ಡಾರ್ಬಿ ಕನ್ನಡಿಗರು ನೀಡಿದ ರಸಾಯನ, ಔತಣದ ಸ್ಪೆಷಲ್!

ನಾವೆಲ್ಲಾ ಕನ್ನಡ ಬಳಗ ಯು.ಕೆ. ಸದಸ್ಯರು ಕರುನಾಡ ಹೊರಗಿದ್ದರೂ ನಮ್ಮ ತೌರುಮನೆಯ ಕರ್ನಾಟಕದ ದರ್ಶನ ನಮಗೆಲ್ಲಾ ಅಂದು ಸಿಕ್ಕೇಬಿಟ್ಟಿತು. ಯಾವತ್ತು ಎನ್ನುವುದನ್ನು ನೀವು ಸರಿಯಾಗೇ ಊಹಿಸಿದಿರಿ. ಇಂಗ್ಲೆಂಡಿನಲ್ಲಿ, ಕುರ್ಚಿಯಲ್ಲಿ ಕೂತಿದ್ದ ಹಾಗೇ ಒಂಥರಾ ಮಾಯಾ ಬಜಾರ್ ರೀತಿಯಲ್ಲಿ ನಮ್ಮನ್ನೆಲ್ಲಾ ನಮ್ಮೂರಿಗೆ ವಾಪಸ್ ಕರೆದೊಯ್ದವರು ಯಾರು, ಆ ಒಂದು ಮಾಯೆಯನ್ನು ಅವರು ಹೇಗೆ ಸೃಷ್ಟಿ ಮಾಡಿದರು? ಆ ಮೋಡಿಯ ಹಿಂದೆ ನಡೆದ ಕಾರುಬಾರುಗಳು ಏನೇನು? ಸ್ಟೇಜ್ ಮೇಲೆ ಬಂದ ಕರ್ನಾಟಕ ದರ್ಶನ ಮತ್ತು ಮೈಸೂರು ದಸರಾಗಳನ್ನ ನೋಡಿದ ಪ್ರೇಕ್ಷಕರು ಏನನ್ನುತ್ತಾರೆ? ಇವತ್ತಿನ ಲೇಖನಗಳನ್ನ ಓದಿ ವಿವರಗಳನ್ನು ತಿಳಿದುಕೊಳ್ಳೋಣ, ಬನ್ನಿ. ಅಂದು ಸೃಷ್ಟಿಯಾದ ಅದ್ಭುತ ಲೋಕದ ಕಿರು ವಿಡಿಯೋಗಳು ಕೂಡ ಇವೆ. ಎಂಜಾಯ್ ಮಾಡಿ, ಹಂಚಿಕೊಳ್ಳಿ. ಸಂ.

ಡಾರ್ಬಿ ಕನ್ನಡಿಗರ ಒಗ್ಗಟ್ಟಿನ ಉತ್ಸಾಹದ ಫಲ -ಕರ್ನಾಟಕ ದರ್ಶನ, ಮೈಸೂರು ದಸರಾ

‘ಅನಿವಾಸಿ’ಗಾಗಿ ಶ್ರೀದೇವಿ ಮತ್ತು ಹರೀಶ್ ರನ್ನ ಮಾತನಾಡಿಸಿ, ಲೇಖನವನ್ನು ಸಿದ್ಧಪಡಿಸಿದವರು ರಾಮ್ ಶರಣ್

ಇತ್ತೀಚೆಗೆ ಡಾರ್ಬಿಯಲ್ಲಿ ನಡೆದ ಕನ್ನಡ ಬಳಗದ ದೀಪಾವಳಿ ಕಾರ್ಯಕ್ರಮದಲ್ಲಿ ಡಾರ್ಬಿ ಕನ್ನಡಿಗರು ಪ್ರಸ್ತುತ ಪಡಿಸಿದ ‘ಕರ್ನಾಟಕ ದರ್ಶನ’ ಹಾಗು ‘ಮೈಸೂರು ದಸರಾ’ ರೂಪಕಗಳು ಪ್ರೇಕ್ಷಕರನ್ನು ತಾಯ್ನಾಡಿಗೆ ಸೆಳೆದೊಯ್ದವು ಎಂದು ಬಹಳಷ್ಟು ಪ್ರೇಕ್ಷಕರು ಹೇಳಿದರು. ಅದಲ್ಲದೆ, ಇಲ್ಲಿ  ಇಂಗ್ಲೆಂಡಿನಲ್ಲಿ ಹುಟ್ಟಿ, ಬೆಳೆಯುತ್ತಿರುವ ಕಿರಿಯರಿಗೂ ನಾನು ಕನ್ನಡಿಗ ಎನ್ನುವ ಹೆಮ್ಮೆ, ವೈಯಕ್ತಿಕತೆ ಹುಟ್ಟಿಸಿತು ಎಂದು ಹೇಳಿ ಬೆನ್ನು ತಟ್ಟಿದಾಗ ಅದರಲ್ಲಿ ಪಾಲ್ಗೊಂಡ ನಮಗೆಲ್ಲ ಹೃದಯ ತುಂಬಿ ಬರುವುದು ಸಹಜವೇ. ‘ಈ ಕಾರ್ಯಕ್ರಮಗಳು ಹೊಸ ಹಾದಿ ಹಾಕಿವೆ, ಇದೆಲ್ಲದರ ಹಿನ್ನೆಲೆ ಕನ್ನಡ ಬಳಗದವರೊಂದಿಗೆ ಹಂಚಿಕೊಳ್ಳಬೇಕು, ಬರೆದು ಕೊಡಿ’ ಎಂದು ‘ಅನಿವಾಸಿ’ ಯ ಸಂಪಾದಕ ಬಳಗ ಕೇಳಿಕೊಂಡಾಗ ಆನಂದಾಶ್ಚರ್ಯವಾಯಿತು!

ತಮ್ಮ ತನುಮನ ಧನಗಳನ್ನರ್ಪಿಸಿ, ಕನ್ನಡಿಗರನ್ನೊಂದು ಮಾಡಿ, ಇವೆರಡೂ ನೃತ್ಯ ರೂಪಕಗಳನ್ನು ಕಲ್ಪಿಸಿ ಸಾಕಾರ ಮಾಡಿದ ಶ್ರೀದೇವಿ ವಲ್ಲೀಶ್ ಹಾಗೂ ಹರೀಶ್ ರಾಮಯ್ಯ ಅವರಿಂದಲೇ ಹಿನ್ನೆಲೆಯ ಕಥೆ ಹೇಳಿಸುವ ಪ್ರಯತ್ನ ಮಾಡಿದ್ದೇನೆ, ಕೇಳಿ… ರಾಮ್ ಶರಣ್

img-20161030-wa0034

ಹರೀಶ್: ಇಂಗ್ಲೆಂಡಿನ ಮಹಾನಗರಗಳ ಹೊರಗೆ ಇರುವ ಡಾರ್ಬಿ ಭಾರತೀಯ ಸಮುದಾಯ ಅನನ್ಯವಾದದ್ದು. ಸಾಂಪ್ರದಾಯಿಕವಾಗಿ ತಲೆ ತಲಾಂತರಗಳಿಂದ ನೆಲೆಸಿರುವ ಸಿಖ್ ಹಾಗು ಕೆಲವು ಗುಜರಾತಿ ಕುಟುಂಬಗಳು, ಜೊತೆಗೆ ಎನ್.ಎಚ್.ಎಸ್. ವೈದ್ಯರ ಗುಂಪಿನೊಂದಿಗೇ ಸಾಕಷ್ಟು ಇಂಜಿನಿಯರ್ ಕುಟುಂಬಗಳೂ ಬಂದು ನೆಲೆ ನಿಂತಿವೆ. ದಕ್ಷಿಣ ಭಾರತದಿಂದ ಸದ್ಯ ವಲಸೆ ಬಂದವರನ್ನು ಒಟ್ಟುಗೂಡಿಸುವ ಪ್ರಯತ್ನವಾಗಿ ಸೌತ್ ಇಂಡಿಯನ್ ಅಸೋಸಿಯೇಷನ್ (ಸಿಯಾ) ಎಂಬ ಸಂಸ್ಥೆಯನ್ನು ಸುಮಾರು ೯ ವರ್ಷಗಳ ಹಿಂದೆ ಹುಟ್ಟು ಹಾಕಿದ್ದಾಯ್ತು. ರೋಲ್ಸ್ ರಾಯ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿದ್ದ ಹಲವಾರು ಕನ್ನಡಿಗರನ್ನೆಲ್ಲ ಸಿಯಾ ದೀಪಾವಳಿಗೆ ಹುರಿದುಂಬಿಸಿ ಕರೆದುಕೊಂಡು ಹೋಗ್ತಿದ್ದೆ. ಆದರೆ ಅಲ್ಲಿ ಕನ್ನಡ ಕಾರ್ಯಕ್ರಮಗಳೇ ಇರ್ತಿರಲಿಲ್ಲ.

ಶ್ರೀದೇವಿ: ನಾನು ಬಂದ ವರ್ಷ ಸಿಯಾ ದೀಪಾವಳಿಯಲ್ಲಿ ಕನ್ನಡದವರ ಪರಿಚಯವಾದ್ರೂ ಕನ್ನಡ ಪ್ರೋಗ್ರಾಮ್ ಇಲ್ದೆ ಇರೋವಾಗ ಊಟ ಸಪ್ಪೆಯೆನಿಸ್ತು. ಅಲ್ಲೇ ನನಗೆ ಹರೀಶ್ ಪರಿಚಯ ಆಗಿದ್ದು. ಆ ವರ್ಷ ಕನ್ನಡದವ್ರದ್ದೇ ಯುಗಾದಿ ಮಾಡೋಣ ಅಂತ ಯೋಜನೆ ಹಾಕಿದ್ವು.

img-20161121-wa0045
ಯಕ್ಷಗಾನದ ಕಿರೀಟ

ಹರೀಶ್: ಯುಗಾದಿ ಕಾರ್ಯಕ್ರಮದ ಸ್ಟೇಜ್ ಅಲಂಕಾರಕ್ಕೆ ಚೆನ್ನಾಗಿರುತ್ತೆ ಅಂತ ಹಳ್ಳಿ ಮನೆ ಕಟ್ದೆ. ಕಟ್ಟೋವಾಗ ಹುರುಪು ಬರಲಿ ಅಂತ, ವಾಟ್ಸ್ಯಾಪ್ ಗುಂಪಿನಲ್ಲಿ ಚಿತ್ರಗಳನ್ನ ಹಾಕ್ದೆ. ಅದಕ್ಕೆ ಬಣ್ಣ ಬಳಿದು ಸಿಂಗಾರ ಮಾಡೋ ಕೆಲಸಕ್ಕೆ ಕನ್ನಡದವರೆಲ್ಲ ನಾ ಮುಂದು, ತಾ ಮುಂದು ಅಂತ ಬಂದಾಗ ನಾನು ದಂಗು ಬಡದ್ಹೋದೆ. ಆ ವರ್ಷದ ಯುಗಾದಿ, ಡಾರ್ಬಿ ಕನ್ನಡಿಗರನ್ನು ಒಗ್ಗೂಡಿಸ್ತು ಅಂತ ಹೇಳಬಹುದು.

ಶ್ರೀ, ಹ: ಆ ಹಳ್ಳಿ ಮನೆ ಹಿಂದಿಟ್ಕೊಂಡು ಸಿಯಾ ಬಳಗಕ್ಕೆ ಕನ್ನಡದ ಹಳ್ಳಿ ಜೀವನ, ಹಬ್ಬದ ಸಡಗರ ತೋರಿಸುವ ಉದ್ದೇಶದಿಂದ ಬೆಳಕಿಗೆ ಬಂದಿದ್ದು  ‘ಕರ್ನಾಟಕ ದರ್ಶನ’ ರೂಪಕ.  ಕರ್ನಾಟಕದ ಹಳ್ಳಿಯ ದೈನಂದಿನ ಜೀವನದ ನೋಟ ತೋರಿಸಬೇಕೆಂಬ ಕನಸಿನ ಕೂಸು ಅದು.

img-20161121-wa0052
ಶ್ರೀದೇವಿ ತಯಾರಿಸುತ್ತಿರುವ ತಟ್ಟೀರಾಯ ಮುಖವಾಡಗಳು

ನಾವು ಮಾಡಿದಂಥ ಎರಡೂ ಕಾರ್ಯಕ್ರಮಗಳಿಗೆ ಹಿನ್ನಲೆ ಸಂಗೀತ ಹೊಂದಿಸಿದ್ದು ದೊಡ್ಡ ತಲೆನೋವಿನ ವಿಚಾರ. ಹಾಡು ಇಂಪಾಗಿ, ಕುಣಿಸುವಂತಿರಬೇಕು; ಸಂದರ್ಭಕ್ಕೆ ಸರಿಯಾಗಿರಬೇಕು; ನೃತ್ಯಕ್ಕೆ ಹೊಂದಿಸೋ ಹಾಗಿರ್ಬೇಕು.  ಹಾಡಿನ ಹುಡುಕಾಟಕ್ಕೇ ಒಂದು ವಾರ ಪ್ರತಿ ರಾತ್ರಿ ೨-೩ ಗಂಟೆವರೆಗೆ ಪರದಾಡಿದ್ದೇವೆ. ಹಾಡುಗಳನ್ನು ಆರಿಸಿದ ಮೇಲೆ, ಒಳ್ಳೆ ಗುಣಮಟ್ಟದ್ದನ್ನ ಹುಡುಕೋದು, ಅದನ್ನ ಬೇಕಷ್ಟೇ ಉದ್ದಕ್ಕೆ ಕತ್ತರಿಸೋದು ದೊಡ್ಡ ಪರದಾಟ.

ಶ್ರೀದೇವಿ: ಹಾಡಿನ ಅರಸಾಟ ಮುಗಿದ ಮೇಲೆ ಅದಕ್ಕೆ ಬೇಕಾಗಿದ್ದು ನೃತ್ಯ ಸಂಯೋಜನೆ.  ವೇಷ-ವಿಭೂಷಣಗಳ ಆಯ್ಕೆ. ‘ಕರ್ನಾಟಕ ದರ್ಶನ’ದ ನೃತ್ಯ ಸಂಯೋಜನೆಗೆ ನಮ್ಮಲ್ಲೇ ಇದ್ದ ಪೃಥಾ ತುಂಬಾ ಸಹಾಯ ಮಾಡಿದ್ರು. ‘ಮೈಸೂರು ದಸರಾ’ಕ್ಕೆ ಅಮೆರಿಕಾದಲ್ಲಿರೋ ತಂಗಿ, ಲಂಡನ್ ನಲ್ಲಿರೋ ನಾದಿನಿ, ಹೀಗೆ ಹತ್ತಿರದವರು, ದೂರದವರನ್ನ ಕಾಡಿ-ಬೇಡಿ, ಯಾವ ಹೆಜ್ಜೆಗಳೂ ಪುನರಾವರ್ತಿತವಾಗದಂತೆ ನೃತ್ಯ ಸಂಯೋಜನೆ ಮಾಡಬೇಕಾಯ್ತು. ಇದನ್ನೆಲ್ಲಾ ವಿಡಿಯೋ ಮಾಡಿ ಇಟ್ಟುಕೊಂಡಾಯ್ತು.

ಶ್ರೀ, ಹ: ನಮ್ಮಲ್ಲಿ ಯಾರೂ ವೃತ್ತಿನಿರತ ಕಲಾವಿದರಲ್ಲ, ಹೆಚ್ಚಿನವರು ಪ್ರವೃತ್ತಿ ಕಲಾವಿದರೂ ಅಲ್ಲ. ಅಂಥದ್ದರಲ್ಲಿ ಪ್ರತಿಯೊಬ್ಬರೂ ಶಕ್ತಿ ಮೀರಿ ಕಾರ್ಯಕ್ರಮವನ್ನ ಯಶಸ್ವಿ ಮಾಡಿ, ಸಭಿಕರೆಲ್ಲರ ಮೆಚ್ಚುಗೆ ಪಡೆದಿದ್ದು ಈ ವರ್ಷ ದಸರಾ ಕಾರ್ಯಕ್ರಮದ ಯೋಜನೆ ಹಾಕೋದಕ್ಕೆ ಸ್ಫೂರ್ತಿ  ಆಯ್ತು. ಹಾಗೇ ಕನ್ನಡದ ಶ್ರೀಮಂತ ಪರಂಪರೆ, ಚರಿತ್ರೆ ಇವೆರಡನ್ನೂ ನಮ್ಮ ಮಕ್ಕಳಿಗೆ, ಜನರಿಗೆ ತೋರಿಸುವ ವಿಚಾರ ಬಂತು. ಮೈಸೂರು ದಸರಾ ಜಗತ್ಪ್ರಸಿದ್ಧಿ. ದಸರಾ ಮೆರವಣಿಗೆ ನಾಡಿನ ಎಲ್ಲ ಜಿಲ್ಲೆಗಳ ಸೊಗಡಿನ ಪಕ್ಷಿ ನೋಟ ಬಂದವರಿಗೆ ತೋರಿಸುತ್ತೆ. ಅದನ್ನೇ ಮಾಡಿದರೆ ಸೂಕ್ತ ಅಂತ ಸಾಕಷ್ಟು ಚರ್ಚೆ ಮಾಡಿ ನಿರ್ಧರಿಸಿದ್ವು. ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ವೇದಿಕೆಯ ಮೇಲೆ ಸೀಮಿತ ಅವಧಿಯಲ್ಲಿ ಪ್ರತಿನಿಧಿಸೋದು ತುಂಬಾನೇ ಕಷ್ಟ. ಹಾಗಾಗಿ ಕೆಲವೇ ಪ್ರಾಂತ್ಯಗಳನ್ನು ಆರಿಸಿಕೊಂಡ್ವಿ. ಪ್ರತಿಯೊಂದು ಪ್ರಾಂತ್ಯದ್ದೂ ಮುಖ್ಯ ಪಾರಂಪರಿಕ/ಚಾರಿತ್ರಿಕ ಛಾಪನ್ನು ಪ್ರತಿನಿಧಿಸುವಂತೆ ರೂಪಕ/ನೃತ್ಯಗಳ ಪ್ಲಾನ್ ಹಾಕಿದ್ವಿ.img-20161121-wa0050

ಹರೀಶ್: ಇದಕ್ಕೆ ಸುಮಾರು ೬೦ ಜನ ಬೇಕಾಗೋದ್ರಿಂದ ಎಲ್ಲಾರನ್ನೂ ಒಂದೇ ಸಲ ಸೇರಿಸಿ ಪ್ರ್ಯಾಕ್ಟೀಸ್ ಮಾಡ್ಸೋದು ಅಂದ್ರೆ ಕಪ್ಪೆಗಳನ್ನ ತಕ್ಕಡಿಗೆ ಹಾಕಿದ ಹಾಗೆ ಅನ್ನೋ ಅಂಥ ಅನುಭವ ಆಗಿತ್ತು, ಕರ್ನಾಟಕ ದರ್ಶನ ತಯ್ಯಾರಿಯಲ್ಲಿ. ಸಾಮರ್ಥ್ಯ, ದೇಹಕಟ್ಟು ಇವನ್ನೆಲ್ಲ ಗಮನದಲ್ಲಿಟ್ಟಕೊಂಡು, ನಾನು, ಶ್ರೀದೇವಿ ಪಾತ್ರಧಾರಿಗಳನ್ನು ಆಯ್ಕೆ ಮಾಡಿದ್ವಿ. ಹೆಚ್ಚಿನವರನ್ನೆಲ್ಲ ಒಂದಿನ ಒಟ್ಟು ಹಾಕಿ ಯೋಜನೆಯನ್ನ ವಿವರಿಸಿ ಪಾತ್ರಗಳನ್ನೂ ಹಂಚಿದ್ದಾಯ್ತು. ಪ್ರತಿ ಒಂದು ರೂಪಕಕ್ಕೂ ಬೇರೆ ಬೇರೆ ವ್ಹಾಟ್ಸ್ಯಾಪ್ ಗುಂಪು ಮಾಡಿ, ಅವರ  ಗುಂಪಿಗೆ ಮಾತ್ರ ಬೇಕಾದ ನೃತ್ಯದ  ತುಣುಕನ್ನ ಕಳ್ಸಿದ್ವಿ. ಗುಂಪುಗಳಿಗೆ ಅವರವರ ತಾಲೀಮಿನ ಜವಾಬ್ದಾರಿ ಕೊಟ್ಟಿದ್ರಿಂದ ಮೇಲ್ವಿಚಾರಕರಾದ ನಮ್ಮಿಬ್ಬರಿಗೆ ಬಾಕಿ ಉಳಿದ ವೇಷ-ಭೂಷಣಗಳ ತಯಾರಿಗೆ ಸ್ವಲ್ಪ ಅವಕಾಶವಾಯ್ತು.

ಶ್ರೀ, ಹ: ಕರ್ನಾಟಕ ದರ್ಶನ, ದಸರಾ ಎರಡೂ ಕಾರ್ಯಕ್ರಮಗಳ ವೇಷ-ಭೂಷಣ, ಕತ್ತಿ, ಕಠಾರಿ, ಮನೆ, ಹಸು, ಗಾಡಿ ಹೀಗೆ ಉಪಯೋಗಿಸಿದ ಹಲವಾರು ವಸ್ತುಗಳನ್ನ ಕಲ್ಪಿಸಿ, ತಯಾರಿಸಿದ್ದು ನಮ್ಮಿಬ್ಬರ ಪರಿಶ್ರಮವಾದರೂ, ನಮ್ಮ ಗುಂಪಿನ ಸದಸ್ಯರ ಸಹಾಯವಿಲ್ದೇ ಅದೆಲ್ಲ ಸಾಧ್ಯವಾಗ್ತಿರಲಿಲ್ಲ.

ಹರೀಶ್: ಎಲ್ಲದಕ್ಕಿಂತ ಹೆಚ್ಚು ಸವಾಲೊಡ್ಡಿದ ಕಾರ್ಯ – ದಸರಾ ಆನೆಯನ್ನ ಸಾಕಾರಗೊಳಿಸಿದ್ದು. ಮೊದಲಲ್ಲಿ ನೆರಳಿನಾಟವಾಗಿ ಅಂಬಾರಿ-ಆನೆ ತೋರಿಸೋದು ಸುಲಭ ಅನ್ನಿಸ್ತು. ಆದರೆ ಅದು ಕಳೆ  ಕಟ್ಟೋದಿಲ್ಲ ಅನ್ನಿಸ್ತು. ತಂತಿಗಳನ್ನೆಲ್ಲ ಕಟ್ಟಿ ಮಾಡ್ಬಹುದಲ್ಲಾ ಅಂತಾನೂ ವಿಚಾರ ಬಂತು. ಅಂತರ್ಜಾಲ ಜಾಲಾಡಿದಾಗ ನಾಟಕಕ್ಕೆ ಪ್ರಾಪ್ಸ್ ಮಾಡುವ ಕಂಪನಿ ಪತ್ತೆಯಾಯ್ತು. ಅವರಿಗೆ ದುಂಬಾಲು ಬಿದ್ದಾಗ, ದಶಕಗಳ ಹಿಂದೆ ಅವರೇ ಮಾಡಿದ್ದ ಆನೆ ವೇಲ್ಸ್ ನಲ್ಲಿರೋದು ಪತ್ತೆಯಾಯ್ತು. ಅಲ್ಲಿಗೆ ಹೋಗಿ ಜೀರ್ಣಾವಸ್ಥೆಯಲ್ಲಿದ್ದ ಆನೆ ಓಡಿಸಿಕೊಂಡು ಬಂದೆ. ಅದರ ಜೀರ್ಣೋದ್ಧಾರ ಮಾಡಿ, ಅದಕ್ಕೆ ಹಬ್ಬದ ಆನೆಯ ಕಳೆ ತಂದಾಯ್ತು.

img-20161122-wa0002
ಆನೆ ಹಾಗೂ ಇತರ ರಂಗ ಪರಿಕರಗಳ ತಯ್ಯಾರಿಯಲ್ಲಿ ಹರೀಶ್

ಶ್ರೀ, ಹ: ಹೇಳ್ತಾ ಹೋದ್ರೆ, ಮುಗಿಯದ ಕಥೆ ಇದು. ಕಾರ್ಯಕ್ರಮ ಕೊಡೋ ದಿನದವರೆಗೂ ಒಂದಲ್ಲ ಒಂದು ತೊಂದರೆಗಳು, ಸಡ್ಡು ಹೊಡೆದು ನಿಂತ ಸಮಸ್ಯೆಗಳು… ಇವನ್ನೆಲ್ಲ ಎರಡು ತಿಂಗಳ ಕಾಲ ಹಗಲುರಾತ್ರಿ ಉಂಡು-ಹೊದ್ದು ಮಲಗಿದ್ದೇವೆ. ನಮ್ಮ ಕರೆಗೆ ಓಗೊಟ್ಟು, ಹೆಗಲಿಗೆ ನಿಂತು ಪ್ರೋತ್ಸಾಹಿಸಿದವರು ಲೋಕೇಶ್ ಗಂಗೊಳ್ಳಿಯಂಥ ಆತ್ಮೀಯರು.

ಕರೆದಾಗಲೆಲ್ಲಾ ಬಂದು, ಬೇಸರವಿಲ್ಲದೇ ತಾಲೀಮು ಮಾಡಿ ಪಾತ್ರವಹಿಸಿದ ಗೆಳೆಯ-ಗೆಳತಿಯರಿಲ್ಲದೆ ಈ ಕಾರ್ಯಕ್ರಮ ಯಶಸ್ವಿ ಆಗ್ತಿರಲಿಲ್ಲ. ನಮ್ಮ ಮಹಿಳಾ ಕೂಟ ‘ಅನ್ನಪೂರ್ಣೆ’ ಯಾಗಿರದಿದ್ದರೆ ತಾಲೀಮಿನ ಸಂಜೆಗಳಿಗೆ ರಸವಿರುತ್ತಿರಲಿಲ್ಲ. ಡಾರ್ಬಿ ಕನ್ನಡಿಗರ ಒಪ್ಪಂದದ, ಒಗ್ಗಟ್ಟಿನ ಉತ್ಸಾಹ-ಪ್ರೋತ್ಸಾಹ ಇಲ್ಲದೆ ಯು.ಕೆ ಕನ್ನಡಿಗರಲ್ಲಿ ಕರ್ನಾಟಕದ ಜಾನಪದ ಕಲೆ, ಸೊಗಡಿನ ಸುವಾಸನೆ ಹರಡೋಕ್ಕೆ ಆಗ್ತಿರಲಿಲ್ಲ. ಕನ್ನಡ ಬಳಗದ ಕಾರ್ಯಕ್ರಮದಲ್ಲಿ ಕಡೆ ಕಾಲದಲ್ಲಿ ಥಟ್ಟಂತ ಒಪ್ಕೊಂಡು ಅರುಣ್ ಅರಸ್ ಹಾಗೂ ಸಾಹಿಲ್ ಹೆಗ್ಡೆ ಆನೆಗೆ ಜೀವ ತರದೇ ಇದ್ದಿದ್ರೆ ಮಕ್ಕಳು ಮರಿಗಳೆಲ್ಲ ಬೆಕ್ಕಸ ಬೆರಗಾಗ್ತಿರಲಿಲ್ಲ. ಆ ಯುಗಾದಿ ಹಬ್ಬಕ್ಕೆ ಹಳ್ಳಿ ಮನೆ ಕಟ್ಟದೇ ಇದ್ದಿದ್ರೆ, ಕರ್ನಾಟಕ ದರ್ಶನಾನೂ  ಇರ್ತಿರಲಿಲ್ಲ, ಮೈಸೂರ್ ದಸರಾನೂ ಇರ್ತಿರಲಿಲ್ಲ!

  • ರಾಮ್ ಶರಣ್       – (ಚಿತ್ರಗಳನ್ನು ಒದಗಿಸಿದ್ದು ಶ್ರೀದೇವಿ ಮತ್ತು ಹರೀಶ್)

    ಕಿರು ವಿಡಿಯೋ/short video

“ಕರ್ನಾಟಕ ದರ್ಶನ” ಹಾಗೂ “ಮೈಸೂರು ದಸರಾ” ಹೇಗಿತ್ತು?

ಲಕ್ಷ್ಮೀನಾರಾಯಣ ಗುಡೂರ ಬರೆದ ವರದಿ 

ಡಾರ್ಬಿ ದೀಪಾವಳಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಡಾರ್ಬಿ ಕನ್ನಡ ಸಂಘದ ಪ್ರಸ್ತುತಿಗಳಾದ “ಕರ್ನಾಟಕ ದರ್ಶನ” ಹಾಗೂ “ಮೈಸೂರು ದಸರಾ”ಗಳ ಬಗೆಗಿನ ನನ್ನ ಚಿಕ್ಕ ವರದಿ.

ಡಾರ್ಬಿ ಕನ್ನಡ ಸಂಘದ ಮೊದಲನೆಯ ಕಾರ್ಯಕ್ರಮವಾದ “ಕರ್ನಾಟಕ ದರ್ಶನ”ದ ಪ್ರಾರಂಭ ಹಳ್ಳಿಯ ಮನೆಯ ಸುಂದರ ಹಿನ್ನೆಲೆಯಲ್ಲಿ ಆಯಿತು. ಸಹಜಸುಂದರ ಮುಂಜಾವಿನ ಚಿತ್ರಣದೊಂದಿಗೆ ಹವ್ಯಾಸಿ ಕಲಾವಿದರು ಕಾರ್ಯಕ್ರಮವನ್ನು ಆರಂಭಿಸಿದರು. ಅದರೊಂದಿಗೆ ಹಳ್ಳಿಯ ದೈನಂದಿನ ಜೀವನದ ಮೊದಲ ಪುಟವನ್ನು ನಮ್ಮ ಮುಂದೆ ತಂದರು. ಕುಂಟಬಿಲ್ಲೆಯಂತಹ ಮಕ್ಕಳ ಆಟಗಳು ಮುಖ್ಯ ದೃಶ್ಯಗಳೊಂದಿಗೆ ಮಧ್ಯಮಧ್ಯ ಪಾಯಸದಲ್ಲಿಯ ಒಣಹಣ್ಣುಗಳಂತೆ ರುಚಿಯನ್ನು ಹೆಚ್ಚಿಸಿದವು.

ಕೋಲಾಟ, ಒರಳು-ಒನಕೆಗಳೊಂದಿಗೆ ಬತ್ತ ಕುಟ್ಟುವ ಮಹಿಳೆಯರು, ಹೊಲ ಉಳುವ, ಬಿತ್ತನೆಯ, ಸುಗ್ಗಿಕಾಲದ ಚಿತ್ರಣ, ಬಳೆಗಳನ್ನು ಮಾರುವ ಬಳೆಗಾರ, ಹೂಮಾರುವವಳು ಇತ್ಯಾದಿಗಳೊಂದಿಗೆ ಕರ್ನಾಟಕದ ಜಾನಪದ ಸೊಗಡನ್ನು ನೋಡುಗರಿಗೆ ಹಂಚಲಾಯಿತು. ನಂದಿಕೋಲು ಕುಣಿತ, ಕೋಲುಮಂಡೆ ಜಂಗಮರು ಮತ್ತು ಕೀಲುಕುದುರೆ ನೃತ್ಯಗಳು ಕರುನಾಡಿನ ಜಾನಪದ ನೃತ್ಯಗಳ ಪರಂಪರೆಯನ್ನು ನೆನಪಿಸಿದವು. ರಂಗದ ಮೇಲಿನ ದೃಶ್ಯಗಳಿಗೆ ತಕ್ಕಂತೆ ಸುಂದರವಾದ ಹಿನ್ನೆಲೆಯ ಹಾಡುಗಳನ್ನು ಹೊಂದಿಸಲಾಗಿತ್ತು. ಚೆಲ್ಲಿದರೊ ಮಲ್ಲಿಗೆಯಾ, ಬಳೆಗಾರನ ಹಾಡು, ಸುಗ್ಗಿಕಾಲ ಹಿಗ್ಗಿಬಂದಿತೊ, ಶುಭವಾಗತೈತಮ್ಮೊ (ಜನುಮದ ಜೋಡಿ ಚಿತ್ರದ ಗೀತೆ) ಮುಂತಾದ ಹಿನ್ನೆಲೆಯ ಹಾಡುಗಳು ಪ್ರೇಕ್ಷಕರನ್ನು ೮೦-೯೦ರ ದಶಕದ ಜನಪ್ರಿಯ ಹಾಡುಗಳ ಕಾಲಕ್ಕೆ ಕರೆದೊಯ್ದವು.

ಒಟ್ಟಿನಲ್ಲಿ ೩೨ ಬೇರೆ ಬೇರೆ ವಯೋಮಾನದ ಕಲಾವಿದರನ್ನೊಳಗೊಂಡ ಈ ಕಾರ್ಯಕ್ರಮ ತುಂಬಾ ಸುಂದರವಾಗಿ ಮೂಡಿಬಂದಿತು. ಎಲ್ಲಾ ಕಲಾವಿದರ, ನಿರ್ದೇಶಕರ ಪ್ರಯತ್ನ ಯಶಸ್ವಿಯಾಯಿತೆಂದೇ ಹೇಳಬೇಕು.

ಕಿರು ವಿಡಿಯೋ/short video

ಎರಡನೆಯ ಪ್ರಸ್ತುತಿ “ಮೈಸೂರು ದಸರಾ” – ಇದರಲ್ಲಿ ೬೪ ಕಲಾವಿದರಿದ್ದು, ಇಡೀ ದೃಶ್ಯಕಾವ್ಯವನ್ನು ಸೀಮ್ಲೆಸ್ (seamless) ಆಗಿ ಹೆಣೆಯಲಾಗಿತ್ತು. ನಿರ್ವಾಹಕರು ಮೊದಲೇ ಹೇಳಿದಂತೆ ತಂಡಕ್ಕೆ ದೊರೆತ ಸಮಯದ ಪರಿಧಿಯಲ್ಲಿ ಕೆಲವೇ ಜಿಲ್ಲೆಗಳನ್ನು ಪ್ರತಿನಿಧಿಸುವುದು ಸಾಧ್ಯವಿದ್ದು, ದೊರೆತ ಸಮಯವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಲಾಗಿತ್ತು. “ಕರ್ನಾಟಕ ದರ್ಶನ” ಮಾಡಿಸಿ, ಮುಂದಿನ, ಅದಕ್ಕೂ ದೊಡ್ಡ, ಕಾರ್ಯಕ್ರಮ ಹೇಗಿರಬಹುದೆಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿಸುವಲ್ಲಿ ಡಾರ್ಬಿ ಕನ್ನಡ ಸಂಘ ಯಶಸ್ವಿಯಾಗಿತ್ತು.

ಬೆಂಗಳೂರಿನ ಕರಗದೊಂದಿಗೆ ಆರಂಭವಾದ ದಸರಾ ಮೆರವಣಿಗೆ, ಕೊಡಗಿನ ಸಾಂಪ್ರದಾಯಿಕ ನೃತ್ಯ, ಮಂಗಳೂರಿನ ಮೀನುಗಾರರ ಹಾಡು, ಚಿತ್ರದುರ್ಗದ ಡೊಳ್ಳುಕುಣಿತ, ಉತ್ತರ-ಪಶ್ಚಿಮ ಕರ್ನಾಟಕದ ಲಾವಣಿ ಮತ್ತು ಹಾಸನದ ವೀರಗಾಸೆಗಳೊಂದಿಗೆ ಮುಂದುವರೆಯಿತು. ಆಯಾ ಜಿಲ್ಲೆಗಳ ಜಾನಪದ ನೃತ್ಯಗಳೊಂದಿಗೆ ಅಲ್ಲಲ್ಲಿಯ ಇತಿಹಾಸದ ಪುಟಗಳನ್ನು, ದಂತಕಥೆ, ಪುರಾಣಕಥೆಗಳನ್ನು ತಳುಕು ಹಾಕಿದ್ದು ಮನಸ್ಸಿಗೆ ಮೆಚ್ಚುಗೆಯಾಯಿತು. ಉದಾಹರಣೆಗೆ – ಚಿತ್ರದುರ್ಗದ ಒನಕೆ ಓಬವ್ವ, ಕಿತ್ತೂರಿನ ರಾಣಿ ಚೆನ್ನಮ್ಮ, ಮೈಸೂರಿನ ಚಾಮುಂಡಿ-ಮಹಿಷರ ಕಾಳಗ ಇತ್ಯಾದಿ. ಬೇಲೂರು – ಹಳೇಬೀಡಿನ ಬಾಲೆಯರ ಶಾಸ್ತ್ರೀಯ ನೃತ್ಯ, ಲಾವಣಿ ಮತ್ತು ಇವೆಲ್ಲದರ ಜೊತೆಗೆ ಸಂದರ್ಭಕ್ಕೆ ತಕ್ಕಂತೆ ಅಳವಡಿಸಿದ್ದ ಹಿನ್ನೆಲೆ ಸಂಗೀತ, ನೋಡುಗರ ಕಣ್ಣು – ಮನಸ್ಸಿಗೆ ಮುದವನ್ನು ನೀಡಿದವು.

ಕೊನೆಯಲ್ಲಿ ಮೈಸೂರಿನ ದಸರಾ ಮೆರವಣಿಗೆ, ಆನೆ (ಅರ್ಜುನ) – ತಾಯಿ ಭುವನೇಶ್ವರಿ ಮಂಟಪದ ಅಂಬಾರಿಯೊಂದಿಗೆ ಸಂಪೂರ್ಣವಾಯಿತು. ಆನೆಯ ಮುಂದೆ ಮೈಸೂರಿನ ಮಹಾರಾಜರೇ ಸ್ವತಃ ನಡೆದು ಬಂದು ಎಲ್ಲರನ್ನು ವಂದಿಸಿದರು!

ಈ ಎರಡೂ ನೃತ್ಯಗೀತಗಳು ಯುಕೆ ಕನ್ನಡ ಬಳಗ ಆಯೋಜಿಸಿದ್ದ ೨೦೧೬ರ ಡಾರ್ಬಿ ದೀಪಾವಳಿ ಮಿಲನದ ಸಾಂಸ್ಕೃತಿಕ ಕಾರ್ಯಕ್ರಮದ ಹೈಲೈಟ್ಗಳಲ್ಲಿ ಒಂದಾಗಿದ್ದವೆಂದರೆ ತಪ್ಪೇನಿಲ್ಲ. ಅದರ ಯಶಸ್ಸಿನ ಪಾಲು ಪ್ರತಿಯೊಬ್ಬ ಕಲಾವಿದರನ್ನು ಸೇರಿ,  ನೃತ್ಯಗೀತಗಳ ಪರಿಕಲ್ಪನೆ ಮಾಡಿದ ಶ್ರೀದೇವಿ ವಲ್ಲೀಶ್ ಮತ್ತು ಹರೀಶ್ ರಾಮಯ್ಯ, ನಿರ್ದೇಶಕಿ ಶ್ರೀದೇವಿ ವಲ್ಲೀಶ್ ಮತ್ತು ತಾಂತ್ರಿಕ ನಿರ್ವಾಹಕ ಹರೀಶ್ ರಾಮಯ್ಯ ಅವರೆಲ್ಲರದೂ ಹೌದು. ಆನೆಯಲ್ಲಿ ಅಡಗಿ, ಕಣ್ಣಿಲ್ಲದ ಆನೆಯ ಕಾಲುಗಳಾಗಿ, ಭುವನೇಶ್ವರಿಯ ಅಂಬಾರಿ ಹೊತ್ತು ಪೂರ್ತಿ ಮೆರವಣಿಗೆಯನ್ನು ಮುಗಿಸಿದ ಸಾಹಿಲ್ ಹೆಗ್ಡೆ ಹಾಗೂ ಅರುಣ ಅರಸ್ ಅವರನ್ನು ಮರೆಯುವಂತಿಲ್ಲ.

ಅಷ್ಟು ದೊಡ್ಡ ಗುಂಪನ್ನು, ಸಣ್ಣ ಸಣ್ಣ ಗುಂಪುಗಳನ್ನಾಗಿ ವಿಂಗಡಿಸಿ, ಪ್ರತಿ ಗುಂಪಿನ ನೃತ್ಯ – ಸಂಗೀತಗಳ ಅಭ್ಯಾಸವನ್ನು ಬೇರೆ ಬೇರೆಯಾಗಿ ಮಾಡುವಂತೆ ನೋಡಿಕೊಂಡು, ನಂತರ ಅವೆಲ್ಲ ಬಿಡಿಭಾಗಗಳನ್ನು flat-pack furnitureನಂತೆ ಚೊಕ್ಕಟವಾಗಿ ಜೋಡಿಸಿ ರಂಗದ ಮೇಲೆ ಪ್ರಸ್ತುತ ಪಡಿಸುವುದು ಚಿಕ್ಕ ಕಾರ್ಯವೇನಲ್ಲ.

ಅಂದು ನಡೆದ ಕಾರ್ಯಕ್ರಮ ಹೆಸರಿಗೆ ದೀಪಾವಳಿಯದಾದರೂ, ಕಣ್ಮನ ಸೂರೆಗೊಂಡ ಕರುನಾಡನ್ನು ಎತ್ತಿಹಿಡಿವ ದೃಶ್ಯಗೀತಗಳಿಂದ ಆ ದಿನವನ್ನು ಹೊರನಾಡ ಕನ್ನಡಿಗರಿಗಾಗಿ “ನಾಡಹಬ್ಬ”ವನ್ನಾಗಿ ಮಾರ್ಪಡಿಸಿದ್ದವೆಂದು ಹೇಳಿದರೆ ತಪ್ಪೇನಿಲ್ಲ. ಈ ನಿಟ್ಟಿನಲ್ಲಿ ಯಶಸ್ವಿಯಾದ ಡಾರ್ಬಿ ಕನ್ನಡ ಸಂಘದ ಎಲ್ಲ ೬೪ ಉತ್ಸಾಹಿ ಕಲಾವಿದರು, ಶ್ರೀದೇವಿ ವಲ್ಲೀಶ್ ಹಾಗೂ ಹರೀಶ್ ರಾಮಯ್ಯ ಅವರಿಗೆ, ನೋಡಿ ಆನಂದಿಸಿದ ಪ್ರೇಕ್ಷಕರ ಪರವಾಗಿ ನನ್ನ ಅಭಿವಂದನೆಗಳು ಮತ್ತು ಅಭಿನಂದನೆಗಳು.

  • ಲಕ್ಷ್ಮೀನಾರಾಯಣ ಗುಡೂರ

 

ಎಲ್ಲರನ್ನೂ ತಲುಪಿದ ‘ದೀಪಾವಳಿ ೨೦೧೬’; KB UK Deepavali 2016 – Something for everyone!

ಕಳೆದ ವಾರ ನಾವು ಹೇಳಿದ್ವು – ಕನ್ನಡ ಬಳಗ ಯು. ಕೆ. ನಡೆಸಿದ ‘ದೀಪಾವಳಿ ೨೦೧೬’ ದಿನದ ಕಾರ್ಯಕ್ರಮಗಳ ವರದಿಗಳನ್ನ ಈ ವಾರ ಪ್ರಕಟಿಸುತ್ತೀವಿ ಅಂತ. ಬರೀ ವರದೀನಾ?! ಛೆ, ಇಲ್ಲ. ಹಿರಿಯರಿಗೆ ನಮನ, ಸುಮಧುರ ಹಳೆ ನೆನಪು, ಒಳನೋಟ, ಕಿರುನೋಟ, ಇಣುಕುನೋಟ, ಮೆಚ್ಚುಗೆ, ಹೀಗಿತ್ತು ಅನ್ನೋ ನಿರೂಪಣೆ, ಹೌದು ಹಾಗಿತ್ತು, ನಿಜ ಎಂಬ ಖಾತ್ರಿ ಮಾತು… ಏನೆಲ್ಲಾ ಇದೆ ಇವತ್ತಿನ ಈ ಪ್ರಕಟಣೆಯಲ್ಲಿ. ಎಷ್ಟೆಲ್ಲಾ ಜನರು ಒಟ್ಟುಗೂಡಿ ತರುತ್ತಿರುವ ಈ ಪ್ರಕಟಣೆ ಕನ್ನಡ ಬಳಗದ ಎಲ್ಲರಿಗೂ ಸೇರಿದ್ದು. ಜೊತೆಗೆ ವಿಡಿಯೋಗಳು ಸಹ ಇವೆ! ತಪ್ಪದೆ ಓದಿ, ನೋಡಿ, ಹಂಚಿಕೊಳ್ಳಿ. – ಸಂ.

ವಿಡಿಯೋ ನೋಡಿ; Please watch this video

ಇದೆಲ್ಲಾ ಇದೆ ಇಲ್ಲಿ!

  • “ಬಲು ವಿಶೇಷ, ಡಾ. ಅಭಯಾಂಬಾ ಆರ್ಯ ಮೂರ್ತಿಯವರ ಸನ್ಮಾನ” ಎಂದಿದ್ದಾರೆ, ಅರವಿಂದ ಕುಲಕರ್ಣಿ
  • ಡಾ.ಅಭಯಾಂಬಾ ಆರ್ಯ ಮೂರ್ತಿ ಕೊಟ್ಟ ಕನ್ನಡ ಬಳಗ ಬ್ಯಾಡ್ಜ್ – ಶ್ರೀವತ್ಸ ದೇಸಾಯಿ ನೆನಪಿಸಿಕೊಂಡಿದ್ದಾರೆ
  • ‘ಮನದಾಳದ ನುಡಿ’ಗಳ ಹಂಚಿಕೊಡಿದ್ದಾರೆ, ಸೌಭಾಗ್ಯ ಜಯಂತ್ ಮೇರ್ವೆ
  • “ಎಂಥಹ ಸುಂದರವಾದ ದೀಪಾವಳಿ ಸಮಾರಂಭ” ಎನ್ನುತ್ತಾರೆ, ಸರಸ್ವತಿ ಮಧು
  • ದೀಪಾವಳಿ ಹಬ್ಬದ ಸಂಭ್ರಮದ ಚಿಕ್ಕ ನಿರೂಪಣೆಯನ್ನ ಕೊಟ್ಟಿದ್ದಾರೆ, ಸವಿತ ಸುರೇಶ್

And…

*Deepavali KB UK 2016 – Fun Kannad-Eng Youth Programme – By Navya Anand
*Deepavali Event KB UK 2016: Something for everyone – By Rajath Satyaprakash     *Reflections on Children/Youth Programme – By Varuna & Surya

thumbnail_img-20161120-wa0006
ಚಿತ್ರ ಕೃಪೆ: ಸುರೇಶ್, ಬ್ರಾಡ್ಫೊರ್ಡ್

 

ವಿಡಿಯೋ ನೋಡಿ; Please watch this video

“ಬಲು ವಿಶೇಷ, ಡಾ. ಅಭಯಾಂಬಾ ಆರ್ಯ ಮೂರ್ತಿಯವರ ಸನ್ಮಾನ” – ಅರವಿಂದ ಕುಲಕರ್ಣಿ

೫ನೇ ನವೆಂಬರ್ ೨೦೧೬ರಂದು ಈ ವರುಷದ ದೀಪಾವಳಿ ಹಬ್ಬವನ್ನು ಕನ್ನಡ ಬಳಗ ಯು. ಕೆ. ಯ ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರು ಡಾರ್ಬಿ ಊರಲ್ಲಿ ಬಲು ಯಶಸ್ವಿಯಾಗಿ ನೆರವೇರಿಸಿದರು. ಈ ಸಮಾರಂಭದಲ್ಲಿ ಒಂದು ವಿಶೇಷ ಹೊಸ ಕಾರ್ಯಕ್ರಮವನ್ನು ಮಾಡಲಾಯಿತು. ಡಾ.ಅಭಯಾಂಬಾ ಆರ್ಯ ಮೂರ್ತಿಯವರು ಕನ್ನಡ ಬಳಗ ಯು. ಕೆ. ಗೆ ಅಪಾರ ನಿಸ್ವಾರ್ಥ ಸೇವೆ ಸಲ್ಲಿಸಿದ್ದನ್ನ ಸ್ಮರಿಸಿಕೊಂಡು ಅವರನ್ನು ಗೌರವಿಸಿದ್ದು, ಅವರಿಗೆಂದು ಒಂದು ವಿಶೇಷ ಸಮಾರಂಭ ಮಾಡಿದ್ದು ಶ್ಲಾಘನೀಯ. ಈ ಹೊಸ ಕಾರ್ಯಕ್ರಮವನ್ನು ಅಂದು ನೆರೆದಿದ್ದ ಎಲ್ಲಾ ಕನ್ನಡಿಗರು ಹೆಮ್ಮೆಯಿಂದ ವೀಕ್ಷಿಸಿ ಆನಂದದಿಂದ ಪಾಲ್ಗೊಂಡರು.

ಡಾ. ಅಭಯಾಂಬಾ ಆರ್ಯ ಮೂರ್ತಿಯವರು ಮೂಲತಃ ಕರ್ನಾಟಕದ ಚೆನ್ನಪಟ್ಟಣ ಎಂಬ ಊರಿನವರು. ತಮ್ಮ ವ್ಯೆದ್ಯಕೀಯ ಪದವಿಯನ್ನು ಮೈಸೂರಲ್ಲಿ ಮುಗಿಸಿಕೊಂಡು ೧೯೬೦ರಲ್ಲಿ ಇಂಗ್ಲೆಂಡಿಗೆ ಬಂದರು. ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಹಲವಾರು ವರುಷ ಆಸ್ಪತ್ರೆಗಳಲ್ಲಿ, ಜನರಲ್ ಪ್ರಾಕ್ಟಿಸ್ ಗಳಲ್ಲಿ ಕಳೆದು, ಕೆಲಸ ಮಾಡಿದರು. ಕೊನೆಗೆ ೧೯೭೮ರಲ್ಲಿ ಮಕ್ಕಳ ಆರೋಗ್ಯದ ವೃತ್ತಿಯನ್ನು ಕೈಗೆತ್ತಿಕೊಂಡು ನೊಟಿಂಗ್ಹ್ಯಾಮ್ ನಲ್ಲಿ ಮುಂದುವರೆದರು. ಈಗ ಅವರು ನಿವೃತ್ತರಾಗಿ ನಮ್ಮ ಕನ್ನಡ ಬಳಗದ ಸೇವೆ ಹಾಗೂ ಧರ್ಮದಾಯಕ (ಚಾರಿಟಬಲ್) ಸಂಸ್ಥೆಗಳಿಗೆ ಸಹಾಯ ಸಲ್ಲಿಸುತ್ತಿದ್ದಾರೆ.

ಅವರು ಕನ್ನಡ ಬಳಗದ ಸ್ಥಾಪನೆಯಿಂದ ಹಿಡಿದು ಇಲ್ಲಿಯವರಗೆ ಪ್ರತಿಯೊಂದು ಬಳಗದ ಕಾರ್ಯಕ್ರಮಗಳಿಗೆ ಕನ್ನಡದ ಅಭಿಮಾನ, ಉತ್ಸಾಹ, ಹೆಮ್ಮೆಗಳಿಂದ ಬಂದು ಚಿಕ್ಕ ಮಕ್ಕಳು, ಹಿರಿಯರು, ಎಲ್ಲಾ ಸದಸ್ಯರೊಂದಿಗೆ ಬೆರೆತು, ನಕ್ಕು, ನಲಿದದ್ದನ್ನ ನಾನು ಕಣ್ಣಾರೆ ಕಂಡಿರುವೆ.

ಡಾ. ಅಭಯಾಂಬಾ ಅವರು ಸದಾ ಹಿನ್ನಲೆಯಲ್ಲೇ ಇದ್ದುಕೊಂಡು ಹಲವಾರು ಮುಖ್ಯ ಕರ್ತವ್ಯಗಳಾದ ಬಳಗದ ಕಾರ್ಯದರ್ಶಿ, ಕನ್ನಡ ಕೈಪಿಡಿಯ ಸಹಾಯ ಕಾರ್ಯಕರ್ತರಾಗಿ ನಿಸ್ವಾರ್ಥತೆಯಿಂದ ದುಡಿದ್ದಾರೆ. ತಮಗೆ ಹೆಸರು, ಪ್ರಶಂಸೆ, ಹೊಗಳಿಕೆ ಬರಲಿ ಎಂದು ಯಾವತ್ತೂ ಬಯಸಲಿಲ್ಲ. ಈ ಎಲ್ಲಾ ವಿಷಯಗಳು ನಮ್ಮ ಕನ್ನಡ ಬಳಗದ ಸದಸ್ಯರಿಗೆಲ್ಲಾ ಗೊತ್ತಿರಲಿ ಎಂದು ಅವರ ಬಗ್ಗೆ ಈ ವರದಿಯಲ್ಲಿ ತಿಳಿಸಲು ನನಗೆ ಅಪಾರ ಹೆಮ್ಮೆ ಎನಿಸುತ್ತದೆ.

 – ಅರವಿಂದ ಕುಲಕರ್ಣಿ

ಡಾ. ಅಭಯಾಂಬಾ ಆರ್ಯ ಮೂರ್ತಿ ಕೊಟ್ಟ ಬ್ಯಾಡ್ಜ್ – ಶ್ರೀವತ್ಸ ದೇಸಾಯಿ

ಏನಿದು ಈ ಪುಟ್ಟ ಕನ್ನಡ ಬಳಗದ ಬ್ಯಾಡ್ಜ್ ? ಇದು ಅಭಯಾಂಬಾ ಆರ್ಯ ಮೂರ್ತಿ ಅವರು ಕನ್ನಡ ಬಳಗದ ಮೊದಲ ೧೫ ಆಜೀವ ಸದಸ್ಯರಿಗೆ ಕೊಟ್ಟದ್ದು. ೫ ಪೆನ್ಸ್ ನಾಣ್ಯಕ್ಕಿಂತಲೂ ಚಿಕ್ಕದಾದ ಬಹು ಸುಂದರವಾದ ಬಟನ್ ಬ್ಯಾಡ್ಜ್ ಅದು.fullsizerender ನಾನು ಅದನ್ನು ಜತನದಿಂದ ಕಾಪಾಡಿಕೊಂಡು ಹೆಮ್ಮೆಯಿಂದ ಇಟ್ಟುಕೊಂಡಿದ್ದೀನಿ (ಚಿತ್ರದಲ್ಲಿರುವುದು ವಾಣಿಯದು, ಕೆಂಪು). ಆಗ 1980ರ ದಶಕ. ಆ ಕಾಲದಲ್ಲಿ ಪುಟ್ಟ ಗಿಡವಾಗಿ ಬೆಳೆಯುತ್ತಿದ್ದ ಕನ್ನಡ ಬಳಗದಲ್ಲಿ ಕೆಲವೇ ಕೆಲವು ಸದಸ್ಯರು. ಯಾವುದೇ ಕಾರ್ಯಕ್ರಮ ಮಾಡುವಾಗಲೂ ಎಲ್ಲರೂ ತಮ್ಮ ತಮ್ಮ ಕೈಯಿಂದಲೇ ಹಣ, ಸೇವೆ, ಹೊಂದಾಣಿಕೆ ಮಾಡಬೇಕಿತ್ತು. ಪತ್ರ ವ್ಯವಹಾರ, ನೋಂದಣಿ, ಸ್ವಯಂಸೇವಕರ ಬಿಲ್ಲೆ – ಇವುಗಳಿಂದ ಹಿಡಿದು ಅಡಿಗೆಯವರೆಗೆ ಎಲ್ಲಕ್ಕೂ ನಾವೇ ನಾವು ಕೆಲವರು, ನಮ್ಮದೇ ಎಲ್ಲಾ ಕೆಲಸ. ಠೇವಣಿ ಹಣದ ವ್ಯವಸ್ಥೆ ಕೂಡ ಆಗ ಇದ್ದಿಲ್ಲ. ಇವೆಲ್ಲ ಸಮಯದಲ್ಲೂ, ಪ್ರತಿಯೊಂದು ವಿಭಾಗದಲ್ಲಿ ನಿಸ್ಪೃಹತೆಯಿಂದ ಮೈಮುರಿದು ದುಡಿದವರು ನಮ್ಮ ಅಭಯಾಂಬಾ ಅವರು.

ಎಲೆಯ ಮರೆಯ ಕಾಯಿಯಂತೆ ( ಹಣ್ಣಿನಂತೆ ಕೂಡ) ಕರ್ಮಣ್ಯೇ ವಾಧಿಕಾರಸ್ತೇ ಅನ್ನುತ್ತಿದ್ದ ಅಪರೂಪದ ಆ ವರ್ಗ ಅವರದು! ಈ ವಾರ ನಾನು ಅವರಿಗೆ ಫೋನಾಯಿಸಿ ನನ್ನ ಸಂತೋಷವನ್ನ ತಿಳಿಸಿದಾಗ ಸನ್ಮಾನ ಮಾಡಿಸಿಕೊಂಡಾಗಿನಿಂದ ತಾವೆಷ್ಟು  uncomfortable ಆಗಿದ್ದೀನಿ ಎಂದು ಅವರು ಹೇಳಿದರು. ಎಂಥಾ ಸರಳ ಜೀವಿ!

ಶ್ರೀವತ್ಸ ದೇಸಾಯಿ

 

ವಿಡಿಯೋ ನೋಡಿ; Please watch this video

ಮನದಾಳದ ನುಡಿಗಳ ಹಂಚಿಕೊಡಿದ್ದಾರೆ, ಸೌಭಾಗ್ಯ ಜಯಂತ್ ಮೇರ್ವೆ

ವಿದೇಶದಲ್ಲಿದ್ದು

ವಿವಿಧ ವೃತ್ತಿಯಲ್ಲಿದ್ದು

ವಿಧ ವಿಧ  ಆಸಕ್ತಿಯಿದ್ದು

ವಿಪರೀತ ಒತ್ತಡಗಳಿದ್ದು

ವಿಧ ವಿಧ ಬಾಷೆಯ ಅರಿವು ಅಂತರವಿದ್ದು

ವಿಚಾರ ವಿನಿಮಯಕೆ

ವಿಷಯ ಮಂಡಿಸಲಿಕೆ

ನನ್ನ ಅನಿಸಿಕೆಗಳು

ನಾನು ನನ್ನ ಮಗ ಡಾ|| ಆಶೀರ್ವಾದ್ ಮೇರ್ವೆ ಮನೆಗೆ ಮೊಮ್ಮಗಳ ಜೊತೆ ರಜೆ ಕಳೆಯಲು ಬಂದಿದ್ದೆ. ಈ ಸಂದರ್ಭದಲ್ಲಿ ನವೆಂಬರ್ 5, 2016 ರಂದು ನಡೆದ ಯು.ಕೆ ಕನ್ನಡ ಬಳಗ ಸಮಾರಂಭ ನೋಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ.

 ಸಮಾರಂಭವನ್ನ ಡಾರ್ಬಿ ರಿವರ್ ಸೈಡ್ ಸಭಾಂಗಣದಲ್ಲಿ ಏರ್ಪಡಿಸಿದ್ದರು. ಸಭಾಂಗಣ ಸುಂದರವಾಗಿತ್ತು, ತುಂಬಿ ತುಳುಕುತ್ತಿತ್ತು.  ಮಕ್ಕಳು, ಮಹಿಳೆಯರು ಅಲಂಕಾರ ಭೂಷಿತರಾಗಿದ್ದರು. ಎಲ್ಲಾ ವಯೋಮಾನದವರಲ್ಲಿನ ಉತ್ಸಾಹ ನೋಡಿ ಆನಂದವಾಯ್ತು.  ಬಿಸಿ ಬಿಸಿ ಕಾಫಿಯೊಂದಿಗೆ ಆಹ್ವಾನವಿತ್ತರು. ಲಕ್ಷ್ಮೀ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ಸ್ವಚ್ಛ ಕನ್ನಡದ ನಿರೂಪಣೆಯೊಂದಿಗೆ ಮುಂದುವರೆದು, ವೇದಿಕೆ ಅಲಂಕರಿಸಿದ ಎಲ್ಲರ ಭಾಷಣಗಳು ಚಿಕ್ಕದಾಗಿ ಚೊಕ್ಕವಾಗಿತ್ತು. ನಂತರ ಮಕ್ಕಳ ಕಾರ್ಯಕ್ರಮ ಸೊಗಸಾಗಿತ್ತೆಂದು ತಿಳಿದುಬಂತು. ನಾನು ಅದೇ ಸಮಯದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದ ಕವನ ವಾಚನ ಕೇಳಲು ಹೋಗಿದ್ದೆ.  ಕವನಗಳು ಚೆನ್ನಾಗಿ ಮೂಡಿಬಂದಿತ್ತು.  ಅಲ್ಲಿ ನಮ್ಮ ನಾಡಿನ ಶ್ರೇಷ್ಠ ಕವಿ ಜಿ.ಎಸ್.ಶಿವರುದ್ರಪ್ಪ ಅವರ ಮಗ ಡಾ|| ಶಿವಪ್ರಸಾದ್ ಅವರನ್ನು ಭೇಟಿಯಾಗಿದ್ದು ನನ್ನ ಪಾಲಿಗೆ ವಿಶೇಷವಾಯ್ತು.  ಸಾಹಿತ್ಯ ಕಾರ್ಯಕ್ರಮದ ಮುಖ್ಯ ಅತಿಥಿ ನೀಡಿದ ಟಿಪ್ಪಣಿಗಳು ಕವಿಗಳಿಗೆ ಸಹಾಯವಾಗುವಂತಿತ್ತು.

 ನಂತರ ರುಚಿಯಾದ ಊಟದಿಂದ ಹೊಟ್ಟೆ ತುಂಬಿ ಹೋಯ್ತು.  ಹಾಡು ನೃತ್ಯಗಳು ಚೆನ್ನಾಗಿದ್ದು, ಹಳ್ಳಿಯ ಜೀವನದ ಬಗ್ಗೆ ಅಭಿನಯದಲ್ಲಿ ತುಂಬಾ ನೈಜತೆಯಿತ್ತು. “ಕರ್ನಾಟಕ ದರ್ಶನ”, ಅದರಲ್ಲೂ ದಸರಾ ಮೆರವಣಿಗೆ ಬಹಳ ಸುಂದರವಾಗಿ ಮೂಡಿ ಬಂತು.

 ಸೃಜನ್ ಲೋಕೇಶ್ ಆಗಮನದಿಂದ ಸಭೆ ನಗೆ ಕಡಲಲ್ಲಿ ತೇಲಿತು. ಬಿ.ಆರ್. ಛಾಯ ಅವರ ಸುಶ್ರಾವ್ಯ ಕಂಠದ ಕನ್ನಡ ಹಾಡುಗಳು ಕಿವಿಗೆ ಇಂಪಾಗಿತ್ತು. ಇದೆಲ್ಲದರ ಹಿಂದಿರುವ ಎಲ್ಲರ ಕಷ್ಠ ನಿಷ್ಠೆಗಳ ಉತ್ತರವಾಗಿ ಕಾರ್ಯಕ್ರಮ ಸಂಪೂರ್ಣ ಸಂಪನ್ನವಾಗಿತ್ತು.

Hats off to you!      ಧನ್ಯವಾದಗಳೊಂದಿಗೆ,  ಸೌಭಾಗ್ಯ ಜಯಂತ್ ಮೇರ್ವೆ

Deepavali 2016: Fun Kannad-Eng Youth Programme  -Navya Anand

Having been elected as the Youth Representative on the Executive Committee of Kannada Balaga UK in April this year, I worked over the months towards my first event at the Deepavali function in Derby.

 With the help of 5 wonderful friends (who came up with ideas before the event, and acted as guides for the children during it), I was able to aid children aged 7 – 14 in developing their Kannada skills, as well as encouraging a participatory atmosphere. We played pictionary and charades with simple Kannada words (nouns and verbs) — the children were allowed to make guesses in English, but the final answer had to be in Kannada.

 I had also prepared the first 5 stories from Vishnu’s Dashavatara. The children were split into 5 groups, and were given a story each. The stories were in English, with 5 blank spaces each; the children filled in these blanks with the corresponding Kannada words.

 We also made tomato masala and pani puri together, and each child received a goodie bag with traditional Indian sweets as well as 5 conversation cards, with easy conversational Kannada phrases to use with their families.

 I was pleasantly surprised by the large number of children who participated in my event; their knowledge of Kannada vocabulary was much greater than I expected, and also greater than they believed! This shows that, by incorporating just a little Kannada into our daily family lives, we can pass on the language to future generations.

 I will run a similar event at the Ugadi function in 2017, targeted for children aged 10 and above; I hope that many of them are able to attend and contribute. It will consist of different games, and with the remaining 4 Dashavatara stories — I hope that the children who attend both events will feel a sense of continuity, and engage better with the material and with the youth programme as a result.

 I must end with a note of thanks to Harsha, Pramath, Rajath, Pranathi, and Vidyarani, who helped me run the event, and without whom it would not have been the success that it was 🙂

 – Navya Anand

Deepavali Event KB UK 2016: Something for everyone – Rajath Satyaprakash

The ‘festival of lights’ illuminates our day at a time when natural light is rather diminutive in the UK. This is why it is so appropriate that Kannadigas can come together during such a time to celebrate the occasion together. This year, as always, the joyous atmosphere in Derby made me feel great to be one among the crowd. It was a pleasure to be a part of a range of cultural and youth events.

The highlight of the morning was the “East Meets West” literature session, which was chaired by an accomplished local poet, Cathy Grindgod. I always believed that poetry is a gift that one is born with. But, to hear Cathy speak about it as an art form that one can develop and perhaps succeed in was inspiring. Maybe I should pick up a book and read more often! Furthermore, I was impressed by how easily Cathy related to the context of the poems that were recited during the session, especially those that were so deep rooted to our culture. It reaffirmed the old cliché that art knows no language or nation, and that we can all appreciate one’s creativity and ideas if we have an open mind. This message is so relevant in today’s social atmosphere, when many of us fear being confronted with the words written in one of the poems discussed during the session (a poem which described the experiences of an immigrant moving to Britain from India): “Who are you? Who called you?”

Indeed, it was a very busy afternoon as we marshaled youngsters into the youth program, rather lazily as we were spoiled by Kannada Balaga with a heavy (but delicious) lunch. Navya, the chair of the youth committee, did a great job in organizing the activities, which included standard games like Charades and Pictionary, but the contexts and words being in Kannada. The responsibility of guiding people who were alien to Kannada was passed on to those of us who were slightly competent. I do hope this continues in the future, as it allows everyone to participate. The session also included reading and completing unwritten words of a mythological Indian story. It was not like these stories garnered as much interest and attention amongst kids as might be witnessed inside the cinema during the screening of Harry Potter. But, it was still encouraging to see them willing to participate. Of course, some were highly enthusiastic, which gives me hope! We concluded the session with a round of Pani Puri, which was prepared by three of the older youths (including myself) in front of the whole group. So, there was something in it for everyone: Language, mythology and most importantly (in my opinion) food.

-Rajath Satyaprakash

Reflections…

They were fun. We played lots of games, had interesting food. The balloon guy made us balloons, I played with them. I liked the programmes because people were enthusiastic. They didn’t sob when they didn’t get something right. I liked the Hindu religion mythology stories, they were different. The three games ‘guessing words for incarnation of Vishnu, Pictionary, charades’ were offered to us; but instead, we could also open an envelope and mime out the word given in the envelope. – Varuna
The youth programme was fun. It was enjoyable. I met new friends, quite different too. I learnt some more mythology about Hindu gods and goddesses. We had loads of fun, more than I thought. Although I loved all the food there it was far too much khaara, so I couldn’t eat much. Yeah, I think I will go for the next event too. – Surya

ವಿಡಿಯೋ ನೋಡಿ; Please watch this video

ಎಂಥಹ ಸುಂದರವಾದ ದೀಪಾವಳಿ ಸಮಾರಂಭ ಎನ್ನುತ್ತಾರೆ, ಸರಸ್ವತಿ ಮಧು

“ನಮಸ್ಕಾರ ಬನ್ನಿ “, ಬಣ್ಣದ ರೇಷ್ಮೆ ಲಂಗ ಉಟ್ಟ ೧೦ ವರ್ಷ ವಯಸ್ಸಿನ ಹುಡುಗಿಯೊಬ್ಬಳು ನಮ್ಮನ್ನು ಬರಮಾಡಿಕೊಂಡಳು. ಎಂಥಹ ಸುಂದರವಾದ ಸ್ವಾಗತ ! ಸಂಧರ್ಭ: ನವೆಂಬರ್ ೫ ನೇ ತಾರೀಖು ಡಾರ್ಬಿಯಲ್ಲಿ ನಡೆದ ಕನ್ನಡ ಬಳಗ ದೀಪಾವಳಿ ಸಮಾರಂಭ. ದೊಡ್ಡ ಹಾಲಿನ ತುಂಬ ಬಣ್ಣ ಬಣ್ಣದ ಸೀರೆ ಉಟ್ಟು ಝಗಮಗಿಸುವ ಒಡವೆ ತೊಟ್ಟ ಲಲನಾಮಣಿಗಳು ಸಡಗರದಿಂದ ಓಡಾಡುತ್ತಿದ್ದುದನ್ನು ನೋಡಿ ಮದುವೆಮನೆಗೆ ಹೋದಂತೆ ಆಯಿತು. ಮಹಾಗಣಪತಿ ಮತ್ತು ಲಕ್ಷ್ಮಿಯ ಪೂಜೆ, ಮಂಗಳಾರತಿಯೊಂದಿಗೆ ಕಾರ್ಯಕ್ರಮದ ಆರಂಭ.

 ಅಂದವಾಗಿ ಅಲಂಕರಿಸಿಕೊಂಡ ಪುಟ್ಟ ಮಕ್ಕಳ ಮುಗ್ಧ  ಹಾಡು  ಮತ್ತು  ನೃತ್ಯಗಳು ನಮ್ಮೆಲ್ಲರನ್ನೂ ಮುದಗೊಳಿಸಿತು .ಆ ಮಕ್ಕಳು ಹಾಡಿದ ‘ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು’ ಹಾಡನ್ನು ಕೇಳಿ ಆ ದಿನದ ಮುಖ್ಯ ಕಲಾವಿದೆ ಛಾಯಾರವರಿಗೆ ಅವರ ಚೊಚ್ಚಲ ಕನ್ನಡ ಸಿನಿಮಾ ಗೀತೆಯ ನೆನಪು ಮೂಡಿಸಿರಬೇಕು. ಇಂಟರ್ನ್ಯಾಷನಲ್ ಯೋಗ ಚಾಂಪಿಯನ್ ಈಶ್ವರ್ ಶರ್ಮನ ಯೋಗ ಪ್ರದರ್ಶನವನ್ನು ನೋಡಲು ತುಂಬಾ ಉತ್ಸುಕತೆ ಇತ್ತು. ಆದರೆ ಸ್ಟೇಜ್ ತುಂಬ ತಗ್ಗು ಇದ್ದಿದ್ದರಿಂದ ಸರಿಯಾಗಿ ಕಾಣಲಿಲ್ಲ.

 ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕೊಡುವ  ಪ್ರಸಾದ ಅಕ್ಕಿ ಕಡಲೆಬೇಳೆ ಪಾಯಸವನ್ನ ಅಲ್ಲಿಗೆ ಹೋದವರು ಯಾರೂ ಮರೆಯುವುದಿಲ್ಲ. ಅದೇ ರೀತಿ ಡಾರ್ಬಿಯಲ್ಲಿ ಮಧ್ಯಾನ್ಹ ಬಿಸಿಬೇಳೆ ಭಾತ್, ಬೆಂಡೆಕಾಯಿ ಹುಳಿ, ಮೊಸರನ್ನ ಇತ್ಯಾದಿ ಮತ್ತು ಕಡಲೆಬೇಳೆ ಪಾಯಸದ ರಸ ಕವಳ ! ಸೂರ್ಯನಾರಾಯಣರ ಕೃಪೆಯಿಂದ.

 ರಂಗದ ಮೇಲೆ ಒಂದು ಹಳ್ಳಿಯನ್ನೇ ಪುನರ್ರಚಿಸಿ ಹಳ್ಳಿಯ ಜೀವನ ವ್ಯವಿಧ್ಯವನ್ನು ತೋರಿಸಿದ ಡಾರ್ಬಿ ತಂಡದವರು ನಮ್ಮನ್ನು ಮತ್ತೊಂದು ಲೋಕಕ್ಕೆ ಒಯ್ದರು. ರಂಗದ ಮೇಲೆ ಗುಡಿಸಲು, ಎತ್ತಿನ ಗಾಡಿ, ಹಸುಗಳು, ಹೊಲ ಉಳೋದು -ಇಂಥಹುದನ್ನೆಲ್ಲ ತೋರಿಸಿ ನೃತ್ಯ ರೂಪಕವನ್ನು ಹೀಗೂ ಮಾಡಬಹುದೇ? ಎಂದು ನಮ್ಮನ್ನು ಸ್ಪೂರ್ತಿಸಿದರು.  ‘ಕರ್ನಾಟಕ ವೈಭವ’ ದರ್ಶನದಲ್ಲಿ ಬೆಂಗಳೂರಿನ ಕರಗ, ಮಂಗಳೂರಿನ ಮೀನುಗಾರರ ನೃತ್ಯ, ಕೊಡವರ ಧೀಮಂತತೆ, ಚಿತ್ರದುರ್ಗದ ಓಬವ್ವನ ಕಥೆ, ಕಿತ್ತೂರಿನ ಚೆನ್ನಮ್ಮನ ಕಥೆ, ಬೇಲೂರು ಹಳೇಬೀಡಿನ ಶಿಲಾಬಾಲಿಕಾ ನೃತ್ಯ, ಮಹಿಷಾಸುರಮರ್ದಿನಿಯ ಕಥೆ ಇತ್ಯಾದಿ ಇತ್ಯಾದಿ ತೋರಿಸಿ ನಮ್ಮ ನಾಡಿನ ಬಹುಮುಖ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದರು.

 ಕಾಫಿ, ಸಮೋಸ, ಭೇಲ್ ಪುರಿಯ ಮುಂಚೆ, ‘ಮಜಾ ಟಾಕಿಸ್’ ಖ್ಯಾತಿಯ ಸೃಜನ್ ಲೋಕೇಶ್ ತಮ್ಮ ಚುರುಕುತನ, ವಿನಮ್ರತೆ, ಹಾಸ್ಯ ಪ್ರಜ್ಞೆ ಒಳಗೊಂಡ ಪ್ರಶ್ನೆ ಮತ್ತು ಉತ್ತರ  ಸಂವಾದ ಕಾರ್ಯಕ್ರಮವನ್ನು ಕೊಟ್ಟು ರಂಜಿಸಿದರು. ಅವರ ಜೀವನದ ಏಳು ಬೀಳುಗಳನ್ನು ಹಿಂಜರಿಕೆ ಇಲ್ಲದೆ ನಮ್ಮ ಜೊತೆ ಹಂಚಿಕೊಂಡರು .

ಡಾರ್ಬಿ ತಂಡದವರು  ‘ಮೈಸೂರು ದಸರಾ’ ಮೆರವಣಿಗೆಯನ್ನು ರಂಗದ ಮೇಲೆ ಜೀವತಳಿಸಿದಾಗ ‘ನ ಭೂತೋ ನ ಭವಿಷ್ಯತಿ’ ಎಂಬ ಉಧ್ಗಾರ ಪ್ರೇಕ್ಷಕರಿಂದ  ಬಂತು. ೬೪ ಜನ ಮತ್ತು ಒಂದು ಅಂಬಾರಿ ಆನೆ ರಂಗದ ಮೇಲೆ ಬಂದಾಗ ಹಿಂದೆ ಚೇಷ್ಟೆ ಮಾಡುತಿದ್ದ ಮಕ್ಕಳು, ಹರಟೆ ಹೊಡೆಯುತಿದ್ದ ದೊಡ್ಡವರು ಎಲ್ಲರೂ ಬೆರಗಾಗಿ ದಂಗಾದರು…

 ಗಾನ ಕೋಗಿಲೆ ಛಾಯಾ ತಮ್ಮ ಸುಶ್ರಾವ್ಯ ಗಾಯನದಿಂದ ಎರಡು ಘಂಟೆಗೂ ಹೆಚ್ಚು ಕಾಲ ರಂಜಿಸಿದರು. ಅವರು  ‘ಯಾರಿವನು ಈ ಮನ್ಮಥನು’ ಹಾಡಿದಾಗ ಹಾಲಿನಲ್ಲಿ ಇದ್ದ  ಎಲ್ಲಾ ಮನ್ಮಥರೂ ಮೇಲೆದ್ದು ಕ್ಯಾಟ್ ವಾಕ್ ಮಾಡಿದ್ದೂ ಮಾಡಿದ್ದೆ!!!

ಗಗನವು ಎಲ್ಲೋ ಭೂಮಿಯು ಎಲ್ಲೋ…, ದೂರದಿಂದ ಬಂದಂಥ ಸುಂದರಾಂಗ ಜಾಣ…. ಈ ರೀತಿಯ ಜನಪ್ರಿಯ ಹಾಡುಗಳನ್ನು ಕೇಳ್ತಾ ಕೇಳ್ತಾ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ. ಮಧ್ಯೆ ಮಧ್ಯೆ ಪದ್ಮಪಾಣಿಯವರಿಂದ ಹಾಸ್ಯದ ತುಣಕುಗಳು….

 ಬಿ. ಆರ್. ಛಾಯಾ ಕಡೆಯಲ್ಲಿ ಟೈಟಾನಿಕ್ ಇಂಗ್ಲಿಷ್ ಹಾಡನ್ನ ಹಾಡಿದಾಗ, ಇಂಗ್ಲೆಂಡ್ ನಲ್ಲೆ ಹುಟ್ಟಿ ಬೆಳೆದ ಪ್ರಶಾಂತ್ ಸಾಯೀಶ್ವರ್ ‘ನಿನ್ನಿಂದಲೇ ನಿನ್ನಿಂದಲೇ’ ಕನ್ನಡ ಹಾಡನ್ನು ಮುಂಚೆ ಹಾಡಿದ್ದು ಜ್ಞಾಪಕಕ್ಕೆ ಬಂದು, ಕಲೆಗೆ ಗಡಿಯೆಲ್ಲಿದೆ ಎಂತನಿಸಿತು.

 – ಸರಸ್ವತಿ  ಮಧು (ಸಾಥ್ ಕೊಟ್ಟದ್ದು ವಿಶ್ವನಾಥ್ ಮಂದಗೆರೆ)

thumbnail_20161105_210525
ಚಿತ್ರ: ಜಿ. ಶಿವ ಪ್ರಸಾದ್ ಕಡೆಯವರದ್ದು

ದೀಪಾವಳಿ ಹಬ್ಬದ ಸಂಭ್ರಮದ ಚಿಕ್ಕ ನಿರೂಪಣೆಯನ್ನ ಕೊಟ್ಟಿದ್ದಾರೆ, ಸವಿತ ಸುರೇಶ್

ಕನ್ನಡ ಬಳಗ ಯು.ಕೆ  2016 ದೀಪಾವಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಡಾರ್ಬಿಯಲ್ಲಿ ಆಚರಿಸಲಾಯಿತು. ಬೆಳಿಗ್ಗೆ  11.00 ಗಂಟೆಗೆ ಕಾರ್ಯಕ್ರಮವನ್ನ ಶ್ರೀ ಮಹಾಲಕ್ಷ್ಮಿ ಪೂಜೆಯ ಮೂಲಕ ಪ್ರಾರಂಭಿಸಿ ಉದ್ಘಾಟಿಸಿಲಾಯಿತು. ನಂತರ ಸಮೂಹ ಗಾಯನ, ನಾಡ ಗೀತೆ, ಡಾ|. ಅಭಯಾಂಬ ಮೂರ್ತಿಯವರನ್ನ ಸನ್ಮಾನಿಸಲಾಯಿತು.

ತದನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನರಂಜನೆಯ ನೃತ್ಯ, ಹಾಡು ಮತ್ತು ಸಾಮೂಹಿಕ ನೃತ್ಯ ಮೂಡಿ ಬಂದವು. ಅದೇ ಸಮಯದಲ್ಲಿ KSSVV ಕಾರ್ಯಕ್ರಮ ಬ್ರಿಡ್ಜ್ ಹೌಸ್ ನಲ್ಲಿ  ಸ್ಥಳೀಯ ಕವಿಯಿತ್ರಿ ಲಾರೆಟ್  ಕ್ಯಾಥಿ ಗ್ರಿನ್ಡ್ ರೊಡ್ ಅವರ ನೇತೃತ್ವದಲ್ಲಿ ನಡೆಯಿತು.

ನಂತರ ಶಿವಳ್ಳಿ  ಅವರಿಂದ ಕರ್ನಾಟಕ ಶೈಲಿಯ ಭೋಜನ. ಆಮೇಲೆ ಮೂಡಿ ಬಂತು ಹಿರಿಯರು ಕೊಟ್ಟ ಮನರಂಜನಾ ಕಾರ್ಯಕ್ರಮ. ಸ್ಥಳೀಯ ಪ್ರತಿಭೆಗಳ ಮಿಂಚು. ಮುಖ್ಯವಾಗಿ ಕರ್ನಾಟಕ ದರ್ಶನ, ಅಲ್ಲಿ -ಇಲ್ಲಿ, ಚಿತ್ರಗೀತೆ, ಎಲ್ಲಕ್ಕೂ ಹೆಚ್ಚಾಗಿ ಕಣ್ಮನ ಸೆಳೆದ “ಮೈಸೂರು ದಸರಾ” ಗಳು ಡಾರ್ಬಿ ಕನ್ನಡಿಗರ ತಂಡದಿಂದ ಮೂಡಿ ಬಂದಿತು.

COLOURS ಕನ್ನಡ ದೂರದರ್ಶನ ವಾಹಿನಿಯ ಹೆಸರಾಂತ “ಮಜಾ ಟಾಕೀಸ್” ಕಾರ್ಯಕ್ರಮದ ಸೃಜನ್ ಲೋಕೇಶ್ ಅವರಿಂದ ನಮ್ಮೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮವನ್ನು ಗಿರಿಧರ್ ನಡೆಸಿದರು. ನಿರ್ದೇಶಕ ತೇಜಸ್ವಿ ಸಹ ಪಾಲ್ಗೊಂಡರು.

 ಅದೇ ಸಮಯದಲ್ಲಿ ಮಕ್ಕಳಿಗೆ ಮನರಂಜನೆ, ಯುವ ಪೀಳಿಗೆಗೆ “Meet and Greet” ಕಾರ್ಯಕ್ರಮಗಳನ್ನ ಮಹಡಿ ಮೇಲಿನ ಎರಡು ಕೊಠಡಿಗಳಲ್ಲಿ ಏರ್ಪಡಿಸಲಾಗಿತ್ತು.  ಕಾಫಿ ವಿರಾಮದ ನಂತರ ಮೂಡಿ ಬಂದ ಕಾರ್ಯಕ್ರಮ ಶ್ರೀ. ಪದ್ಮಪಾಣಿ ಅವರ ನಿರೂಪಣೆಯ, ಕರ್ನಾಟಕದ “ಗಾನ ಕೋಗಿಲೆ, ಶ್ರೀಮತಿ ಬಿ.ಆರ್.ಛಾಯಾ ಅವರ ಸುಮಧುರ ಚಿತ್ರ ಗೀತೆ, ಭಾವಗೀತೆ, ಜನಪದಗೀತೆಗಳ ಗಾನ ಲಹರಿ.

ನಂತರ ಮತ್ತೆ ರಾತ್ರಿ ಭೋಜನ. Disco ನಂತರ ಸುಮಾರು ರಾತ್ರಿ 10.00 ಗಂಟೆಗೆ ದಿನದ ಕಾರ್ಯಕ್ರಮ ಅಂತ್ಯಗೊಂಡಿತು.

 -ಸವಿತ ಸುರೇಶ್