ಹೀಗೂ ಒಬ್ಬ ರಾಜಕುಮಾರ- ಡಾ.ಜಿ.ಎಸ್.ಶಿವಪ್ರಸಾದ್ ಅವರ ರಚನೆ

ಮನಸೆಂಬ ಮಾಯಾವಿಗೆ ಕೊಟ್ಟ ಮಾತು ತಪ್ಪಲಾಗದ ಅನಿವಾರ್ಯತೆಯಿಂದಲೂ, ಬದುಕುವ ಛಲದಿಂದಲೂ,ಕಛೇರಿಗೆ ಕಾಲನ್ನೋ ಕಾರನ್ನೋ ಎಳೆದುಕೊಂಡು ಹೋಗಿ, ದಿನವೆಲ್ಲಾ ದುಡಿದು ಚಿಂತೆ ಆತಂಕ,ಆಯಾಸಗಳು ಮೇಳೈಸಿರುವ ಬೇಸರವೆಂಬ ಬೇತಾಳವನ್ನು ಬೆನ್ನಿಗೇರಿಸಿಕೊಂಡು ಮರಳಿ ಮನೆಗೆ ಬಂದಿರುವ ಆಧುನಿಕ ಯುಗದ ವಿಕ್ರಮಾದಿತ್ಯರಾದ ನಿಮ್ಮೆಲ್ಲರಿಗೆ ನಿಮ್ಮ ಬೇಸರ ಕಳೆಯುವಂಥ ಕವಿತೆ ಹೇಳುತ್ತೇನೆ ಕೇಳಿ. ಜಿ.ಎಸ್.ಶಿವಪ್ರಸಾದರು ಬರೆದ ಈ ಕವಿತೆಯನ್ನು ಓದುತ್ತಾ ಸಾಗಿದರೆ , ಭಾಷೆಯ ಸೌಂದರ್ಯದಿಂದಲೂ, ವಿಷಯ ಲಾಲಿತ್ಯದಿಂದಲೂ ಇದ್ದೂ ಇರದಂತೆ ಸುಪ್ತವಾಗಿರುವ ವಿಡಂಬನೆಯಿಂದಲೂ ಖಂಡಿತವಾಗಿಯೂ ನಿಮ್ಮ ಆಯಾಸ ಪರಿಹಾರವಾಗುತ್ತದೆ. ಪದ್ಯವನ್ನು ಓದಿ ಮುಗಿಸಿದಾಗ ಅದು … Continue reading ಹೀಗೂ ಒಬ್ಬ ರಾಜಕುಮಾರ- ಡಾ.ಜಿ.ಎಸ್.ಶಿವಪ್ರಸಾದ್ ಅವರ ರಚನೆ