ಊರ ಮಳೆ,ಮತ್ತದರ ಸುತ್ತ – ಅಮಿತ ರವಿಕಿರಣ್

 ಹೊಸ ಪರಿಚಯಅಮಿತ ರವಿಕಿರಣ್

ಅಮಿತ  ಮತ್ತು ಕುಟುಂಬ

ಉತ್ತರ  ಐರ್ಲ್ಯಾಂಡಿನ  ಬೆಲ್ ಫಾಸ್ಟ್ ನಲ್ಲಿ ನೆಲೆಸಿರುವ  ಶ್ರೀಮತಿ ಅಮಿತ ರವಿಕಿರಣ್ ಹುಟ್ಟಿ ಬೆಳದಿದ್ದು ಉತ್ತರ ಕನ್ನಡದ ಮುಂಡಗೋಡದಲ್ಲಿ. ಬೆಳೆದಿದ್ದು ಉಡುಪಿಯ ಸಾಲಿಗ್ರಾಮದಲ್ಲಿ. ಹಿಂದುಸ್ತಾನಿ ಸಂಗೀತದಲ್ಲಿ ಪದವಿ ಮತ್ತು ಜಾನಪದ ಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು ಅವರ ಮತ್ತೊಂದು ತವರಾದ ಧಾರವಾಡದಲ್ಲಿ! ಹಾಡುವುದು ರಂಗೋಲಿ,ಮೆಹೆಂದಿ ವರ್ಲಿ,ಹಸೆ ಯಂಥ ಜನಪದ ಕಲೆಗಳು  ಇವರ ಆತ್ಮೀಯ ಸ್ನೇಹಿತರು.ಇವೆಲ್ಲ ಭಾರವಲ್ಲದ ಆದರೆ ಅವರು ಹೋದಲ್ಲೆಲ್ಲ ಜೊತೆಯಾಗುವ ಲಗ್ಗೇಜುಗಳು ಎನ್ನುತ್ತಾರೆ ಅಮಿತಾ! ಅಪ್ರತಿಮ ಹಾಡುಗಾರ್ತಿಯಾದ ಅಮಿತ ಹಲವು ಗಝಲ್ , ಹಿಂದೂಸ್ತಾನ ಸಂಗೀತ ಮತ್ತು ಭಾವಗೀತೆಗಳ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಕರ್ನಾಟಕದ ಜನಪ್ರಿಯ ಸಂಗೀತ ಕಾರ್ಯಕ್ರಮವಾದ ‘ಸರಿಗಮಪ’ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಇವರ ಪ್ರತಿಭೆಯನ್ನು ನೋಡಿದ ಪ್ರಸಿದ್ದ  ಹಿರಿಯ ಕಲಾವಿದೆ ಬಿ. ಜಯಶ್ರೀ ಯವರು ಅಮಿತಾರಿಗೆ ಇಪ್ಪತ್ತು ಸಾವಿರ ರೂಪಾಯಿಗೂ ಹೆಚ್ಚಿನ ನಗದು ಬಹುಮಾನ ಕಳಿಸಿ ಮೆಚ್ಚಿಗೆ ,ಅಭಿಮಾನ ವ್ಯಕ್ತಪಡಿಸಿದ್ದು ಅವರ ಹಾಡುಗಾರಿಕೆಗೆ ಸಾಕ್ಷಿ!

ಬರವಣಿಗೆ ನನಗೆ ಇಷ್ಟ ಯಾಕಂದ್ರೆ, ಬರೆದಷ್ಟು ನಾ ಹಗುರ ವಾಗುತ್ತೇನೆ, ಓದುದಿದಷ್ಟು ಉಲ್ಲಸಿತಳಗುತ್ತೇನೆ ಎನ್ನುವ ಇವರು ತಮ್ಮ ಬರವಣಿಗೆಗಳನ್ನೆಲ್ಲ ಸೇರಿಸಿ  http://bhavanaloka.blogspot.co.uk   ಎನ್ನುವ ಬ್ಲಾಗ್ ನ್ನು ಹೊಂದಿದ್ದಾರೆ. ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ .ಅಡುಗೆಯ ಕಲೆಯಲ್ಲಿ ಆಸಕ್ತಿ ಇರುವ ಇವರದ್ದೊಂದು ಫುಡ್ ಬ್ಲಾಗ್  ಕೂಡ ಇದೆ –http:// tastytwist4all.blogspot.com ತಮ್ಮ ಕಲೆಗಳಿಂದಾಗಿ  ಉತ್ತರ  ಐರ್ಲ್ಯಾಂಡಿನ ಫೆಲ್ಲೋಶಿಪ್ ಗಳಿಸಿದ್ದಾರೆ. ಭಾರತೀಯ ಕಲೆಗಳನ್ನು  ಉತ್ತರ  ಐರ್ಲ್ಯಾಂಡಿ ಹರಡುತ್ತಿರುವ ಇವರದು ಹುಮ್ಮಸ್ಸಿನ ಬದುಕು!!-ಸಂ

Read More »

ಮುಸಲ ಧಾರೆ – ರಾಮಶರಣ್ ಅವರ ಕವನ

ಮುಸಲ ಧಾರೆ

ಮಳೆ, ಸಂಜೆ, ಉಷಾ ಕಾಲ, ಮೋಡಗಳು, ಇತ್ಯಾದಿಯಾದ  ಪ್ರಕೃತಿಯ ವಿವಿಧ ಅವತಾರಗಳು ಕವಿ ಮನಗಳನ್ನು ಪ್ರಚೋದಿಸದೆ ಬಿಟ್ಟಿಲ್ಲ. ಅದರಲ್ಲೂ ಜೀವ ಆಧಾರಕವಾದ ಮಳೆ ಬಂದಾಗ ಇಳೆಗೊಂದು ಹೊಸ ಸ್ವರೂಪವೇ ಬಂದುಬಿಡುತ್ತದೆ. ಈ ಬಾಹ್ಯ ಬದಲಾವಣೆಯ ಜೊತೆ ಜೊತೆಯಲ್ಲಿ ಅಂತರಿಕವಾಗಿ ಮಳೆ ಮುದ ಕೊಡುವುದರ ಜೊತೆಗೆ ವಿವಿಧರೀತಿಯ ಭಾವನಾತರಂಗಗಳನ್ನು ಬಡಿದೆಬ್ಬಿಸುವುದು ಅಶಕ್ಯವೇನಲ್ಲ; ಹಾಗಾದರೆ ಅದು ಎಂಥ ಭಾವನೆಗಳನ್ನು ಬಡಿಬ್ಬಿಸಬಹುದು?
”ಯದ್ಭಾವಂ ತದ್ಭವತಿ ” ಮನದ ಭಾವ ಇರುವಂತೆ ಭಾವನೆಗಳೂ ಸಹ!
ಇಂತಹ ಒಂದು ಸುಂದರ ಕವನ ಇಲ್ಲಿದೆ, . ಓದಿ ನೋಡಿ, ನಿಮ್ಮ ಭಾವನೆಗಳು ಏನು ಎಂದು ನಮಗೂ ತಿಳಿಸಿ.
Ram_20150327_114957~2
ರಾಮಶರಣ್  ಅವರು ನಮ್ಮ ಜಾಲಜಗುಲಿಯ ಕನಸನ್ನು ಸಾಕಾರಗೊಳಿಸುವ ಪಾತ್ರವಹಿಸಿದ ಸದಸ್ಯರಲ್ಲಿ  ಒಬ್ಬರು. ಭಾರತದಲ್ಲಿ ಪ್ರಾಥಮಿಕ ವೈದ್ಯಕೀಯ ತರಬೇತಿ ಪಡೆದು ಈಗ ಇಂಗ್ಲೆಂಡಿನ ಡಾರ್ಬಿಷೈರ್ ನಲ್ಲಿ, ಮೂಳೆ , ಕೀಲು, ಸ್ನಾಯು ಸಂಬಂಧಿ ಖಾಯಿಲೆಗಳ (Rheumatologist) ತಜ್ಞರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಸಾಹಿತ್ಯಿಕವಾಗಿ ಶ್ರಿಮಂತವಾದ ಕುಟುಂಬದಲ್ಲಿ ಜನಿಸಿ, ಅದೇ ರೀತಿಯ ಕುಟುಂಬದಿಂದ ಪತ್ನಿಯನ್ನೂ  ಪಡೆದು, ತಾವಿರುವಲ್ಲಿಯೇ ಕನ್ನಡದ ಕಂಪನ್ನು ಯುವಪೀಳಿಗೆಯಲ್ಲಿ ಹರಡುತ್ತಿರುವ ಕೃಷಿಕ.
ಕನ್ನಡದ ಬಗ್ಗೆ ತಮಗಿರುವ ಕಾಳಜಿಯನ್ನು ಯಾವ ಅಬ್ಬರ-ಆರ್ಭಟಗಳಿಲ್ಲದೆ, ಶಾಂತವಾಗಿ ಮಾಡಿಕೊಂಡು ಸಾಗುವುದು ಇವರ ವ್ಯಕ್ತಿತ್ವ. ಮಾತು ನಡತೆಗಳು ಸಹ ಮೃದು. ನೀವು ಕರ್ನಾಟಕದ ‘ಶಾಲ್ಮಲಿ’ ಎಂಬ ಸುಂದರ ನದಿಯ ಹರಿವನ್ನು ನೋಡಿದ್ದರೆ, ರಾಮಶರಣ  ಅವರ  ವ್ಯಕ್ತಿತ್ವದ ಪ್ರತಿಮೆ ನಿಮ್ಮ ಮನದಲ್ಲಿ ಮೂಡಬಹುದೇನೋ.

ಮುಸಲ ಧಾರೆ

 
ಹೊಳೆ ಹೊಳೆವ, ಆಕರ್ಷಕ ಕೊಳ

ಎಲ್ಲಿಂದಲೋ ಬೀಸಿ ಬಂತಂದು ಮಾಳ

ತಂತು ಕಾರ್ಮೋಡದಿ ಹುದುಗಿದ್ದ ವರ್ಷಾ ಜಾಲ.

 lake-water-surface-rain-02ಹನಿ ಹನಿಯಾಯ್ತು ಮುಸಲ ಧಾರೆ

ಹನಿಯಲ್ಲ; ಚಿತ್ತ ಕ್ಷೊಭೆ, ನಾ ತಾಳಲಾರೆ

 

ತಳದಲ್ಲಿ ಹಣಿ ನಿಂತ ಕಸ-ಮೃತ್ತಿಕೆ

ಮೇಲೆದ್ದು ಇರಿಯಿತು ಖಡ್ಗವ ಮನಕೆ

ಬೇಡೆನಗೆ ಈ ಚಿತ್ರಹಿಂಸೆ, ಮಳೆಗಿಲ್ಲ ಇದಾವುದರ ಚಿಂತೆ

 

lake-water-surface-rain-07

ಕೊಡೆಯಿಲ್ಲೆಂಬ ಪರಿವಿಲ್ಲದೆ ಹೊಡೆಯುತಿದೆ ಭರ್ತಿ

ಹೋಗಿನ್ನು ಬರಬೇಡವೆನಲೂ ಎನಗಿಲ್ಲ ಶಕುತಿ

ಬರಗಾಲ ಬಂದೆಲ್ಲ ಬರಡಾದರೆಂಬ ಭೀತಿ

ಡೋಲಾಯಮಾನ ಮನ, ಕಣ್ಬರದು ಮುಂದಿನ ದಿನ

ಬೆಂಕಿಯಲಿ ಬೆಂದು, ಪ್ರಹಾರಗಳ ತಿಂದು ಅಭರಣವಾದಂತೆ ಚಿನ್ನ

ಕಂಡೀತು ಕಾರ್ಮೋಡದಂಚಿನಲಿ ನೇಸರನ ಬಣ್ಣ

rainbow_over_the_lake-1534723