ನೋಡು ಬಾ ನಮ್ಮೂರ ಸರಣಿ: ಮೈಸೂರೆಗೊಳುವ ಮೈಸೂರು! – ಉಮಾ ವೆಂಕಟೇಶ್

“ಚಿನ್ನದ ನಾಡಿದು ಮೈಸೂರು, ಶ್ರೀಗಂಧದ ಬೀಡಿದು ಮೈಸೂರು, ವೀಣೆಯ ಬೆಡಗಿನ ಮೈಸೂರು, ನಾಲ್ವಡಿ ಕೃಷ್ಣನ ಮೈಸೂರು” ಈ ಪದ್ಯದ ಸಾಲುಗಳಲ್ಲಿ ನನ್ನೂರ ಹಿರಿಮೆ, ಗರಿಮೆ, ಸಿರಿ-ಸಂಪತ್ತು ಮತ್ತು ಸೌಂಧರ್ಯಗಳು ತುಂಬಿ ತುಳುಕುತ್ತವೆ. ಸರ್ ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ಪಡೆದಿದ್ದ ನನ್ನೂರು, ತನ್ನ ವೈಭವದ ಪರಾಕಾಷ್ಠೆಯಲ್ಲಿದ್ದಾಗ, ಮಾದರಿ ಮೈಸೂರು” ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಒಡೆಯರ್ ಮನೆತನದಿಂದ ಆಳಲ್ಪಟ್ಟ ಈ ಊರಿನಲ್ಲಿ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ವಿಧ್ಯಾಭ್ಯಾಸ ಹೀಗೆ ಒಂದೇ ಎರಡೇ, ಎಲ್ಲಾ ರಂಗಗಳಲ್ಲೂ ತನ್ನ ಹಿರಿಮೆಯನ್ನು ಮೆರೆದ ಈ ಮಹಿಷಪುರದಲ್ಲಿ, ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ ನನ್ನ ಮನದಲ್ಲಿ, ಅಲ್ಲಿನ ನೆನಪುಗಳು ಇನ್ನೂ ಹಚ್ಚಹಸಿರಾಗಿಯೇ ಉಳಿದಿದೆ.

Read More »

“ಅಕ್ಕ” ವಿಶ್ವ ಕನ್ನಡ ಸಮ್ಮೇಳನ 2014 – ಉಮಾ ವೆಂಕಟೇಶ್ ಅವರ ವರದಿ

ಸಿಲಿಕಾನ್ ಕಣಿವೆಯಲ್ಲಿ ಸಿಡಿದ ಸಿರಿಗನ್ನಡದ ಸಿಡಿಮದ್ದು !

                            ಡಾ ಉಮಾ ವೆಂಕಟೇಶ್

AKKA Razzmatazz
Photo: Uma Venkatesh

“ಸಾಧನೆ. ಸಂಭ್ರಮ. ಸಂಕಲ್ಪ” ಈ ನುಡಿಗಳ ಧ್ಯೇಯ ವಾಕ್ಯವನ್ನು ಹೊತ್ತ ೮ನೆಯ ಅಕ್ಕ ವಿಶ್ವ ಕನ್ನಡ ಸಮ್ಮೆಳನವನ್ನು, ಉತ್ತರ ಕ್ಯಾಲಿಫ಼ೋರ್ನಿಯಾದಲ್ಲಿನ, ಸಿಲಿಕಾನ್ ಕಣಿವೆಯ ಪ್ರಸಿದ್ಧ ನಗರಿ, ಸ್ಯಾನ್ ಹೊಸೆಯಲ್ಲಿ ನೋಡುವ ಸುವರ್ಣಾವಕಾಶವೊಂದು, ಆಂಗ್ಲ ಕನ್ನಡತಿಯಾದ ನನಗೆ ದೊರಕಿತು. ೫೦ ರಾಜ್ಯಗಳ ವಿವಿಧ ಕನ್ನಡ ಕೂಟಗಳ ಆಗರದ, ಈ ಕನ್ನಡ ಹಬ್ಬವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ, ಅಮೆರಿಕೆಯ ವಿವಿಧ ದಿಕ್ಕುಗಳಲ್ಲಿ ನಡೆಸುವ ಈ ಸಮಾರಂಭದಲ್ಲಿ, ಇಲ್ಲಿರುವ ಸಹಸ್ರಾರು ಕನ್ನಡಿಗರು ಒಂದೆಡೆ ನೆರೆಯುತ್ತಾರೆ. ಇವರಲ್ಲಿ ಎಷ್ಟೇ ವಿಭಿನ್ನ ಅಭಿಪ್ರಾಯಗಳಿದ್ದರೂ, ಅವೆಲ್ಲವನ್ನೂ ಆಚೆ ತಳ್ಳಿ, ೩ ದಿನಗಳು ಎಲ್ಲರೂ ಒಮ್ಮನದಿಂದ ಕಲೆತು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಒಟ್ಟಾಗಿ ಮೆರೆಸುವ ಇವರ ವೈಖರಿಗೆ, ಯಾರಾದರೂ  ತಲೆದೂಗಲೇ ಬೇಕು. ಸಂಖ್ಯೆಯಲ್ಲಿ ದೊಡ್ಡದಾಗಿದ್ದರೆ ಅದರಲ್ಲಿರುವ ಲಾಭ ಮತ್ತು ಅನುಕೂಲತೆಗಳು ಏನೆಂಬುದು ನನಗೆ ಕಳೆದ ವಾರ ನಡೆದ ಈ ಸಮಾರಂಭದ ಮೂರು ದಿನಗಳಲ್ಲಿ ಚೆನ್ನಾಗಿ    ಅರಿವಾಯಿತು. ಕೇವಲ ಹಣವೊಂದೇ ಅಲ್ಲ, ಮನುಷ್ಯ ಪ್ರಯತ್ನ ಮತ್ತು ಇನ್ನಿತರ ಸಂಪನ್ಮೂಲಗಳ ಅನುಕೂಲಗಳು ಅನೇಕ ಪಟ್ಟು ಹೆಚ್ಚಿ, ಈ ದೊಡ್ಡ ಕಾರ್ಯವನ್ನು ವೈಭವದಿಂದ ಆಚರಿಸಲು ಸಹಾಯಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Read More »