ಬ್ರಿಟ್-ಕನ್ನಡಿಗರ ಕವನಗಳು: ತುಂಗೆ-ಟೆಮ್ಸ್ ನದಿಗಳ ನಡು ಸೇತುವೆ

ಕನ್ನಡದಿಂದ ಇಂಗ್ಲಿಷ್ ಗೆ ಭಾವಾನುವಾದ ಮಾಡಿದರು. ಇಂಗ್ಲಿಷ್ ನಿಂದ ಕನ್ನಡಕ್ಕೆ ದಾಟಿಸಿದರು. ಧಾರೆ ಎರೆದರು. ಜೀವ ಕೊಟ್ಟರು, ತಮ್ಮ ಖಾಸಗಿ ಅನುಭವಗಳಿಗೆ, ಕ್ಷಣಗಳಿಗೆ, ಭಾವನೆಗಳಿಗೆ. ಮೆಚ್ಚಿದರು, ಯಾವುದೋ ದೇಶ ಭಾಷೆ ಸಂಸ್ಕೃತಿಗೆ ಸೇರಿದ ಕವನವನ್ನು, ಅದಕ್ಕೂ ಕನ್ನಡದ ಕಂಪನ್ನ ಹೊದಿಸಿದರು. ಕನ್ನಡದ ಮನಸ್ಸಿನಿಂದ ಹೊಮ್ಮಿದ ಕವನಗಳು ಇಂಗ್ಲಿಷ್ ನಲ್ಲಿ, ಇಂಗ್ಲೆಂಡಿನ ನೆಲದ ಮೇಲೆ ನೆಲೆ ನಿಂತವು. ಆ ದಿನ ನವೆಂಬರ್ ೫, ೨೦೧೬. ಸ್ಥಳ: ಡಾರ್ಬಿ. ಕಾರ್ಯಕ್ರಮ: ಅನಿವಾಸಿ ನಡೆಸಿದ  ‘ಈಸ್ಟ್ ಮೀಟ್ಸ್ ವೆಸ್ಟ್’ – ಕನ್ನಡ-ಇಂಗ್ಲಿಷ್ ಕವನಗಳ ಸುಮಧುರ ಮುಖಾಮುಖಿ. ಎರಡು ಭಿನ್ನ ಭಾಷಾ-ಸಾಂಸ್ಕೃತಿಕ ನೆಲೆಗಳ ನಡುಕ್ಷೇತ್ರ. ಬನ್ನಿ, ಆ ಕವನಗಳನ್ನು ಓದೋಣ. -ಸಂ.

daffodil-quest
ರೇಖಾ ಚಿತ್ರ: ಲಕ್ಷ್ಮೀನಾರಾಯಣ ಗುಡೂರ

 

ಜಿ. ಶಿವ ಪ್ರಸಾದ್ ರ  ಕವನಗಳು

 

ಎನ್ನ ಕೈ ಬಿಡು ತಾಯೆ

 ನಿನ್ನ ಮಮತೆಯ ಬಿಗು ಮುಷ್ಟಿ

ಸಡಿಲಗೊಳಿಸು ತಾಯೆ

ದೂಡು ಗೂಡಿನಾಚೆಗೆ ಎನ್ನ

ಛಲ ಬಲದಿಂದ ಸಿದ್ಧಳಿರುವ ನನ್ನ

 

 

ಅಂಜದಿರು ಓ ತಾಯೇ

ಹಾರಲು ಕಲಿತಿರುವೆ,

ಇರಲಿ ಆಗಸದೆತ್ತರ

ಈಜಲು ಕಲಿತಿರುವೆ

ಇರಲಿ ಅಳದಾಳದ ಸಾಗರ

 

 

ನನ್ನ ಬಾಳು ನನ್ನದೆಂಬ ಅರಿವಾಗಿ

ನಡೆಯುವೆನು ನಾನಾಗಿ

ರೂಪು ಗೊಳಲ್ಲಿ ನನ್ನ ವ್ಯಕ್ತಿತ್ವ

ನನ್ನದೇ ಬೀಜಗಳ ಬಿತ್ತಿ ಬೆಳಸಿ

ಎಲ್ಲರಿಗು ತೋರುವೆ ನನ್ನ ಅಸ್ತಿತ್ವ

 

 

ನಿನ್ನ ಬಳಿಗೆಂದು ಬರುವೆ ಮತ್ತೆ ಮತ್ತೆ

ಸಾಗರ ದಂಚಿನಲಿ ನಿರ್ಗಮಿಸುವ

ತೆರೆ ಮರಳುವಂತೆ

ಚೈತ್ರದ ಚಿಗುರು

ಹೂಗಳು ಮೂಡುವಂತೆ

 

 

ಇರಬಹುದು ನನ್ನಲ್ಲಿ ಧೈರ್ಯ ಸ್ಥೈರ್ಯ

ನನ್ನ ಅರಿವಿನ ಆಚೆಯಲಿ

ಮೂಡುವ ಸಂಕಷ್ಟಗಳ ಸುಳಿಯಿಂದ

ಕೈ ಹಿಡಿದೆತ್ತಿ ಸಲಹು ತಾಯಿ

 

 

ಹಾತೊರೆದು

ಮರಳಿ ಬರುವೆನು ತಾಯೆ

ನಿನ್ನ ಪ್ರೀತಿ ವಾತ್ಸಲ್ಯ ಕರೆಗೆ

ನಮ್ಮ ಹೆಮ್ಮೆಯ ಬೀಡಿಗೆ

ನಿನ್ನ ಸಂತೃಪ್ತ ಎದೆಯ ಗೂಡಿಗೆ

 

ಜಿ. ಶಿವ ಪ್ರಸಾದ್

 

 

 

 

 

 

 

Let go, Mother Let go

Let go, mother, let go

Loosen that tender grip

Let me out of the nest

For I am ready

With determination and zest

 

 

Fear not mother,

For I have learnt to fly,

Great heights they may be.

I have learnt to swim

The deepest ocean it may be

 

 

Let me walk alone

I have a life of my own

My identity,

To the world be known

I have many seeds to be sown

 

 

I shall return to you

Again and again

Like the tides that recedes

From the shores.

Like the bloom

That shows up in spring

 

 

Full of confidence, I may be the one

Crisis may come yet unknown

When I ring you,

Mother

Please pick up the phone

 

 

I shall return

For your warmth and affection

Desperate I remain

For that longing and gratification

I wish to make you proud,

And fill you with that satisfaction

 

Let go mother Let go

 

G. Shiva Prasad

 

PEACEFUL PLACE – G. Jayaram

Temples

– Where incense sticks are burning

Bells are ringing

Priests are chanting,

People are Praying,

Is a Peaceful place.

 

Meditating

 – on the river banks,

 Where birds are singing,

 Water’s flowing,

 Sun is rising,

 Is a peaceful place.

 

Walking

– along a beach,

Looking and listening

Sounds of waves

Coming up, going down,

Seeing sunset in the evening,

Is a peaceful place.

 

 Graveyard

 Where loved ones are buried,

 Lay in peace.

 Thanking for everything,

 Asking for blessing.

 Is the MOST PEACEFUL PLACE.

 – G Jayaram

 

ದೀಪದ ಹಾವಳಿ – ಪ್ರಭುರಾಜ ಗಿಣಿಮಾವ

ಸಾವಿರ ಪಣತಿ ಆರದ ಬಿಸಿ ಹತ್ತಿ

ಹಾರಿದ ಮಿಟ್ಟೆಯ ಸುಟ್ಟಿತು ಪಕ್ಕೆ

ತಿರುಗುತ ಸೇರಿತ್ತು ನೆಗೆದು ನೆಲಕ್ಕೆ

ಬಂದಿತು ದೀಪದ ಹಾವಳಿ ಸರಕ್ಕೆ

ಸುರ ಸುರ ಬಾಣದ ಭಯವನು ತಾಳದ

ಸರ ಸರ ಓಡಿ ಎಡವುತ ಗದರುತ

ಕೋಡಂಗಿಗಳ ಗಂಟಲು ಹರಿಯುತ

ಬಂದಿತು ದೀಪದ ಹಾವಳಿ ಗದರಿಸುತ

 ಧಡ ಧಡ ಫಟ ಫಟ ಸದ್ದಿನ ಪಟಾಕಿಗೆ

ಕುಂಯ್ಗುಡುವ  ಇಳಿಮುಖದ ಕುನ್ನಿಗಳಿಗೆ

ಮಿಂಯ್ಗುಡುವ ಬಿಳಿಚಿದ ಕಣ್ಣ ಕಾಮಿಗಳಿಗೆ

ಬಂದಿತು ದೀಪದ ಹಾವಳಿ ಬಳಿ ಬಳಿಗೆ

 ತಬ್ಬಲಿ ಕರುಗಳ ಉರುಳಿನ ಸೆಳೆತ

ತಾಯ್ಗಳ ಭವಣೆಯನರಿಯದ ಹಸುಳೆ

ಬಾ ಎಂದು ಕರೆದ ಗಂಟಲಿನ ಕೊರೆತ

ಬಂದಿತು ದೀಪದ ಹಾವಳಿ ಭರದಿಂದ

 ಬೆಚ್ಚನ ಗೂಡಲಿ ಮಲಗಿದ ಪಕ್ಕಿ

ಹೆಚ್ಚಿದ ಸದ್ದ ಕೇಳಿ ಬೆಚ್ಚಿದ ಹಕ್ಕಿ

ಫಟ ಫಟ ರೆಕ್ಕೆ ಬಡೆಯುತ ಹಾರಿ

ಬಂದಿತು ದೀಪದ ಹಾವಳಿ ಭಾರಿ

 ಬದುಕೋಣ ಸಹಜೀವಕೆ ಹಿತವಾಗಿ

ಫಟ ಫಟ ಧಡಧಡ ಸದ್ದ ಕಡಿತವಾಗಿ

ಮದ್ದಿನ ಹೂಮಾಲೆ ಸಾಕು ಬೇಕಾದಷ್ಟಾಗಿ

ಕೂಡಲೇ ಬರಲಿ ಅನಂತ ದೀಪಾವಳಿ

-ಪ್ರಭುರಾಜ ಗಿಣಿಮಾವ 

 

ಮನದಾಳದ ನುಡಿಗಳು-   ಸೌಭಾಗ್ಯ ಜಯಂತ್ ಮೇರ್ವೆ

ವಿನೋದ ಸಂತೋಷಕೆ

ವೇದಿಕೆ ಇದಾಗಿರುವುದಕೆ

ಮಾತೃ ಭಾಷೆಯ ಮಮತೆ ಕಾರಣವಿದಕೆ

ಕನ್ನಡಾಂಬೆಯ ಒಲವನ್ನ

ಕರುನಾಡಿನ ಕರಗಳನ್ನ

ಕಂಕಣದ ಸಂಕಲ್ಪವನ್ನ

ಕಾರಣವಾಗಿ ಹುಟ್ಟಿದ ಈ ಸಂಸ್ಥೆಯನ್ನ

ಕಂಡು ನನಗಿಂದು ತುಂಬಿತ್ತ ತನುಮನ

ನಿಮ್ಮೆಲ್ಲರಿಗೆ ನನ್ನ ಒಲವಿನ ನಮನ

           -ಸೌಭಾಗ್ಯ ಜಯಂತ್ ಮೇರ್ವೆ

ಶ್ರೀವತ್ಸ ದೇಸಾಯಿಯವರ ಕವನಗಳು

ಹಿನ್ನೆಲೆ: ನೀವು ನಂಬಲಿಕ್ಕಿಲ್ಲ. ನನಗಾಗ ೧೩ ಅಥವಾ ೧೪ ವಯಸ್ಸು. ಶಾಲೆಯಲ್ಲಿ ನಮಗೆ ಪಾಠಕ್ಕಿದ್ದ ವರ್ಡ್ಸ್ ವರ್ತ್ ಕವಿಯ ‘ಡಾಫಡಿಲ್’ ಕವಿತೆ ಓದಿದ ಮೇಲೆ ಈ ದೇಶಕ್ಕೆ ಬಂದು ಆ ಹೂವನ್ನು ನೋಡುವ ತವಕ ಹುಟ್ಟುಕೊಂಡುಬಿಟ್ಟಿತು. ಕಾಲೇಜು ಮುಗಿಸಿದ್ರೂ ಮನದಾಳದಲ್ಲಿ ಅದೇ ಆಸೆ ಇದ್ದಿರಬೇಕು. ಇಲ್ಲಿಗೆ ಬಂದಾದ್ಮೇಲೆ ಒಮ್ಮೆ ವಸಂತದಲ್ಲಿ ಲೇಕ್ ಡಿಸ್ಟ್ರಿಕ್ಟ್ ಗೆ ಹೋಗಿ ಅವುಗಳು ಕುಣಿಯುವುದನ್ನು ಕಣ್ಣು ತುಂಬಾ ನೋಡಿ ಮರಳಬೇಕು ಎಂಬ ಉತ್ಕಟ ಇಚ್ಛೆಯಾಗಿತ್ತು. ದೈವ ಮಾತ್ರ ಇನ್ನೂ ಇಲ್ಲೇ ಉಳಿಸಿದೆ. ಜೀನಾ ಯಹಾಂ …
 – ಶ್ರೀವತ್ಸ ದೇಸಾಯಿ

The Quest

(Introduction: I was dreaming of coming to this country and seeing the ‘daffodils fluttering and dancing in the breeze’, ever since I read that  poem by William Wordsworth at my school [it was in the prescribed textbook], when I had just turned a teenager. I was chasing a dream!).

  • Shrivatsa Desai

ಹೂವನ್ನರಸಿ…

ನಾನೊಬ್ಬ ಕನಸುಗಾರ

ಶಾಲೆಯ ಪಠ್ಯ ಪುಸ್ತಕದ ಹೂವನ್ನರಸಿ

ಅರಸಿಯ ನಾಡಿಗೆ ಬಂದವನು

ಆಗನಿಸಿತ್ತು ಗಗನ ಕುಸುಮ

ಈಗ ಕಂಡದ್ದಾಯಿತು

ಈ ಹೂವಿನ ನಾಡಿನಲ್ಲಿ

ಹೂ (Who?) ಗಳ ಸುರಿಮಳೆ ಹೆಜ್ಜೆ ಹೆಜ್ಜೆಗೂ

ನೀನಾರು? (Who are you?)

ಯಾರು ಕರೆಸಿದರು? (Who called you?)

ಮರು ಪ್ರಯಾಣವೆಂದು?

ನನ್ನ ಹಣೆಯಲ್ಲಿ ಬರೆದಂತೆ

ರಾಣಿಯ ನಾಡಲ್ಲೇ ಠಾಣೆ ಹಾಕಿಯಾಯಿತು

ನಾನಾರು? ಈ ಹೂದೋಟದಲ್ಲಿ

ಕನಸುಗಾರ ನಾ
ಕನಸು ಕಾಂಬೆ
ಕನಸು ಕರಗುವ ಮುನ್ನ
ಕಂಡ ಕನಸಿನ ಸ್ವರ್ಗ ಕಟ್ಟುವಾಸೆ

ನಾನಿನ್ನೂ ಕನಸುಗಾರ.

– ಶ್ರೀವತ್ಸ ದೇಸಾಯಿ

The Quest

 I was a dreamer

Searching for a flower from the school textbook

I arrived in ‘the land of hope and glory’

the homeland they called ‘Blighty’

and faced questions many

Who are you?

Who called you?

When will you return?

But I was fated to stay.

And settled here

But my dream is still unfulfilled.

Before I ‘go’

I wish to build myself  a Heaven on Earth

for I’m a dreamer, still.

 –Shrivatsa Desai

೨೦೧೪ ದೀಪಾವಳಿಯಂದು ವಿನತೆ ಶರ್ಮ ಬರೆದ ಕವನ – (‘ಅವಧಿ’ ಜಾಲಜಗುಲಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

ದೀಪಗಳ ಸೇತು

ದೀಪಗಳ ಸಾಲು

ಸಾಂಬ್ರಾಣಿ ಹೊಗೆ ಸುತ್ತು

ಸಂಭ್ರಮದ ಓಡಾಟ

ಸಡಗರದ ತಿನಿಸು

 

ಪುಟ್ಟಿಯ ಕಾಮನಬಿಲ್ಲ ಕನಸು

ದೊಡ್ಡ ಮನೆಯ ಅವಳಂತೆ

ರೇಷ್ಮೆ ಲಂಗದ ಹುಡುಗಿ

ತಾನಾಗುವುದು ಯಾವಾಗ?

 

ಅವರು ಬಿಟ್ಟ ಊಟಕ್ಕಾಗಿ

ಕಾದ ಹಸಿದ ಹೊಟ್ಟೆ

ಆದರೂ ಕಣ್ಣಲ್ಲಿ ಬಣ್ಣದ

ಬಳೆಗಳ ಚಿತ್ರ

 

ದೀಪಗಳ ದ್ವೀಪಗಳು

ನಾವು ಕೆಲವರು.

ನಮ್ಮ ಮನೆಯ ಹರ್ಷ

ನಮ್ಮದಷ್ಟೇ, ಮನೆ ಮನೆಯೊಳಗೇ

ಮನ ಮನ ಮುಟ್ಟಿಲ್ಲ ಇನ್ನೂ

 

ಬೀದಿ ಚಿಂದಿಯ

ಪ್ಲಾಸ್ಟಿಕ್ ಚೀಲ ಹೊತ್ತ

ಅವನ ದೃಷ್ಟಿ ಆ

ದೊಡ್ಡ ಮನೆಯತ್ತ

 

ಆ ಪ್ಲಾಸ್ಟಿಕ್ ಚೀಲ

ಡಬ್ಬ ಡಬ್ಬಗಳ ಸುರುಸುರುಬತ್ತಿ,

ರಾಕೆಟ್, ಫ್ಲವರ್ ಪಾಟ್,

ದೀಪಾವಳಿಯ ಸಿಹಿಯಾಗುವುದೇ?

 

ದೀಪಗಳು ತುಂಬಿರುವ,

ದೀಪಗಳೇ ಇಲ್ಲದ,

ನಮ್ಮ ಈ ಎಷ್ಟೋ ದ್ವೀಪಗಳ

ನಡುವಿನ ಸೇತು ನಾವಾದರೆ?

 

ಅವನು ಹಚ್ಚುವ ಅವನದೇ

ಆ ಹೆಮ್ಮೆಯ ಕುಲುಕುಲು

ಸುರುಸುರು ಬತ್ತಿ ನಗು

ನಮ್ಮ ಸಂಭ್ರಮ ಸಡಗರವಾದರೇ

 

ಪುಟ್ಟಿಯ ಕನಸು, ಕಂಗಳ ಕಾಂತಿ,

ಗರಿ ಗರಿ ಹೊಸ ಲಂಗ

ಘಲ್ ಘಲ್ ಬಳೆಗಳು

ನಮ್ಮ ಬೆಳಕ ಹಣತೆಗಳು.

  • ವಿನತೆ ಶರ್ಮ

Bridge of light

Beckoning row of lights

The incense rises like a snake

Celebration in their swift feet

Sweets fill the eyes

 

Putti’s rainbow dream

Follows the Big House Girl

Waiting for her Big day

To become a Silk-draped Girl

 

Awaiting the leftovers

Carrying hunger pangs

Bangles sing in her ears

A flash in her little eyes

 

Islands of lights

Some of us, we’re

Our joy is home-kept

Not reached all hearts

 

The boy carries the bag

Picking their trash

His gaze is on the Big House

Boys there, with fireworks

 

The boy’s bag, will it fill

With Diwali sweets

With rockets, flower pots,

Boxes of sparklers

 

Closed boxes, we are

Some of us. Homes

Lit with lights, dark without

All around. Awaiting

The bridge of light

 

The boy’s smile

Lit with his joy

Be our celebration

Our Diwali

 

Putti’s dream Silk dress

Murmuring bangles

The sparkle of her eyes

Be our heart’s light.

  • Vinathe Sharma

ಪೂರ್ವ-ಪಶ್ಚಿಮಗಳ ಮಿಲನ (EAST MEETS WEST) – ಡಾ. ಲಕ್ಷ್ಮೀನಾರಾಯಣ ಗುಡೂರ ಬರೆದ ವಿಶೇಷ ವರದಿ

ನವೆಂಬರ್ ೫ ರಂದು ಡಾರ್ಬಿಯಲ್ಲಿ ನಡೆದ ಕನ್ನಡ ಬಳಗ ಯು.ಕೆ. ಆಯೋಜಿತ ‘ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ’ ಸಮಾರಂಭದಲ್ಲಿ ಒಂದು ವಿಶೇಷವಿತ್ತು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ‘ಈಸ್ಟ್ ಮೀಟ್ಸ್ ವೆಸ್ಟ್’ ಅಥವಾ ‘ಪೂರ್ವ ಪಶ್ಚಿಮಗಳ ಮಿಲನ’ ಎಂಬ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕನ್ನಡ ವೇದಿಕೆಯ ‘ಅನಿವಾಸಿ’ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ ತಮ್ಮದೊಂದು ಕವನವನ್ನು ಸಹೃದಯ ಸಭಿಕರ ಮುಂದೆ ಓದಿ, ಅದರ ಅನುವಾದವನ್ನೂ ಪ್ರಚುರಪಡಿಸಬೇಕಿತ್ತು. ಅಥವಾ, ಅವರು ಆ ಎರಡು ಭಾಷೆಗಳಿಂದ ಒಂದು ಕವನವನ್ನು ಆರಿಸಿಕೊಂಡು ಅದನ್ನು, ಮತ್ತದರ ಭಾಷಾಂತರವನ್ನು ಓದಬಹುದಿತ್ತು.  ಆ ಕವನಗಳನ್ನು ಬರೆದ ಬಗೆ, ಜಾಗತಿಕ ಸಾಹಿತ್ಯದಿಂದ ಒಂದನ್ನು ಆಯ್ಕೆ ಮಾಡಿದ್ದರಲ್ಲಿ ಅಡಗಿದ್ದ ಜಾಣ್ಮೆ, ಮತ್ತು ತರ್ಜುಮೆ ಮಾಡಿದ ರೀತಿಯಲ್ಲಿದ್ದ ವಿಸ್ಮಯ, ಭಾಷಾ ಮತ್ತು ವಿಷಯ ಜ್ಞಾನ – ಇವೆಲ್ಲಾ ‘ಪೂರ್ವ ಪಶ್ಚಿಮಗಳ ಮಿಲನ’ದ ಹಿಂದಿದ್ದ ಆಶಯಗಳು.

ಜೊತೆಗೆ, ನಮ್ಮ ಕನ್ನಡ ಕಿರಿಯ ಕಣ್ಮಣಿಗಳು ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಿರುವ ಸಾಹಿತ್ಯವನ್ನು ಹಂಚಿಕೊಂಡು, ಅದರ ಅನುವಾದವನ್ನ ಪ್ರಸ್ತುತಪಡಿಸಿ, ಕಿರಿ-ಹಿರಿಯರ ‘ಭಾಷಾಮಿಲನ’ವನ್ನು ಕೂಡ ನೋಡುವುದು ಸಾಧ್ಯವಾಗುವುದೇ ಎಂಬ ಒಂದು ಪ್ರಶ್ನೆಯಿತ್ತು. ಇವೆಲ್ಲಾ ಈಡೇರಿದವೇ ಎನ್ನುವುದನ್ನು ಡಾ. ಲಕ್ಷ್ಮೀನಾರಾಯಣ ಗುಡೂರ ರವರು ತಮ್ಮ ಲೇಖನದಲ್ಲಿ ಗುರ್ತಿಸಿದ್ದಾರೆ. ಅವರ ಅಪರೂಪದ ಪ್ರತಿಭೆಯನ್ನು ಬಳಸಿ ಅವರೇ ಸಂದರ್ಭಸೂಚ್ಯ ಚಿತ್ರಗಳನ್ನು ಕೂಡ ರೇಖೆಗಳಲ್ಲಿ ಮೂಡಿಸಿದ್ದಾರೆ. ಲಕ್ಷ್ಮೀನಾರಾಯಣರ ಲೇಖನದ ಜೊತೆಗೆ ‘ಈಸ್ಟ್ ಮೀಟ್ಸ್ ವೆಸ್ಟ್’ ಕಾರ್ಯಕ್ರಮದಲ್ಲಿ ಓದಿದ ಇಬ್ಬರು ಕಿರಿಯರ ಕವನಗಳು, ಅವುಗಳ ಭಾವಾನುವಾದಗಳು ಈ ಶುಕ್ರವಾರ ನಿಮ್ಮ ಮುಂದೆ ಇದೆ. – ಸಂ.

thumbnail_20161105_130606
ಕಾರ್ಯಕ್ರಮದಲ್ಲಿ ಹಾಜರಿದ್ದ ಕನ್ನಡ ಬಳಗದ ಸದಸ್ಯರು              ಲೇಖಕರು ಬಲ ತುದಿಯಲ್ಲಿ

 

ಪೂರ್ವ-ಪಶ್ಚಿಮಗಳ ಮಿಲನ (EAST MEETS WEST) ಕಾರ್ಯಕ್ರಮದ ವಿಶೇಷ ವರದಿ – ಡಾ. ಲಕ್ಷ್ಮೀನಾರಾಯಣ ಗುಡೂರ

ಈ ವರ್ಷದ ಯು.ಕೆ. ಕನ್ನಡ ಬಳಗದ ದೀಪಾವಳಿ ಕಾರ್ಯಕ್ರಮಕ್ಕೆ ನಾನು ಹೋಗಲು ನಿರ್ಣಯಿಸಿದ್ದಕ್ಕೆ ಕೊಡಬಹುದಾದ ಕಾರಣಗಳಲ್ಲಿ ಒಂದು – ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ಯು.ಕೆ. (KSSVV UK) ಏರ್ಪಡಿಸಿದ್ದ ಕವಿಗೋಷ್ಠಿ. ಅದಕ್ಕವರು ಕೊಟ್ಟ East Meets West (“ಪೂರ್ವ-ಪಶ್ಚಿಮಗಳ ಮಿಲನ”) ಅನ್ನುವ ಹೆಸರು ಕೇಳಿಯೇ ಸ್ವಲ್ಪ ಕುತೂಹಲ ಉಂಟಾಗಿತ್ತು. ನಂತರ ಕಾರ್ಯಕ್ರಮ ಪಟ್ಟಿ ಬಂದಾಗ ಅದರಲ್ಲಿನ ಕಾರ್ಯಕ್ರಮದ  ವಿವರ, ಮುಖ್ಯ ಅತಿಥಿ ಕ್ಯಾಥಿ ಗ್ರಿಂಡ್ರಾಡ್ (Cathy Grindrod) ಅವರ ಹೆಸರು ನೋಡಿದ ಮೇಲಂತೂ ಸ್ವಲ್ಪ ಹೆಚ್ಚೇ ಆಸಕ್ತಿ ಮೂಡಿತ್ತೆನ್ನಬಹುದು.

daffodil-quest
ಹಾಸ್ಯಚಿತ್ರ ಕೃಪೆ: ಡಾ. ಲಕ್ಷ್ಮೀನಾರಾಯಣ ಗುಡೂರ್

ಶನಿವಾರ ೦೫.೧೧.೨೦೧೬ ರಂದು ಬೆಳಗ್ಗೆ ನಾವಿರುವ ಪ್ರೆಸ್ಟನ್ (Preston, UK) ಊರಿನಿಂದ ಹೊರಡುವ ವೇಳೆಗೆ ಬಿದ್ದಿದ್ದ ಬಿಸಿಲಿನಿಂದಲೇ ಅರ್ಧ ಮನಸ್ಸಿಗೆ ಖುಷಿ. ಕನ್ನಡ ಬಳಗ ಕಾರ್ಯಕ್ರಮ ನಡೆಯುವ ಸ್ಥಳ (venue) ‘ನದಿಬದಿಯ ಕೇಂದ್ರ’ (Riverside Centre) ಗೆ ಹೋಗಿ ಮುಟ್ಟಿದಾಗ ೧೦-೪೫. ಮುಖ್ಯ ಕಾರ್ಯಕ್ರಮದ ಸ್ವಾಗತ ಭಾಷಣ ಇತ್ಯಾದಿ ಮುಗಿದು ಪಕ್ಕದ ಚಿಕ್ಕ ಕಟ್ಟಡಕ್ಕೆ ಬಂದು ಕುಳಿತೆವು. ಸುತ್ತ ಕುಳಿತವರ ಕಡೆ ಕಣ್ಣು ಹಾಯಿಸಿದಾಗ ಕಂಡದ್ದು ಮಕ್ಕಳು-ದೊಡ್ಡವರ ಆಸಕ್ತ ಮುಖಗಳು. ಕಾರ್ಯಕ್ರಮ ಹೆಚ್ಚು ಕಡಿಮೆ ಸಮಯಕ್ಕೇ ಶುರುವಾಯ್ತು. ಡಾರ್ಬಿಶೈರಿನ ಮೊದಲ ರಾಜ ಕವಯಿತ್ರಿ (poet laureate 2005-7) ಕ್ಯಾಥಿ ಗ್ರಿಂಡ್ರಾಡ್, ಇಲ್ಲಿನ ರಿವಾಜಿನಂತೆ ವೇಳೆಗೆ ಸರಿಯಾಗಿ ಹಾಜರಿದ್ದರು. ಆಸ್ಟ್ರೇಲಿಯಾದಿಂದ ಬಂದು ಈಗ ಇಂಗ್ಲೆಂಡಿನಲ್ಲಿ ನೆಲೆಸಿರುವ, ‘ಅನಿವಾಸಿ’ ಯಾ ಸಂಪಾದಕಿ ವಿನತೆ ಶರ್ಮ ಕಾರ್ಯಕ್ರಮವನ್ನು ನಡೆಸಿ ಕೊಡುವ ಹೊಣೆ ಹೊತ್ತಿದ್ದರು. ಅವರೊಂದಿಗೆ ವೇದಿಕೆಯ ಮೇಲೆ ಕಸಾಸಾವಿವೇದಿಕೆಯ ಮಾನನೀಯ ಸದಸ್ಯರಾದ ಶ್ರೀ ಶ್ರೀವತ್ಸ ದೇಸಾಯಿ, ಜಿ ಎಸ್ ಶಿವಪ್ರಸಾದ್ ಹಾಗೂ ತಾಂತ್ರಿಕ ನಿರ್ವಾಹಕರ ಹೊಣೆಗಾರಿಕೆಯಲ್ಲಿ ರಾಮಶರಣ ಲಕ್ಷ್ಮೀನಾರಾಯಣ ಸಹ ಇದ್ದರು.thumbnail_20161105_132556

ಜಿ ಎಸ್ ಶಿವಪ್ರಸಾದ್ ಅವರು ಮುಖ್ಯ ಅತಿಥಿ ಕ್ಯಾಥಿ ಗ್ರಿಂಡ್ರಾಡ್ ಅವರ ಪರಿಚಯ ಮಾಡಿಕೊಡುವುದರೊಂದಿಗೆ ಕಾರ್ಯಕ್ರಮದ ಪ್ರಾರಂಭವನ್ನು ಘೋಷಿಸಿದರು. ಕಾರ್ಯಕ್ರಮದ ಸಾರಥ್ಯ ವಹಿಸಿದ್ದ ವಿನತೆ ಶರ್ಮ, ಕಲಾಪದ ರೂಪು-ರೇಷೆಗಳನ್ನು ಕೊಟ್ಟು, ಪ್ರತಿಯೊಬ್ಬ ಕವಿಯ ಸಮಯ ಪರಿಧಿಯನ್ನು ವಿವರಿಸಿದರು. ಎಂಟು ಕವನಗಳನ್ನು ಆರಿಸಲಾಗಿದ್ದು, ಆಯಾ ಕವಿಗಳು ಸ್ವತಃ ಕಾವ್ಯವಾಚನ ಮಾಡುವುದಾಗಿಯೂ, ಅದಕ್ಕೂ ಮುನ್ನ ತಾವು ಒಂದು ನಿಮಿಷದ ‘ಸಿಹಿ-ಹನಿ’ (short and sweet) ಕವಿಪರಿಚಯ ಮಾಡಿ ಕೊಡುವುದಾಗಿಯೂ ವಿನತೆ ಶರ್ಮ ಸಾರಿದರು. ಪ್ರತಿ ಕವಿಯ ಸರದಿಯ ಬಳಿಕ ಮುಖ್ಯ ಅತಿಥಿ ಕವನದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹೇಳುವವರಿದ್ದರು.

 ಮೊದಲಿನ ಎರಡು ಕವನಗಳು ಬಾಲಕವಿಗಳದ್ದು – ೧೩ ವರ್ಷ ವಯಸ್ಸಿನ ಅಮೋಘ ರಾಮಶರಣ್ (An ode to food) ಹಾಗೂ ೧೧ರ ಸಿಯಾ ಕುಲಕರ್ಣಿ (The Griff). ಅಮೋಘ ತನ್ನ ಕವನವನ್ನು ಊಟದಂಥ ಹಗುರ ವಿಷಯದಿಂದ ಶುರು ಮಾಡಿ, ಜಗತ್ತಿನ ಜನರ ಬಡತನದಂಥ ಗಂಭೀರ ವಿಷಯದೊಂದಿಗೆ ಮುಗಿಸುತ್ತಾನೆ – ಮನುಷ್ಯನಿಗೆ ಇರುವುದರಲ್ಲಿ ತೃಪ್ತಿ ಇರಬೇಕೆಂಬ ಸಂದೇಶದೊಂದಿಗೆ. ಈ ಕವನದ ಕನ್ನಡ ಅನುವಾದವನ್ನು ಅಮೋಘನ ತಂದೆ ಡಾ. ರಾಮಶರಣ ಲಕ್ಷ್ಮೀನಾರಾಯಣ ಓದಿದರು.

 ಸಿಯಾ ಕುಲ್ಕರ್ಣಿಯ ಕವನ ಗಹನವಾದ ವಿಷಯದೊಂದಿಗೆ ಶಬ್ದಗಳ ಮೂಲಕ ಆಟವಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಮಗುವಿನ ಕತ್ತಲೆಯ ಬಗೆಗಿನ ಭಯವೇ ಮುಖ್ಯ ವಿಚಾರವೆನಿಸಿದರೂ, ಅಲ್ಲಿರುವ ಭಾವನೆಗಳನ್ನು ವಯಸ್ಕ ಜೀವನದ ಯಾವುದೇ ಭಯಕ್ಕೂ ಹೊಂದಿಸಿ ನೋಡಬಹುದಾಗಿದೆ.

 ಕೇಶವ ಕುಲಕರ್ಣಿಯವರ ಯತ್ನ ಕನ್ನಡದ ಡಾ. ಜಿ ಎಸ್ ಶಿವರುದ್ರಪ್ಪನವರ “ಗೋಡೆಗಳು” ಕವನವನ್ನು ಇಂಗ್ಲಿಷಿಗೂ, ಇಂಗ್ಲಿಷಿನ “Instants” (ಸ್ಪ್ಯಾನಿಷ್ ಮೂಲ – ಹೋಹಿ ರುಇಸ್ ಬೋರ್ಗೆಸ್ ರ ರಚನೆ) ಅನ್ನು ಕನ್ನಡಕ್ಕೂ ತರುವುದು. ಮೊದಲನೇ ಕವನ “The Walls” ಇಬ್ಬರು ವ್ಯಕ್ತಿಗಳ ಸಂಬಂಧದಲ್ಲಿ ಒಮ್ಮೆಲೇ ಬೆಳೆದು ಅಡ್ಡ ನಿಲ್ಲುವ, ಸಂಬಂಧಗಳನ್ನು ಹಾಳುಗೆಡವುವ ಕಾಲ್ಪನಿಕ ಗೋಡೆಗಳ ಚಿತ್ರಣ ನೀಡುತ್ತದೆ. ಎರಡನೆಯದ್ದು, ಜೀವನವನ್ನು ಒಂದು ವೇಳೆ ರಿವೈಂಡ್ ಮಾಡುವ ಹಾಗಿದ್ದಿದ್ದರೆ ಏನೆಲ್ಲಾ ಮಾಡುತ್ತಿದ್ದೆ ಎನ್ನುವ ಕವಿಯ ಕಲ್ಪನೆಯ ಮೂಲಕ, ನಮ್ಮ-ನಿಮ್ಮ ಕನಸನ್ನು ಕೆದಕುತ್ತದೆ. ಆದರೆ, ಕೊನೆಗೆ ವಾಸ್ತವಿಕತೆಗೆ ತಂದು ನಿಲ್ಲಿಸುತ್ತದೆ.

ಡಾ. ಜಿ ಜಯರಾಂ ತಮ್ಮ ಕವನದ ಮೂಲಕ ವಿವಿಧ ಎಡೆಗಳಲ್ಲಿ ಶಾಂತಿಯನ್ನು ಹುಡುಕುವ ಯತ್ನ ಮಾಡುತ್ತಾರೆ. ನಮ್ಮ ಪ್ರಿಯರನ್ನು ಅಂತ್ಯದಲ್ಲಿ ಕೊನೆಯ ಬಾರಿಗೆ ಬೀಳ್ಕೊಡುವ ಸ್ಥಳದಲ್ಲಿ ಪರಮಶಾಂತಿಯಿದೆ ಎಂದು ಅಭಿಪ್ರಾಯಪಡುತ್ತಾರೆ.

ನಂತರ ಬಂದ ಡಾ. ಪ್ರಸಾದ್ ಎರಡು ಕವನಗಳನ್ನು ಪ್ರಸ್ತುತಪಡಿಸಿದರು – Let go, Mother let go ಹಾಗೂ Snowscape. ಡಾ. ಪ್ರಸಾದ್ Let go, Mother let go ಕವನದಲ್ಲಿ ತಾಯಿಯ ಪ್ರೀತಿಯನ್ನು ಅರಿವಿನಲ್ಲಿ ಇಟ್ಟುಕೊಂಡೇ, ಜೀವನದಲ್ಲಿ ಗುರಿ ಸಾಧಿಸುವ ಆಸೆಯಿಂದ ಗೂಡು ಬಿಟ್ಟು ಹಾರಲೇಬೇಕಾದ ಮಗುವಿನ ಕೋರಿಕೆಯನ್ನು ಚಿತ್ರಿಸುತ್ತಾರೆ. ಹೊರಗೆ ಹೋದರೂ ಮತ್ತೆ ತಾಯಿಯ ಬೆಚ್ಚನೆಯ ಪ್ರೀತಿಯ ಮಡಿಲಿಗೆ ಬಂದೇ ಬರುವ, ಜೊತೆಯಲ್ಲಿ ಯಶಸ್ಸಿನ ಗರ್ವವನ್ನು ತರುವ ಮಗುವಿನ ಆಸೆಯನ್ನು ವಿವರಿಸುತ್ತಾರೆ.  ಎರಡನೆಯ ಕವನ Snowscapeನಲ್ಲಿ ಚಳಿಗಾಲದ ಸೌಂದರ್ಯದ, ಹಿಮಮಾನವನ (snowman) ಜೀವನದ ಚಿತ್ರಣ ಕೊಡುತ್ತಾರೆ. ಚಳಿಗಾಲ ಕಳೆದು ಬಿಸಿಲು ಬಂದಂತೆ ಹಿಮಮಾನವ ಕರಗಿ ನೀರಾಗಿ ಹರಿದು ಹೋಗುವುದನ್ನು ಮಾನವನ ಕ್ಷಣಿಕ ಜೀವನಕ್ಕೆ ಹೋಲಿಸುತ್ತಾರೆ.

ಶ್ರೀವತ್ಸ ದೇಸಾಯಿ, ತಮ್ಮ ಬಾಲ್ಯದ ಪುಸ್ತಕದಲ್ಲಿದ್ದ ಡಾಫೋಡಿಲ್ ಹೂವನ್ನು ನೋಡುವ ಛಲದಿಂದ ರಾಣಿಯ ನಾಡಿಗೆ ಬಂದ ಕನಸಿನ ರಹಸ್ಯದ ಗಂಟನ್ನು ತಮ್ಮ “ಹೂವನ್ನರಸಿ” ಬಂದ ಕನಸುಗಾರನ ರೂಪದಲ್ಲಿ ಬಿಚ್ಚಿಡುತ್ತಾರೆ. ಒಮ್ಮೆ ಇಲ್ಲಿ ಬಂದ ಮೇಲೆ, ಇಲ್ಲಿಯ ಕರ್ಮಭೂಮಿಯಲ್ಲಿ ಉಳಿದು ಹೋದ ವಾಸ್ತವಿಕತೆಯಲ್ಲಿಯೂ ಇಲ್ಲೇ ಒಂದು ಸ್ವರ್ಗ ರಚಿಸಿಕೊಂಡಿರುವ ಆಸೆ ವ್ಯಕ್ತಪಡಿಸುತ್ತಾರೆ.

 “ದೀಪಗಳ ಸೇತು” ವಿನತೆ ಶರ್ಮ ಅವರ ರಚನೆ. ದೊಡ್ಡ ಮನೆಯಲ್ಲಿನ ಹಬ್ಬದ ಬೆಳಕು, ಪಟಾಕಿಯ ಸದ್ದು, ಗೆಜ್ಜೆಯ ನಾದ, ರೇಷ್ಮೆ ಲಂಗದ ಸರ ಸರ, ರಸ್ತೆಯಲ್ಲಿ ಹೋಗುವ ಪುಟ್ಟಿಯ, ಚಿಂದಿ ಚೀಲ ಹೊರುವ ಹುಡುಗನ ಕಣ್ಣುಗಳಲ್ಲಿ ಕನಸುಗಳನ್ನು, ಆಸೆಯನ್ನು ಬಡಿದೆಬ್ಬಿಸುತ್ತದೆ. ಆದರೆ, ದ್ವೀಪಗಳಂತಾಗಿರುವ ಮಾನವರ ಮಧ್ಯೆ ಬಿದ್ದು ಹೋಗಿರುವ ಸೇತುವೆಗಳ necessityಯನ್ನು ಎತ್ತಿ ತೋರುತ್ತದೆ. ಎಂದಾದರೂ ನಾವೇ ಈ ಸೇತುವೆಗಳಾಗಿ ಮತ್ತೆ ಮನುಷ್ಯರನ್ನು ಜೋಡಿಸಬಹುದೇ ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ ಕವಯಿತ್ರಿ ಶರ್ಮ.

boy-and-girl
ಹಾಸ್ಯಚಿತ್ರ ಕೃಪೆ: ಡಾ. ಲಕ್ಷ್ಮೀನಾರಾಯಣ ಗುಡೂರ್

ಇನ್ನು ಕೊನೆಯಲ್ಲಿ ಬಂದ ಅನ್ನಪೂರ್ಣ ಆನಂದ್ ಅವರು, ಇದುವರೆಗೆ ಕವನ ಓದಿದ ಕವಿ/ಕವಯಿತ್ರಿಯರಿಗಿಂತ ಭಿನ್ನವಾದದ್ದನ್ನು ಮಾಡುವರೆಂದು ಕಾರ್ಯನಿರ್ವಾಹಕಿ ವಿನತೆ ಶರ್ಮ ಘೋಷಿಸಿದರು. ಅನ್ನಪೂರ್ಣ ಅವರು ಆರಿಸಿಕೊಂಡಿದ್ದು ಟಿ ಪಿ ಕೈಲಾಸಂ ಅವರ “ತಿಪ್ಪಾರಳ್ಳಿ ಬಲು ದೂರ” ಕವನವನ್ನು. ಆ ಕವನದ ಹಿನ್ನೆಲೆ ಕೊಡುತ್ತ, ಅದರ ಇನ್ಸ್ಪಿರೇಷನ್ ಆದ “It’s a long way to Tipperary” ಹಾಡನ್ನು ಹಾಡಿದ್ದಲ್ಲದೇ, ಅದೇ ರಾಗದಲ್ಲಿ ಕೈಲಾಸಂ ಅವರ ರಚನೆಯನ್ನೂ ಹಾಡಿ ತೋರಿಸಿದರು.

ಇಲ್ಲಿಗೆ ಆರಿಸಿದ ಕವನಗಳ ಮುಕ್ತಾಯವಾಯಿತು. ಇದಾದ ಮೇಲೆ ಮುಖ್ಯ ಅತಿಥಿ ಕ್ಯಾಥಿ ಗ್ರಿಂಡ್ರಾಡ್ ಅವರ ಸಮಯ. ಅವರು, poet laureate ಆದಾಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.

thumbnail_20161105_130553
ಮುಖ್ಯ ಅತಿಥಿ ಕ್ಯಾಥಿ ಗ್ರಿಂಡ್ರಾಡ್

ಅಲ್ಲದೆ, ಕಾವ್ಯರಚನೆಯ ಉಪಯುಕ್ತ ಮುತ್ತುಗಳನ್ನು (pearls) ಹಂಚಿದರು. ತಮ್ಮ ಹಲವಾರು ಕವನಗಳನ್ನು ಓದಿದರು. ಕೇಳುಗರನ್ನು ಮೆದುವಾದ, ನಿಧಾನಗತಿಯ ಕವನದಿಂದ ಹಿಡಿದು ಕ್ಷಿಪ್ರಗತಿಯ ಹಾಡಿನವರೆಗೆ ವಿವಿಧ ವೇಗಗಳಲ್ಲಿ ರೋಲರ್ ಕೋಸ್ಟರ್ ಪ್ರಯಾಣ ಮಾಡಿಸಿದರು.  “Home” ಕವನದಲ್ಲಿಯ ಪುಸ್ತಕಪ್ರಿಯ ಹುಡುಗಿಯಿಂದ ಹಿಡಿದು, “Mr Hartley & sons” ನ ಹಾರ್ಡ್-ವರ್ಕಿಂಗ್ ಕುಟುಂಬದ ಹೊಲಿಗೆ ಅಂಗಡಿಯ ಮೂಲಕ, The Nailmakers ನ “work hard, party harder” ಕೆಲಸಗಾರರವರೆಗೆ ಸಮಾಜದ ವಿವಿಧ ಮುಖಗಳ ಪರಿಚಯ ಮಾಡಿಸಿದರು. ಒಟ್ಟಿನಲ್ಲಿ ಹೇಳುವುದಾದರೆ, East meets West ಕವಿಗೋಷ್ಟಿಯನ್ನು ಶೃಂಗಾರೋಹಣ ಮಾಡಿಸಿ ಮುಗಿಸಿದರು.

nailmakers
ಮುಖ್ಯ ಅತಿಥಿ, ಕವಿಯಿತ್ರಿ ಕ್ಯಾಥಿ ಗ್ರಿಂಡ್ರಾಡ್ ರ The Nailmakers ನ “work hard, party harder” – ಹಾಸ್ಯಚಿತ್ರ ಕೃಪೆ: ಡಾ. ಲಕ್ಷ್ಮೀನಾರಾಯಣ ಗುಡೂರ್

ಕೊನೆಯಲ್ಲಿ ಕ್ಯಾಥಿ ಗ್ರಿಂಡ್ರಾಡ್ ಅವರ ಕವನ ಸಂಕಲನ ಪುಸ್ತಕವನ್ನು ಕೊಳ್ಳುವ ಅವಕಾಶವೂ ಇತ್ತು. ಕೊಂಡವರಿಗೆ ಪುಸ್ತಕದಲ್ಲಿ ಅವರ ಹಸ್ತಾಕ್ಷರವೂ ದೊರೆಯಿತು.thumbnail_20161105_132538

ಕಾರ್ಯಕ್ರಮ ಶ್ರೀವತ್ಸ ದೇಸಾಯಿಯವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

ಒಟ್ಟಿನಲ್ಲಿ ಹೇಳುವುದಾದರೆ, ಕಸಾಸಾವಿವೇ ಆಯೋಜಿಸಿದ East meets West (ಪೂರ್ವ-ಪಶ್ಚಿಮಗಳ ಮಿಲನ) ನಿರೀಕ್ಷೆಗೆ ತಕ್ಕಂತೆ ಒಳ್ಳೆಯ ಕಾರ್ಯಕ್ರಮವಾಗಿ ಮೂಡಿಬಂದಿತು.  ಎಲ್ಲರ ಕವನಗಳೂ ಕೇಳುಗರನ್ನು ಒಂದಲ್ಲ ಒಂದು ರೀತಿ ತೃಪ್ತಿ ಪಡಿಸಿದರೂ, ಮೊದಲಿಬ್ಬರು ಬಾಲಕವಿಗಳ ಪ್ರಯತ್ನಗಳು ಶ್ಲಾಘನೀಯವೆಂದೇ ಹೇಳಬೇಕು.  ಶ್ರೀ ಕೇಶವ ಕುಲಕರ್ಣಿ ಮಧ್ಯ ಹೇಳಿದಂತೆ “Poetry is lost in translation” ಅನ್ನುವ ಭಯವೇನೂ ಈ ಕಾರ್ಯಕ್ರಮದಲ್ಲಿ ಕಾಡಲಿಲ್ಲ.

-ಡಾ. ಲಕ್ಷ್ಮೀನಾರಾಯಣ ಗುಡೂರ

 

ಇಬ್ಬರು ಕಿರಿಯರ ಕವನಗಳು, ಅವುಗಳ ಭಾವಾನುವಾದ :

  1. An ode to food – ಅಮೋಘ ರಾಮಶರಣ್ / ಆಹಾರಕ್ಕೊಂದು ಹಾರ – ಡಾ. ರಾಮಶರಣ ಲಕ್ಷ್ಮೀನಾರಾಯಣ

An ode to food

Food is the best

Better than the rest

From fruit to cake

And bread that’s been baked

 

The variety is endless

And the taste can be fabulous

Things like noodles and rice

You won’t need to think twice

 

But let us remember about

Those who always have to sleep out

For they don’t have the luxury

To eat muffins or curry

 

So just be grateful too

Others don’t have it easy as you

And while you eat to your heart’s content

Remember they don’t have so much as a tent

-Amogha Ramasharan

ಆಹಾರಕ್ಕೊಂದು ಹಾರ

ಆಹಾರವೇ ಅತ್ತ್ಯುತ್ತಮ

ಅದೇ ಎಲ್ಲಕ್ಕಿಂತ ಗರಿಮ

ಹಣ್ಣಿಂದ ಕೇಕಿನವರೆಗೆ

ಹದವಾಗಿ ಸುಟ್ಟ ರೊಟ್ಟಿ ಉದರ ಸೇರುವವರೆಗೆ

 

ಅದೆಷ್ಟು ಬಗೆ! ಅದೆಷ್ಟು ರೀತಿ!

ಬಣ್ಣಿಸಲಾರದಷ್ಟು ರುಚಿ

ಶಾವಿಗೆಯೇನು! ಅನ್ನವೇನು!

ಯೋಚಿಸುತ್ತಲೇ ನಿಂತೆಯೇನು?

 

ಆದರೆ ನೆನಪಿನಲ್ಲಿಡು

ಯಾರಿಗಿಲ್ಲ ತಮ್ಮದೇ ಮಾಡು

ಇಲ್ಲ, ಆ ಅನಿವಾಸಿಗಳಿಗೆ ಐಷಾರಾಮ

ಚಾಪೆ ಚಪ್ಪರವಿಲ್ಲ, ದೂರ  ಕಜ್ಜಾಯ ಮೃಷ್ಠಾನ್ನ

 

ಸ್ಮರಿಸು ನೀಡಿದವರ ಋಣ

ಕೆಲವರ ಬಾಳಿನ್ನೂ ಕಠಿಣ

ಧನ್ಯನಾಗಿರುವಾಗ ಉಂಡು-ತೇಗಿ

ಮನದಲ್ಲಿರಲಿ ನೆಲೆಯಿರದ ಬೈರಾಗಿ!

ಡಾ. ರಾಮಶರಣ ಲಕ್ಷ್ಮೀನಾರಾಯಣ

 

2. The Griff – ಸಿಯ ಕುಲಕರ್ಣಿ / ಅಮಾನುಷ  (ಭೀಕರ) – ಡಾ. ಶ್ರೀವತ್ಸ ದೇಸಾಯಿ

The Griff

outstretched, long, spindly fingers reach out to grab me,

embrace me, envelope me, consume me.

 

The moon, a shimmering silver coin ripples in a sea of blue,

so harmless and fragile, so calm and peaceful.

 

A hazardous layer of gravelly pellets,

littered with stones, caked on moss, iced with danger.

 

The hazy sun sinks behind a solid wall of earth,

my last hope, fading behind an ancient barrier.

 

Darkness grows rapidly, seeping into every corner, every crevice,

it feeds off fear, my fear.

 

The little light left disappears,

quickly merging into a blatant gloom.

 

I’m suddenly blinded by the absence of light,

black spots dance in the corners of my eyes.

 

Murky silhouettes resolve into swirling shadows, they mock me, taunt me.

Blackness engulfs me.

Blackness immerses me.

Blackness.

  – Sia Kulkarni

 

ಅಮಾನುಷ  (ಭೀಕರ)

ಅದರ ಉದ್ದನೆಯ ಬೆರಳುಗಳು ನನ್ನತ್ತ ಬರುತ್ತಿವೆ

ನನ್ನ ಸುತ್ತುವರಿದು ನನ್ನನ್ನಪ್ಪಿ ಕಬಳಿಸುವಂತಿದೆ

ನೀಲಸಾಗರದಲ್ಲಿ ತೇಲುವ ಬೆಳ್ಳಿಕಾಸಿನ ಚಂದಮ

ಎಂಥ ಭಿದುರ, ಎಷ್ಟು ಶಾಂತಿ!

ಕುಸಿಯುವ ನೆಲದ ಮೇಲೆ ಹರಡಿವೆ ಹರಳು-ಕಲ್ಲುಗಳ

ಮೇಲೆ ಹೆಪ್ಪುಗಟ್ಟಿದ ಭೀತಿಯ ಪಾಚಿ
ಮಸುಕು ಸೂರ್ಯಾಸ್ತ ಗಟ್ಟಿಮಣ್ಣಗೋಡೆಯಾಚೆ

ಒಂದು ಪುರಾತನ ಭಿತ್ತಿಯ ಹಿಂದವನ ಅಸ್ತಮನ

ಮೂಲೆ-ಮೂಲೆಯಲಿ, ಬೆಟ್ಟ ಕೊರಕಲುಗಳಲ್ಲಿ ನುಸುಳುವ ದಟ್ಟ ಕತ್ತಲೆ

ನನ್ನದೇ ಅಂಜಿಕೆಗಳ ಕಬಳಿಸಿ ಕೊಬ್ಬಿ ಕೂತಿದೆ!

ಮಂದ ಬೆಳಕಿನ ಕೊನೆಯ ಕಿರಣಗಳೂ ಕಾಣೆ

ಕಾಣದ ಕಾಂತಿ ಮಂಕು ಹಿಡಿಸಿದೆ

ಬೆಳಕೆಲ್ಲ ನಂದಿ ಕುರುಡನಾದೆ.

ಕಣ್ಣಂಚಿನಲಿ ಕುಣಿಯುವ ಕಪ್ಪು ಚುಕ್ಕೆಗಳು

ಕತ್ತಲೆಯಲಿ ಸುತ್ತುವ ನೆರಳುಚಿತ್ರಗಳ

ರಿಂಗಣ ಹಂಗಿಸುತ್ತಿದೆ, ನನ್ನನ್ನು ರೇಗಿಸುತ್ತಿದೆ!

ನನ್ನ ಸುತ್ತ  ಕತ್ತಲೆ

ನಾನು ಮಿಂದ ಈ ಅಂಧಕಾರ

ಎತ್ತೆತ್ತಲೂ ಕತ್ತಲೆ,

ಕಗ್ಗತ್ತಲೆ!

  –  ಡಾ. ಶ್ರೀವತ್ಸ ದೇಸಾಯಿ