ಹೊಸ ಪರಿಚಯ

ವಿಜಯ್ ನರಸಿಂಹ ಅವರು ಮೂಲತಃ ತುಮಕೂರಿನವರು.B.E Mechanical Engineering ನಲ್ಲಿ ಪದವಿ ಪಡೆದಿರುವ ಇವರು QuEST ಸಂಸ್ಥೆಯಲ್ಲಿ Technical Manager ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಗಳಲ್ಲಿ ಸಾಹಿತ್ಯ ರಚನೆಯೂ ಒಂದು. ಸಾಹಿತ್ಯದಲ್ಲಿ ಕಾವ್ಯ ಪ್ರಾಕಾರ ತುಂಬಾ ಇಷ್ಟ ಎನ್ನುವ ಇವರು ಹಲವು ಕವನಗಳನ್ನು ಬರೆದ್ದಿದ್ದಾರೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಸಂಘದ ಅನಿವಾಸಿ ವಿಭಾಗದಲ್ಲಿ ಎರಡು ಬಾರಿ ಇವರ ಆಯ್ದ ಕವನಗಳಿಗೆ ಮನ್ನಣೆ ದೊರೆತಿದೆ. ರಾಷ್ತ್ರಕವಿ ಕುವೆಂಪು ಮತ್ತು ಮೈಸೂರು ಅನಂತ ಸ್ವಾಮಿ ಪ್ರಶಸ್ತಿಗಳು ದೊರೆತಿವೆ. ಕಾವ್ಯದ ಒರೆಯ ಸೆಲೆತ ಜೋರಾಗಿದ್ದರೆ ಅದನ್ನು ತಡೆಯಲು ಸಮಯಾಭಾವದ ಸೋಗು ಸಾಲದು ಎನ್ನುವ ಇವರು ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. UK Derby ಯಲ್ಲಿ ಸನ್ಮಿತ್ರರೊಡನೆ ಸೇರಿ 2014ರಲ್ಲಿ ಜೈ ಕರ್ನಾಟಕ ಬಳಗದ ಸ್ಥಾಪನೆಯಲ್ಲಿ ಇವರ ಪಾತ್ರ ಹಿರಿದು.
ವಿಜಯ್ ನರಸಿಂಹ ಅವರ ಕಾವ್ಯ ಪ್ರಕಾರಗಳು ವಿಶಿಷ್ಟವಾದವು . ಈ ಕಾವ್ಯ ಪ್ರಕಾರಗಳು ಇತ್ತೀಚೆಗೆ ವಿರಳವಾಗುತ್ತ ಬರುತ್ತಿವೆ. ನವ್ಯ ಕಾವ್ಯದ ಹೆಸರಲ್ಲಿ ಗದ್ಯ ಪದ್ಯವಾಗುತ್ತಿದೆ. ಕನ್ನಡದ ಹಲವು ಉತ್ತಮ ಪದಗಳು ಬಳಕೆಯಾಗುತ್ತಿಲ್ಲ. ಕನ್ನಡದಲ್ಲಿ ಅಪಾರ ಪಾಂಡಿತ್ಯ ಇರುವ ವಿಜಯ್ ಅವರು ಎರಡು ಭಿನ್ನ ಪ್ರಕಾರಗಳಲ್ಲಿ ಬರಿದಿರುವ ಕೆಳಕಂಡ ಕವನಗಳು ಕನ್ನಡಕ್ಕೆ ಮತ್ತು ಅನಿವಾಸಿಗೆ ಉತ್ತಮ ಕೊಡುಗೆಗಳು. ಅವರು ಕಳಿಸಿದ ನಾಲ್ಕು ಕವನಗಳಲ್ಲಿ ಎರಡನ್ನು ಪ್ರಕಟಿಸುತ್ತಿದ್ದೇನೆ. ಮತ್ತೆರಡನ್ನು ಮುಂದಿನ ತಿಂಗಳುಗಳಲ್ಲಿ ನಿರೀಕ್ಷಿಸಿ
ಪ್ರಸ್ತುತ ಕಾರ್ಯ ನಿಮಿತ್ತವಾಗಿ Isle of White ನಲ್ಲಿ ನೆಲೆಸಿರುವ ಇವರನ್ನು ಅನಿವಾಸಿಗೆ ತುಂಬು ಹೃದಯದಿಂದ ಸ್ವಾಗತಿಸೋಣ-ಸಂ