ನಾನು ಕಂಡ ಡಾ||ರಾಜಕುಮಾರ್-ಒಂದು ಸ್ಮರಣೆ: ಡಾ||ಶ್ರೀರಾಮುಲು ಮತ್ತು ಅಪ್ಪಾ ತೂಗು ನೀ ನನ್ನ -ಡಾ||ವೀರೇಶ್ ಪಾಟೀಲ್

ಆತ್ಮೀಯ ಓದುಗರೇ ! ಈ ವಾರದ ನನ್ನ ಸಂಪಾದಕೀಯ ಅವಧಿಯ ಕಡೆಯ ಸಾಪ್ತಾಹಿಕ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದ ಮೇರುನಟ, ವರನಟ ಡಾ||ರಾಜ್ ಕುಮಾರ್ ಅವರನ್ನು ತಮ್ಮ ಬಾಲ್ಯದಲ್ಲಿ ನೇರ ದರ್ಶನ ಪಡೆದ ಕೃತಾರ್ಥದ ಸವಿ ನೆನಪನ್ನು ನಮ್ಮ ಸದಸ್ಯರಾದ ಡಾ||ಶ್ರೀರಾಮುಲು ಅವರು ‘ ನಾನು ಕಂಡ ಡಾ|| ರಾಜ್ ಕುಮಾರ್- ಒಂದು ಸ್ಮರಣೆ ‘ ಎಂಬ ಶೀರ್ಷಿಕೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ೨೭ನೇ ಸೆಪ್ಟೆಂಬರ್ ನಂದು ಮಗಳ ದಿನಾಚರಣೆಯ ಅಂಗವಾಗಿ ಡಾ||ವೀರೇಶ್ ಪಾಟೀಲ್ ಅವರು ‘ಅಪ್ಪಾ ತೂಗು ನೀ ನನ್ನ ‘ ಎಂಬ ಶೀರ್ಷಿಕೆಯ ಮುಗ್ದ ಮನದ ಬೃಹತ್ ಭಾವನೆಯ ಮುದ್ದಾದ ಚಿತ್ರಗವನ ನಿಮ್ಮ ಮುಂದೆ ಹಂಚಿಕೊಂಡಿದ್ದಾರೆ. ಓದಿ ಪ್ರತಿಕ್ರಿಯಿಸಿ.
ನನ್ನ ಸಂಪಾದಕೀಯ ಅವಧಿಯ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಿ ಎಂದು ಭಾವಿಸುತ್ತೇನೆ. ಅನಿವಾಸಿಯ ಮುಂದಿನ ಸಂಪಾದಕಿಯಾಗಿ ಶ್ರೀಮತಿ. ಅಮಿತಾ ರವಿಕಿರಣ್ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ಶುಭ ಕೋರುತ್ತಾ ನಿರ್ಗಮಿಸುತ್ತಿದೇನೆ. ಧನ್ಯವಾದಗಳು. -ಸವಿ.ಸಂ

ನಾನು ಕಂಡ ಡಾ||ರಾಜಕುಮಾರ್- ಒಂದು ಸ್ಮರಣೆ


ನಾನು ಬಾಲ್ಯದಲ್ಲಿ ವಾಸವಾಗಿದ್ದ ಜಾಗ ಬೆಂಗಳೂರಿನ ಚಾಮರಾಜಪೇಟೆ. ಅದು ಚಾರಿತ್ರಿಕ ದೃಷ್ಟಿಯಿಂದ ಪುರಾತನವೂ
ಪ್ರಖ್ಯಾತವೂ ಆಗಿದ್ದು ಬೆಂಗಳೂರಿನ ಕೇಂದ್ರಬಿಂದು ಆಗಿತ್ತು ಮತ್ತು ”ಸಹೃದಯತೆ ಮತ್ತು ವಿಧೇಯತೆಗೆ ಮನೆಮಾತಾದ,
ಹಸನ್ಮುಖಿ ಸ್ಥಳೇಯ ಜನರಿಂದ ತುಂಬಿತ್ತು” ಎಂಬ ಖ್ಯಾತಿಯಿದ್ದ ಸ್ಥಳವಾಗಿತ್ತು. ಬ್ರಿಟಿಷರ ಆಡಳಿತ ಕಾಲದಲ್ಲಿ
ಚಾಮರಾಜಪೇಟೆಯ ಹೆಸರು ಎಲ್ಲರಿಗೂ ಗೊತ್ತಿರುತ್ತಿತ್ತು. ಅದರಲ್ಲೂ ಪ್ರತ್ಯೇಕವಾಗಿ ಏ ವಿ ರೋಡ್.
ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಭಾರತದ ವಿಭಜನೆಯಾದ ಮೇಲೆ ಹಿಂದೂ ಮುಸ್ಲಿಂ ಗಲಾಟೆಯಿಂದ ನಮ್ಮ ಪೂರ್ವಜರು
ಎಲ್ಲವನ್ನು ಕಳೆದುಕೊಂಡು ಬೆಂಗಳೂರಿಗೆ ಆಂಧ್ರ-ಕರ್ನಾಟಕ ಸರಹದ್ದಿನಿಂದ ವಲಸೆ ಬಂದರಂತೆ. ನಮ್ಮ ತಾಯಿಯವರು
ಆದವಾನಿ ಕಡೆಯವರು. ತೆಲುಗು ಮಾತೃಭಾಷೆ ಆದರೂ ಅವರ ಪೂರ್ವಜರು ಎರಡೂ ಕಡೆ ಕನ್ನಡವನ್ನು ಚೆನ್ನಾಗಿ
ಮಾತನಾಡುತ್ತಿದ್ದರು. ನಾನು ಜನ್ಮತಾಳಿ ಬೆಳೆದದ್ದು ಕರ್ನಾಟಕದ ಆಗ್ನೇಯಭಾಗದ ಚಿಂತಾಮಣಿಯಲ್ಲಿ. ಪ್ರಾಥಮಿಕ
ಶಾಲೆಯಿಂದ ಹಿಡಿದು ಎಲ್ಲವಿದ್ಯಾ ಭ್ಯಾಸ ನಾನು ಚಾಮರಾಜಪೇಟೆಯಲ್ಲಿದ್ದಾಗಲೇ ಮಾಡಿದ್ದು. ಕಳೆದ ವರ್ಷ ಚಾಮರಾಜಪೇಟೆಗೆ ಭೇಟಿ ಕೊಟ್ಟಾಗ ಎಲ್ಲಾ ಅಯೋಮಯ! ಇದು ನಾ ಬೆಳೆದು ಬಂದ ಸ್ಥಳವೇ ಎನಿಸಿತು. ಸುಮಾರು ನಾಲಕ್ಕುವರೆ ದಶಕಗಳಿಂದ ಇಂಗ್ಲೆಂಡ್ನಲ್ಲಿ
ವಾಸಿವಾಗಿರುವ ನನಗೆ ದಂಗು ಬಡದಂತಾಯಿತು. ನನ್ನಾಕೆ ಹುಟ್ಟಿದ್ದು ಬಳ್ಳಾರಿಯಲ್ಲಿ. ಆಕೆಯದೂ ವಿದ್ಯಾಭ್ಯಾ ಸ ಬೆಂಗಳೂರಿನ
ಚಾಮರಾಜಪೇಟೆಯ ಮಾಡೆಲ್ ಶಾಲೆಯಲ್ಲಿ ಮತ್ತು ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ.
ಚಾಮರಾಜಪೇಟೆ ಹೆಸರು ಬಂದದ್ದು ಆಗಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯೆರಿಂದ . ಆರಂಭದಲ್ಲಿ
ಜಯಚಾಮರಾಜೇಂದ್ರ ರಸ್ತೆ ಎಂದು ಕರೆಯಲ್ಪಡುತ್ತಿತ್ತು ನಂತರ ಚಾಮರಾಜಪೇಟೆ ಎಂದು ಹೆಸರುವಾಸಿ ಆಯಿತು.
ಚಾಮರಾಜಪೇಟೆ ನಿರ್ಮಾಣವಾಗಿದ್ದು 1880 ರಲ್ಲಿ ಎಂದು ಇತಿಹಾಸ ಹೇಳುತ್ತದೆ. ಆಗಿನ ಜನಸಂಖ್ಯೆ 80,000 ಮಾತ್ರ .
ಬೆಳೆಯುತ್ತಿದ್ದ ಜನಸಂಖ್ಯೆ , ಬಡತನ, ನೈರ್ಮಲ್ಯತೆ ಮತ್ತು ಆರೋಗ್ಯದ ಕೊರತೆಯಿಂದ ಕೆಲವು ನವವಿಸ್ತಾರಗಳನ್ನು
ನಿರ್ಮಾಣ ಮಾಡಿದರಂತೆ, ಅಂತಹ ಬಡಾವಣೆಗಳಲ್ಲಿ ಚಾಮರಾಜಪೇಟೆ ಮೊದಲನೆಯದು ಅಂತ ಇತಿಹಾಸಕಾರ ಸುರೇಶ
ಮೋನಾರಿಂದ ತಿಳಿದುಬರುತ್ತದೆ.


A V ರೋಡು


ಚಾಮರಾಜಪೇಟೆಯಲ್ಲಿ ಐದು ಮುಖ್ಯ ರಸ್ತೆಗಳಿದ್ದವು. ಅವಗಳನ್ನು ಸಾಮಾನ್ಯವಾಗಿ ಒಂದನೆ, ಎರಡನೇ , ಮೂರನೇ ,
ನಾಲ್ಕನೇ ಮತ್ತು ಐದನೇ ರೋಡುಗಳು ಎಂದು ಕರೆಯುವದು ಜನರೂಢಿಯಾಗಿತ್ತು. ನಾವು ವಾಸುತಿದ್ದ ಫಸ್ಟ್ ಮೇನ್
ರೋಡಿನ ಮತ್ತೊಂದು ಹೆಸರು A V Road ಎಂತಲೇ ಕರೆಯಲ್ಪಡುವ ರಸ್ತೆ. A V ಅಂದರೆ ಆಲ್ಬರ್ಟ್ ವಿಕ್ಟರ್. ಬಹಳ ಜನರು
ಆಲ್ಬರ್ಟ್ ವಿಕ್ಟರ್ ನ ಹೆಸರು ಕೇಳಿರದಿದ್ದರೆ ಆಶ್ಚರ್ಯವಿಲ್ಲ. ಈತ ವಿಕ್ಟೋರಿಯಾ ರಾಣಿಯ ಮೊಮ್ಮಗನಾಗಿದ್ದ. ಈತ 1889ರಲ್ಲಿ
ಭಾರತ ಪ್ರವಾಸ ಕೈಗೊಂಡು ಅನೇಕ ಕಡೆ ಭೇಟಿ ಕೊಟ್ಟನಂತೆ. ಆತನೇ ಬೆಂಗಳೂರಿನ ಪ್ರಖ್ಯಾತ ಲಾಲ್ಬಾಗ್ ದ ಗ್ಲಾಸ್ ಹೌಸ್ ಗೆ
ಅಡಿಪಾಯ ಹಾಕಿದ್ದ ದಾಖಲೆ ಇವೆ (30/11/1889 ರಂದು). ಚಾಮರಾಜಪೇಟೆಯಲ್ಲಿ ಸಮಾಜದ ತರಹದ ಜನರು
ವಾಸವಾಗಿದ್ದರು. ಅವರಲ್ಲಿ ಸಾಹಿತ್ಯ ಕ್ಷೇತ್ರದ ದಿಗ್ಗಜರು, ಸಂಸ್ಕೃತ ಪಂಡಿತರು ಮತ್ತು ಪ್ರಸಿದ್ಧ ವೈದ್ಯರು. ಇಲ್ಲಿನ ಪ್ರಸಿದ್ಧ
ಪುರಾತನ ಕಟ್ಟಡಗಳಲ್ಲಿ ಸಂಸ್ಕೃತ ಕಾಲೇಜು ಒಂದು. 1915 ರಲ್ಲಿ ಸ್ಥಾಪಿತವಾದ ಸುಪ್ರಸಿದ್ದ ಕನ್ನಡ ಸಾಹಿತ್ಯ ಪರಿಷತ್ತು
ಈಗಲೂ ಚಟುವಟಿಕೆಗಳಿಂದ ಕೂಡಿದೆ. ಬೆಂಗಳೂರಿನ ಪುರಾತನ ಕೋಟೆ, ವೆಂಕಟೇಶ್ವರಸ್ವಾಮಿ ದೇವಸ್ಥಾನ ಹಾಗು ಅದರ
ಎದುರಿಗೆ ಇರುವ ಮತ್ತು ನಾನು ಓದಿದ ಬೆಂಗಳೂರು ವೈದ್ಯಕೀ ಯ ಕಾಲೇಜು, ಟಿಪ್ಪು ಸುಲ್ತಾನನ ಅರಮನೆ ಮತ್ತು
ವಿಕ್ಟೋರಿಯಾ ಆಸ್ಪತ್ರೆ ಎಲ್ಲ ಒಂದಕ್ಕೊಂದು ಸಮೀಪದಲ್ಲಿ ಇರುವುದು ವೈಶಿಷ್ಠ್ಯ. ಪ್ರವಾಸಿಗರಿಗೆ ಈ ಸ್ಥಳಗಳನ್ನು ವೀಕ್ಷಸಿಲು
ತುಂಬ ಅನಕೂಲ. ಈಗ ಬೆಂಗಳೂರಿನ ಹೊಸ ಹೊಸ ವಿಸ್ತಾರಗಳು ಬಂದು, ತುಂಬ ಜನಕ್ಕೆ ಇದರ ಬಗ್ಗೆ ತಿಳದಿಲ್ಲ
ಎಂದುಕೊಳ್ಳುತ್ತೇನೆ.


AV ರೋಡು ಆಯಿತು ಆಲೂರು ವೆಂಕಟರಾವ್ ರಸ್ತೆ


1960 ರಲ್ಲಿ ರಸ್ತೆಗಳಿಗೆ ಪುನರ್ನಾಮಕರಣವಾದಾಗ ಆಲ್ಬರ್ಟ್ ವಿಕ್ಟರ್ ರೋಡಿಗೆ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ
ಕರ್ನಾಟಕದ ಕುಲಪುರೋಹಿತ ಎಂದೇ ಹೆಸರಾದ ಶ್ರೀ ಆಲೂರು ವೆಂಕಟರಾವ್ ಅವರ ಹೆಸರಿಟ್ಟರು. ಈ ಪ್ರದೇಶದ
ಸುತ್ತುಮುತ್ತಲೇ ಕನ್ನಡ ಚಳುವಳಿ ಆರಂಭವಾದದ್ದನ್ನು ನನ್ನ ಬಾಲ್ಯದ ದಿನಗಳಲ್ಲಿ ಕಂಡಿದ್ದೇನೆ.

1962 ರಲ್ಲಿ ನಾಡಿನ ಪ್ರಸಿದ್ಧ ಕಾದಂಬರಿಕಾರರಾಗಿದ್ದ ಆ ನ ಕೃಷ್ಣರಾವ್ ಅವರ ನೇತೃತ್ವದಲ್ಲಿ ಮತ್ತು ಖ್ಯಾತ ಪತ್ತೇದಾರಿ
ಕಾದಂಬರಿ ಲೇಖಕ ಮ ರಾಮಮೂರ್ತಿ ಅವರ ಸಹಾಯದಿಂದ ಕನ್ನಡ ಚಳುವಳಿ ಆರಂಭವಾದದ್ದು ಇಲ್ಲಿಂದಲೇ .
ಅದಾದ ನಂತರ ಕರ್ನಾಟಕದಲ್ಲಿ ಮತ್ತು ಕನ್ನಡ ಭಾಷೆ ಮತ್ತು ಜನರಲ್ಲಿ ಸಹ ಬಹಳಷ್ಟು ಬದಲಾವಣೆಯಾಯಿತು ಎಂದರೆ
ಅತಿಶಯೋಕ್ತಿ ಆಗಲಾರದು. ಅದು ಪ್ರಗತಿಯ ಮೊದಲ ಮೆಟ್ಟಲು. ಈ ಹೋರಾಟದಲ್ಲಿ ನಾನು ಸಹ ನನ್ನ ಇಬ್ಬರು ಮಿತ್ರರ
ಜೊತೆಗೆ ಭಾಗವಹಿಸಿದ್ದ ನೆನಪು. ಅವರಲ್ಲಿ ಒಬ್ಬನ ಹೆಸರು ಕೆ ಪ್ರಭಾಕರ ರೆಡ್ಡಿ. ಆತ ”ಕನ್ನಡ ವೇದಿಕೆ’’ಯ ಅಧ್ಯಕ್ಷ ಆಗಿದ್ದರು
ಮತ್ತು ನಿವೃತ್ತ ಕನ್ನಡ ಕಲಾವಿದರ ಏಳಿಗೆಗಾಗಿಯೂ ಬಹಳಷ್ಟು ಕೆಲಸ ಮಾಡಿದರು. ಅದಕ್ಕಾಗಿಯೇ ಕಳೆದ ವರ್ಷ ನಾನು
ಬೆಂಗಳೂರಿಗೆ ಭೇಟಿ ಕೊಟ್ಟಾಗ ನನ್ನ ಒಬ್ಬ ಮಿತ್ರನ ಹೆಸರನ್ನು ಆಲೂರು ವೆಂಕಟರಾವ್ ಪಕ್ಕದ ಅಡ್ಡರಸ್ತೆಗೆ (ಕೃ. ಪ್ರಭಾಕರ
ರೆಡ್ಡಿ ರಸ್ತೆ) ಕೊಟ್ಟದ್ದನ್ನು ನೋಡಿ ಅವರ್ಣನೀಯ ಆನಂದವಾಯಿತು.


ಕನ್ನಡ ಚಿತ್ರರಂಗದ ಉದಯ


1950 ರ ದಶಕದಲ್ಲಿ ತಮಿಳು ಮತ್ತು ಕೆಲವು ಮಟ್ಟಿಗೆ ತೆಲುಗು ಚಿತ್ರಗಳ ಪ್ರಭಾವ ಎಲ್ಲಕಡೆಗೆ ಪಸರಿಸಿತ್ತು. ಇದರಿಂದ
ಬಡವಾದದ್ದು ಕನ್ನಡ ಚಿತ್ರಗಳು. ಆಗಲೋ ಈಗಲೋ ಒಂದು ಕನ್ನಡ ಚಿತ್ರ ಬಿಡುಗಡೆ ಆಗುತಿತ್ತು. ಅವುಗಳಲ್ಲಿಯೂ ಖ್ಯಾತ
ರಂಗನಾಟಕ ನಟರೇ ಪಾತ್ರವಹಿಸುತ್ತಿದ್ದರು. ಅದರಲ್ಲಿ ಕೇಳಬರುತ್ತಿದ್ದ ಹೆಸರುಗಳಲ್ಲಿ ಒಬ್ಬರದು ಶ್ರೀ ಕೆಂಪರಾಜ್ ಅರಸು
ಅನ್ನುವವರು. ಅವರು ದಿವಂಗತ ಮುಖ್ಯ ಮಂತ್ರಿ ದೇವರಾಜ ಅರಸು ಅವರ ಸಹೋದರರಾಗಿದ್ದರು. ಅವರು ಒಂದು ಚಿತ್ರದಲ್ಲಿ
ಆಕಾಶದಲ್ಲಿ ಕುದುರೆ ಹಾರಿಸುವಂತೆ ತೋರಿಸಿಲು, ಒಂದು ಕುದುರೆಗೆ ಹಗ್ಗಳನ್ನು ಕಟ್ಟಿ ಮೇಲೆ ಏರಿಸಿ ಚಿತ್ರೀಕರಣ
ಮಾಡಿದರಂತೆ! ಆನಂತರ ಬಂದವರು ಆರ್ ನಾಗೇಂದ್ರ ರಾವ್, ಸುಬ್ಬಯ್ಯ ನಾಯ್ಡು (”ಭೂತಯ್ಯನ ಮಗ ಅಯ್ಯು ” ಖ್ಯಾ ತಿಯ
ಲೋಕೇಶ್ ಅವರ ತಂದೆಯವರು) ಮುಂತಾದವರು. ಈಗಿನವರಿಗೆ ಹೋಲಿಸಿದರೆ ಇವರಿಗೆ ದೊರೆಯುತ್ತಿದ್ದ ಸಂಭಾವನೆ
ಅತ್ಯಲ್ಪ. ತದನಂತರ ಬಂದ ಪ್ರಖ್ಯಾ ತ ಗುಬ್ಬಿ ವೀರಣ್ಣ ಮತ್ತು ಅವರ ಪತ್ನಿ ಬಿ ಜಯಮ್ಮ ಅವರಿಂದ ಕನ್ನಡ ನಾಟಕರಂಗಕ್ಕೆ
ಮತ್ತು ಚಿತ್ರರಂಗಕ್ಕೆ ಸಂದ ಕೊಡುಗೆ ಅಪಾರ.


ಉದಯೋನ್ಮುಖ ನಟ ರಾಜಕುಮಾರ್


ಅದು ಬಹುಶಃ 1954ನೆಯ ಇಸವಿ ಇರಬೇಕು. ರಾಜಕುಮಾರ್ ಅವರ ಬೇಡರ ಕಣ್ಣಪ್ಪ ಚಿತ್ರ ಬಿಡುಗಡೆಯಾಗಿ ಕನ್ನಡ
ಚಿತ್ರರಂಗದಲ್ಲೆಲ್ಲ ಜಯಭೇರಿ ಹೊಡೆಯಿತು. ಅದಕ್ಕೂ ಮೊದಲು ಶ್ರೀನಿವಾಸ ಕಲ್ಯಾ ಣ ಚಿತ್ರದಲ್ಲಿ ಒಬ್ಬ ಸಪ್ತಋಷಿಯಾಗಿ
ಪಾತ್ರವಹಿಸಿದ ರಾಜಕುಮಾರ್ ಅವರ ಧ್ವನಿಯನ್ನು ಹೀಯಾಳಿಸಿ ಅವರಿಗೆ ಬೇರೊಬ್ಬರು ಧ್ವನಿ ದಾನ ಮಾಡಿದದ್ದನ್ನು ಕೇಳಿದರೆ
ನಂಬಲೂ ಆಗುತ್ತಿಲ್ಲ. ಆ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಜನಗಳು ಈಗಲೂ ಗುನುಗುನಿಸುತ್ತಿರುತ್ತಾರೆ. ಆ
ಹಾಡುಗಳು ಮತ್ತು ರಾಜಕುಮಾರವರ ನಟನೆ ಚಿರಸ್ಮರಣೀಯ. ಅವುಗಳ ನೆನಪು ನನ್ನ ಮನದಲ್ಲಿ ಇಂದಿಗೂ ಉಳಿದಿದೆ.
ಅದೇ ಸಮಯದಲ್ಲಿ ಗಾಂಧಿನಗರದ ಗುಬ್ಬಿ ವೀರಣ್ಣ ಥೀಯೇಟರ್ನಲ್ಲಿ ’ಕನ್ನಡ ಕಲಾವಿದರು” ಎಂಬ ಹೊಸದಾಗಿ ಆರಂಭಿಸಿದ
ಗುಂಪು ಒಂದು ನಾಟಕವನ್ನು ಪ್ರದರ್ಶಿಸಿತು. ಅದರಲ್ಲಿ ಉದಯೋನ್ಮುಖ ನಟರಾಗಿದ್ದ ರಾಜಕುಮಾರ್, ಅದ್ವೀತಿಯ ಹಾಸ್ಯ
ನಟ ನರಸಿಂಹರಾಜು, ಖ್ಯಾತ ಬಾಲಕೃಷ್ಣ ಮತ್ತು ಜಿ ವಿ ಅಯ್ಯರ್ ಅವರು ಒಂದು ಕಂಪನಿಯನ್ನು ಸೃಷ್ಟಿಸಿ ನಾಲ್ಕು
ನಾಟಕಗಳನ್ನು ಪ್ರದರ್ಶಿಸಿದರು.
ಅದೇ ಕಾಲದಲ್ಲಿ ನಾನೊಬ್ಬ ಸ್ಕೌಟ್ ಸ್ವಯಂ ಸೇವಕನಾಗಿದ್ದೆ. ನಮ್ಮ ಶಾಲೆ ಫೋರ್ಟ್ ಹೈಸ್ಕೂಲ್ ಬಳಿ ಇರುವ
ಸ್ಕೌಟ್ ಹೆಡ್ಕ್ವಾ ರ್ಟರ್ಸ್ ನಿಂದ ಕೆಲವರನ್ನು ಆಯ್ಕೆ ಮಾಡಿದ್ದರು. ಅದೃಷ್ಟವಶಾತ್ ಅದರಲ್ಲಿ ನಾನೂ ಒಬ್ಬ. ನಮಗೆ ಆ
ಥಿಯೇಟರ್ ಉಸ್ತುವಾರಿಗೆ ಕಳುಹಿಸಿದ್ದರು. ಸುದೈವದಿಂದ ನನಗೆ ಸ್ಟೇಜ್ ನೋಡಿಕೊಳ್ಳಲು ಅವಕಾಶ ಸಿಕ್ಕಿತು. ನಿಜ ಹೇಳಬೇಕು ಅಂದರೆ ‘ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ‘ ಅನ್ನೋಹಾಗಿ ನಾಟಕ ಪ್ರಾರಂಭವಾಯಿತು. ಹೊರ ಬಾಗಿಲುಗಳನ್ನು ಮುಚ್ಚಿದ ಮೇಲೆ ನನಗೆ ವ್ಯತ್ಯಯವಿಲ್ಲದೆ ನಾಟಕಗಳನ್ನು ನೋಡುವ ಸದವಕಾಶ ಸಿಕ್ಕಿತು. ಆಗ ನನ್ನ ಸಂತೋಷಕ್ಕೆ ಪಾರವೇ ಇಲ್ಲ!
ನಟರಲ್ಲಿ ನಾಲ್ವರು ಬಿಳಿಯ ಪಂಚೆ ಮತ್ತು ಅಂಗಿ ತೊಟ್ಟು ವಿಜೃಂಭಿಸುತ್ತಿದ್ದರು. ಆದರೆ ನರಸಿಂಹರಾಜು ಬಂದಾಗ ತಮ್ಮ
ಬಲಗೈಗೆ ಬಿಳಿ ಡ್ರೆಸ್ಸಿಂಗ್ ಹಾಕಿಕೊಂಡಿದ್ದರು. ಅವರಿಗೆ ದೀಪಾವಳಿ ಪಟಾಕಿಯ ಅವಾಂತರದಿಂದ ಗಾಯವಾಗಿತ್ತೆಂದು ನಂತರ
ತಿಳಿಯಿತು. ಅವರೆಲ್ಲರ ಮಧ್ಯೆ ಶ್ವೇತಾಂಬರ ರಾಜಕುಮಾರವರು ತುಂಬಿದ ಕಳೆಯಿಂದ, ಧರೆಗೆ ಇಳಿದ ಗಂಧರ್ವನಂತೆ
ಕಾಣುತಿದ್ದರು. ಆ ನಾಟಕಗಳನ್ನು ನೋಡಿ ಅವರ ಮೇಲಿದ್ದ ಅಭಿಮಾನ ದ್ವಿಗುಣವಾಯಿತು ಅಂದರೆ ಆಶ್ಚರ್ಯ ವಲ್ಲ.

ಇದಾದ ಕೆಲವೇ ದಿನಗಳ ನಂತರ ರಾಜಕುಮಾರವರ ಇನ್ನೊ ಂದು ನಾಟಕವನ್ನು ನೋಡುವ ಅವಕಾಶ ಒದಗಿ ಬಂದಿತು. ಈ
ಬಾರಿ ’8 ಆಣೆ ತರಗತಿ’ಯಿಂದ ! ಅವರ ಸುಪ್ರಸಿದ್ಧ ”ವೀರ ಎಚ್ಚಮ ನಾಯಕ”ನ ನಾಟಕ ಅಂದು. ಅದರಲ್ಲಿ ಅವರದು
ಅದ್ವೀತಿಯ ಅಭಿನಯವಾಗಿತ್ತು ಎಂದರೆ ತಪ್ಪಾಗಲಾರದು. ವಿಶೇಷವಾಗಿ ಎಚ್ಚಮನಾಯಕ ಸಭಾಂಗಣಕ್ಕೆ ಪ್ರವೇಶಿಸುವ ದೃಶ್ಯ
ಚಿರಸ್ಮರಣೀಯ. ಕಣ್ಣುಗಳ್ಳನ್ನು ಕುಕ್ಕವ ವಿದ್ಯುತ್ ಶಕ್ತಿ ದೀಪಗಳು, ಭೋರ್ಗರೆವ ಪಕ್ಕ ವಾದ್ಯಗಳ ಧ್ವನಿಯಿಂದ,
ರಾಜಕುಮಾರವರು ಹೃದಯಾಳಾಂತರದಿಂದ, ಕೋಪಗರ್ಭಿತ ಮುಖ ಭಾವನೆಯಿಂದ ಆಕ್ರಮಣಕಾರರಿಂದ ಛಿನ್ನವಿಚ್ಛಿನ್ನವಾದ
ಉಗ್ರನರಸಿಂಹನನ್ನು ಸಂಬೋಧಿಸುವ ಮಾತುಗಳು ಪ್ರತಿ ಭಾರತೀಯನ ಎದೆಯನ್ನು ಛೇದಿಸಿ ನುಗ್ಗಿ ರಕ್ತವನ್ನು
ಬಿಸಿಮಾಡುತ್ತದೆ. ಈ ಪ್ರಕರಣಗಳು ಬಾಲ್ಯಾವಸ್ಥೆಯಲ್ಲಿದ್ದ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿದು ಹೋಗಿವೆ. ನಾನು ಅವರ
ಎಂತಹ ಕಟ್ಟಾ ಅಭಿಮಾನಿಯಾದೆ ಎನ್ನುವದರ ಸಾಕ್ಷಿಯೆಂದರೆ, ನಾನು ಈ ದೇಶಕ್ಕೆ ಬಂದಾಗ ನನ್ನ ಹತ್ತಿರ ಎರಡೇ
ಫೋಟೋಗಳು ಇದ್ದವು: ಒಂದು ನನ್ನ ಕುಟುಂಬದ್ದು, ಇನ್ನೊಂದು ಡಾಕ್ಟರ್ ರಾಜಕುಮಾರವರದು! He was an
institution. ಅವರಂಥ ಕಲಾವಿದರು ’ನ ಭೂತೋ ನ ಭವಿಷ್ಯತಿ!’ ಎನ್ನಬಹುದು.


– ಡಾ||ಶ್ರೀರಾಮುಲು

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣

ಅಪ್ಪಾ ತೂಗು ನೀ ನನ್ನ

-ಡಾ||ವೀರೇಶ್ ಪಾಟೀಲ್

ಜಾರ್ಜ್ ಎಡಾಲ್ಜಿ ಪ್ರಕರಣ – ಶ್ರೀ. ರಾಮಮೂರ್ತಿ

ಆತ್ಮೀಯ ಓದುಗರೇ ! ಪಾಶ್ಚಾತ್ಯ ದೇಶಗಳಲ್ಲಿ ಒಲಸೆಹೋಗಿರುವವರಿಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ವರ್ಣಭೇದಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪೀಡಿತರಾಗುತ್ತಿದ್ದಾರೆ. ಈ ವಾರದ ಸಂಚಿಕೆಯಲ್ಲಿ ಇಂತಹದೇ ಒಂದು ಪ್ರಕರಣವನ್ನು ನಮ್ಮ ಸದಸ್ಯರಾದ ಶ್ರೀ.ರಾಮಮೂರ್ತಿಯವರು ‘ಜಾರ್ಜ್ ಎಡಾಲ್ಜಿ ಪ್ರಕರಣ’ ಎಂಬ ಶೀರ್ಷಿಕೆಯಲ್ಲಿ ಒಂದು ಲೇಖನವನ್ನು ನಿಮ್ಮ ಮುಂದಿಟ್ಟಿದ್ದಾರೆ. ಓದಿ ಪ್ರತಿಕ್ರಿಯಿಸಿ. -ಸವಿ.ಸಂ

ಜಾರ್ಜ್ ಎಡಾಲ್ಜಿ ಪ್ರಕರಣ 

೧೯ನೇ ಶತಮಾನದಲ್ಲಿ ಈ ದೇಶದಲ್ಲಿ, ಅಂದರೆ ಇಂಗ್ಲೆಂಡ್  ನಲ್ಲಿ ನೆಲಸಿದ
ಭಾರತೀಯರ ಬಗ್ಗೆ ಮಾಹಿತಿ ಹೆಚ್ಚಾಗಿಲ್ಲ. ಆದರೆ ಒಂದು ಭಾರತೀಯ ಕುಟುಂಬದಲ್ಲಿ
ನಡೆದ ಒಂದು ನಿಜವಾದ ಘಟನೆಯನ್ನು ಸರ್ ಅರ್ಥರ್ ಕಾನಾನ್ ಡೊಯಲ್ ನಮ್ಮ
ಗಮನಕ್ಕೆ ತಂದಿದ್ದಾರೆ. ಇದು ಜಾರ್ಜ್ ಎಡಾಲ್ಜಿ (George Edalji ) ಪ್ರಕರಣ. 

ಈತನ ತಂದೆ ಮುಂಬೈನ ಶಪೂರ್ಜಿ ಎಡಾಲ್ಜಿ  ಪಾರ್ಸಿ ಜನಾಂಗದವರು..
ಭಾರತದಿಂದ ಇಲ್ಲಿಗೆ ಬಂದು ಕ್ರೈಸ್ತ ಮತಕ್ಕೆ ಬದಲಾಗಿ ಅನೇಕ ಚರ್ಚ್ ಗಳಲ್ಲಿ
ಕೆಲಸಮಾಡಿ ಕೊನೆಗೆ, ೧೮೭೬ ನಲ್ಲಿ ಸ್ಟಾಫರ್ಡ್ ಶೈರ್ ನ Great Wyrley ಸಂತ
ಮೇರಿ ಚರ್ಚ್ ನಲ್ಲಿ ಪ್ರದಾನ ಅರ್ಚಕರಾದರು (Vicar ) ಈತನ ಪತ್ನಿ ಚಾರ್ಲೆಟ್
ಇಂಗ್ಲಿಷ್ ನವಳು , ಇವರ ಮಗ ಜಾರ್ಜ್, ಜನನ ೨೨/೧/೧೮೭೬. ವಾಲ್ಸಾಲ್
ಗ್ರಾಮರ್ ಶಾಲೆಯಲ್ಲಿ ಓದಿ ನಂತರ ಬರ್ಮಿಂಗ್ ಹ್ಯಾಮ್ ನಲ್ಲಿ ಕಾನೂನು ಪದವಿ
ಪಡೆದು ವಕೀಲರಾಗಿ ಕೆಲಸ ಆರಂಭಿಸಿದ. ಆಗಿನ ಸಮಾಜದಲ್ಲಿ ವರ್ಣ ಭೇದ
ವಿಪರೀತವಾಗಿತ್ತು, ಒಬ್ಬ ಭಾರತೀಯ ಚರ್ಚ್ ಆಫ್ ಇಂಗ್ಲೆಂಡ್ ನಲ್ಲಿ vicar
ಆಗಿರುವುದು ಬಹಳ ಜನಕ್ಕೆ ಅಸಮಾಧಾನ ಇತ್ತು, ಚರ್ಚ್ ನಲ್ಲಿ ಕೆಲಸ ಮಾಡುತಿದ್ದ
ಆಳು ಇವರಿಗೆ ಅನೇಕ ಅನಾಮಧೇಯದ ಅವಮಾನದ ಪತ್ರಗಳನ್ನು ಬರೆದಿದ್ದಳು. 
ತನಿಖೆ ಆದ ಮೇಲೆ ತನ್ನ ತಪ್ಪನ್ನ ಒಪ್ಪಿಕೊಂಡು ಕೆಲಸಕ್ಕೆ ರಾಜೀನಾಮೆ ಕೊಟ್ಟು
ಹೋದಳು . ಜಾರ್ಜ್ ೧೬ ವರ್ಷದ ವಿದ್ಯಾರ್ಥಿ ಆಗಿದ್ದಾಗಲೂ ಸಹ ಅನಾಮಧೇಯ
ಕಾಗದಗಳು ಅವನ ಶಾಲೆಯಲ್ಲಿ ಹರಡಿ , ಇದಕ್ಕೆ ಜಾರ್ಜ್ ಕಾರಣ ಎನ್ನುವ ಆರೋಪ
ಸಹ ತಂದಿದ್ದರು.  ಸುಮಾರು ಐದು  ವರ್ಷಗಳ ಕಾಲ ನಿರಂತರವಾಗಿ ಶರ್ಪೂರ್ಜಿ
ಎಡಾಲ್ಜಿ ಅವರಿಗೆ ಅನಾಮಧೇಯ ಬೆದರಿಸುವ ಕಾಗದಗಳು ಬಂದಿದ್ದವು. ಆದರೆ
೧೯೦೩ರಲ್ಲಿ  ನಡೆದ ಪ್ರಸಂಗ ಇವರೆಲ್ಲರ  ಜೀವನವೇ ಬದಲಾಯಿತು.  

ಜಾರ್ಜ್ ಎಡಾಲ್ಜಿ 
ಚಿತ್ರ ಕೃಪೆ : ಗೂಗಲ್

ಗ್ರೇಟ್ ವೈರ್ಲಿ ಊರಿನಲ್ಲಿ  ಕುರಿ ಮತ್ತು ಹಸುಗಳ ಕೊಲೆ ಸುದ್ದಿ ಹರಡಿತು. ಯಾರೋ
ಮದ್ಯ ರಾತ್ರಿಯಲ್ಲಿ ಈ ಪ್ರಾಣಿಗಳಿಗೆ ಚಾಕುನಿಂದ ಹೊಟ್ಟೆ ಇರುದು ಕೊಂದಿರುವ  ಸುದ್ದಿ
ಕಾಡು ಕಿಚ್ಚನಂತೆ ಹರಡಿ ಪೊಲೀಸರಿಗೆ ಈ ಕೆಲಸ ಜಾರ್ಜ್ ಎಡಾಲ್ಜಿ ಮಾಡಿದ್ದಾನೆ
ಎಂಬ ಸುಳ್ಳು ಸುದ್ದಿ ಹಬ್ಬಿಸದರು. ಜಾರ್ಜ್ ಆವಾಗ ವಕೀಲನಾಗಿ ಕೆಲಸದಲ್ಲಿದ್ದ, ಆ
ಪ್ರದೇಶದ ಪೊಲೀಸ್ ಮುಖ್ಯಸ್ಥ ಕ್ಯಾಪ್ಟನ್  ಅಸ್ಟೋನ್, ಇವನ ತಂದೆ ಲಾರ್ಡ್ ಲಿಚ್
ಫೀಲ್ಡ್, ತುಂಬಾ ದೊಡ್ಡ ಮನೆತನ ದವರು, ಆದರೆ ಈ ಅಸ್ಟೋನ್ ಜನಾಂಗೀಯ
(Racist ) , ಸರಿಯಾಗಿ ತನಿಖೆ ನಡಿಸದೆ ಸುಳ್ಳು ಸಾಕ್ಷಿ
ಗಳನ್ನೂ  ಕೊಡಿಸಿ ನ್ಯಾಯಾಲಯದಲ್ಲಿ ಏಳು ವರ್ಷ ಶಿಕ್ಷೆ ಜಾರ್ಜ್
ಅನುಭವಿಸುವಂತೆ ಮಾಡಿದ. ಆದರೆ ಅನೇಕರಿಗೆ ಇಲ್ಲಿ   ಬಹಳ ಅನ್ಯಾಯ  ಆಗಿದೆ
ಎಂದು ತಿಳಿದು ಹತ್ತು  ಸಾವಿರ ಸಾರ್ವಜನಿಕರ  ಸಹಿ ಮಾಡಿದ ಅರ್ಜಿಯನ್ನು ಕೇಂದ್ರ
ಸರ್ಕಾರಕ್ಕೆ ಕಳಿಸಿದರು, ಅಂದಿನ ಗೃಹ ಮಂತ್ರಿ (Home Secretary ) ಈ
ಅರ್ಜಿಯನ್ನು ಪರಿಶೀಲಿಸಿ, ಆಗಲೇ ಮೂರು ವರ್ಷ ಶಿಕ್ಷೆ ಅನುಭಸಿದ್ದ  ಈತನನ್ನು
ಬಿಡುಗಡೆ ಮಾಡಿದರು. ಸ್ವತಂತ್ರವೇನು ಬಂತು ಆದರೆ ಕ್ರಿಮಿನಲ್ ದಾಖಲೆ
ಇದ್ದಿದ್ದರಿಂದ ಕಾನೂನಿ ಪ್ರಕಾರ ಅವನ ವಕೀಲ ವೃತ್ತಿಗೆ ವಾಪಸ್ಸು ಬರುವುದು
ಸಾಧ್ಯವಿರಲಿಲ್ಲ .   ಹಣ ಪರಿಹಾರದ  ಅರ್ಜಿ ಸಹ ತಿರಸ್ಕರಿಸಲಾಯಿತು. ಬೇರೆ ದಾರಿ
ತೋಚದೆ ಅವನಿಗಾಗಿದ್ದ ಅನ್ಯಾಯದ  ಬಗ್ಗೆ ವಿವರವಾಗಿ ವರದಿ ಬರೆದು ದಿ ಅಂಪೈರ್
ಅನ್ನುವ  ಪತ್ರಿಕೆಗೆ ಕಳಿಸಿದ.  ಇದು ಪ್ರಕಟವಾದಮೇಲೆ ಅದರ ಪ್ರತಿಗಳನ್ನು ಸರ್
ಆರ್ಥರ್ ಅವರಿಗೆ  ಕಳಿಸಿ  ಸಹಾಯವನ್ನು ಕೋರಿದ, ಅಗತಾನೇ ಇವರ ಪತ್ನಿ
ನಿಧನರಾಗಿದ್ದರು ,  ಆದರೂ ಈ ವಿಷವನ್ನು ಕೇಳಿ ಇವರೇ ಖುದ್ದು ವಿಚ್ಚಾರಣೆ ಮಾಡಲು
ನಿರ್ಧರಿಸಿ, ಲಂಡನ್ ನಲ್ಲಿ   ಇವರು ಇದ್ದ ಹೋಟೆಲ್ ನಲ್ಲಿ   ಬಂದು
ಭೇಟಿಯಾಗುವಂತೆ ಹೇಳಿದರು. ಜಾರ್ಜ್ ಸ್ವಲ್ಪ ಮುಂಚೆ ಬಂದು ಅಲ್ಲಿ ಇದ್ದ ದಿನ
ಪತ್ರಿಕೆಯನ್ನು ಓದುತ್ತಿದ್ದ ರೀತಿಯನ್ನು  ಸರ್ ಅರ್ಥರ್ ಗಮನಿಸದರು. ಆತ
ಪತ್ರಿಕೆಯನ್ನು ಕಣ್ಣಿಗೆ ತುಂಬಾ ಹತ್ತಿರ ಇಟ್ಟಿಕೊಂಡು  ವಾರೆ ನೋಟದಿಂದ ಓದುತ್ತಿದ್ದನ್ನು
ಗಮನಿಸಿಸಿ  ಇವನಿಗೆ ಸಮೀಪ ದೃಷ್ಟಿ (myopia) ಅನ್ನುವುದು ಖಚಿತವಾಯಿತು.

ಮತ್ತು  “Astigmatism ” ಸಹ ಇರುವಂತೆ ಅರಿವಾಯಿತು. ಇಂತವನು ರಾತ್ರಿ
ಕತ್ತಲೆಯಲ್ಲಿ ಹಸು ಕುರಿಗಳನ್ನು ಹತ್ಯ ಮಾಡುವುದು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ
ವಾಯಿತು.   ಅವನಿಂದ ಈ ವಿಚಾರವನ್ನು ಚರ್ಚಿಸಿ ಸರ್ ಅರ್ಥರ್ ಇವನಿಗೆ ಆಗಿರುವ
ಅನ್ಯಾಯದ ಬಗ್ಗೆ The Daily Telegraph ಪತ್ರಿಕೆಯಲ್ಲಿ (jan ೧೯೦೭) ಎರಡು
ಲೇಖನಗಳನ್ನು ಬರೆದು ಜಾರ್ಜ್ ನಿರಪರಾಧಿ ,  ಫ್ರಾನ್ಸ್ ದೇಶದಲ್ಲೋ ಡ್ರೇಫಾಸ್
ಅನ್ನುವ ಯಹೂದಿ (Jew ) ಸಹ ಪೊಲೀಸರಿಂದ ಇದೇರೀತಿಯಲ್ಲಿ ಅನ್ಯಾಯ ವಾಗಿತ್ತು,
ಇಲ್ಲಿ ಯಹೂದಿ ಬದಲು ಭಾರತೀಯನಿಗೆ ಇದೇ  ಪಾಡು ಬಂದಿದೆ  ಅನ್ನುವುದನ್ನ
ಬ್ರಿಟಿಷ್ ಸರಕಾರದ ಗಮನಕ್ಕೆತಂದರು . ಪ್ರಸಿದ್ಧ ಸಾಹಿತಿ  ಜಾರ್ಜ್ ಬರ್ನಾರ್ಡ್ ಶಾ
ಮತ್ತು ಜೆ ಎಂ ಬ್ಯಾರಿ ಮುಂತಾದವರು  ಇವರ  ಲೇಖನವನ್ನು  ಓದಿ ಅವರ ಬೆಂಬಲ
ನೀಡಿದರು . ಆದರೆ ಆಗಿನ ಕಾನೂನು ಪ್ರಕಾರ   ಮರುಪರಿಶೀಲನೆ ಜಾರಿಯಲ್ಲಿರಲಿಲ್ಲ.
ಇದನ್ನು ಓದಿ ಅನೇಕ ರಾಜಕಾರಣಿಗಳಿಗೆ ಬಹಳ ಆತಂಕ ಉಂಟಾಗಿ  ಅಂದಿನ ಗೃಹ
ಮಂತ್ರಿ ಹೆರ್ಬರ್ಟ್ ಗ್ಲಾಡ್ ಸ್ಟೋನ್ ನವರಿಗೆ ಈ ವಿಚಾರವನ್ನು ಪುನಃ
ಪರಿಶೀಲಸಬೇಕೆಂದು  ಮನವಿ ಮಾಡಿದರು. ನಂತರ ಮೂರು ಸದಸ್ಯರ ಸಮಿತಿ 
ನ್ಯಾಯಾಲಯದಲ್ಲಿ ಕೊಟ್ಟ ಸಾಕ್ಷಿಗಳು  ಅತ್ರಿಪ್ತಿಕರ ಮತ್ತು   ಪೊಲೀಸರ  ತನಿಖೆ
ಯೋಗ್ಯವಲ್ಲದ್ದು  ಆದ್ದರಿಂದ ಈತ ನಿರಪರಾಧಿ ಎಂಬ ತೀರ್ಮಾನಕ್ಕೆ ಬಂದು ಉಚಿತ
ಕ್ಷಮೆ (Free Pardon) ಕೊಟ್ಟರು. ಆದರೆ ಹಣಕಾಸಿನ ( Financial
Compensation) ಪರಿಹಾರ ಸಿಗಲಿಲ್ಲ.  

ಸರ್ ಅರ್ಥರ್ ಕಾನಾನ್ ಡೊಯಲ್
ಚಿತ್ರ ಕೃಪೆ : ಗೂಗಲ್


ಸರ್ ಅರ್ಥರ್ ಈ ವಿಶಯವನ್ನು ಇಲ್ಲೇ ಬಿಡಲಿಲ್ಲ, ನಿಜವಾದ ಅಪರಾಧಿ (culprit) 
ಯಾರು  ಎಂದು ಪತ್ತೆಮಾಡುವುದು  ಅವರ ಗುರಿಯಾಗಿತ್ತು.   ಪೊಲೀಸ್ ಅಧಿಕಾರಿ
ಜಾರ್ಜ್ ಅನ್ಸನ್ ಗಮನಕ್ಕೆ ಅನೇಕ ಕಾಗದಗಳನ್ನು ಬರೆದು ಇದನ್ನು ತಾವೇ ಖುದ್ದಾಗಿ
ಅಲ್ಲಿಗೆ ಹೋಗಿ  ವಿಚಾರಣೆ ನಡೆಸುವ ನಿರ್ಧಾರ ಮಾಡಿದರು. 
ಅಲ್ಲಿ ಸಿಕ್ಕಿದ ಸಾಕ್ಷಿಗಳಿಂದ  ಪೊಲೀಸರು ತಮ್ಮ ಕೆಲಸವನ್ನು ಸರಿಯಾಗಿ ವಿಚಾರಣೆ
ನಡೆಸಿಲ್ಲ ಎಂಬುದು ಸ್ಪಷ್ಟವಾಯಿತು. ಜಾರ್ಜ್ ೯ ೩೦ ಗಂಟೆಗೆ ಮಲಗುತ್ತಿದ್ದ ಬೆಳಗ್ಗೆ
ಬೇಗ ಕೆಲಸಕ್ಕೆ ಹೊರುಡುತಿದ್ದ ಪ್ರಾಣಿ ಗಳ  ಕೊಲೆ ನಾಡು ರಾತ್ರಿಯಲ್ಲಿ ಆಗಿತ್ತು, 

ಜಾರ್ಜ್  ಮಲಗುತ್ತಿದ್ದು  ಅವನ ತಂದೆ ಕೊಣೆಯಲ್ಲಿ  ಆದ್ದರಿಂದ ಇವನು ಮದ್ಯ
ರಾತ್ರಿಯಲ್ಲಿ ಹೊರಗೆ ಹೋಗಿದ್ದಾರೆ ತಂದೆಗೆ ಗೊತ್ತಾಗುತಿತ್ತು
.  ಪೋಲೀಸರು  ಜಾರ್ಜ್ ಮನೆಯಿಂದ ವಶಪಡಿಸಿಕೊಂಡಿದ್ದ ರೇಝರ್ ಮೇಲೆ ರಕ್ತದ
ಕಲೆಗಳು ಇರಲಿಲ್ಲ, ಅವನ ಬೂಟಿನಲ್ಲಿ  ಇದ್ದ ಮಣ್ಣು ಪ್ರಾಣಿಗಳು ಕೊಲೆಯಾದ್ದ
ಜಾಗದಿಂದ ಬಂದಿರಲಿಲ್ಲ. ಜಾರ್ಜ್ ಜೈಲ್ ನಲ್ಲಿ ಇದ್ದಾಗಲೂ ಪ್ರಾಣಿಗಳ ಹತ್ಯೆ
ನಡದಿತ್ತು  ಅದಕ್ಕಿಂತ ಆಶ್ಚರ್ಯದ ವಿಷಯ ಸತ್ತ ಪ್ರಾಣಿಯ ಒಂದು ಭಾಗವನ್ನು
ಜಾರ್ಜ್ ತೊಡುತ್ತಿದ್ದ  ಬಟ್ಟೆಯಿಂದ ಕಟ್ಟಿ ಇದರಲ್ಲಿ ಪ್ರಾಣಿಗಳ  ಕೂದಲು ಇದೆ
ಆದ್ದರಿಂದ ಇವನೇ ಅಪರಾಧಿ ಎಂದು ಹೇಳಿದ್ದ  ಸುಳ್ಳು ಸಾಕ್ಷಿ ಇವರಿಗೆ ಸಿಕ್ಕಿತು. ಇವರ
ತನಿಖೆ ನಿಜವಾದ ಕೊಲೆಗಾರನಿಗೆ ತಿಳಿವುಬಂದು ಗಾಬರಿಯಾಗಿ ಅನಾಮಧೇಯದ
ಎರಡು ಕಾಗದಗಳನ್ನು ಕಳಿಸಿದ , ಪ್ರಾಣಿಗಳ ಕೊಲೆ ಆದ್ದ ರೀತಿ ನಿಮಗೂ ಈ ಗತಿ
ಕಾಣಿಸುತ್ತೇನೆ ಅಂತ ಬೆದರಿಸಿದ , ಆದರೆ ಎರಡನೇ ಕಾಗದಲ್ಲಿ ಇವರಿಗೆ  ಒಂದು
ಸುಳಿವು ಸಿಕ್ಕಿತು.  ಇದರಲ್ಲಿ  ತನಗೆ ಅವನು ಓದುತ್ತಿದ್ದ  ವಾಲ್ಸಾಲ್  ಗ್ರಾಮರ್
ಶಾಲೆಯ ( ಜಾರ್ಜ್ ಓದಿದ್ದು ಇಲ್ಲೇ ಅಂದರೆ ಇವನ ಸಹಪಾಠಿ ) ಹೆಡ್ ಮಾಸ್ಟರ್
ರಿಂದ    ಆಗಿದ್ದ ಅವಮಾನವನ್ನು ಬರೆದಿದ್ದ. ಶಾಪೂರ್ಜಿ ಎಡಾಲ್ಜಿ ಗೆ ಬಂದಿದ್ದ
ಕಾಗದಲ್ಲೋ ಸಹ ಈ ವಿಚಾರ ಬಗ್ಗೆ ಬರೆದಿದ್ದು ಸರ್ ಅರ್ಥರ್ ಗಮನಕ್ಕೆ  ಬಂದು ಈ
ಬೆದರಿಕೆ ಕಾಗದ ಬರೆದವನು ಪ್ರಾಣಿಗಳ ಕೊಲೆಗಾರ ಅನ್ನುವ ಅಭಿಪ್ರಾಯಕ್ಕೆ ಬಂದರು. ಅಂದಿನ ಹೆಡ್ ಮಾಸ್ಟರ್ ಅವರನ್ನು ಸರ್ ಅರ್ಥರ್ ಭೇಟಿಮಾಡಿದಾಗ ಒಬ್ಬ ತುಂಟ ಹುಡುಗನನ್ನು ಹೊರಗೆ ಹಾಕಿದ್ದೆನೆಂದು (expelled )ಹೇಳಿ ಆ ಹುಡಗನ
ಹೆಸರು ಕೊಟ್ಟರು. ಇವನು ನಂತರ ಅದೇ ಹಳ್ಳಿಯಲ್ಲಿ butcher ಆಗಿ ಕೆಲಸ ಮಾಡುತಿದ್ದ . ಕೆಲವರು ಇವನನ್ನು ಕೊಲೆಯಾದ ಜಾಗದಲ್ಲಿ  ಆ ರಾತ್ರಿ  ನೋಡಿದ್ದ  ಬಗ್ಗೆ ಮಾಹಿತಿ ಕೊಟ್ಟರು.  ಇದನೆಲ್ಲಾ  ಸಂಗ್ರಹಿಸಿ ಸರ್ ಅರ್ಥರ್ ಗ್ರಹ ಮಂತ್ರಿಗಳಿಗೆ ಕಳಿಸಿ ನಿಜವಾದ ಕೊಲೆಗಾರನನ್ನು ಪತ್ತೆ ಹಚ್ಚಿದ್ದೇನೆ ಇವನ ಮೇಲೆ ಕ್ರಮ ತೆಗೆದುಕೊಳ್ಳಿ ಅಂತ ಮನವಿ ಮಾಡಿದರು. ಆದರೆ ಸರ್ಕಾರದ ಪ್ರತಿಕ್ರಿಯೆ ನಿರಾಶವಾಗಿತ್ತು, ಈ ವಿಷಯದ ಮೇಲೆ ಹೇಳಬೇಕಾಗಿದ್ದೆಲ್ಲಾ  ಹೇಳಲಾಗಿದೆ ಆದ್ದರಿಂದ ಇನ್ನೇನು ಕ್ರಮ ತೆಗೆದುಕೊಳ್ಳುವ ಅಗತ್ಯ ಇಲ್ಲ ಅನ್ನುವ ಹೇಳಿಕೆ ಬಂತು. 
ಇಲ್ಲಿ ಮೇಲೆ  ಬರೆದಿರುವುದು  ಒಂದು ಅನಿಸಿಕೆ (version) ಇಷ್ಟರಲ್ಲೇ  ಶ್ರಭಾನಿ  ಬೋಸ್ ಬರೆದಿರುವ ಪುಸ್ತಕ ಪ್ರಕಟವಾಗಲಿದೆ, (The
Mystery of the  Parsee Lawyer )  . ಈಕೆ Victoria and Abdul ಪುಸ್ತಕ
ಬರೆದವರು. ಗ್ರೇಟ್ ವೈರ್ಲಿ ಪ್ರಾಣಿ ಹತ್ಯ ಮತ್ತು ಇದರ ತನಿಖೆಗೆ  ಸಂಭಂದಿಸಿದ
ಮತ್ತು  ಸರ್ ಅರ್ಥರ್ ಬರೆದ ಅನೇಕ ಕಾಗದ ಪತ್ರಗಳು ಕೆಲವು ವರ್ಷದ ಹಿಂದೆ
ಲಂಡನ್ Bonamans Auction House  ನಲ್ಲಿ ಹರಾಜಿಗಿತ್ತು. ಈ ಸಂಗ್ರಹ ಈಗ
Portsmouth ಗ್ರಂಥಾಲಯದಲ್ಲಿ ಇದೆ. ಇದನ್ನು ಶ್ರಭಾನಿ ಅವರು ಓದಿ ಈ
ಪುಸ್ತಕವನ್ನು ಬರೆದಿದ್ದಾರೆ , ಇಲ್ಲಿ ಅವರ ನಿರ್ವಚನೆ ಬೇರೆ. ಸರ್ ಅರ್ಥರ್ ಖುದ್ದಾಗಿ
Great Wyrely ಹೋಗಿ ತನಿಖೆ ನಡೆಸಿದ್ದು ನಿಜ, ಆದರೆ ಪೊಲೀಸ್ ಅಧಿಕಾರಿ
ಕಾಪ್ಟನ್ ಅನ್ಸನ್  ಇವರಿಗೆ ಸಹಕಾರ ನೀಡಿದೆ ಅವರನ್ನು ತಪ್ಪು ದಾರಿಯಲ್ಲಿ ಕಳಿಸಿದ
ಅನ್ನುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ .  ಒಬ್ಬ ಸ್ಥಳೀಯ ನಿಂದ  ಇದು ನನ್ನ
ಕೆಲಸ ಅಂತ ಹೇಳಿ  ಒಂದು ಅನಾಮಧೇಯ ಕಾಗದವನ್ನು ಇವರಿಗೆ ಬರೆಸಿದ ,
ಇದನ್ನು ನಂಬಿ  ಸರ್ ಅರ್ಥರ್  ಗೃಹ ಮಂತ್ರಿಗಳಿಗೆ ಒಬ್ಬ ಅಪರಾಧಿಯನ್ನು
ಪತ್ತೆಮಾಡಿದ್ದೇನೆಂದು  ತಿಳಿಸಿದರು .  ಜಾರ್ಜ್ ಅನ್ಸನ್ ಇವರನ್ನು ಗೇಲಿ ಮಾಡಿ, ಈ
ಕಾಗದ ಬರೆದವನು ಪೊಲೀಸ್ ಇಲಾಖೆಗೆ ಪರಿಚಯದವನು ಸರ್ ಅರ್ಥರ್ ಇವನನ್ನು
ನಂಬಿಬಿಟ್ಟರು, ಈತ ಶರ್ಲಾಕ್  ಹೋಮ್ಸ್ ತರ  ಪತ್ತೇದಾರಿ ಅಲ್ಲ ಇದರ ಬಗ್ಗೆ ಹಿಂದೆ
ಮುಂದೆ ಗೊತ್ತಿಲ್ಲಲ್ಲವೆಂದು ಹೇಳಿ ಗೃಹ ಮಂತ್ರಿಗಳಿಗೆ ತಿಳಿಸಿದ.    
ಕೆಲವು ವರ್ಷಗಳ  ಹಿಂದೆ Arthur and George  ಅನ್ನುವ
ಧಾರಾವಾಹಿನಿ  ಟೆಲಿವಿಷನ್ನಲ್ಲಿ  ಬಂದಿತ್ತು. ಇದನ್ನು ಬರೆದವರು ಜೂಲಿಯನ್ ಬರ್ನ್ಸ್.
ಇಲ್ಲೋ ಸಹ ಸ್ವಲ್ಪ ಹೋಲಿಕೆ ಬೇರೆ ಇದೆ. 

೧೯೬೬ರಲ್ಲಿ ಜರ್ಮನ್ ಭಾಷೆಯಲ್ಲಿ ಒಂದು ಚಲನಚಿತ್ರ ಮತ್ತು BBC ರೇಡಿಯೊ
ನಲ್ಲೂ ಇದರಬಗ್ಗೆ ಒಂದು ಕಥೆ ಪ್ರಸಾರ ವಾಯಿತು, ಮೂಲ ಕಥೆ ಒಂದೇ ಆಗಿದ್ದರೂ ವಿಭನ್ನತೆ ತಮಗೆ ಬೇಕಾದಹಾಗೆ ತೋರಿಸಿದ್ದಾರೆ.

ಸೈನ್ಟ್ ಮೇರಿಸ್ ಚರ್ಚ್ Great Wyrley
ಚಿತ್ರ ಕೃಪೆ : ಗೂಗಲ್

ಆದರೆ ಒಟ್ಟಿನಲ್ಲಿ ಒಬ್ಬ ನಿರಾಪದಾರಿ ಭಾರತೀಯನಿಗೆ ಅನ್ಯಾಯವಾಗಿದ್ದು ನಿಜ.
ಪೊಲೀಸರಿಗೆ ಆಗ ವರ್ಣ ದ್ವೇಷದಿಂದ ನಿಜವಾದ ಅಪರಾಧಿಯನ್ನು ಕಂಡುಹಿಡಿಯುವ
ಪ್ರಯತ್ವನ್ನು ಮಾಡಲಿಲ್ಲ. ಈ ಪ್ರಕರಣ ಆದ ನೂರು ವರ್ಷದ ಮೇಲೆ, ೧೯೯೩ರಲ್ಲಿ ,
ಲಂಡನ್ ನಗರದಲ್ಲಿ ಸ್ಟಿವನ್ ಲಾರೆನ್ಸ್ ಎಂಬ ೧೭ ವರ್ಷದ ಆಫ್ರೋ
ಕ್ಯಾರೇಬಿಯಾನ್ ಹುಡಗನ ಕೊಲೆ ಆದಾಗ ಮೆಟ್ರೋಪಾಲಿಟನ್ ಪೊಲೀಸ್ ನಡೆಸಿದ
ತನಿಖೆ ಸಹ   ಕ್ಯಾಪ್ಟನ್ ಅನ್ಸನ್ ಮಾಡಿದ  ರೀತಿ ಇತ್ತು ನಿಜವಾದ ಕೊಲೆಗಾರನ್ನು
ಹಿಡಿಯುವ ಪ್ರಯತ್ನ ಗಂಭೀರವಾಗಿ ಮಾಡಲಿಲ್ಲ, ಎರಡು ಮೂರು ವರ್ಷದ ನಂತರ
ಅಂದಿನ ಲೇಬರ್  ಸರ್ಕಾರ ನೇಮಿಸಿದ ಹೈಕೋರ್ಟ್ ನ್ಯಾಯಾಧಿಶ William
Macpherson  ಇದರಬಗ್ಗೆ ವಿಚಾರಣೆ ನಡಿಸಿ, ಪೊಲೀಸ್ ಸಂಸ್ಥೆ “institutionally
racist” ಅಂತ ದೂರಿದರು. ನಂತರ ಪೊಲೀಸ ಇಲಾಖೆ ತನಿಖೆ ಸರಿಯಾಗಿ ನಡಿಸಿದ 
ಮೇಲೆ  ಕೊಲೆ ಮಾಡಿದ ಐದು ಜನರಲ್ಲಿ ಮೂರು ಜನ ಈಗ ಸೆರೆಯಲ್ಲಿ ಇದ್ದಾರೆ.  
ಎಡಾಲ್ಜಿ ಮನೆತನದವರು ಪಟ್ಟ ಪಾಡು ನಿಜ. ಆ  ಪ್ರಕರಣದ  ನಂತರ ಒಂದು
ಕಾನೂನು ಬದಲಾವಣೆ ೧೯೦೭ ರಲ್ಲಿ ಆಯಿತು. ಮೊದಲನೇ ಬಾರಿಗೆ ಈ ದೇಶದಲ್ಲಿ
Appeal Court ಸ್ಥಾಪನೆ ಮಾಡಿದರು.  
ಜಾರ್ಜ್ ಎಡಾಲ್ಜಿ ನಂತರ ಲಂಡನ್ನಲ್ಲಿ ವಕೀಲನಾಗಿ ಕೆಲಸಮಾಡಿ  ಕೊನೆ ದಿನಗಳು 
Welwyn Garden City  ಊರಿನಲ್ಲಿ ಅವನ ತಂಗಿ ಎಲಿಝಬೆತ್ ಮನೆಯಲ್ಲಿ  ಕಳೆದು
ಅವನ ೭೭ ವರ್ಷದಲ್ಲಿ (೧೯೫೩) ನಿಧನನಾದ .

 
-ರಾಮಮೂರ್ತಿ 

ಬೆಸಿಂಗ್ ಸ್ಟೋಕ್