ಪ್ರಿಯ ಓದುಗರೇ ! ಈ ವಾರದ ಸಾಪ್ತಾಹಕ ಸಂಚಿಕೆಯಲ್ಲಿ ಯುನೈಟೆಡ್ ಕಿಂಗ್ಡಮ್ ನ ಮಿಲ್ಟನ್ ಕೇನ್ಸ್ ನಿವಾಸಿಯಾದ ಹಾಗು ನಮ್ಮ್ ರೇಡಿಯೋ ವಾಟ್ಸ್ ಅಪ್ ಯು.ಕೆ? ಕಾರ್ಯಕ್ರಮದ RJ ಗಿರೀಶ್ ಪ್ರಸಾದ್ ಅವರ ‘ಹಸಿರೇ ಉಸಿರು’ ಶೀರ್ಷಿಕೆಯಡಿಯಲ್ಲಿ ಒಂದು ಪುಟ್ಟ ಲೇಖನ. ಓದಿ ಪ್ರತಿಕ್ರಿಯಿಸಿ. -ಸವಿ. ಸಂ
ಲೇಖಕರ ನುಡಿಗಳು
ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಗಿರೀಶ್ ಪ್ರಸಾದ್, ಯುನೈಟೆಡ್ ಕಿಂಗ್ಡಮ್ ನ ಮಿಲ್ಟನ್ ಕೇನ್ಸ್ ನಿವಾಸಿ. Astra Zeneca ಎಂಬ ಸಂಸ್ಥೆಯಲ್ಲಿ ಕೋವಿಡ್-೧೯ ಲಸಿಕೆಯ ಪ್ರಯೋಗ ತಂಡದಲ್ಲಿ ವಿಜ್ಞಾನಿಯಾಗಿ ನನ್ನ ವೃತ್ತಿ. ‘ನಮ್ಮ್ ರೇಡಿಯೋ’ ಖ್ಯಾತಿಯ ವಾಟ್ಸ್ ಅಪ್ ಯು.ಕೆ? ಕಾರ್ಯಕ್ರಮದಲ್ಲಿ RJ ಗಿರೀಶ್ ಪ್ರಸಾದ್ ಧ್ವನಿ ತಮಗೆಲ್ಲ ಚಿರ ಪರಿಚಿತ. ನನ್ನ ಈ ಇತ್ತೀಚಿನ ವೃತ್ತಿಪರ ಪ್ರಯೋಗದ ಅನುಭವ ಪ್ರಕೃತಿಯ ಹಸಿರಿನ ಮೌಲ್ಯ ಎಷ್ಟು ಪ್ರಮುಖ ಎಂದು ಅರಿವಾಯಿತು. ನನ್ನ ಈ ಒಂದು ಚಿಕ್ಕ ಲೇಖನ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ .
💚💚 ಹಸಿರೇ ಉಸಿರು 💚💚
ಕೆಲವಾರು ವರುಷಗಳಿಂದ ಎಲ್ಲಾ ದಿನ ಪತ್ರಿಕೆಗಳಲ್ಲಿ, ಸುದ್ದಿ ಮಾಧ್ಯಮದಲ್ಲಿ , ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಸದ್ದು ಮಾಡಿರುವ, ಮಾಡುತ್ತಿರುವ ಸುದ್ದಿಎಂದರೆ “ಕಾಂಕ್ರೀಟ್ ಕಾಡಿನಿಂದಾಗಿ ಮುಂದೊಂದು ದಿನ ಆಮ್ಲಜನಕ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು ” ಎಂದು ! ಈ ಸುದ್ದಿಗೂ , ನಮಗೂ , ಯಾವುದೇ ರೀತಿಯ ಸಂಬಂಧವೇ ಇಲ್ಲ ಎನ್ನುವಂತೆ ಬುದ್ಧಿವಂತ ಮರೆವನ್ನು ಪ್ರದರ್ಶಿಸಿ, ಪ್ರಕೃತಿ ವಿನಾಶದ ಕಡೆ ಅಲಕ್ಷ್ಯ ಮಾಡಿದ ನಮಗೆಲ್ಲಾ ಕನಸಿನಲ್ಲೂ ಊಹಿಸದ ಆ ದಿನ ಇಷ್ಟು ಬೇಗ ಎದುರಾಗಿದ್ದು ದುರಂತವೇ ಸರಿ. ಯಾರ ಮಾತನ್ನೂ ಕೇಳದ ಅತಿಜಾಣ ಮಾನವನಿಗೆ ಒಂದು ಸಣ್ಣ ವೈರಾಣು ‘ಹಸಿರಿಂದಲೇ ಉಸಿರು. ಹಸಿರಿಲ್ಲದ ಕಡೆ ಉಸಿರೂ ಇಲ್ಲ ಎಂಬ ನಿತ್ಯ ಪಾಠ ಕಲಿಸಿದ್ದು ವಿಪರ್ಯಾಸವೇ ಸರಿ.



ಚಿತ್ರ ಕೃಪೆ : ಗಿರೀಶ್ ಪ್ರಸಾದ್
💚💚ಪಾಶ್ಚಿಮಾತ್ಯ ದೇಶಗಳನ್ನು ಎಲ್ಲಾ ವಿಷಯದಲ್ಲೂ ಅನುಸರಿಸೋ ನಾವುಗಳು. ಅದ್ಯಾಕೋ ಪರಿಸರ ಸಂರಕ್ಷಣೆ ವಿಚಾರದಲ್ಲಿ ಮಾತ್ರ ಕಡೆಗಣಿಸುತ್ತೇವೆ. ‘ವಿದೇಶದಲ್ಲಿ ರಸ್ತೆಗಳು ಬಹಳ ಸ್ವಚ್ಛವಾಗಿರುತ್ತವೆಯಂತೆ’ , ‘ ಮನೆ ಸುತ್ತ ಉದ್ಯಾನವನಗಳಿರುತ್ತವಂತೆ’ , ‘ವಿದೇಶದಲ್ಲಿ ಎಲ್ಲಿ ನೋಡಿದರೂ ಹಸಿರು ಕಂಗೊಳಿಸುತ್ತದೆಯಂತೆ’ ಎಂದು ಮಾತಾಡುತ್ತಲೇ ನಮ್ಮ ಮನೆ ಅಂಗಳದಲ್ಲಿರುವ ತಾತನ ಕಾಲದ ಮರಗಳನ್ನು ನೆಲ ಸಮ ಮಾಡಿ ಆ ಜಾಗದಲ್ಲಿ ಒಂದು ರೂಮ್ , ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡುವುದರಲ್ಲಿ ವ್ಯಸ್ಥವಾಗುತ್ತ ಇರೋದು ಸೋಜಿಗವೇ ಸರಿ. ಈ ಕರೋನ ಮಹಾಮಾರಿಯನ್ನು ಪಾಶ್ಚತ್ಯ ದೇಶಗಳು, ಅಲ್ಲಿನ ಜನರು ಎದುರಿಸಲು ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು ಈ “ಹಸಿರೇ “. ಇಂದಿಗೂ ತನ್ನನ್ನೇ ನಂಬಿರುವ ಜನರ ಕೈ ಬಿಡದೆ , ಶುದ್ಧ ಆಮ್ಲಜನಕವನ್ನು ‘ಉಸಿರಾಗಿ’ ಕೊಡುತ್ತಿರುವ , ಸಸ್ಯಶಾಮಲೆಗೆ ಸಮರಾರು ? ಒಂದು ಸಣ್ಣ ವೈರಾಣು ಕಲಿಸಿರುವ ಜೀವನ ಪಾಠವನ್ನು ಈ ಜನ್ಮದಲ್ಲಿ ಮರೆಯದೇ , ಹಸಿರೇ ಉಸಿರು ಎಂಬ ಮಂತ್ರವನ್ನು ನಿತ್ಯಮಂತ್ರವಾಗಿಸಿಕೊಂಡು ಇನ್ನು ಮುಂದಾದರೂ ಹೆಚ್ಚು ಹೆಚ್ಚು ಗಿಡ-ಮರಗಳನ್ನು ಬೆಳೆಸಿ, ಉಳಿಸೋಣ. ಬನ್ನಿ ಉಸಿರಾಡೋಣ …🌴🌱🌲🍀🌴🌳
– ಗಿರೀಶ್ ಪ್ರಸಾದ್
ಮೂರು ಹೊಸರುಚಿಗಳ ಸವಿ ಭೋಜನವನ್ನು ಅನಿವಾಸಿಯ ಎಲೆಯ ಮೇಲೆ ಯುಗಾದಿ ಹಬ್ನದಂದು ಉಣಬಡಿಸಿದ ಅಮಿತಾ ಅವರಿಗೆ ಅಭಿನಂದನೆಗಳು! ಚೇತನ್, ಪ್ರಮೋದ್ ಮತ್ತು ಪ್ರತಿಭಾ ಅವರಿಗೆ ಅನಿವಾಸಿಗೆ ಆದರದ…