ಸ್ಥಳ : ಆಲಿವರ್ ಬರ್ಡ್ ಹಾಲ್, ಸೋಲಿಹಲ್, ಬರ್ಮಿಂಗಹ್ಯಾಮ್
ಸಭೆಯಲ್ಲಿ ಹಾಜರಿದ್ದವರು: ಡಾ ಶ್ರೀವತ್ಸ ದೇಸಾಯಿ, ಡಾ ಶಿವಪ್ರಸಾದ, ಡಾ ಉಮಾ ವೆಂಕಟೇಶ್, ಡಾ ಕೇಶವ್ ಕುಲಕರ್ಣಿ, ಡಾ ಗಿರಿಧರ್ ಹಂಪಾಪೂರ್, ಡಾ ಸುದರ್ಶನ್, ಡಾ ಬಿ.ಎಸ್. ಸತ್ಯಪ್ರಕಾಶ್, ಡಾ ದಾಕ್ಷಾಯಣಿ ಗೌಡ, ಡಾ ಪ್ರೇಮಲತಾ, ಅನ್ನಪೂರ್ಣಾ ಆನಂದ್, ಆನಂದ್ ಕೇಶವಮೂರ್ತಿ, ಡಾ ರಾಮಶರಣ್, ಗುರುಪ್ರಸಾದ್, ಬಸವರಾಜ್.
Photo:©DrSatyaprakash
ಸಭೆಯ ಅಧ್ಯಕ್ಷರು: ಡಾ ಶ್ರಿವತ್ಸ ದೇಸಾಯಿ
೧. ಪರಿಚಯ: ಡಾಶ್ರಿವತ್ಸ ದೇಸಾಯಿ ಅವರು ಸಭೆಯ ಮೊದಲಲ್ಲಿ ಸದಸ್ಯರೆಲ್ಲರನ್ನೂ ಸ್ವಾಗತಿಸಿ, ಹಿಂದಿನ ಸಭೆಯಲ್ಲಿ ಗೈರುಹಾಜರಾಗಿದ್ದವರನ್ನು ತಮ್ಮ ಪರಿಚಯ ಮಾಡಿಕೊಡಲು ಆಮಂತ್ರಿಸಿದರು. ಹಲವು ಸದಸ್ಯರ ಪರಿಚಯ ವೈಖರಿ ಬಹಳ ಆಸಕ್ತಿಪೂರ್ಣವಾಗಿತ್ತು. ಅಧ್ಯಕ್ಷರು ಈ ವೇದಿಕೆಯ ಪ್ರಾರಂಭದ ಹಿನ್ನೆಲೆಯನ್ನು ವಿವರಿಸಿ, ಅದರ ಸಂಚಾಲ ಸಮಿತಿಯ ಮೊದಲ ಭೇಟಿಯ ವಿವರಗಳನ್ನು ನೀಡಿದರು. ವೇದಿಕೆಯ ಪ್ರಾರಂಭದ ಹಿಂದೆ ಯು.ಕೆ.ಕನ್ನಡ ಬಳಗದ ಹಲವು ಹಿರಿಯ ಮತ್ತು ಕಿರಿಯ ಸಾಹಿತ್ಯಾಭಿಮಾನಿ ಸದಸ್ಯರ ಆಸಕ್ತಿ ಮತ್ತು ಪರಿಶ್ರಮಗಳ ಬಗ್ಗೆಯೂ ಸಂಕ್ಷಿಪ್ತವಾಗಿ ಚರ್ಚಿಸಲಾಯಿತು. ಸಂಚಾಲನಾ ಸಮಿತಿಯ ಮೊದಲ ಸಭೆ, ೧೮ ಅಕ್ಟೋಬರ್ ೨೦೧೩ರಂದು, ಯುಟಾಗ್ಸೆಟರ್ ನಲ್ಲೂ, ಮತ್ತು ಎರಡನೆಯ ಸಭೆ ಶೆಫೀಲ್ಡಿನಲ್ಲಿ, ಡಾ ಶಿವಪ್ರಸಾದರ ಮನೆಯಲ್ಲಿ ನಡೆಯಿತೆಂದು ತಿಳಿಸಿದರು. ಈ ಸಭೆಗಳ ನಂತರ, ವೇದಿಕೆಯ ಜಾಲ-ಜಗುಲಿಯ ಅಂತರಜಾಲಾ ತಾಣವನ್ನು ”ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ,ಯು.ಕೆ,” ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಯಿತು.
೨. ಕೆ.ಎಸ್.ಎಸ್.ವಿ.ವಿ ಜಾಲ-ಜಗುಲಿಯ ವಿಚಾರಗಳು: ಜಾಲ-ಜಗುಲಿಯ ಪ್ರಧಾನ ಕಾರ್ಯನಿರ್ವಾಹಕ, ಡಾ ಕೇಶವ್ ಕುಲಕರ್ಣಿ ಅವರು, ಕನ್ನಡದಲ್ಲಿ ಟೈಪ್ ಮಾಡಲು ಲಭ್ಯವಿರುವ ವಿವಿಧ ಅನ್ವಯ ತಂತ್ರಾಂಶಗಳ ಬಗ್ಗೆ ವಿಶದವಾಗಿ ಮಾತನಾಡಿ, ಅವುಗಳನ್ನು ಬಳಸುವ ರೀತಿಯನ್ನು ವಿವರಿಸುತ್ತಾ, ಸಧ್ಯದಲ್ಲಿಯೇ, ಈ ವಿಷಯದ ಬಗ್ಗೆ ಲೇಖನವೊಂದನ್ನು ಸಿದ್ಧಪಡಿಸಿ, ವೇದಿಕೆಯ ಜಾಲ-ಜಗುಲಿಯಲ್ಲಿ ಪ್ರಕಟಿಸುವುದಾಗಿ ವರದಿ ಮಾಡಿದರು. ಸಧ್ಯದಲ್ಲಿ ಲೇಖನವನ್ನು ಪಿಡಿಎಫ಼ ಆವೃತ್ತಿಯನ್ನು ಬಳಸದೆ, ವರ್ಡ್ ಆವೃತ್ತಿಯಲ್ಲಿ ಸಿದ್ಧಪಡಿಸಿ, ಲೇಖಕರು ತಮ್ಮ ಲೇಖನಗಳನ್ನು ನೇರವಾಗಿ ಜಾಲ-ಜಗುಲಿಯಲ್ಲಿ ಪ್ರಕಟಣೆಗೆ ರವಾನಿಸಬೇಕಾಗಿಯೂ ತಿಳಿಸಿದರು. ಎಲ್ಲಾ ಲೇಖಕರಿಗೂ, ತಮ್ಮ ಲೇಖನಗಳ ಕರಡು ಪ್ರತಿಯನ್ನು, ಜಾಲ-ಜಗುಲಿಗೆ ಮಿನ್ನೇರಿಸುವ ಅಧಿಕಾರವನ್ನು ನೀಡುವುದಾಗಿಯೂ ಹೇಳಿದರು. ಪ್ರತಿಯೊಬ್ಬ ಸದಸ್ಯರೂ, ಜಾಲ-ಜಗುಲಿಯಲ್ಲಿ ಪ್ರಕಟವಾಗುವ ಲೇಖನಗಳನ್ನು ಓದಿ, ಅವುಗಳ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲು ಕೋರಿಕೊಂಡರು. ಗೂಗಲ್- ಅನ್ವೇಷಣೆಯ ಚಾಲಕ ತಂತ್ರಾಂಶದಲ್ಲಿ, ವೇದಿಕೆಯ ಮುಖ ಪುಟವನ್ನು ನೇರವಾಗಿ ಹುಡುಕಲು ಮತ್ತು ವ್ಯಾಪಕ ಓದುಗರ ಅನುಕೂಲತೆಗಾಗಿ, ಸೂಕ್ತವಾದ ಹೆಸರು-ಪಟ್ಟಿಗಳನ್ನು (Tags) ಗಳನ್ನು ಉತ್ತಮಪಡಿಸಬೇಕೆಂಬ ವಿಷಯದ (ಗೂಗಲ್ ವಿಸ್ತರಣೆ) ಬಗ್ಗೆ ಚರ್ಚಿಸಲಾಯಿತು. ಜಾಲ-ಜಗುಲಿಯ ಸಂದರ್ಶಕರ ಸಂಖ್ಯೆಯ ವಿವರಗಳನ್ನು, ವೀಕ್ಷಕರಿಗಾಗಿ ಪ್ರಕಟಿಸಬಹುದೆಂದೂ, ಸಧ್ಯದಲ್ಲಿ ಈ ಸಂಖ್ಯಾಂಶದ ವಿವರಗಳು, ಜಾಲ-ಜಗುಲಿಯ ಆಡ್ಯಳಿತ ನಿರ್ವಾಹಕರಿಗೆ ಮಾತ್ರ ಲಭ್ಯವಿರುವುದಾಗಿ ತಿಳಿಸಿದರು. ಸೂಕ್ತವಾದ ಹೆಸರು-ಪಟ್ಟಿಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಣೆಯ ಕಾರ್ಯದ ಜವಾಬ್ದಾರಿಯನ್ನು ಕೇಶವ್ ಮತ್ತು ಗಿರಿಧರ್ ಅವರಿಗೆ ಒಪ್ಪಿಸಲಾಗಿದೆ.
Photo courtesy Dr Rajaram Cavale
೨.೧ (ಹಿಂದಿನ ಸಭೆಯ ವರದಿಯ ವಿವರಗಳನ್ನು ಮೇಲಿನ ವಿಭಾಗದಲ್ಲಿ ತಿಳಿಸಲಾಗಿದೆ). ವೇದಿಕೆಯ ಲೇಖಕರಿಗೆ ಲೇಖನಗಳನ್ನು ಸಿದ್ಧಪಡಿಸುವಾಗ ಎದುರಾಗುವ ಸಮಸ್ಯೆಗಳನ್ನು ಚರ್ಚಿಸಲಾಯಿತು. ಇವುಗಳಲ್ಲಿ, ಕನ್ನಡ ಅಕ್ಷರಗಳನ್ನು ಟೈಪ್ ಮಾಡುವಾಗ ಉಂಟಾಗುವ ತೊಡಕುಗಳು, ಲೇಖನಗಳ ಜೊತೆಯಲ್ಲಿ ಛಾಯಾಚಿತ್ರಗಳನ್ನು ಜಾಲ-ಜಗುಲಿಗೆ ರವಾನಿಸುವ ವಿಧಾನಗಳು, ಹಕ್ಕುಸ್ವಾಮ್ಯ ಸಮಸ್ಯೆಗಳು, ಮತ್ತು ಕನ್ನಡ ಬಳಗ ಅಂತರಜಾಲಾ ತಾಣದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಗೆ ಕೊಂಡಿಯ ಸಂಪರ್ಕ ಸೌಲಭ್ಯವನ್ನು ಒದಗಿಸುವ ರೀತಿಯನ್ನು ಉತ್ತಮಗೊಳಿಸುವ ವಿಧಾನಗಳ ಬಗ್ಗೆ ಚರ್ಚಿಸಿ, ಅವುಗಳನ್ನು ಉತ್ತಮಗೊಳಿಸುವ ಬಗ್ಗೆ ಹಲವಾರು ಸಲಹೆಗಳನ್ನೂ ನೀಡಲಾಯಿತು.Read More »
ಸೂರ್ಯನ ಕಿರಣ, ನಲುಗುತ್ತಿರುವ ತಾಪಮಾನ, ಮೊಟಕಾಗುವ ಹಗಲುಗಳು, ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ನೆಲಕ್ಕೊರಗುವ ಗಿಡಮರದ ಎಲೆಗಳು, ಕ್ಷೀಣವಾಗುವ ಹಕ್ಕಿಗಳಿಂಚರ ಹೀಗೆ ಪ್ರಕೃತಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗುವ ಈ ಬದಲಾವಣೆಗಳು, ಉತ್ತರ ವಲಯದಲ್ಲಿನ ಶೀತ ದೇಶಗಳಲ್ಲಿ ವಾಸಿಸುವ ಜನತೆಯ ಪ್ರತಿ ವರ್ಷದ ಅನುಭವ. ಪ್ರಕೃತಿಯ ಈ ಪರಿವರ್ತನೆ ಕೇವಲ ಶರದೃತುವಿನ ಆಗಮನದ ಸೂಚನೆಯನ್ನಷ್ಟೇ ಅಲ್ಲ, ಮುಂಬರುವ ದೀರ್ಘವಾದ ಚಳಿಗಾಲದ ಖಿನ್ನತೆಯನ್ನು ನಮ್ಮಲ್ಲಿ ಉಂಟುಮಾಡುವ ಸಮಯವೆಂದು ನಮ್ಮೆಲ್ಲರ ಭಾವನೆ. ಆದರೆ ಈ ಶರದೃತುವಿನ ಆಗಮನ, ಪ್ರಕೃತಿಯ ಮತ್ತೊಂದು ಸುಂದರ ರೂಪವನ್ನು ತನ್ನೊಂದಿಗೆ ಹೊತ್ತು ತರುತ್ತದೆ. ಉತ್ತರ ವಲಯದಲ್ಲಿ ಬಹುತೇಕ ಮರಗಳು ಮುಂಬರುವ ಚಳಿಗಾಲದ ಪ್ರತಿಕೂಲ ಹವಾಮಾನವನ್ನೆದುರಿಸಲು, ತಮ್ಮ ಎಲೆಗಳಲ್ಲಿನ ಪಚ್ಚೆ ವರ್ಣವನ್ನು ತೊರೆದು ಕಾಮನಬಿಲ್ಲಿನ ಇತರ ವರ್ಣಗಳಿಗೆ ಮೊರೆಹೋಗುವ ದೃಶ್ಯ ನಿಜಕ್ಕೂ ಮನಮೋಹಕ! ಕಡಿಮೆಯಾಗುವ ಹಗಲಿನ ಅವಧಿ ಮತ್ತು ಸೂರ್ಯನ ತಾಪಮಾನ ಇವೆರಡರ ಪ್ರತಿಕೂಲವನ್ನೆದುರಿಸಲು, ಉತ್ತರ ವಲಯದ ಮರಗಿಡಗಳಲ್ಲಿನ ಎಲೆಗಳು ತಮ್ಮ ಹಸಿರು ಬಣ್ಣದ ವರ್ಣದ್ರವ್ಯವನ್ನು (pigment) ದ್ಯುತಿಸಂಷ್ಲೇಷಣೆಯ ಕಾರ್ಯದಲ್ಲಿ (Photosynthesis) ಸಮರ್ಥವಾಗಿ ಉಪಯೋಗಿಸಲಾಗದ ಕಾರಣದಿಂದ,ತಮ್ಮಲ್ಲಿನ ಇತರ ವರ್ಣದ್ರವ್ಯಗಳಿಗೆ ಬದಲಾಯಿಸುತ್ತವೆ. ಆ ಹಳದಿ, ಕೇಸರಿ, ಚಿನ್ನದ ಬಣ್ಣ, ಕೆಂಪು, ಕಂದು ಬಣ್ಣಗಳ ಅನೇಕ ಛಾಯೆಗಳನ್ನು ಹೊತ್ತು ವಿರಾಜಿಸುವ ಈ ಶರದೃತುವಿನ ಸೌಂದರ್ಯವನ್ನು ಕಣ್ಣಾರೆ ಕಂಡು ಸವಿಯಬೇಕು.
ನೋಡುವ ಅವಕಾಶವೊಂದು ಕಳೆದ ಅಕ್ಟೋಬರ್ ತಿಂಗಳಲ್ಲಿ ನನಗೆ ದೊರೆಯಿತು. ಇಂಗ್ಲೇಂಡ್ ದೇಶದಲ್ಲಿ, ಗ್ಲೌಸ್ಟರಶೈರಿನ ಪ್ರತಿಷ್ಟಿತ ಕಾಟ್ಸವೋಲ್ಡ್ ಪ್ರದೇಶದಲ್ಲಿರುವ ವೆಸ್ಟನಬರ್ಟ್ ವೃಕ್ಷೋದ್ಯಾನ, ಬ್ರಿಟಿಷ್ ದ್ವೀಪಗಳಲ್ಲಿನ ಅತ್ಯುತ್ತಮ ಉದ್ಯಾನವನಗಳಲ್ಲೊಂದು. ೧೯ನೆಯ ಶತಮಾನದ ಮಧ್ಯಭಾಗದಲ್ಲಿ ಆಂಗ್ಲರು ಪ್ರಾರಂಭಿಸಿದ ಸಸ್ಯಗಳ ಅನ್ವೇಷಣೆಯ ಉಚ್ಛ್ರಾಯಕಾಲದಲ್ಲಿ ನೆಡಲ್ಪಟ್ಟ ಈ ವೃಕ್ಷೋದ್ಯಾನವನ್ನು, ೧೮೨೯ರಲ್ಲಿ ರಾಬರ್ಟ್
ದ್ಯಾನವನ್ನು Old Arboretum ಮತ್ತು Silk wood ಎಂಬ ಎರಡು ಪ್ರಮುಖ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. Old Arboretum ಭಾಗದ ಭೂದೃಶ್ಯವನ್ನು ಬಹಳ ಚತುರತೆಯಿಂದ ವಿನ್ಯಾಸಗೊಳಿಸಲಾಗಿದ್ದು, ಈ ಪ್ರದೇಶದಲ್ಲಿ ಅತಿ ಭವ್ಯವಾದ ಮಾರ್ಗಗಳು, ಸುಂದರ ಧೀರ್ಘ-ದೃಶ್ಯಗಳನ್ನು ಕಾಣಬಹುದಾಗಿದೆ. ಇಲ್ಲಿರುವ ಅನೇಕ ವೃಕ್ಷಗಳನ್ನು ೧೮೫೦ನೆಯ ಇಸವಿಯಲ್ಲಿ ನೆಡಲಾಗಿದೆ. ಆದರೆ Silk-wood ವಿಭಾಗ ಮತ್ತೊಂದು ಅನುಭವವನ್ನು ನೀಡುತ್ತದೆ.ಇಲ್ಲಿ ಅನೇಕ ವಿಲಕ್ಷಣ ಸಸ್ಯ ಪ್ರಭೇಧಗಳನ್ನು ೧೩ನೆಯ ಶತಮಾನದಿಂದ ಕಾಪಾಡುತ್ತಿದ್ದಾರೆ. ಮೇಪಲ್ ಮರಗಳ ೨೦೦೦ ನಮೂನೆಗಳನ್ನು ವೆಸ್ಟನಬರ್ಟ್ ವೃಕ್ಷೋದ್ಯಾನದಲ್ಲಿ ಕಾಣಬಹುದು. ಜಪಾನಿನ ಮೇಪಲ್ ಮರಗಳದ್ದೇ ಸುಮಾರು ೩೦೦ ತಳಿಗಳಿವೆ. Acer palmatum ಎಂಬ ಜಪಾನ್ ದೇಶದ ಮೇಪಲ್ ಮರಗಳ ಶರದೃತುವಿನ ವರ್ಣ ವೈಭವ ಜಗದ್ಪ್ರಸಿದ್ಧ. ಚೈನಾ ದೇಶದ Chinese Spindle (Euonymus oxyphyllus) ತನ್ನ ಎಳೆಯ ಸುಂದರ ಗುಲಾಬಿ ಬಣ್ಣದ ಎಲೆಗಳಿಂದ ಕಂಗೊಳಿಸುತ್ತದೆ. ಉತ್ತರ ಇರಾನ್ ಮತ್ತು ಟರ್ಕಿ ದೇಶಗಳಿಂದ ತಂದು ಬೆಳೆಸಿರುವ, The Persian Ironwood (Parrotia persica) ಮತ್ತು ಹಿಕರಿ ವೃಕ್ಷಗಳು ಹಳದಿ ಬಣ್ಣಗಳ ಓಕುಳಿಯಾಡುತ್ತವೆ. ಜಪಾನ್ ಮತ್ತು ಚೈನಾ ದೇಶಗಳ ಮೂಲದ Katsura (Circidiphyllum japonicum) ವೃಕ್ಷ, ವರ್ಷದ ಈ ಸಮಯದಲ್ಲಿ ತನ್ನ ವರ್ಣಗಳ ಜೊತೆಗೆ, ಸುಟ್ಟ ಸಕ್ಕರೆ ಮತ್ತು ಕ್ಯಾಂಡಿ ಫ಼್ಲಾಸ್ ವಾಸನೆಗಳನ್ನು ಉತ್ಪತ್ತಿ ಮಾಡಿ ಪ್ರೇಕ್ಷಕರನ್ನು ಮೋಡಿ ಮಾಡುತ್ತವೆ. ಈ ಮರಗಳಲ್ಲದೆ ಬರ್ಚ್, ವಿವಿಧ ಜಾತಿಯ ಪೈನ್, ದೇವದಾರು, ಓಕ್, ಲಾರ್ಚ್ ಮತ್ತು ಸೈಪ್ರಸ್ ಜಾತಿಯ ಅನೇಕ ಪ್ರಭೇಧಗಳು ತಮ್ಮ ಕಾಮನಬಿಲ್ಲಿನ ಮೋಹಕ ವರ್ಣಗಳಿಂದ ನೋಡುವವರ ಮನಸೆಳೆಯುತ್ತದೆ.
ಗದು. ಶರದೃತುವಿನ ಈ ವರ್ಣ ವೈಭವ, ಪ್ರಕೃತಿಯ ಹೋಳಿ ಹಬ್ಬವೇ ಅಥವಾ ಹವಾಮಾನದ ತೀವ್ರತೆಯನ್ನೆದುರಿಸಿ ತಮ್ಮ ಅಸ್ತಿತ್ವವನ್ನು ಹಿಡಿದಿಡಲು ವೃಕ್ಷಗಳು ನಡೆಸುವ ನಿರಂತರ ಸೆಣಸಾಟವೆ! ನನ್ನ ಮನ ನಿರ್ಧರಿಸಲಾಗದೆ ತೊಳಲಿತು. ಅಲ್ಲಿ ನೆರೆದಿದ್ದ ನೂರಾರು ಜನಗಳ ಕಂಗಳ ಹೊಳೆಯುವ ನೋಟ, ನಿಸರ್ಗದ ಈ ವರ್ಣದೋಕುಳಿಯ ವೈಭವಕ್ಕೆ ಬೆರಗಾದ ಭಾವನೆಗಳನ್ನಂತೂ ನಿಸ್ಸಂದೇಹವಾಗಿ ತೋರುತ್ತಿತ್ತು. ನನ್ನ ಮನದಲ್ಲಿ ಬಹು ಕಾಲ ಅಚ್ಚಳಿಯದಂತೆ ಮೂಡಿರುವ ಆ ಮನಮೋಹಕ ದೃಶ್ಯವನ್ನು ನನ್ನ ಈ ಲೇಖನದಲ್ಲಿ ಸೆರೆ ಹಿಡಿಯುವ ಈ ಪ್ರಯತ್ನ ಓದುಗರ ಗಮನ ಸೆಳೆದು ಈ ವೃಕ್ಷೋದ್ಯಾನಕ್ಕೆ ಭೇಟಿ ನೀಡುವಂತೆ ಪ್ರಚೋದಿಸಲಿ ಎಂಬುದೆ ನನ್ನ ಹಾರೈಕೆ. ಈ ವೃಕ್ಷೋದ್ಯಾನದ ಎಲ್ಲಾ ವಿವರಗಳಿಗೆ ಭೇಟಿ ನೀಡಿ :
