ವನ್ಯ ಜೀವಿಗಳ ಜಾಡುಹಿಡಿದು- ಕರ್ನಾಟಕದ ವನಜೀವ ಜಾಲದ ತೌಲನಿಕ ಅವಲೋಕನ.
ಲೇಖಕರು: ಶ್ರೀಯುತ ಸಂಜಯ್ ಗುಬ್ಬಿ
“ಜಯ ಸುಂದರ ನದಿವನಗಳ ನಾಡೆ” – ಕುವೆಂಪು
”ಬೆಳುವಲ ಮಲೆ-ಕರೆ ಸುಂದರ ಸೃಷ್ಟಿ”- ಚನ್ನವೀರ ಕಣವಿ
”ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ”- ನಿಸಾರ್ ಅಹ್ಮದ್
”ಚಿಮ್ಮುತ ಓಡಿವೆ ಜಿಂಕೆಗಳು-ಕುಣಿದಾಡುತ ನಲಿದಿವೆ ನವಿಲುಗಳು” ಗಂಧದ ಗುಡಿ
“ಹಸಿರೊಡೆದು ಉಸಿರಾಡಿ ನಗುತಿರುವ ನೆಲದಲ್ಲಿ ಕಾವೇರಿ ಮೈದೋರಿ ನಲಿದಿರುವಳು”- ಮಾಗಿಯ ಕನಸು
“ಮುಗಿಲೇರಿ ಮುತ್ತಿಡುವ ಆಗಸದ ಆಚೆಗೆ ಗಿರಿ ಸಾಲು ತಾನಾಗಿ ಮೆರೆದಾಡಿದೆ
ಚೆಲುವಿನ ರಾಶಿಯ ಗೆಲುವನೂ ಕಾಣಲು ಮಲೆನಾಡ ಮೈಸಿರಿಯು ನೆಲೆ ನಿಂತಿದೆ ..ಎಲ್ಲೆಲ್ಲೂ ನೀನೆ”- ಮಾಗಿಯ ಕನಸು
ಈ ಹಾಡುಗಳನ್ನು, ಕವಿತೆಯ ಸಾಲುಗಳನ್ನು ನಾವು ಓದಿ ಕೇಳಿ, ಸ್ವಲ್ಪ ಮಟ್ಟಿಗೆ ನೋಡಿ ಬಲ್ಲೆವು. ಈ ಸೌಂದರ್ಯದ ಒಳಗಿನ ನಿಜ ಆಳ ಅಗಲಗಳನ್ನು, ಅದರ ಸಂರಕ್ಷಣೆಗೆ ಇರುವ ಸವಾಲುಗಳನ್ನು, ತನು ಮನಗಳನ್ನು ಧಾರೆಯೆರೆದು ಇವುಗಳನ್ನು ಕಾಯಲು ನಡೆಯುತ್ತಿರುವ ತೆರೆಮರೆಯ ಪ್ರಯತ್ನಗಳನ್ನೂ ಸ್ವಂತ ಅನುಭವಗಳ ಮೂಲಕ, ದೃಷ್ಟಾಂತಗಳ ಮೂಲಕ ಉತ್ತಮ ಛಾಯಾಚಿತ್ರಗಳ ಮೂಲಕ ನಮ್ಮ ಮುಂದೆ ಅನಾವರಣಗೊಳಿಸುತ್ತಾ ಸ್ವಾರಸ್ಯಕರ ಭಾಷೆಯ ಲಹರಿಯಲ್ಲಿ ಓದಿಸಿಕೊಂಡು ಹೋಗುವ ಈ ಪುಸ್ತಕ ಅಕಸ್ಮಾತಾಗಿ ನನಗೆ ಸಿಕ್ಕಿದ್ದು ನಿಮಗೆ ಅದರ ಪರಿಚಯ ಮಾಡಿಸಲು ಈ ಲೇಖನ.