ಗುರು: ಸಾಕ್ಷಾತ್ ಪರಬ್ರಹ್ಮ

‘ಹರ ಮುನಿದರೆ  ಗುರು ಕಾಯ್ವ..ಗುರು ಮುನಿದರೆ ಹರ ಕಾಯ್ವನೇ?’ ಎಂಬ ಮಾತಿದೆ. ಬದುಕ ಹಸನಾಗಿಸಲು, ಗುರಿಯೊಂದ ತೋರಲು, ಅರಿವೊಂದ ಮೂಡಿಸಲು, ತಪ್ಪುಗಳ ಒಪ್ಪ ಮಾಡಲು, ನಮ್ಮ ಗರಿಗಳಿಗೆ ವೈನತೇಯನ ಬಲ ತುಂಬಲು ಗುರುವೊಬ್ಬ ಬೇಕೇಬೇಕು. ವಿಶ್ವಾಮಿತ್ರ ಗುರುವಾಗಿ ದೊರೆಯದಿದ್ದರೆ ತಾಟಕೀ ಸಂಹಾರದಂಥ ದುಷ್ಟ ಶಿಕ್ಷಣೆಯ, ಅಹಲ್ಯೋದ್ಧಾರದಂಥ  ಶಿಷ್ಟರಕ್ಷಣೆಯ ಛಲ-ಬಲಗಳು ಬಾಲಕ ರಾಮನಿಗೆ ಸಿದ್ಧಿಸುವುದು ಸಾಧ್ಯವಿತ್ತೇ?  ನಮ್ಮೊಳಗನ್ನು ಬೆಳಗುವ ಗುರು ಪರಬ್ರಹ್ಮನಲ್ಲದೇ ಮತ್ತೇನು? ಗುರು ಸ್ಮರಣೆಗೆ ಸಮಯಾಸಮಯಗಳಿಲ್ಲ. ಅದಕ್ಕೆಂದೇ  ‘ಗುರು ಕರುಣೆಯೆಂಬ ತರಣಿ ಉದಯವಾಗಿ ಪರಿಹಾರವಾಯಿತು ಅಜ್ಞಾನವೆಂಬ ಕತ್ತಲೆಯಿಂದು’ ಎಂತಲೂ, ‘ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂತಲೂ   ದಾಸರು ಹಾಡಿದ್ದು.

ತಮ್ಮ ಸಂಗೀತ ಗುರುಗಳನ್ನು ಮನತುಂಬಿ ನೆನೆದು, ಅಕ್ಷರದ ಅಕ್ಷಯ ಕಾಣಿಕೆ ಸಲ್ಲಿಸಿದ್ದಾರೆ ಪೂಜಾ ತಾಯೂರ್ ಅವರು. 
‘ಚೈತ್ರ ಶುದ್ಧ ಹಗಲು ನವಮಿ ರಾಮ ಜನಿಸಿದ
ಬಿದ್ದ ಶಿಲೆಯ ಪಾದದಿಂದುದ್ಧಾರ ಮಾಡಿದ
ಜನಕರಾಯನಲ್ಲಿ ಚಾಪು ತುಣುಕು ಮಾಡಿದ 
ಗುಣಕ ಶೀಲ ಸೀತಾದೇವಿ ಮನಕ ಮೆಚ್ಚಿದ

ಹೀಗೆ ಅಚ್ಚಗನ್ನಡದಲ್ಲಿ ನಾಲ್ಕಾರು ನುಡಿಗಳಲ್ಲಿ ಇಡಿಯ ವಾಲ್ಮೀಕಿ ರಾಮಾಯಣ ನನ್ನಜ್ಜಿ, ನನ್ನವ್ವರ ಬಾಯಲ್ಲಿ ನಲಿದಾಡುತ್ತಿತ್ತು. ಬೆಳಗಾದರೆ ಮತ್ತೆ ಬರಲಿದೆ ಅದೇ ಚೈತ್ತ ಶುದ್ಧ ಹಗಲುನವಮಿ-ಶ್ರೀರಾಮನವಮಿ.  ರಾಮ ಮಹಿಮೆಯ, ಕೇಳಿದಷ್ಟು ಸಲವೂ ಹೊಸ ಹೊಸ ಅರ್ಥ ಹೊಳೆಯಿಸುತ್ತಲೇ ಇರುವ ‘ಅಲ್ಲಿ ನೋಡಲು ರಾಮ’ ಎನ್ನುವ ಪುರಂದರ ದಾಸರ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಪ್ರಸ್ತುತ ಪಡಿಸಿದ್ದಾರೆ ಪೂಜಾ ಅವರು.
ಮೈ ನವಿರೇಳಿಸುವ ಸಹಜ-ಸುಂದರ ಶೈಲಿಯ ಜೊತೆಗೆ ನಮ್ಮನ್ನೂ ಹಿಮಾಲಯದ ಬರ್ಫ್ ನಲ್ಲಿ ಸುತ್ತಾಡಿಸುತ್ತಿದ್ದಾರೆ..ಶೇಷನಾಗನ ಅದ್ಭುತ ದರ್ಶನ ಮಾಡಿಸುತ್ತಿದ್ದಾರೆ ಅಮ್ಮ ಪದ್ಮಾವತಮ್ಮನವರು. ಬನ್ನಿ, ಹಿಮಾಲಯದಲ್ಲೊಂದು ಸುತ್ತು ಹೊಡೆದು ‘ಅಮರನಾಥ್ ಬಾಬಾ ಕೀ ಜೈ’ ಎಂದು ಬರೋಣವೇ? 

~ ಸಂಪಾದಕಿ
ಪೂಜಾ ತಾಯೂರ್ ಅವರು ಮೂಲತ: ಬೆಂಗಳೂರಿನವರಾಗಿದ್ದು ಕರ್ನಾಟಕೀ ಸಂಗೀತದಲ್ಲಿ ಸುಮಾರು 20 ವರುಷಗಳಿಂದ ತೊಡಗಿಕೊಂಡಿದ್ದು ಹಲವಾರು ಆಲ್ಬಂ ಗಳಲ್ಲಿ  ತಮ್ಮ ಕಂಠಸಿರಿಯನ್ನು ಮೆರೆದಿದ್ದಾರೆ. ನೀಡಿದ್ದಾರೆ. ಶ್ರೀ ವಿದ್ಯಾಭೂಷಣರು, ಉಪಾಸನಾ ಮೋಹನ್, ವಿದುಷಿ ಜ್ಯೋತಿ ಮಾ, ವಿದುಷಿ ತಿರುಮಲೆ ಶಾರದೆ ಇತ್ಯಾದಿ ಮಹಾನ್ ಸಂಗೀತಗಾರರ ಶಿಷ್ಯೆಯಾದ ಯೋಗ ಇವರದು. ಇವರಿಗೆ ದೇವರನಾಮ, ದಾಸಸಾಹಿತ್ಯದಲ್ಲಿ ವಿಶೇಷ ಅಭಿರುಚಿಯಿದ್ದು ನಮ್ಮೊಳಗನ್ನು ಕಾಣಲು ಅದರಿಂದ ಸಾಧ್ಯ ಎಂಬ ನಂಬಿಕೆ ಅವರದು.

ತಸ್ಮೈಶ್ರೀಗುರವೇನಮ:

ನಮ್ಮದು ಕೇವಲ ಆರೆಂಟು ತಿಂಗಳ ಒಡನಾಟವಾದರೂಶಾರದಾ ಮೇಡಂ ನನ್ನ ಕಲಿಕೆಯ ಜೀವನ ಮತ್ತು ವೈಯಕ್ತಿಕ ಜೀವನಎರಡರಲ್ಲೂ ತುಂಬಾಪ್ರಭಾವ ಬೀರಿದ ವ್ಯಕ್ತಿ.  ನನಗೆ ಇವರ ಪರಿಚಯವಾದದ್ದು ನನ್ನ ಅತ್ತೆಅಂದರೆ ಗಂಡನ ತಾಯಿಯಿಂದಶಾರದಾ ಮೇಡಂಅವರಿಗೂ ಗುರುಗಳು.

ಮದುವೆಯಾಗಿ ಗಂಡನ ಮನೆಗೆ ಬಂದ ಕೆಲ ತಿಂಗಳ ಬಳಿಕನನ್ನ ಅತ್ತೆ – ನೀನು ಸಂಗೀತ ಮುಂದುವರಿಸಲೇಬೇಕುನಿನಗೆ ನಮ್ಮ ಶಾರದಾ ಮೇಡಂಗು ಒಳ್ಳೆಯ ಗುರು ಎಲ್ಲೂ ಸಿಗುವುದಿಲ್ಲ ಎಂದು ಹೇಳಿ ಒಂದು ದಿನ ಅವರ ಮನೆಗೆ ಕರೆದುಕೊಂಡು ಹೋದರುಓದುಕೆಲಸದ ಮಧ್ಯೆ senior exam ಮುಗಿಸಿ ಅಲ್ಲಿಗೆ ನಿಲ್ಲಿಸಿದ್ದ ನನಗೆ ಏನೋ ದಿಗಿಲುದಾಸವಾಣಿ ಕಾರ್ಯಕ್ರಮಗಳೇನೋ ಕೊಡುತ್ತಿದ್ದೆಸಾಧನೆ ಮಾಡಿರುವವರಿಗೆಹೋಲಿಸಿದರೆಶಾಸ್ತ್ರೀಯ ಸಂಗೀತದಲ್ಲಿ ನಾನು zero ಎಂದರೂ ತಪ್ಪೇನಿಲ್ಲಇವರು ನೋಡಿದರೇ ಮಹಾನ್ ಕಲಾವಿದೆವೀಣೆಹಾಡುಗಾರಿಕೆಎರಡರಲ್ಲೂ ಅತ್ತ್ಯುನ್ನತ ಸಾಧನೆ ಮಾಡಿರುವವರುನನಗೆ ಏನಾದರೂ ಹಾಡು ಎಂದುಅಥವಾ ಪಠ್ಯಕ್ರಮದಿಂದ ಏನಾದರೂ ಕೇಳಿದರೆ ಏನಪ್ಪಾ ಗತಿಇವರು ನನಗೆ ಪಾಠ ಹೇಳಿಕೊಡಲು ಒಪ್ಪುತ್ತಾರಾಹೀಗೆ ಹಲವಾರು ಯೋಚನೆಗಳ ಮಧ್ಯೆಯೇ ನನ್ನ ಅತ್ತೆ ಹಾಗೂ ಗಂಡನ ಜೊತೆ ಮೇಡಂ ಮನೆಗೆಕಾಲಿಟ್ಟೆಮುಂಚೆಯೇ ಕರೆ ಮಾಡಿ 7.30 ಗಂಟೆಗೆ ಬರುತ್ತೇವೆ ಎಂದು ಹೇಳಿ ಹೋಗಿದ್ದೆವುಬಾಗಿಲು ತೆಗೆದರುನಗು ತುಂಬಿದ ಅವರ ಮುಖ ನೋಡಿನನಗೆ ಏನೋ ಆನಂದವಾಯಿತುಓಹ್ಮೇಡಂ strict ಅಲ್ಲ ಅನಿಸುತ್ತೆ  ಎಂದು ಮನಸ್ಸಿನಲ್ಲೇ ಅಂದುಕೊಂಡೆಮಾತಿನ ಮಧ್ಯೆನಾವು  ಹೊತ್ತಿಗೆಬಂದದ್ದು ನಿಮಗೆ ತೊಂದರೆ ಆಯ್ತೋ ಏನೋ ಅಂತ ಹೇಳಿದೆವುಮೇಡಂ ಅದಕ್ಕೆ “ತೊಂದರೆ ಕೊಟ್ಟಾಯಿತಲ್ಲಬಿಡಿ” ಎಂದು ನಕ್ಕಿದರುಸಾಮಾನ್ಯವಾಗಿ ನಾವು ಇದಕ್ಕೆ “ಅಯ್ಯೋ ಇಲ್ಲ ಬಿಡಿ” ಎಂದು ಹೇಳಿಎಲ್ಲೋ ಮನಸ್ಸಿನೆಲ್ಲೆಡೆ “ಹೌದು” ಎಂದುಕೊಳ್ಳುತ್ತೇವೆಆದರೆ ಮೇಡಂ ಇದ್ದಿದ್ದನ್ನುಇದ್ದ ಹಾಗೆ ಹೇಳಿ ತಮ್ಮ straight forwardness ತೋರಿಸಿಕೊಂಡರುನನಗೆ ಇದೂ ತುಂಬಾ ಇಷ್ಟವಾಯಿತುಪಾಠ ಹೇಳಿಕೊಡುವಾಗಲೂ ಅಷ್ಟೇಬಹಳ ಸೂಕ್ಷ್ಮವಾಗಿ ಗಮನಿಸಿತಪ್ಪುಗಳನ್ನು straight forward ಆಗಿ ಹೇಳಿ ತಿದ್ದುತ್ತಾರೆ. “ಎಲ್ಲಿಒಂದು ಹಾಡಮ್ಮ” ಎಂದರುಮೊದಲೇ ದಿಗಿಲಿದ್ದನನಗೆ ಅಂದುಕೊಂಡ ಕ್ಷಣ ಬಂದೆ ಬಿಡ್ತಲ್ಲಪ್ಪಾಎಂಬ ಯೋಚನೆಒಂದು ದೇವರನಾಮ ಹಾಡಿದೆತಮ್ಮ ಶಿಷ್ಯೆ ಯಾಗಿ ನನ್ನನ್ನು ತೊಗೊಳ್ತರೋಇಲ್ವೋ ಅಂತ ಯೋಚನೆ ಮಾಡಿ ಮುಗಿಸುವಷ್ಟರಲ್ಲಿ “ಆಯ್ತಮ್ಮನಾನು ಹೇಳ್ಕೊಡ್ತೀನಿಆದರೆ ಚೆನ್ನಾಗಿ ಅಭ್ಯಾಸ ಮಾಡ್ಬೇಕು” ಅಂತ ಹೇಳಿದರುನನಗೆ ಕುಣಿದಾಡುವಷ್ಟು ಖುಷಿಪಾಠ ಶುರುವಾಯಿತುಕಲಿಯಲು ಆರಂಭಿಸಿದೆಸಂಗೀತ ಪಾಠದ ಜೊತೆ ಜೀವನದ ಎಷ್ಟೋ ಪಾಠಗಳನ್ನು ಮೇಡಂ ನನಗೆ ಹೇಳಿಕೊಟ್ಟರುನಾನುಕಾರ್ಯ ನಿರ್ವಹಿಸುತ್ತಿದ್ದ ಖಾಸಗಿ company ಅಲ್ಲಿ ತೊಂದರೆ ಅನುಭವಿಸುತ್ತಿದ್ದ ನನಗೆ ಬಹಳಷ್ಟು ನೈತಿಕ ಬೆಂಬಲ ನೀಡಿದವರು ಶಾರದಾ ಮೇಡಂನಿನಗೆ ಹತ್ತಿರವಿರುವ ಒಳ್ಳೆಯಆರಾಮಾದ ಕೆಲಸ ಸಿಕ್ಕೇ ಸಿಗತ್ತೆ ಅಂತ ಹೇಳಿದ್ರುಅದು ನಿಜವಾಗಿದೆಇಂದುಅವರು ಏನೇ ಹೇಳಿದರೂ ಒಳ್ಳೆಯಮನಸ್ಸಿನಿಂದ ಹೇಳ್ತಾರೆ.ಅದು ಆಗೇ ಆಗತ್ತೆ ಅನ್ನೋದು ನನ್ನ ನಂಬಿಕೆನನಗೆ ಹೇಗೆ ಕಲಿಯಬೇಕುಹಾಗೆಯೇ ಮತ್ತೊಬ್ಬರಿಗೆ ಹೇಗೆ ಹೇಳಿಕೊಡಬೇಕು ಎಂದು ಹಂತ ಹಂತವಾಗಿ ಹೇಳಿಕೊಟ್ಟರುಮೇಡಂ ಇಂದ ಹಲವಾರುವಿಷಯಗಳನ್ನು ತಿಳಿದುಕೊಂಡೆಕೇವಲ ಹಾಡಿದರೆ ಸಾಲದುತಕ್ಕ ಮಟ್ಟಿಗೆ theory ಕೂಡ ತಿಳಿದಿರಬೇಕು ಎಂದು ಅವರ ಭಾವನೆಇಂತಹ ಒಳ್ಳೆಯಮಾರ್ಗದರ್ಶನ ಕೊಡುವ ಗುರು ಈಗಿನ ದಿನಗಳಲ್ಲಿ ಸಿಗುವುದು ಅಸಾಧ್ಯದ ಹತ್ತಿರವೇಕೇಳಿ ಅಚ್ಚರಿ ಆಗಬಹುದು.. ಮೇಡಂ ತಾವು ಮಾಡುವಪಾಠಕ್ಕೆ fees ತೆಗೆದುಕೊಳ್ಳುವುದಿಲ್ಲವಿದ್ಯೆ ಕಲಿಯಿರಿಅಷ್ಟೇ ಸಾಕು ಅನ್ನುತ್ತಾರೆಅವರು ಒಂದು knowledge bank. ಏನು ಕೇಳಿದರೂಪುಸ್ತಕತೆಗೆದು ಹಾಡುವ ನನಗೆಇವರು  ವಯಸ್ಸಿನಲ್ಲೂ ಏನು ಕೇಳಿದರೂ ಫಟ್ ಅಂತ ಹಾಡಲು ಶುರು ಮಾಡ್ತಾರಲ್ಲಪ್ಪ!! ಎಂದು ಅಚ್ಚರಿ ಆಗಿರುವಸನ್ನಿವೇಶಗಳು ಬಹಳ ಇವೆಅವರ ನೆನಪಿನ ಶಕ್ತಿಗೆ ಒಂದು ದೊಡ್ಡ ನಮಸ್ಕಾರಹಾಗೆಯೇಅವರಲ್ಲಿರುವ ಜ್ಞಾನ ಎಲ್ಲರಿಗೂ ಹರಡಬೇಕು ಎಂಬಮನೋಭಾವನೆ ಇರುವ ಕೆಲವು ವ್ಯಕ್ತಿಗಳಲ್ಲಿ ಮೇಡಂ ಒಬ್ಬರು.ಒಮ್ಮೆ ಶಿವಮೊಗ್ಗದಲ್ಲಿ ಒಂದು ಸ್ಪರ್ಧೆ ಉಂಟು ಎಂದು ನನಗೆ ಸಿದ್ಧತೆಯನ್ನು ಸ್ವಯಂ ಅವರೇ ಮಾಡಿಸಿದ್ದರುಎಷ್ಟೋ ಹಾಡುಗಳಿಗೆ ರಾಗ ಹಾಕಿಸ್ವರದ ಸಮೇತ ಹೇಳಿಕೊಟ್ಟರುಒಂದು ಸ್ಪರ್ಧೆ ಉಂಟುನೀನು ತಯಾರಿ ಮಾಡಿಕೋ ಎಂದು ಹೇಳಿ ಸುಮ್ಮನಾಗಬಹುದಿತ್ತುತಾವೇ ಆಸಕ್ತಿ ತೋರಿಸಿನನಗೆ ಅಷ್ಟೂ ತಯಾರಿ ಮಾಡಿಸಿದರುನಾನು  ಸ್ಪರ್ಧೆಯಲ್ಲಿ ಗೆಲ್ಲಲಿಲ್ಲಆದರೆ ನನಗೆ ಅಲ್ಲಿ ಸಿಕ್ಕ ಬಹುಮಾನ ಏನೆಂದರೆ – ಮೇಡಂ ಗೆ ಗೊತ್ತಿರುವಸಂಸ್ಥೆಯೇ ಸ್ಪರ್ಧೆಯ ಆಯೋಜಕರುಅವರು ಮಾಡುತ್ತಿರುವ  ಒಳ್ಳೆಯ ಕೆಲಸ ನೋಡಿ ನನ್ನ ಜೊತೆ ತಮ್ಮ ಕಾಣಿಕೆಯಾಗಿ ಒಂದು cheque ಕಳಿಸಿದರುಅಲ್ಲಿನಾನು Prof. ಟಿಶಾರದಾ ಅವರ ಶಿಷ್ಯೆನಿಮಗಾಗಿ ಇದನ್ನು ಕಳಿಸಿದ್ದಾರೆ ಎಂದು ಹೇಳಿದ ಮರು ಕ್ಷಣ ನನಗೆ ಸಿಕ್ಕ ಮರ್ಯಾದೆವರ್ಣಿಸಲು ಸಾಧ್ಯವಿಲ್ಲ!! ಅನುಭವಿಸಿಯೇ ನೋಡಬೇಕುಬೇರೆ ಎಲ್ಲೆಡೆಯೂ ಅಷ್ಟೇಟಿಶಾರದಾ ಅವರ ಶಿಷ್ಯೆ ಎಂದರೆ ಮರ್ಯಾದೆಯೇ ಬೇರೆಅಷ್ಟು ದೊಡ್ಡ ಹೆಸರು ನಮ್ಮ ಮೇಡಂನದ್ದು.ಸಂಗೀತ ಕ್ಷೇತ್ರದಲ್ಲಿ ಅವರಿಗೆ ಗೊತ್ತಿಲ್ಲದ ವ್ಯಕ್ತಿ ಇಲ್ಲಎಲ್ಲರಿಗು ಅವರು ಯಾರು ಎಂದು ಗೊತ್ತುಅವರ ಒಂದು phone call ಸಾಕುನಮಗೆ ಏನುಬೇಕೋ ಅದು ಆಗುವುದಕ್ಕೆಆದರೆಮೇಡಂ ಎಂದೂ ಅದನ್ನು ಪ್ರೋತ್ಸಾಹಿಸಿಲ್ಲಗೆದ್ದರೆ ಒಳ್ಳೆಯದುಗೆಲ್ಲದಿದ್ದರೆ ಅದು ಒಂದು ಅನುಭವಪಾಠಎಂದು ನನಗೆ ಹೇಳಿಕೊಟ್ಟರುಅಯ್ಯೋನನಗೂ ಯಾರಾದರೂ ಗೊತ್ತಿದ್ದರೆ ನಾನು ಇಲ್ಲಿ pass / ಗೆಲ್ಲುತ್ತಿದ್ದೆ ಎಂಬ ಮನೋಭಾವನೆ ಇದ್ದ ನನಗೆಭಾಗವಹಿಸಿದ್ದು ಮುಖ್ಯಗೆಲ್ಲುವುದು ಬಿಡಿವುದು ಮುಖ್ಯವಲ್ಲ ಎಂದು ಮೇಡಂ ತೋರಿಸಿಕೊಟ್ಟರುಸಂಗೀತ ಒಂದು ಸುಂದರ ಅನುಭವವ್ಯಾಪಾರವಲ್ಲ ಎಂದು ಮೇಡಂನಿಂದ ಕಲಿತೆ.ಜೊತೆಯಲ್ಲಿಮೇಡಂ ಹಾಗೆ ನನ್ನ ಗೆಳೆತನ ಶುರುವಾಗಿತ್ತುಮೇಡಂ ತುಂಬಾ friendly. ಸದಾ ಹಸನ್ಮುಖಿನೋಡಲು ಬಹಳ ಸುಂದರವಾಗಿದ್ದರೆವಿದ್ಯಾರ್ಥಿಗಳು ಯಾವಾಗ ಬೇಕಾದರೂ ಅವರ ಮನೆ ಬಾಗಿಲು ತಟ್ಟಬಹುದುಸದಾ ಸಿದ್ಧ ನಮ್ಮ ಮೇಡಂಆದರೆನರೇಂದ್ರ ಮೋದಿ ಇದ್ದರೆನಮಗೆಬೇರೆ ಸಮಯ ನಿರ್ಧರಿಸುತ್ತಾರೆಏನಪ್ಪಾ ಇದು ಅಂದುಕೊಂಡರ?? ಮೇಡಂ ನರೇಂದ್ರ ಮೋದಿ ಅವರ fan. ಅವರ man ki baat ತಪ್ಪದೆಕೇಳಿಸಿಕೊಳ್ಳುತ್ತಾರೆ.ನನಗೆ ದಿನೇ ದಿನೇ ಅವರ ಮೇಲಿದ್ದ ಭಯ ಹೋಗಿ ಆತ್ಮೀಯತೆ ಹೆಚ್ಚುತ್ತಾ ಹೋಯಿತುಅಷ್ಟು ಸಾಧನೆ ಮಾಡಿದರೂಮೇಡಂ ಬಹಳ down to earth. ನನ್ನ ಎಷ್ಟೋ ವೈಯಕ್ತಿಕ ವಿಷಯಗಳನ್ನು ಅವರ ಬಳಿ ಚರ್ಚಿಸುತ್ತೇನೆಅವರ advice ಇಂದ ಮನಸ್ಸಿಗೆ ಎಷ್ಟೋ ನೆಮ್ಮದಿಹೆಣ್ಣು ಮಕ್ಕಳುindependent ಆಗಿ ಇರಬೇಕುಕೆಲಸ ಮಾಡಬೇಕಮ್ಮ ಅನ್ನುತ್ತಾರೆಅವರು ಏನು ಹೇಳುತ್ತಾರೋ ಅದು ಆಗೇ ಆಗುತ್ತದೆಯಾವಾಗಲೂಒಳ್ಳೆಯದನ್ನೇ ಬಯಸುವ ಇಂತಹ ವ್ಯಕ್ತಿಲಕ್ಷಕ್ಕೆ ಒಬ್ಬರುಅಂತಹ ಲಕ್ಷಕ್ಕೆ ಒಬ್ಬರು ನನಗೆ ಪರಿಚಯವಾಗಿರುವುದು ನನ್ನ ಭಾಗ್ಯವಲ್ಲದೆ ಮತ್ತೇನು?

~ ಪೂಜಾ ತಾಯೂರ್

ನನ್ನಮ್ಮನ ಪ್ರವಾಸ ಕಥನ – ಶ್ರೀ ಅಮರನಾಥ್ ಯಾತ್ರೆ

(ಮುಂದುವರಿಕೆ)

ಚಂದನವಾಡಿಯಲ್ಲಿ ಅಂಗಡಿಗಳು, ಹೋಟೆಲ್ಗಳು ಎಲ್ಲವೂ ಇವೆ. ಅರ್ಧಗಂಟೆಯ ನಮ್ಮ ವಿಶ್ರಾಂತಿ ಮತ್ತು ಕುದುರೆಗಳಿಗೆ ಆಹಾರ ಕೊಟ್ಟು ಅವು ಸುಧಾರಿಸಿಕೊಂಡ ನಂತರ ಮತ್ತೆ ಹೊರಟೆವು. ಮುಂದಿನ ದಾರಿ ಪಿಸುಘಾಟ್. ಇದು ಕಠಿಣವಾದ ದಾರಿ. ಜೈ ಅಮರನಾಥ್ ಎಂಬ ಶಬ್ದವೇ ನಮಗೆ ಧೈರ್ಯವನ್ನು ನೀಡುತ್ತಿತ್ತು. ಕಿರಿದಾದ ಕೊರಕುಲುಗಳಲ್ಲಿ, ಇಳಿಜಾರುಗಳಲ್ಲಿ ಬರುವಾಗ ಜೀವದ ಹಂಗು ತೊರೆದಿದ್ದೆವು. ಆಗ ನಡೆದುಕೊಂಡು ಬರುವವರಿಗೆ ಆಯಾಸವೇ ಹೊರತು ಅಪಾಯವಿಲ್ಲವೆನಿಸಿತು. ಪಿಸುಘಾಟ್ ದಾಟಿ ಒಂದೆಡೆ ನಿಂತೆವು. ಅಲ್ಲಿ ಮೊದಲೇ ನಡೆದು ಬಂದವರು ನಮ್ಮವರು ಮೂವರು ಸಿಕ್ಕರು. ಏಕಾದಶಿ ಎಂದು ಒಂದಿಬ್ಬರು ತಿನ್ನಲು ಏನೂ ಬೇಡವೆಂದರು. ನಾನು ರಾಗಿ ಹುರಿಟ್ಟು ಕಲೆಸಿ ತಿಂದೆನು. ಅಲ್ಲಿಂದ ಮುಂದೆ ಒಂದು ನದಿಯನ್ನು ದಾಟಿ ಗುಡ್ಡವನ್ನು ಹತ್ತಿ, ಇಳಿದು ನಡೆದು ದಾಟಿದೆವು. ಮತ್ತೆ ಕುದುರೆ ಹತ್ತಿ ಪಯಣ. ಅಷ್ಟುಹೊತ್ತಿಗೆ ನಾವು ಹಿಮಾಲಯದ ಗರ್ಭದೊಳಗಿದ್ದೆವು. ಎಲ್ಲೆಲ್ಲೂ ಹಿಮ ತುಂಬಿದ ಶಿಖರಗಳು. ಮುಂದೆ ಮಹಾಪಶುಪತ್ತೇರಿ ಘಾಟ್ ಗೆ ಬಂದೆವು. ಇಲ್ಲಿ ಕೂಡ ಹೋಟೆಲ್, ಮೈಕೈ ಕಾಯಿಸಲು ಕೆಂಡ ಎಲ್ಲವೂ ಸಿಗುತ್ತಿತ್ತು. ನಾವು ಇಳಿಯಲಿಲ್ಲ. ಸಾಗಿದ ನಮ್ಮ ಪಯಣದಲ್ಲಿ ಮಹಾಗುಣಾಸುಘಾಟ್ ಅತಿ ಎತ್ತರವಾದುದು- ಹದಿನಾಲ್ಕೂವರೆ ಸಾವಿರ ಅಡಿಗಳ ಎತ್ತರ. ಎಲ್ಲೆಲ್ಲೂ ಹಿಮ. ಮುಂದೆ ಪಯಣಿಸುತ್ತಾ ಸಂಜೆಯ ವೇಳೆಗೆ ಪ್ರಸಿದ್ಧ ಶೇಷನಾಗ್ ಸರೋವರದ ಬಳಿಗೆ ಬಂದೆವು. ಧನ್ಯೋಸ್ಮಿ. ಶೆರ್ಪನೂ ಕೂಡ ಜೈ ಶೇಷನಾಗ್ ಸರೋವರ್ ಕೀ ಜೈ ಎಂದು ಕೂಗಿ ಹೇಳಿದನು.

*****

೮ - ಹರ ಕೊಲ್ಲಲ್ ಪರ ಕಾಯ್ವನೇ?

ಶೇಷನಾಗ್ ಸರೋವರದ ದೃಶ್ಯ ಹಿಮಾಲಯದಲ್ಲೇ ಅತಿ ಮನೋಹರವಾದುದೆಂದು ಬಲ್ಲವರು ಹೇಳುವರು. ಮಹಾಶಿವನು ಗೌರಿ, ಗಣೇಶರನ್ನು ಪಹಲ್ ಗಾವ್ ನಲ್ಲಿ ಬಿಟ್ಟು ಈ ಸ್ಥಳದಲ್ಲಿ ಶೇಷನನ್ನು ತೊರೆದು ಒಂಟಿಯಾಗಿ ತಪಃಗೈಯಲು ಗುಹೆಗೆ ಹೋದನೆಂದು ಪ್ರತೀತಿ. ಅಲ್ಲಿ ಬಿದ್ದ ಐದು ಹೆಡೆಗಳ ಶೇಷನು ಐದು ಮಂಜುಬೆಟ್ಟಗಳಾಗಿ ಮಾರ್ಪಾಟಾಗಿದೆ. ಈ ಐದು ಬೆಟ್ಟಗಳ ನಡುವೆ ಇರುವ ಶೇಷನಾಗ ಸರೋವರವು ನೀಲಿಹಸಿರು ನೀರಿನಿಂದ, ಸ್ಫಟಿಕ-ಪಚ್ಚೆ ಹರಡಿದ ಅಸದಳ ಸೌಂದರ್ಯದಿಂದ ಕಂಗೊಳಿಸುತ್ತದೆ. ನಾನು ಇಂತಹ ದೃಶ್ಯವನ್ನು ಚಿತ್ರಗಳಲ್ಲಿ ನೋಡಿದ್ದೆ. ಆ ಕ್ಷಣದಲ್ಲಿ ನಾನೆಂಬುದು ಮರೆತು ಈ ದೈವೀಕ ಸೌಂದರ್ಯದಲ್ಲಿದ್ದು ಅಂತರ್ಗತಳಾಗಿದ್ದೆ. ನಮ್ಮ ದಾರಿ ಎತ್ತರದಲ್ಲಿದ್ದುದರಿಂದ ಸರೋವರದ ನೋಟ ಸ್ಪಷ್ಟವಾಗಿ ಕಾಣುತ್ತಿತ್ತು. ಹತ್ತಿರ ಹೋಗುವ ಮಾತೇ ಇಲ್ಲ!

ಈ ಶೇಷನಾಗ್ ಸರೋವರದಿಂದಲೇ ಲಂಬೋದರಿ ನದಿಯು ಹುಟ್ಟುವುದು. ಇಲ್ಲಿಯವರೆಗಿನ ಪ್ರಯಾಣದಲ್ಲಿ ಒಮ್ಮೊಮ್ಮೆ ನದಿ ಕಾಣುತ್ತಿತ್ತು. ಒಮ್ಮೊಮ್ಮೆ ಮಂಜಿನಲ್ಲಿ ಮುಚ್ಚಿರುತ್ತಿತ್ತು. ಒಂದು ಕಡೆ ದಾರಿಗೆ ದೂರದಲ್ಲಿ ಮಂಜಿನಿಂದಾದ ಎರಡು ದೊಡ್ಡ ಹೊಂಡಗಳಿದ್ದವು. ಅವುಗಳಿಂದ ನೀರು ಧುಮುಕುತ್ತಿತ್ತು. ಅದು ಲಂಬೋದರಿ ನದಿ ಎಂದಾಗ ನಮಗೆ ಆಶ್ಚರ್ಯದೊಡನೆ ಭಯವೂ ಆಯಿತು. ಶೇಷನಾಗ್ ಸರೋವರದ ದಡದಲ್ಲಿ ಟೆಂಟುಗಳಿದ್ದವು. ನಾವು ಹೋಗಿ ನಮಗೆ ಶೆರ್ಪಾ ಗೊತ್ತು ಮಾಡಿದ್ದ ಟೆಂಟಿನಲ್ಲಿಳಿದೆವು. ಅಷ್ಟುಹೊತ್ತಿಗೆ ಎಲ್ ಕೆ ರವರು ತುಂಬಾ ಸುಸ್ತಾಗಿದ್ದರು. ಆದರೆ ಏನನ್ನೂ ತಿನ್ನುವುದಿಲ್ಲವೆಂದರು. ನಾವೆಲ್ಲಾ ಕಾಲಿನ ಶೂಸ್, ಸಾಕ್ಸ್, ತಲೆಯ ಟೋಪಿ, ಶಾಲುಗಳನ್ನು ಬಿಚ್ಚಿ ಕಾಲು ಚಾಚಿದೆವು. ನಡೆದು ಬರುವವರಿಗಾಗಿ ಬಿಸಿನೀರು, ಹಾಸಿಗೆಗಳನ್ನು ಹಾಸಿ ರೆಡಿ ಮಾಡಿದ್ದೆವು. ನೆಲದ ಮೇಲೆ ಮೊದಲು ರೈನ್ ಕೋಟುಗಳನ್ನು, ಪ್ಲಾಸ್ಟಿಕ್ ಶೀಟುಗಳನ್ನು ಹಾಕಿ ಆನಂತರ ಕಂಬಳಿಗಳನ್ನು ಹರಡಿದ್ದೆವು. ನಮ್ಮ ಎಲ್ಲಾ ವಸ್ತುಗಳನ್ನು ನಮ್ಮ ದೇಹಕ್ಕೆ ತಗುಲಿದಂತೆ ಇಟ್ಟಿದ್ದೆವು. ನಮ್ಮ ಟೆಂಟಿನಿಂದ ಸರೋವರದ ನೋಟ ಕಾಣುತ್ತಿತ್ತು. ಭಾಗ್ಯವಿದು ಅಲ್ಲವೇ! ನನಗೇನೂ ಆಯಾಸವಾಗಿರಲಿಲ್ಲ. ಸರೋವರವನ್ನು ನೋಡುತ್ತಾ ಇದ್ದೆ.

ಅಲ್ಲಿ ನಮಗೆ ಕಲ್ಕತ್ತಾದ ದಂಪತಿಗಳು ಇಬ್ಬರು ದೊರೆತರು. ಅವರು ಹಿಂದಿನ ದಿನ ಗುಹೆಗೆ ಹೋಗಿ ಲಿಂಗದರ್ಶನ ಮಾಡಿದವರಲ್ಲಿ ಮೊದಲಿಗರು. ಮುಂದಿನ ದಾರಿ ಬಹಳ ಕಠಿಣ ಹಾಗೂ ಅಪಾರ ಮಂಜಿನಿಂದ ಕೂಡಿದೆ. ಆದರೆ ದರ್ಶನ ಭಾಗ್ಯ ಎಲ್ಲರಿಗೂ ದೊರಕುವುದೆಂದು ಹೇಳಿದರು. ರಾತ್ರಿ ಎಂಟು ಗಂಟೆಯ ವೇಳೆಗೆ ನಡೆದು ಬಂದವರು ಬಂದು ನಮ್ಮನ್ನು ಸೇರಿದರು. ಎಲ್ಲರಿಗೂ ಅದೂಇದೂ ಮಾತನಾಡಲೂ ಆಗದಷ್ಟು ಚಳಿ, ಆಯಾಸ. ಇಷ್ಟು ಹೊತ್ತಿಗೆ ನಮಗೆ ಹಸಿವು, ಬಾಯಾರಿಕೆ, ಒಂದು-ಎರಡು ಎಲ್ಲವೂ ಬಂದಾಗಿತ್ತು. ರಾತ್ರಿ ೧೧ ಗಂಟೆ ವೇಳೆಗೆ ನಮ್ಮ ಟೆಂಟು ಬೀಳುವಂತಾಗಿ ಭಯವಾಗಿ ಶ್ರೀನಿವಾಸರು ಹೋಗಿ ಶೆರ್ಪಾನನ್ನು ಕರೆತಂದರು. ನಾವು ಮಿಕ್ಕವರು ಟೆಂಟಿನ ಮಧ್ಯದ ಕಂಬ ಕುಸಿಯದಿರಲೆಂದು ಭದ್ರವಾಗಿ ಹಿಡಿದಿದ್ದೆವು. ಹತ್ತು ನಿಮಿಷಗಳೊಳಗೆ ನಮ್ಮನ್ನು ಪಕ್ಕದ ಟೆಂಟಿಗೆ ಕರೆತಂದರು. ಆದರೆ ಹೊರಗೆ ಚಳಿಯಲ್ಲಿ ಹೋಗಿಬಂದು ಮಾಡಿದ ಶ್ರೀನಿವಾಸರ ದೇಹ ಮರಗಟ್ಟಿದಂತಾಗಿ ಚಿಂತೆಯಾಯಿತು. ರಮೇಶರು ಅವರಿಗೆ ಉಪಚಾರ ಮಾಡಿ ತ್ರಾಣ ಬರುವಂತೆ ಮಾಡಿದರು. 

ಈ ಶೇಷನಾಗ್ ಪ್ರಾಂತ್ಯದಲ್ಲಿ ಗಾಳಿಯು (ಅಥವಾ ಆಮ್ಲಜನಕ) ವಿರಳವಾಗಿತ್ತು. ಉಸಿರಾಡಲು ಒಮ್ಮೊಮ್ಮೆ ಕಷ್ಟವೆನಿಸತೊಡಗಿತು. ಇಲ್ಲಿ ಶೇಷನು ತನ್ನನ್ನು ಬಿಟ್ಟು ಹೋದ ಮಹಾಶಿವನ ಮೇಲಿನ ಕೋಪವನ್ನು ತೋರಿಸದೆ ಬಿಡನು ಎನ್ನುವರು. ಇಲ್ಲಿಯವರೆಗೆ ಬಂದು ಆಗೊಲ್ಲಾ ಎಂದು ಹಿಂದಿರುಗುವವರು ಬಹಳ ಮಂದಿ. ನಾವೂ ಅಂತಹವರನ್ನು ಮಾರ್ಗಮಧ್ಯದಲ್ಲಿ ನೋಡಿ, ನಮಗೆ ದರ್ಶನ ಭಾಗ್ಯವು ದೊರಕಲೆಂದು ಆ ಶಿವನನ್ನೇ ಧ್ಯಾನಿಸಿ ಮನದಲ್ಲೇ ಪ್ರಾರ್ಥಿಸುತ್ತಿದ್ದೆವು. ಅಂದು ರಾತ್ರಿ ಕಳೆದು ಬೆಳಗಾದಾಗ ನಮಗೆ ಇಂದು ಎಂಟನೇ ತಾರೀಕು, ದರ್ಶನದ ದಿನವೆಂದು ಖುಷಿ, ಹುರುಪು. ನೀರು ಮುಟ್ಟುವಂತಿರಲಿಲ್ಲ ಅಷ್ಟು ಕೊರೆತ. ಬಿಸಿನೀರು ಸಿಗಲಿಲ್ಲ. ಹೇಗೋ ಬಾಯಿ, ಮುಖ ತೊಳೆದು ಒಗೆದ ಶುಭ್ರ ಬಟ್ಟೆಗಳನ್ನುಟ್ಟು ಹೊರಟೆವು.       

*****

ಶೇಷನಾಗ್ ನಿಂದ ಬರೀ ಹಿಮ ಮುಸುಕಿದ ದಾರಿ. ಅದರ ಮೇಲೆ ಕುದುರೆಗಳು ನಡೆಯುವಾಗ ನಮಗೆ ಬಹಳ ಭಯವಾಗುತ್ತಿತ್ತು. ನಾವು ಕ್ರಮಿಸಬೇಕಿದ್ದ ೧೨ ಮೈಲಿಗಳಲ್ಲಿ ೮-೯ ಮೈಲಿಗಳಂತೂ ದಪ್ಪ ಹಿಮವಿದ್ದ ಮಂಜಿನ ದಾರಿ. ಎದ್ದುಬಿದ್ದು ಹೋಗುತ್ತಿದ್ದ ಕುದುರೆಗಳ ಪಾಡು ಅಯ್ಯೋ ಎನಿಸುವಂತಿತ್ತು. ಪಹಲ್ ಗಾವ್ ನಲ್ಲಿ ದೂರದಲ್ಲಿ ಆಕಾಶಕ್ಕೆ ಏಕವಾದಂತೆ ಇದ್ದ ಹಿಮಪರ್ವತಗಳ ನಡುವೆಯೇ ಈಗ ನಾವಿದ್ದೇವೆಂದು ತಿಳಿದು ಆಶ್ಚರ್ಯವಾಯಿತು. ಸಂತೋಷವೂ ಆಯಿತು. ಒಂದೆಡೆ ಅತಿ ಎತ್ತರದ ಪುಟ್ಟದಾರಿಯಿದ್ದು, ಯಾತ್ರಿಗಳು ಕಾಣಿಸದೆ ಬರಿಯೆ ಜೈ ಅಮರನಾಥ್ ಎಂಬ ಧ್ವನಿಯು ಮಾತ್ರ ಕೇಳಿಬರುತ್ತಿತ್ತು. ಸುಮಾರು ೧೧.೩೦ ರ ವೇಳೆಗೆ ಪಂಚತರಣಿಗೆ ಬಂದಾಗ ನಿರಾಳವಾಯಿತು. ಪಂಚತರಣಿಯಿಂದ ಸ್ವಲ್ಪ ದೂರದವರೆಗೆ ಬಯಲುಪ್ರದೇಶ. ಇಲ್ಲಿ ಐದು ನದಿಗಳು ಬಂದು ಸೇರುವುದು ವಿಶೇಷ. ಟೆಂಟಿನಲ್ಲಿ ತಂಗಿದ್ದು ಸ್ವಲ್ಪ ಏನೋ ಒಂದಿಷ್ಟು ಆಹಾರ ತಿಂದೆವು. ಅರ್ಧ ಗಂಟೆಯ ನಂತರ ಹೊರಟಾಗ ಇಲ್ಲಿಂದ ಮುಂದೆ ದಾರಿ ಅಷ್ಟು ಕಠಿಣವಿಲ್ಲ, ಮಂಜು ಕೂಡ ಕಡಿಮೆ ಎಂದು ಹೇಳಿ ನಮ್ಮ ಶೆರ್ಪಾ ಸಮಾಧಾನ ಮಾಡಿದನು. ಅಷ್ಟುಹೊತ್ತಿಗೆ ಹಿಂದಿನ ದಾರಿಯಲ್ಲಿ ಬಿದ್ದು ನೊಂದಿದ್ದ ಸುಬ್ಬಮ್ಮನವರ ಕೈ ಮುರಿದಂತೆ ಕಂಡು ಊದಿತ್ತು. ನೋವು, ಭಯದಿಂದ ಒದ್ದಾಡುತ್ತಿದ್ದರು. ಎಲ್ ಕೆ ರವರ ಆರೋಗ್ಯವಂತೂ ತೀರಾ ಹದಗೆಟ್ಟಿತ್ತು. ನಡೆದು ಬರುತ್ತಿದ್ದ ಆ ಮೂರು ಮಂದಿಯ ಪಾಡು ಹೇಗೋ ಎಂದೆನಿಸುತ್ತಿತ್ತು. ನಾವೆಲ್ಲರೂ ಪ್ರಕೃತಿಯ ಸುಂದರ ಮತ್ತು ಭಯಂಕರ ರೂಪಗಳೆರಡನ್ನೂ ಕಂಡಿದ್ದೆವು. ದೇವರಧ್ಯಾನ ಮಾತ್ರ ನಮ್ಮ ಮಂತ್ರವಾಗಿತ್ತು. ಅದರಿಂದ ನನ್ನ ಮನಸ್ಸಿಗೆ ಸಮಾಧಾನವಾಗಿತ್ತು.

ಅಂದು ಒಂದೂವರೆ ಗಂಟೆಯ ವೇಳೆಗೆ ಒಂದು ಕಿಮೀ ದೂರದಿಂದಲೇ ಗುಹೆಯನ್ನು ಕಂಡಾಗ ಎಲ್ಲರ ಕಣ್ಣಲ್ಲೂ ನೀರು ಬಂದಿತ್ತು. ಆ ಭವ್ಯವಾದ ಹಿಮಗಲ್ಲಿನ ಗುಹೆಯನ್ನು ಕಂಡು ನನಗೆ ಕುವೆಂಪುರವರು ಹೇಳಿದ “ಪ್ರಕೃತಿಯ ಆರಾಧನೆ ಪರಮನ ಆರಾಧನೆ ಮತ್ತು ಮುಕ್ತಿಯ ಸಾಧನೆ” ಎಂಬ ಮಾತು ನೆನಪಿಗೆ ಬಂದಿತು. ಎರಡೂಕಾಲು ಗಂಟೆಗೆಲ್ಲಾ ನಾವು ಗುಹೆಯನ್ನು ತಲುಪಿದೆವು.

ಶ್ರೀ ಅಮರನಾಥ್ ಗುಹೆಯು ಬೆಟ್ಟದ ಮಧ್ಯಭಾಗದಲ್ಲಿದೆ. ಹತ್ತಲು ಮಾನವನಿರ್ಮಿತ ಸುಮಾರು ೪೦ ಮೆಟ್ಟಿಲುಗಳಿವೆ. ಹತ್ತಿ ತಲುಪಿದಾಗ ಕಂಡಿದ್ದು ಇದು ಸಹಜವಾಗಿ ಆಗಿರುವ ಪ್ರಕೃತಿನಿರ್ಮಿತ ಗುಹೆ. ಸುಮಾರು ೧೫೦ ಅಡಿ ಅಗಲ, ೮೦ ಅಡಿ ಎತ್ತರವಿರುವ ಗುಹೆಯಲ್ಲಿ ಮೂರು ಹಂತಗಳಿವೆ. ಮೊದಲ ಹಂತವು ಒದ್ದೆಯಾಗಿದೆ. ಚಪ್ಪಲಿಗಳನ್ನು, ಬೂಟು-ಶೂಸ್ ಗಳನ್ನು ಅಲ್ಲಿಯೇ ಬಿಚ್ಚಿಟ್ಟು ೨ ರೂ ಬಾಡಿಗೆಗೆ ಮರದ ಚಪ್ಪಲಿಗಳನ್ನು ಪಡೆದು ಹಾಕಿಕೊಂಡು ಹೊರಡಬೇಕು. ಎರಡು ಬಾಗಿಲು ತರದ ದ್ವಾರಪ್ರವೇಶವಿದೆ. ಅವುಗಳ ಮೂಲಕ ಒಳಹೊಕ್ಕರೆ ನೀರು ನಿಂತಿರುವ (ಪಾದ ಮುಳುಗುವಷ್ಟು) ಎರಡನೇ ಹಂತವನ್ನು ಸೇರುತ್ತೇವೆ. ಇದು ವಿಶಾಲವಾಗಿದೆ. ಇಲ್ಲಿಂದ ನಮಗೆ ಭಗವಂತನ ದರ್ಶನವಾಗುವುದು. ಮೂರನೇ ಹಂತವು ೪-೫ ಅಡಿ ಎತ್ತರದ ಜಗುಲಿ. ಇದು ಗುಹೆಯ ಒಂದು ಕೊನೆ ಪಾರ್ಶ್ವದಲ್ಲಿದೆ. ಆ ಜಗುಲಿಯ ಬಲಮೂಲೆಯಲ್ಲಿ ಹಿಮದ ಲಿಂಗವೂ, ಎಡಮೂಲೆಯಲ್ಲಿ ಪಾರ್ವತಿ ಅಮ್ಮನವರೂ ನಡುವೆ ಗಣೇಶನೂ ಇದ್ದಾರೆ. ಪಾರ್ವತಿಯು ಲಿಂಗಾಕಾರದಲ್ಲಿದ್ದು ೩ ಅಡಿಗಳಷ್ಟು ಮುಂದೆ ಸೀರೆಯ ನೆರಿಗೆ ಹರಡಿದಂತೆ ಮಂಜು ಪದರಗಳಿವೆ. ಗಣೇಶನು ಸರಿಯಾದ ಆಕೃತಿಯಲ್ಲಿ ಇನ್ನೂ ಮೂಡುತ್ತಿದ್ದನು. ಬಲಮೂಲೆಯಲ್ಲಿ ಭವ್ಯವಾದ ಹಿಮದ ಲಿಂಗವು ಬೆಳೆದಿತ್ತು. ಗುಹೆಯ ಮೇಲಿನಿಂದ ಅಮರಗಂಗೆ ನದಿಯ ನೀರು ತೊಟ್ಟಿಕ್ಕುತ್ತಿರುತ್ತದೆ. ಅಮರಗಂಗಾ ನದಿಯು ಗುಹೆಯ ಬಳಿಯಿಂದ ಹರಿದು ಶೇಷನಾಗ್ ಸರೋವರಕ್ಕೆ ಸೇರುವುದು. ಜಗುಲಿಪೂರ್ತಿ ಒಂದೇ ಪಾಣಿವಟ್ಟದಂತೆ ದಟ್ಟವಾದ ಹಿಮದಿಂದ ಕೂಡಿತ್ತು. ಜಗುಲಿಯ ಕೆಳಗೆ ಈ ಹಿಮವು ಕರಗುತ್ತಿರುವ ಕೊರೆಯುವ ಮಂಜಿನ ನೀರಿನಲ್ಲಿ ನಾವು ನಿಂತಿದ್ದೆವು.  

ಶ್ರೀ ಅಮರನಾಥೇಶ್ವರ ಲಿಂಗವು ಸುಮಾರು ಆರೂವರೆ ಅಡಿ ಎತ್ತರವಿತ್ತು. ದೊಡ್ಡ ನೀರಿನ ಕೊಳಗದಷ್ಟು (ಅಥವಾ ಡ್ರಮ್) ದಪ್ಪವಿತ್ತು. ಪಾರದರ್ಶಕವಾದ, ನಯವಾದ ಮಂಜಿನಿಂದಾಗಿತ್ತು. ಆ ಸಮಯದಲ್ಲಿ ಲಿಂಗವನ್ನು ನಾವು ಮುಟ್ಟುವಂತಿರಲಿಲ್ಲ. ಪಾಣಿವಟ್ಟ ಕರಗುವವರೆಗೆ ಈ ರೀತಿ. ದೂರದಿಂದಲೇ ಅಮರನಾಥೇಶ್ವರನಿಗೆ ಗಂಗೆಯ ನೀರು ಹಾಕಿ ಪೂಜೆ, ಪ್ರಾರ್ಥನೆ ಮಾಡಿ ಕೊಬ್ಬರಿ ನೈವೇದ್ಯ ಮಾಡಿದೆವು. ಈ ರೀತಿ ಪ್ರತಿವರ್ಷವೂ ಅಮರನಾಥೇಶ್ವರ ಲಿಂಗವು ಮೂಡುತ್ತದೆ, ಕರಗುತ್ತದೆ. ಜಾತ್ರೆಯ ದಿನದ ವೇಳೆಗೆ ಲಿಂಗವನ್ನು ಮುಟ್ಟಿಮುಟ್ಟಿ ಕೊನೆಯ ಸಾವಿರಾರು ಜನರಿಗೆ ಲಿಂಗದರ್ಶನವಿಲ್ಲದೆ ಅದು ಅದಾಗಲೇ ಕರಗಿಹೋಗಿರುತ್ತದೆ.

ಯುಗಯುಗಾಂತರಗಳಿಂದ ಈ ರೀತಿ ಭಗವಂತನು ಮೂಡುತ್ತಲೇ ಇರುವುದರಿಂದೇನೊ ಅಮರನಾಥ ಎನ್ನುವುದು. ಒಟ್ಟಿನಲ್ಲಿ ರೋಮಾಂಚನಕಾರಿ ಅನುಭವವಾಯಿತು. ಎಲ್ಲರನ್ನು ನೆನೆಸಿಕೊಂಡು ಅವರವರ ಅಭೀಷ್ಟೆಗಳು ನೆರವೇರುವಂತೆ ಪ್ರಾರ್ಥಿಸಿಕೊಂಡೆನು. ನಮ್ಮವರೆಲ್ಲರ, ಅಲ್ಲಿದ್ದವರ ಎಲ್ಲರ ಮುಖಗಳಲ್ಲೂ ತೃಪ್ತಿಯೂ, ಸಾರ್ಥಕತೆಯೂ, ನೆಮ್ಮದಿಯೂ ನೆಲೆಸಿತ್ತು. ಹೆಚ್ಚು ಹೊತ್ತು ನಿಲ್ಲಲಾಗದು ಆ ಹಿಮಕೊರೆತದ ನೀರಿನಲ್ಲಿ! ನಾವು ಹಿಂದಿರುಗಿದೆವು.

ಸುಮಾರು ೫ ಗಂಟೆಯ ವೇಳೆಗೆ ಪಂಚತರಣಿಗೆ ಬಂದು, ವಿಶ್ರಾಂತಿಗಾಗಿ ಅಲ್ಲಿಯೇ ರಾತ್ರಿ ಕಳೆಯುವುದುದೆಂದು ನಮಗೆ ಮೊದಲೇ ಹೇಳಿದ್ದರು. ರಾತ್ರಿ ಎಂಟೂವರೆಯ ವೇಳೆಗೆ ಎಸ್ ಎಲ್ ರವರು, ಶ್ರೀನಿವಾಸ್ ಮತ್ತು ರಮೇಶ್ ನಡೆದು ಬಂದು ನಮ್ಮನ್ನು ಸೇರಿದರು. ಮೂವರೂ ತುಂಬಾ ಸುಸ್ತಾಗಿದ್ದರು. ಏನೋ ಒಂದು ಚೂರು ಆಹಾರ ತಿಂದು ಬಿದ್ದುಕೊಂಡೆವು.

ಒಂಭತ್ತನೇ ತಾರೀಕು ಮತ್ತೊಂದು ಬೆಳಗು. ಆ ದಿನ ಗುಣಾಸುಘಾಟ್, ಶೇಷನಾಗ್, ಪಿಸುಘಾಟ್, ಚಂದನವಾರಿ ಮೂಲಕವೇ ಮರುಪ್ರಯಾಣ ಮಾಡಿ ೭ ಗಂಟೆಯ ವೇಳೆಗೆ ಪಹಲ್ ಗಾವ್ ಬಳಿಯಿದ್ದ ಶೆರ್ಪಾ ಮನೆ ಸೇರಿದಾಗ ನಮ್ಮ ಶ್ರೀ ಅಮರನಾಥ್ ಯಾತ್ರೆ ಮುಗಿದಿತ್ತು. ನಾವೆಲ್ಲಾ ಸ್ನಾನ ಮಾಡಿ, ಬಟ್ಟೆ ಒಗೆದುಕೊಂಡೆವು. ನಮ್ಮ ಶೆರ್ಪಾ ನಮಗಾಗಿ ಅನ್ನ ಮಾಡಿಸಿದ್ದನು. ಸರಿಯಾದ ಬಿಸಿ ಊಟ ಮಾಡಿ ಮೂರು ದಿನಗಳಾಗಿದ್ದವು. ಎಲ್ಲರೂ ಮೊಸರನ್ನವನ್ನು ತಿಂದೆವು. ಆ ಶೆರ್ಪಾನ ಅಣ್ಣ ಸುಬ್ಬಮ್ಮನವರ ಮುರಿದ ಹಸ್ತಕ್ಕೆ ಮಂತ್ರ, ಔಷಧಿಗಳನ್ನು ಹಾಕಿದನು. ಎಲ್ಲರೂ ನಿರಾತಂಕವಾಗಿ ಮಲಗಿದೆವು.

*****

೧೦. ೭. ೧೯೮೭ ರಂದು ಬೆಳಗ್ಗೆ ೮ ಗಂಟೆಯ ವೇಳೆಗೆ ಟ್ರಕ್ ನಲ್ಲಿ ಪಹಲ್ ಗಾವ್ ನ ಕೇಂದ್ರಕ್ಕೆ ಬಂದೆವು. ಬರುವ ಮೊದಲು ನಾನು ತಂದಿದ್ದ ಜಮಖಾನ, ರಗ್ಗು, ಸ್ವೆಟರ್, ಶೂಸ್, ಸಾಕ್ಸ್ ಇತ್ಯಾದಿಗಳನ್ನು ನಮ್ಮ ಶೆರ್ಪಾನಿಗೆ ಕೊಟ್ಟೆ. ನಾವೆಲ್ಲರೂ ಸೇರಿ ಶೆರ್ಪಾನಿಗೆ ಒಂದು ಒಳ್ಳೆಯ ಮಾತನ್ನು ಇಂಗ್ಲೀಷಿನಲ್ಲಿ ಬರೆದುಕೊಟ್ಟೆವು. ನಾವು ತಂದಿದ್ದ ಔಷಧಿಗಳು, ಮುಲಾಮುಗಳನ್ನು ಕೊಟ್ಟೆವು. ನಿಜವಾಗಿಯೂ ಅಂತಹ ಒಳ್ಳೆಯ ಶೆರ್ಪಾ ಸಿಕ್ಕಿದ್ದರಿಂದಲೇ ನಾವು ಶ್ರೀ ಅಮರನಾಥೇಶ್ವರನನ್ನು ನೋಡಿ ತಣಿದೆವು. ಆತನು ಸುಬ್ಬಮ್ಮನವರ ಕೈ ಹಿಡಿದುಕೊಂಡು ಲಿಂಗದ ಬಳಿಯವರೆಗೂ ಕರೆತಂದನು. ಒಮ್ಮೆ ಆಕೆಯನ್ನು ಕೂಸುಮರಿ ಮಾಡಿತಂದು ತಂಗುದಾಣಕ್ಕೆ ಬಿಟ್ಟನು. ಒಟ್ಟಿನಲ್ಲಿ ಹವಾಗುಣ, ಅದೃಷ್ಟ, ಒಳ್ಳೆಯ ಜೊತೆಗಾರರು, ನಿಷ್ಠಾವಂತನಾದ ಶೆರ್ಪಾ, ಮುಖ್ಯವಾಗಿ ಪರಮಾತ್ಮನ ಕೃಪೆ ಇದ್ದುದ್ದರಿಂದ ನಮ್ಮ ಸಾಹಸ ಪುಣ್ಯಯಾತ್ರೆಯು ಸಫಲವಾಗಿ ಮುಗಿಯಿತು. ಇಲ್ಲಿಂದ ಮುಂದಕ್ಕೆ ಜಮ್ಮು ಪ್ರಯಾಣ, ವೈಷ್ಣೋದೇವಿಯ ದರ್ಶನ. 

~ ವಿನತೆ ಶರ್ಮ

ಹೊಸತು ಹೊತ್ತು ತರುತಿದೆ

..ಯುಗಾದಿ ಮತ್ತೆ ಮರಳಿ ಬರುತಿದೆ

ತರುಲತೆಗಳಲ್ಲಿ ಚೈತ್ರದ ಚಿಗುರು ಪಲ್ಲವಗಳು, ಹೊಂಗೆ ಮರದ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿಗಳು, ಬೇವು-ಮಾವುಗಳ ಸೊಗಸು-ಸಂಭ್ರಮಗಳು ..ಇವೆಲ್ಲವನ್ನೊಳಗೊಂಡು ಮತ್ತೆ ಬಂದಿದೆ ಯುಗಾದಿ. ನವ ವಸಂತದ ನವಿರು ಗಾಳಿ ಮನಮನಗಳನ್ನೂ ಪುಲಕಗೊಳಿಸಿದೆ. ಬೇವು-ಬೆಲ್ಲದೊಂದಿಗೆ ಹಳೆಯ ನೂರಾರು ಸ್ಮೃತಿಗಳನ್ನು ತನ್ನೊಡನೆ ಮತ್ತೆ ಹೊತ್ತು ತಂದಿದೆ ಈ ಯುಗಾದಿ.

ಬೆಳಿಗ್ಗೆ ಎದ್ದೊಡನೆಯೇ ಬಟ್ಟಲು ತುಂಬ ಬೆಚ್ಚನೆಯ ಖೊಬ್ರಿಎಣ್ಣೆಯನ್ನು ಅಜ್ಜಿ ನೆತ್ತಿಗೊತ್ತಿ ‘ಅಶ್ವತ್ಥಾಮೋ ಬಲೀರ್ವ್ಯಾಸೋ’ ಅಂತ ಚಿರಂಜೀವಿಗಳ  ಹೆಸರಲ್ಲಿ ಹರಸಿದ ಮೇಲೆ ಬಚ್ಚಲುಮನೆಯಲ್ಲಿ ನಮ್ಮ ರಂಗಪ್ರವೇಶ. ಅಲ್ಲಿ ದೆವ್ವನಂಥಾ ತಾಮ್ರದ ಹಂಡೆಯಲ್ಲಿ ಬೇವಿನೆಲೆ ತೇಲುತ್ತಿರುವ ಬಿಸಿ ಬಿಸಿ ನೀರು. ಹೊಗೆಯಾಡುತ್ತಿರುವ ಆ ನೀರನ್ನು ಹಿತ್ತಾಳೆಯ ಗಂಗಾಳದಲ್ಲಿ ಮಾಮಿಯೋ, ಮಾಂಶಿಯೋ ತೋಡುತ್ತಿದ್ದರೆ ಚಿಕ್ಕವರಾದ ನಮಗೆ ಅಗಾಧ ಅಚ್ಚರಿ ..ಕೈ ಸುಡಲಿಕ್ಕಿಲ್ಲವೇ ಇವರಿಗೆ ಎಂದು.ಜೊತೆಗೇ ಆತಂಕ- ಎಲ್ಲಿ ಇಂಥ ಸುಡುಸುಡು ನೀರನ್ನೇ ತಲೆಮೇಲೆ ಸುರಿದು ಬಿಡುತ್ತಾರೋ ಎಂದು.’ಥಣ್ಣೀರು ಹಾಕು’ ಎಂದು ಹತ್ತು ಸಲ ಕೂಗಿಕೊಂಡರೂ ‘ಇನ್ನೂ ಎಂಥ ಥಣ್ಣೀರs ಈಗೇ ಆರಿ ಕತ್ತಿ ಉಚ್ಚಿ ಆಗ್ಯಾವ’ ಎಂದು ಜಬರಿಸಿ ಮೈಮೇಲೆ ಬಿಸಿನೇರು ಸುರಿದರೆ ಆಹಾ! ನಮ್ಮ  ಬಚ್ಚಲು ಮನೆಯ  ಆ ಕಥಕ್ಕಳಿ, ಭರತನಾಟ್ಯ.. 

ತಲೆಬಾಗಿಲಿನ ಹಸಿರಾದ ಮಾವಿನ ತೋರಣ, ಅಂಗಳದ ರಂಗವಲ್ಲಿ, ಹೊಸ್ತಿಲಿನ ಕೆಮ್ಮಣ್ಣು, ದೇವರ ಮನೆಯ ಥಳಥಳ ಹೊಳೆವ ಉಪಕಾರಣಿಗಳು, ತುಪ್ಪದ ಬತ್ತಿ, ಎಣ್ಣೆಯ ದೀಪ, ಊದಿನಕಡ್ಡಿಯ ಸುಗಂಧಗಳು, ಅಜ್ಜನ ‘ಆಚಾರ್ಯಾ ಶ್ರೀಮದಾಚಾರ್ಯಾ ಸಂತು ಮೇ ಜನ್ಮಜನ್ಮನೀ’ ಎಂಬ ರಿಂಗುಣಿಸುವ ಮಂತ್ರ, ಪಡಸಾಲೆಯ ರೇಡಿಯೋದಲ್ಲಿ ‘ ಯುಗ ಯುಗಾದಿ 
ಕಳೆದರೂ’ ಹಾಡಿನ ದನಿ, ಅಡಿಗೆಮನೆಯಲ್ಲಿ ಬೇಳೆ ರುಬ್ಬುವ ಸದ್ದು, ಹೂರಣ ಕುದಿವ ನರುಗಂಪು, ಬಾಳೆಲೆ-ರಂಗೋಲಿಗಳ ಸಂಭ್ರಮ, ಬೇವು-ಬೆಲ್ಲದ, ಹೋಳಿಗೆ-ಬುರಬುರಿಗಳ ಭರ್ಜರಿ ಊಟ, ಸಂಜೆಯಾಗುತ್ತಿದ್ದಂತೆಯೇ ಲಕ್ಷ್ಮಿಗುಡಿಯ ಪಾಳಿಯ ಸಂಭ್ರಮ. ಲಕ್ಷ್ಮೀದೇವಿಯ ಕಣ್ಮನ ಸೆಳೆವ ಅಲಂಕಾರ,ಆ ಪಟ್ಟೆಸೀರೆ-ಸರ-ಡಾಬು ಆಭರಣಗಳು, ಗಂಟೆ-ಜಾಗಟೆಗಳ ನಿನಾದ, ಮಂಗಳಾರತಿ, ಆ ಅಂಗಾರದ ರುಚಿ, ಹೊರಗಿನ ಸಾಲು ಸಾಲು ಅಂಗಡಿಗಳ ಪ್ಲಾಸ್ಟಿಕ್ ಬಳೆ,ರಿಬ್ಬನ್ನುಗಳು.. ಒಂದೊಂದೂ ಎಂಥ ಮಧುರ!!
‘ನಿದ್ದೆಗೊಮ್ಮೆ ನಿತ್ಯಮರಣ ಎದ್ದ ಸಲ ನವೀನ ಜನನ ಅಖಿಲ ಜೀವಜಾತಕೆ   ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೇ ಏತಕೆ?’

ನಲ್ಮೆಯ ಓದುಗರೇ ತಮಗೆಲ್ಲ ಯುಗಾದಿಯ ಹಾರ್ದಿಕ ಶುಭಾಶಯಗಳು. ಇಂದಿನ ಸಂಚಿಕೆಯಲ್ಲಿ ಸವಿತಾ ಸುರೇಶ್ ಅವರು ಒಂದು ಅಪರೂಪದ ‘ಸವಿರುಚಿ’ಯನ್ನು ಹಂಚಿಕೊಂಡಿದ್ದಾರೆ. ಈ ಯುಗಾದಿಯಂದು ಮಾಡಿ ಸವಿದು ಹೇಗಿತ್ತೆಂದು  ಹೇಳಲು ಮರೆಯದಿರಿ.

ಉಮೇಶ ನಾಗಲೋತಿಮಠ ಅವರು ಯುಗಾದಿಯ ವೈಜ್ಞಾನಿಕ ಸಂಗತಿಗಳ ಕುರಿತಾಗಿ ಬಹಳ ಆಸಕ್ತಿಭರಿತವಾದ ಲೇಖನವೊಂದನ್ನು ಅನಿವಾಸಿಗಾಗಿ ಹೊತ್ತು ತಂದಿದ್ದಾರೆ.

ಎತ್ತರದ ಬೆಟ್ಟದ ಬದರಿ-ಕೇದಾರ-ಅಮರನಾಥಗಳಿರಲಿ, ಸಮುದ್ರ ದಂಡೆಯ ರಾಮೇಶ್ವರ-ಕನ್ಯಾಕುಮಾರಿಗಳಿರಲಿ, ಭೋರ್ಗರೆವ ನದೀತಟದ ಕಾಶಿ-ಹೃಷಿಕೇಶಗಳಿರಲಿ ..ಯಾತ್ರೆ ನಮ್ಮ ಸಂಸ್ಕೃತಿಯ ಅವಿಭಾಜ್ಯ  ಅಂಗ. ಪ್ರಕೃತಿಯ ರೌದ್ರ-ರಮಣೀಯತೆಗಳ ಮುಖೇನ ‘ಶಿವರುದ್ರನಾದ ಭಗವಂತ’ನನ್ನು ಅರಿವ ಪ್ರಯಾಸ, ಮಹತ್ತರವಾದ ಆ ನಿಸರ್ಗ ದ ಭವ್ಯತೆಯಲ್ಲಿ ನಮ್ಮ ಅಲ್ಪತೆಯನ್ನು ಕರಗಿಸಿ ನಿಸರ್ಗದೊಡೆಯನ ಮಹತ್ತಿನಲ್ಲಿ ಮೈಮರೆವ ರೀತಿ, ಸಹಬಾಳ್ವೆಯ ಕಲಿಕೆ..ಏನೆಲ್ಲ ಅಡಕ ಈ ಯಾತ್ರೆಯಲ್ಲಿ..ಬನ್ನಿ, ವಿನತೆಯವರು ತಮ್ಮಮ್ಮನೊಡನೆ ನಮ್ಮನ್ನೂ ‘ಅಮರನಾಥ ಯಾತ್ರೆ’ಗೆ ಕರೆದೊಯ್ಯಲಿದ್ದಾರೆ. ಹೊಸ ವರುಷದ ಆರಂಭಕ್ಕೆ  ಇದಕ್ಕಿಂತ ಶುಭಪ್ರದ ಮತ್ತೆನಿದ್ದೀತು?

~ ಸಂಪಾದಕಿ

ಗೋಡಂಬಿ-ಗುಲ್ಕಂದ್ ಲಡ್ಡು

ಬೇಕಾಗುವ ಸಾಮಗ್ರಿಗಳು 
:

ಗೋಡಂಬಿ-200ಗ್ರಾಂ 
ಕಲ್ಲು ಸಕ್ಕರೆ ಪುಡಿ- 100ಗ್ರಾಂ 
ಹಾಲಿನ ಪುಡಿ- 50 ಗ್ರಾಂ 
ಗುಲ್ಕಂದ್- 4ಚಮಚ
ಕಂಡೆಂನ್ಸ್ಡ್ ಮಿಲ್ಕ್- 5ಚಮಚ
ಸ್ವಲ್ಪ  ಏಲಕ್ಕಿ ಪುಡಿ 
ಗುಲಾಬಿ ಹೂವಿನ ಪುಡಿ 

ಮಾಡುವ ವಿಧಾನ 
:

ಮೊದಲಿಗೆ ಗೋಡಂಬಿಯನ್ನು ಮಧ್ಯಮ ಉರಿಯಲ್ಲಿ ಹುರಿದು ರವೆಯ ರೀತಿಯಲ್ಲಿ ಪುಡಿ ಮಾಡಿ ಒಂದು ಅಗಲವಾದ ತಟ್ಟೆಗೆ ವರ್ಗಾಯಿಸಿ.
ನಂತರ ಕಂಡೆಂನ್ಸ್ಡ್ ಮಿಲ್ಕ್, ಕಲ್ಲು ಸಕ್ಕರೆ ಪುಡಿ, ಹಾಲಿನ ಪುಡಿ ಮಿಶ್ರಿಸಿ ಉಂಡೆಯ ಆಕಾರಕ್ಕೆ ಮಾಡಿ ಹೆಬ್ಬೆರಳಿಂದ ಮಧ್ಯದಲ್ಲಿ ಹಳ್ಳ ಮಾಡಿ ಸ್ವಲ್ಪ ಗುಲ್ಕಂದ್ ತುಂಬಿ.
ನಂತರ ಲಡ್ಡು ಆಕಾರಕ್ಕೆ ಉಂಡೆ ಮಾಡಿ.
ಇನ್ನೊಂದು ತಟ್ಟೆಯಲ್ಲಿ  ಒಣಗಿದ ಗುಲಾಬಿ ಹೂವಿನ ಪುಡಿಯನ್ನು ಹರಡಿ.
ಮಾಡಿಟ್ಟ ಲಾಡುಗಳನ್ನು ಇದರಲ್ಲಿ ಹೊರಳಿಸಿ.
ಚಿತ್ರದಲ್ಲಿ ಕಾಣುವಂತೆ ಅಲಂಕಾರ ಮಾಡಿ ಸವಿಯಿರಿ.

~ ಸವಿತ ಸುರೇಶ್ 

ಡಾ ಉಮೇಶ ನಾಗಲೋಟಿಮಠ 

ಬೆಳಗಾವಿಯಲ್ಲಿ  ೧೦ನೇ ತರಗತಿ ವರೆಗೆ ಕನ್ನಡದಲ್ಲೇ ವಿದ್ಯಾಭ್ಯಾಸ , MBBS , MS (ENT ) ಮುಗಿಸಿ ಮುಂಬೈನಲ್ಲಿ ಹೆಚ್ಚಿನ ತರಬೇತಿ , ಹುಬ್ಬಳ್ಳಿಯ KMC (ಕಿಮ್ಸ್ ಈಗ ) ಯಲ್ಲಿ ಸುಮಾರು ೧೭ವರ್ಷ ಸೇವೆ ENT ವಿಭಾಗದ ಮುಖ್ಯಸ್ಥರಾಗಿ ಸ್ವಯಂ ನಿವೃತ್ತಿ . ಹುಬ್ಬಳ್ಳಿಯ ಸುಶ್ರುತ ಬಹುತಜ್ಞ ಆಸ್ಪತ್ರೆ ನಿರ್ದೇಶಕ . 
ಸಾಹಿತ್ಯ ಆಸಕ್ತಿ . ಹಲವು ರೇಡಿಯೋ ಕಾರ್ಯಕ್ರಮ , ಹಲವು ವೈದ್ಯಕೀಯ ಬರಹಗಳು , ವೈದ್ಯಕೀಯದಲ್ಲಿ ಹಾಸ್ಯ ಬರಹಗಳು , ಕೆಲವೊಮ್ಮೆ ಕವನದ ಕೆಮ್ಮು  . ಸೋರುವ ಕಿವಿ ಎಂಬ ಪುಸ್ತಕ ಪ್ರಕಟಣೆ . 
ಆಂಗ್ಲನಾಡಿಗೆ ಆಗಮನವಾಗಿ ಆಯ್ತೆಳುವರುಷ . 
ಏಕಪತ್ನಿ  , ಏಕಪುತ್ರ 😀. 
ಇದೆ ವಿರಲ್ (wirral ) ವಾಸ 
ಸಾಕಾಗಿದೆ ಪುಸ್ತಕ ಉಪವಾಸ 
 ಬೇಕಾಗಿದೆ ಸಾಹಿತಿಗಳ ಸಹವಾಸ 
ಅದಕೆಂದೇ ಇರುವುದು ಈ  ಅ-ನಿವಾಸ(ಸಿ)

ಹೊಸ ವರ್ಷ ಯಾವುದು ?

ಯುಗಾದಿ ಅಥವಾ ಜನೆವರಿ 

ಭಾರತೀಯರೆಲ್ಲರಿಗೂ ಯುಗಾದಿ ಹೊಸ ವರ್ಷ ಎಂದು ಗೊತ್ತು . ಇನ್ನು ಹಲವರ ಪ್ರಕಾರ ಯುರೋಪಿಯನ್ ಜನರಿಗೂ ಯುಗಾದಿ ಆಸು ಪಾಸೇ ಹೊಸ ವರ್ಷ ಇತ್ತು ಎಂಬ ಬಗ್ಗೆ ಅನುಮಾನಗಳಿವೆ . 

ನಾವು ನಮ್ಮ ಗ್ರೆಗೋರಿಯನ್ ಕ್ಯಾಲೆಂಡರನ್ನೇ ತಳಹದಿಯಾಗಿ ಇಟ್ಟುಕೊಂಡು ಸಂವಾದ ನಡೆಸೋಣ . ನಾವು ಮಾರ್ಚ್ ತಿಂಗಳನ್ನು ವರ್ಷದ ಮೊದಲ ತಿಂಗಳು ಎಂದು ಪರಿಗಣಿಸುವಾ .
ಆಗ ಪ್ರತಿ ಗ್ರೆಗೋರಿಯನ್ ತಿಂಗಳು ಯಾವ ಕ್ರಮದಲ್ಲಿ ಬರುತ್ತದೆ ಎಂದು ನೋಡೋಣ . 
ಮಾರ್ಚ್ -೧ನೇ ತಿಂಗಳು 
ಏಪ್ರಿಲ್ -೨ನೇ ತಿಂಗಳು 
ಮೇ -೩ನೇ ತಿಂಗಳು 
ಜೂನ್ -೪ನೇ ತಿಂಗಳು 
ಜೂಲೈ -೫ನೇ ತಿಂಗಳು 
ಅಗಸ್ಟ್ -೬ನೇ ತಿಂಗಳು 
ಸೆಪ್ಟೆಂಬರ್ -೭ನೇ ತಿಂಗಳು 
ಲ್ಯಾಟಿನ್ ಭಾಷೆಯಲ್ಲಿ ಸಂಖ್ಯೆ ಏಳು ಇದಕ್ಕೆ septem ಎನ್ನುತ್ತಾರೆ ಹಾಗು 
ಗ್ರೀಕ್ ಭಾಷೆಯಲ್ಲಿ epta ಎನ್ನುತ್ತಾರೆ . 
ಸಂಸ್ಕೃತದಲ್ಲಿ ಸಪ್ತ ಎನ್ನುತ್ತಾರೆ . 
(ಸಪ್ತ ಸ್ವರಗಳು , ಸಪ್ತ ಪದಿ ಇತ್ಯಾದಿಗಳು ಇತರ ಉದಾಹರಣೆ )

ಅಕ್ಟೋಬರ್ -೮ನೇ ತಿಂಗಳು 
ಲ್ಯಾಟಿನ್ ಭಾಷೆಯಲ್ಲಿ ಸಂಖ್ಯೆ ಎಂಟು ಇದಕ್ಕೆ octingenti ಎನ್ನುತ್ತರೆ. 
ಗ್ರೀಕ್ ಭಾಷೆಯಲ್ಲಿ okto ಹಾಗು ಸಂಸ್ಕೃತದಲ್ಲಿ ಅಷ್ಟ ಎನ್ನುತ್ತಾರೆ . 
(ಆಕ್ಟೋಪಸ್ =ಎಂಟು ಪಾದ ಹೊಂದಿರುವ ಪ್ರಾಣಿ . ಅಷ್ಟ ದಿಕ್ಕುಗಳು )
ನವೆಂಬರ್ -೯ನೇ ತಿಂಗಳು 
ಲ್ಯಾಟಿನ್ ಭಾಷೆಯಲ್ಲಿ novem ಎನ್ನುತ್ತರೆ . ಗ್ರೀಕ್ ಭಾಷೆಯಲ್ಲಿ ennea ಎಂದರೆ ಸಂಸ್ಕೃತದಲ್ಲಿ ನವ ಎನ್ನುವರು . 
(ನವರಾತ್ರಿ , ನವರಂದ್ರ ಇತ್ಯಾದಿಗಳು ಉದಾಹರಣೆಗಳು )

ಡಿಸೆಂಬರ್ -೧೦ನೇ ತಿಂಗಳು 
ಲ್ಯಾಟಿನ್ ಭಾಷೆಯಲ್ಲಿ decem ಎನ್ನುತ್ತರೆ . ಗ್ರೀಕ್ ಭಾಷೆಯಲ್ಲಿ deka ಎಂದರೆ ಸಂಸ್ಕೃತದಲ್ಲಿ ದಶ ಎನ್ನುವರು . 
(ದಶಮುಖ =ಹತ್ತು ತಲೆ ಉಳ್ಳವ , ದಶಮಾನ ಸಂಖ್ಯಾ ಪದ್ದತಿ ; Deciliter , decimeter ಇವು ಹತ್ತರ ಮೇಲೆ ನಿರ್ಭರವಾಗಿವೆ )

ಜನೆವರಿ -೧೧ನೇ ತಿಂಗಳು 

ಫೆಬ್ರವರಿ -೧೨ನೇ ತಿಂಗಳು 

ಇದನ್ನು ನೋಡಿದರೆ ಆಶ್ವರ್ಯದ ಜೊತೆ ಕುತೂಹಲವು ಮೂಡಿ ಅನೇಕ ತಿಂಗಳುಗಳಿಗೆ ಅವುಗಳ ನಿಜ ಅರ್ಥ ಸರಿಯಾಗಿ ಹೊಂದುತ್ತವೆ . 

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಒಂದು ದಿನವನ್ನು ಡಿಸೆಂಬರ್ ಬದಲಾಗಿ ಫೆಬ್ರವರಿ ತಿಂಗಳಿಗೆ ಯಾಕೆ ಸೇರಿಸುತ್ತಾರೆ ?
ಫೆಬ್ರವರಿ ತಿಂಗಳಲ್ಲಿ ಎಲ್ಲಕಿಂತ ಕಡಿಮೆ ದಿನಗಳು ಯಾಕೆ ಇದ್ದಾವೆ ? ಇವುಗಳ ಬಗ್ಗೆ ನನಗಿನ್ನೂ ಮಾಹಿತಿ ಸಿಕ್ಕಿಲ್ಲ . 
ಇನ್ನು ಯುಗಾದಿ ಸಮಯಕ್ಕೆ ಪ್ರಕೃತಿ ತನ್ನನ್ನು ತಾನೇ ಸಿಂಗರಿಸಿಕೊಂಡಿರುತ್ತದೆ . ಎಲ್ಲಡೆ ಹೊಸ ಚಿಗುರು , ಹೊಸ ಹೂವು ಬಂದಿರುತ್ತದೆ . 
ಯುಗಾದಿ ಹೆಸರೇ ಸೂಚಿಸುವಂತೆ ಅದು ಯುಗ (ವರ್ಷ )ದ ಆದಿ (ಪ್ರಾರಂಭ ). 
ಇನ್ನೂ ಯುಗಾದಿಯ ಆಚರಣೆಗಳ ಬಗ್ಗೆ , ಅವುಗಳ ವೈಜ್ಞಾನಿಕತೆಯ ಬಗ್ಗೆ ಬರೆಯುತ್ತ ಹೋದರೆ ಪುಟಗಳು ಸಾಲವು . 
ಯುಗಾದಿಗೆ ಎಲ್ಲರಿಗು ಶುಭವಾಗಲಿ . 


~ ಡಾ -ಉಮೇಶ ನಾಗಲೋಟಿಮಠ

ನನ್ನಮ್ಮನ ಪ್ರವಾಸ ಕಥನ – ಶ್ರೀ ಅಮರನಾಥ್ ಯಾತ್ರೆ

ನನ್ನ ಅಮ್ಮನ ಹೆಸರು ಪದ್ಮಾವತಮ್ಮ. ಅಮ್ಮ ೩೭ ವರ್ಷಗಳಷ್ಟು ದೀರ್ಘಕಾಲ ಶಾಲಾಶಿಕ್ಷಕಿಯಾಗಿ ದುಡಿದರು. ತಮ್ಮ ಅನ್ನದಾತ ಶಾಲೆಯನ್ನು, ವಿದ್ಯಾರ್ಥಿಗಳನ್ನು ಬಹುವಾಗಿ ಪ್ರೀತಿಸುತ್ತ, ಅವರ ಸಹೋದ್ಯೋಗಿಗಳೊಡನೆ ವಿಶ್ವಾಸ, ಗೌರವದ ಸಂಬಂಧವನ್ನು ರೂಢಿಸಿಕೊಂಡಿದ್ದರು. ಅದೇ ಶಾಲೆಯಲ್ಲಿ ನನ್ನಂತೆ ಅನೇಕ ಶಿಕ್ಷಕವೃಂದದ ಮಕ್ಕಳು ಓದಿದ್ದು, ಸ್ನೇಹ ಸಂಪಾದಿಸಿದ್ದು ನಿತ್ಯನೂತನ ನೆನಪು! ತಮ್ಮ ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಅಮ್ಮ ‘ಸದಾ ಸಂಸಾರ, ಸಂಪಾದನೆ’ ಎಂಬುದರ ಆಚೆ ಇರುವ ಪ್ರವಾಸವೆಂಬ ಅನುಭವ ಲೋಕವನ್ನು ಆಯ್ದುಕೊಂಡು ತಮ್ಮ ಜೀವನದ ಸಾರ್ಥಕತೆಯನ್ನು ವಿಸ್ತರಿಸಿಕೊಂಡರು. ಅವರ ಕಾಲಕ್ಕೆ, ಅನುಸರಿಸುತ್ತಿದ್ದ ಧಾರ್ಮಿಕ ನಂಬಿಕೆ, ಭಾವನೆಗಳಿಗೆ ಅನುಗುಣವಾಗಿ ಅವರು ಮತ್ತು ಶಾಲೆಯ ಮೂರ್ನಾಲ್ಕು ಸಹೋದ್ಯೋಗಿಗಳು ಒಂದಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಭಕ್ತಿ ಯಾತ್ರೆಗಳನ್ನು ಕೈಗೊಂಡರು. ೧೯೮೦ ದಶಕದ ಆದಿಯಲ್ಲಿ ಆರಂಭವಾದ ಅವರ ತೀರ್ಥಯಾತ್ರೆಗಳು ೧೯೯೮ ನೇ ಇಸವಿ ಆಗಸ್ಟ್ ತಿಂಗಳಲ್ಲಿ ಕೈಗೊಂಡಿದ್ದ ಕೈಲಾಸ-ಮಾನಸ ಸರೋವರ ಯಾತ್ರೆಯಲ್ಲಿ ಮುಕ್ತಾಯವಾಯ್ತು. ಮಾನಸ ಸರೋವರದಲ್ಲಿ ಮಿಂದು, ಕೈಲಾಸನಾಥನನ್ನು ನೋಡಿ ಕಣ್ತುಂಬಿಸಿಕೊಳ್ಳುವ ಮುನ್ನವೇ ಅವರು ಇಲ್ಲವಾದರು. 

ಯಾತ್ರಾರ್ಥಿಗಳು ರಾತ್ರಿ ತಂಗಿದ್ದ, ಹಿಮಾಲಯ ಪರ್ವತಗಳಲ್ಲಿ ಅಡಗಿದ್ದ ಮಾಲ್ಪ ಎನ್ನುವ ಹಳ್ಳಿಯು ಆಗಸ್ಟ್ ತಿಂಗಳ ೧೮ನೇ ತಾರೀಕು ಬೆಳಗಿನ ಜಾವ ಸಂಭವಿಸಿದ ಬೃಹತ್ ಭೂಭಾಗ ಕುಸಿತಕ್ಕೆ ಒಳಗಾಗಿ ಸಂಪೂರ್ಣವಾಗಿ ನಿಶ್ಯೇಷವಾಗಿತ್ತು.  

ಸಾಹಿತ್ಯವನ್ನು ಮೆಚ್ಚುತ್ತಿದ್ದ ನಮ್ಮ ತಾಯಿ ಬಹು ಚೆನ್ನಾಗಿ ಬರೆಯುತ್ತಿದ್ದರು. ೧೯೮೦ ದಶಕದಿಂದ ತಾವು ಪ್ರವಾಸದ ಸಮಯದಲ್ಲಿ ನಮಗೆಲ್ಲ ಬರೆಯುತ್ತಿದ್ದ ಪತ್ರಗಳನ್ನು ಆಧರಿಸಿ ಮತ್ತು ಅವರ ಡೈರಿ, ನೆನಪುಗಳನ್ನು ಹೆಕ್ಕಿ, ತಮ್ಮ ಪ್ರವಾಸ ಅನುಭವ ಕಥನಗಳನ್ನು ಲೇಖಕ್ ನೋಟ್ ಬುಕ್ ಗಳಲ್ಲಿ ಬರೆದು ದಾಖಲಿಸಿದ್ದರು. ಅವುಗಳಲ್ಲಿ ವಿವರವಾಗಿ ತಾವುಗಳು ಹೇಗೆ ಯಾತ್ರಾಸ್ಥಳವನ್ನು, ಪ್ರವಾಸದ ದಿನಾಂಕಗಳನ್ನು ಗೊತ್ತುಮಾಡಿಕೊಳ್ಳುತ್ತಿದ್ದರು ಎಂಬುದರಿಂದ ಹಿಡಿದು ಬಹುಬಗೆಯ ವಿವರಗಳು ಇವೆ. ಯಾತ್ರೆಯ ಸಿದ್ಧತೆ, ಹಣಕಾಸು, ಮನೆಮಂದಿಯಿಂದ ಒಪ್ಪಿಗೆ, ತಾವು ಪಯಣಿಸುವ ದಾರಿಯ ಸ್ಥೂಲ ನಕ್ಷೆ, ಹಿಂದೆ ಪಯಣಿಸಿ ಬಂದ ಯಾತ್ರಾರ್ಥಿಗಳ ಪರಿಚಯ ಮತ್ತು ಮನೆಭೇಟಿ, ಅವರ ಅನುಭವಗಳ ವಿವರಗಳು, ಬಾಯಿಮಾತಿನಿಂದ ತಿಳಿದ ದೂರದೂರಿನ ಸಂಪರ್ಕ ವ್ಯಕ್ತಿಗಳು, ಗೈಡ್, ರೈಲು ಪಯಣಕ್ಕೆಂದು ಆಹಾರ, ಒಣಗಿದ ಆಹಾರದ ಸಿದ್ಧತೆ (ಅವಲಕ್ಕಿ, ಉಪ್ಪಿಟ್ಟು ಮಿಕ್ಸ್, ಹುರಿಹಿಟ್ಟು ಇತ್ಯಾದಿ), ತಮಗೆ ಸಹಾಯ ಮಾಡುವ ಕೂಲಿ ಜನರು, ಕುದುರೆ ಜನರು, ದೇವಾಲಯಗಳಲ್ಲಿ ಕಾಣುವ ಭಿಕ್ಷಕರು, ವಿಧವೆಯರು ಎಲ್ಲರಿಗೂ ಕೊಡಲು ಒಂದಷ್ಟು ಹಣ, ಹಳೆಬಟ್ಟೆ, ಕಾಲುಚಪ್ಪಲಿ, ಶೂಸ್, ಔಷಧಗಳು ಇತ್ಯಾದಿ ಶೇಖರಣೆ … ಅಬ್ಬಬ್ಬಾ ಒಂದೇ ಎರಡೇ ಎನ್ನುವಷ್ಟು ಆಶ್ಚರ್ಯವಾಗುತ್ತದೆ. ತೀರಾ ಅಪರೂಪಕ್ಕೆ ಬಳಸುತ್ತಿದ್ದ ದೂರವಾಣಿ ಬಿಟ್ಟರೆ ಬೇರೆ ಊರಿನವರೊಂದಿಗೆ ಇವರ ಸಂಪರ್ಕವಿದ್ದದ್ದು ಕೇವಲ ಅಂಚೆಯ ಮೂಲಕವಷ್ಟೇ! ಮಧ್ಯಮ ವರ್ಗದ, ಶಾಲಾಶಿಕ್ಷಕ ಮಂದಿ ಇವರುಗಳು ಸುಮಾರು ಎರಡು ದಶಕಗಳ ಕಾಲ ನಡೆಸಿದ ವ್ಯವಸ್ಥಿತ ಯಾತ್ರೆಗಳು, ಪ್ರವಾಸಗಳು ಅಚ್ಚರಿಯೊಂದಿಗೆ ರೋಮಾಂಚನವನ್ನೂ, ಹೆಮ್ಮೆಯನ್ನೂ ಹುಟ್ಟಿಸುತ್ತದೆ. ಅವರ ಅನುಭವಗಳಲ್ಲಿ ಭಕ್ತಿಭಾವ, ಧರ್ಮ-ದೇವರು, ಪರಂಪರಾನುಗತ ಆಚರಣೆಯೊಂದಿಗೆ ಮಿಳಿತವಾದ ವೈಚಾರಿಕತೆ, ಹೊರಾಂಗಣ ಸಾಹಸ, ಪ್ರಕೃತಿ ಆರಾಧನೆ, ಸಮುದಾಯ ಪ್ರಜ್ಞೆ, ಪರಸ್ಪರ ಹೊಂದಾಣಿಕೆ, ಗುಂಪು-ಕೆಲಸ, ಪಡೆದಿದ್ದಕ್ಕಿಂತಲೂ ಕೊಟ್ಟಿದ್ದೇ ಹೆಚ್ಚು ಎನ್ನುವ ವಿಶಾಲ ಮನೋಭಾವ, ದೈವದರ್ಶನದ ಕೊಂಡಾಟ-ಪರವಶ ಭಾವ, ಅದರೊಂದಿಗೆ ಇಣುಕುವ ಆಧ್ಯಾತ್ಮಿಕತೆ, ದೈವಿಕ ಶಕ್ತಿಯಲ್ಲಿ ಎಷ್ಟು ನಂಬಿಕೆಯೋ ಅಷ್ಟೇ ನಂಬಿಕೆ ಮತ್ತು ಶ್ರದ್ಧೆ ಮಾನವ ಪ್ರಯತ್ನದಲ್ಲೂ ಇರಬೇಕು ಎನ್ನುವ ನಿಲುವು, ಎಲ್ಲವೂ ಕಾಣುತ್ತದೆ.  

ಆ ಕಥನಗಳನ್ನು ನಮ್ಮ ಬಂಧುಬಳಗ, ಮಿತ್ರರಲ್ಲಿ ಅನೇಕರು ಓದಿದ್ದಾರೆ. ಇತ್ತೀಚೆಗೆ, ‘ನೋಡೆ, ಅಷ್ಟು ವರ್ಷಗಳಿಂದಲೂ ನನ್ನ ಬಳಿ ಇರುವ ಆ ನೋಟ್ ಬುಕ್ ಗಳು ಮಾಸುತ್ತಿವೆ. ಅಂಚುಗಳು ಬಿರಿಯುತ್ತಿವೆ. ಅಮ್ಮನ ನೆನಪುಗಳನ್ನು ಕಾಪಿಡಬೇಕು. ಅವನ್ನು ಇಲೆಕ್ಟ್ರಾನಿಕ್ ಡಾಕ್ಯುಮೆಂಟ್ ಗಳನ್ನಾಗಿಸಬೇಕು,’ ಎಂದು ಅಕ್ಕ ಕಳವಳಿಸಿದಾಗ ‘ಅವನ್ನು ನನಗೆ ಕಳಿಸು, ನಾನು ಆ ಕೆಲಸ ಮಾಡುತ್ತೀನಿ, ಅವನ್ನೆಲ್ಲ ಟೈಪ್ ಮಾಡಿ ಕಂಪ್ಯೂಟರಿನಲ್ಲಿ ಶೇಖರಿಸಿ ಕಳಿಸುತ್ತೀನಿ, ಇದು ನಮ್ಮಮ್ಮನ ಸೇವೆ’, ಎಂದೆ ನಾನು. 
ಇದು ನಾನು ಮೊಟ್ಟ ಮೊದಲು ಟೈಪ್ ಮಾಡಿದ ಕಥನ. ಇಲ್ಲಿ ಬರುವುದು ಅಮ್ಮನ ಶ್ರೀ ಅಮರನಾಥ ಯಾತ್ರೆ ಕಥನದ ಒಂದು ತುಣುಕು ಮಾತ್ರ. ಆಕೆಯ ಬರಹವನ್ನು ನಾನು ಯಥಾವತ್ತಾಗಿ ಟೈಪ್ ಮಾಡಿದ್ದರೂ, ಯಾತ್ರೆಯ ಮೊದಲ ಹಂತಗಳನ್ನೂ ಮತ್ತು ಖಾಸಗಿ ವಿಷಯಗಳನ್ನು ತೆಗೆದುಹಾಕಿ ಲೇಖನವನ್ನು ಇಲ್ಲಿ ಹಂಚಿಕೊಂಡಿದ್ದೀನಿ. 
ವಿನತೆ ಶರ್ಮ


೧.೦೭.೧೯೮೭ ರಿಂದ ೧೯.೦೭.೧೯೮೭ ರವರೆಗೆ ಕೈಗೊಂಡ ಶ್ರೀ ಅಮರನಾಥ ಪುಣ್ಯಯಾತ್ರೆ
‘ಭಾರತದ ಸ್ವಿಟ್ಜರ್ಲ್ಯಾಂಡ್’, ‘ಪ್ರವಾಸಿಗರ ಸ್ವರ್ಗ’, ‘ಪ್ರಕೃತಿ ಸೌಂದರ್ಯದ ನೆಲವೀಡು’, ‘ಝರಿ-ಜಲಪಾತಗಳ ಖನಿ’ ಮುಂತಾಗಿ ಬಿರುದುಬಾವಲಿಗಳನ್ನು ಜನರಿಂದ ಪಡೆದಿರುವ ಕಾಶ್ಮೀರವನ್ನು ನೋಡುವ ಅವಕಾಶ ನನಗೆ ಮತ್ತೊಮ್ಮೆ ಬಂದಿತು. ನಿನಗೆ ತಿಳಿಸಿದ್ದಂತೆ ಶಾಲೆಯಲ್ಲಿ ೫-೬ ಜನರು ಅಮರನಾಥ್ ಯಾತ್ರೆಯ ಮಾತನಾಡುತ್ತಿದ್ದರು. ೧೯೭೮ರಲ್ಲಿ ಹೋಗಿ ಬಂದಿದ್ದ ದೊಡ್ಡ ಭಾವನವರು ತುಂಬಾ ಆಶಾದಾಯಕವಾಗಿ ಹೇಳಿದುದಲ್ಲದೆ ಶ್ರೀ ಅಮರನಾಥ್ ಯಾತ್ರೆಗೆ ಆಷಾಢಮಾಸದ ಹುಣ್ಣಿಮೆಯು ಸೂಕ್ತವಾದುದೆಂದೂ ತಿಳಿಸಿದರು. ಅವರಿಂದಲೇ ಶ್ರೀ ಅಮರನಾಥ್ ಪುಸ್ತಕವನ್ನು ಪಡೆದು ಬಂದು, ಈ ಎಲ್ಲಾ ವಿಚಾರಗಳನ್ನು ನನ್ನ ಗೆಳತಿಯರಿಗೆ ತಿಳಿಸಿ ಪುಸ್ತಕ ಕೊಟ್ಟೆನು. ೧೯೮೩ರಲ್ಲಿ ಶ್ರಾವಣದ ಹುಣ್ಣಿಮೆಯಂದು ಯಾತ್ರೆ ಮಾಡಿದ್ದ ಇಬ್ಬರೂ ಅಮರನಾಥ ಲಿಂಗದರ್ಶನವಾಗದೆ ನಿರಾಶರಾಗಿದ್ದರು. ಅವರು ಬರಲು ಸಿದ್ಧರಾದರು. ಸರಿ, ಎಲ್ಲರೂ ಆಷಾಢದಲ್ಲಿ ಯಾತ್ರೆ ಮಾಡಲು ನಿರ್ಧರಿಸಿದರು. ಆಗ ನನ್ನ ಮನದಲ್ಲಿ ಆಸೆಯ ಗರಿಗೆದರಿತು. 
*****
೧೯೮೭ರ ಜುಲೈ ೧ನೇ ತಾರೀಕು ಸಂಜೆ ೭.೩೦ ಗೆ ಹೊರಡುವ ಕೆ ಕೆ ಎಕ್ಸ್ಪ್ರೆಸ್ ನಲ್ಲಿ ನಮ್ಮ ಪ್ರಯಾಣ ಶುರು.
*****
ಶ್ರೀ ಅಮರನಾಥ್ ಯಾತ್ರೆಯು ಪಹಲ್ ಗಾವ್ ನಿಂದಲೇ ಪ್ರಾರಂಭವಾಗುವುದು. ಇದು ಚಿಕ್ಕ ಊರು. ಅನೇಕ ಹೋಟೆಲ್ಗಳೂ, ಸರ್ಕಾರಿ ತನಿಖಾ ಕಚೇರಿ, ಪೋಸ್ಟ್ ಆಫೀಸ್ ಇತ್ಯಾದಿ ಆಫೀಸುಗಳಿದ್ದವು. ದೂರದಲ್ಲಿ ಆಕಾಶಕ್ಕೆ ಮುತ್ತಿಡುವಂತಿದ್ದ ಮಂಜಿನ ಶಿಖರಗಳೂ, ಅದರ ಮುಂದೆ ೨-೩ ಸಾಲು ನೀಲಿ ಬೆಟ್ಟಗಳೂ, ಅದರ ಮುಂದೆ ಚೆನ್ನಾಗಿ ಗೋಚರಿಸುವ ಇಳಿಜಾರಿನ ಹಸಿರು ಬೆಟ್ಟಗಳೂ, ಅವುಗಳ ಮುಂದೆ ಬೆಳೆದ ಪೈರುಗಳಿಂದಿರುವ ಗದ್ದೆಗಳೂ, ಅವುಗಳ ಮುಂದೆ ಕಪ್ಪನೆಯ ನೀರು ಹರಿಯುತ್ತಿರುವ ಲಂಬೋದರಿ ನದಿ. ಅದರ ಪಕ್ಕ ಫುಟಪಾಟಿನಲ್ಲಿ ನಾವು ನಿಂತಿದ್ದೆವು. ನನಗಂತೂ ಆ ಸೌಂದರ್ಯ ನೋಡಿ ಪರಮಾನಂದವೂ, ಪರಮಾಶ್ಚರ್ಯವೂ ಆಯಿತು. ಇಬ್ಬರು ವಿಚಾರಣೆಗೆ ತೆರಳಿದರು. ಇಬ್ಬರು ವಿಶ್ರಾಂತಿ ಹಾಗೂ ಸಾಮಾನು ಕಾವಲಿಗೆ ಕುಳಿತರು. ನಾನು ೧೦ ನಿಮಿಷಗಳ ಕಾಲ್ ಸುತ್ತಮುತ್ತ ನೋಡಿ ಮನತಣಿದ ಮೇಲೆ ಎಸ್ ಎಲ್ ಮನೆಗೆ, ನಮ್ಮ ...ಗೆ ಟೆಲಿಗ್ರಾಂ ಕೊಟ್ಟು ಬಂದೆ. ದಾರಿ ಪೂರ್ತಿ ಕುದುರೆ ಸವಾರರೂ, ಅಪರಿಚಿತರೂ, ಪ್ರವಾಸಿಗರ ಗುಂಪು ಕಾಣ ಸಿಗುತ್ತಿತ್ತು. ವಾತಾವರಣವು ಜಿಲ್ ಎಂದು ತಣ್ಣಗಿತ್ತು. ಶಾಲುಗಳನ್ನು ಈಚೆಗೆ ತೆಗೆದೆವು. ಸುಮಾರು ಒಂದೂಕಾಲು ಗಂಟೆಯ ನಂತರ ವಿಚಾರಿಸಲು ಹೋದವರು ಬಂದರು. ಸರ್ಕಾರದ ಕಡೆಯಿಂದ ಯಾವ ಸೌಲಭ್ಯವಿಲ್ಲವೆಂದು ತಿಳಿಯಿತು. ಆದರೆ ಒಬ್ಬ ಒಳ್ಳೆಯ ಶೆರ್ಪಾನನ್ನು ತೋರಿಸಿಕೊಟ್ಟಿದ್ದರು. ಒಂದು ಕುದುರೆಗೆ ೪೦೦ ರೂಪಾಯಿ, ಎಲ್ಲರ ಸಾಮಾನು ಹೊರುವ ಕುದುರೆಗೆ ೪೦೦ ರೂ, ಎರಡು ತಂಗುದಾಣಗಳಿಗೆ ಬಾಡಿಗೆ ಇತ್ಯಾದಿಗಳನ್ನು ಮಾತನಾಡಿದೆವು. ಅಲ್ಲಿಂದ ೩ ಕಿಮೀ ಇರುವ ಅಬ್ದುಲ್ಲಾ ಶೆರ್ಪಾನ ಮನೆಗೆ ಹೊರೆಟೆವು. ನಡೆಯುವ ಮೂರು ಜನರು ಕೋಲುಗಳನ್ನು ಕೊಂಡರು. ಅಲ್ಲಿ ಕರ್ನಾಟಕದ ಪೂರ್ಣಿಮಾ ಹೋಟೆಲ್ ಹುಡುಗ ಬಂದು ಕನ್ನಡದಲ್ಲಿ ಮಾತನಾಡಿಸಿದಾಗ ನಮಗೇನೋ ಆನಂದ! ಶೆರ್ಪಾನ ಸಹಾಯದಿಂದ ಒಂದು ಮಿಲಿಟರಿ ಟ್ರಕ್ ನಲ್ಲಿ ಸಾಮಾನುಗಳೊಡನೆ ನಾವೂ ಕುಳಿತು ಆ ಹಳ್ಳಿಗೆ ಹೋಗಿ ಸೇರುವ ವೇಳೆಗೆ ಕತ್ತಲಾಗುವಂತಿತ್ತು. ಅಲ್ಲಿ ಇನ್ನೂ ರಮಣೀಯವಾದ ದೃಶ್ಯ ನೋಡಿ ದಂಗಾದೆವು. ಒಂದು ದೊಡ್ಡ ಕೊಠಡಿ ಪ್ರವಾಸಿಗರಿಗಾಗೆ ಮೀಸಲಾಗಿಟ್ಟಿದ್ದರು. ಅಲ್ಲಿ ಎಲ್ಲರೂ ತಂಗಿದೆವು. ಆನಂತರ ನಾವು ಭಜನೆ ಪ್ರಾರ್ಥನೆಗಳನ್ನು ಮಾಡಿ ಹುರಿಟ್ಟು ತಿಂದು ಮಲಗಿದೆವು. 

ಪಹಲ್ ಗಾವ್ ನಿಂದ ಶ್ರೀ ಅಮರನಾಥ್ ಕ್ಷೇತ್ರವು ೩೨ ಮೈಲಿಗಳು ಅಥವಾ ೫೦ ಕಿಲೋಮೀಟರುಗಳು. ಕೆಲವರು ಇಲ್ಲಿಂದ ೧೦ ಮೈಲಿ ಮಿಲಿಟರಿ ಟ್ರಕ್ಕುಗಳಲ್ಲಿ ಹೋಗಿ ಅಲ್ಲಿಂದ ನಡೆಯುವರು. ಎಲ್ಲರಿಗೂ ಧಾವಂತ, ಆತಂಕ. ಈ ಸಾಹಸದ ಯಾತ್ರೆ ನಡೆಸುವುದು ಭಗವಂತನೆಂದು ನಂಬಿ ಮಲಗಿದ ನಮಗೆ ನಿದ್ದೆಯೇ ಬರಲಿಲ್ಲ. ಬೆಳಗಿನ ೫ ಗಂಟೆಗೇ ಎಡೆವು. ಶ್ರೀನಿವಾಸ್, ರಮೇಶ್, ಎಸ್ ಎಲ್ ರವರು ಶೂಸ್, ಸಾಕ್ಸ್, ಟೋಪಿ, ಕೋಟುಗಳನ್ನು ಹಾಕಿಕೊಂಡು ಹೊರಟರು. ನಾವು ಹುಶಾರೆಂದು ಹೇಳಿ ಅವರಿಗೆ ಶುಭ ಕೋರಿದೆವು. ಎಲ್ಲರದೂ ಮಿತವಾದ ಬಟ್ಟೆಬರೆ, ತಿಂಡಿ-ಕಂಬಳಿಗಳನ್ನು ಸೇರಿಸಿ ಲಗ್ಗೇಜ್ ರೆಡಿ ಮಾಡಿದೆ. ಮಿಕ್ಕಿದ್ದನ್ನು ಅಲ್ಲೇ ಬಿಟ್ಟೆವು. ಬೆಳಗ್ಗೆ ಆರೂವರೆ ಗಂಟೆ ವೇಳೆಗೆ ಕುದುರೆಗಳು ಬಂದವು. ನಾವು ಮೂವರು - ಸುಬ್ಬಮ್ಮ, ಲಲಿತಕುಮಾರಿ ಮತ್ತು ನಾನು - ಅಗತ್ಯವಾದ ಉಡುಪು ಧರಿಸಿ ಹೊರೆಟೆವು. ಇದೆ ಮೊದಲು ನಾನು ಶೂಸು, ಟೋಪಿಗಳನ್ನು ಹಾಕಿಕೊಂಡದ್ದು. ನಿಂತಿದ್ದ ಕುದುರೆಗಳಿಗೆ ಮುಟ್ಟಿ ನಮಸ್ಕಾರ ಮಾಡಿ ಜೈ ಅಮರನಾಥ್ ಎನ್ನುತ್ತಾ ಹತ್ತಿದೆನು. ಅಮರನಾಥ್ ಕ್ಷೇತ್ರದ ಕಡೆಗೆ ಪ್ರಯಾಣ ಶುರುವಾಯಿತು. 

*****
ಪಹಲ್ ಗಾವ್ ನಿಂದ ಚಂದನವಾಡಿ ಎಂಬ ಹಳ್ಳಿಯವರೆಗೆ ೧೦ ಮೈಲಿಗಳ ಡೋರ್ ಟ್ರಕ್ ಗಳು ಓಡಾಡುವಷ್ಟು ಒಳ್ಳೆಯ ರಸ್ತೆ ಇದೆ. ತುಂಬಾ ಸುಂದರವಾದ ತಾಣ. ಈ ಪ್ರದೇಶವು ಚಲಚಿತ್ರಗಳ ಚಿತ್ರೀಕರಣ ಕೇಂದ್ರ. ‘ರಾಮ್ ತೇರಿ ಗಂಗಾ ಮೈಲಿ’, ‘ಬೇತಾಬ್’ ಮುಂತಾದ ಅನೇಕ ಹಿಂದಿ ಸಿನಿಮಾಗಳ ಶೂಟಿಂಗ್ ಇಲ್ಲಾಗಿದೆ. ಚಂದನವಾಡಿವರೆಗಿನ ಕಣಿವೆಯು ಅತಿ ಸುಂದರವಾಗಿದೆ. ಬೆಳಗಿನ ತಂಪು ಹವೆ, ಹೂ ಬಿಸಿಲು ಪ್ರಕೃತಿಯ ಅಂದವನ್ನು ಹೆಚ್ಚಿಸಿತ್ತು. ಎಲ್ಲವೂ ಚೆನ್ನಾಗಿದೆ, ಹೆಜ್ಜೆಹೆಜ್ಜೆಗೂ ಫೋಟೋ ತೆಗೆಯಬೇಕಿತ್ತು! ಇರಲಿ, ನನ್ನ ಮನವೆಂಬ ಕ್ಯಾಮೆರಾದಲ್ಲಿ ಎಲ್ಲಾ ಫೋಟೋಗಳೂ ಪ್ರಿಂಟಾಗಿ ನೆನಪೆಂಬ ಕಣ್ಣಿಂದ ಬೇಕಾದಾಗ ನೋಡಿಕೊಳ್ಳುವೆ. 
ಆ ಸುಂದರ ನೋಟದ ಅನುಭವಕ್ಕೆ ಭಂಗ ಬಾರದಂತೆ ನಾನು ಮೂಕಳಾಗಿ ವಿಸ್ಮಿತಳಾಗಿ ನೋಡುತ್ತಿದ್ದೆ. ಆಗ ಹಿಮಾಲಯವು ಕಣ್ಣಿಗೆ ಕಾಣುವ ಬರಿ ಬೆಟ್ಟಗಳಾಗಿರದೆ ಶ್ರುತಿ, ಸ್ಮೃತಿಗಳಲ್ಲಿ ವಿವರಿಸಿರುವಂತಹ ಪರಮಾತ್ಮನ ವಾಸಸ್ಥಳವಾಗುತ್ತದೆ. ಹಿಮಾಲಯದಲ್ಲಿ ಅನೇಕ ಅಂತರ್ಗತವಾದ ರಹಸ್ಯಗಳು ಹುದುಗಿವೆ. ಒಳಹೊಕ್ಕು ಪಯಣಿಸಿದಾಗ ಒಂದೊಂದೇ ಅರಿವಾಗುವುದು. ನಾನು ಆದಷ್ಟೂ ನನ್ನ ಬುದ್ಧಿಗೆ ಹೊಳೆದಷ್ಟು ನೋಡಿನೋಡಿ ಅರಿತೆನು. ಆನಂದಿಸಿದೆನು. ಆಗ ನನ್ನ ಮನಸ್ಸು ತುಂಬಾ ತೃಪ್ತಿಯಾಗಿತ್ತು. 
ನನಗೆ ಮಸ್ತಾನ ಎಂಬ ಕುದುರೆ ಕೊಟ್ಟಿದ್ದರು. ಎರಡು ಕುದುರೆಗೆ ಒಬ್ಬ ಶೆರ್ಪಾ. ನನ್ನ ಹಾಗೂ ಲಲಿತಕುಮಾರಿಯವರಿಗೆ ಸೇರಿದಂತೆ ಅಬ್ದುಲ್ಲಾ ನೋಡಿಕೊಳ್ಳುತ್ತಿದ್ದನು. ಈತನು ಪಕ್ಕಾ ಕಾಶ್ಮೀರ ಯುವಕ. ಹಿಂದಿ ಬರುತ್ತಿತ್ತು. ತುಂಬಾ ನಂಬಿಕಸ್ಥ. ನಿಮ್ಮ ಯಾತ್ರೆಯು ನನಗೆ ಸೇರಿದ್ದು, ನಾನು ಗುಹೆಯವರೆಗೆ ತಲುಪಿಸಿ, ವಾಪಸ್ಸು ಕರೆ ತರುವೆನು, ನೀವೇನೂ ಯೋಚನೆ ಮಾಡಬೇಡಿ ಮಾಜಿ, ಎಂದು ಹಲವು ಸಲ ಧೈರ್ಯ ಹೇಳಿದ್ದನು. ದಾರಿಯಲ್ಲಿ ಅದೇನೋ ಕಾಶ್ಮೀರಿ ಪದಗಳನ್ನು ಕೂಗಿ ಹಾಡುತ್ತ ಹೇಳಿಕೊಳ್ಳುತ್ತಿದ್ದನು. ಕುದುರೆ ಹತ್ತಿದ ತಕ್ಷಣ ಲಗಾಮಿನ ಪ್ರಯೋಗವನ್ನು ಹೇಳಿಕೊಟ್ಟನು. ನಾನು ಅನೇಕರಂತೆ ಸರಾಗವಾಗಿ ಕುದುರೆಯನ್ನು ನಡೆಸಿದೆನು. ಇಲ್ಲಾ, ಅದೇ ನನ್ನನ್ನು ನಡೆಸಿತು! ಆತನ ಗಮನವೆಲ್ಲ ಸ್ಥೂಲಕಾಯದ ಎಲ್ ಕೆ ರವರ ಕಡೆಗಿತ್ತು. ಅವರಿಗೆ ಮೈ ಹುಷಾರಿರಲಿಲ್ಲ ಬೇರೆ. ಅಬ್ದುಲ್ಲಾ ಕಷ್ಟದ ದಾರಿಗಳಲ್ಲಿ ಓಡಿಬಂದು ನನ್ನ ಕುದುರೆಯನ್ನು ಹಿಡಿದುಕೊಳ್ಳುತ್ತಿದ್ದನು. ಸಣ್ಣ ಸೇತುವೆಗಳು ಬಂದಾಗ ನಾವು ಭಯದಿಂದ ತತ್ತರಿಸುತ್ತಿದ್ದೆವು. ಒಂದೆರೆಡು ಬಾರಿ ಇಳಿಸಿ ನಡೆದು ಬರಲು ಹೇಳಿದನು. ಒಟ್ಟಿನಲ್ಲಿ ನಾನು ಕುದುರೆ ಸವಾರಿಯಲ್ಲಿ ಪಳಗಿದವಳೆಂದು ಹೇಳಿ ಮೆಚ್ಚಿಕೊಂಡನು! ಹೋಗುತ್ತಾ, ಬರುತ್ತಾ ಒಟ್ಟು ೯೦ ಕಿಮೀ ಕುದುರೆಸವಾರಿ. ಅದು ಓಡುವಂತಿಲ್ಲ! ಪಕ್ಕದಲ್ಲಿ ಆತನು ನಡೆದು ಬರುತ್ತಿದ್ದನು. ನಾನೂ ಒಮ್ಮೆ ಕುದುರೆಯಿಂದ ಮಂಜಿನಲ್ಲಿ ಬಿದ್ದು ಸ್ಕೇಟಿಂಗ್ ಅನುಭವ ಪಡೆದೆನು. ಶ್ರೀ ಅಮರನಾಥನಿಗೆ ಉರುಳುಸೇವೆ ಮಾಡಿದೆನು. ಮೂರು ನಾಲ್ಕು ಸಲ ಬಿದ್ದವರನ್ನು ನೋಡಿ ಮರುಕಪಟ್ಟು ಸದ್ಯ ನಾನು ಬೀಳಲಿಲ್ಲವೆಂದುಕೊಂಡೆನು. ತಕ್ಷಣವೇ ಬಿದ್ದೆನು! ಅಹಂ ಕೂಡದಲ್ಲವೇ?   

(ಮುಂದುವರೆಯುವುದು)

~ ವಿನತೆ ಶರ್ಮ