ಕೊಡಗಿನ ರಾಜಕುಮಾರಿ ಗೌರಮ್ಮ ವಿಕ್ಟೋರಿಯ- ಶ್ರೀ.ರಾಮ ಮೂರ್ತಿ

ಪ್ರಿಯ ಓದುಗರೇ !!
೧೮ನೇ ಶತಮಾನದ ಬ್ರಿಟಿಷರ ಆಳ್ವಿಕೆಯ ಕಾಲಾವಧಿಯಲ್ಲಿ ನಮ್ಮ ದೇಶದ ಅನೇಕ ರಾಜ್ಯಗಳನ್ನು ಹಂತ ಹಂತವಾಗಿ ತಮ್ಮ ಕಪಟತನದಿಂದ ಆಕ್ರಮಿಸಿ ಅವರ ಕೈವಶ ಮಾಡಿಕೊಂಡರು.ಆ ಪಟ್ಟಿಯಲ್ಲಿ ಕೊಡಗು ಪ್ರಾಂತ್ಯವೂ ಸೇರ್ಪಟ್ಟು ಇದೇ ಕಾಲಾವಧಿಯಲ್ಲಿ ನಡೆದ ಕೊಡಗು ಪ್ರಾಂತ್ಯದ ರಾಜಮನೆತನದ ಒಂದು ವಿಶೇಷ ಐತಿಹಾಸಿಕ ಘಟನೆಯನ್ನು ಶ್ರೀ. ರಾಮಮೂರ್ತಿ ರವರು ‘ಕೊಡಗಿನ ರಾಜಕುಮಾರಿ ಗೌರಮ್ಮ ವಿಕ್ಟೋರಿಯಾ’ ಎಂಬ ಶೀರ್ಷಿಕೆಯ ಈ ವಿಶೇಷ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಓದಿ ಪ್ರತಿಕ್ರಿಯಿಸಿ. -ಸವಿ.ಸಂ

ಕೊಡಗಿನ ರಾಜಕುಮಾರಿ ಗೌರಮ್ಮ ವಿಕ್ಟೋರಿಯ 

ಕೆಲವು  ವಾರಗಳ ಹಿಂದೆ ನಡೆದ ಟಿ.ವಿ ಸಂದರ್ಶನದಲ್ಲಿ ಮೆಗನ್ ಮಾರ್ಕಲ್ (Duchess of Sussex) ಇಂಗ್ಲೆಂಡ್  ರಾಜಮನೆತನದಲ್ಲಿ ವರ್ಣದ್ವೇಷ ಇದೆ ಎಂದು ದೂರಿದ್ದಳು . ಇಂತಹ ಅಪವಾದನೆ ಹೊಸದೇನಿಲ್ಲ ಬಿಡಿ. ವಿಕ್ಟೋರಿಯ ರಾಣಿ (೧೮೦೯-೧೯೦೧) .  ಅಬ್ದುಲ್ ಕರೀಮ್ ಎಂಬುವನನ್ನು ಭಾರತದಿಂದ ತನ್ನ ಸೇವಕನಾಗಿ ಕೆಲಸ ಮಾಡಲು ಕರೆಸಿಕೊಂಡ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ , ಇವನನ್ನು ಕೀಳು ಮಟ್ಟದಲ್ಲಿ ನೋಡಿದ್ದು ವಿಕ್ಟೊರಿಯಾ ರಾಣಿ ಅಲ್ಲ, ಅವಳ ಆಡಳಿತಲ್ಲಿದ್ದವರು, ರಾಣಿಗೆ ಇವನು ಅಚ್ಚುಮೆಚ್ಚಾನಾಗಿದ್ದ ಮತ್ತು ಅವಳಿಗೆ ಉರ್ದು ಭಾಷೆಯನ್ನೂ ಕಲಿಸಿದ. ಇಷ್ಟು ಸಲಿಗೆ ಇದ್ದಿದ್ದು ಅನೇಕರಿಗೆ ಸಹಿಸುವುದು ಆಗಲಿಲ್ಲ,  ರಾಣಿ ಮರಣವಾದ್ದ ಕೂಡಲೇ  ಆಗತಾನೆ ಪಟ್ಟಕ್ಕೆ ಬಂದಿದ್ದ ಎಡ್ವರ್ಡ್ ೭ ಇವನನ್ನು ಮನೆಯಿಂದ ಹೊರಗೆ ಹಾಕಿ ಭಾರತಕ್ಕೆ ಹಿಂತಿರುಗವಂತೆ ಆಜ್ಞೆ ಮಾಡಿದ. 

ಚಿಕ್ಕವೀರರಾಜೇಂದ್ರ (೧೮೦೫-೧೮೫೯) ೧೮೩೪ರಲ್ಲಿ ಬ್ರಿಟಿಷರು, ಅಂದರೆ ಈಸ್ಟ್ ಇಂಡಿಯ ಕಂಪನಿಯ ಸೈನ್ಯ  , ಕೊಡಗು ಪ್ರಾಂತ್ಯಕ್ಕೆ ನುಗ್ಗಿ  ಅರಮನೆ ಲೂಟಿ ಮಾಡಿ ಅರಸನನ್ನು  ಸೆರೆ ಹಿಡಿದು  ಅವನ ಪರಿವಾರದೊಂದಿಗೆ ಬೆನಾರಿಸ್ (ಕಾಶಿ) ಪಟ್ಟಣಕ್ಕೆ ಗಡಿಪಾರು ಮಾಡಿದರು, ಇಲ್ಲಿ ಈಸ್ಟ್ ಇಂಡಿಯಾ ಕಂಪನಿಯ ರಾಜಕೀಯ ಸೆರೆಯಲ್ಲಿ (Political Prisoner)  £೬೦೦೦ (೬೦೦೦೦ ರೂಪಾಯಿ )  ವರಮಾನದಿಂದ ಅವನ ಕೆಲವು ರಾಣಿಯರು ಮತ್ತು ಸೇವಕರು ನೆಲಸಿದರು.  ಇಲ್ಲಿ ಗೌರಮ್ಮ ೪/೭/ ೧೮೪೧ ನಲ್ಲಿ ಜನಸಿದಳು, ಆದರೆ ಇವಳ ತಾಯಿ, ರಾಜನ ನೆಚ್ಚಿನ ರಾಣಿ,  ಕೆಲವೇ ದಿನಗಳಲ್ಲಿ ಕಾಲವಾದಳು. ತಾಯಿ ಇಲ್ಲದ ಮಗಳಮೇಲೆ ಇವನಿಗೆ ಅತ್ಯಂತ  ಪ್ರೇಮ ಬೆಳೆಯಿತು. 

ಕೆಲವು  ವರ್ಷಗಳು ಕಳೆದನಂತರ, ತನ್ನ ರಾಜ್ಯ ಮತ್ತು ಆಸ್ತಿಯನ್ನು ಕಳೆದುಕೊಂಡ ಕೊರಗನ್ನು  ಸಹಿಸಲಾರದೆ ಇಂಗ್ಲೆಂಡ್ ಗೆ ಪ್ರಯಾಣ ಮಾಡಿ   ರಾಣಿ ವಿಕ್ಟೋರಿಯನ್ನು ಖುದ್ದಾಗಿ ಭೇಟಿ ಮಾಡಿ  ತನಗೆ ಆಗಿರುವ  ಅನ್ಯಾಯವನ್ನು ವಿವರಿಸಿ  ಬ್ರಿಟಿಷ್ ಸರ್ಕಾರದಿಂದ  ಸೂಕ್ತವಾದ ಪರಿಹಾರವನ್ನು ಪಡೆಯುವ  ನಿರ್ಧಾರ ಮಾಡಿದ , ಇದಲ್ಲದೆ  ತನ್ನ ೧೧ ವರ್ಷದ  ಮಗಳು ಗೌರಮ್ಮನ ಭವಿಷ್ಯ ಭದ್ರ ಮಾಡುವ ಉದ್ದೇಶದಿಂದ  ಅಂದಿನ ಗೌರ್ನರ್ ಜನರಲ್ ಲಾರ್ಡ್ ಡಾಲ್ ಹೌಸಿ ಅವರನ್ನು ಸಂಪರ್ಕಿಸಿ ದೇಶದಿಂದ ಹೊರಗೆಹೋಗುವುದಕ್ಕೆ ಅಪ್ಪಣೆ ಕೇಳಿದ, ಬಹಳ ತಿಂಗಳ ನಂತರ ಚಿಕ್ಕವೀರರಾಜೇಂದ್ರ ಒಂದು ವರ್ಷದ ಅವಧಿಯಲ್ಲಿ ಹಿಂತಿರುಗಬೇಕು  ಮತ್ತು ಒಬ್ಬ ಬ್ರಿಟಿಷ್ ಅಧಿಕಾರಿ ಜೊತೆಯಲ್ಲಿ  ಪ್ರಯಾಣ ಮಾಡುವಂತ  ಷರತ್ತು ಬದ್ದಿನ ಮೇಲೆ ಅನುಮತಿ ಬಂತು, ಆದರೆ ಇದು ಗೌರಮ್ಮನಿಗೆ ಅನ್ವಯಿಸಲಿಲ್ಲ , ಇಬ್ಬರು ರಾಣಿಯರು, ಮಗಳು ಮತ್ತು ಹಲವಾರು ಸೇವಕರೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡಿ ೧೨/೫/೧೮೫೨ ಇಂಗ್ಲೆಂಡ್ ದೇಶದಲ್ಲಿ ಕಾಲಿಟ್ಟರು. ಭಾರತದ ರಾಜ್ಯ ವಂಶದ ದವರು ಇಂಗ್ಲೆಂಡಿಗೆ ಭೇಟಿ ಮಾಡಿದ್ದವರಲ್ಲಿ ಇವರು ಮೊದಲಿಗರು.

ಚಿಕ್ಕ ವೀರರಾಜೇಂದ್ರ (೧೮೦೫-೧೮೫೯)

 ರಾಣಿ ವಿಕ್ಟೋರಿಯ ಚಿಕ್ಕವೀರರಾಜೇಂದ್ರ ಮತ್ತು ಗೌರಮ್ಮನನ್ನು  ಬಹಳ ಆದರದಿಂದ ಸ್ವಾಗತಿಸಿ ಗೌರಮ್ಮನ ಬೆಳವಣಿಗೆ ತನ್ನ ಹೊಣೆ ಎಂದು ಭರವಸೆ ಕೊಟ್ಟಳು, ಆದರೆ ಹಣಕಾಸಿನ ಪರಿಹಾರದಬಗ್ಗೆ ಏನೂ ತೃಪ್ತಿದಾಯಕ ಉತ್ತರ ಕೊಡಲಿಲ್ಲ.  ಆದ್ದರಿಂದ ತನ್ನ ಕೊರತೆ ಗಳ  ಬಗ್ಗೆ ಲಂಡನ್ The Standard ಪತ್ರಿಕೆಯ ಸಂಪಾದಕರಿಗೆ  ಒಂದು ದೀರ್ಘ ವಾದ ಪತ್ರವನ್ನು  ಬರೆದ (೧೭/೧೧/೧೮೫೩).

 ಈ ವಿಚಾರ ಭಾರತದಲ್ಲಿದ್ದ ಗವರ್ನರ್ ಜನರಲ್ ಅವರಿಗೆ ಸಂಬಂಧ ಪಟ್ಟಿದ್ದು ಮತ್ತು ಈಸ್ಟ್ ಇಂಡಿಯಾ ಕಂಪನಿ ಜವಾಬ್ದಾರಿ ಎಂದು  ಬ್ರಿಟಿಷ್ ಸರ್ಕಾರ ಸುಮ್ಮನಿದ್ದರು, ( ಬ್ರಿಟಿಷ್ ಸರ್ಕಾರದ ನೇರ ಆಡಳಿತ ೧೮೫೭ ನಂತರ ) 

ವಿಕ್ಟೋರಿಯ ರಾಣಿಗೆ ಗೌರಮ್ಮತುಂಬಾ ಇಷ್ಟವಾಗಿ  ಅರಮನೆಯಲ್ಲಿ ಉಳಿಸಿಕೊಂಡು ಅವಳ ಬೆಳವಣಿಗೆಗೆ ಮೇಜರ್ ಮತ್ತು ಶ್ರೀಮತಿ ಡ್ರಮ್ಯಾನ್ಡ್ ಅವರಿಗೆ ಜವಾಬ್ದಾರಿ ವಹಿಸಿ ಅವಳನ್ನು ಅಪ್ಪಟ ಇಂಗ್ಲೀಷ್ ರಾಜಕುಮಾರಿ ಹಾಗೆ ಬೆಳಸುವಂತೆ ಆಜ್ಞೆ ಕೊಟ್ಟಳು,  ರಾಣಿ ಇವಳನ್ನು  ಕ್ರೈಸ್ತ್ದ ಮತಕ್ಕೆ  ಸೇರಿಸಿ ತನ್ನ ಸಾಕು  ಮಗಳನ್ನು ಮಾಡಿಕೊಳ್ಳುವ ಉದ್ದೇಶವು ಇದೆ ಎಂದಳು.  

ಚಿಕ್ಕವೀರರಾಜೇಂದ್ರನಿಗೆ ಮಗಳು ಕ್ರೈಸ್ತ್ ಮತಕ್ಕೆ ಪರಿವರ್ತ ವಾಗಲು ಏನು ಅಭ್ಯಂತರ ಇರಲಿಲ್ಲ. ಪರಂಪರೆಯಿಂದ ಕೊಡಗಿನ ರಾಜರು ವೀರಶೈವ ಪಂಗಡಕ್ಕೆ ಸೇರಿದವರು ಆದರೆ ಚಿಕ್ಕವೀರರಾಜ ತನ್ನ ಮತವನ್ನು  ತೀವ್ರವಾಗಿ ಅನುಸರಿಸುತಿರಲಿಲ್ಲ ಮತ್ತು  ಮಗಳ ಭವಿಷ್ಯ ಮುಖ್ಯವಾಗಿತ್ತು.  ೫/೭/೧೮೫೨ ದಿನ  ಅರಮನೆಯ ರಾಜ್ಯವಂಶದ ಪ್ರತೇಕ ಚಾಪೆಲ್ ನಲ್ಲಿ , ವಿಕ್ಟೋರಿಯಾ ರಾಣಿಯ ಸಮ್ಮುಖದಲ್ಲಿ, ಆರ್ಚ್ ಬಿಷಪ್ ಆಫ್ ಕ್ಯಾಂಟಬರಿ  ಇವಳನ್ನು ಕ್ರೈಸ್ತ್ ಮತಕ್ಕೆ ಸೇರಿಸಿ, ರಾಜಕುಮಾರಿ ವಿಕ್ಟೊರಿಯಾ ಗೌರಮ್ಮ ಎಂದು ನಾಮಕರಣ ಮಾಡಿದರು . 

ರಾಜಕುಮಾರಿ ಗೌರಮ್ಮ

ಗೌರಮ್ಮನಿಗೆ  ಹದಿನೇಳು ವರ್ಷಗಳು ತುಂಬಿದಾಗ ರಾಣಿ ಇವಳಿಗೆ ಮಾದುವೆ ಮಾಡುವ ಉದ್ದೇಶದಿಂದ ಸರಿಯಾದ ಜೋಡಿ ಹುಡುಕುವಂತೆ ಲೇಡಿ ಲಾಗಿನ್ ಅನ್ನುವರಿಗೆ ಸೂಚನೆ ಮಾಡಿದಳು.

 ಆ ಸಮಯದಲ್ಲಿ ಪಂಜಾಬ್ ಪ್ರಾಂತ್ಯದ ರಾಜಕುಮಾರ ದುಲೀಪ್ ಸಿಂಗ್ ಅನ್ನುವನು  ಇಂಗ್ಲೆಂಡ್ ನಲ್ಲಿ ಇದ್ದ,  ಇವನು ಸಹ, ಪಂಜಾಬ್ ಪ್ರಾಂತ್ಯವನ್ನು ೧೮೪೯ನಲ್ಲಿ ಬ್ರಿಟಿಷರಿಗೆ ಕಳೆದುಕೊಂಡ ನಂತರ  ಇಂಗ್ಲೆಂಡ್ ಗೆ ಬಂದು ನೆಲಸಿದ್ದ, ರಾಣಿ ವಿಕ್ಟೊರಿಯ ಇವನನ್ನೂ  ಆದರದಿಂದ ಸ್ವಾಗತಿಸಿದ್ದಳು. ಅರಮನೆಯಲ್ಲಿ ಆಗುವ ಔತಣಗಳಿಗೆ ಆಮಂತ್ರಣ ಇರುತಿತ್ತು.  ದುಲೀಪ್ ಸಹ ಕ್ರೈಸ್ತ್ ಮತಕ್ಕೆ ಸೇರಿದ್ದ. ಆದ್ದರಿಂದ ಇವರಿಬ್ಬರ ಜೋಡಿ ಎಲ್ಲ ವಿಚಾರದಲ್ಲೂ ಸರಿ ಅಂದು ಇವರ ಮದುವೆ ವಿಚಾರ ಪ್ರಸ್ತಾಪ ಮಾಡಿದರು.  ಆದರೆ ಈ ಸಂಬಂಧ  ಇಬ್ಬರಿಗೂ ಸಮ್ಮತ ಇರಲಿಲ್ಲ, ದುಲೀಪ್ ಸಿಂಗ್ ಗೆ  ಇಂಗ್ಲೆಂಡಿನ ಶ್ರೀಮಂತರ ಮನೆತನದವರ ಸಂಬಂಧ ಬೇಕಿತ್ತು, ಗೌರಮ್ಮನಿಗೂ ಸಹ ಇದೇ  ಅಸೆ ಇತ್ತು.   ಇಬ್ಬರು ರಾಜಮನೆತನದ ಭಾರತೀಯರು ಮತ್ತು ಕ್ರೈಸ್ತ ಮತಕ್ಕೆ  ಸೇರಿದವರು, ಇವರಿಬ್ಬರು ಕೂಡಿದರೆ ಭಾರತದಲ್ಲಿ ಇನ್ನೂ ಅನೇಕರನ್ನು ಈ ಮತಕ್ಕೆ ಸೇರಿಸಿ ಕ್ರೈಸ್ತ ಮತವನ್ನು ಹರಡಬಹುದು ಅನ್ನುವ ಅಸೆ ಅನೇಕರಿಗಿತ್ತು.

ಗೌರಮ್ಮನನ್ನು  ಆಂಗ್ಲ ರೀತಿಯಲ್ಲಿ ಬೆಳಸುವ ಉದ್ದೇಶದಿಂದ ಹಲವಾರು ಕುಟುಂಬಗಳು ಭಾಗಿಯಾಗಿದ್ದರು. ಈ ಶತಮಾನದಲ್ಲಿ ಉನ್ನತ ದರ್ಜೆಯ ಮನೆತನದವರಿಗೆ ಸರಿಯಾದ ಸಂಗಾತಿಗಳು ಸಿಗುವುದು ಕಷ್ಟವಾಗಿತ್ತು ಮತ್ತು ವ್ಯವಸ್ಥಿತ ಮದುವೆಗಳು ಸಾಮಾನ್ಯವಾಗಿತ್ತು.  ಆದ್ದರಿಂದ ಇವಳಿಗೆ ಸರಿಯಾದ ಜೋಡಿ ಸಿಗುವುದು ಸುಲಭವಾಗಲಿಲ್ಲ . ಸರ್  ಹಾರ್ ಕೋರ್ಟ್ಎಂಬುವರ ಮನೆಯಲ್ಲಿ ಇದ್ದಾಗ ಇವಳಿಗೆ ಸಾಮಾಜಿಕ ಸಂಪರ್ಕ ಮತ್ತು ಸ್ವತಂತ್ರ ಇಲ್ಲದೆ  ಬೇಸರದಿಂದ ಇವರ  ಮನೆ ಬಟ್ಲರ್ ಜೊತೆಯಲ್ಲಿ ಓಡಿ   ಹೋಗುವ ಪ್ರಯತ್ನ ಮಾಡಿದಳು ಅನ್ನುವ  ಸುದ್ದಿಯು ರಾಣಿಯ ಕಿವಿಗೆ ಬಿತ್ತಂತೆ.  ಬೇರೆ ದೇಶಗಳಿಗೆ ಭೇಟಿ ಕೊಟ್ಟರೆ ಇವಳ ಜೀವನದ ಅನುಭವ ಹೆಚ್ಚಾಗಳೆಂಬ ಉದ್ದೇಶದಿಂದ  ಯೂರೋಪ್ ನಲ್ಲಿ ಪ್ರಯಾಣ ಮಾಡಲು ಲೇಡಿ ಲಾಗಿನ್ ಅನ್ನುವರ ಜೊತೆ ಮಾಡಿ ಕಳಿಸಿದಳು. 

ಗೌರಮ್ಮ ವಿಕ್ಟೋರಿಯಾಳ ಅಮೃತ ಶಿಲೆಯ ಪ್ರತಿಮೆ

ದುಲೀಪ್ ಸಿಂಗ್  ಸ್ನೇಹಿತ ಕರ್ನಲ್ ಕಾಂಪ್ ಬೆಲ್ ಅನ್ನುವ ಮಿಲಿಟರಿ ಅಧಿಕಾರಿ  ಮದ್ರಾಸ್ ರೆಜಿಮೆಂಟ್ ನಲ್ಲಿ  ಬಳ್ಳಾರಿಯಲ್ಲಿ  ವಾಸವಾಗಿದ್ದವನ ಪರಿಚಯ ಗೌರಮ್ಮನಿಗೆ ಆಯಿತು ಆದರೆ ಇವನು ಸುಮಾರು  ಇಪ್ಪತೈದು ಮೂವತ್ತು ವರ್ಷ ದೊಡ್ಡವನಾಗಿದ್ದ  ಮತ್ತು ಆಗಿನ ಹೆಂಡತಿಯಿಂದ ನಾಲ್ಕು ಮಕ್ಕಳು ಇದ್ದರು. ಇವರ ಸಂಬಂಧ ಅನೇಕರಿಗೆ  ಆಶ್ಚರ್ಯ ಆಯಿತು.  ಕೆಲವರ ಪ್ರಕಾರ ಈತನಿಗೆ ಗೌರಮ್ಮನ ಹತ್ತಿರ ಇದ್ದ ಓಡುವೆಗಳು ಮತ್ತು ವರ್ಷಕ್ಕೆ £೪೦೦ ಆದಾಯ ಆಕರ್ಷವಾಗಿತ್ತು. ಅಂತೂ ೧೮೬೦ ನಲ್ಲಿ ಮದುವೆ ನಡೆಯಿತು ಆದರೆ ಇವಳ ಗಂಡ ಜೂಜುಗಾರ ಮತ್ತು ಜವಾಬ್ದಾರಿ ಇಲ್ಲದ ಮನುಷ್ಯ ಅನ್ನುವುದು ಬೇಗ ಅರಿವಾಯಿತು. ಇವರ ಸಂಬಂಧ ಅತೃಪ್ತಿಕರ ವಾಗಿತ್ತು. ೧೮೬೨ ರಲ್ಲಿ ಒಬ್ಬ ಮಗಳು ಹುಟ್ಟಿದಳು , ಈಡಿತ್ ವಿಕ್ಟೋರಿಯಾ ಗೌರಮ್ಮ ಎಂದು ನಾಮಕರಣ ಮಾಡಿದರು. 

ದುರಾದೃಷ್ಟದಿಂದ ಗೌರಮ್ಮ ನ ಅರೋಗ್ಯ ಕ್ಷಯ ರೋಗದಿಂದ ಕೆಟ್ಟಿತ್ತು, ೩೦/೩/೧೮೬೪ ರಲ್ಲಿ ಅವಳ ೨೩ನೇ ಜನ್ಮದಿನಕ್ಕೆ ಮುಂಚೆ ತೀರಿಕೊಂಡಳು. ನಂತರ ಇವಳ ಗಂಡ ಗೌರಮ್ಮನ ಓಡುವೆಗಳನ್ನು ಕದ್ದು ಪರಾರಿ ಆದ . ವಿಕ್ಟೋರಿಯಾ ರಾಣಿಗೆ  ಗೌರಮ್ಮನ ಸಾವಿನಿಂದ  ಬಹಳ ನೋವಿತ್ತು. ಅವಳ ಸಮಾಧಿಯ ಕಲ್ಲಿನ ಶಾಶನ ಮೇಲಿರುವ ಸಂದೇಶ ಸ್ವತಃ ರಾಣಿಯಿಂದ ಬಂದಿದ್ದು.  

ಗೌರಮ್ಮನ ಸಮಾಧಿ

ಚಿತ್ರಗಳ ಕೃಪೆ: ಗೂಗಲ್

ಇವಳ ಸಮಾಧಿ  ಲಂಡನ್ ಬ್ರಾಂಪ್ಟನ್ನಲ್ಲಿದೆ ಮತ್ತು ಇವಳ ಅಮೃತ ಶಿಲೆಯ ಪ್ರತಿಮೆ ಐಲ್ ಆಫ್ ವೈಟ್ (Isle of Wight ) ನಲ್ಲಿರುವ Osborn House ನಲ್ಲಿ ನೋಡಬಹುದು.

ಇವಳ ಮಗಳು ಈಡಿತ್ ನನ್ನು  ವಿಕ್ಟೋರಿಯಾ ರಾಣಿ ನೋಡುವ ಅವಕಾಶ ಬರಲಿಲ್ಲ ಈ ಸಮಯದಲ್ಲಿ ಅವಳ ಗಂಡ ಪ್ರಿನ್ಸ್ ಅಲ್ಬರ್ಟ್ ತೀರಿಕೊಂಡ ಕಾರಣ ರಾಣಿ ಶೋಕದಲ್ಲಿದ್ದಳು.  ಈ ಮಗು ಅನಾಥೆಯಾಗಿ ಬೆಳೆಯಿತು. ಇವಳನ್ನು ಬೆಳುಸುವ  ಜವಾಬ್ದಾರಿ ವಿಚಾರ ನ್ಯಾಯಾಲದಲ್ಲಿ ಚರ್ಚೆ ಸಹ ಆಯಿತು. ಅಂತೂ ಈಡಿತ್ ಬೆಳದಮೇಲೆ ೧೮೮೨ನಲ್ಲಿ ಹೆನ್ರಿ ಎಡ್ವರ್ಡ್ ಯಾರ್ಡ್ಲಿ ಅನ್ನವನ್ನು ಮದುವೆಯಾದಳು. 

ಚಿಕ್ಕವೀರರಾಜೇಂದ್ರನಿಗೆ ನ್ಯಾಯಾಲದಿಂದ ಸಹ ಪರಿಹಾರ ಸಿಕ್ಕಲಿಲ್ಲ, ಮಗಳ ಹತ್ತಿರ ಎಷ್ಟು ಸಂಭಂದ ಇತ್ತು ಅನ್ನುವುದು ಗೊತ್ತಿಲ್ಲ. ಕೊನೆಗೆ ಅನೊರೋಗ್ಯದಿಂದ ೨೪/೯/೧೮೫೯ ರಂದು, ಕ್ಲಿಫ್ಟನ್ ವಿಲ್ಲಾಸ್, ವಾರ್ವಿಕ್ ರಸ್ತೆ ಮೈಡ ಹಿಲ್ ಲಂಡನ್ ನಿಧನನಾದ. ಇವನ ಸಮಾಧಿ Kensal Green Cemetery ಯಲ್ಲಿದೆ. 

ಹೆಚ್ಚೆನ ಓದುವಿಕೆ ( Further Reading )

ಮಾಸ್ತಿ ಅವರ ಚಿಕ್ಕವೀರರಾಜೇಂದ್ರ ಪುಸ್ತಕಕ್ಕೆ ಜ್ಞಾನ ಪೀಠ ಪ್ರಶಸ್ತಿ (೧೯೮೩)

The Lost Princes of Coorg  by cp Belliappa 

Court Life and Camp Life by Lady Login (೧೮೨೦-೧೯೦೪) ಈಕೆ ಭಾರತದಲ್ಲಿ ವಾಸ ಮಾಡಿದ್ದವಳು, ಅವಳ ಅನುಭವಗಳನ್ನು ಇಲ್ಲಿ ಬರೆದಿದ್ದಾ.ಳೆ 

Coorg and Its Rajahs by an Officer . ಇದು ಒಂದು ಸ್ವಾರಸ್ಯಕರವಾದ   ಪುಸ್ತಕ, ೧೮೫೭ ರಲ್ಲಿ ಲಂಡನ್ ನಲ್ಲಿ ಪ್ರಕಟವಾಯಿತು. ಬರೆದವನ ಹೆಸರಿಲ್ಲ ಆದರೆ ಚಿಕ್ಕವೀರರಾಜೇಂದ್ರ ಆಸ್ಥಾನದಲ್ಲಿ ಇದ್ದವನು ಮತ್ತು ಕೊಡಗಿನ ಚರಿತ್ರೆಯನ್ನು ಬಹಳ ವಿವರವಾಗಿ ಬರೆದಿದ್ದಾನೆ,  ಕೆಲವು ಧಾಖಲೆಗಳನ್ನು ನೋಡಿದರೆ ಈತನಿಗೆ ನಮ್ಮ ಪಂಚಾಂಗದ ಬಗ್ಗೆ ಅರವಿತ್ತು, ಉದಾಹರಣೆಗೆ ” on a Amavasya day  in Shukla Paksha …..  ಇತ್ಯಾದಿ.    

ಕೊನೆಯದಾಗಿ , ಬೆಳ್ಳಿಯಪ್ಪನವರ ಸಂಶೋದನೆಯಿಂದ ಗೌರಮ್ಮನ ಮಗಳು ಈಡಿತ್ ಗೌರಮ್ಮ ಕ್ಯಾಮ್ಪ್ ಬೆಲ್ ಮನೆತನದವವರನ್ನು ಹುಡಿಕಿದ್ದಾರೆ. ಇಂದಿನ ಪೀಳಿಗೆಯ ಕೆಲವರು  ತಮ್ಮ ವಂಶದ ಬಗ್ಗೆ ತಿಳಿಯಲು ಕೊಡಗುಗೆ ಭೇಟಿ ಮಾಡಿದ್ದಾರೆ. 

ಬ್ರಿಟಿಷ ಪ್ರಜೆಗಳು ತಮ್ಮ ಕುಟುಂಬದ ವಂಶಾವಳಿಯನ್ನು ಹುಡಿಕಿದರೆ ಭಾರತಿಯರ  ರಕ್ತ ಸಂಭಂದ ಅನೇಕರಲ್ಲಿ ಸಿಗುವುದು ಏನು ಆಶ್ಚರ್ಯವಿಲ್ಲ,  ಅನೇಕರು  ಸ್ಥಳೀಯರನ್ನು ಮದುವೆಯಾಗಿ  ಸಂಸಾರಸ್ಥರಾಗಿದ್ದರು,  Who Do You Think You Are  ಅನ್ನುವ ಟಿವಿ ಪ್ರೋಗ್ರಾಮ್ ನಲ್ಲಿ ಪ್ರಸಿದ್ಧ ಹಾಸ್ಯಗಾರ Alistair McGowan ವಂಶದವರು ಭಾರತೀಯರು ಎನ್ನುವುದು ತಿಳಿಯಿತು , ಇವರು ಕಲಕತ್ತಾ ಗೆ ಭೇಟಿಮಾಡಿದಾಗ ಹಲವಾರು McGowan ಬಂಧುಗಳನ್ನು  ಭೇಟಿಮಾಡಿದರು, ಹೀಗೆ ಅನೇಕ ಉದಾಹರಣೆಗಳನ್ನು ಕೊಡಬಹುದು,  ಸ್ಕ್ಯಾಟ್ ಲ್ಯಾಂಡಿನ Billi Connolly  ಅವರ ಮುತ್ತಜ್ಜ ಅಥವಾ ಮುತ್ತಜ್ಜಿ, ಸರಿಯಾಗಿ ಜ್ಞಾಪಕ ಇಲ್ಲ, ಭಾರತೀಯರು.

ರಾಮಮೂರ್ತಿ

ಬೇಸಿಂಗ್ ಸ್ಟೋಕ್ 

11 thoughts on “ಕೊಡಗಿನ ರಾಜಕುಮಾರಿ ಗೌರಮ್ಮ ವಿಕ್ಟೋರಿಯ- ಶ್ರೀ.ರಾಮ ಮೂರ್ತಿ

  1. ನಮಸ್ಕಾರ.
    ಬೇಸಿಂಗ್ ಸ್ಟೋಕ್ ನ ರಾಮಮೂರ್ತಿ ಅವರ ಈ ಲೇಖನ ಕೊಡಗಿನ ಇತಿಹಾಸದ ಅತ್ಯಂತ ಕುತೂಹಲಕಾರಿ ಘಟನೆಯೊಂದನ್ನು ಸ್ವಾರಸ್ಯವಾಗಿ ನಿರೂಪಿಸಿದೆ. ಕನ್ನಡಿಗರಾದ ನಮಗೆ‌ ಈ ಕತೆ ಏಕಕಾಲಕ್ಕೆ ಒಂದು ಬಗೆಯ ಸಂತೋಷವನ್ನೂ, ವಿಷಾದವನ್ನೂ ಮೂಡಿಸುತ್ತಿದೆ. ಬ್ರಿಟಿಷರು ಭಾರತವನ್ನು ಬಹು ಸುದೀರ್ಘ ಕಾಲ ಆಳಿದವರಾದ್ದರಿಂದ ಇತಿಹಾಸದ ಗರ್ಭದಲ್ಲಿ ಈ ಬಗೆಯ ಅದೆಷ್ಟು ಕತೆಗಳಿಯೋ?!?! ಬ್ರಿಟಿಷರ ಬಗ್ಗೆ ದ್ವೇಷ, ಪ್ರೀತಿ, ಕುಹಕ, ವ್ಯಂಗ್ಯಗಳೇನೂ ಇಲ್ಲದೆ ಇತಿಹಾಸವನ್ನು ನಿರೂಪಿಸಿರುವ ರಾಮಮೂರ್ತಿ ಅವರ ಬಗ್ಗೆ ಗೌರವ ಮೂಡುತ್ತದೆ. ರಾಮಮೂರ್ತಿ ಅವರು ಇತಿಹಾಸವನ್ಮು ಇನ್ನೊಂದಿಷ್ಟು ಜಾಲಾಡಿ ಈ ಬಗೆಯ ಕತೆಗಳನ್ನು ಹೇಳಲಿ. ಓದುವುದಕ್ಕೆ ನಾವಂತೂ ಕಾಯುತ್ತಿರುತ್ತೇವೆ.

    -ಪ್ರೊ. ಎಂ. ಕೃಷ್ಣೇಗೌಡ.
    ಮೈಸೂರು.

    Liked by 1 person

    • ನಿಮ್ಮ ಪ್ರಶಂಸೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. 🙏🙏 ಸವಿತ ಸುರೇಶ್

      Like

  2. ತಮ್ಮ ಲೇಖನ ಬಹಳ ಸ್ವಾರಸ್ಯಕರವಾಗಿದೆ.
    ತಮ್ಮ ಸಂಶೋದನಶಕ್ತಿ, ಬರೆಯುವ ಶೈಲಿ, ಇತಿಹಾಸದಲ್ಲಿ ಇರುವ ಆಸಕ್ತಿ, ಎಲ್ಲವೂ ಬಹಳ ಚೆನ್ನಾಗಿ ಮೂಡಿಬಂದಿದೆ.
    ಇದೇ ರೀತಿ ಇನ್ನೂ ಲೇಖನವನ್ನು ಬರೆದು ನಮಗೂ ಇತಿಹಾಸ ವನ್ನು ಹೆಚ್ಚಾಗಿ ಅರಿವು ಮಾಡಿಸ. ಬೇಕೆಂದು ವಿನಂತಿ

    Liked by 1 person

  3. ತಾವು ಮಾಡುವ ಸಂಶೋದನೆ, ತಮಗೆ ಇತಿಹಾಸದಲ್ಲಿ ಇರುವ ಆಸಕ್ತಿ ತಾವು ಮಾಡುವ ವಿವರಣೆಗಳು ಎಲ್ಲವೂ ಯಾವಾಗಲೂ ಸ್ವಾರಸ್ಯಕರವಾಗಿ ನಮ್ಮನೆಲ್ಲ ಆ ಸನ್ನಿವೇಶದಲ್ಲಿ ಒಬ್ಬರನ್ನಾಗಿ ಮಾಡುತ್ತದೆ
    ದಯವಿಟ್ಟು ಇದೇ ರೀತಿ ಬರೆಯುತಿಲಿರಿ

    ತಮ್ಮ ಅಭಿಮಾನಿ
    Drs ಅಪ್ಪಾಜಿ ಮತ್ತು ಭಾನುಮತಿ

    Liked by 1 person

  4. ರಾಮಮೂರ್ತಿಯವರೆ, ನಿಮ್ಮ ’ಐತಿಹಾಸಿಕ ಆಸ್ಥೆ ಮತ್ತು ಹವ್ಯಾಸ’ ಮತ್ತೊಂದು ಸ್ವಾರಸ್ಯಕರ ಲೇಖನವನ್ನು ’ಪೆನ್ನಿ’ಗಿಳಿಸಿದೆ. ಸಿ ಪಿ ಬೆಳ್ಳಿಯಪ್ಪನವರ ಪುಸ್ತಕದ ಪ್ರಕಟನೆಯ ವಿಷಯ ಓದಿದ್ದು ನೆನಪಿದೆ. (ಅದನ್ನೂ ನೀವೇ ಸಂದೇಶದಲ್ಲಿ ಬರೆದುದಾ?). ತದ ನಂತರ ರಾಜಕುಮಾರಿ ಗೌರಮ್ಮನ ಮರಿ-ಮರ್-ಮರಿ ಮೊಮ್ಮಗಳು ಕೊಡಗಿಗೆ ಬೇಟಿ ಕೊಟ್ಟುದ್ದನ್ನು ಅವರು ದಾಖಲಿಸಿದ್ದಾರೆ. (https://www.deccanherald.com/content/637068/a-tryst-history.html) ಇದು information technology/explosion ಕಾಲ. ಆತ archives.org ದಿಂದಲೆ ಒಂದು ಕಾಸು ಖರ್ಚುಮಾಡದೆ ಮೂರು ಪುಸ್ತಕಗಳನ್ನಿಳಿಸಿ ಸಂಶೋಧಿಸಿದ್ದಾಗೆ ಬರೆದಿದ್ದಾರೆ. ಅದೇ ತರ ಮಂತ್ರಾಲಯಕ್ಕೆ ಭೇಟಿಕೊಟ್ಟು ವೃಂದಾವನಸ್ತರಾದ ರಾಘವೇಂದ್ರಸ್ವಾಮಿಯವರೊಡನೆ ’ಸಂವಾದ ’ಮಾಡಿದನೆಂದು ಹೇಳಲಾದ ಮೊದಲ ಬ್ಯಾರೋನೆಟ್ ಮನ್ರೋ ನ ವಂಶಜರು ಆ ಸನ್ನಿಧಿಗೆ ಬಂದಿದ್ದರೆಂದೂ”ಸುದ್ದಿ’. ಇವೆಲ್ಲ ರೋಚಕ. ಇತಿಹಾಸದ ಕುತೂಹಲವನ್ನೆಬ್ಬಿಸುವ ಪುಟಗಳು ತೆರೆದುಕೊಳ್ಳುತ್ತಿವೆ. ಪರಿಚಯಿಸಿದ್ದಕ್ಕೆ ಧನ್ಯವಾದಗಳು.

    Liked by 1 person

    • ಮನ್ರೋ ಮಂತ್ರಾಲಯಕ್ಕೆ (allegedly ) ಹೊದ ವಿಚಾರ ಕೇಳಿದ್ದೇನೆ ಆದರೆ ಅವರ ಮನೆತನದವರು ಭೇಟಿಮಾಡಿದ್ದ ವಿಚಾರ ಗೊತ್ತಿಲ್ಲ
      ಗೌರಮ್ಮ ಬಗ್ಗೆ ಹುಡಿಕಿದಾಗ ಅನೇಕ ಸ್ವಾರಸ್ಯವಾದ ವಿಷಯಗಳು ತಿಳಿಯಿತು , ಒಬ್ಬ ಮಿಲಿಟರಿ ಅಧಿಕಾರಿ , ಅವನ ಹೆಸರು ಗೊತ್ತಿಲ್ಲ, ಕೊಡಗಿನ ರಾಜ್ಯವಂಶದ ಬಗ್ಗೆ ಬರೆದಿರುವ ಪುಸ್ತಕ ಈಗ ಕೊಲಂಬಿಯಾ ಯೂನಿವರ್ಸಿಟಿ ನಲ್ಲಿ ಇದೆ, ಚಿಕ ವೀರರಾಜಜೇಂದ್ರ
      ತನ್ನ ಇಬ್ಬರು ಪತ್ನಿ , ಗೌರಮ್ಮ ಮತ್ತು ಆರು ಸೇವಕರೊಂದಿಗೆ ಒಂದು Southampton ಹೋಟೆಲ್ ನಲ್ಲಿ ತಂಗಿದ್ದು ಹೇಗೆ ರಾಣಿಯರು ಪರಧ ದಲ್ಲಿ ಇದ್ದರು ಮತ್ತು ಸೇವಕರು ಮೇಜುಗಳ ಕೆಳಗೆ ರಾತ್ರಿ ಮಲಗಿ ಹೊರಗೆ ಅಡಿಗೆ ಮಾಡುತ್ತಿದ್ದಾರ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ವಿವರಣೆ ಇದೆ
      ನೀವು ಹೇಳಿದಹಾಗೆ ಈಗ information explosion ಕಾಲ ,

      Like

  5. ಒಂದು ಸಣ್ಣ ತಿದ್ದುಪಡಿ ,
    ಚಿಕ್ಕ ವೀರ ರಾಜೇಂದ್ರ ಅಲ್ಲ ಚಿಕ ವೀರ ರಾಜೇಂದ್ರ
    ಮಾಸ್ತಿ ಅವರ ಪುಸ್ತಕ ಚಿಕವೀರ ರಾಜೇಂದ್ರ

    Regret for this error.
    Ramamurthy

    Like

  6. ಸ್ವಾರಸ್ಯಕರವಾದ ಸಂಗತಿಗಳು. ಕೊಡಗಿನ ಜನರನ್ನು ನಾನು ಬಹಳ ಕುತೂಹಲದಿಂದ ಗಮನಿಸಿದ್ದೇನೆ, ನನಗೆ ಅಲ್ಲಿ ಬ್ರಿಟಿಷ್
    ಸಂಸ್ಕೃತಿಯ ಎಳೆ ಕಂಡಿದ್ದು ಆಶ್ಚರ್ಯವೇನಲ್ಲ. ರಾಮಮೂರ್ತಿ ಅವರು ನಮಗೆ ಇಲ್ಲಿಯವರೆಗೆ ಸಾಕಷ್ಟು ಪ್ರಸ್ತುತವಾದ
    ಅಂದರೆ ಬ್ರಿಟಿಷ್ ಮತ್ತು ಭಾರತದ ಐತಿಹಾಸಿಕ ಸಂಬಂಧಗಳ ಬಗ್ಗೆ ತಿಳಿಪಡಿಸಿದ್ದಾರೆ.
    Ramamurthy is a good historian within our group,
    hoping to get more history lessons from him

    Liked by 1 person

  7. Excellent article by Ramamurthy. I did not know anything about it. Thank you for digging deep into the history and giving us such invaluable article. Your interest in history is unmatched. Thank you.

    Liked by 1 person

Leave a comment

This site uses Akismet to reduce spam. Learn how your comment data is processed.