ರಾಮಾಯಣದಲ್ಲಿ ಬರುವ ಒಂದು ಶ್ಲೋಕ:
”ಶನೈರ್ಯಂತಿ ಪಿಪೀಲಿಕಾ ಯೋಜನಾನಿ ಶತಾನಪಿ
ಅಗಛ್ಚನ್ ವೈನತೇಯೋಪಿ ಪದಂ ಏಕ ನ ಗಛ್ಚತಿ”
ಎಂದು ಹೇಳುತ್ತದೆ. ಸಂದರ್ಭ ನನಗೆ ನೆನಪಿಲ್ಲ. ಆದರೆ ಇದರ ಅರ್ಥ ಜೀವನದ ಎಲ್ಲಾ ಸಮಯ -ಸಂದರ್ಭಕ್ಕೂ, ಕಾರ್ಯ ಕಲಾಪಗಳಿಗೂ ಅನ್ವಯವಾಗುತ್ತದೆ. ಇದರ ಅರ್ಥ ಇಷ್ಟೇ “ ಕಾರ್ಯ ಸಾಧನೆಗೆ ತೊಡಗುವ ಮನಸ್ಸುಳ್ಳು ಇರುವೆಯು, ನೂರು ಯೋಜನ ದೂರವನ್ನು ಕ್ರಮಿಸಬಲ್ಲುದಾದರೆ,ಇಚ್ಚಾಶಕ್ತಿ ಇರದ ಶಕ್ತಿಶಾಲಿ ಗರುಡ,ಒಂದೇ ಒಂದು ಹೆಜ್ಜೆಯನ್ನೂ ಕ್ರಮಿಸಲಾರದು” ಎಂಬುದೇ ಆಗಿದೆ.
ನಮ್ಮ ಸಾಮರ್ಥ್ಯ ಏನೇ ಇದ್ದರೂ ,ಕಾರ್ಯ ತತ್ಪರತೆ ಇರದಿದ್ದಲ್ಲಿ, ಗುರಿಮುಟ್ಟುವುದು ಅಸಾಧ್ಯ. ಈ ನಿಟ್ಟಿನಲ್ಲಿ, ನಮ್ಮ ಕೆಲಸವನ್ನು ಅವಲೋಕಿಸಿಕೊಂಡು ಮುಂದಿನ ಹಾದಿಯನ್ನು, ನಡೆಯನ್ನು ನಿರ್ಧರಿಸಲು ಅನುವಾಗುವ ಮೊದಲ ಹೆಜ್ಜೆ ಈ ಲೇಖನ ಮಾಲೆ. ಓದಿ, ನಿಮ್ಮ ಅನಿಸಿಕೆ ತಿಳಿಸಿ.
ಅನಿವಾಸಿಗೆ ಒಂದು ವರ್ಷ! ಅವಲೋಕನ – ಡಾ.ರಾಜಾರಾಮ ಕಾವಳೆ, ಡಾ. ಶ್ರೀವತ್ಸ ದೇಸಾಯಿ