ನಲುಮೆಯ ಓದುಗ ಬಳಗಕ್ಕೆ ನಮಸ್ಕಾರ.
‘ ರಾಜನಿಗಿಂತ ಭಿಕ್ಷುವಿನ ಸ್ಥಾನವೇ ಹೆಚ್ಚಿನದು ಎಂಬ ಮೌಲ್ಯವನ್ನು ಕಟ್ಟಿದ್ದು ಜಗತ್ತಿನಲ್ಲಿ ಭಾರತವೊಂದೇ. ಭಿಕ್ಷು ಯಾರು? ಯಾರು ತನ್ನ ಮೇಲೆ ತಾನು ನಿಜವಾದ ಮಾಲೀಕತ್ವವನ್ನು ಸಾಧಿಸಿರುವನೋ ಅವನು. ಅವನೊಳಗೇ ಒಂದು ವಿಶ್ವವಿದೆ; ಒಂದು ಸಾಮ್ರಾಜ್ಯವಿದೆ;ವಿಶಾಲತೆಯಿದೆ; ಆಕಾಶವಿದೆ. ಇದು ಮಹಾವೀರರ ಹಾದಿ. ಮಹಾವೀರರಂಥವರು ಬತ್ತಲೆಯಾದಾಗ ಅದು ಕೇವಲ ರೂಢಿ ಅಥವಾ ನಡವಳಿಕೆ ಅಲ್ಲ, ಅದು ಅರಿವು..ತಿಳವಳಿಕೆ..ವಿವೇಚನೆ’. (ರಜನೀಶ್. ನನ್ನ ಪ್ರಿಯ ಭಾರತ)
‘ಭಾರತದ ಶೋಷಿತ ವರ್ಗಗಳ ಹಿತಕಾಯಲೆಂದೇ ನಾನು ಮೊದಲು ಸಂವಿಧಾನ ಕರಡು ರಚನಾ ಸಮಿತಿಗೆ ಬಂದೆ. ದುರ್ಬಲ ವರ್ಗಗಳಿಗೆ ಮಾನವ ಹಕ್ಕುಗಳನ್ನು ಗಳಿಸಿಕೊಡುವುದೇ ನನ್ನ ಜೀವನದ ಧ್ಯೇಯ.’ (ಬಿ.ಆರ್.ಅಂಬೇಡಕರ)
ಮೊದಲಿಗೆ ಸರ್ವರಿಗೂ ಮಹಾವೀರ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು.
‘ಯುಜ್ಯತೇ ಇತಿ ಯೋಗ:’ ಯೋಗ ಅಪ್ಪಟ ವಿಜ್ಞಾನ. ಯೋಗ ಪ್ರಪಂಚದಲ್ಲಿ ಪತಂಜಲಿ ಅಗ್ರಗಣ್ಯರು. ನೀವು ಪತಂಜಲಿಯನ್ನು ಅನುಸರಿಸಿದರೆ, ಅವರು ಒಂದು ಗಣಿತದ ಸೂತ್ರದ ಹಾಗೆ ನಿಖರವೆಂಬುದು ಗೊತ್ತಾಗುವುದು. ಸುಮ್ಮನೇ ಆತ ಹೇಳಿದಂತೆ ಮಾಡಿದಲ್ಲಿ ಫಲಿತಾಂಶ ಬರುವುದು; ಬರಲೇಬೇಕು. ಎರಡು ಮತ್ತು ಎರಡು ಕೂಡಿದರೆ ನಾಲ್ಕು ಎಂದಹಾಗೆಯೇ ಇದು. ನೀವು ನೀರನ್ನು ನೂರು ಡಿಗ್ರಿ ತಾಪಕ್ಕೆ ಕಾಯಿಸಿದರೆ ಆವಿಯಾಗುವ ಹಾಗೆ. ಯಾವುದೇ ನಂಬಿಕೆ, ಮತಶ್ರದ್ಧೆ ಬೇಕಿಲ್ಲದೆಯೂ ಸುಮ್ಮನೆ ಮಾಡಿನೋಡಿ ತಿಳಿಯಬಹುದು. ಈ ಭೂಮಿಯ ಮೇಲೆ ಪತಂಜಲಿಯಂಥ ಇನ್ನೊಬ್ಬ ವ್ಯಕ್ತಿ ಜೀವಿಸಿರಲಿಲ್ಲ’..ಇದನ್ನು ನಾನಲ್ಲ ಹೇಳುತ್ತಿರುವುದು; ಓಶೋ ರವರು ಹೇಳಿದ ಮಾತಿದು. ಇವತ್ತು ತಾವು ಮಾಡಿದ ಯೋಗಪಯಣವನ್ನು ನಿಮ್ಮೊಡನೆ ಹಂಚಿಕೊಂಡಿದ್ದಾರೆ ಶ್ರೀಮತಿ ಸಂಧ್ಯಾ ಪುರೋಹಿತ್ ಅವರು.
ಧುಮ್ಮಿಕ್ಕಿ ಹರಿವ ನದಿಯಲ್ಲಿ, ಹಕ್ಕಿಗಳ ಕಲರವದಲ್ಲಿ, ಭೋರ್ಗರೆವ ಕಡಲಲ್ಲಿ, ಗಾಳಿಯ ಸುಯ್ಗುಡುವಿಕೆಯಲ್ಲಿ ,ಮಳೆ ಹನಿಗಳ ತಟಗುಟ್ಟುವಿಕೆಯಲ್ಲಿ, ಕಪ್ಪೆಗಳ ವಟಗುಟ್ಟುವಿಕೆಯಲ್ಲಿ, ಗುಡುಗಿನ ಆರ್ಭಟದಲ್ಲಿ...ಸಕಲ ಪ್ರಕೃತಿಯೇ ಸಂಗೀತಮಯ. ‘ಸುರ್ ಕೀ ಸಾಧನಾ ಪರಮೇಶ್ವರ್ ಕೀ’
ಅಂಥದೊಂದು ಸಂಗೀತ ರಸಾಯನದ ಹನಿ ನಿಮಗಾಗಿ ಕುಮಾರಿ ಸಂಪದಾ ಪುರೋಹಿತ್ ಅವರಿಂದ.
‘ಸೆಲ್ಫಿ’ ಯಾರಿಗಿಷ್ಟವಿಲ್ಲ? ಇವತ್ತೇನಾದರೂ ಬುದ್ಧನಿದ್ದಿದ್ದರೆ ‘ಸೆಲ್ಫಿ’ ತೆಗೆಯದವರಿಂದ ಸಾಸಿವೆ ತರಲು ಹೇಳತ್ತಿದ್ದನೇನೋ??!! ಆದರೆ ಎಷ್ಟು ಸೆಲ್ಫಿ ತೆಗೆದುಕೊಂಡರೇನು ಅಂತರಂಗದ ಅರಿವು ‘ಸ್ವಂತಕೇ ದುರ್ದರ್ಶ ಮಂಕುತಿಮ್ಮ’. ಬನ್ನಿ, ಓದಿ ವಿಜಯ ನಾರಸಿಂಹ ಅವರ ಕವನವನ್ನು. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಮರೆಯದಿರಿ.
~ಸಂಪಾದಕಿ
ಸಂಧ್ಯಾ ಪುರೋಹಿತ ಅವರು ಮೂಲತ: ಕುಷ್ಟಗಿಯವರಾಗಿದ್ದು ಕಳೆದ ಸುಮಾರು 19 ವರುಷಗಳಿಂದ ಯು.ಕೆ.ನಲ್ಲಿ ವಾಸವಾಗಿದ್ದು ಸಧ್ಯ ಬರ್ನಾಮ್ ನಿವಾಸಿ. ಸಂಗೀತ, ನೃತ್ಯ, ಅಡುಗೆ ಇತ್ಯಾದಿ ಆಸಕ್ತಿಗಳೊಡನೆ ತುಂಬಿ ತುಳುಕುವ ಜೀವನೋತ್ಸಾಹ ಇವರದು. ಇದೀಗಷ್ಟೇ ಭಾರತ ಸರಕಾರದ ಆಯುಷ್ ಮಂತ್ತಾಲಯದಿಂದ ಯೋಗ ಸ್ನಾತಕೋತ್ತರ ಕೋರ್ಸನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಆಸಕ್ತರಿಗೆ ಆನ್ ಲೈನ್ ಪಾಠ ಮಾಡುತ್ತಿದ್ದಾರೆ.
ಯೋಗದೆಡೆಯ ನನ್ನ ಪಯಣ
೨೦೧೯ ಪ್ರಾರಂಭ ದಲ್ಲಿ ನನ್ನ ಆತ್ಮೀಯ ಗೆಳತ ಆಶಾ ಹೇಳಿದಳು , ‘ಯಾವಾಗಲೂ ಬೆನ್ನು ನೋವು, ಆರೋಗ್ಯದಲ್ಲಿ ಏರು ಪೇರು ಅಂತೀಯಾ ಯಾಕೆ ನೀನು ಯೋಗ ಪಯತ್ನಿಸ ಬಾರದು?’ ಅಂತ ಹೇಳಿದಳು. ನಂದು ಅವಳದು ೧೭ ವರ್ಷದ ಸ್ನೇಹ. ಆದರೆ ಕಳೆದ ೬ ವರ್ಷದಿಂದ ಭಾರತದಲ್ಲಿ ನೆಲೆಸಿ ಈಗ ಫುಲ್ ಟೈಮ್ ಯೋಗ ಶಿಕ್ಷಕಿ ಅವಳು. ಆದರೆ ನನಗೆ ಆಸನ ಅಂದರೆ ಆತಂಕ ಏಕೆಂದರೆ ಸೋಶಿಯಲ್ ಮೀಡಿಯಾ ಮೂಲಕ ಯೋಗಿಗಳ ಪರ್ಫೆಕ್ಟ್ ಪೋಸುಗಳನ್ನು ನೋಡಿದಾಗ ಮುಖ್ಯವಾಗಿ ಕಾಣೋದು ತೆಳ್ಳಗಿರುವ, ಸೂಪರ್ ಫ್ಲೆಕ್ಸಿಬಲ್ ಮತ್ತು ಯಂಗ್ ಆಗಿ ಕಾಣುವ ದೇಹಗಳು. ಹೀಗಾಗಿ ನನಗೆ ಆಸನ ಅಂದರೆ ಭಯ, ಸರ್ವಾಂಗಾಸನ, ಧನುರಾಸನ,ಶಿರ್ಷಾಸನ,ನಟರಾಜಾಸನ ಮುಂತಾದವುಗಳನ್ನ ನೋಡಿದರೆ ‘ಇಟ್ ಇಸ್ ನಾಟ್ ಮೈ ಕಪ್ ಆಫ್ ಟೀ’ ಅಂತ ಅನಿಸುತಿತ್ತು. ಇದು ನನ್ನ ಕಲ್ಪನೆ ಆಗಿತ್ತು . ಆದರೆ ಪ್ರಾಣಾಯಾಮದಲ್ಲಿ ನನಗೆ ಒಲವು ಇತ್ತು. ಆಶಾ ಕೇಳಿದಾಗ ಒಮ್ಮೆ ಈಗ ಆಗ ಅಂತ ಏನೋ ನೆಪ ಹೇಳಿ ಮುಂದೆ ಹಾಕ್ತಾನೆ ಇದ್ದೆ. ಆದರೆ ಅವಳು ಛಲ ಬಿಡದೆ ‘ಸರಿ ವೀಕೆಂಡ್ ನಲ್ಲಿ ನಿಮ್ಮ ಟೈಮ್ಗೆ ಕ್ಲಾಸ್ ತೊಗೋತೀನಿ’ ಅಂತ ಹೇಳಿದಳು ಸರಿ ಅಂತ ನಾನು ಮತ್ತು ನನ್ನ ಇಬ್ಬರು ಸ್ನೇಹಿತರು ಮತ್ತು ನನ್ನ ಇಬ್ಬರು ಸ್ನೇಹಿತರು ಮತ್ತು ನನ್ನ ಸಹೋದರಿಯರಾದ ಗೌರಿಯಕ್ಕ ಮತ್ತು ಸಂಧ್ಯಾರ ಜೊತೆ ಸೇರಿ ಪ್ರಾಣಾಯಾಮ ಮತ್ತು ಕೆಲವು ಆಸನಗಳುನ್ನು ಕಲಿಯ ತೊಡಗಿದೆವು.ಆದರೆ ರೆಗ್ಯೂಲರಾಗಿ ಮಾಡ್ತಾ ಇರ್ಲಿಲ್ಲ. ಹೀಗಿರುವಾಗ ಸೂರ್ಯನಮಸ್ಕಾರ ಹೇಳಿಕೊಡತೀನಿ ಅಂತ ಒಂದು ದಿವಸ ಹೇಳಿದಳು. ಸರಿ ಕಲಿತೆನೋ ಕಲಿತೆ. ಆದರೆ ಸರಿಯಾಗಿ ಮಾಡ್ತಾ ಇರಲಿಲ್ಲ . ಆಶಾ ಕ್ಲಾಸ್ನಲ್ಲಿ ಕೇಳಿದಾಗ ಅಯ್ಯೋ ಅದನ್ನು ಮಾಡಿದರೆ ನನಗೆ ಮೊಣಕಾಲು ನೋವು ಅಗತದೆ ಅಂತ ಜಾರಿಕೊಂಡು ಬಿಟ್ಟಿದ್ದೆ. ಆದರೂ ಅವಳ ಒತ್ತಾಯಕ್ಕೆ ಹೀಗೆ ೩ತಿಂಗಳು ಮಾಡ್ತಾ ಹೋದೆ. ಆಮೇಲೆ ನನಗೆ ಅರಿವಿಲ್ಲದೆ ಬದಲಾವಣೆ ಕಾಣತೊಡಗಿತು ನನ್ನಲ್ಲಿ. ೨೦೨೦ ಕರೋನದಿಂದ ಲೊಕ್ಡೌನ್ ಆಗಿ ಎಲ್ಲರೂ ಮನೇಲಿ ಇರುವ ಪ್ರಸಂಗ ಬಂತು. ನೋ ಆಕ್ಟಿವಿಟೀಸ್, ಯಾರನ್ನು ಭೇಟಿ
ಆಗದ ಸಮಯ ಬೇಜಾರು, ಆತಂಕ ಆಂಕ್ಸಿಟಿ ಗಳಿಂದ ಕೂಡಿತ್ತು ಮನಸ್ಸು. blessing in disguise ಅಂತಾರಲ್ಲ
ಹಾಗೆ ಆ ಟೈಂಲ್ಲಿ ಯೋಗ ನಮಗೆ ಸಹಾಯ ಮಾಡಿತು. ವಾಟ್ಸ್ಯಾಪ್ಪ್ ಮೂಲಕ ನಾನು, ಗೌರಿಯಕ್ಕ ಮತ್ತು ಸಂಧ್ಯಾ ರೆಗ್ಯೂಲರಾಗಿ ಶುರು ಮಾಡಿದಿವಿ. ಸ್ವಾಮಿ ಕಾರ್ಯ ಹಾಗು ಸ್ವಕಾರ್ಯ ಹಾಗೆ ಒಬ್ಬರನ್ನು ಒಬ್ಬರು ಯೋಗ ಮಾಡುವ ಮೂಲಕ ನೋಡಿಯಾದರೂ ಖುಷಿ ಆಗತಿತ್ತು.
ನನ್ನಲ್ಲಿ ಯೋಗದ ಬಗ್ಗೆ ಅಭಿರುಚಿ ಬೆಳೆಯಲು ಆರಂಭ ವಾಯಿತು.ಇದು ಬರಿ ಆಸನ ಅಲ್ಲ beyond ಇದೆ ಅಂತ ಅನಿಸೋಕ್ಕೆ ಶುರು ಆಯಿತು. ಇನ್ನೂ ಆಳವಾಗಿ ಕಲಿಬೇಕು ಅನ್ನೋ ಹಂಬಲ ಹೆಚ್ಚಾಯಿತು. ಅದೇ ಸಮಯಕ್ಕೆ ಸರಿ ಆಗಿ ಮತ್ತೆ ನನ್ನ ಗೆಳತಿ ಆಶಾ ಹೇಳಿದಳು ಪುಣೆಯಲ್ಲಿ ಪರಂ ಅಂತ ಯೋಗ ಇಸ್ಟಿಟ್ಯೂಟ್ ನೂರು ಆನ್ಲೈನ್ ಯೋಗ Ttc (ಟೀಚರ್ ಟ್ರೈನಿಂಗ್ ಕೋರ್ಸ್ ) ಶುರು ಮಾಡ್ಲಿಕತ್ತಾರ ಜಾಯಿನ್ ಆಗತಿಯೇನು ನೋಡು ಅಂತ. ನಾನಂದೆ ಈಗಿನ್ನ ಯೋಗಪ್ರಾಕ್ಟಿಸ್ನ ಆರಂಭ ಮಾಡೀನಿ ಹೆಂಗ್ ಅಂತ.ಸರಿ ನಾ ವಿಚಾರಿಸಿ ತಿಳಿಸ್ತೀನಿ ಅಂದಳು . ವಿಚಾರಿಸಿದ್ಮೇಲೆ ಹೇಳಿದಳು ನೀ ಕೋರ್ಸ್ ಮಾಡಬಹುದು ಅಂತ ಅದ್ರ ನಾನು ಮೊದಲೇ ಹೇಳಿದ್ದೆನಲ್ಲ ಆಸನ ಕಷ್ಟ ಅಂದೆ. ಅದಕ್ಕೆ ಅವಳು ಅಂದ್ಲು ‘ನೋಡು ಅವರದು ೪ modules ಅವ ಅದರಾಗ್ ಫಿಲಾಸಫಿ ಅದ ನೀ ಬೇಕಾದ್ರ ಅದು ಮಾಡು’ ಎಂದಳು . ನೀನು ಒಮ್ಮೆ ಅವರ ಜೊತೆ ಮಾತಾಡು ಎಂದು ಫೋನ್ no ಕೊಟ್ಟಳು. ನಾನು ma'am ಗೆ ಫೋನ್ ಮಾಡಿದಾಗ ಒಂದು ಮಾತು ಹೇಳಿದರು ನೀನು ಬಹಳ ತಪ್ಪು ಕಲ್ಪನೆಯಲ್ಲಿ ಇದ್ದಿ , ,ನಿಮ್ಮನ್ನು ಇತರರಿಗೆ ಹೋಲಿಸಬೇಡಿ ನಿಮ್ಮಯೋಗಭ್ಯಾಸ ನಿಮ್ಮದು. ನಾವೆಲ್ಲಾ ಅನನ್ಯರು. ನಾವು ವಿಭಿನ್ನವಾಗಿ ಕಾಣುತ್ತೇವೆ. ನಮ್ಮಲ್ಲಿ ವಿಭಿನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳಿವೆ ಅಂತ ಹೇಳಿ ನೀ ಫುಲ್ ಕೋರ್ಸ್ ಮಾಡು ಅಂತ ಪ್ರೋತ್ಸಾಹಿಸಿದರು.ನನಗೆ ಅವರ ಮಾತೇ ಟರ್ನಿಂಗ್ ಪಾಯಿಂಟ್. ಯೋಗ ಕೋರ್ಸ್ ಪ್ರಾರಂಭದಿಂದಲೇ ಬದಲಾವಣೆ ಕಾಣಿಸಿತು ಏನಂದರೆ ಬೆಳ್ಳಗ್ಗೆ ೫ ಗಂಟೆಗೆ ಏಳೋದು.ಕೋರ್ಸ್ನಲ್ಲಿ ವೇದ,ಗೀತಾ,ಉಪನಿಷದ್, ಪತಂಜಲಿ ಸೂತ್ರ ಎಲ್ಲದರ ಬಗ್ಗೆ ಪರಿಚಯ ಆಯಿತು. ಕೋರ್ಸ್ ಮಾಡ್ತಾ ಮಾಡ್ತಾ ನನ್ನಳೊಗಿನ ಆತಂಕ ,ದುಗಡ ಮರೆಯಾಯಿತು.
Yoga is union of mind ,body and spirit ಅಂತ ತಿಳೀತಾಹೋಯಿತು.ಯೋಗ ಬರಿ ಆಸನಕ್ಕೆ ಸೀಮಿತವಲ್ಲ ಎಂಬೊ ಸತ್ಯ ಅರಿವಾಯಿತು. ಯೋಗ ಇದು ಹೆಚ್ಚಿನ ಆಧ್ಯಾತ್ಮಿಕ ತಿಳುವಳಿಕೆಗೆ ಒಂದು ಮಾರ್ಗವಾಗಿದೆ. ಒಂದು ಸಮಯದಲ್ಲಿ,ಒಂದು ವಿಷಯದ ಮೇಲೆ ಕೇಂದ್ರೀಕರಿಸಲು ಯೋಗವು ನಮಗೆ ಸಹಾಯ ಮಾಡುತ್ತದೆ. ಯೋಗಾಭ್ಯಾಸದ ನಂತರ ನಿಮ್ಮ ಮನಸ್ಸು ಶಾಂತವಾಗುವುದರಿಂದ ' ಈ ಕ್ಷಣ 'ದಲ್ಲಿ ಹೆಚ್ಚು ಸಂಪೂರ್ಣವಾಗಿ ಇರಲು ಸಹಾಯ ಮಾಡುತ್ತದೆ . ಕಳೆದ ೨ ವರ್ಷದಲ್ಲಿ ನನ್ನಲ್ಲಿ ಅದ ಬದಲಾವಣೆ ತುಂಬಾ ಅದರಲ್ಲೂ ಕೆಲವಮ್ಮೆ ಮೆಲಕು ಹಾಕಿದಾಗ ನನಗೆ ಆಶ್ಚರ್ಯಅಗತದ ಎಲ್ಲಿ ಒಂದು ಸೂರ್ಯನಮಸ್ಕಾರ ಹಾಕಲಿಕ್ಕೆ ಬೇಡಾ ಅಂದವಳು ಈಗ continuous ೨೧ ಸೂರ್ಯನಮಸ್ಕಾರ ಹಾಕುವ ಧೈರ್ಯ ನನ್ನಲ್ಲಿ ಬಂದಿದೆ.ದಿನಕ್ಕೆ ೨ಬರಿ ಕ್ಲಾಸ್ ಅಟೆಂಡ್ ಆಗಿ ಮತ್ತೆ ಕ್ಲಾಸ್ ಕೂಡ ತೊಗೋತೀನಿ . ರೆಸೆಂಟಾಗಿ ಮಿನಿಸ್ಟ್ರಿ ಒಫ್ ಆಯುಷ್ ನಿಂದ ಎರಡು ಸರ್ಟಿಫಿಕೇಷನ್ ಮಾಡಿದ್ದೇನೆ.ಯೋಗ ಪುಸ್ತಕಗಳನ್ನು ಓದುತ್ತಿದ್ದೇನೆ. ಹಠಯೋಗಪ್ರದೀಪಿಕಾ,ಘೆರoಡ್ ಸಂಹಿತಾ, ಪತಂಜಲಿ ಯೋಗಸೂತ್ರ ಹೀಗೆ ಹಲವಾರು ಬುಕ್ಗಳನ್ನ ಓದುವ ತವಕ ಹೆಚ್ಚಾಗಿದೆ.
'Yoga is a journey not a destination '. ನಿಮಗೆ ಯೋಗದ ಬಗ್ಗೆ ಕುತೂಹಲವಿದ್ದರೆ ,ಮುಕ್ತ ಮನಸ್ಸಿನಿಂದ
ಹೋಗಿ ಮತ್ತು ಅದನ್ನು ಪ್ರಯತ್ನಿಸುವ ಆರಂಭಿಕ ಹಂತವನ್ನು ತೆಗೆದುಕೊಳ್ಳಿ. "ಯೋಗ: ಕರ್ಮಸು ಕೌಶಲಂ".ಗೀತಾ ಚಾಪ್ಟರ್ ೨/೫೦.and you won't regret it .ನನ್ನನು ಈ ಜರ್ನಿಗೆ ಕರೆತಂದ ಆಶಾ ಹಾಗು ಪರಂ ಇನ್ಸ್ಟಿಟ್ಯೂಟ್ ಗೆ ಚಿರಋಣಿ .ಲಾಸ್ಟ ಬಟ್ ನಾಟ್ ಲೀಸ್ಟ್ ಈ ಅನುಭವನ್ನು ಬರೆಯಲು ಪ್ರೋತ್ಸಾಹಿಸಿದ ಗೌರೀಅಕ್ಕಗೆ ನನ್ನ ತುಂಬು ಹೃದಯದ ಧನ್ಯವಾದಗಳು
~ಸಂಧ್ಯಾ ಪುರೋಹಿತ್
ಸಂಪದಾ ಪುರೋಹಿತ ಇವಳು ಇಯರ್ 9 ರ ವಿದ್ಯಾಥಿ೯ನಿ. ಇವಳು ಬರ್ನಾಹಾಮ್ ನಿವಾಸಿ. ಕನ್ನಡ ಭಾವಗೀತೆ, ಚಿತ್ರಗೀತೆ ಹಾಗೂ ದೇವರ ನಾಮಗಳನ್ನು ಸುಶ್ರಾವ್ಯವಾಗಿ ಹಾಡುವ ಇವಳು ಕಳೆದ ಐದು ವರುಷಗಳಿಂದ ಯು.ಕೆ.ಯ ಜಯಿತಾ ಘೋಷ್ ಅವರ ಬಳಿ ಹಿಂದೂಸ್ತಾನೀ ಗಾಯನವನ್ನು ಕಲಿಯುತ್ತಿದ್ದಾಳೆ.
ರಾಮ್ಭಜನ್
ಸೆಲ್ಫಿ
ಸೆಲ್ಫಿ ತೆಗೆಯುವ ಹುಚ್ಚು ಹಿಡಿದಿತು ನನಗೆ ಒಂದು ದಿನ
ಸ್ಮಾರ್ಟ್ ಫೋನಿನ ಮಹಿಮೆಯಿದು ನನಗೊಬ್ಬನಿಗೆನ?
ಚೆಂದದ ಪೋಸು ಕೊಡಲು ಬಾರದೆನಗೆ
ಚೆಂದದ ನಗೆಯನ್ನು ನನ್ನ ಮುಖವೇಕೊ ಕೊಡದು!
ಕೆನ್ನೆಗಳು ಅಗಲಗೊಳ್ಳವು, ತುಟಿ ತೆರೆದು ಹಲ್ಲುಗಳೇಕೊ
ಹೊರಗೆ ಬಾರವು, ಕಣ್ಣುಗಳು ಹೊಳಪನ್ನು ಬೀರವು
ನನಗೆ ಹೊಳೆದದ್ದು ಆಗ ಈ ಸೆಲ್ಫಿಗೂ ನನಗೂ ದೂರ
ಮನೆಯೊಳಗೆ ಒಬ್ಬನೆ, ಮನಸಿನೊಳಗೆ ಒಬ್ಬನೆ
ಯೋಚಿಸುತ್ತಿದ್ದೆ, ಅಂತರಾಳದ ಸ್ಮಾರ್ಟ್ ಫೋನದು
ತನ್ ತಾನೇ ತಗೆಯತೊಡಗಿತ್ತು ಭಾವದ ಸೆಲ್ಫಿಗಳ
ಕೆಲವು ಸುಂದರ, ಕೆಲವು ವಿಕಾರ, ಕೆಲವು ಬಾಲಿಷ
ಕೆಲವು ರೋಚಕ, ಕೆಲವು ಮಾರ್ಮಿಕ, ಕೆಲವು ಉಚ್ಛ
ಕೆಲವು ನೀಚ, ಕೆಲವು ಪ್ರಾಮಾಣಿಕ, ಕೆಲವು ಭಂಡತನ
ಕೆಲವು ಹಗುರ, ಕೆಲವು ಭಾರ, ಕೆಲವು ಸ್ಪಷ್ಟ, ಹಲವು ಅಸ್ಪಷ್ಟ, ಕೆಲವು ಉತ್ಕೃಷ್ಟ, ಕೆಲವು ನಿಕೃಷ್ಟ, ಕೆಲವು ಸತ್ಯ, ಹಲವು ಮಿಥ್ಯ, ಕೆಲವು ರಾಗ, ಕೆಲವು ದ್ವೇಷ, ಕೆಲವು ನೋವು, ಕೆಲವು ನಲಿವು, ಕೆಲವು ಸಾರ್ಥಕ
ಹೀಗೆ ಒಳಗಿನ ವಿಭಿನ್ನ ಪೋಸುಗಳ ಸೆಲ್ಫಿಗಳು ದಿನವೂ ಅದೆಷ್ಟು ತೆಗೆದುಕೊಳ್ಳುತ್ತಿರುತ್ತೇವೊ ನಾವು?
ನೆನಪಿನ ಗೋಡೆಗೆ ಅಂಟಿಸಿ ಒಂದೊಂದನೂ ಸೂಕ್ಷ್ಮವಾಗಿ
ಗಮನಿಸಬೇಕು, ಅವುಗಳಲ್ಲಿ ಯಾವುದು ನಮ್ಮನ್ನು ಬಿಂಬಿಸುವ ಸರಿ
ಯಾದ ಸೆಲ್ಫಿ ಎಂದು
ಎಷ್ಟಾದರೂ ಅವು ನಮ್ಮದೇ ಭಿನ್ನ ಪೋಸುಗಳು
ನಮಗೆ ನಾವು ಯಾವಾಗಲೂ ಚೆಂದ ಕಾಣುತ್ತೇವೆ
ನಮ್ಮ ಸೆಲ್ಫಿಗಳನ್ನು ನಾವು ನಾವೇ ಮೆಚ್ಚಿಕೊಳ್ಳುತ್ತೇವೆ
ಆದರೆ ಪ್ರಶ್ನೆಗಳು ಉಳಿಯುತ್ತವೆ ಕೊನೆಗೆ ಇಷ್ಟು ಸೆಲ್ಫಿಗಳಲ್ಲಿ
ಯಾವುದು ಚೆಂದ? , ಯಾವುದು ಅತಿಚೆಂದ ?
ಯಾವುದನ್ನು ಬೇರೆಯವರಿಗೆ ಕಳಿಸಲಿ?
ಯಾವುದನ್ನು ಡಿಲೀಟ್ ಮಾಡಲಿ?
ಯಾವುದನ್ನು ಸ್ಟೇಟಸ್ಗೆ ಹಾಕಲಿ?
🖋ವಿಜಯನರಸಿಂಹ
31/03/2022
ಈ ಸಂಚಿಕೆಯ ಪ್ರಕಟನೆಗೆ ಕಾಯುತ್ತಾ ಇದ್ದೆ: “ಇನ್ನೂ ಯಾಕ ಬಂದಿಲ್ಲವ್ವಾ ಅನಿವಾಸಿಯಾಕಿ?
ಶುಕ್ರವಾರಕ್ಕೊಮ್ಮೆ ತಪ್ಪದೆ ಹೊರಗ ಬರಾಕಿ?” ಅಂತ.
ಕೊನೆಗೂ ಈಗ ಸಂಪಾದಕಿ
ಬಂದು ತಂದರು, ಉಣಬಡಿಸಿದರು ಸಂಪದಾ ಪುರೋಹಿತಳ ಸುಶ್ರಾವ್ಯ ಸಂಗೀತ ರಸಾಯನದೊಂದಿಗೆ. ರಾಮನಮಿಯ ವಾರ ಮುಗಿಯುವದರೊಳಗೇನೇ ಬಂತು ಸಂಪಾದಕಿಯ ಕಲ್ಲು ಸಕ್ಕರೆಯೊಂದಿಗೆ!
ಸಂಪದಾಳ ಪ್ರತಿಭೆಗೆ ಮೆಚ್ಚಿದೆ. ಇನ್ನೂ ಕಲಿಕೆಯ ಪ್ರಾತಃಕಾಲದಲ್ಲಿರುವ ಅವರು ಸಂಪಾದಿಸುವದು ಬಹಳ ಇದೆ. ಗಾಯನದ ಎತ್ತರಕ್ಕೆತ್ತರ ಏರುವದರಲ್ಲಿ ಸಂಶಯವಿಲ್ಲ. ಅವರಿಗೆ ಅಭಿನಂದನೆಗಳು.
ಪೀಠಿಕೆಯ ಆದಿಯಲ್ಲಿ ಬರೆದ ರಾಜ- ಭಿಕ್ಷುಗಳ ಸಂಬಂಧ ಇನ್ನೊಂದು ಸಂಸ್ಕೃತದ ಚಾಟೋಕ್ತಿಯನ್ನು ನೆನಪಿಸಿತು: ಒಬ್ಬ ಲೋಕನಾಥ (=ಭಿಕ್ಷುಕ; ಯಾರಿಗೆ ಲೋಕವೇ ನಾಥನೋ) ರಾಜನಿಗೆ ಹೇಳುತ್ತಾನೆ: “ಅಹಂ ಚ ತ್ವಂ ಚ ರಾಜೇಂದ್ರ ಲೋಕನಾಥೌ ಉಭಾವಪಿ, ಬಹುವ್ರೀಹಿರಹಂ ರಾಜನ್ ಷಷ್ಠೀತತ್ಪುರುಷೋ ಭವಾನ್!” ನಾವಿಬ್ಬರೂ ಒಂದು ರೀತಿಯಲ್ಲಿ- ಬೇರೆ ಬೇರೆ ಅರ್ಥದಲ್ಲಿ – ಲೋಕನಾಥರೇ, ಅಲ್ಲವೇ? ಅಂತ!
ವಿಜಯನರಸಿಂಹ ಅವರ ಮುಕ್ತಪ್ರಾಸದ ‘ಸೆಲ್ಫಿ’ ಆಮುಕ್ತವಾಗಿದೆ ಈ ಚಂದದ ಕವನದಲ್ಲಿ, ಅದರಲ್ಲಿ ಸಂಶಯವೇಯಿಲ್ಲ, ಅಂತ ಕವಿತೆಯ ಕೊನೆಯಲ್ಲಿ ಅವರು ಕೇಳುವ ಪ್ರಶ್ನೆಗೆ ಉತ್ತರಕೊಡುತ್ತಿದ್ದೇನೆ. ಬುದ್ಧನಂತೆ ಚಿಂತನೆಯಲ್ಲಿ ತೊಡಗಿದ್ದಾರೆ, ಸೆಲ್ಫಿಯ ಬಗ್ಗೆ self reflection ದಲ್ಲಿ ತೊಡಗಿ! ಇದನ್ನು ಡಿಲೀಟ್ ಮಾಡದೆ ಕಳಿಸಿದ್ದಕ್ಕೆ ಧನ್ಯವಾದಗಳು.
ಇನ್ನು ಮುಖ್ಯ ಲೇಖನಕ್ಕೆ ಬರುವೆ. ನಾನೂ ಇತ್ತೀಚೆಗೆ ಶುರು ಮಾಡಿದ್ದರಿಂದ ಆಸ್ಥೆಯಿಂದ ಓದಿದೆ. ತಡವಾಗಿಯಾದರೂ ಯೋಗಾಭ್ಯಾಸ ಮಾಡಿ ಸಾಧಿಸಿದ ಸಂಧ್ಯಾ ಪುರೋಹಿತ ಅವರನ್ನು ಶ್ಲಾಘನೆ ಮಾಡದಿರಲಾರೆ. ಲಾಕ್ ಡೌನ್ ದ ಲಾಭ ಈ ವಿದ್ಯಾಭ್ಯಾಸಗಳು. ನಾನೂ ಯೋಗ ಮತ್ತು ಸಂಸ್ಕೃತದ ಕಲಿಕೆಯಲ್ಲಿ ತೊಡಗಿದ್ದೇನೆ. ಎರಡು ವರ್ಷ ಸತತವಾಗಿ ನಾನು ಸಹ ರಥಸಪ್ತಮಿಯಂದು 108 ಸೂರ್ಯನಮಸ್ಕಾರ ಈ ವಯಸಿನಲ್ಲಿ ಮಾಡಬಹುದು ಅಂತ ಕನಸುಮನಸ್ಸಿನಲ್ಲೂ ಎಣಿಸಿರಲಿಲ್ಲ. ಸಂಧ್ಯಾ ಅವರ ಕಲಿಕೆ- ಕಲಿಸುವಿಕೆ ಮುಂದುವರಿಯಲಿ. ನಾನೂ ಒಮ್ಮೆ ಅವರನ್ನು ಗುರುವಾಗಿ ಪಡೆಯುವ ಭಾಗ್ಯ ಒದಗಿ ಬರಲಿ! ಶ್ರೀವತ್ಸ ದೇಸಾಯಿ
ಗೌರಿಯವರಿಂದ ಇನ್ನೊಂದು ಉತ್ಕೃಷ್ಟ ಸಂಚಿಕೆ. ಮಹಾವೀರ ಅಂಬೇಡ್ಕರ್, ಪಾತಂಜಲಿಯರನ್ನು ಒಳಗೊಂಡ ಸಂಪಾದಕೀಯ ಸಂಕ್ಷಿಪ್ತ ಆದರೆ ಅಷ್ಟೇ ಗಾಢ.
ಸಂಧ್ಯಾ ಪುರೋಹಿತ ಅವರಿಗೆ ಸ್ವಾಗತ. ಯೋಗದ ಬಗ್ಗೆ ನಿಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡು ಯೋಗ ಮಾಡದ ನಮಗೆಲ್ಲ ಯೋಗಕ್ಕೆ ಇಳಿಯಲು ಕರೆಕೊಟ್ಟಂತಿದೆ.
ಸಂಪದಾ ಅವರ ರಾಮಭಜನೆ ಸುಂದರವಾಗಿ ಮೂಡಿಬಂದಿದೆ. ಅವರ ಸಂಗೀತ ಸಾಧನೆಯ ಹೊಳಹು ವ್ಯಕ್ತವಾಗಿದೆ.
ವಿಜಯನಾರಸಿಂಹ ಅವರ ಕವನ ಬರೆಯುವ ಲೇಟ್-ನವೋದಯದ ಶೈಲಿ ತುಂಬ ಇಷ್ಟವಾಗುತ್ತದೆ. ಕೆ ಎಸ್ ಎನ್ ಮತ್ತು ಜಿ ಎಸ್ ಅವರನ್ನು ಒಟ್ಟಿಗೇ ನೆನಪಿಸುತ್ತಾರೆ.
– ಕೇಶವ
LikeLike
ಈ ಸಂಚಿಕೆಯ ಪ್ರಕಟನೆಗೆ ಕಾಯುತ್ತಾ ಇದ್ದೆ: “ಇನ್ನೂ ಯಾಕ ಬಂದಿಲ್ಲವ್ವಾ ಅನಿವಾಸಿಯಾಕಿ?
ಶುಕ್ರವಾರಕ್ಕೊಮ್ಮೆ ತಪ್ಪದೆ ಹೊರಗ ಬರಾಕಿ?” ಅಂತ.
ಕೊನೆಗೂ ಈಗ ಸಂಪಾದಕಿ
ಬಂದು ತಂದರು, ಉಣಬಡಿಸಿದರು ಸಂಪದಾ ಪುರೋಹಿತಳ ಸುಶ್ರಾವ್ಯ ಸಂಗೀತ ರಸಾಯನದೊಂದಿಗೆ. ರಾಮನಮಿಯ ವಾರ ಮುಗಿಯುವದರೊಳಗೇನೇ ಬಂತು ಸಂಪಾದಕಿಯ ಕಲ್ಲು ಸಕ್ಕರೆಯೊಂದಿಗೆ!
ಸಂಪದಾಳ ಪ್ರತಿಭೆಗೆ ಮೆಚ್ಚಿದೆ. ಇನ್ನೂ ಕಲಿಕೆಯ ಪ್ರಾತಃಕಾಲದಲ್ಲಿರುವ ಅವರು ಸಂಪಾದಿಸುವದು ಬಹಳ ಇದೆ. ಗಾಯನದ ಎತ್ತರಕ್ಕೆತ್ತರ ಏರುವದರಲ್ಲಿ ಸಂಶಯವಿಲ್ಲ. ಅವರಿಗೆ ಅಭಿನಂದನೆಗಳು.
ಪೀಠಿಕೆಯ ಆದಿಯಲ್ಲಿ ಬರೆದ ರಾಜ- ಭಿಕ್ಷುಗಳ ಸಂಬಂಧ ಇನ್ನೊಂದು ಸಂಸ್ಕೃತದ ಚಾಟೋಕ್ತಿಯನ್ನು ನೆನಪಿಸಿತು: ಒಬ್ಬ ಲೋಕನಾಥ (=ಭಿಕ್ಷುಕ; ಯಾರಿಗೆ ಲೋಕವೇ ನಾಥನೋ) ರಾಜನಿಗೆ ಹೇಳುತ್ತಾನೆ: “ಅಹಂ ಚ ತ್ವಂ ಚ ರಾಜೇಂದ್ರ ಲೋಕನಾಥೌ ಉಭಾವಪಿ, ಬಹುವ್ರೀಹಿರಹಂ ರಾಜನ್ ಷಷ್ಠೀತತ್ಪುರುಷೋ ಭವಾನ್!” ನಾವಿಬ್ಬರೂ ಒಂದು ರೀತಿಯಲ್ಲಿ- ಬೇರೆ ಬೇರೆ ಅರ್ಥದಲ್ಲಿ – ಲೋಕನಾಥರೇ, ಅಲ್ಲವೇ? ಅಂತ!
ವಿಜಯನರಸಿಂಹ ಅವರ ಮುಕ್ತಪ್ರಾಸದ ‘ಸೆಲ್ಫಿ’ ಆಮುಕ್ತವಾಗಿದೆ ಈ ಚಂದದ ಕವನದಲ್ಲಿ, ಅದರಲ್ಲಿ ಸಂಶಯವೇಯಿಲ್ಲ, ಅಂತ ಕವಿತೆಯ ಕೊನೆಯಲ್ಲಿ ಅವರು ಕೇಳುವ ಪ್ರಶ್ನೆಗೆ ಉತ್ತರಕೊಡುತ್ತಿದ್ದೇನೆ. ಬುದ್ಧನಂತೆ ಚಿಂತನೆಯಲ್ಲಿ ತೊಡಗಿದ್ದಾರೆ, ಸೆಲ್ಫಿಯ ಬಗ್ಗೆ self reflection ದಲ್ಲಿ ತೊಡಗಿ! ಇದನ್ನು ಡಿಲೀಟ್ ಮಾಡದೆ ಕಳಿಸಿದ್ದಕ್ಕೆ ಧನ್ಯವಾದಗಳು.
ಇನ್ನು ಮುಖ್ಯ ಲೇಖನಕ್ಕೆ ಬರುವೆ. ನಾನೂ ಇತ್ತೀಚೆಗೆ ಶುರು ಮಾಡಿದ್ದರಿಂದ ಆಸ್ಥೆಯಿಂದ ಓದಿದೆ. ತಡವಾಗಿಯಾದರೂ ಯೋಗಾಭ್ಯಾಸ ಮಾಡಿ ಸಾಧಿಸಿದ ಸಂಧ್ಯಾ ಪುರೋಹಿತ ಅವರನ್ನು ಶ್ಲಾಘನೆ ಮಾಡದಿರಲಾರೆ. ಲಾಕ್ ಡೌನ್ ದ ಲಾಭ ಈ ವಿದ್ಯಾಭ್ಯಾಸಗಳು. ನಾನೂ ಯೋಗ ಮತ್ತು ಸಂಸ್ಕೃತದ ಕಲಿಕೆಯಲ್ಲಿ ತೊಡಗಿದ್ದೇನೆ. ಎರಡು ವರ್ಷ ಸತತವಾಗಿ ನಾನು ಸಹ ರಥಸಪ್ತಮಿಯಂದು 108 ಸೂರ್ಯನಮಸ್ಕಾರ ಈ ವಯಸಿನಲ್ಲಿ ಮಾಡಬಹುದು ಅಂತ ಕನಸುಮನಸ್ಸಿನಲ್ಲೂ ಎಣಿಸಿರಲಿಲ್ಲ. ಸಂಧ್ಯಾ ಅವರ ಕಲಿಕೆ- ಕಲಿಸುವಿಕೆ ಮುಂದುವರಿಯಲಿ. ನಾನೂ ಒಮ್ಮೆ ಅವರನ್ನು ಗುರುವಾಗಿ ಪಡೆಯುವ ಭಾಗ್ಯ ಒದಗಿ ಬರಲಿ! ಶ್ರೀವತ್ಸ ದೇಸಾಯಿ
LikeLike