ಡೂಮ್ಸಡೆ ಪುಸ್ತಕ (Domesday Book) -ರಾಮಮೂರ್ತಿಯವರ ಲೇಖನ

ಭಯಪಡುವ ಕಾರಣವಿಲ್ಲ. ಪ್ರಳಯಾಂತ ನಿಕಟವಾಗಿಲ್ಲ!  ಯಾವ ಪತ್ರಿಕೆಯ ಸಂಪಾದಕರಿಗೂ ಒಮ್ಮೆಯಾದರೂ ಇಂಥ doom and gloom ಆವರಿಸಿರಿವ ದಿನವಿರುತ್ತದೆಯಂತೆ! ಆದರೆ ಈ ವಾರದ ಲೇಖನದಲ್ಲಿ ಬರುವ ”ಡೂಮ್’ಗೂ ಬೈಬಲ್ ನಲ್ಲಿ ಬರುವ ದೂಮ್ಸ್ ಡೆ ಗಾಗಲಿ, ಕ್ರೈಸ್ತರು ನಂಬುವ ಅಂತಿಮ ಯುದ್ಧವಾದ ಆರ್ಮಗೆಡ್ಡಾನ್ (Armageddon) ಗಾಗಲಿ ಏನೂ ಸಂಬಂಧವಿಲ್ಲ. ಹನ್ನೆರಡನೆಯ ಶತಮಾನದಲ್ಲಿ ಬರೆದಿಟ್ಟ ಇಂಗ್ಲೆಂಡಿನ ಐತಿಹಾಸಿಕ ಪುಸ್ತಕದ್ವಯಗಳಿಗೇ ಈ ಹೆಸರು. ನಮ್ಮ ಇತಿಹಾಸ ಲೇಖಕರಾದ ಬೇಸಿಂಗ್ ಸ್ಟೋಕ್ ರಾಮಮೂರ್ತಿಯವರು ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ನಮಗೆ ಸವಿಸ್ತಾರವಾಗಿ ಅದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದಾರೆ. ಪ್ರತಿಯೊಬ್ಬ ಅನಿವಾಸಿಯೂ ಓದಿ ತಿಳಿದುಕೊಳ್ಳುವಂಥ ಮಹತ್ವಪೂರ್ಣ ಲೇಖನ ಇದು. (ತತ್ಕಾಲ್ ಸಂ)
ವಿಲಿಯಮ್ ಕಾಂಕರರ್ (William the Conquerer)
ವಿಲಿಯಂ (William  the conqueror), ಕ್ರಿ ಶ ೧೦೬೬ ನಲ್ಲಿ ಅಂದಿನ  ಇಂಗ್ಲೆಂಡಿನ ದೊರೆಯಾಗಿದ್ದ ಹೆರಾಲ್ಡ್ ನನ್ನು  ಸೋಲಿಸಿ  ಡಿಸೆಂಬರ್ ೨೫ ರಂದು ಪಟ್ಟಕ್ಕೆ ಬಂದ . 
 ೨೦ ವರ್ಷಗಳ ನಂತರ, ಹಣ ಕಾಸಿನ ಅಭಾವದಿಂದ ಹೊಸ ತೆರಿಗೆ ಹಾಕುವ ಅವಶ್ಯಕತೆ ಇತ್ತು.  ಆದರೆ ಇದರ ಮುನ್ನ, ತಾನು ಆಳುತ್ತಿರುವ ದೇಶದ ಸಂಪತ್ತು ಎಷ್ಟು ಹೆಚ್ಚಾಗಿದೆ ಎಂದು ತಿಳಿಯಲು ಇಂಗ್ಲೆಂಡ್ ದೇಶದ ನಾನಾ ಭಾಗದಲ್ಲಿರುವ ಹಳ್ಳಿಗಳ, ಜನರ, ಹೊಲ, ಗದ್ದೆ ಮತ್ತು ಸಾಕು ಪ್ರಾಣಿಗಳ  ಸಂಖ್ಯೆ ಮತ್ತು ಇದರಿಂದ ಬರುವ ಆದಾಯ, ಇತ್ಯಾದಿ  ವಿವರವನ್ನು ಸಂಗ್ರಹಿಸಿ ದಾಖಲೆ ಮಾಡುವ ಆಜ್ಞೆ ಯನ್ನು೧/೦೧/೧೦೮೬ ದಿನ ಹೊರಡಿಸಿದ. ದೇಶವನ್ನು ಏಳು ಭಾಗ ಮಾಡಿ, (Seven Circuits ) ತನ್ನ ಪ್ರತಿನಿಧಿನಿಗಳನ್ನು ಈ ಸಮೀಕ್ಷೆಯನ್ನು(Survey ) ಮಾಡಲು ನಿಯಮಿಸಿದ. ಲಾಟಿನ್  ಭಾಷೆಯಲ್ಲಿ ಬರೆದ ಎರಡು ಸಂಪುಟದಲ್ಲಿ ಈ ಸಮೀಕ್ಷೆ ಗಳ ಸಂಗ್ರಹವೇ ಡೂಮ್ಸ್ ಡೆ ಪುಸ್ತಕ. ಚಿಕ್ಕ ಮತ್ತು ದೊಡ್ಡ ಪುಸ್ತಕಗಳು  (Little and Great Domesday Books).  ಈ ಸಮೀಕ್ಷೆ ಪೂರ್ಣವಾದಾಗ, ಇದರ ಹೆಸರು ಡೋಮ್ಸ್ ಡೆ ಪುಸ್ತಕ ಅಂತಿರಿಲಿಲ್ಲ. ೧೧೭೬ ನಲ್ಲಿ ರಾಜ್ಯದ ಖಜಾನೆ (Royal Exchequer) ಬಗ್ಗೆ  ಬರೆದ ದಾಖಲೆಯಿಂದ  ಈ ಹೆಸರ ಬದಲಾವಣೆ ಆದ ಪ್ರಸ್ತಾಪ ಇದೆ. ಒಂದು ಕಾರಣ , ಬೈಬಲ್ ನಲ್ಲಿ ಇರುವ Last Judgement ವಿರುದ್ಧ ಏನೂ ಮನವಿ (ಅಪೀಲ್) ಮಾಡುವುದಕ್ಕೆ ಸಾಧ್ಯವಿಲ್ಲವೋ, ಹಾಗೇ ಈ ಸಮೀಕ್ಷೆ ಮೇಲೂ ಸಹ.   
ಒಟ್ಟು, ಈ ದೇಶದ ೧೩,೪೧೮ ಸ್ಥಳಗಳಲ್ಲಿ  ಈ ಸಮೀಕ್ಷೆ ನಡೆಯಿತು.  ಸುಮಾರು ೧೨ ತಿಂಗಳ ಶ್ರಮ, ಇಂದಿಗೂ ಇದರ ಮೂಲ ಪ್ರತಿಗಳನ್ನು National Archives ನಲ್ಲಿ ನೋಡಬಹುದು. ನಿಮ್ಮ ಊರಿನ ವಿವರ ತಿಳಿಯಲು ಕುತೂಹಲ ಇದ್ದರೆ, ಸ್ಥಳೀಯ ಗ್ರಂಥಾಲಯವನ್ನು (Local  Library ) ಸಂಪರ್ಕಸಿ.  
ಇದರ ಹಿನ್ನಲೆ 
ಕ್ರಿ ಶ ೧೦೬೬ ನಲ್ಲಿ ನಡೆದ ಘಟನೆಯಿಂದ ಈ ದೇಶದ ರಾಜಕೀಯ ಶಾಶ್ವತವಾಗಿ ಬದಲಾಯಿತು ಎಂದರೆ ತಪ್ಪಲಾಗಾರದು. ನಾರ್ಮಂಡಿಯ (ಈಗಿನ ಫ್ರಾನ್ಸ್ ದೇಶದ ಭಾಗ)  Duke of Normandy, ವಿಲಿಯಂ, ತನ್ನ ಸೈನ್ಯದೊಂದಿಗೆ ಸೆಪ್ಟೆಂಬರ್ ೨೮ರಂದು, ದಕ್ಷಿಣದ ಸಮುದ್ರ ತೀರದಲ್ಲಿರುವ, (English  Channel) ಈಗಿನ East Sussex ನ, ಪೆವೆನ್ಸಿ (Pevensey)  ಅನ್ನುವ ಸ್ಥಳದಲ್ಲಿ ಇಳಿದು  ಕೆಲವೇ  ದಿನಗಳಲ್ಲಿ ಈ ಊರನ್ನು ಆಕ್ರಮಿಸಿಕೊಂಡು ಹತ್ತಿರದ  ಹೇಸ್ಟಿಂಗ್ಸ್ ನಲ್ಲಿ ಬೀಡು ಹಾಕಿ ತನ್ನ ಸೈನ್ಯವನ್ನು ಸಿದ್ದ ಮಾಡಿ ಸಮಯಕ್ಕೆ ಕಾದಿದ್ದ .  
ಹೆರಾಲ್ಡ್, ಅದೇ ವರ್ಷ ಜನವರಿ ೬ ರಂದು ವೆಸ್ಟ್ ಮಿನಿಸ್ಟರ್ ನಲ್ಲಿ ಇಂಗ್ಲೆಂಡ್ ಕಿರೀಟವನ್ನು ಧರಿಸಿ ದೊರೆಯಾಗಿದ್ದನಷ್ಟೇ. ಆದರೆ ನಾರ್ಮಂಡಿಯ ವಿಲಿಯಂ ಇಂಗ್ಲೆಂಡ್ ದೊರೆತನ  ತನಗೆ ಬರಬೇಕು ಅನ್ನುವ ಅಸೆ ಇತ್ತು ಮತ್ತು ಕೆಲವರಿಂದ  ಈ ಭರವಸೆ  ಸಹ ದೊರಕಿತ್ತು  (ಇದರ ಹಿನ್ನಲೆ ಇಲ್ಲಿ ಬೇಡ ).  ಹೆರಾಲ್ಡ್ ದೊರೆ ಆದ ಅಂತ ಕೇಳಿ ವಿಲಿಯಂ ತನ್ನ  ಸೈನ್ಯದೊಂದಿಗೆ ಬಂದಿದ್ದು ಇದೇ  ಕಾರಣದಿಂದ.

ಹೆರಾಲ್ಡ್ ನ  ಸಹೋದರ,  ಟೋಸ್ಟಿಗ್,  ಇವನ ಜೊತೆ ಜಗಳ ಮಾಡಿ ನಾರ್ವೆ ದೇಶದ ದೊರೆಯ ಜೊತೆಯಲ್ಲಿ ಸೇರಿ ಅವರ ಸೈನ್ಯದೊಂದಿಗೆ ಇಂಗ್ಲೆಂಡ್ ಉತ್ತರ ಭಾಗವನ್ನು (ಈಗಿನ Northumberland ) ವಶ ಪಡಿಸುಕೊಳ್ಳುವುದಕ್ಕೆ ಪ್ರಯತ್ನ ಮಾಡಿದ. ಆದರೆ ಹೆರಾಲ್ಡ್ ಇವರನ್ನು ಸ್ಟ್ಯಾಮ್ ಫರ್ಡ್ ಬ್ರಿಡ್ಜ್ (Stamford Bridge ) ನಲ್ಲಿ ನಡೆದ ಯುದ್ಧದಲ್ಲಿ ಸೋಲಿಸಿದ.( ಸೆಪ್ಟೆಂಬರ್ ೨೫ , ೧೦೬೬).  ಕೆಲವು ದಿನಗಳ ನಂತರ  ವಿಲಿಯಂ ಬಂದಿರುವ ವಿಚಾರ ತಿಳಿದು ತನ್ನ ಸೈನ್ಯ ದೊಂದಿಗೆ ದಕ್ಷಿಣಕ್ಕೆ ಧಾವಿಸಿದ. ಅಕ್ಟೋಬರ್ ೧೪ರಂದು, ಇವರಿಬ್ಬರ ಯುದ್ಧ ( Battle of Hastings ) ನಡೆದಿದ್ದು ಬ್ಯಾಟಲ್ ಅನ್ನುವ ಪ್ರದೇಶದಲ್ಲಿ. ಒಂದೇ ದಿನದಲ್ಲಿ ಈ ಯುದ್ಧ ಮುಗಿದು ಹೆರಾಲ್ಡ್ ಕಣ್ಣಿಗೆ ಬಾಣದ ಏಟಿನಿಂದ (ಇದಕ್ಕೆ ಪೂರ್ಣ ಮಾಹಿತಿ ಇಲ್ಲ) ಸಾವು ಉಂಟಾಯಿತು. ಆಗ ತಾನೇ ಯುದ್ಧ ಮುಗಿಸಿ  ಬಂದಿದ್ದ ಸೈನಿಕರಿಗೆ ಪುನಃ ಹೊರಾಡುವ ಶಕ್ತಿ ಇರಲಿಲ್ಲ ಮತ್ತು ದೊರೆಯ ಸಾವಿನಿಂದ ಇವರಿಗೆ ನಾಯಕತ್ವ ಸಹ ಇಲ್ಲವಾಯಿತು. ಈ ಕಾರಣದಿಂದ   ಇಂಗ್ಲೆಂಡ್  ಸೈನ್ಯ ಚಲ್ಲಾ ಪಿಲ್ಲಿಯಾಗಿ ಶರಣಾಗತರಾದರು.  ವಿಲಿಯಂ ನಂತರ  William the conqueror ಅನ್ನುವ ಬಿರುದು ಪಡೆದು ೨೫/೧೨/೧೦೬೬ ವೆಸ್ಟ್ ಮಿನಿಸ್ಟರ್ ಅಬ್ಬೆ ನಲ್ಲಿ ಇಂಗ್ಲೆಂಡ್ ದೊರೆಯಾದ. 

ಇನ್ನು ಮುಂದೆ ಓದಿ

ವಿಲಿಯಂ, ಮುಂದೆ ಎದಿರಿಸಿದ ಕಷ್ಟಗಳು ಅನೇಕವಾಗಿದ್ದವು. ಹೆರಾಲ್ಡ್ ನ ಹಿತೈಷಿಗಳು, ಅವನ ಕೆಲವು ಮಕ್ಕಳು ಮತ್ತು ಡೆನ್ಮಾರ್ಕ್ ನ ರಾಜರು ಇಂಗ್ಲೆಂಡಿನ ನಾನಾ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಯತ್ನಗಳೂ ನಡೆಯಿತು. ಹೀಗೆ ಈ ಸನ್ನಿವೇಶಗಳಿಂದ ತಾನು ಆಳುತ್ತಿದ್ದ ರಾಜ್ಯವನ್ನು ಕಳೆದುಕೊಳ್ಳುವ ಶಂಕೆಯೂ ಬಲವಾಗಿತ್ತು. ಈ ಯುದ್ಧಗಳಿಗೆ ಹಣ ಸಹಾಯ ಬೇಕಿತ್ತು. ಈ ಕಾರಣದಿಂದ ವಿಲಿಯಂ ತನ್ನ ರಾಜ್ಯದಲ್ಲಿರುವ ಸಂಪತ್ತಿನ ಬಗ್ಗೆ ತಿಳಿಯುವ ಮತ್ತು ಇದರಿಂದ ತೆರಿಗೆಯ ವರಮಾನ ಏನು ಬರಬಹುದು ಅನ್ನುವ ಉದ್ದೇಶದಿಂದ ಈ ಸಮೀಕ್ಷೆ (survey ) ಮಾಡಲು ಆಜ್ಞೆ ಮಾಡಿದ. ಆದರೆ ಲಂಡನ್, ವಿಂಚೆಸ್ಟರ್, ಡರಂ (Durham ), ಮುಂತಾದ ಊರುಗಳಲ್ಲಿ ಈ ಸಮೀಕ್ಷೆ ನಡೆಯಲಿಲ್ಲ, ಕಾರಣ ಇವು ದೊಡ್ಡ ಊರುಗಳು ಮತ್ತು ಅಲ್ಲಿನ ಜಮೀನುಗಳು ಸ್ವಂತ ರಾಜಮನೆತನಕ್ಕೆ ಸೇರಿದ್ದರಿಂದ ತೆರಿಗೆ ಹಾಕುವ ಪ್ರಶ್ನೆ ಬರುವುದಿಲ್ಲ ಅನ್ನುವುದು ಕೆಲವರ ಊಹೆ. ಈ ಕಳೆದ ಇಪ್ಪತ್ತು ವರ್ಷಗಳಲ್ಲಿ ಇಂಗ್ಲೆಂಡ್ ದೇಶದ ಸಂಪತ್ತಿನ ಒಡೆತನ ಸ್ಥಳೀಯ ಜನರಿಂದ ಅಂದರೆ Anglo Saxon, ವಿಲಿಯಂ ಜೊತೆಯಲ್ಲಿ ಬಂದಿದ್ದ Norman ಜನರಿಗೆ ಸೇರಿತ್ತು. ಈ ತನಿಖೆ ಜನರ ಜನಗಣತಿ (census) ಅಲ್ಲ, ಆದರೆ ಆ ಊರಿನ ಜಮೀನ್ದಾರರು ಯಾರು, ಇವರ ಬಳಿ ಇರುವ ಜಮೀನು ಎಷ್ಟು, ಊರಿನ ಪ್ರಾಣಿಗಳ ವಿವರ ಇತ್ಯಾದಿ, ಈ ಪ್ರಶ್ನೆಗಳನ್ನು ಕೇಳಿದರು. ಊರಿನ ಹೆಸರು, ( name of the Manor to be precise ) ಜಮೀನ್ದಾರರ ಹೆಸರು, ೧೦೬೬ ನಲ್ಲಿ ಮತ್ತು ಈಗ ಯಾರು ಜಮೀನಿನ ಅಳತೆ ಏನು ಎಷ್ಟು ನೇಗಿಲುಗಳು ಎಷ್ಟು ಮಂದಿ ಕೆಲಸಗಾರರು (Free and slaves ) ಅಂದಾಜು ಮೌಲ್ಯಮಾಪನ (valuation ) ಉದಾಹರಣೆಗೆ: ನಮ್ಮ ಊರು ಬೇಸಿಂಗ್ ಸ್ಟೋಕ್ ನ ವಿವರ ಹೀಗಿದೆ ಒಡೆಯರು, ೧೦೬೬ ದೊರೆ ಎಡ್ವರ್ಡ್, ೧೦೮೬ ದೊರೆ ವಿಲಿಯಂ ವಾಸವಾಗಿರುವ ಮನೆಗಳು ೫೭, ಸಣ್ಣ ಜಮೀನು ಹೊಂದಿರುವರು ೮, ಗುಲಾಮರು ೬, ಇತರೆ ಜನಗಳು ೧೬, ಒಟ್ಟು ೨೦೦ ಜನ ಸಂಖ್ಯೆ ದೊಡ್ಡ ಜಮೀನ್ದಾರ (Lord of the Manor ) ೨೦ ಉಳುವ ಹೊಲ /ಗದ್ದೆ , ೧೬ ಮಂದಿ ನೇಗಿಲ ಕೆಲಸದವರು ಸುತ್ತ ಮುತ್ತ ಕಾಡು ಪ್ರದೇಶ ೨೦ ಎಕರೆ, ಹುಲ್ಲು ಗಾವಲು ೨೦ ಮೌಲ್ಯಮಾಪನ £೧ ಮತ್ತು ೧೦ ಶಿಲ್ಲಿಂಗ್

Basingstoke in Domesday Book
ವಿಲಿಯಂ ಇಂಗ್ಲೆಂಡ್ ದೊರೆ ಆಗಿದ್ದರೂ ಬಹು ಕಾಲ ಅವನ ಊರಾದ ನಾರ್ಮಂಡಿ ಯಲ್ಲೇ ಕಳೆದ. ಅಲ್ಲಿಂದಲೇ ಅನೇಕ ಯುದ್ಧಗಳನ್ನೂ ನಡೆಸಿ, ಕೊನೆಗೆ ಕ್ರಿ ಶ ೧೦೮೭ ರಲ್ಲಿ ಈಗಿನ ಪ್ಯಾರಿಸ್ ಗೆ ೫೦ ಕಿಲೋ ಮೀಟರ್ ದೂರದಲ್ಲಿ ಹೋರಾಡುತ್ತಿರುವಾಗ  ಹುಷಾರು ತಪ್ಪಿ ೯/೦೯/೧೦೮೭ ದಿನ ಸಾವನ್ನು ಅಪ್ಪಿದ. ಅವನ ಆಜ್ಞೆಯ ಮೇರೆಗೆ ತಯಾರಿಸಿದ ಸಮೀಕ್ಷೆ ಯನ್ನು ಜಾರಿಗೆ ತರುವ ಸಮಯ ಅಥವಾ ಸಂಧರ್ಭ ಬರವಲಿಲ್ಲವೇನೋ. ಆದರೆ ಈ ದಾಖಲೆಗಳಿಂದ ಈ ದೇಶದ ಸಾವಿರ ವರ್ಷದ ಚರಿತ್ರೆಯನ್ನು ಅರಿಯಬಹುದು
Bayeux Tapestry
ಬೇಯೋ ಟಾಪೆಸ್ಟ್ರಿ (Bayeux Tapestry)
೧೦೬೬ ನಲ್ಲಿ  ನಡೆದ ನಾರ್ಮನ್ ವಿಜಯದ (Norman  Conquest) ಚರಿತ್ರೆಯನ್ನು ೭೦ ಮೀಟರ್ ಉದ್ದ ಮತ್ತು ೫೦ ಸೆಂಟಿಮೀಟರ್  ಅಗಲದ  ಕಸೂತಿ (Embroidery)ಯಲ್ಲಿ ವರ್ಣಿಸಿದೆ. ಈ ಕೆಲಸ  ಬಹುಶಃ ಇಂಗ್ಲೆಂಡಿನಲ್ಲಿ ೧೦೭೦ ರಲ್ಲಿ ಮಾಡಿದ್ದಿರಬಹುದು. ಈ ಅದ್ಭುತವಾದ ಕಲಾಕೃತಿಯನ್ನು ಈ ದೇಶ ಮತ್ತು  ಫ್ರಾನ್ಸ್ ದೇಶದಲ್ಲಿ ಪ್ರದರ್ಶನ ಮಾಡುವ ಬಗ್ಗೆ ಒಪ್ಪಂದ ಇದೆ. ಈಗ ಇದು  ಫ್ರಾನ್ಸ್ ನಲ್ಲಿ Bayeux Museum ಇದೆ. 

Little and Great Domesday Books
ಲೇಖನ: ರಾಮಮೂರ್ತಿ 
       ಬೇಸಿಂಗ್ ಸ್ಟೊಕ್ 

ಬೆಂಗಳೂರಿನಲ್ಲಿ ಆರು ವಾರ – ಬೇಸಿಂಗ್ ಸ್ಟೋಕ್ ರಾಮಮೂರ್ತಿ ಲೇಖನ

 ಕೋವಿಡ್ ಪಿಡುಗು ನಮ್ಮನ್ನೆಲ್ಲ ಬಾಧಿಸಿ ಹೋದ ನಂತರ ಹಳೆಯ ಅಡಕಪದಗಳಿಗೆ (Acronyms) ಹೊಸದೊಂದು ಅರ್ಥ ಬಂದಿದೆ. BC(Before Christ) ಈಗ Before Covid ಎಂತಲೂ,  AD (Anno Domini) ಈಗ After Disease,  ಅಥವಾ After Done (with Corona) ಎಂತಲೂ ಕೆಲವರು ಕರೆಯುತ್ತಾರೆ. ಇತ್ತೀಚೆಗೆ ಕೋರೋನಾ ನಂತ ಮೊದಲ ಬಾರಿ ಬೆಂಗಳೂರಿಗೆ ಹೋದ ಬೇಸಿಂಗ್ ಸ್ಟೋಕ್ ರಾಮಮೂರ್ತಿಯವರ ತಮ್ಮ ಆರು ವಾರಗಳ ಕಾಲದ ವಾಸ್ತವ್ಯದಲ್ಲಿ ಅನುಭವಿಸಿದ ಸಿಹಿ, ಆಶ್ಚರ್ಯಕರ ಮತ್ತು ಇತರೇ ಅನುಭವಗಳವನ್ನು ಈ ಸ್ವಾರಸ್ಯಕರವಾದ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರ ಟ್ರೇಡ್ ಮಾರ್ಕ್ ಆದ ಅಲ್ಲಿ ಸ್ವಲ್ಪ ಇತಿಹಾಸ, ಇಲ್ಲಿ ಸ್ವಲ್ಪ ಹಾರ್ಟಿಕಲ್ಚರ್, ಬಾಟನಿ ಹೀಗೆ ಸ್ವಲ್ಪ spice sprinkling ಸಹ ಉದುರಿಸಿ ಉಣಬಡಿಸಿದ್ದಾರೆ. Enjoy! (ತತ್ಕಾಲ್ ಸಂಪಾದಕ)
ಕೋವಿಡ್ ನಿಂದ ಕಳೆದ ಮೂರು ವರ್ಷ ಬೆಂಗಳೂರಿಗೆ ಹೋಗಿರಲಿಲ್ಲ. ಈ ವರ್ಷ ಜನವರಿ ತಿಂಗಳಲ್ಲಿ ಹೋಗಿ ಆರು ವಾರ ಇದ್ದು,  ಅಲ್ಲಿ ಈ ಮೂರು ವರ್ಷಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಈ ಲೇಖನ. ಬೆಂಗಳೂರು Airport  ಬಹಳ ಚೆನ್ನಾಗಿದೆ ಇದು ನಮ್ಮೆಲ್ಲರ ಹೆಮ್ಮೆಯ ವಿಷಯ. Immigration ಸಹ ತುಂಬಾ ಸರಾಗ ಮತ್ತು ವಿನಯದಿಂದ ನಡೆಯಿತು. ಕೋವಿಡ್ ಔಪಚಾರಿಕತೆಗಳು ಏನೂ ಇರಲಿಲ್ಲ.  ಕೆಲವು ವರ್ಷದ ಹಿಂದೆ Auto ಅಥವಾ Taxi ಸಮಸ್ಯೆ ಇತ್ತು, ಆದರೆ ಈಗ Uber ಮತ್ತು Ola ಇರುವುದರಿಂದ ಯಾವ ತೊಂದರೆಯೂ ಇಲ್ಲ. ಸುಮಾರು ಐದು ನಿಮಿಷದ ಒಳಗೆ ನಿಮ್ಮ ವಾಹನ ಬರುವ ಸಾಧ್ಯತೆ ಇದೆ.  ದರದ ಚೌಕಾಸಿ ಅಥವಾ ಜಗಳ ಬರಿ ನೆನಪುಗಳು ಅಷ್ಟೇ !
ಇನ್ನೊಂದು ವಿಷಯ ಗಮನಕ್ಕೆ ಬರುವುದು  ದೇಶದಲ್ಲಿ ಆಗಿರುವ Digital Revolution. ರಸ್ತೆ ಯಲ್ಲಿ ತರಕಾರಿ ಮಾರುವರು , ಚಾಟ್ ಅಂಗಡಿಯವರು ಸಹ ಇದರಲ್ಲಿ ಭಾಗವಹಿಸಿದ್ದಾರೆ. ಫೋನಿನಿಂದ QR Code scan ಮಾಡಬಹುದು. ಅನೇಕ ಉಪಹಾರ ಮಂದಿರಗಳಲ್ಲಿ QR  code ನಿಂದ ಅವತ್ತಿನ ತಿಂಡಿಗಳ ವಿವರ ತಿಳಿಯಬಹುದು. ಅಂಗಡಿ ಸಾಮಾನುಗಳನ್ನು on line ನಲ್ಲಿ ತರಿಸಬಹುದು. ನೋಡಿದರೆ ಬೆಂಗಳೂರಿನಲ್ಲಿ ಎಲ್ಲರ ಮನೆಯಲ್ಲೂ  ಒಂದು ನಾಲಕ್ಕು ಚಕ್ರದ  ವಾಹನ  ಇರಬಹುದೇನೋ   ಅನ್ನಿಸುತ್ತೆದೆ, ರಸ್ತೆಯಲ್ಲಿ ಅಷ್ಟೊಂದು traffic! Highway ಗಳು ಈಗ ಚೆನ್ನಾಗಿವೆ, ಆದರೆ ಬಹು ಮಂದಿ ವಾಹನ ನಡೆಸುವ ನಿಯಮಗಳನ್ನು ಪಾಲಿಸಿವುದಿಲ್ಲ ಅನ್ನುವುದು ಬಹಳ ಶೋಚಿನಿಯವಾದ ವಿಷಯ. 
 ಇನ್ನು ಮೆಟ್ರೋ (ನಮ್ಮ ಮೆಟ್ರೋ ) ಬಹಳ ಅನುಕೂಲವಾಗಿದೆ. ನಾನು ಬಹಳ ಹಿಂದೆ ಒಂದು ಸಲಿ ಇಲ್ಲಿ ಪ್ರಯಾಣ ಮಾಡಿದ್ದೆ.
ಆದರೆ ಏನು ಬದಲಾವಣೆ ಆಗಿದೆ ಅನ್ನುವ ವಿಚಾರ ಗೊತ್ತಿರಲಿಲ್ಲ. ಸರಿ, ಇದರಲ್ಲಿ ಪ್ರಯಾಣ ಮಾಡಿ ನೋಡೋಣ ಅಂತ ನ್ಯಾಷನಲ್ ಕಾಲೇಜು ನಿಲ್ದಾಣಕ್ಕೆ ಬಂದೆ. ಟಿಕೆಟ್ counter ನಲ್ಲಿ ಮಂತ್ರಿ ಮಾಲ್ ಗೆ ಎಷ್ಟು ಅಂತ ಕೇಳಿದಾಗ ಆಕೆ ೧೮ ರೂಪಾಯಿ ಅಂದಳು, ನಾನು ಆಶ್ಚರ್ಯದಿಂದ ”೧೮ ಆ?” ಅಂದೆ. ಆಕೆ ಹೌದು ಸರ್, ಸೀನಿಯರ್ concession ಇಲ್ಲ ಅಂದಳು! ನನಗೆ ಆಶ್ಚರ್ಯ ಆಗಿದ್ದು ಕೇವಲ ೧೮ ರೂಪಾಯಿ ಮಾತ್ರ ಅಂತ , ಆದರೆ ಆಕೆ ನಾನು ಇದು ದುಬಾರಿ ಅಂತ ಹೇಳುತ್ತಿದ್ದೇನೆ ಅಂತ ತಿಳಿದಿರಬೇಕು!! (London Tube ನಲ್ಲಿ ಕನಿಷ್ಠ £೭!) ದುಡ್ಡು ಕೊಟ್ಟೆ,  ಚಿಲ್ಲರೆ ಬಂತು,  ಟಿಕೆಟ್ ಕೊಡಿ ಅಂದೆ. ಆಕೆ ಕೊಟ್ಟಿದ್ದೀನಿ ನೋಡಿ ಸರ್ ಅಂದಳು. (ಈ ಮನುಷ್ಯ ಎಲ್ಲಿಂದ ಬಂದಿದ್ದಾನೆ ಅಂತ ಯೋಚಿಸರಬಹುದು!!). ನೋಡಿದರೆ ಟಿಕೆಟ್ ಒಂದು ಬಿಲ್ಲೆ ಆದರೆ Digital ಬಿಲ್ಲೆ ! ಅಂತೂ ಪ್ರಯಾಣ ಕೇವಲ ೧೦ ನಿಮಿಷ ಮಾತ್ರ.  ಅದೇ Auto ನಲ್ಲಿ ಮಲ್ಲೇಶ್ವರಕ್ಕೆ ಹೋಗಿದ್ದರೆ ೧೦೦ ರೂಪಾಯಿ ಮತ್ತು ಅರ್ಧ ಅಥವಾ ಮುಕ್ಕಾಲು ಗಂಟೆ ಸಮಯ ಹಿಡಿಯುತ್ತಿತ್ತು. 
ಬೆಳಗ್ಗೆ ಅಥವಾ ಸಾಯಂಕಾಲ ತಿಂಡಿ/ಊಟಕ್ಕೆ ಜನಗಳು ಉಪಹಾರ ಮಂದಿರಗಳ ಮುಂದೆ ನಿಂತಿರುವುದನ್ನ ನೋಡಿದರೆ  ಮನೆಯಲ್ಲಿ ಅಡಿಗೆ ಮಾಡುವ ಅಭ್ಯಾಸ ಇಲ್ಲವೇನೋ ಅನ್ನುವ ಸಂಶಯ ಹುಟ್ಟುತ್ತದೆ. ಗಾಂಧಿ ಬಜಾರ್ನಲ್ಲಿರುವ ಹೆಸರಾದ  ವಿದ್ಯಾರ್ಥಿ ಭವನದ ಮುಂದೆ queue ನಿಂತಿರುತ್ತಾರೆ. ಎಲ್ಲಾ  ಉಪಹಾರ ಮಂದಿರಗಳಲ್ಲೂ ಇದೇ ಸಮಸ್ಯೆ.  
ಸಂಕ್ರಾಂತಿ ಸಮಯದಲ್ಲಿ, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಮುಂತಾದವು ಈಗ ಅನೇಕ ಅಂಗಡಿಗಳಲ್ಲಿ Prepack ಸಿಗುತ್ತೆ. ಮನೆಯಲ್ಲಿ ಕಷ್ಟ ಪಡಬೇಕಾದ ಅವಶ್ಯಕತೆ ಇಲ್ಲ. ಯುಗಾದಿ ಹಬ್ಬಕ್ಕೆ ಹೋಳಿಗೆ ಮಾಡುವ ಅಂಗಡಿಗಳು ಅನೇಕ.   
 ನಾವು ಇದ್ದ ಆರು ವಾರದಲ್ಲಿ, ಅಡಿಗೆ ಮಾಡಿಕೊಳ್ಳುವ ಸೌಲಭ್ಯ ಇದ್ದಿದ್ದರೂ ಮಾಡುವ ಅವಶ್ಯಕತೆ ಇರಲಿಲ್ಲ. ಹತ್ತಿರದಲ್ಲೇ  ಇದ್ದ ವಿದ್ಯಾರ್ಥಿ ಭವನ, ಭಟ್ಟರ ಹೋಟೆಲ್ ಅಥವಾ ಉಡುಪಿ ಕೃಷ್ಣ ಭವನದಲ್ಲಿ ಬೆಳಗ್ಗೆ ಬಿಸಿ ಬಿಸಿ ಇಡ್ಲಿ ದೋಸೆ (Take Away) ಸಿಗಬೇಕಾದರೆ ಮನೆಯಲ್ಲಿ ಕಷ್ಟ ಪಡಬೇಕಾಗಿಲ್ಲ ಅಲ್ಲವೇ?  ಊಟ ಸಹ On Line ನಲ್ಲಿ ತರಿಸಬಹುದು! When in Rome Do as Romans Do ಅಂದ ಹಾಗೆ. 
ನಮ್ಮ ಮನೆಯ ಕಿರಿಯ ಇಬ್ಬರು ಸಂಬಂಧಿಕರು ಬ್ರೂವರಿ (Brewery )ಗೆ ಹೋಗೋಣ ಅಂದರು. (ಬೆಂಗಳೂರಿನಲ್ಲಿ ಸುಮಾರು ೩೦-೪೦ ಇವೆಯಂತೆ). ಸಾಯಂಕಾಲ ೭ ೩೦ ಕ್ಕೆ booking ಇದ್ದಿದ್ದು, ಸುಮಾರು ೧೫೦೦ ಜನ ಇದ್ದಿರಬಹುದು ಆ ಸಮಯದಲ್ಲಿ! QR  code scan ಮಾಡಿದರೆ ಅನೇಕ ರೀತಿಯ beer ಮಾಹಿತಿ ಸಿಗುತ್ತೆ. (ಈ Beer ಇಲ್ಲಿ ಸಿಗುವ Lager)
 ಸುಮಾರು ೨೫-೩೦ ವರ್ಷದ ಹಿಂದೆ, ಬಸವನಗುಡಿ ಅಥವಾ ಮಲ್ಲೇಶ್ವರದ ರಸ್ತೆಗಳಲ್ಲಿ ಒಂಟಿ ಮನೆಗಳು ಇದ್ದವು, ಈಗ  ಎಲ್ಲೆಲ್ಲಿ ನೋಡಿದರೂ ಹಳೇ ಮನೆಗಳನ್ನು ಕೆಡವಿ ೩ ಅಥವಾ ೪ ಅಂತಸ್ತಿನ apartment ಗಳು ಬಂದಿವೆ. ರಸ್ತೆಗಳ ತುಂಬಾ ಮರಳು, ಸಿಮೆಂಟ್ ಇತ್ಯಾದಿ. ಇದು ಸಾಲದು ಅಂತ ಚರಂಡಿ ರಿಪೇರಿ, ಅದರ ಕಲ್ಲಿನ ಚಪ್ಪಡಿಗಳೂ ಸಹ ರಸ್ತೆ ಮಧ್ಯೆ. ಹೀಗಾಗಿ ರಸ್ತೆಯಲ್ಲಿ ನಡೆಯುವುದೇ ಒಂದು ಸಮಸ್ಯೆ, ಗಾಂಧಿ ಬಜಾರ್ ನಂತೂ ಪೂರ್ತಿ ಅಗದು ಬಿಟ್ಟಿದ್ದಾರೆ. ಇದು ಹೇಗೆ ಅನ್ನುವ ಪ್ರಶ್ನೆ ನೀವು ಕೇಳಬಹುದು. ಕಾರಣ, ಇಂಗ್ಲಿಷ್ನನಲ್ಲಿ ಹೇಳಬೇಕಾದರೆ, Lack of Accountability. ಸರಿಯಾದ ಉಸ್ತುವಾರಿ ಸಹ ಕಡಿಮೆ. ಆದರೆ ಸ್ಥಳೀಯ ಜನ ಇದನ್ನ ಸಹಿಸಿಕೊಂಡು ಇದು ತಮ್ಮ ಹಣೆ ಬರಹ ಎಂದು ಸುಮ್ಮನಿರುತ್ತಾರೆ. ನಿಮ್ಮ ಪ್ರತಿನಿಧಿ (ಕಾರ್ಪೊರೇಟರ್ )ಗೆ ದೂರು ಕೊಡಬಹುದಲ್ಲ ಎಂದು ಕೇಳಿದಾಗ ಬಂದ ಉತ್ತರ ಇದು " ಇವರು ಇರುವುದು ನಮಗೆ ಸಹಾಯ ಮಾಡುವುದಕ್ಕೆ ಅಲ್ಲ ತಮ್ಮ ಜೇಬು ತುಂಬಿಸಿಕೊಳ್ಳುವುದಕ್ಕೆ!"
 
ಆದರೆ ನೀವು ಮೈಸೂರಿಗೆ ಹೋಗಿ, ಅಲ್ಲಿನ ವಾತಾವರಣ, ಸೌಂದರ್ಯ ಕಂಡು ಹೆಮ್ಮೆ ಬರುತ್ತೆ. ಸಧ್ಯ ಇಲ್ಲಿ Apartment ಹುಚ್ಚುತನ ಇನ್ನೊ ಬಂದಿಲ್ಲ. ಹಳೆ ಕಟ್ಟಡಗಳನ್ನು ಒಡೆದಿಲ್ಲ, ರಸ್ತೆಯಲ್ಲಿ ಅಷ್ಟೇನೂ ಗಲಾಟೆ ಇಲ್ಲ. ಮುಂದೆ IT ಕಂಪನಿಗಳು ಇಲ್ಲಿ ಬಂದರೆ ಮೈಸೂರಿನ ಗತಿ ಬೆಂಗಳೂರಿನ ಹಾಗೆ ಅನ್ನುವ ನನ್ನ ಅಭಿಪ್ರಾಯ! (ದಯವಿಟ್ಟು Software ನವರು ನನ್ನ ಹತ್ತಿರ ಜಗಳ ಮಾಡಬೇಡಿ, ಇರೋ ವಿಚಾರ ಹೇಳುತ್ತಿದ್ದೇನೆ.)
 ಅಪ್ಪಿ ತಪ್ಪಿ ನೀವು ರಾಜಕೀಯದ ವಿಚಾರ ಎತ್ತಿ ಬೇಡಿ, ನಾನು ಒಮ್ಮೆ ದೇಶದಲ್ಲಿ ಅಸಹಿಸ್ಣುತೆ ( intolerance  ) ಹೆಚ್ಚಾಗಿದೆ ಅನ್ನುವ comment ಮಾಡಿದೆ. ನಮ್ಮ ಕೆಲವು ಸಂಬಂಧಿಕರು ನನ್ನ ಮೇಲೆ serious ಆಗಿ ಜಗಳಕ್ಕೆ ಬಂದರು, ಬಿಬಿಸಿನ ಬೈದರು, ನಿಮ್ಮ ಪತ್ರಿಕೆಗಳು "anti India" ಇನ್ನೂ colonial mind set ಹೋಗಿಲ್ಲ ಇತ್ಯಾದಿ, ಇತ್ಯಾದಿ. ಆದರೆ ಈಗ UK  ಇಂತಹ  ವಿಚಾರದಲ್ಲಿ ಎಷ್ಟು ಮುಂದುವರೆದಿದೆ ಅನ್ನುವ ಮಾಹಿತಿಯನ್ನು ಅವರಿಗೆ ಕೇಳುವ ಕುತೂಹಲ ಅಥವಾ ಉತ್ಸಾಹ ಇರಲಿಲ್ಲ.  
 ಇದ್ದ ಆರು ವಾರದಲ್ಲಿ, ಹೊರಗೆ , ಅಂದರೆ ಬೆಂಗಳೂರು ಬಿಟ್ಟು ಜಾಸ್ತಿ ಅನೇಕ ಕಾರಣಗಳಿಂದ  ಹೋಗಲಿಲ್ಲ. ಆದರೆ ಹೆಸರಘಟ್ಟ ದಲ್ಲಿರುವ Horticulture Research Institute ಗೆ ಭೇಟಿ ಕೊಟ್ಟಿದ್ದು ಅದ್ಭುತವಾಗಿತ್ತು. ನಮ್ಮ ಮನೆಯಲ್ಲಿ ನಮ್ಮಿಬ್ಬರಿಗೂ   ತೋಟಗಾರಿಕೆ ಮೇಲೆ ಆಸಕ್ತಿ ಇದೆ, ಇದರ ಬಗ್ಗೆ ಅನಿವಾಸಿಯಲ್ಲಿ ಹಿಂದೆ ಬರೆದಿದ್ದೇನೆ. ಈ ಸಂಸ್ಥೆ ೧೯೩೮ ರಲ್ಲಿ ಅಂದಿನ ಮೈಸೂರು ಸರ್ಕಾರ ಹಣ್ಣು ಮತ್ತು ತರಕಾರಿ ಸಂಶೋಧನೆಗೆ ಈ ಸಂಸ್ಥೆಯನ್ನು ಹೆಸರಘಟ್ಟದಲ್ಲಿ ಸ್ಥಾಪನೆ ಮಾಡಿದರು. ನಾಲ್ಮಡಿ ಕೃಷ್ಣರಾಜ ಓಡೆಯರ್ ಮಹಾರಾಜರು  ರಾಜ್ಯಕ್ಕೆ ಮಾಡಿದ ಅನೇಕ ಸೇವೆಗಳಲ್ಲಿ ಇದೊಂದು. ಸುಮಾರು ೫೦೦ ಎಕರೆ ವಿಸ್ತರಣೆಯಲ್ಲಿ ಇರುವ ಸಂಸ್ಥೆ ಈಗ ಕೇಂದ್ರ ಸರ್ಕಾರದ Institute of Agricultural  Research (IAR) ಗೆ ಸೇರಿದ್ದು. ಕೆಲವು ಹಣ್ಣುಗಳ ಮತ್ತು  ತರಕಾರಿಯ ಬಗ್ಗೆ ಇಲ್ಲಿನ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಗಿಡಗಳಿಗೆ ಬರುವ ರೋಗ ಮತ್ತು ಅದರ ನಿವಾರಣೆಯ ರೀತಿ ರೈತರಿಗೆ ಮಾಹಿತಿ ಕೊಡುವ ಕೆಲವನ್ನು ಇಲ್ಲಿ ನಡೆಯುತ್ತದೆ. ಇವರ ಸಂಶೋಧನೆ ಅಂತರ ರಾಷ್ಟ್ರೀಯ ಪ್ರಶಂಸೆ ಪಡದಿದೆ ಅನ್ನುವುದು ಹೆಮ್ಮೆಯ ವಿಚಾರ. ಇಲ್ಲೇ ಬೆಳದ ಗಿಡ ಮತ್ತು ಬೀಜಗಳನ್ನ ಖರೀದಿ ಮಾಡಬಹುದು. ಅರ್ಕ (Arka ) ಈ ಸಂಸ್ಥೆಯ ವ್ಯಾಪಾರ ಗುರುತು (Trade Mark ). ಈ ಹೆಸರಿನಲ್ಲಿ ಗಿಡಗಳನ್ನು ಮಾರುವುದರಿಂದ ಜನಗಳಿಗೆ (ರೈತರಿಗೆ) ಇದು ಈ ಸಂಸ್ಥೆಯಿಂದ ಬಂದಿದ್ದು ಅಂಬ ಭರವಸೆ ಬರುತ್ತೆ. ಗುಣಮಟ್ಟದ ಬಗ್ಗೆ( Quality ) ಗೊಂದಲ ಇರುವುದಿಲ್ಲ. IAR ಸೇರಿದ ಸಂಸ್ಥೆಗಳು ಸರ್ಕಾರಕ್ಕೆ ೧೩೦೦೦ ಕೋಟಿ ಆದಾಯ ತರುತ್ತದೆ ಎಂದು ಅಂದಾಜು ಮಾಡಲಾಗಿದೆ. ಇಲ್ಲೇ ಬೆಳೆದ ಗಿಡಗಳ ಬೀಜಗಳನ್ನುಖರೀದಿ ಮಾಡ ಬಹುದು. ೧೫ ರೀತಿಯ Bougainvillea ಮತ್ತು ಗುಲಾಬಿ ಹೂವುಗಳ ತೋಟ ನೋಡುವುದಕ್ಕೆ ಸುಂದರ ವಾಗಿತ್ತು. ಅಲ್ಲಿ ಕೆಲಸ ಮಾಡುವ ಸ್ಥಳೀಯ ಮಹಿಳೆಯಯರು ಹೈಬ್ರಿಡ್ ಮಾವಿನ ಸಸಿಗಳನ್ನು ಮಾಡುವ ಕೌಶಲ್ಯ (Skill ) ವನ್ನು ಮೆಚ್ಚಬೇಕು. IAR ಸೇರಿದ ಸಂಸ್ಥೆಗಳಿಂದ ಸರ್ಕಾರಕ್ಕೆ ೧೩೦೦೦ ಕೋಟಿ ರೂಪಾಯಿ ಆದಾಯ ಎಂದು ಅಂದಾಜು ಮಾಡಲಾಗಿದೆ.
 ಮಾರ್ಚ್ ತಿಂಗಳಲ್ಲಿ ಬಿಸಿಲು ಹೆಚ್ಚು,  ಹೊರಗೆ ಹೋಗುವುದು ಕಷ್ಟ , ಅಲ್ಲದೇ  ಇಲ್ಲಿ ನಮ್ಮ ಮನೆ ಯೋಚನೆ ಬರುವುದು ಸಹಜ, ಆದ್ದರಿಂದ ಆರು ವಾರಕ್ಕೆ ಮೀರಿ ಅಲ್ಲಿರುವುದು ನಮಗೆ ಕಷ್ಟವೇ . ಪುನಃ ಈ ವರ್ಷ ಬೆಂಗಳೂರಿಗೆ ಹೋಗುವ ನಿರೀಕ್ಷೆ ಇದೆ.  

 ರಾಮಮೂರ್ತಿ 
ಬೇಸಿಂಗ್ ಸ್ಟೋಕ್
Author, wife and friends In Bougainvillea Garden