ಹೊಸ ಪರಿಚಯ–ಅಮಿತ ರವಿಕಿರಣ್

ಉತ್ತರ ಐರ್ಲ್ಯಾಂಡಿನ ಬೆಲ್ ಫಾಸ್ಟ್ ನಲ್ಲಿ ನೆಲೆಸಿರುವ ಶ್ರೀಮತಿ ಅಮಿತ ರವಿಕಿರಣ್ ಹುಟ್ಟಿ ಬೆಳದಿದ್ದು ಉತ್ತರ ಕನ್ನಡದ ಮುಂಡಗೋಡದಲ್ಲಿ. ಬೆಳೆದಿದ್ದು ಉಡುಪಿಯ ಸಾಲಿಗ್ರಾಮದಲ್ಲಿ. ಹಿಂದುಸ್ತಾನಿ ಸಂಗೀತದಲ್ಲಿ ಪದವಿ ಮತ್ತು ಜಾನಪದ ಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು ಅವರ ಮತ್ತೊಂದು ತವರಾದ ಧಾರವಾಡದಲ್ಲಿ! ಹಾಡುವುದು ರಂಗೋಲಿ,ಮೆಹೆಂದಿ ವರ್ಲಿ,ಹಸೆ ಯಂಥ ಜನಪದ ಕಲೆಗಳು ಇವರ ಆತ್ಮೀಯ ಸ್ನೇಹಿತರು.ಇವೆಲ್ಲ ಭಾರವಲ್ಲದ ಆದರೆ ಅವರು ಹೋದಲ್ಲೆಲ್ಲ ಜೊತೆಯಾಗುವ ಲಗ್ಗೇಜುಗಳು ಎನ್ನುತ್ತಾರೆ ಅಮಿತಾ! ಅಪ್ರತಿಮ ಹಾಡುಗಾರ್ತಿಯಾದ ಅಮಿತ ಹಲವು ಗಝಲ್ , ಹಿಂದೂಸ್ತಾನ ಸಂಗೀತ ಮತ್ತು ಭಾವಗೀತೆಗಳ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಕರ್ನಾಟಕದ ಜನಪ್ರಿಯ ಸಂಗೀತ ಕಾರ್ಯಕ್ರಮವಾದ ‘ಸರಿಗಮಪ’ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಇವರ ಪ್ರತಿಭೆಯನ್ನು ನೋಡಿದ ಪ್ರಸಿದ್ದ ಹಿರಿಯ ಕಲಾವಿದೆ ಬಿ. ಜಯಶ್ರೀ ಯವರು ಅಮಿತಾರಿಗೆ ಇಪ್ಪತ್ತು ಸಾವಿರ ರೂಪಾಯಿಗೂ ಹೆಚ್ಚಿನ ನಗದು ಬಹುಮಾನ ಕಳಿಸಿ ಮೆಚ್ಚಿಗೆ ,ಅಭಿಮಾನ ವ್ಯಕ್ತಪಡಿಸಿದ್ದು ಅವರ ಹಾಡುಗಾರಿಕೆಗೆ ಸಾಕ್ಷಿ!
ಬರವಣಿಗೆ ನನಗೆ ಇಷ್ಟ ಯಾಕಂದ್ರೆ, ಬರೆದಷ್ಟು ನಾ ಹಗುರ ವಾಗುತ್ತೇನೆ, ಓದುದಿದಷ್ಟು ಉಲ್ಲಸಿತಳಗುತ್ತೇನೆ ಎನ್ನುವ ಇವರು ತಮ್ಮ ಬರವಣಿಗೆಗಳನ್ನೆಲ್ಲ ಸೇರಿಸಿ http://bhavanaloka.blogspot.co.uk ಎನ್ನುವ ಬ್ಲಾಗ್ ನ್ನು ಹೊಂದಿದ್ದಾರೆ. ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ .ಅಡುಗೆಯ ಕಲೆಯಲ್ಲಿ ಆಸಕ್ತಿ ಇರುವ ಇವರದ್ದೊಂದು ಫುಡ್ ಬ್ಲಾಗ್ ಕೂಡ ಇದೆ –http:// tastytwist4all.blogspot.com ತಮ್ಮ ಕಲೆಗಳಿಂದಾಗಿ ಉತ್ತರ ಐರ್ಲ್ಯಾಂಡಿನ ಫೆಲ್ಲೋಶಿಪ್ ಗಳಿಸಿದ್ದಾರೆ. ಭಾರತೀಯ ಕಲೆಗಳನ್ನು ಉತ್ತರ ಐರ್ಲ್ಯಾಂಡಿ ಹರಡುತ್ತಿರುವ ಇವರದು ಹುಮ್ಮಸ್ಸಿನ ಬದುಕು!!-ಸಂ