ಎರಡು ದಡ

ಎಲ್ಲರಿಗೂ ನಮಸ್ಕಾರ
ಈ ವಾರದ ಸಂಚಿಕೆಯಲ್ಲಿ ಚೇತನ್ ಅವರ ಸ್ವಂತ ಲೇಖನ ಇದೆ
ದಯವಿಟ್ಟು ಓದಿ ಪ್ರತಿಕ್ರಿಯಿಸಿರಿ

———————————————————————————————————-

ಅಕ್ಕ

ನಾನು ಮತ್ತು ನನ್ನ ತಂಗಿ ಎಂದೂ ಊರು ಬಿಟ್ಟು ಆಚೆ ಹೋದವರೇ ಅಲ್ಲ , ಮಳೆಗಾಲದಲ್ಲಿ ನನ್ನಮ್ಮನ ಆರ್ಭಟಕ್ಕೋ ಬೇಸಿಗೆಯಲ್ಲಿ ಊರವರ ಆಗ್ರಹಕ್ಕೋ ನಮ್ಮ ಸಂಬಂಧಿಕರು ಒಂದೆರಡು ದಿನ ಬಂದು ಹೋಗುವುದು ಬಿಟ್ಟರೆ ಯಾರು ನಮ್ಮೊಂದಿಗಿದ್ದದ್ದು ಕಡಿಮೆಯೇ  ಅದರಲ್ಲೂ ನಮ್ಮಮನನ್ನು ನೋಡಿದ ನೆನಪು ಇಬ್ಬರಿಗೂ ಇಲ್ಲ ಆದರೂ ಅತಿ ಹೆಚ್ಚು ಮಳೆಯಾದ ಕಾಲದಲ್ಲಿ ನಮ್ಮ ಮನೆಯಿಂದ ಒಂದರ್ಧ ಮೈಲು ದೂರದಲ್ಲಿಯೇ ಹೋದಳೆಂದು ಊರ ಜನ ಮಾತನಾಡುವಾಗ ಕೇಳಿದ್ದು ನಮ್ಮ ಭಾಗ್ಯ, ಅವಳು ಹೀಗೆಲ್ಲ ಹೋದಾಗ ನಮ್ಮೂರಿನಿಂದ ಒಂದೆರಡು ಮೈಲು ದೂರದ ಗೊರೂರಿನ ರಾಮಸ್ವಾಮಪ್ಪ ಹೇಳಿದ ಮಾತನ್ನು ಮರೆಯದೆ ನೆನೆಸಿಕೊಳ್ಳುತ್ತಾರೆ ಹೇಮೆ ಹೋದರೆ ಸೀರೆಯ ಸೆರಿಗಿನಂತೆ ನಲಿಯುತ್ತಲೇ ಎಂದು ಹೌದು ಅವಳ ಹೆಸರು ಹೇಮೆ ಹೇಮಾವತಿ ನಾನೆಂದು ಅವಳನ್ನು ನೋಡದಿದ್ದರು ಅವಳ ಚೆಲುವಿನ ಬಗ್ಗೆ ನನ್ನ ಕಲ್ಪನೆಗೂ ರಾಮಸ್ವಾಮಪ್ಪನ ವರ್ಣನೆಗೂ ಹೇಚ್ಛೆನು ವ್ಯತ್ಯಾಸವಿಲ್ಲವೇನೋ.
ನನ್ನದೋ ಬರಿ ಕಲ್ಪನೆಗಳಲ್ಲೇ ತುಂಬಿದ ಬದುಕು ಮನೆಯ ಹಿಂಬಾಗಿಲಾಯಿತು ನಾನಾಯಿತು ಎಂದೇ ಬದುಕಿದವಳು ಕುರಿ ಕಾಯುವವರು , ದನಗಾಯಿಗಳು , ಊರಾಚೆ ತೋಟ ಮಾಡಿ ಅಡಿಕೆ ಅಯಲು ಬರುವವರೊಂದಿಗಷ್ಟೇ ನನ್ನ ಮಾತು ಒಡನಾಟ ಆದರೆ ನನ್ನ ತಂಗಿ ಹಾಗಲ್ಲ ಮನೆಯ ಮುಂಬಾಗಿಲಿನ ವ್ಯವಹಾರವೆಲ್ಲ ಅವಳದ್ದೇ ತುಂಬಾ ಬುದ್ದಿವಂತೆ ನನ್ನ ತಂಗಿ , ಊರ ಎಲ್ಲ ವ್ಯವಹಾರಗಳಲ್ಲೂ ಅವಳು ತೊಡಗಿ ಕೊಂಡೆ ಇರುತ್ತಾಳೆ ಊರಿಗೆ ಬರುವ ರಾಜಕಾರಣಿಗಳು , ಊರಿನ ಎಲ್ಲ ಜಗಳ ಸಂತೋಷ ಕೊಡುವ ಹಬ್ಬಗಳು ಎಲ್ಲದಕ್ಕೂ ಅವಳ ಸಾಕ್ಷಿಯೇ ಮುಖ್ಯ ಮತ್ತು ಅವಳಿಗೆ ಊರ ಜನ ಅಷ್ಟೇ ಗೌರವ ಕೊಡುತ್ತಾರೆ ಕೂಡ. ಅವಳ ತ್ಯಾಗಗಳೇ ಅವಳಿಗಿರುವ ಅಷ್ಟು ಗೌರವಕ್ಕೆ ಕಾರಣವೇನೋ ಊರಜನರ ಉಪಯೋಗಕ್ಕೆ ಮೀನು ಸಾಕಾಣಿಕೆಗೆ ಬೇಕೆಂದಾಗೆಲ್ಲ ತನ್ನ ಜಾಗವನ್ನು ಬಿಟ್ಟುಕೊಡುತ್ತಾಳೆ, ಯಾವುದೇ ಪ್ರತಿಮೆಯು ಅವಳ ಭೂಮಿಯಲ್ಲೇ ನಿಲ್ಲಬೇಕು, ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಇವಳ ಮೆಟ್ಟಿಲೇ ಮುನ್ನುಡಿ ಹೀಗೆ ಹತ್ತು ಹಲವು ತ್ಯಾಗಗಳಿಲ್ಲದೆ ಜನ ಅವಳನ್ನು ಅಷ್ಟು ಗೌರವಿಸುವರೇ. ಎಷ್ಟಾದರೂ ನನ್ನ ತಂಗಿ ಅಲ್ಲವೇ , ಆದರೂ ಅವಳು ನಾನು ಮಾತನಾಡಿದ್ದು ಕಡಿಮೆಯೇ ಮಾತೆ ಆಡದೆ ದೂರದಲ್ಲಿ ನೋಡಿ ಸಂತೋಷ ಪಟ್ಟದ್ದೇ ಹೆಚ್ಚು , ಅವಳನ್ನು ನಮ್ಮೂರಿನ ಪಟೇಲರು ನೀನು ಬೆಳೆಯುವ ಚೇಣಿಯಿಂದ ಇನ್ನು ಚಾಪೆಯನ್ನು ಹೆಣೆಯುತ್ತಾರೆಯೇ , ದೊಡ್ಡ ಅರಳಿಮರದ ಕೆಳಗೆ ಕುಳಿತು ಜನ ಇನ್ನು ಹರಟೆ ಹೊಡೆಯುತ್ತಾರೆಯೇ , ಊರ ಮುಂದಿನ ಹನುಮಂತರಾಯನ ಗುಡಿಯಲ್ಲಿ ಮಕ್ಕಳು ಇನ್ನು ಕಣ್ಣ ಮುಚ್ಚಾಲೆ ಆಡುತ್ತಾರೆಯೇ ಎಂದೆಲ್ಲ ಕೇಳುವ ಆಶೆ. ನಾನಂತೊ ಮೂಗಿಗಿಂತ ಹೆಚ್ಚು ನಾನಾಯಿತು ನನ್ನ ಕೆಲಸವಾಯಿತು ಎಂದು ಇದ್ದುಬಿಟ್ಟವಳು , ನಮ್ಮ ಮನೆಯ ಹಿಂಬಾಗಿಲಿನಲ್ಲಿ
ಸಣ್ಣ ಮಕ್ಕಳು ಪಾಠ ಓದಿಕೊಂಡು ಓಡುವಾಗಲೋ , ಸಣ್ಣ ಪುಟ್ಟ ಮೋಟಾರು ಗಾಡಿಗಳು ಹೋದಾಗಲೂ ನೋಡಿ ಸಂತೋಷಪಟ್ಟವಳು ನನ್ನ ತಂಗಿಯಷ್ಟು ನಾನು ಬುದ್ದಿವಂತೆ ಅಲ್ಲದಿದ್ದರೂ ಅವಳು ನನ್ನ ತಂಗಿ ಅಲ್ಲವೇ …!!!
ತಂಗಿ
ನನ್ನ ಅಕ್ಕನಿಗೆ ಅಷ್ಟೇನೂ ಗೊತ್ತಾಗುವುದಿಲ್ಲ, ಬರಿ ಮುಂದಿನ ಬಾಗಿಲಲ್ಲಿದಕ್ಕೆ ನಂಗೆಲ್ಲವೂ ತಿಳಿದಿದೆ , ನಾನು ತುಂಬಾ ಬುದ್ದಿವಂತಳು ಯಾವಾಗ ಬೇಕಾದರೂ ನನ್ನಮ್ಮ ಹೇಮೆಯನ್ನು ಹತ್ತಿರದಿಂದ ನೋಡಬಹುದು ಎಂದುಕೊಂಡುಬಿಟ್ಟಿದಾಳೆ ನನ್ನ ಬೇಜಾರುಗಳನ್ನು ಯಾರಬಳಿ ಹೇಳಿಕೊಳ್ಳಲಿ ನನಗು ಅವಳಂತೆ ಹಿಂದಿನ ಬಾಗಿಲಲ್ಲೇ ಇರಬೇಕಾಗಿತ್ತು ಅನಿಸುತ್ತಲೇ ಇರುತ್ತದೆ , ಏನುಮಾಡುವುದು ನಮಗೆ ದೊರಕಿದ್ದು ನಮಗಲ್ಲವೇ..!!
ನನ್ನ ಜೀವನವೆಲ್ಲವನ್ನು ನಮ್ಮೂರಿನ ಬದುಕಿನ ಬೇರೆ ಬೇರೆ ಕಾಲಘಟ್ಟದಲ್ಲಿ ಆದ ಬದಲಾವಣೆಗಳನ್ನು ನೋಡಿಕೊಂಡೆ ಕಳೆದಿದ್ದೇನೆ, ಎತ್ತಿನಗಾಡಿಯಿಂದ ಶುರುವಾಗಿ ಟೆಂಪೋಗಳು, ಬಸ್ಸುಗಳು ಇತ್ತೀಚೆಗೆ ನಮ್ಮೂರಿನ ಜನರ ಬಳಿ ಅವರದೇ ವಾಹನಗಳನ್ನು ನೋಡಿದ್ದೇನೆ, ಜನರು ಜಾತ್ರೆ , ದೇವಾಸ್ಥಾನಗಳಿಗೆ ಹೋಗುತ್ತಿದ್ದವರು ಪಟ್ಟಣಗಳಿಗೆ ಮಾಲ್ಗಳಿಗೆ ಹೋಗುತ್ತಿದ್ದಾರೆ, ಹಿಂದೆ ನಮ್ಮೂರಿನ ಮದುವೆಗಳ ಮೆರವಣಿಗೆ ಹನುಮಂತರಾಯನ ಗುಡಿಯಿಂದ ಕೇಶವದೇವರ ದರ್ಶನಕ್ಕೆ ಹೋಗಿಬರುತಿದ್ದನ್ನು ನೋಡಿದವಳಿಗೆ ಇಂದು ರಾಜಕೀಯ ಭಾಷಣ ಮತ್ತು ಕಾರ್ಯಕ್ರಮಗಳನ್ನು ನೋಡುವ ಕೇಳುವಂತಾಗಿದೆ ಇದು ಬದುಕಿನ ಬೇಕಿರುವ ಬದಲಾವಣೆಗಳು ಎನ್ನುವ ತಿಳುವಳಿಕೆಯೂಬಂದಿದೆ. ಹಿಂದೆ ನಮ್ಮೂರಿನ ಪಟೇಲರು ನನ್ನ ಅಂಗಳದಲ್ಲಿ ಬೆಳೆದ ಚೇಣಿಯನ್ನು ಕುಯ್ದು ಮಲಗುವ ಚಾಪೆ, ಊಟದ ಚಾಪೆ ಮಾಡಲು ಚೇಣಿಯನ್ನು ಬಡಿಯುತಿದ್ದ ಒಂದೇ ಸಪ್ಪಳವನ್ನು ಕೇಳುತಿದ್ದವಳು ಇಂದು ಅಂಗಡಿ , ಬಸ್ ನಿಲ್ದಾಣಗಳಲ್ಲಿ ನಮ್ಮೂರಿನ ಜನರ ರಾಜಕೀಯ ಹರಟೆಗಳನ್ನು ಕೇಳುತಿದ್ದೇನೆ , ನಮ್ಮೂರಿನ ಜನ ಬುದ್ಧಿವಂತರಿದ್ದಾರೆ ಕಾಡು ಹರಟೆಯ ಜೊತೆಗೆ ಸಾಕಷ್ಟು ಪ್ರಗತಿಶೀಲ ಮಾತುಗಳನ್ನು ಆಡುತ್ತಾರೆ ಅದಕ್ಕಾಗಿಯೇ ದೇವಸ್ಥಾನಗಳ ಜೊತೆಗೆ ನಮ್ಮೂರಿನಲ್ಲಿ ಪ್ರತಿಮೆಗಳು ಬಂದಿರುವುದು. ಘಟ್ಟದ ಕೆಳಗೆ ಕಾರಂತಜ್ಜ ಎಂಬುವರು ಒಂದು ಮನೆಯ ಬಗ್ಗೆ ತಿಳಿಯಬೇಕಾದರೆ ಮನೆಯ ಹಿಂದಿನ ಬಾಗಿಲಿನಿಂದ ಹೋದರೆ ಹೆಚ್ಚು
ಹತ್ತಿರವಾಗಿ ತಿಳಿಯಲು ಸಾಧ್ಯ ಎನ್ನುತ್ತಿರುತ್ತಾರೆ ಎಂದು ನಮ್ಮೂರ ಶಾಲೆಯ ಮಕ್ಕಳು ಹೇಳುತ್ತಿರುತ್ತಾರೆ, ಆ ಮಟ್ಟಿಗೆ ನನ್ನ ಅಕ್ಕನೇ ಭಾಗ್ಯಶಾಲಿ.

Leave a comment

This site uses Akismet to reduce spam. Learn how your comment data is processed.