ ತಮಿಳಿಗೆ ತಾವು ಅನುವಾದಿಸಿದ ಮಮತಾರವರ ‘ಮತ್ತೆ ಮಳೆ’ ಕವನವನ್ನು ಓದಿ ನಮ್ಮನ್ನು ರಂಜಿಸಿದರು. ಭಾಷೆ ನಮಗೆ ಸುಲಭವಾಗಿ ಅರ್ಥವಾಗದಿದ್ದರೂ ಅದರ ಭಾವ ನಮ್ಮನ್ನು ತಟ್ಟಿದಾಗ ಅದ್ಭುತವೆನಿಸಿತು. ಸಹಜವಾಗಿಯೇ ಈ ಕವಿತೆಗಳ ಬಗ್ಗೆ ಬರೆದದ್ದು ಈ ಅಲ್ಪಮತಿಯ ಅನಿಸಿಕೆಗಳು ಮಾತ್ರ.
ಸಾಹಿತ್ಯದ ಅಗಾಧ ಜ್ಞಾನ, ಬೆಟ್ಟದಷ್ಟು ಅನುಭವ ಹೊಂದಿದ ಮುಖ್ಯ ಅತಿಥಿಗಳು ಕಾವ್ಯದ ಬಗ್ಗೆ ತಮ್ಮ ಅನಿಸಿಕೆಯನ್ನು ತುಂಬಾ ಉತ್ತಮವಾಗಿ ಬಣ್ಣಿಸಿದರು.
‘ಮಗು-ನಗು’ ಮತ್ತು ‘ತಾಯಿ’ ಕವಿತೆಗಳು ತುಂಬಾ ಸುಂದರವಾಗಿ ಮೂಡಿಬಂದರೂ ಆ ಕವಿತೆಯ ವಿಷಯಗಳು ಪ್ರವಾಹಕ್ಕೆ ಅನುಗುಣವಾಗಿ ಇದ್ದವು. ಕವಿಯು ಪ್ರವಾಹಕ್ಕೆ ವಿರುದ್ಧವಾಗಿ, ವಿಭಿನ್ನವಾಗಿ ಯೋಚಿಸುವ ಕಲೆಯನ್ನು ಕೂಡ ಕರಗತ ಮಾಡಿಕೊಳ್ಳಬೇಕು. ಕವಿ ಉಪಯೋಗಿಸುವ ಶಬ್ದಗಳು  ಬರೀ ಅರ್ಥವನ್ನು ಕೊಡುವದಲ್ಲದೆ ಅವುಗಳ ಹಿಂದಿನ ಅವನ
ವಿಚಾರಗಳನ್ನು ಎತ್ತಿ ಹಿಡಿಯುವ  ಮೆಟಫರ್ (metaphor) ಆಗಿರುತ್ತವೆ ಎಂಬುದನ್ನು ಮಮತಾ ಸಾಗರ ಅವರು ಮನಮುಟ್ಟುವಂತೆ  ಪ್ರತಿಪಾದಿಸಿ ಸಭಿಕರನ್ನು ತಮ್ಮ ವಾಗ್ಝರಿಯ ಉತ್ಸಾಹದಲ್ಲಿ ಕೊಚ್ಚಿಕೊಂಡು ಹೋದರು.
‘ಮೈನೆ ಗಾಂಧಿ ಕೊ ನಹೀ ಮಾರಾ’ ಕವಿತೆ ‘ಇದ್ದ, ಎದ್ದ, ಗೆದ್ದ ಮತ್ತು ಬಿದ್ದ’ ಈ ನಾಲ್ಕು ಶಬ್ದಗಳಿಗೆ ಹೊಸ ಅರ್ಥವನ್ನೇ ಕಲ್ಪಿಸಿವೆ. ಲಕ್ಷ್ಮಣರಾಯರಿಗೆ ಈ ಕವಿತೆ ತುಂಬಾ ಇಷ್ಟವಾಯಿತು. ‘ನೆನಪು’,  ‘ವಿನ್ಸೆಂಟನ ನೆನಪು’, ‘ಆಕಾಶ ದೀವಿಗೆ’  ಮನಸಲ್ಲಿ ಮನೆ ಮಾಡಿದ ಕವಿತೆಗಳು. ‘ಭರವಸೆ’ ಕವಿತೆಯು ವರ್ತಮಾನ ವಸ್ತುಸ್ಥಿತಿಯಲ್ಲಿ ಕೂಡ ಹೊಸ ಆಶಾಭಾವವನ್ನು ಮೂಡಿಸಿತು. ‘ಪತ್ರದ ರೂಪಾಂತರ’ ನೈಜತೆಯನ್ನು, ಅಂತರ್ಜಾಲದಿಂದ ಕ್ಷೀಣಗೊಳ್ಳುತ್ತಿರುವ ಪತ್ರದ ಮಹಿಮೆಯನ್ನು ಚೆನ್ನಾಗಿ ಹೇಳಿದ್ದಾರೆ.

ಮಮತಾ ಸಾಗರರವರ ‘ಮಳೆ’ ಹಾಗೂ ‘ತಾಯಿ’ ಕವಿತೆ ಮೈಯಲ್ಲಿ ರೋಮಾಂಚನ ಹುಟ್ಟಿಸಿತು. ಅವರ ಕವನ ವಾಚನಾ ಶೈಲಿ ಅನುರೂಪ. ಶಬ್ದಗಳ ಮೋಡಿ, ಮತ್ತೆ ಮತ್ತೆ ಬರುವ ಸಾಲುಗಳು ನದಿಯ ಪ್ರವಾಹದಂತೆ ನಮ್ಮನ್ನು ಸುಳಿ ಸಿಕ್ಕಿಸಿ  ‘ಮಳೆ’ ಕವಿತೆಯ ಪ್ರೇಮಿಗಳ ನಡುವಿನ ಸಂಭಾಷಣೆಯಲ್ಲಿ ನಮ್ಮನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದಿತು. ಬಿ. ಆರ್. ಲಕ್ಷ್ಮಣರಾವ್ ಅವರ ‘ಅದ್ಭುತ ರಸದ’ ಬಗ್ಗೆ ಬರೆದ ಕವನ ಅವರ ವೈವಿಧ್ಯತೆಗೆ ಎತ್ತಿ ಹಿಡಿದ ಕನ್ನಡಿಯಂತಿತ್ತು.

ಇನ್ನೂ ಸ್ವಲ್ಪ ಇದ್ದರೂ ಬೇಕಿತ್ತು ಎಂದೆನಿಸುತ್ತಿದರೂ, ಮುಂದಿನ ಕಾರ್ಯಕ್ರಮಗಳಿಗೆ ಆಸ್ಪದ ಮಾಡಿಕೊಡಲು ಕಾರ್ಯಕ್ರಮಕ್ಕೆ ‘ಇತಿಶ್ರೀ’ ಹೇಳಲಾಯಿತು.ವಂದನಾರ್ಪಣೆಯ ಮೂಲಕ ಕಾರ್ಯಕ್ರಮನ್ನು ಮುಗಿಸಿ, ಮುಂದಿನ ಕಾರ್ಯಕ್ರಮಕ್ಕೆ ಎಲ್ಲರೂ ‘ತೃಪ್ತ’ ಮನಸ್ಸಿನಿಂದ ಮುಖ್ಯ ವೇದಿಕೆಯತ್ತ ತೆರಳಿದರು. ಈ ವರದಿಯನ್ನು ಓದಿದ ನಂತರ, ಈ ಜಾಲಜಗುಲಿಯ ಕೊಂಡಿಯನ್ನು ತಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಂಡು ಓದಿ; ನಿಮ್ಮಲ್ಲೂ ಬರೆಯುವ ಹುರುಪಿದ್ದರೆ, ಗದ್ಯ-ಪದ್ಯಗಳನ್ನು ಬರೆದು ಕಳಿಸಿ. ಕನ್ನಡ ಬಳಸಿ, ಉಳಿಸಿ, ಬೆಳೆಸಿ.

-ಸುಹಾಸ್ ಪುರುಷೋತ್ತಮ ಕರ್ವೆ/ರಾಂ  

ಬೆಲ್ಲವೇ ಬೆಲ್ಲ ಕನ್ನಡ ಬಳಗದ ಯುಗಾದಿ ಕಾರ್ಯಕ್ರಮದಲ್ಲಿ

ಯುಗಾದಿ ಎಂದ ಕೂಡಲೇ ಮೊದಲಿಗೆ ನೆನೆಸುವುದು ಬೇವುಬೆಲ್ಲ‘. ‘ಯುಗಾದಿಕಾರ್ಯಕ್ರಮದ ಮುಖಾಂತರ ನಾನು ಬೇವು ಅನುಭವಿಸಿದೆ ಮತ್ತೆ ಬೆಲ್ಲವೂ ಕೂಡಬೇವು ಅನುಭವಿಸಿದೆ ಎಂದಿದಕ್ಕೆ ಆಶ್ಚರ್ಯವೇ? ನಿಗೂಢತೆಯೇ? ನಿಲ್ಲಿರಿ! ಯಾವುದೇ ಕಲ್ಪನೆಯ ಗೋಪುರವನ್ನು ಕಟ್ಟದಿರಿ. ವೇದಿಕೆಯ ಈ ಹಿಂದೆ ನಡೆದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲಾಗದಕ್ಕೆ ಬೇಸರದಬೇವು ತಿಂದು, ಇವತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯನೂರೂಪಟ್ಟು ಅಧಿಕ ಬೆಲ್ಲದ ರುಚಿ ಸವಿದಂತಾಯಿತು.

image001 (3) ಅಭೀಪ್ಸಿತಾರ್ಥಂ ಸಿದ್ಧ್ಯರ್ಥಂ ಪೂಜಿತೋ ಯಃ ಸುರಾಸುರೈಃ | ಸರ್ವ ವಿಘ್ನ ಹರಸ್ತಸ್ಮೈ ಗಣಾಧಿಪತಯೇ ನಮಃ ||’  ಶ್ಲೋಕದಂತೆ, ಕಾರ್ಯಕ್ರಮವನ್ನುಯಶಸ್ವಿಗೊಳಿಸುವ ಆಕಾಂಕ್ಷೆಗಳನ್ನು ನೆರವೇರಿಸಲು ನಿರ್ವಿಘ್ನನನ್ನು ಆರಾಧಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತುಸುಸ್ವರ, ಸುಮಧುರ ಪ್ರಾರ್ಥನೆ ಗೀತೆಯು ಸಮಾರಂಭದ ಆರಂಭವನ್ನು ಶುಭವಾಗಿಸಿತು. ಸನ್ಮಾನ್ಯ ಅತಿಥಿಯರೆಲ್ಲ ದೀಪವನ್ನು ಬೆಳಗಿದಾಗ ನನಗೆ ತಮಸೋಮಾ ಜ್ಯೋತಿರ್ಗಮಯಶ್ಲೋಕದ ಹೊಸ ಅರ್ಥ ಕಂಡಿತು. ದೀಪ ಪ್ರಜ್ವಲನವು ಯಾಂತ್ರಿಕಬೆಳಕಿನಿಂದ ಸಾತ್ವಿಕಬೆಳಕಿನೆಡೆ ಸಾಗುವ ಅನುಭವ ನೀಡಿತು.    

ಡಾ.ಗಿರಿಧರ ಹಂಪಾಪುರ ಅವರ ನಿರೂಪಣೆ ಮೂಲಕ ಕಾರ್ಯಕ್ರಮವು ಔಪಚಿರಿಕವಾಗಿ ಪ್ರಾರಂಭಗೊಂಡಿತು. ‘ಕನ್ನಡ ಬಳಗದ ಸನ್ಮಾನ್ಯ ಅಧ್ಯಕ್ಷರಾದ ಡಾ.ಗೌಡಗೆರೆ ಜಯರಾಮ ಅವರು ಸಭಿಕರನ್ನೆಲ್ಲ ಉದ್ದೇಶಿಸಿ ಮಾತನಾಡಿದರು. ನಮ್ಮನ್ನಗಲಿದ ಇಬ್ಬರು ಕನ್ನಡ ಬಳಗದ ಸದಸ್ಯರು ಹಾಗೂ ನೇಪಾಳ ಮತ್ತು ಭಾರತದಲ್ಲಿ ಆದ ಭಯಂಕರ ಭೂಕಂಪದಲ್ಲಿ ಮೃತಪಟ್ಟವರ  ಸ್ಮರಣಾರ್ಥ image001 (4)ಪಾಲಿಸಿದ ಮೌ, ಭೂಕಂಪ ಸಂತ್ರಸ್ತರಿಗೋಸ್ಕರ ಸಂಗ್ರಹಿಸಿದ  ಚಂದಾ ಸಂಯೋಜಕರ ಸಾಮಾಜಿಕ ಕಳಕಳಿಯನ್ನು ಎತ್ತಿ  ತೋರಿಸಿದವು. ಎಲೆ ಮರೆಯ ಕಾಯಿಯಂತೆ ಮೂರು ದಶಕಗಳಿಗಿಂದ ಕನ್ನಡ ಬಳಗಕ್ಕೆ ಸೇವೆ ಸಲ್ಲಿಸಿದ ಡಾ.ರಾಜಾರಾಮ ಕಾವಳೆಯವರನ್ನು ಸನ್ಮಾನಿಸಿದ್ದು ಈ ಸಲದ ಕಾರ್ಯಕ್ರಮದ ವಿಶೇಷ. ಸಂಜಯನಂತೆ ನಿಷ್ಪಕ್ಷಪಾತರಾಗಿ, ಅನಾಮಿಕರಾಗಿಯೇ ಸಂಘದ ಸಕ್ರಿಯ ಸದಸ್ಯರಾಗಿದ್ದಲ್ಲದೇ, ತಂತ್ರಜ್ಞಾನ ಬದಲಾದಂತೆ, ಜಾಲ-ಜಗುಲಿಯ ನಿರ್ವಾಹಕರಾಗಿ ಮುಂಚೂಣಿ ವಹಿಸಿದ್ದನ್ನು ಸಭಿಕರಿಗೆ ಡಾ. ಶ್ರೀವತ್ಸ ದೇಸಾಯಿಯವರು ನೆನಪಿಸಿದರು. ಸಾಧಿಸಲು ವಯಸ್ಸಲ್ಲ, ಛಲ ಮುಖ್ಯ‘ ಎಂದು ಸನ್ಮಾನ ಸ್ವೀಕರಿಸಿದ ಕಾವಳೆಯವರು ಒಂದೇ ಮಾತಿನಲ್ಲಿ ಸಮಯೋಚಿತವಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಡಾ.ಹಂಪಾಪುರವರು ಹೇಳಿದ ಹಾಗೆ ಅವರಿಗೆ ಸನ್ಮಾನ ಎಂದರೆ ನಮ್ಮ ವೇದಿಕೆಗೆ / ಕನ್ನಡ ಬಳಗಕ್ಕೆ ಆದ ಸನ್ಮಾನಶತಶಃ ಸತ್ಯವೆನಿಸಿತು.

ಶ್ರೀ. ಬಿ. ಆರ್. ಲಕ್ಷ್ಮಣ ರಾವ್ ಅವರ ಅರ್ಥಗರ್ಭಿತ ಕಾವ್ಯಗಳು, ಸುಮಧುರ ಗಾಯನ ಮನಸ್ಸಿಗೆ ತುಂಬಾ ಮುದ ನೀಡಿತು. ‘ಸುಬ್ಬಾ ಭಟ್ಟರ ಮಗಳೇಹಾಡು,image001 (7) ಪ್ರತಿಯೊಂದು ಹಾಡಿನ ಇತಿಹಾಸ, ದಿ. ಸಿ. ಅಶ್ವಥ್ ನೆನಪುಗಳು, ಅವರಿಗೆ ಸಲ್ಲಿಸಿದ ಕೃತಜ್ಞತೆ, ಶ್ರೀ. ಬಿ. ಆರ್. ಲಕ್ಷ್ಮಣ ರಾವ್ ಅವರ ಸಹಜತೆಗೆ ಸಾಕ್ಷಿಯಾಗಿತ್ತುಶ್ರೀಮತಿ ಬಿ. ಜಯಶ್ರೀರವರು ವ್ಯಕ್ತಪಡಿಸಿದ ಮನೋಗತವು ಚಿಕ್ಕದಾಗಿಚೊಕ್ಕದಾಗಿ ಹೃದಯಕ್ಕೆ ತುಂಬಾ ಹತ್ತಿರದಾಗಿತ್ತು. ರಂಗಗೀತೆಯ ರಸದೌತಣ, ಧ್ವನಿಯ ಉತ್ತುಂಗತೆ ಅವರ ಘನತೆಗೆ ಎತ್ತಿ ಹಿಡಿದ ಕನ್ನಡಿಯ ಪ್ರತೀಕವಾಗಿತ್ತು. ಪ್ರಖ್ಯಾತ ವ್ಯಕ್ತಿಯಾದರೂ ನಮ್ಮೆಲ್ಲರ ನಡುವೆ ಬೆರೆತಿರುವುದನ್ನು ನೋಡಿದಾಗ ವೃಕ್ಷ ವಿಶಾಲವಾದರೂ, ಬೇರು ಭೂಮಿಯಲ್ಲಿ ಅಮರವೆಂಬಂತೆ ಅವರ ಸರಳತೆಯನ್ನು, ವಿನಯತೆಯನ್ನು ಸಾರಿ ಹೇಳುತಿತ್ತು.

 

ಚಿಣ್ಣರ ಕಾರ್ಯಕ್ರಮಗಳು, ತಬಲಾವಾಯಲಿನ್ ಸಮಾಗಮವಾಗಿದ್ದ ಬಾಲಕಲಾವಿದರು ಮೂಗಿನ ಮೇಲೆ ಬೊಟ್ಟಿಡುವಂತೆಕಲೆಯ image001 (5)ಪ್ರದರ್ಶನಗೈದರು. ಶ್ಲೋಕವಾಗಲಿಭಾವಗೀತೆಯಾಗಲಿ, ಹಣ್ಣು ಮಾರುವವನಾಗಲಿ ಅಥವಾ ವಿಷಸರ್ಪದ ನೃತ್ಯವಾಗಿರಲಿ ಎಲ್ಲವೂ ಕೂಡ ಪ್ರತಿಭೆಯ ದಾರದಲ್ಲಿ ಪೋಣಿಸಿದ ಸುಂದರ ಸಣ್ಣ ಮಣಿಗಳಂತಿದ್ದವು‘. ಈ ಮಣಿಗಳು ಮುಂದೆ ಮುತ್ತುಗಳಾಗಿ ಹೊರಹೊಮ್ಮಲಿ ಎಂಬುದು ನನ್ನ ಅಭಿಲಾಷೆ ಹಾಗೂ ಶುಭ ಹಾರೈಕೆಸುಗಮ ಸಂಗೀತ, ಚಲನಚಿತ್ರ ಗೀತೆಗಳು,  ‘ಪುಣ್ಯಕೋಟಿ‘ ನಾಟಕ ಕಾರ್ಯಕ್ರಮದ ರೂಪುರೇಷೆಯಲ್ಲಿ ತನ್ನ ವಿಶೇಷ ಛಾಪನ್ನು ಮೂಡಿಸಿದವು.

 

ಕಾವ್ಯ ಅನುಸಂಧಾನಕಾರ್ಯಕ್ರಮ ಸಾಹಿತ್ಯಾಸಕ್ತರನ್ನು ಒಟ್ಟಿಗೆ ಸೇರಿಸಿದ ಒಂದು ವೇದಿಕೆ ಎಂದರೆ ಅತಿಶಯೋಕ್ತಿ ಆಗಲಾರದು. ಡಾ.ಶ್ರೀವತ್ಸ ದೇಸಾಯಿ ಹಾಗೂ ಡಾ.ಶಿವಪ್ರಸಾದರವರು ಇದರ ಹಿಂದೆ ಪಟ್ಟ ಶ್ರಮ ಸಾರ್ಥಕವಾಯಿತೆಂದು ನನ್ನ ಅನಿಸಿಕೆimage001 (8)ಡಾ.ಮಮತಾ ಸಾಗರ ಅವರ ಕಾವ್ಯ ವಿಮರ್ಶನೆ, ಪ್ರವಾಹದವಿರುದ್ಧವಾಗಿ ಯೋಚಿಸಿ ಕಾವ್ಯ ಬರೆಯುವ ಕಲ್ಪನೆ ನವ ಕವಿಗಳಿಗೊಂದು ವಿಭಿನ್ನ ದೃಷ್ಟಿಯನ್ನುನೀಡಿತು.  ಈ ಜಾಲ ಜಗುಲಿಯ ಆಶ್ರಯದಲ್ಲಿ ನಡೆದ ಕವಿ ಗೋಷ್ಟಿಯ ವಿಶೇಷ ವರದಿ ಬರುವ ವಾರ ಪ್ರಕಟಿಸಲಿದ್ದೇವೆ. 

 

 

 

 

ಇಡೀ ಕಾರ್ಯಕ್ರಮದ ಬಗ್ಗೆ ಹೇಳಿ ಭೋಜನದ ಬಗ್ಗೆ ಹೇಳದಿದ್ದರೆ, ಸುಂದರ ಯುವತಿಯನ್ನು ಮೈತುಂಬ ಶೃಂಗರಿಸಿ ಕುಂಕುಮ ಇಡಲು ಮರೆತಂತೆ ಎಂದರೆ ತಪ್ಪಾಗಲಾರದು. ಅಚ್ಚುಕಟ್ಟಾದ ಸಂಯೋಜನೆ, ಯಶಸ್ಸಿಗೋಸ್ಕರ ಪಟ್ಟ ಸಂಯೋಜಕರ ಹಾಗೂ ಸ್ವಯಂಸೇವಕರ ಶ್ರಮ ಅರಸನಿಗೆ ಮುಕುಟವಿಟ್ಟಂತಿತ್ತು.

 

-ಸುಹಾಸ್ ಪುರುಷೋತ್ತಮ ಕರ್ವೆ