ಕನ್ನಡ ನಾಡಿನ ಹೆಮ್ಮೆಯ ಪುತ್ರ ಭಾರತ ರತ್ನ ಸರ್ ಎಂವಿ

ಭಾರತ ರತ್ನ ಸರ್ ಎಂ ವಿ ( ೧೫/೦೯/೧೮೬೧ – ೧೨/೦೪/೧೯೬೨)

 

ನಮ್ಮ ಅನಿವಾಸಿಯ ಹಿರಿಯ ಸದಸ್ಯ ರಾಮಮೂರ್ತಿ ಅವರು ನಾಡಿನ ಹೆಮ್ಮೆಯ ಪುತ್ರ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಬರೆದಿರುವ ಲೇಖನ ಅವರ ಬದುಕು ಮತ್ತು ಸಾಧನೆಗಳ ಬಗೆಗಿನ ಸಂಕ್ಷಿಪ್ತ ಪರಿಚಯವೆನ್ನಬಹುದು.
ಇಲ್ಲಿ ಸರ್ ಎಂವಿ ಅವರ ವಯುಕ್ತಿಕ ಪರಿಚಯವಲ್ಲದೆ ಅವರ ಪ್ರತಿಭೆ, ನಿಷ್ಠೆ ದೂರದೃಷ್ಟಿ , ಸ್ವಾಭಿಮಾನ ಮತ್ತು ಕನ್ನಡಿಗರ ಬಗ್ಗೆ ಅವರಿಗಿದ್ದ ಪ್ರೀತಿ ಮತ್ತು ಕಾಳಜಿಗಳು ಎದ್ದು ತೋರುತ್ತದೆ. ಈ ಬರವಣಿಗೆಯಲ್ಲಿನ ಹಲವಾರು ಮಾಹಿತಿಗಳು ಮತ್ತು ಸ್ವಾರಸ್ಯಕರ ಘಟನೆಗಳು ಸರ್ ಎಂವಿ ಅವರ ವ್ಯಕ್ತಿತ್ವದ ಪೂರ್ಣ ಪರಿಚಯ ಮಾಡಿಕೊಡುವುದರಲ್ಲಿ ಸಫಲವಾಗಿದೆ.

ಸರ್ ಎಂವಿ ಅವರು ಹಲವಾರು ದೇಶಗಳಲ್ಲಿ ಪ್ರವಾಸ ಮಾಡಿ ಆಗಿನ ಕಾಲಕ್ಕೆ ಅಲ್ಲಿನ ತಂತ್ರಜ್ಞಾನವನ್ನು ಅಧ್ಯಯನ ಮಾಡಿ ಅದನ್ನು ನಮ್ಮ ನಾಡಿನಲ್ಲಿ ಅಳವಡಿಸಿದ ನಿಷ್ಣಾತ ಇಂಜಿನೀಯರ್ ಅಷ್ಟೇ ಅಲ್ಲದೆ ಕೈಗಾರಿಕೆ , ವಾಣಿಜ್ಯ, ಆಡಳಿತ, ಶಿಕ್ಷಣ ಹೀಗೆ ಅನೇಕ ಕ್ಷೇತ್ರದಲ್ಲಿ ಕೈ ಹಾಕಿ ಕರ್ನಾಟಕ ರಾಜ್ಯದ ಸರ್ವತೋಮುಖ ಪ್ರಗತಿಗೆ ಕಾರಣರಾಗಿದ್ದರು  ಎಂಬ ವಿಷಯ ಈ ಲೇಖನದಲ್ಲಿ ಎದ್ದು ತೋರುತ್ತದೆ.

ನಮ್ಮ ನಾಡಿನ ಶಿಲ್ಪಿ ಸರ್ ಎಂವಿ ಅವರನ್ನು ನಾವು ಎಂದಿಗೂ ಮರೆಯಬಾರದೆಂಬ ವಿಚಾರವನ್ನು ರಾಮಮೂರ್ತಿ ತಮ್ಮ ಕೊನೆಯ ಮಾತುಗಳಲ್ಲಿ ಪ್ರಸ್ತಾಪ ಮಾಡಿರುವುದು ಸೂಕ್ತವಾಗಿದೆ. (ಸಂ )

 

ಕನ್ನಡ ನಾಡಿನ ಹೆಮ್ಮಯ ಪುತ್ರ ಭಾರತ ರತ್ನ ಸರ್ ಎಂವಿ

ರಾಮಮೂರ್ತಿ

 

ನಮ್ಮ ಇತಿಹಾಸದಲ್ಲಿ ೧೮೬೧ ಬಹಳ ಮುಖ್ಯವಾದ ವರ್ಷ ಎನ್ನ ಬಹುದು, ಈ ವರ್ಷ ಇಂಡಿಯ ದೇಶದ ಶಾಸನ ಸಭೆ (Indian Council Act ) ಜಾರಿಗೆ ಬಂತು. ಅಮರ ಕವಿ ರವೀಂದ್ರನಾಥ್ ಠಾಗೂರ್, ಪಂಡಿತ್ ಮೋತಿಲಾಲ್ ನೆಹರು, ಮದನಮೋಹನ ಮಾಳವಿಯ ಮತ್ತು ನಮ್ಮ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಮುಂತಾದ ಗಣ್ಯ ವ್ಯಕ್ತಿಗಳು ಈ  ವರ್ಷದಲ್ಲಿ  ಜನ್ಮ ತಾಳಿದರು.

ಸರ್ ಎಂವಿ ಚಿಕ್ಕಬಳ್ಳಾಪುರ್ ಹತ್ತಿರ ಮುದ್ದೇನಹಳ್ಳಿ ಗ್ರಾಮದಲ್ಲಿ ಸೆಪ್ಟೆಂಬರ್ ೧೫ ೧೮೬೧ ಜನಿಸಿದರು. ಅವರ ತಂದೆ ಶ್ರೀನಿವಾಸ ಶಾಸ್ತ್ರೀ ಮತ್ತು ತಾಯಿ ವೆಂಕಟಲಕ್ಷಮ್ಮ. ಇವರು ತೆಲಗು ಮಾತನಾಡುವ ಬ್ರಾಹ್ಮಣ ಮನೆತನದವರು, ತಂದೆ ಸಂಸ್ಕೃತ ಪಂಡಿತರು ಮತ್ತು ಅಲ್ಲಿನ ಶಾಲೆಯಲ್ಲಿ ಉಪಾಧ್ಯಾಯರು . ಬಡತನದಲ್ಲಿ ಬೆಳದ ಈ ಮಗುವಿನ ವಿದ್ಯಾಭ್ಯಾಸ ಹತ್ತಿರದಲ್ಲೇ ಬಂದೇಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆ ಯಲ್ಲಿ ಪ್ರಾರಂಭ ವಾಯಿತು. ೧೮೭೫ರಲ್ಲಿ ಸರ್ ಎಂವಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ೧೮೮೧ ನಲ್ಲಿ B A ಪದವಿ ಪಡೆದರು . ಆಗ ಈ ಕಾಲೇಜು ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಸೇರಿತ್ತು, ಈತನನಿಗೆ ಹಣ ಸಹಾಯ ಏನೂ ಇರಲಿಲ್ಲ. ಆದರೆ ತುಂಬಾ ಬುದ್ದಿವಂತರಾದ ಎಂವಿ , ಹತ್ತಿರದಲ್ಲೆ ಇದ್ದ ಕೊಡಗು ಮನೆತನವರ ಮನೆಯಲ್ಲಿ ಇದ್ದು ಅವರ ಮನೆಯ ಮಕ್ಕಳಿಗೆ ಪಾಠ ಮಾಡಿ ಸ್ವಲ್ಪ ಹಣ ಸಂಪಾದಿಸಿ ವಿದ್ಯಾಭ್ಯಾಸ ಪೂರೈಸಿದರು. ಪದವಿಯಲ್ಲಿ ಇವರು ಉನ್ನತ ವರ್ಗದಲ್ಲಿ ತೇರ್ಗಡೆಯಾಗಿದ್ದು ಮೈಸೂರು ಸರ್ಕಾರ ಇವರಿಗೆ ಪುಣೆ ಯಲ್ಲಿ ಇಂಜಿ ನೀಯರಿಂಗ್ ಓದಲು ವಿದ್ಯಾರ್ಥಿವೇತನ ಕೊಟ್ಟಿತು. ಎಂವಿ ಯವರು ೧೮೮೩ ನವೆಂಬರಲ್ಲಿ ಮುಂಬೈ ವಿಶ್ವವಿದ್ಯಾನಿಲಯದಿಂದ ಮೊದಲನೆಯ ದರ್ಜೆಯಲ್ಲಿ ಉತ್ತೀರ್ಣ ರಾಗಿ ೧೮೮೪ ಫೆಬ್ರುವರಿ ತಿಂಗಳಲ್ಲಿ ಅಸಿಸ್ಟೆಂಟ್ ಇಂಜಿನೀರ್ ಹುದ್ದೆ ಪಡೆದು ನಾಸಿಕ್ ನಲ್ಲಿ ಕೆಲಸ ಶುರು ಮಾಡಿದರು .

 

ಸೆಂಟ್ರಲ್ ಕಾಲೇಜ್ ವಿದ್ಯಾರ್ಥಿ, ೧೮೭೫

 

ಸರ್ ಎಂ. ವಿ. ಬೆಳದ ಮುದ್ದೇನಹಳ್ಳಿ ಮನೆ

ಮುಂಬೈ ಸರ್ಕಾರದಲ್ಲೇ ಮುಂದೆವರೆದು Executive Engineer ಆಗಿ ಅನೇಕ ನೀರಾವರಿ ಯೋಜನಗಳನ್ನ ಸಂಪೂರ್ಣ ಮಾಡಿ ಮೇಲಿನ ಅಧಿಕಾರಗಳ ಮನ್ನಣೆ ಪಡದು ಲಂಡನ್ Institute of Civil Engineers ಸದಸ್ಯತ್ವ ಪಡೆದರು. ಈ ಒಂದು ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಇಂಜಿನೀಯರ್ ಸರ್ ಎಂವಿ ಎನ್ನಬಹುದು. ಇವರಿಗೆ ಬೇರೆ ದೇಶಗಳಿಗೆ ಹೋಗಿ ಅಲ್ಲಿನ ನೀರಾವರಿ ಮತ್ತು ಕೈಗಾರಿಕೆ ವಿಷಗಳನ್ನು ತಿಳಿದುಕೊಳ್ಳುವ ಕುತೂಹಲ ಮತ್ತು ಹಂಬಲವಿತ್ತು. ೧೮೯೮ ರಲ್ಲಿ ಜಪಾನ್ ದೇಶಕ್ಕೆ ಭೇಟಿ ಕೊಟ್ಟು ಆ ದೇಶದ ಶಿಸ್ತು ಮತ್ತು ಉತ್ಸಾಹದಿಂದ ಪ್ರಭಾವಿತರಾದರು. ಒಂದಲ್ಲ ಒಂದು ದಿನ ಭಾರತವೂ ಹೀಗೆಯೇ ಮುಂದುವರೆಯಬೇಕು ಅನ್ನುವ ಕನಸು ಅವರಿಗೆ ಇಲ್ಲಿ ಹುಟ್ಟಿರಬಹುದು. ಇನ್ನು ಮುಂದೆ ಅನೇಕ ಸಲ ಈ ದೇಶಕ್ಕೆ ಭೇಟಿ ನೀಡಿದರು

೧೮೯೯ ನಲ್ಲಿ ಪುಣೆ ನಗರದ ನೀರಾವರಿ ವ್ಯವಸ್ಥೆಗೆ ಸರ್ ಎಂವಿ ಸೂಚಿಸಿದ Block System ಅಂಗೀಕೃತವಾಗಿ ೧೯೦೧ ರಲ್ಲಿ ನಿರ್ಮಾಣವೂ ಆಯಿತು. ಈ ಸಮಯದಲ್ಲಿ ಅವರಿಗೆ ಶ್ರೀ ಗೋಪಾಲ ಕೃಷ್ಣ ಗೋಖಲೆ ಅವರ ಪರಿಚಯವಾಯಿತು. ೧೯೦೩ ರಲ್ಲಿ ವಿಶೇಶ್ವರಯ್ಯ ನವರ ಹೆಸರು ಪ್ರಸಿದ್ಧವಾಗಿದ್ದು “Automatic water flood gate system” ಅನ್ನುವ ಅವರ ವಿನ್ಯಾಸ (design) ದಿಂದ  ಇದನ್ನು ಸರ್ಕಾರ ಪೇಟೆಂಟ್ ಮಾಡಿ ಖಡಕ್ ವಾಸ್ಲಾ ಜಲಾಶದಲ್ಲಿ ಮೊದಲಬಾರಿಗೆ ಅಳವಡಿಸಲಾಯಿತು. ಸರ್ಕಾರದ ಈ ಪೇಟೆಂಟ್ ನಿಂದಾಗಿ ಸರ್ ಎಂವಿ ಅವರಿಗೆ ಹಣ ಬರಬಹುದ್ದಾಗಿದ್ದರೂ ತಾವು ತಮ್ಮ ಕರ್ತವ್ಯವಷ್ಟೇ ಮಾಡಿದೆರೆಂಬ ಕಾರಣದಿಂದ ನಿರಾಕರಿಸಿದರು.

೧೯೦೬ ರಲ್ಲಿ ಕೇಂದ್ರ ಸರಕಾರ ಇವರನ್ನು ಏಡನ್ ನಗರಕ್ಕೆ ಅಲ್ಲಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಕೋರಿತು. ಇದು ಯಶಸ್ವಿ ಆದಮೇಲೆ ಕೊಲ್ಲಾಪುರ ಧಾರವಾಡ ಮತ್ತು ಬಿಜಾಪುರದಲ್ಲಿದಲ್ಲಿ ಇದೇ ರೀತಿಯ ನೀರಿನ ಸಮಸ್ಯೆಗಳ ಪರಿಹಾರ ಮಾಡಿದರು. ಭಾರತದ ಅನೇಕ ಪ್ರಾಂತಗಳಿಂದ chief engineer ಆಗುವುದಕ್ಕೆ ಆಹ್ವಾನ ಬಂದರೂ ಮುಂಬೈ ನಲ್ಲಿ ಸೇವೆಯನ್ನು ಮುಂದುವರೆಸಿ ನಿವೃತ್ತಿಗೆ ಮುಂಚೆ ರಜ ಪಡೆದು ೧೯೦೮ ನಲ್ಲಿ ಇಟಲಿ ಇಂಗ್ಲೆಂಡ್ ಅಮೇರಿಕ ಮತ್ತು ಕೆನಡಾ ದೇಶದಲ್ಲಿ ಪ್ರವಾಸಮಾಡಿದರು . ಇಟಲಿಯ ಪ್ರವಾಸ ದಲ್ಲಿ ಇದ್ದಾಗ ಹೈದರಾಬಾದ್ ನಿಜಾಮ್ ಇವರ ಸಹಾಯ ಬೇಕೆಂದು ವಿನಂತಿ ಮಾಡಿದಾಗ ೧೯೦೯ರಲ್ಲಿ ಭಾರತಕ್ಕೆ ಹಿಂತಿರಗಿ ಅಲ್ಲಿನ ಕೆಲಸ ಶುರು ಮಾಡಿದರು. ಮಳೆಗಾಲದಲ್ಲಿ ಮ್ಯೂಸಿ ನದಿಯ ನೀರಿನ ಪ್ರಹಾವದಿಂದ ವಿಪರೀತ ಅನಾಹುತ ತಪ್ಪಿಸಲು ಈ ನದಿಗೆ ಆಣೆಕಟ್ಟು ಕಟ್ಟಿ, ಕುಡಿಯುವ ನೀರು ಮತ್ತು ಒಳ ಚರಂಡಿಯ ವ್ಯವಸ್ಥೆ ಮಾಡಿ ಈ ಪ್ರಾಂತ್ಯದ ಸಮಸ್ಯೆಗಳನ್ನು ಪರಿಹರಿಸಿದರು. ನವೆಂಬರ್ ೧೯೦೯ ಮೈಸೂರಿನ ಮಹಾರಾಜರಾಗಿದ್ದ ಕೃಷ್ಣ ರಾಜಒಡೆಯರ್ಯರಿಂದ ಅಲ್ಲಿ ಚೀಫ್ ಇಂಜಿನೀಯರ್ ಆಗಲು ಆಹ್ವಾನ ಬಂದಾಗ ಸಂತೋಷದಿಂದ ತಾವು ಹುಟ್ಟಿದ ನಾಡಿಗೆ ಬರಲು ಒಪ್ಪಿಗೆ ಕೊಟ್ಟು ಅನೇಕ ಯೋಜನೆಗಳನ್ನು ಪ್ರಾರಂಭಿಸಿದರು.

 

ದಿವಾನರಾಗಿ ಸರ್ ಎಂ.ವಿ. ೧೯೧೨

 

ಈಗಿನ ಮಂಡ್ಯ ಮತ್ತು ಮದ್ದೂರು ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ಹಸಿರು! ಅದೇ ನೂರು ವರ್ಷದ ಹಿಂದೆ ಈ ಪ್ರದೇಶ ಬರಡಾಗಿತ್ತು. ನೀರಿನ ಅಭಾವಕ್ಕೆ ಬೆಳೆಗಳು ಇಲ್ಲದೆ ಜನರು ಬಹಳ ಕಷ್ಟದಲ್ಲಿದ್ದರು. ೧೮೭೫-೭೬ ನಲ್ಲಿ ತೀವ್ರ ಬರಗಾಲ ಬಂದು ಸಾವಿರಾರು ಜನರು ಸಾವನ್ನಪ್ಪಿದರು.
ಎಂವಿ ಅವರ ಸಲಹೆ ಮೇರೆಗೆ ಕಾವೇರಿ ನದಿಗೆ ಕನ್ನಂಬಾಡಿ ಊರಿನಲ್ಲಿ ಆಣೆ ಕಟ್ಟೆ ಕಟ್ಟುವುದು ಸೂಕ್ತವೆಂದು ನಿರ್ಧರಿಸಲಾಯಿತು

ಇಲ್ಲಿ ಕಾವೇರಿ,ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ಮೂರು ನದಿಗಳು ಸೇರುವ ಜಾಗ . ಈಗಲೂ ಕಾವೇರಿ ನೀರನ ಬಗ್ಗೆ ಕರ್ನಾಟಕ ಮತ್ತು ತಮಿಳು ನಾಡಿಗೂ ಸಾಕಷ್ಟು ಮನಸ್ತಾಪಗಳಿವೆ. ಇದೇನು ಹೊಸದಲ್ಲ ೧೨೦ ವರ್ಷಗಳ ಹಿಂದೆಯೊ ಈ ಸಮಸ್ಯೆ ಇತ್ತು . ಆಗಿದ್ದ ಬ್ರಿಟಿಷ್ ಕೇಂದ್ರ ಸರ್ಕಾರದ ೧೮೯೨ ಒಪ್ಪಂದದ ಪ್ರಕಾರ ಎರಡು ಪ್ರಾಂತ್ಯಗಳ ಒಪ್ಪಿಗೆ ಇಲ್ಲದೆ ಕಾವೇರಿ ನದಿಯ ಬಗ್ಗೆ ಯಾವ ಯೋಜನೆಯನ್ನು ಮುಂದೆವರೆಸುವಾಗಿರಲಿಲ್ಲ.ಅಂದಿನ ಮೈಸೂರ್ ಸರ್ಕಾರದ ಹಣಕಾಸಿನ ಮಂತ್ರಿಗಳು ಸಹ ಈ ಯೋಜನೆಗೆ ೮೧ ಲಕ್ಷ ಖರ್ಚು ಮಾಡುವ ಅಗತ್ಯ ಇಲ್ಲ ಎಂದು ಸರ್ ಎಂವಿ ಅವರಿಗೆ ತಿಳಿಸಿದರು. ಆದರೆ ದಿವಾನ್ ಆನಂದ ರಾಯರು ಮಹಾರಾಜರೊಂದೊಂದಿಗೆ ಚರ್ಚೆ ಮಾಡಿ ಈ ಯೋಜನೆಗೆ ಅನುಮತಿ ತಂದರು . ಮದ್ರಾಸ್ ಸರ್ಕಾರ ಮೊದಲು ನಿರಾಕರಿಸಿ ಕೊನಗೆ ೮೧ ಅಡಿ ಎತ್ತರದ ಕಟ್ಟೆಗೆ ಮಾತ್ರ ಅನುಮತಿ ಬಂದಿತು. ಆದರೆ ಸರ್ ಎಂವಿ ಅವರ ವಿನ್ಯಾಸ ೧೨೪ ಅಡಿ! ಈ ಬಗ್ಗೆ ಮದ್ರಾಸಿನ ರಾಜಕಾರಣಿಗಳು ಈ ಕಟ್ಟೆ ವಿರುದ್ಧ ದೊಡ್ಡ ಚಳುವಳಿಯನ್ನೇ ಪಾರಂಬಿಸಿ ಈ ಯೋಜನೆ ಶುರುವಾಗುವುದಕ್ಕೆ ತುಂಬಾ ತಡವಾಯಿತು. ಕೊನೆಗೆ ಮೈಸೂರಿಗೆ ಜಯವಾಗಿ ೧೯೧೧ ನವೆಂಬರ್ ನಲ್ಲಿ ಕೆಲಸ ಶುರುವಾಗಿ ೧೯೩೧ರಲ್ಲಿ ಪೂರೈಕೆಗೊಂಡಿತು. ೧೯೧೧ ನಲ್ಲಿ ಸಿಮೆಂಟ್ ಭಾರತದಲ್ಲಿ ಇರಲಿಲ್ಲ ಹೊರದೇಶದಿಂದ ತರಿಸಿದ್ದರೆ ವಿಪರೀತ ವೆಚ್ಚ ಆದ್ದರಿಂದ ಸ್ಥಳೀಯ ಗಾರೆ (ಸುರ್ಕಿ) ಯನ್ನು ಇಲ್ಲಿ ಉಪಯೋಗಿಸಲಾಯಿತು .

ಒಟ್ಟು ೪೮ ಉಕ್ಕಿನ ಗೇಟುಗಳನ್ನು ಒಳಗೊಂಡ ವಿಶೇಷ ವ್ಯವಸ್ಥೆಯನ್ನು ಇಲ್ಲಿ ಬಳಸಲಾಗಿದೆ. ೧೯೨೪ ರಲ್ಲಿ ಈ ನಿರ್ಮಾಣ ಪೂರ್ಣಗೊಂಡಿತು. ಈ ಜಲಾಶದಿಂದ ಅನೇಕ ಕಾಲುವೆಗಳು ತೋಡಿ ಮಂಡ್ಯ ಮತ್ತು ಸುತ್ತಮುತ್ತ ಹಳ್ಳಿಗಳಿಗೆ ನೀರು ದೊರಕಿ ಅಲ್ಲಿನ ಪರಿಸರ ಬದಲಾಗಿ ಜನಗಳಿಗೆ ಕುಡಿಯುವ ನೀರು ಸಹ ಒದಗಿತು , ಜಮೀನುಗಳೆಲ್ಲಾ ಹಸಿರಾಯಿತು . ೧೦,೦೦೦ ಜನರಿಗೆ ನೌಕರಿ ದೊರಕಿತು . ಆದರೆ ಕೆಲವು ಸುತ್ತಮುತ್ತಿನ ಹಳ್ಳಿಗಳು ನೀರಿನಲ್ಲಿ ಮುಳಗಿದ್ದರಿಂದ ಅನೇಕರು ತಮ್ಮ ಮನೆಗಳನ್ನು ಕಳೆದುಕೊಂಡರು. ಇವರೆಲ್ಲರಿಗೂ ಸರ್ಕಾರ ಬೇರೆ ಜಾಗದಲ್ಲಿ ಜಾಮೀನು ಮತ್ತು ಮನೆಗಳನ್ನು ಕೊಟ್ಟು ಸಂರಕ್ಷಿಸಿದರು . ಕನ್ನಂಬಾಡಿ ಕಟ್ಟೆ ಹೆಸರು ಅಂದಿನ ಮಹಾರಾಜರಾಗಿದ್ದ ಶ್ರೀಮಾನ್ ಕೃಷ್ಣರಾಜ ಒಡೆಯರ್ ಹೆಸರನಲ್ಲಿ. ಕೃಷ್ಣರಾಜ ಸಾಗರ ಎಂದು ನಾಮಕರಣ ವಾಯಿತು.

ಶ್ರೀಮಾನ್ ಕೃಷ್ಣರಾಜ ಒಡೆಯರ್

೧೯೧೨ ನವೆಂಬರ್ ರಲ್ಲಿ ಮಹಾರಾಜರು ಸರ್ ಎಂವಿ ಅವರನ್ನು ಮೈಸೂರಿನ ದಿವಾನರಾಗಿ ನೇಮಕ ಮಾಡಿದರು. ಈ ಹುದ್ದೆ ಯಲ್ಲಿ ಆರು ವರ್ಷ ಕೆಲಸ ಮಾಡಿ ೧೯೧೮ರಲ್ಲಿ ಸರ್ ಎಂವಿ ಅವರು ರಾಜೀನಾಮೆ ಕೊಟ್ಟರು. ಮದ್ರಾಸಿನಲ್ಲಿ ಶುರುವಾಗಿದ್ದ ಜಾತಿಯತೆಯ ಚಳುವಳಿ ಮೈಸೂರಿಗೂ ಹರಡಿ ಸರಕಾರೀ ಕೆಲಸಗಳು ಹಿಂದುಳಿದ ಜಾತಿ ಯವರಿಗೆ ಮೀಸಲಾಗಬೇಕು ಅನ್ನುವ ವಿಚಾರದ ಬಗ್ಗೆ ಮಹಾರಾಜರಿಗೆ ತುಂಬಾ ಒತ್ತಡ ಬಂದಿತ್ತು. ಮಹಾರಾಜರು ಅಂದಿನ ಮುಖ್ಯ ನ್ಯಾಯಾಧೀಶರಾಗಿದ್ದ ಸರ್ ಲೆಸ್ಲಿ ಮಿಲ್ಲರ್ ಅವರ ನೇತೃತ್ವದಲ್ಲಿ ನೇಮಿಸಿದ ಸಮಿತಿ ಕೆಲಸಗಳನ್ನು ಮೀಸಲಾತಿ (reservation ) ಮಾಡಬಹುದೆಂದು ಸಲಹೆ ಕೊಟ್ಟರು. ಸರ್ ಎಂವಿ ಇದನ್ನು ವಿರೋಧಿಸಿ ಹಿಂದೆ ಉಳಿದ ವರ್ಗದವರಿಗೆ ಹಣ ಕಾಸಿನ ಸಹಾಯಮಾಡಿ ಓದುವುದಕ್ಕೆ ಉತ್ತೇಜನ ಕೊಟ್ಟು ಮುಂದೆತರಬೇಕೆಂದು ವಾದಿಸಿದರು. ಆದರೆ ಇವರಿಗೂ ಮಹಾರಾಜರಿಗೂ ಈ ವಿಚಾರದಲ್ಲಿ ಮನಸ್ತಾಪ ಬಂದು ಡಿಸೆಂಬರ್ ೧೯೧೮ ರಲ್ಲಿ ರಾಜೀನಾಮೆ ಕೊಟ್ಟರು. ಈ ಸಂಧರ್ಭದಲ್ಲಿ ಸರ್ ಎಂವಿ ಅವರು ಮಹಾರಾಜರನ್ನು ಕಾಣಲು ಹೋದಾಗ ದಿವಾನರ ವಾಹನದಲ್ಲಿ ಹೋಗಿ ರಾಜೀನಾಮೆ ಕೊಟ್ಟು ತಮ್ಮ ಸ್ವಂತ ವಾಹನದಲ್ಲಿ ವಾಪಸ್ಸು ಬಂದದ್ದು ಅವರ ನಿಷ್ಠಾವಂತಿಕೆಗೆ ಸಾಕ್ಷಿಯಾಗಿತ್ತು

ಆಗ ತಾನೇ ಮೊದಲನೇ ಮಹಾ ಯುದ್ಧ ಮುಗಿದಿತ್ತು. ಇವರ ದಿವಾನಗಿರಿಯಲ್ಲಿ ನೀರಾವರಿ ಮತ್ತು ಕೈಗಾರಿಕೆ ಮಾತ್ರವಲ್ಲ ಆಗಿನ ಶಾಸನ ಸಭೆ ಯಲ್ಲಿ ( Legislative Assembly ) ಕೇವಲ ೧೮ ಸದಸ್ಯರಿದ್ದು ಎಲ್ಲರೂ ನೇಮಕಪಟ್ಟವರಾಗಿದ್ದರು. ಇವರ ಕಾಲದಲ್ಲಿ ೧೮ ರಿಂದ ೨೪ ಸದಸ್ಯರು, ಚುನಾಯಿತರಾಗಿ ಈ ಸಭೆಯ ಅಧಿಕಾರವೂ ಹೆಚ್ಚಾಯಿತು. ಇಲ್ಲಿ ಹಣ ಕಾಸಿನ budget ಮೊದಲ ಬಾರಿಗೆ ಚರ್ಚೆ ಮಾಡಿದರು. ನ್ಯಾಯಾಂಗ ಮತ್ತು ಆಡಳಿತ ವಿಚಾರಗಳು ಬೇರೆ ಬೇರೆ ಆದವು. ಸರ್ ಎಂವಿ ಅವರ “ Memoirs of my working life” ಎಂಬ ಪುಸ್ತಕದಲ್ಲಿ ಇದರ ಬಗ್ಗೆ ವ್ಯಾಪಕವಾದ ಚರ್ಚೆ ಮಾಡಿದ್ದಾರೆ. ಇದನ್ನು ಅವರ ೮೯ ನೇ ವರ್ಷದಲ್ಲಿ ಬರೆದು ಪ್ರಕಟಿಸಿದರು !!

ಗಂಗಾ ನದಿಯ ೨ ಕಿಲೋ ಮೀಟರ್ ಮೊಕಾಮ ಸೇತುವೆ ೧೯೫೯ ರಲ್ಲಿ ಪ್ರಧಾನಮಂತ್ರಿ ನೆಹರು ಅವರಿಂದ ಉಧ್ಘಾಟನೆ ಆಯಿತು. ಇದು ಬಿಹಾರಿನ ದಕ್ಷಿಣ ಮತ್ತು ಉತ್ತರ ಪ್ರದೇಶಗಳ ಸೇರಿಸುವ ಸೇತುವೆ. ಆದರೆ ಇದನ್ನು ಎಲ್ಲಿ ಕಟ್ಟಬೇಕು ಅನ್ನುವುದು ದೊಡ್ಡ ರಾಜಕೀಯ ರಗಳೆಯೇ ಆಗಿತ್ತು . ನೆಹರು ಅವರು ಸರ್ ಎಂವಿ ಅವರ ಸಹಾಯ ಕೋರಿ ಸೇತುವೆ ಎಲ್ಲಿ ಕಟ್ಟಬೇಕೆಂದು ಸಲಹೆ ಕೇಳಿದರು. ಆಗ ಇವರಿಗೆ ೯೧ ವರ್ಷ ಆದರೂ ಆ ಪ್ರದೇಶಕ್ಕೆ ಹೋಗಿ ನದಿಯ ಸರ್ವೇ ಮಾಡಿ ಸರಿಯಾದ ಜಾಗವನ್ನು ಗುರುತಿಸಿದರು.

ಇವರ ಸಾದನೆಗಳು ಮತ್ತು ಕನ್ನಡನಾಡಿಗೆ ಮಾಡಿದ ಉಪಕಾರ ಬಹಳ. ಇದನ್ನು ಕೆಳಗಿನ ಪಟ್ಟಿಯಲ್ಲಿ ಗಮನಿಸಬಹುದು
೧೯೧೧ ಕನ್ನಂಬಾಡಿ ಅಣೆಕಟ್ಟೆ ಪ್ರಾರಂಭ
೧೯೧೩ Bank of Mysore ಮತ್ತು ಹೆಬ್ಬಾಳದ ವ್ಯವಸಾಯದ ಶಾಲೆ ಸ್ಥಾಪನೆ
೧೯೧೪ ಮಲೆನಾಡು ಸಂರಕ್ಷಿತ ಯೋಜನೆ
೧೯೧೫ ಮೈಸೂರು ವಿಶ್ವ ವಿದ್ಯಾನಿಲಯ, ಬೆಂಗಳೂರು ಮತ್ತು ಮೈಸೂರಿನ ಸಾರ್ವಜನಿಕ ಪುಸ್ತಕ ಭಂಡಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ
೧೯೧೬ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜ್, Chamber of commerce ಸ್ಥಾಪನೆ. ರೇಷ್ಮೆ, ಗಂಧದ ಎಣ್ಣೆ, ಮೈಸೂರ್ ಸ್ಯಾಂಡಲ್ ಸೋಪ್ ಹೀಗೆ ಹಲವಾರು ಕೈಗಾರಿಕೆ ಗಳ ಪ್ರಾರಂಭ
೧೯೧೮ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಂಪನಿ, ಜೋಗ ಜಲಪಾತದಿಂದ ವಿಧ್ಯುಕ್ ಶಕ್ತಿ ಯೋಜನೆ
ಇದಲ್ಲದೆ ಮಂಡ್ಯದ ಸಕ್ಕರೆ ಕಾರ್ಖಾನೆ, ಭದ್ರಾವತಿಯಲ್ಲಿ ಕಾಗದ ಉತ್ಪಾದನೆ ಇವರ ಕಾಲದಲ್ಲೇ ಶುರುವಾಯಿತು.
ಆ ಕಾಲ ಮೈಸೂರಿನ ಸುವರ್ಣ ಯುಗ ಅಂದರೆ ಏನೊ ತಪ್ಪಾಗಲಾರದು. ಭಾರತದಲ್ಲೆ ಮೈಸೂರು ಪ್ರಗತಿಪರ ರಾಜ್ಯ ವಾಗಿತ್ತು
೧೯೧೯ ರಲ್ಲಿ ಅನೇಕ ದೇಶಗಳ (ಜಪಾನ್ ಮತ್ತು ಅಮೇರಿಕ ) ಪ್ರವಾಸ ಮಾಡಿ ಇಂಗ್ಲೆಂಡ್ ನಲ್ಲಿ ಸುಮಾರು ೧೦ ತಿಂಗಳು ಇದ್ದು ೧೯೨೦ ರಲ್ಲಿ Reconstructing India ಪುಸ್ತಕ ಪ್ರಕಟಿಸಿದರು

ಮೈಸೂರು ಅರಮನೆಯಲ್ಲಿ ನವರಾತ್ರಿ ಸಮಯದಲ್ಲಿ ದರ್ಬಾರ್ ಬಹಳ ವೈಖರಿಯ ಸಂಧರ್ಭವಾಗಿದ್ದು ಬ್ರಿಟಿಷ್ ರೆಸಿಡೆಂಟ್ ಮತ್ತು ಅವರ ಸಿಬ್ಬಂದಿ ಮತ್ತು ಬ್ರಿಟಿಷ್ ಸಿವಿಲ್ ಅಧಿಕಾರಿಗಳು, ಅರಮನೆಗೆ ಬಂದಾಗ ಅವರ ಕುಟುಂಬದವರು ಕುರ್ಚಿಗಳ ಮೇಲೆ ಕೂಡುತಿದ್ದರು . ಭಾರತೀಯ ಉನ್ನತ ಹುದ್ದೆಯ ಸಿಬ್ಬಂದಿಗಳು ಕರಿ ಕೋಟು ಮತ್ತು ಮೈಸೂರು ಪೇಟ ಧರಿಸಿ ಕೆಳಗೆ ಜಮಕಾನೆ ಮೇಲೆ ಕೂಡುವ ಪದ್ದತಿ ಬಹಳ ವರ್ಷಗಳಿಂದ ಇತ್ತು. ಇದನ್ನು ಸರ್ ಎಂವಿ ೧೯೧೦ ರಲ್ಲಿ ಮೊದಲನೇ ಬಾರಿ ಬಂದಾಗ ಗಮನಿಸಿ ೧೯೧೧ ನಲ್ಲಿ ಬಂದ ಆಹ್ವಾನವನ್ನು ನಿರಾಕರಿಸಿದರು. ದರ್ಬಾರ್ ನಡೆಸುವ ಜವಾಬ್ದಾರಿ ಆಗ ಸರ್ ಮಿರ್ಜಾ ಇಸ್ಮಾಯಿಲ್ ಅವರದ್ದು. ಇವರ ನಿರಾಕರಣ ಬಗ್ಗೆ ವಿಚಾರಿಸಿದ್ದಾಗ ಸರ್ ಎಂವಿ ಹೀಗೆ ಹೇಳಿದರಂತೆ “ಮೈಸೂರು ಸರ್ಕಾರದಿಂದ ಸಂಬಳ ತೆಗೆದುಕೊಳ್ಳುವ ಯುರೋಪಿಯನ್ ಜನಗಳು ಕುರ್ಚಿಯ ಮೇಲೆ ಕುಳಿತಿರುವಾಗ ದಿವಾನರು ಮೊದಲುಗೊಂಡು ದೇಶಿಯ ಅಧಿಕಾರಿಗಳು ಕೆಳಗೆ ಕೂಡುವುದು ಸರಿಯಲ್ಲ ಆದ್ದರಿಂದ .ನನ್ನ ಕ್ಷಮಿಸಿ ” ಅಂದರಂತೆ. ಈ ವಿಚಾರ ಮಹಾರಾಜರಿಗೆ ಗೊತ್ತಾಗಿ ಆ ವರ್ಷದಿಂದ ಎಲ್ಲರೂ ಕುರ್ಚಿಯ ಮೇಲೆ ಕೂಡುವ ಏರ್ಪಾಡು ಮಾಡಿದರು.

ಸರ್ ಎಂವಿ   ಅವರ  ಉಡುಪು ಯಾವಾಗಲೂ ಸೂಟ್, ಟೈ( three piece suit ) ಮತ್ತು ಮೈಸೂರು ರುಮಾಲು. ಆಗಿನ ನಮ್ಮಅಧಿಕಾರಿಗಳಿಗೆ ಈ ಉಡುಪಿನ ಅಭ್ಯಾಸವಿರಲಿಲ್ಲ. ತಿಂಗಳಿಗೆ ಎರಡು ಬಾರಿ , ಪಂಚಾಂಗ ನೋಡಿ ಮುಖ ಚೌರವಾಗುತ್ತಿದ್ದ  ಕಾಲವಾಗಿದ್ದು ಇದನ್ನು ಸರ್ ಎಂವಿ ಬದಲಾಯಿಸುವುದಕ್ಕೆ ಪ್ರಯತ್ನ ಪಟ್ಟರು. ಮಾಸ್ತಿ ಅವರು ತಮ್ಮ ಜೀವನ ಪತ್ರಿಕೆಯಲ್ಲಿ ಇದರ ವಿಚಾರ ಪ್ರಸ್ತಾಪಮಾಡಿದ್ದಾರೆ. ಮಾಸ್ತಿಯವರು ದಿವಾನರ ಕಚೇರಿಯಲ್ಲಿ ಕಾರ್ಯದರ್ಶಿಗಳಾ ಗಿದ್ದರು. ಒಂದು ದಿನ ದಿವಾನರ ಜೊತೆ ಮೀಟಿಂಗ್ ಮುಗಿದಮೇಲೆ ಮೇಲೆ ನಿಮ್ಮ ಶರ್ಟಿನ ಗುಂಡಿ ಬಿಚ್ಚಿ ಹೋಗಿದೆ ಮತ್ತು ಟೈ ಸರಿಯಾಗಿ ಕಟ್ಟಿಲ್ಲಎಂದು ಟೀಕೆ ಮಾಡಿದರಂತೆ !

ಈಗಿನ Bangalore ಕ್ಲಬ್ , ಇವರ ಕಾಲದಲ್ಲಿ Bangalore United Services Club ಎಂಬ ಹೆಸರಿನಲ್ಲಿದ್ದು ಬರಿ ಬಿಳೀ ಜನಗಳಿಗೆ ಮಾತ್ರ   ಸದಸ್ಯತ್ವ ವನ್ನು ಕೊಡುತ್ತಿದ್ದರು . ಇದನ್ನು ಸಹಿಸಲಾರದೆ ಸರ್ ಎಂವಿ ಕಬ್ಬನ್ ಪಾರ್ಕ್ನಲ್ಲಿ ನೂರು ಭಾರತೀಯರನ್ನು ಸೇರಿಸಿ ೧೯೧೭ ನಲ್ಲಿ Century Club ಪ್ರಾರಂಭಮಾಡಿದರು. ಸರ್ ಎಂವಿ ಅವರು ೧೯೨೩ ಲಕ್ನೋ ನಲ್ಲಿ ಸೇರಿದ Indian Science Congress ಅಧ್ಯಕ್ಷ ರಾದರು ಮತ್ತು ಭದ್ರಾವತಿಯ ಕಬ್ಬಿಣ ಕಾರ್ಖಾನೆಯ ಆಡಳಿತ ವನ್ನು ವಹಿಸಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಿದರು. ಈ ಕೆಲಸಕ್ಕೆ ಸರ್ಕಾರದಿಂದ ಆರು ವರ್ಷದ ಸಂಬಳ ಒಂದೂವರೆ ಲಕ್ಷ ರೂಪಾಯಿಗಳನ್ನು ತಮ್ಮ ಸ್ವಂತಕ್ಕೆ ಬಳಸದೆ  ಬೆಂಗಳೂರಿನಲ್ಲಿ Jayachamarajendra Technical Institute ಸ್ಥಾಪನೆ ಮಾಡಿದರು.

ಭಾರತದಲ್ಲಿ ಮೋಟಾರ್ ತಯಾರು  ಮಾಡುವ ಉದ್ದೇಶ ಸರ್ ಎಂವಿ ಅವರಿಗೆ ತೀವ್ರವಾಗಿತ್ತು. ಈ ಕಾರಣದಿಂದ All India Manufacturers Association ನಾಯಕರಾಗಿ ೧೯೩೫ ರಲ್ಲಿ ಅಮೇರಿಕ ಮತ್ತು ಇಟಲಿ ದೇಶಗಳ ಭೇಟಿ ಮಾಡಿ ಫೋರ್ಡ್ ಕಂಪನಿಯ ಹೆನ್ರಿ ಅವರನ್ನು ಕಂಡು ಅವರ ಸಹಾಯ ಕೋರಿದರು. ಭಾರತದಲ್ಲಿ ಕೈಗಾರಿಕೆ ಹೆಚ್ಚಾದರೆ ಇಂಗ್ಲೆಂಡಿಗೆ ರಫ್ತು (export ) ಕಡಿಮೆ ಆಗಿ ಅಲ್ಲಿನ ಆರ್ಥಿಕ ಪರಿಸ್ಥಿತೆಗೆ ತೊಂದರೆ ಉಂಟಾಗುವುದೆಂಬ ಕಾರಣದಿಂದ ಆಗಿನ ಕೇಂದ್ರ ಆಂಗ್ಲ ಸರ್ಕಾರ ದಿಂದ ಈ ಯೋಜನೆಗಳಿಗೆ ಉತ್ತೇಜನ ಸಿಗಲಿಲ್ಲ. ಹೀಗೆ ಸರ್ ಎಂವಿ ಅವರು ಹಾಕಿದ ಅನೇಕ ಯೋಜನೆಗಳಿಗೆ ಆಂಗ್ಲ ಸರ್ಕಾರದವರು ತೊಂದರೆ ಮಾಡಿದರು. ಆದರೆ ಬೆಂಗಳೂರಿನ HAL ಮತ್ತು Fiat ಕಂಪನಿಯ Premier Auto ಇವರ ಪ್ರಯತ್ನದಿಂದ ಪ್ರಾರಂಭ ವಾಯಿತು

ಇಪ್ಪತ್ತನೇ ಶತಮಾನದ  ಶುರುವಿನಲ್ಲಿ  ಕೇವಲ ಶೇಕಡ ೧೦-೧೫ ಅಕ್ಷರಸ್ಥರು ಮಾತ್ರ ಇದ್ದು , ಇದರಿಂದ ಭಾರತದ ಮುಂದೆವರೆವುದಿಲ್ಲ ಎಂಬ ವಿಚಾರವನ್ನು ಅರಿತು ಹಳ್ಳಿಗಳಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡುವ ಯೋಜನೆಯಲ್ಲಿ ಸರ್ ಎಂವಿ ತೊಡಗಿದರು.

ಇವರಿಗೆ ಬಂದ ಪ್ರಶಸ್ತಿಗಳು ಅನೇಕ

Fellowship of Institute of Civil Engineers London
೧೯೧೧ CIE ( Companion of the Order of the Indian Empire )
೧೯೧೫ Knighthood (became Sir M.Vishweshraiah)
೧೯೫೫ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ
ಅನೇಕ ಡಾಕ್ಟ್ರೇಟ್ ಪದವಿಗಳು

ಬೆಂಗಳೂರು ಮತ್ತು ದೆಹಲಿಯಾ ಎರಡು ಮೆಟ್ರೋ ತಾಣಕ್ಕೆ ಇವರ ಹೆಸರನ್ನು ಇಡಲಾಗಿದೆ.

 

 

ಸರ್ ಎಂವಿ ಅವರು ಜೀವಮಾನದ ಪೂರ್ತಿ ಒಂಟಿ ಯಾಗಿದ್ದರು. ೧೮೮೨ ರಲ್ಲಿ ಚಿಕ್ಕಬಳ್ಳಾಪುರದ ರಾಮಚಂದ್ರ ಶಾಸ್ತ್ರೀ ಗಳ ಮಗಳು ಸರಸ್ವತಿ ಯೊಂದಿಗೆ ವಿವಾಹವೂ ನಡೆದಿತ್ತು. ಆದರೆ ದುರಾದೃಷ್ಟದಿಂದ ೧೮೮೮ ಅಕ್ಟೋಬರ್ ತಿಂಗಳಲ್ಲಿ ಮಡದಿ ಶಿಶುವಿಗೆ ಜನ್ಮವಿತ್ತ ದಿನವೇ ತಾಯಿ ಮಗು ತೀರಿಹೋದರು. ತಾಯಿಯ ಬಲವಂತದಿಂದ ಎರಡನೆ ಮದುವೆಯೂ ಆಗಿ ಹೆರಿಗೆಯಲ್ಲಿ ಪುನಃ ತಾಯಿ ಮತ್ತು ಮಗುವಿನ ಮರಣವಾಯಿತು.

ಕರ್ನಾಟಕ ಸರ್ಕಾರದವರು ಮುದ್ದೇನಹಳ್ಳಿಯಲ್ಲಿ ಇವರು ಹುಟ್ಟಿದ ಮನೆಯನ್ನು ವಸ್ತುಶಾಲೆಯಾಗಿ ಮತ್ತು ಸ್ಮಾರಕ ಮಂದಿರ ಮಾಡಿದ್ದಾರೆ. ಬೆಂಗಳೂರಿನ Vishwesharaiah Industrial and Science Museum ಬಹಳ ಜನಪ್ರಿಯವಾಗಿದೆ.

 

ಮುದ್ದೇನಹಳ್ಳಿಯಲ್ಲಿ ಸರ್ ಎಂವಿ ಅವರ ಸ್ಮಾರಕ

ಸರ್ ಎಂವಿ ೧೯೬೧ ಏಪ್ರಿಲ್ ೧೨ ನೇ ತಾರೀಕು ಕೊನಯ ಉಸಿರು ಬಿಟ್ಟು ನಮ್ಮಿಂದ ಅಗಲಿದರು ಆದರೆ ಅವರು ತೋರಿಸಿದ ದಾರಿ ಮತ್ತು ಆಧುನಿಕ ಭಾರತಕ್ಕೆ ಹಾಕಿದ ಅಡಿಪಾಯ ನಾವು ಎಂದಿಗೂ ಮರೆಯಬಾರದು

 

 

ರಾಮಮೂರ್ತಿ
ಬೇಸಿಂಗ್ ಸ್ಟೋಕ್

Acknowledgements
Memoirs of my working life by Sir MV. 1951
ಸರ್ ಎಂ ವಿಶ್ವೇಶ್ವರಯ್ಯ, Jeevana Publications By Masti Ventatesha Iyengar
Google Images

7 thoughts on “ಕನ್ನಡ ನಾಡಿನ ಹೆಮ್ಮೆಯ ಪುತ್ರ ಭಾರತ ರತ್ನ ಸರ್ ಎಂವಿ

  1. ಸೊಗಸಾದ ಲೇಖನ ರಾಮಮೂರ್ತಿ ಅವರೇ. ನನಗೆ ಹೈಸ್ಕೂಲಿನಲ್ಲಿ ಡಾ ಎಸ. ವಿ.ಪರಮೇಶ್ವರ ಭಟ್ಟರು ಬರೆದ “ಭಾಗ್ಯಶಿಲ್ಪಿ ಪುಸ್ತಕ” ಕನ್ನಡ ಭಾಷೆಯಲ್ಲಿ ನಾನ್ ಡಿಟೈಲ್ಡ್ ಪಠ್ಯ ಪುಸ್ತಕವಾಗಿತ್ತು. ಬಹುಶಃ ಸರ್.ಎಂ.ವಿ ಅವರ ಜೀವನದ ಬಗ್ಗೆ ಬರೆದ ಅತ್ಯುತ್ತಮ ಪುಸ್ತಕವಿದು. ಪುಸ್ತಕದ ಪ್ರಾರಂಭದಲ್ಲಿದ್ದ ಒಂದು ಸಾಲು ಇಂದಿಗೂ ನೆನಪಿದೆ. “ನಿಮ್ಮ ಬದುಕೊಂದು ವರ ಸೌಭಾಗ್ಯ ಬಂಧುರ ” ಎಂದಿತ್ತು. ಅವರ ಜೀವನ ಕನ್ನಡ ನಾಡಿನ ಜನಗಳ ಪಾಲಿಗೆ ವರವಾಗಿತ್ತೆನ್ನುವುದರಲ್ಲಿ ಸಂಶಯವೇ ಇಲ್ಲ. ಅಂತಹ ವ್ಯಕ್ತಿಯೊಬ್ಬ ಮತ್ತೆ ಜನ್ಮಿಸಿ ಬರುವರೇ! ಬಡತನದಲ್ಲಿ ಬೆಳೆದು, ದಿವಾನ್ ಪದವಿಯೇರಿದರೂ, ಜೀವನದಲ್ಲಿ ತಮ್ಮ ಶಿಸ್ತು, ಸಂಯಮಗಳನ್ನು ನಡೆಸಿಕೊಂಡು ಬಾಳಿದ ಸರ್.ಎಂ.ವಿ, ನಿಜಕ್ಕೂ ಭಾರತಾಂಬೆಯ ರತ್ನವೇ ಸರಿ. ಆದರೆ ಸಂಸಾರ ಜೀವನ ಅವರ ಪಾಲಿಗೆ ಒಲಿದು ಬರಲಿಲ್ಲ ಎನ್ನುವುದು ದುರಾದೃಷ್ಟದ ಸಂಗತಿ. ಇಂತಹ ವ್ಯಕ್ತಿಯನ್ನು ನಮ್ಮ ಜೀವನದಲ್ಲಿ ಒಮ್ಮೆ ನೋಡುವ ಅವಕಾಶ ದಿ ರಾಜಾರಾಮ್ ಕಾವಳೆ ಅವರಿಗೆ ಸಿಕ್ಕಿತ್ತು ಎನ್ನುವುದು ಸಂತೋಷದ ಮಾತು. ಆ ಸಂಗತಿಯನ್ನು ಬಹಳ ಸ್ವಾರಸ್ಯವಾಗಿ ಲೇಖನ ರೂಪಕ್ಕಿಳಿಸಿ ನಮಗೆಲ್ಲ ಓದುವ ಅವಕಾಶ ನೀಡಿದ್ದ ರಾಜಾರಾಮ್ ಕಾವಳೆ ಅವರ ನೆನಪಾಯಿತು.
    ಉಮಾ ವೆಂಕಟೇಶ್

    Like

  2. ರಾಮಮೂರ್ತಿಯವರೇ,
    ಹೋದವಾರವೇ ಈ ಪ್ರತಿಕ್ರಿಯೆಯನ್ನು ಬರೆಯಬೇಕು ಎಂದಿದ್ದೆ, ತಡವಾಗಿದೆ. ಕ್ಷಮಿಸಿ.
    ಎಷ್ಟು ಮಾಹಿತಿಪೂರ್ಣ ಲೇಖನವಿದು. ನನ್ನ ಜೀವನದ ಶಾಲೆ, ಕಾಲೇಜು ದಿನಗಳಲ್ಲಿ ಸರ್ ಎಂವಿ ಸ್ಮರಣೆ ಒಂದಲ್ಲಾ ಒಂದು ಕಾರಣಕ್ಕಾಗಿ ಇದ್ದೇ ಇತ್ತು. ನಮ್ಮ ಹಿರಿಯರಲ್ಲಿ ಅವರ ಬಗ್ಗೆ ಹೆಮ್ಮೆ ಮತ್ತು ಅಖಂಡ ಗೌರವವಿತ್ತು. ನನ್ನಜ್ಜಿ ಅವರ ಬಗ್ಗೆ ಮಾತನಾಡುತ್ತಿದ್ದರು. ನಮ್ಮ ಕೆಲ ಕುಟುಂಬ ಬಂಧುಗಳು ಚಿಕ್ಕಬಳ್ಳಾಪುರದವರು ಮತ್ತು ಎಂವಿರವರ ದೂರದ ಬಂಧುಗಳಂತೆ. ನನ್ನ ತಂದೆಯ ಊರು ಗೌರಿಬಿದನೂರು ತಾಲೂಕು. ನಾನು ಬಾಲ್ಯದಲ್ಲಿ ಎಂವಿರವರ ಊರು ಮುದ್ದೇನಹಳ್ಳಿಗೆ ಭೇಟಿ ಕೊಟ್ಟು ಅವರ ಬಗ್ಗೆ ಪೂಜ್ಯನೀಯ ಭಾವನೆಯನ್ನು ಬೆಳೆಸಿಕೊಂಡಿದ್ದೆ.
    ಎಂತಹ ಮೇಧಾವಿ, ಎಂತಹ ಮೌಲ್ಯಾಧಾರಿತ ಬದುಕು ಅವರದ್ದು. There is only one Sir M Vishveshvaraiah and that’s him. ನೀವು ಅವರ ಬಗ್ಗೆ ಅದೆಷ್ಟು ವಿಷಯಗಳನ್ನು ಕಲೆಹಾಕಿ ಕೊಟ್ಟಿದ್ದೀರಾ. ಖಂಡಿತವಾಗಿಯೂ ಜೋಪಾನವಾಗಿ ಇಡುವಂತಹ ಲೇಖನವಿದು ಕೃತಜ್ಞತೆಗಳು.
    ವಿನತೆ ಶರ್ಮ

    Like

  3. ತಡವಾಗಿಯಾದರೂ ಪ್ರಕಟವಾದ ಈ ಲೇಖನ ನನಗೆ ಗೊತ್ತಿರದ ಎಷ್ಟೊಂದು ವಿಷಯಗಳನ್ನು ಹೊತ್ತು ತಂದಿದೆ. ಸರ್ ಎಂ ವಿ ಅಂಥವರು ಪ್ರಾತಃಸ್ಮರಣೀಯರು. ನದಿಗಳ ಮಹಾಪೂರದ ನಿವಾರಣೆ, ನೀರಿನ ನಿಯಂತ್ರಣ, ನಿರ್ವಹಣೆ ಯಾವುದೇ ದೇಶವಿರಲಿ, ಮಹತ್ವದ ಪ್ರಶ್ನೆಯೇ. ನೂರು ವರ್ಷಗಳ ಕೆಳಗೆ ಭಾರತದ ವಿವಿಧ ಪ್ರದೇಶದಲ್ಲಿ ಅಂಥ ಯೋಜನೆಗಳ ನೀಲಿ ನಕಾಷೆ ಹಾಕಿ ಜನರ, ದೇಶದ ಅಭಿವೃದ್ದಿಗೆ ಅಡಿಪಾಯ ಹಾಕಿದ ಈ ಮುತ್ಸದ್ದಿಯ ಜೀವನ ವೃತ್ತಾಂತ ಸ್ಫೂರ್ತಿದಾಯಕ. ಅಪ್ಪಟ ದೇಶಭಕ್ತನ, ಸತ್ಯನಿಷ್ಠುರ ಮಾನವನ ನೈಜ ವ್ಯಕ್ತಿತ್ವದ ಚಿತ್ರ ಈ ಲೇಖನದಲ್ಲಿ ಎದ್ದು ಕಾಣುತ್ತದೆ.ಇದನ್ನು ಬರೆದ ರಾಮಮೂರ್ತಿಯವರಿಗೆ ಮತ್ತು ಸಂಪಾದಕರಿಗೆ ಅಭಿನಂದನೆಗಳು. ಈ ಸಂದರ್ಭದಲ್ಲಿ ಅನಿವಾಸಿಯ ಲೇಖಕರಾಗಿದ್ದ (ಅವರು ಈಗಿಲ್ಲ) ಡಾ ರಾಜಾರಾಂ ಕಾವಳೆಯವರು ಕನ್ನಡಬಳಗದ ಸಂದೇಶದ ಹಿಂದಿನ ಅಂಕದಲ್ಲಿ (Issue no 8: November 2017) ಈ ಭಾರತರತ್ನನನ್ನು ಕಂಡ ತಮ್ಮ ಅನುಭವವನ್ನು ಬರೆದುದನ್ನು ನೆನೆದರೆ ಅಪ್ರಸ್ತುತವಲ್ಲ ಎಂದುಕೊಳ್ಳುತ್ತೇನೆ. (Link : http://www.kannadabalagauk.org/Our Activities/Sandesha Newsletter/Issue no 8 Page 4)

    Liked by 1 person

    • ದೇಸಾಯ್ ಅವರೇ
      ರಾಜಾರಾಮ್ ಅವರ ಈ ಲೇಖನ ನನಗೆ ಚೆನ್ನಾಗಿ ಜ್ಞಾಪಕ ಇದೆ, ಈತ ಈ ವಿಚಾರವನ್ನು ಹೆಮ್ಮೆಯಿಂದ ಹೇಳಿದ್ದರು
      ನಮ್ಮಿಂದ ಇವರು ಆಗಲಿ ಮೂರು ವರ್ಷಗಳಾಯಿತು ಆದರೆ ಇವರ friendship ಮರೆಯುವುದಿಲ್ಲ.

      Like

  4. Very informative article.
    We need to keep reading about Sir MV again and again to recall and understand what a dynamic and incredible character he was.
    Considering he was the first of his kind in those days his achievements are hard to match . I am not sure in today’s politics anyone can do as much he as could do either!!
    Thanks to Ramamurthy for writing about him🙏

    Like

  5. Enjoyed reading this informative article on of our greatest ancestors Sir Mokshagundam Vishveshvarayya. It re connected me with the rich heritage of Karnataka. All of us have grown up reading about his intellegence, honesty, discipline and influenced by the wonderful stories of his self respect. Your article helps us to all revisit our past and celebrate with pride his contribution to the growth of Karnataka. Thank you,

    Liked by 1 person

    • Dear Anonymous,
      I have noticed that every week you are one of the first to read and comment on each Anivaasi article recently. Your interest is appreciated. I guess you are in Scotland. ದಯವಿಟ್ಟು ನಿಮ್ಮ ’ಅಜ್ಞಾತ’ದ ಮುಖವಾಡ ತೆಗೆದು ತಮ್ಮ ಪರಿಚಯ ಮಾಡಿ ಕೊಡುತ್ತೀರಾ? ಶ್ರೀವತ್ಸ ದೇಸಾಯಿ

      Liked by 1 person

Leave a comment

This site uses Akismet to reduce spam. Learn how your comment data is processed.