ಹುಡುಗ ಮತ್ತು ಮರ – ಸುದರ್ಶನ ಗುರುರಾಜರಾವ್ ಬರೆದ ಕಥನ ಕವನ

’’ಕೊಟ್ಟದ್ದು ತನಗೆ-ಬಚ್ಚಿಟ್ಟದ್ದು ಪರರಿಗೆ ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ” ಹಾಡನ್ನು ಎಲ್ಲರೂ ಕೇಳಿರಬಹುದು. ಪಿ.ಬಿ.ಶ್ರೀನಿವಾಸರ ಸಿರಿಕಂಠದಲ್ಲಿ ಮೂಡಿ ಬಂದ ಹಾಡು ಸುಂದರ ಹಾಗೂ ಮಧುರ. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಈ ಹಾಡಿನ ಅರ್ಥವನ್ನು ನಾನೊಮ್ಮೆ ೬-೭ ವಯಸ್ಸಿನಲ್ಲಿ ನನ್ನ ತಾಯಿಗೆ ಕೇಳಿದಾಗ ಆಕೆ ಒಂದು ಮರ ಹಾಗೂ ಹುಡುಗನ ನಡುವೆ ನಡೆದ ಈ ಕಥೆಯನ್ನು ಹೇಳಿದ್ದಳು. ನನ್ನ ಮಕ್ಕಳಿಗೆ ಒಮ್ಮೆ ಅದೇ ಕಥೆಯನ್ನು ಹೇಳುವಾಗ ಇದನ್ನು ಕವಿತೆಯ ರೂಪದಲ್ಲಿ ಬರೆಯಬಾರದೇಕೆಂದಿನಿಸಿ ಕವನೀಕರಿಸುವೆ ಪ್ರಯತ್ನ ಮಾಡಿದ್ದೇನೆ.

ನಾನು ಇದು ಭಾರತದ/ಕರ್ನಾಟಕದಲ್ಲಿ ಪ್ರಚಲಿತವಿರುವ ಕಥೆ ಎಂದೇ ಇಲ್ಲಿಯವರೆಗೂ ನಂಬಿದ್ದೆ, ಏಕೆಂದರೆ ನನ್ನ ತಾಯಿ ಇಂಗ್ಲೀಷನ್ನು ಹೆಚ್ಚು ಓದಿದವಳಲ್ಲ. ಆದರೆ ಇದು ಅಮೇರಿಕಾದ ಕವಿ ಶೆಲ್ ಸಿಲ್ವೆರ್ಸ್ಟೀನ್ ಎಂಬಾತ ಇದನ್ನು ಇಂಗ್ಲೀಷಿನಲ್ಲಿ ಬರೆದದ್ದನ್ನು ನನ್ನ ಗಮನಕ್ಕೆ ಕೇಶವ್ ತಂದದ್ದು ಒಳ್ಳೆಯದಾಯಿತು. ಈ ಕವನದ ಹೆಗ್ಗಳಿಕೆ ಅವನಿಗೇ ಸಲ್ಲಬೇಕು; ’’ The Giving Tree’’ ಎಂಬುದು ಅವನ ಕವಿತೆಯ ಹೆಸರು. ಅದು ತಿಳಿದ ನಂತರ ಈ ಕವಿತೆಯ ಶೀರ್ಷಿಕೆ ” ಕಲ್ಪವೃಕ್ಷ” ಎಂದೇಕೆ ಇಡಬಾರದೆಂದು ನನಗನಿಸಿದರೂ ನನ್ನ ಹಳೆಯ ಶೀರ್ಷಿಕೆಯನ್ನೆ ಮುಂದುವರಿಸಲು ನನ್ನ ಹೃದಯ ಹೇಳಿದ್ದರಿಂದ ಅದನ್ನೇ ಮುಂದುವರಿಸಿದ್ದೇನೆ. ನಾನು ಈ ಕವನವನ್ನು ಬರೆದಾಗ ಇದಕ್ಕೊಂದು ಮೂಲ ಕವನ ಇದೆ ಎನ್ನುವುದೇ ಗೊತ್ತಿರಲಿಲ್ಲ. ಹಾಗಾಗಿ ಈ ಕವನ ಅನುವಾದವಲ್ಲ, ಭಾವಾನುವಾದ ಎನ್ನಬಹುದು.

CC- Wiki

ಹುಡುಗ ಮತ್ತು ಮರ

ಬೆಟ್ಟದಾ ತಪ್ಪಲಲಿ ಸುಂದರ ಬಯಲೊಂದು
ಬಯಲ ಮಧ್ಯದಲಿತ್ತು ಒಂದು ಮರವು
ಕೂಗಳತೆ ದೂರದಲಿ ಪುಟ್ಟದೊಂದು ಮನೆಯು
ಮನೆಯ ಕಣ್ಮಣಿಯಾಗಿ ಗಂಡು ಮಗುವು

ತಂದೆ ತಾಯಿಯರೆಂದು ಹೊಲದಲ್ಲಿ ದುಡಿದಿರಲು
ದುಡಿಯುವಾ ಸಮಯದಲಿ ಪುಟ್ಟ ಮಗುವು
ಮರದ ಬಳಿಯಲಿ ಬಂದು ಆಟವಾಡುತಲಿರಲು
ಆಟ ಪಾಠವ ಕಂಡು ನಲಿದು ಮರವು
Read More »

ಪಿ.ಬಿ.ಶ್ರೀನಿವಾಸ್: ಭಾವ ಪೂರ್ಣಗಾಯಕನೊಂದಿಗೆ ಒಂದು ಭಾವಯಾನ – ಸುದರ್ಶನ ಗುರುರಾಜರಾವ್

(ಇವತ್ತು ನಮ್ಮೆಲ್ಲರ ಮೆಚ್ಚಿನ ಕವಿ ಪಿ ಬಿ ಶ್ರೀನಿವಾಸ್ ಅವರ ಪ್ರಥಮ ಪುಣ್ಯತಿಥಿ)

PBS

ಪಿ.ಬಿ.ಎಸ್ ಎನೆ ಕುಣಿದಾಡುವುದೆನ್ನೆದೆ
ಪಿ.ಬಿ.ಎಸ್ ಎನೆ ಕಿವಿ ನಿಮಿರಿವುದು
ಕರಿ ಮುಗಿಲನ್ನು ಕಾಣುವ ನವಿಲೊಲು
ಗರಿಗೆದರುತ ಮನ ಕುಣಿದಾಡುವುದು (ಕುವೆಂಪು ಅವರ ಕ್ಷಮೆ ಕೋರಿ)

ಈ ಮಾತುಗಳು ಸುಮ್ಮನೆ ಹೇಳಿದ್ದಲ್ಲ. ಎದೆಯಾಂತರಾಳದಲಿ ಪುಟಿವ ಕಾರಂಜಿಯಲಿ, ಹೃದಯ ವೀಣೆ ಮಿಡಿದು ಸಿಡಿದ ಮಾತುಗಳು – ನನ್ನ ಮಟ್ಟಿಗೆ; ನನ್ನಂಥ ಸಾವಿರಾರು ಪಿ.ಬಿ.ಎಸ್ ಅಭಿಮಾನಿಗಳ ಮಟ್ಟಿಗೆ.

ಪಿ.ಬಿ.ಎಸ್ ನಮ್ಮನ್ನು ಅಗಲಿ ಈ ಏಪ್ರಿಲ್ ೧೪ ನೇ ತಾರೀಖಿಗೆ ಒಂದು ವರ್ಷ ಕಳೆಯುತ್ತಿದೆ. ಕಳೆದ ವರ್ಷ ಅಮೇರಿಕದ ಹಲವು ಕನ್ನಡಪರ ಸಂಘಟನೆಗಳು ಅವರಿಗೆ ಭಾವಪೂರ್ಣ ಶ್ರಧ್ಧಾಂಜಲಿ ಅರ್ಪಿಸಿದವು. ಆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಾಯಕನನ್ನು ನೆನಪಿಸಿಕೊಂಡ ಪರಿ ಹೃದಯ ತುಂಬಿಸುವಂಥ ಕೆಲಸ. ಈ ವರ್ಷ ಕೂಡ ಹಾಗೆ ನಡೆಯಲೆಂದು ಆಶಿಸುತ್ತೇನೆ.

 

ಪ್ರತಿವಾದಿ ಭಯಂಕರ ಎಂಬುದು ಅವರ ಹೆಸರಿನ ಜೊತೆಗಿದ್ದರೂ ರೂಪ, ಗುಣ,ನಡತೆ,ಹಾಗು ಗಾಯನದಲ್ಲಿ ಸೌಜನ್ಯ ಸಜ್ಜನಿಕೆಗಳನ್ನು ಗಾಢವಾಗಿ ಪ್ರತಿಫಲಿಸಿದಂತಹ ವ್ಯಕ್ತಿತ್ವ ಪಿ.ಬಿ.ಎಸ್ ಅವರದ್ದು. ಭಯಂಕರ ಎನ್ನುವ ಶಬ್ದಕ್ಕೆ ಭಯಂಕರನೆನ್ನಿಸುವಂತಿತ್ತು ಅವರ ನಡವಳಿಕೆ. ಪಿ.ಬಿ.ಎಸ್ ಎಂದರೆ ಪ್ರೇಯರ್ ಬಿಲೇವರ್ ಶ್ರೀನಿವಾಸ್ ಅಥವ ಪ್ಲೇ ಬ್ಯಾಕ್ ಸಿಂಗರ್ ಶ್ರೀನಿವಾಸ್ ಎಂದೂ ಅನ್ವರ್ಥಕವಾಗಿ ಅವರನ್ನು ಉದ್ಧರಿಸುವುದುಂಟು. ಪಿ.ಬಿ.ಎಸ್ ಹಾಡಿದ ಶ್ಲೋಕಗಳನ್ನು ಕೇಳಿದವರಿಗೆ ಈ ಮಾತು ೧೦೦ ಕ್ಕೆ ನೂರು ಸತ್ಯ ಎನ್ನಿಸದಿರದು.
Read More »