ಮೊದಲನೆಯ ಮಹಾಯುದ್ಧದ ಅಪರಿಚಿತ ಕನ್ನಡಿಗ ಯೋಧ –ಡಾ. ರಾಜಾರಾಮ್ ಕಾವಳೆ ಬರೆದ ಲೇಖನ

RRCavaleGreyScale
The Author

ಡಾ ರಾಜಾರಾಂ ಕಾವಳೆಯವರು ಈಗಾಗಲೇ ತಮ್ಮ ಲೇಖನಗಳಿಂದ ‘ಅನಿವಾಸಿ’ಗೆ ಚಿರಪರಿಚಿತರು. ಯು ಕೆ ಕನ್ನಡಬಳಗದ ಪ್ರಾರಂಭದಿಂದ ಅದರ ಬೆಂಬಲಿಗರಾಗಿ, ಪೋಷಕರಾಗಿ ಅಲ್ಲದೇ ಈಗಲೂ ಸತತವಾಗಿ ಅದರ ಸಂವಹನದ ಸೂತ್ರಧಾರರಾಗಿ ಅವಿರತ ದುಡಿಯುತ್ತಿದ್ದಾರೆ. ಅವರು ಇಲ್ಲಿಯ ಕನ್ನಡಿಗರ ಹೆಮ್ಮೆ. ಎಂತಲೇ ಕಳೆದ ಬಳಗದ ಕೂಟದಲ್ಲಿ ಅವರಿಗೆ ಸನ್ಮಾನ ಮಾಡಲಾಗಿದೆ. ಈ ಅಪರೂಪದ ಲೇಖನದಲ್ಲಿ ಹೆಚ್ಚಿನ ಜನರಿಗೆ ಪರಿಚಯವಿಲ್ಲದ ಆಧುನಿಕ ಅಂದರೆ ಇಪ್ಪತ್ತನೆಯ ಶತಮಾನದ ಕನ್ನಡ ಯೋಧನ ಬಗ್ಗೆ ಸ್ವಾರಸ್ಯಕರ ಬರವಣಿಗೆಯನ್ನು ಉಣಪದಿಸಿದ್ದಾರೆ. ಇನ್ನು ಓದಿರಿ …
ನಮ್ಮ ಬೆಂಗಳೂರು ಮೆಡಿಕಲ್‌ಕಾಲೇಜು 2005ನೆಯ ಡಿಸಂಬರಿನಲ್ಲಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿತು. ಈ ಮೂರು ದಿನಗಳ ಆಚರಣೆಯಲ್ಲಿ ನಾನು ಪಾಲ್ಗೊಂಡಿದ್ದೆ. ಹಲವುದಿವಸಗಳ ಮೊದಲು ಕಾಲೇಜಿಗೆ ತೆರಳಿ ಆ ಮಹೋತ್ಸವಕ್ಕೆ ನೊಂದಣೆಮಾಡಿ, ಊರಿನ ಬದಲಾವಣೆಗಳನ್ನು ನೋಡಲು ಬಸವನಗುಡಿಯಲ್ಲಿದ್ದ ನನ್ನ ತಮ್ಮನ ಮನೆಗೆ ನಡೆದುಕೊಂಡೇ ಹೋದೆನು. ಪ್ರಸಿದ್ಧವಾದ ಕೆ ಆರ್ ರೋಡಿನಲ್ಲಿಇದ್ದ ಬೃಹತ್ ಸಾಲುಮರಗಳು ಮಾಯವಾಗಿದ್ದವು. ಅವುಗಳ. ಬದಲು ಹಾಕಿದ್ದ ಇತರ ಮರಗಳೂ ದೊಡ್ಡದಾಗಿ ಬೆಳೆದಿದ್ದವು. ಇವುಗಳು ನಾನು ಬೆಂಗಳೂರನ್ನು ಬಿಟ್ಟು ಎಷ್ಟು ವರ್ಷಗಳಾಗಿದ್ದವು ಎಂಬುದನ್ನು ಸೂಚಿಸುತ್ತದೆ. ಆ ರಸ್ತೆಯಲ್ಲಿ ಗುರುತೇ ಸಿಗದಂತಹ ಅನೇಕ ಕಟ್ಟಡಗಳೂ ಗಿಡಗಳು ಉದಯಿಸಿ ನಾನು ಎಲ್ಲಿದ್ದೇನೆಂಬುದೂ ನನಗೆ ಸಂಶಯ ಬಂದಿತ್ತು. ಗಡಿಯಾರದ ಗೋಪುರವಿದ್ದ ನನ್ನ ನೆಚ್ಚಿನ ನ್ಯಾಷನಲ್ ಹೈಸ್ಕೂಲಿನ ಕಟ್ಟಡವು ಅಡ್ಡಲಾಗಿ ಬಂದ ಹೊಸಕಟ್ಟಡದಿಂದ ಮರೆಯಾಗಿದ್ದಿತು. ಹತ್ತಿರವೇ ಇದ್ದ ವಾಣಿವಿಲಾಸ್ ವೃತ್ತವು ಪಾಳುಬಿದ್ದು ಅದರಲ್ಲಿ ಇದ್ದ ’ಐದು ಲಾಂದ್ರದ ಕಂಬ’ ಮುರಿದು ಅಡ್ಡಲಾಗಿ ಬಿದ್ದಿತ್ತು. ಈಗ ಆ ಜಾಗದಲ್ಲಿ ಒಂದು ಮೇಲುಹಾದಿಯನ್ನು ಕಟ್ಟುತ್ತಿದ್ದರು, ಅದಕ್ಕೆ ’ನರಸಿಂಹಯ್ಯಫ್ಲಯ್‍ಒವರ್’ ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಜಾಗವನ್ನು ದಾಟಿ ಅದೇ ರಸ್ಥೆಯಲ್ಲಿ ಮುಂದುವರೆದು ನನ್ನ ತಮ್ಮನ ಮನೆಗೆ ತೆರಳಿದೆನು. ಅಲ್ಲೇ ಇದ್ದ ಅಡ್ಡರಸ್ಥೆ ಹೆಚ್ ಬಿ ಸಮಾಜ ರಸ್ಥೆಯ ಮೂಲೆಗೆ ಬಂದು ನಿಲ್ಲಲು, ನನ್ನ ಮನಸ್ಸಿನಲ್ಲಿ ಹಳೆಯ ನೆನಪುಗಳು ಹರಿಯತೊಡಗಿದವು. ನನ್ನ ಕಣ್ಣುಗಳು ಮಂಜಾದವು, ನನ್ನ ಕಿವಿಗಳು ಮಂದವಾದವು, ಚಲಿಸುತ್ತಿದ್ದ ವಾಹನಗಳು ನಿಶ್ಶಬ್ದವಾದವು. ನನ್ನ ಮನಸ್ಸು ನನ್ನನ್ನು ನನ್ನ ಬಾಲ್ಯಕ್ಕೆ ಕೊಂಡೊಯ್ಯಿತು.

ಪೊಲೀಸಿನ ಗುಂಡಿಗೆ ಹತನಾದ ಯುವಕ  

The Spot
ದಾಸಪ್ಪನ ಮಗ ಪೊಲೀಸಿನ ಗುಂಡಿಗೆ ಬಲಿಯಾದ ಸ್ಥಳ. ಹೆಚ್ ಬಿ ಸಮಾಜ ರಸ್ಥೆ ಮತ್ತು ಕೆ ಆರ್ ರೋಡು ಸೇರುವ ಜಾಗದಲ್ಲಿ (Photo t by Sundar Raj Cavale taken on 5th October 2015)

ಆ ದಿನ ವರಮಹಾಲಕ್ಷ್ಮಿಯ ಹಬ್ಬದ ದಿನವಾಗಿದ್ದಿತು ನಮಗೆಲ್ಲರಿಗೂ ಸಂಭ್ರಮವೇ ಸಂಭ್ರಮ. ನಮ್ಮ ಮನೆ, ಚಿಕ್ಕಪ್ಪನವರ ಮನೆ ಮತ್ತು ಸೋದರತ್ತೆಯ ಮನೆಗಳು ಒಂದರ ಪಕ್ಕದೊಂದರಲ್ಲಿದ್ದವು. ಒಳ ಕಾಂಪೌಂಡುಗಳಲ್ಲಿದ್ದ ಗೇಟುಗಳ ಮೂಲಕ ನೆಂಟರೆಲ್ಲರೂ ಮಕ್ಕಳ ಸಮೇತ ತೆರಳಿ ನಮ್ಮ ಸೋದರತ್ತೆಯವರ ಮನೆಯಲ್ಲಿ ಊಟಕ್ಕೆ ಕುಳಿತ್ತಿದ್ದೆವು. ರುಚಿಯದ ಊಟವನ್ನು ಎಲ್ಲರೂ ಸವಿಯುತ್ತಿದ್ದೆವು. ನಾವು ಮಕ್ಕಳೂಸೇರಿ ಎಲ್ಲರೂ ನಿಶ್ಯಬ್ಧವಾಗಿ ಊಟಮಾಡುತ್ತಿದ್ದೆವು. ಜನ ಮತ್ತು ವಾಹನಗಳ ಸಂಚಾರವಿಲ್ಲದುದರಿಂದ ಊರೇ ನಿಶ್ಯಬ್ಧವಾಗಿತ್ತು. ಹೀಗಿರುವಲ್ಲಿ ಇದ್ದಕ್ಕಿದ್ದಹಾಗೆ, ’ಠಫಾರ್, ಠಫಾರ್’ ಎಂಬ ಶಬ್ಧವು ಆಕಾಶದಲ್ಲಿನ ಮರುಧ್ವನಿಗಳ ಅಲ್ಲದೆ ಕಾಗೆಗಳ ’ಕಾ-ಕಾ’ ಗಳೊಂದಿಗೆ ಕೇಳಿಸಿದವು. ಹಿರಿಯರು ಅದು ಬಂದೂಕದ ಶಬ್ದವೆಂದರು. ಊಟಮಾಡುತ್ತಿದ್ದವರೆಲ್ಲರೂ ಕೈಗಳನ್ನು ಅರ್ಧಕ್ಕೇ ನಿಲ್ಲಿಸಿ ಹಿರಿಯರೆಲ್ಲರೂ ಮಕ್ಕಳಾದ ನಮ್ಮೆಲ್ಲರ ಕಡೆಗೆ ಕಣ್ಣು ಹಾಯಿಸಿದರು. ಎಲ್ಲಾ ಸಣ್ಣ ಮಕ್ಕಳುಗಳು ಅಲ್ಲಿದ್ದವು, ಆದರೆ ಸ್ವಲ್ಪ ಹಿರಿಯರಾದ ನಮ್ಮ ಅಣ್ಣರಿಬ್ಬರೂ ಮತ್ತು ಸೋದರತ್ತೆಯ ಮಗನೂ ಸೇರಿ ಮೂವರು ಅಲ್ಲಿ ಇರಲಿಲ್ಲ!   ನಮ್ಮ ತಂದೆಯವರು, ಚಿಕ್ಕಪ್ಪನವರು ಮತ್ತು ಸೊದರತ್ತೆಯವರು ಊಟವನ್ನು ಅರ್ಧಕ್ಕೇ ನಿಲ್ಲಿಸಿ ಈ ಮೂರು ಮಕ್ಕಳನ್ನು ಹುಡುಕಲು ಹೊರಟರು. ಬಸವನಗುಡಿಯಲ್ಲಿರುವ ಮನೆಗಳಿಗೆಲ್ಲಾ ಕಾಂಪೌಂಡುಗಳಿದ್ದು, ಎಲ್ಲಾ ಮನೆಗಳ ಹಿಂಬದಿಯಲ್ಲಿ ಕನ್ಸರ್ವೆನ್ಸಿ ರಸ್ಥೆಯೆಂಬ ಸಣ್ಣ ರಸ್ಥೆಗಳಿರುವವು. ಈ ರಸ್ಥೆಗಳ ಮೂಲಕ ಈ ಹಿರಿಯರು ಈ ಅಲೆಮಾರಿ ಮಕ್ಕಳನ್ನು ಕೆ ಆರ್ ರಸ್ಥೆಯ ಹಿಂಬದಿಯ ರಸ್ಥೆಯಲ್ಲಿ ಕಂಡು ಅವರನ್ನು ಒದೆಗಳೊಂದಿಗೆ ಎಳೆದುಕೊಂಡು ಮನೆಗೆ ಸೇರಿದರು. ಅಲ್ಲಿ ಪೊಲೀಸಿನ ಗುಂಡಿಗೆ ಹತನಾದ ಯುವಕನು ನಮ್ಮ ಮನೆಯ ಬಳಿ ವಾಸಮಾಡುತ್ತಿದ್ದ ’ದಾಸಿ’ ಎಂಬ ಜಟಕಗಾಡಿಯ ಚಾಲಕನ ಮಗನೆಂದೂ, ಗುಂಡಿನೇಟಿಗೆ ರಸ್ಥೆಯಲ್ಲಿ ಬಿದ್ದಿದ್ದ ಆ ಯುವಕನನ್ನು ಪೊಲೀಸಿನವರು ಎಳೆದು ತಮ್ಮ ವ್ಯಾನಿನೊಳಗೆ ಹೇರಿಸಿದ್ದನ್ನು ತಾನು ಸ್ವತಹ ನೋಡಿದೆನೆಂದು ನಮ್ಮ ದೊಡ್ಡಣ್ಣನಿಂದಲೇ ತಿಳಿಯಿತು. ಪೊಲೀಸಿನವರು ಏತಕೆ ಗುಂಡುಹಾರಿಸಿದರು? ಅಲ್ಲದೇ ಆ ಬಡಪಾಯಿ ಜಟಕ ಗಾಡಿಯ ಚಾಲಕನ ಮಗನನ್ನೇಕೆ ಕೊಂದರು? ಎಂಬ ವಿಚಾರಗಳಿಗೆ ’ದಾಸಿ’ ಎಂಬ ಆ ಚಾಲಕನ ವಿಚಾರ ಮತ್ತು ಅಂದಿನ ಮೈಸೂರು ರಾಜ್ಯದ ಚರಿತ್ರೆಯನ್ನು ಸ್ವಲ್ಪ ಅರಿಯುವುದು ಅವಶ್ಯಕ.

ಮೊದಲನೆಯ ಮಹಾಯುದ್ಧದ ಶತಾಬ್ಧಿ

ಮಹಿಳೆಯು ಪುಷ್ಪ ಹಾರೈಸುತ್ತಿರುವವನ ಎಡಪಕ್ಕದಲ್ಲಿರುವ ಯೋಧನ ಹಾಗೆ ’ದಾಸಪ್ಪನು’ ಇದ್ದನು. (photo from BBC website)
ಮಧ್ಯದಲ್ಲಿರುವ ಯೋಧ ’ದಾಸಪ್ಪ’ನ ತದ್ರೂಪ! (ಕೃಪೆ : BBC website)

ಈಗ ಯೂರೋಪಿನಾದ್ಯಂತ ಮೊದಲನೆಯ ಮಹಾಯುದ್ಧದ 1914-1918   ಶತಾಬ್ಧಿಯನ್ನು ಆಚರಿಸುತ್ತಿದ್ದಾರೆ. ಆ ಯುದ್ಧದಲ್ಲಿ ಭಾರತದ ಲಕ್ಷಾಂತರ ಸಾಮಾನ್ಯ ಯೋಧರು ಬ್ರಿಟಿಷರ ಸೈನ್ಯಕ್ಕೆ ಸೇವೆ ಸಲ್ಲಿಸಿದ್ದರು. ಅವರಲ್ಲಿ ಅನೇಕ ಕನ್ನಡಿಗರೂ ಇದ್ದರು. ಆದರೂ ಈ ಭಾರತದ ಯೋಧರನ್ನು ಆಗ ಮತ್ತು ಈಗಲೂಕೂಡ ಭಾರತದಲ್ಲಿ ಮನ್ನಿಸಿ ಗಣನೆಗೆ ತೆಗೆದುಕೊಳ್ಳುವವರು ಅತಿವಿರಳ. ಅದೇಕೆಂದರೆ ಬ್ರಿಟಿಷರ ಮತ್ತು ಅವರಿಗೆ ಸಂಭಂಧಪಟ್ಟ ಯಾವುದೇ ವಿಚಾರಗಳನ್ನು ಒಂದೇ ಹೊಡೆತದಲ್ಲಿ ತಿರಸ್ಕರಿಸುವುದು ಅವರಿಗೆ ಒಂದು ಭೂಷಣ. ಈ ತಿರಸ್ಕಾರದಲ್ಲಿ ತ್ಯಾಗಮಾಡಿದ ಭಾರತದ ಈ ಯೋಧರು ಮರೆತು ಹೋಗಿದ್ದಾರೆ. ಮಹಾತ್ಮ ಗಾಂಧಿಯವರೂಕೂಡ ಈ ಯೋಧರನ್ನು ಯುದ್ಧಕ್ಕೆ ಕಳುಹಿಸುವುದಕ್ಕೆ ತಮ್ಮ ಸಮ್ಮತವನ್ನು ನೀಡಿದ್ದರು. ಆದರೂ ಆಗಿನ ಜನತೆಯು ಸ್ವಾತಂತ್ರ್ಯಗಳಿಸಲು ಪ್ರೇರಿತರಾಗಿ, ಬ್ರಿಟಿಷರ ಆಡಳಿತದ ಸರ್ಕಾರ ಮತ್ತು ಸೈನ್ಯದಲ್ಲಿ ಕೆಲಸಮಾಡುವವರನ್ನು ಭಾರತದ ವೈರಿಗಳು ಎಂದು ಪರಿಗಣಿಸುತ್ತಿದ್ದರು. ಆದುದರಿಂದ ಈ ಯೋಧರನ್ನು ಮರೆತಿರುವುದು ಆಶ್ಚರ್ಯವಲ್ಲ. ಒಂದು ಸಮಯ ಭಾರತಕ್ಕೆ ಬ್ರಿಟಿಷರು ಅಥವ ಇತರ ಯೂರೋಪಿಯನ್ನರು ಬರದೇ ಹೋಗಿದ್ದರೆ ಭಾರತವು ಯಾವತರಹದ ವಿವಿಧ ವಿಭಾಗಗಳಾದ ರಾಜ್ಯಗಳಾಗುತ್ತಿತ್ತು ಅಥವ ಯಾವ ರೀತಿಯ ದೇಶವಾಗುತ್ತಿತ್ತು ಎಂಬುದನ್ನು ಯೋಚಿಸುವುದು ಈ ನನ್ನ ಲೇಖನಕ್ಕೆ ಸಂಗತವಾದುದಲ್ಲ.

ದಾಸಪ್ಪ

ಮೊದಲನೆಯ ಮಹಾಯುದ್ಧದ  ಒಬ್ಬ ಭಾರತದ ನಿವೃತ್ತ ಯೋಧನನ್ನು ನಾನು ಕಂಡಿದ್ದೆ ಅಲ್ಲದೆ ಆತನು ನಮ್ಮ ಮನೆತನ ಮತ್ತು ಸಮುದಾಯಕ್ಕೆ ಬಹಳ ಬೇಕಾದವನಾಗಿದ್ದ. ಆತನ ಹೆಸರು ದಾಸಪ್ಪ ಎಂದು. ಆತನು ಈಜಿಪ್ಟಿನ ಕದನದಲ್ಲಿ ಎಡಗಾಲಿಗೆ ಗಾಸಿಗೊಂಡು ಊನನಾಗಿ ಕುಂಟುತ್ತಿದ್ದನು. ನಡೆಯುವಾಗ ಅವನು ಬಗ್ಗಿ ಎಡಗಾಲಿನ ಮಂಡಿಯಮೇಲೆ ತನ್ನ ಕೈಯನ್ನು ಊರಿ ನಡೆಯುತ್ತಿದ್ದನು. ಅವನು ಖಾಕಿಬಟ್ಟೆಯ ರುಮಾಲನ್ನು ಕಟ್ಟಿದ್ದನು. ಅದರ ಮುಂಭಾಗದಲ್ಲಿ ಬಟ್ಟೆಯ ಒಂದು ಕೊನೆ ಕಿರೀಟದ ಗರಿಯಂತೆ ನಿಂತಿರುತಿತ್ತು ಮತ್ತು ಬಟ್ಟೆಯ ಹಿಂಭಾಗವು ಬಾಲದಂತೆ ಇಳಿಬಿಟ್ಟಿತ್ತು. ಆತನು ಬಹು ದಟ್ಟವಾದ ಕಪ್ಪಾದ ಹುರಿಮೀಸೆಯನ್ನು ಬಿಟ್ಟಿದ್ದನು. ಅವನ ಖಾಕಿ ಅಂಗಿ ಮತ್ತು ಶರಾಯಿಗಳಿಗೆ ಹೊಳೆಯುವ ಹಿತ್ತಾಳೆ ಗುಂಡಿಗಳಿದ್ದವು. ಒಂದು ಸಣ್ಣ ಪದಕವನ್ನೂ ತನ್ನ ಅಂಗಿಗೆ ಸಿಗಿಸಿದ್ದನು. ಅವನು ನಿವೃತ್ತನಾಗಿದ್ದರೂ ಸೈನ್ಯದ ಸಮವಸ್ತ್ರವನ್ನು ಧರಿಸುತ್ತಿದ್ದನು. ಈ ಸುಯೋಗಕ್ಕೆ ಬ್ರಿಟಿಷಿನ ಮಿಲಿಟರಿಯು ವಿಶೇಷ ಸವಲತ್ತನ್ನು ಅವನಿಗೆ ಕೊಟ್ಟಿದ್ದರು. ಆತನು ಮಾಗಡಿ ಕೇಂಪೇಗೌಡನ(2) ಸಂತತಿಯವನೆಂದೂ ಮತ್ತು ಆತನ ಮನೆತನದಲ್ಲಿ ಎಲ್ಲರೂ ಸೈನಿಕರೆಂತಲೂ ಹೇಳುತ್ತಿದ್ದನು. ಆತನನ್ನು ನಾನು ಮೊದಲು ನೋಡಿದ್ದು ಯಾವಾಗ ಎಂಬುದು ನನಗೆ ಜ್ಞಾಪಕವಿಲ್ಲ, ಏಕೆಂದರೆ ನನಗೆ ಆಗಿನ್ನೂ ಎರಡು ಅಥವ ಮೂರು ವರ್ಷಗಳ ವಯಸ್ಸು. ನನಗೆ ಅರಿವು ಮತ್ತು ತಿಳುವಳಿಕೆಗಳು ಬಂದಾಗಿನಿಂದಲೂ ದಾಸಪ್ಪನನ್ನು ನೋಡಿದ್ದೆನು. ಆದುದರೀಂದಲೇ ಆತನ ಲಕ್ಷಣದ ವಿವರಣೆಯು ನನಗೆ ಇನ್ನೂ ಸ್ಪಷ್ಟವಾಗಿ ಜ್ಞಾಪಕವಿದೆ. ಆತನು ಯಾವ ಬಿರುದು ಸನ್ಮಾನಗಳನ್ನು ಗಳಿಸಿದ ಸೇನಾಧಿಕಾರಿಯಲ್ಲ, ಯುದ್ಧದ ಯೋಧರಿಗೆ ಆಸರೆ ನೀಡುತ್ತಿದ್ದ ಸೈನ್ಯದ ಕಾಲಾಳು, ಬ್ರಿಟಿಷ್ ಸೈನ್ಯದ ’ಅಶ್ವಪಡೆ’ (Cavalry)ಯಲ್ಲಿ ಕುದುರೆಗಳನ್ನು ನೋಡಿಕೊಳ್ಳುವ ಪ್ಯಾದೆಯಾಗಿದ್ದನು.

 ’ದಾಸಿ’

Kudure Bandi
ದಾಸಪ್ಪನ ಕುದುರೆಗಾಡಿ ಈ ತರದ್ದು    CC Wiki

ದಾಸಪ್ಪನನ್ನು ಎಲ್ಲರೂ ’ದಾಸಿ’ ಎಂದು ಕರೆಯುತ್ತಿದ್ದರು. ಅದು ಅವನ ಬ್ರಿಟಿಷ್ ಅಧಿಕಾರಿಗಳು ಇಟ್ಟ ಅಡ್ಡನಾಮವಿದ್ದಿರಬಹುದು. ನಾವೆಲ್ಲರೂ ಅವನನ್ನು ಯಾವಾಗಲೂ ’ದಾಸಿ’ಎಂದೇ ಕರೆಯುತ್ತಿದ್ದೆವು. ಯುದ್ಧದಲ್ಲಿ ಊನನಾಗಿದ್ದುದರಿಂದ ಆತನನ್ನು ಬ್ರಿಟಿಷ್ ಮಿಲಿಟರಿಯು ನಿವೃತ್ತಗೊಳಿಸಿ ಆತನಿಗೆ ಮೈಸೂರು ಟಾಂಗತಹದ ಒಂದು ದೊಡ್ಡ ಜಟಕಾ ಬಂಡಿಯನ್ನು ಕುದುರೆಯ ಸಹಿತ ಪಿಂಚಿಣಿಯೊಂದಿಗೆ ಕೊಟ್ಟಿದ್ದರು. ಅದರ ಜೊತೆಗೆ ಗಾಡಿಯ ದುರಸ್ತಿಗೆ, ಕುದುರೆಯ ಸಂರಕ್ಷಣೆಗೆ ಮತ್ತು ಆತನ ಮೀಸೆಯನ್ನು ಆಗಿನ ಮಿಲಿಟರಿಯ ನಿಯಮದಂತೆ ಬೆಳೆಸಿ ಅದಕ್ಕೆ ಕಪ್ಪುರಂಗನ್ನು ಲೇಪಿಸಲು ’ಮೀಸೆಯ ಭತ್ಯ’ವನ್ನೂ ಅವನಿಗೆ ಜೀವನಾಂಶದೊಂದಿಗೆ ಕೊಡುತ್ತಿದ್ದರು. ಬ್ರಿಟಿಷಿನ ದಂಡು ನೇರವಾಗಿ ಇಂಗ್ಲೆಂಡಿನ ಸರ್ಕಾರದ ಆಳ್ವಿಕೆಯಲ್ಲಿದ್ದುದರಿಂದ ಈ ಪಿಂಚಿಣಿಗಳು ದಾಸಪ್ಪನಿಗೆ ನೇರವಾಗಿ ಲಂಡನ್ನಿನಿಂದ ಬರುತ್ತಿದ್ದವು. ಬಸವನಗುಡಿಯಲ್ಲಿದ್ದ ನಮ್ಮ ಮನೆಯ ಹತ್ತಿರವೇ ಇದ್ದ ಪಕ್ಕದ ರಸ್ಥೆಯ ಒಳಭಾಗದ ಓಣಿಯಲ್ಲಿದ್ದ ಒಬ್ಬರ ಮನೆಯ ಗಾಡೀಖಾನೆಯಲ್ಲಿ ಆತನು ತನ್ನ ಹೆಂಡತಿ ಮತ್ತು ಮಗನೊಂದಿಗೆ ವಾಸವಾಗಿದ್ದನು. ಬೆಂಗಳೂರಿನ ಬಸವನಗುಡಿಯಲ್ಲಿ ಅನೇಕ ನಿವೃತ್ತ ಉನ್ನತ ಸರ್ಕಾರಾಧಿಕಾರಿಗಳೂ ಅಲ್ಲದೆ ನಮ್ಮ ಮನೆತನದಹಾಗೆ ಅನೇಕ ಮಧ್ಯಮ ವರ್ಗದವರು ನೆಲೆಸಿದ್ದರು. ಹಲವಾರು ಗಣ್ಯರು ಮೋಟಾರುವಾಹನಗಳನ್ನು ಮತ್ತು ಕುದುರೆಯ ಕೋಚ್‌ಗಾಡಿಗಳನ್ನು ಹೊಂದಿದ್ದರು. ಆದರೆ ನಮ್ಮ ಮನೆತನದವರ ಹಾಗೆ ಇದ್ದ ಅನೇಕ ಸಂಸಾರಗಳಿಗೆ ’ದಾಸಿ’ಯ ಗಾಡಿ ಮತ್ತು ಇತರ ಜಟಕಾಗಾಡಿಗಳೇ ಮುಖ್ಯ ಸಾರಿಗೆಗಳಾಗಿದ್ದವು. ದಾಸಿಯು ನಮಗೆ ಎಷ್ಟು ಪರಿಚಿತನಾಗಿದ್ದನೆಂದರೆ ಅನೇಕಸಲ ನಾನು ನನ್ನ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ದಾಸಿಯೂ ತನ್ನಗಾಡಿಯಲ್ಲಿ ತನ್ನ ಮನೆಗೆ ಹಿಂತಿರುಗುತ್ತಿದ್ದನು. ಅವನು ನನ್ನನ್ನು ನೋಡಿ, ’ಏಯ್ ರಾಜಪ್ಪಾ, ಬಾಪ್ಪ, ನನ್‌ಗಾಡಿಯಾಕ್ಕೆ ಕೂಂಡ್ರಪ್ಪ’ ಎಂದು ಕರೆಯುತ್ತಿದ್ದನು. ಅದ್ದಕ್ಕೆ ನಾನು, ’ಪರವಾಗಿಲ್ಲ ದಾಸೀ ನಾನು ನಡಕೊಂಡೇ ಮನೆಗೆ ಹೋಗುತ್ತೀನಿ’ ಅಂದ್ರೆ ಅವನು, ’ಅದ್ಯಾಕ್ಕ? ನೀನು ಕುಂಡ್ರೂನೂ ನನ್ ಕುದ್ರೆ ಮನೀಕಡೆ ಓಯ್ತದೆ, ಕುಂಡ್ರ್‌ದೇ ಇದ್ರೂನು ಓಯ್ತದೆ, ಬಾ ಇತ್ಲಾಗ್ ಬಂದ್ ಕುಂಡ್ರು’ ಎಂದು ನನಗೆ ಒತ್ತಾಯಿಸುತ್ತಿದ್ದನು.

ಬೆಂಗಳೂರಿನ ಕರಗ

BengaluruKaraga GreyScale
ಬೆಂಗಳೂರು ಕರಗ

ನಾನು ಮತ್ತು ನನ್ನ ಸಹೋದರ ಸಹೋದರಿಯರೆಲ್ಲರೂ ಬಹಳ ಚಿಕ್ಕ ವಯಸ್ಸಿನವರಾಗಿದ್ದುದರಿಂದ ನಾವೆಲ್ಲ ಎಂಟುಮಕ್ಕಳೂ ದಾಸಿಗಾಡಿಯಲ್ಲಿ ಒಟ್ಟಾಗಿ ನಮ್ಮ ಅಮ್ಮಳೊಂದಿಗೆ ಕೂಡುತ್ತಿದ್ದೆವು. ನನ್ನ ಇಬ್ಬರು ಅಣ್ಣಂದಿರು ದಾಸಿಯ ಪಕ್ಕದಲ್ಲಿ ಜಟಕಾದ ಮುಂಭಾಗದಲ್ಲಿ ಮುಮ್ಮುಖವಾಗಿ ಕೂರುತ್ತಿದ್ದರು. ನಮ್ಮ ತಂದೆ ಮತ್ತು ಸೋದರಮಾವ ತಮ್ಮ ಸೈಕಲ್ಲುಗಳಮೇಲೆ ನಮ್ಮನ್ನು ಹಿಂಬಾಲಿಸುತ್ತಿದ್ದರು. ಹೀಗಿತ್ತು ನಮ್ಮ ಮೆರವಣಿಗೆ. ಮಿನರ್ವ ಟಾಕಿಸ್, ಶಿವಾಜಿ ಟಾಕಿಸ್, ಸಿಟಿಟಾಕಿಸ್, ಪ್ರಭಾತ್ ಟಾಕಿಸ್‍ಗಳಂತಹ ಸಿನಿಮಾಗಳಿಗೆ ಪ್ರತಿ ತಿಂಗಳೂ ಹೊಸದಾಗಿ ಬರುತ್ತಿದ್ದ ಸಿನಿಮಾಗಳಿಗೆ ನಮ್ಮ ಮೆರವಣಿಗೆ ಸಾಗುತ್ತಿತ್ತು. ಸಿಟಿ ಮಾರ್ಕೆಟ್ಟಿನ ಪಕ್ಕದಲ್ಲೇ ಇದ್ದ ಡಾಕ್ಟರಾಗಿದ್ದ ನಮ್ಮ ತಂದೆಯವರ ಶಾಪಿಗೆ ಹೋಗುವುದೆಂದರೆ ನಮಗೆ ಬಹಳ ಸಂಭ್ರಮ. ಇದನ್ನು ಯಾವಾಗಲೂ ಎದುರು ನೋಡುತ್ತಿದ್ದೆವು. ಏಕೆಂದರೆ ನಮ್ಮ ತಂದೆಯವರ ಶಾಪಿನ ಪಕ್ಕದಲ್ಲೇ ಒಂದು ’ಹೊಟೆಲ್’ ಇದ್ದಿತು. ಶಾಪಿನ ಒಳ ಕೊಠಡಿಯ ಹಿಂಭಾಗದಲ್ಲಿ ಒಂದು ಬಾಗಿಲಿತ್ತು. ಅದನ್ನು ತೆರೆದರೆ ಹೊಟೆಲ್ಲಿನ ಅಡುಗೆಮನೆಗೆ ಒಯ್ಯುತ್ತಿತ್ತು. ಅಲ್ಲಿಂದ ನೇರವಾಗಿ ನಮ್ಮೆಲ್ಲರಿಗೂ ಸರಾಗವಾಗಿ ದೋಸೆಗಳು ಒದಗುತ್ತಿದ್ದವು. ಆ ದೋಸೆಗಳಂಥಹ ರುಚಿಯನ್ನು ಯಾವ ಸ್ಥಳದಲ್ಲೂ ಇನ್ನೂ ಕಂಡಿಲ್ಲ. ದೋಸೆಯ ರುಚಿಯೊಂದೇ ಅಲ್ಲ ನಮಗೆ ಆಕರ್ಷಕ, ಬೆಂಗಳೂರಿನ ಕರಗದ ರಥಗಳ ಮೆರವಣಿಗೆಯನ್ನು ನೋಡುವುದೂ ನಮಗೆ ವಿಶೇಷ. ಪ್ರಸಿದ್ಧವಾದ ಬೆಂಗಳೂರಿನ ಕರಗ ದೊಡ್ಡಪೇಟೆಯ ಧರ್ಮರಾಯನ ದೇವಸ್ಥಾನದಿಂದ ಹೊರಟು ಸಿಟಿಮಾರ್ಕೆಟ್ಟಿನ ಮುಂದೆ ಸಾಗಿ ನಮ್ಮ ತಂದೆಯವರ ಶಾಪಿನ ಮುಂದೆ ಬಂದು, ಅರಳೇ ಪೇಟೆ, ಚಿಕ್ಕಪೇಟೆ, ಬಳೇಪೇಟೆ ಮತ್ತು ಬೆಂಗಳೂರಿನ ಇತರ ಹಳೆಯಪೇಟೆಗಳನ್ನು ಸುತ್ತಿ ವಾಪಸ್ಸು ಧರ್ಮರಾಯನ ದೇವಸ್ಥಾನಕ್ಕೆ ಹಿಂತಿರುಗುತ್ತಿತ್ತು. ’ಕರಗವು’ ಸಾಮಾನ್ಯವಾಗಿ ಮಧ್ಯರಾತ್ರಿ ಹೊರಟು ಸೂರ್ಯೋದಯಕ್ಕೆ ಮುಂಚೆ ತನ್ನ ಚಾಲನೆಯನ್ನು ಮುಗಿಸುವುದು. ನಾವುಗಳೆಲ್ಲರೂ ಬಹು ಚಿಕ್ಕವರಾಗಿದ್ದುದರಿಂದ ನಮ್ಮನ್ನು ಕರಗ ನೋಡಲು ನಮ್ಮ ತಂದೆಯವರು ಕರೆದೊಯ್ಯುತ್ತಿರಲಿಲ್ಲ. ಪ್ರತಿ ವರ್ಷವೂ ಬೆಳಗ್ಗೆ ಎಂಟು ಗಂಟೆಯಮೇಲೆ ಹೊರಡುತ್ತಿದ್ದ ವಿವಿಧ ಅಲಂಕೃತ ರಥಗಳ ಮೆರವಣಿಗೆಯನ್ನು ನೋಡುತ್ತಿದ್ದೆವು ಜೊತೆಗೆ ದೋಸೆಯ ಸ್ವಾದವೂ ಲಭಿಸುತ್ತಿತ್ತು.

ಕರಗದ ಹುಣ್ಣಿಮೆಗೆ ಹಿಡಿದ ‘ಗ್ರಹಣ’! 

ಒಂದು ಸಲ ಕರಗದ ಹುಣ್ಣಿಮೆಯ ರಾತ್ರಿ ಚಂದ್ರ ಗ್ರಹಣವೂ ಆಗಿತ್ತು. ಆದುದರಿಂದ ’ಕರಗ’ವು ಗ್ರಹಣ ಮುಗಿದಮೇಲೆ ಬೆಳಗ್ಗೆ ಐದುವರೆಗೆ ಹೊರಡುವುದಾಗಿತ್ತು. ಇದರಿಂದ ನಮ್ಮಂತಹ ಸಣ್ಣ ಮಕ್ಕಳಿಗೆ ನಿಜವಾದ ’ಕರಗ’ವನ್ನು ನೋಡುವ ಅವಕಾಶ ಒದಗಲು ನಮ್ಮ ತಂದೆಯವರು ’ದಾಸಿ’ಗೆ ನಮ್ಮನ್ನೊಯ್ಯಲು ಬೆಳಗ್ಗೆ ಐದು ಗಂಟೆಗೇ ನಮ್ಮ ಮನೆಗೆ ಬರಲು ಹೇಳಿದ್ದರು. ನಿಷ್ಠಾವಂತ ದಾಸಿಯು ಬಳಗ್ಗೆ ನಾಲ್ಕು ಗಂಟೆಯ ಕತ್ತಲೆಯಲ್ಲೇ ತನ್ನ ಗಾಡಿಯೊಂದಿಗೆ ನಮ್ಮ ಮನೆಯಮುಂದೆ ಬಂದು ತೂಕಡಿಸುತ್ತಾ ಕಾಯುತ್ತಿದ್ದನು. ನಾವೆಲ್ಲರೂ ಐದುಗಂಟೆಗೆ ಗಾಡಿಯನ್ನೇರಿ ಹೊರಟು ವಿಶ್ವೇಶ್ವರಪುರದ ಬಳಿಬಂದಾಗ ಇನ್ನೇನೂ ಬೆಳಕು ಹರಿಯತೊಡಗಿತು ಎನ್ನುವಾಗ ಅದೇವೇಳೆಗೆ ಒಬ್ಬಪೊಲೀಸಿನವನು ನಾವಿದ್ದಗಾಡಿಯನ್ನು ನಿಲ್ಲಿಸಿ, ಗಾಡಿಗೆ ಲೈಟಿಲ್ಲದೆ ಓಡಿಸುತ್ತಿರುವುದರಿಂದ ಜುಲ್ಮಾನೆಯನ್ನು ಕೋಡಬೇಕೆಂದು ದಾಸಿಗೆ, ಒತ್ತಾಯಿಸಿದನು. ಹಿಂದಿನ ವರ್ಷದಲ್ಲಿ ಆಗತಾನೇ ಭಾರತಕ್ಕೆ ಸ್ವಾತಂತ್ರ್ಯ ಬಂದು ಸರ್ಕಾರವು ಬದಲಾಗಿತ್ತು. ಈ ಬದಲಾವಣೆಯ ಅಲ್ಲೋಲ ಕಲ್ಲೋಲದಲ್ಲಿ ದಾಸಿಯ ಪಿಂಚಿಣಿಗಳೆಲ್ಲವೂ ಮಾಯವಾಗಿದ್ದವು. ದಾಸಿಗೆ ದಾರಿದ್ರ್ಯವು ಎದುರುನೋಡುತ್ತಿತ್ತು. ಈ ಪೊಲೀಸಿನ ಕಿರುಕುಳಕ್ಕೆ ರೋಸಿಹೋಗಿ ದಾಸಿಯು ಅವನಿಗೆ ಬಯ್ಯತೊಡಗಿದನು, ’ಈ ಸರ್ಕಾರ ಬಂದು ನನ್ನ ಪಿಂಚಿಣಿಗಳನ್ನೆಲಾ ಕಸಿದು ನನ್ನನ್ನು ದರಿದ್ರನನ್ನಾಗಿ ಮಾಡಿದ್ದಲ್ಲದೇ ಈಗ ನನ್ನ ಬಳಿಯಿರುವ ಪುಡಿಕಾಸಿನ ಮೇಲೂ ನಿನ್ನ ಕಣ್ಣು’ ಎಂದು ಹೇಳಿ, ಬರಿಯುವುದಕ್ಕಾಗದ ವಾಕ್ಯಗಳಿಂದ ಅವನನ್ನು ಬಯ್ಯತೊಡಗಿದನು. ಅಷ್ಟು ಹೊತ್ತಿಗೆ ಸ್ವಲ್ಪ ಬೆಳಕು ಹರಿಯಲು ಹಲವು ಜನ ಸೇರಲು ಪೊಲೀಸಿನವನು ಅಲ್ಲಿಂದ ಕಾಲ್ತೆಗೆದನು. ಆದರೂ ನಾವುಗಳೆಲ್ಲಾ ಕರಗವನ್ನು ಮೊಟ್ಟಮೊದಲು ನೋಡಿದೆವು.

ಅದೇ ವರ್ಷ ಅಂದರೆ ೧೯೪೮ರ ಸೆಪ್ಟೆಂಬರ್ ಇರಬಹುದು ಮೈಸೂರು ಮಹಾರಾಜರು ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದರೂ ತಮ್ಮ ರಾಜ್ಯಭಾರವನ್ನು ಭಾರತ ಸರ್ಕಾರಕ್ಕೆ ಅಧೀನವಾಗಿ ಒಪ್ಪಿಸಲು ತಡಮಾಡಿದ್ದರು. ಬ್ರಿಟಿಷರ ಆಳ್ವಿಕೆಯಲ್ಲಿದ ಇಂಡಿಯಾದ ಅನೇಕ ರಾಜರುಗಳಾಳುತ್ತಿದ್ದ ರಾಜ್ಯಗಳನ್ನು, ಯೂರೋಪಿನಲ್ಲಿದ್ದಂತಹ ಸ್ವತಂತ್ರ ರಾಜ್ಯಗಳಹಾಗೆ ಮಾರ್ಪಡಿಸಲು ಅಂದಿನ ಮಹಾರಾಜರುಗಳು ಭಾರತ ಸರ್ಕಾರದೊಂದಿಗೆ ಸಂಧಾನಮಾಡಲು ವ್ಯವಹರಿಸುತ್ತಿದ್ದರು. ಆದರೆ ಆ ಮಹಾರಾಜರುಗಳಲ್ಲೇ ಒಪ್ಪಿಗೆಗಳಿಲ್ಲದಿರಲು ಆ ಸಂಧಾನ ಕುಸಿದುಬಿದ್ದಿತು. ಇದೇ ಕಾರಣದಿಂದ ಮೈಸೂರು ಮಹಾರಾಜರು ತಡಮಾಡಿದ್ದರು ಎಂಬುದು ಒಂದು ಮಾತು. ಆದುದರಿಂದ ಮೈಸೂರು ಪ್ರಾಂತ್ಯದ ಬೆಂಗಳೂರು, ಮೈಸೂರು ಮತ್ತು ಇತರ ನಗರಗಳಲ್ಲಿ ಮಹಾರಾಜರ ಸರ್ಕಾರದ ವಿರುದ್ಧ ತೀವ್ರವಾದ ಚಳುವಳಿಗಳು ಆರಂಭವಾದವು. ಬೆಂಗಳೂರಿನಾದ್ಯಂತ ಕರ್ಫ್ಯೂ ಆರ್ಡರನ್ನು ಹಾಕಿದ್ದರು. ಬೆಂಗಳೂರಿನ ಬಸವನಗುಡಿಯ ನ್ಯಾಶನಲ್ ಹೈಸ್ಕೂಲಿನ ಬಳಿ ಮತ್ತು ಫೋರ್ಟ್ ಹೈಸ್ಕೂಲಿನ ಬಳಿ ಈ ಚಳುವಳಿಯು ವೈಪರಿತ್ಯವಾಗಿ ಏರಿದ್ದು ಪೊಲೀಸಿನವರ ಹತೋಟಿಗೆ ಮೀರಿ ಜನಗಳ ಪ್ರಾಣ ಮತ್ತು ಸ್ವತ್ತುಗಳಿಗೆ ಹಾನಿಯ ಸಂಭವವು ತೀವ್ರವಾಗಿರಲು, ಪೊಲೀಸಿನವರು ಚಳುವಳಿಗಾರರನ್ನು ’ವೀಕ್ಷಿದಾಕ್ಷಣ ಗುಂಡೇರಿಸಿ ಕೊಲ್ಲುವ’ ಆಜ್ಞೆಯನ್ನು ಜಾರಿಗೆ ತಂದಿದ್ದರು.

Dasi's Shed
ದಾಸಪ್ಪನು ವಾಸವಾಗಿದ್ದ ನವೀಕರಿಸಿದ ಗಾಡೀಖಾನೆ (Photo by Sundar Raj Cavale taken on 5th October 2015

Old soldiers never die, they just fade away!

ಆ ವರಮಹಾಲಕ್ಷ್ಮಿಯ ಹಬ್ಬದ ಪ್ರಯುಕ್ತ ದಾಸಿಯು ಸ್ನಾನ ಮಾಡಲು ಸಿದ್ಧನಾದನು. ಸ್ನಾನ ಮಾಡಲು ಸೋಪಿಲ್ಲದುದರಿಂದ ಆತನು ತನ್ನ ಮಗನನ್ನು ಸೋಪನ್ನು ತರಲು ಅಂಗಡಿಗೆ ಕಳುಹಿಸಿದ್ದನು. ಹತ್ತಿರವೇ ಇದ್ದ ಸಣ್ಣ ಅಂಗಡಿಯು ಮುಚ್ಚಿದ್ದುದರಿಂದ ಆ ಮಗನು ಗಾಂಧಿಬಜಾರಿಗೆ ತೆರಳಿದನು. ಹೋಗುವ ದಾರಿಯಲ್ಲಿ ಹೆಚ್ ಬಿ ಸಮಾಜ ರಸ್ಥೆ ಮತ್ತು ಕೆ ಆರ್ ರೋಡು ಸೇರುವ ಜಾಗದಲ್ಲಿ ವೀಕ್ಷಿದಾಕ್ಷಣ ಗುಂಡಿಟ್ಟು ಕೊಲ್ಲುವ ಆಜ್ಞೆಯು ಜಾರಿಯಲ್ಲಿದ್ದುದರಿಂದ ಅವನು ಪೊಲೀಸಿನ ಗುಂಡಿಗೆ ಬಲಿಯಾಗಿದ್ದನು. ಆ ದಿನ ಸಾಯಂಕಾಲ ಹತ್ತಿರದಲ್ಲೇ ಇದ್ದ ಕನಕನ ಪಾಳ್ಯದಲ್ಲಿದ್ದ ತನ್ನ ತಾಯಿಯ ಮನೆಯಿಂದ, ಹೊಸದಾಗಿ ಮದುವೆಯಾಗಿದ್ದ ಆ ಯುವಕನ ಹೊಸ ಪತ್ನಿಯು ಅತಿ ರೋಧನದಿಂದ ತನ್ನ ಸಂಭಂದಿಗಳೋಂದಿಗೆ ದಾಸಿಯ ಮನೆಗೆ ತೆರಳುತ್ತಿದ್ದ ದೃಷ್ಯಯು ನನಗೆ ಇನ್ನೂ ಮನದಲ್ಲಿ ಸ್ಥಿರವಾಗಿ ನಿಂತಿದೆ. ಅದೇ ವರ್ಷದ ಕೊನೆಯಲ್ಲಿ ದಾಸಿಯ ಹೆಂಡತಿಯು ಮೃತಪಟ್ಟಳು. ದಾಸಿಯು ಯಾವ ಪಿಂಚಿಣಿಗಳಿಲ್ಲದೆ ಬದುಕಲು ತನ್ನ ಕುದುರೆ ಮತ್ತು ಗಾಡಿಯನ್ನು ಮಾರಿ ತನ್ನ ಊರಾದ ಮಾಗಡಿಗೆ ತೆರಳಿದನು. ಯಾವುದೋ ಒಂದು ಹಳೆಯ ಗುಡುಸಿಲಿನಲ್ಲಿ ವಾಸವಾಗಿದ್ದು ಮಾಗಡಿಯ ದೇವಸ್ಥಾನಗಳ ಬಳಿ ಭಿಕ್ಷೆಬೇಡಿ ಹಲವು ವರ್ಷಗಳನಂತರ ದಾಸಿಯು ಒಬ್ಬೊಂಟಿಗನಾಗಿ ಅತಿದಾರಿದ್ರ್ಯದಲ್ಲಿ ಮೃಪಟ್ಟನೆಂದು ತಿಳಿಯಿತು

15 thoughts on “ಮೊದಲನೆಯ ಮಹಾಯುದ್ಧದ ಅಪರಿಚಿತ ಕನ್ನಡಿಗ ಯೋಧ –ಡಾ. ರಾಜಾರಾಮ್ ಕಾವಳೆ ಬರೆದ ಲೇಖನ

  1. Very well written. An entirely new topic for our website and great insight into the lives of people who fought in so called World Wars.

    Like

  2. Okay, Okay! I understand what you meant was that it is a pity that we do not respect our old soldiers like Dasappa and we still need to learn in that field.
    –Rajaram

    Like

  3. Dear Rajaram,
    Mea culpa! You guessed it. I meant people like Dasappa. The freedom movement in India that came after the WW1, dominated peoples thought and mind than the sacrifices by the people made for ‘the King’ if not the country as in British Isles. People here joined army for economic reasons rather than political as we were so far from Europe unlike the Irish subjects who fought with the English and the Scots, although, I guess, their own fight for ‘Home Rule’ had started earlier.

    Like

  4. Dear Rajaram,
    I am joining in the debate, for what it is worth! I agree with your last point that we have benefitted from the Western way of thinking. Language and stability (they ruled us a long time) modified our thinking. We couldn’t have progressed so fast in IT without our English. It was studying in the west that ignited their freedom fight. However we do not respect our fighters as you and Vinate comment. We still need to learn in that field.

    Like

    • Dear Shrivatsa,
      Thanks for your participation in this debate. I did not understand when you said, ‘However we do not respect our fighters…….’etc. Did you mean that we do not respect our fighters like Dasappa who fought in the WW1 or do you mean the so called freedom fighters of India?
      Rajaram

      Like

  5. Thank you Dr. Vinathe Sharma for your comments and appreciation of my article. I did not realise that I raised some academically relevant research points! My main purpose of my article was to bring to the attention of the younger generation of Karnataka about sacrifices of very ordinary citizens of India during those colonial days. The opening up of the opportunities that were available during those days during British Colonial time gave ordinary people to earn a living and improve their living standard. Working for the British was not their fault and they were not really the enemies of India. They were working just like the modern days youngsters of India working for IT, BT companies of foreign countries. The people of India do not consider these youngsters as ‘Enemies’ of India. Why should we consider these poor souls who fought in the two World wars as enemies of India?
    After living abroad for nearly 50 years, I begin to notice that the younger generation of India (Karnataka) waiting for the first opportunity to put down any thing British. They show off their expert knowledge on all matters and subjects, may be Google based. That is why I just mentioned in the beginning of my article about what would have been the state of India if the British had not come. They assume that India before British was a very stable and united country and the British just came and took over and robbed the country. On the contrary India was a country consisting of numerous independent kingdoms fighting with each other and the rulers were infighting within their own kingdom and many of them were trying to bring in their own ideologies as well.
    Apart from railways the people of India were benefitted by the western education and western way of thinking. Freedom fighters like Gandhi, Nehru, Bose and even Jinnah were able to confront the British only due to their western education. I do not know whether these points are of any academic significant.
    Rajaram Cavale

    Like

  6. A very good descriptive article. Some of the points that you have raised are quite relevant to academic research studies engaged with Postcolonialism around the world. Every life is precious in the colonial countries as they do care for their citizens. On the other hand, many post-colonial countries are yet to address issues related to dignity of life and labour!

    Like

  7. ಶ್ರೀವತ್ಸ ದೇಸಾಯಿಯವರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ವೀಕ್ಷಿಸಿದ ಬೆಲ್ಜಿಯಮ್ಮಿನ ಮೆನಿನ್‍ಗೇಟಿನಮೇಲೆ ಮೊದಲನೆಯ ಮಹಾಯುದ್ಧದಲ್ಲಿ ಮಡಿದ ಭಾರತದ ಯೋಧರ ಹೆಸರುಗಳನ್ನು ಬರೆದಿರುವಹಾಗೆಯೇ ದೆಹಲಿಯಲ್ಲಿರುವ ಇಂಡಿಯಾ ಗೇಟಿನಮೇಲೂ ಎಪ್ಪತ್ತು ಸಾವಿರ ಭಾರತದ ಮಡಿದ ಯೋಧರನ್ನು ಈ ದ್ವಾರದಲ್ಲಿ ಒಟ್ಟಿನಲ್ಲಿ ಸ್ಮರಿಸಲಾಗಿದೆ.
    ರಾಜಾರಾಮ ಕಾವಳೆ.

    Like

  8. ಯೋಧ ದಾಸಪ್ಪನ ಜೀವನವನ್ನು ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು. ನನಗೆ ಗೊತ್ತೇ ಇರಲಿಲ್ಲ. ಬಹಳೇ ರಸವತ್ತಾದ ಲೇಖನ. ಹೀಗೆಯೇ ಇನ್ನೆಷ್ಟೋ ಜನರು ದೇಶಕ್ಕೆ ಸೇವೆ ಮಾಡಿದ್ದಾರೋ. ‘ಆಳುವ ರಾಜ’ ರಿಗಾಗಿ ಮಡಿದಿದ್ದಾರೋ. ಬೆಲ್ಜಿಯಮ್ಮಿನ ಮೆನಿನ್ ಗೇಟಿನಲ್ಲಿ ಮೊದಲ ಮಹಾಯುದ್ಧದಲ್ಲಿ ಮಡಿದ ಯೋಧರಿಗಾಗಿ ಒಂದು ಸ್ಮಾರಕವಿದೆ. ಅದರಲ್ಲಿ ಕೆಲವು ಬಾರತೀಯರ ಹೆಸರುಗಳಿವೆ. ನಾನು Paschendaleಗೆ ಭೇಟಿ ಕೊಟ್ಟಾಗ ನಮ್ಮ ಗೈದು ನನಗೆ ಸುಬೇದಾರ್, ಹವಾಲ್ ದಾರ ಅಂದರೆ ಏನು ಎಂದು ನನ್ನನ್ನು ಕೇಳಿದ್ದ. ಬ್ರಿಟಿಶ್ ಮತ್ತು ಕಾಮನ್ ವೆಲ್ತ್ ಸಲುವಾಗಿ ಇರುವ ವೆಬ್ ಸೈಟಿನಲ್ಲಿ ಅಂಥವರ ಹೆಸರುಗಳಿವೆ. ಕನ್ನಡದವರು ದಾಸಪ್ಪನ೦ತ ಯೋಧರನ್ನು ಎಲ್ಲಿಯಾದರೂ ಹೇಗಾದರೂ ಸ್ಮರಿಸುವದು ಅವಶ್ಯ. ನಿಮ್ಮ ಅಳಿಲು ಸೇವೆ ಶ್ಲಾಘನೀಯ.

    Like

  9. ಮಾನ್ಯೆ ಉಮಾಅವರೇ,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನನ್ನ ಈ ಲೇಖನವು ’ದಟ್ಸ್‍ಕನ್ನಡ’(ಅದೋ ಕನ್ನಡ) ಅಂತರಜಾಲ ಪತ್ರಿಕೆಯಲ್ಲಿ ೨೦೦೬ರಲ್ಲಿ ಪ್ರಕಟವಾಗಿತ್ತು. ಆಗ ದಾಸಪ್ಪನಂತಹ ಮೊದಲನೆಯ ಮಹಾಯುದ್ಧದ ಯೋಧರಲ್ಲದೇ ಆ ವರ್ಷದಲ್ಲಿ(೧೯೪೮) ಅಂದಿನ ಸರ್ಕಾರದ ವಿರುದ್ಧ ನಡೆದ ’ಮೈಸೂರು ಚಲೋ’ ಎಂಬ ಚಳುವಳಿಯಬಗ್ಗೆಯೂ ಅನೇಕರಿಗೆ ಕನ್ನಡಿಗರಿಗೇ ತಿಳಿದಿರಲಿಲ್ಲ. ಆ ಚಳುವಳಿಯಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ’ರಾಮಸ್ವಾಮಿ’ ಎಂಬ ವಿದ್ಯಾರ್ಥಿಯು ಪೊಲೀಸರ ಗುಂಡಿಗೆ ಬಲಿಯಾದನು. ಅವನು ಮಡಿದ ಆ ಮೈಸೂರಿನ ವೃತ್ತಕ್ಕೆ ’ರಾಮಸ್ವಾಮಿ ಸರ್ಕಲ್’ ಎಂದು ಹೆಸರಿಡಲಾಗಿದೆ. ಆದರೆ ಬೆಂಗಳೂರಿನ ಬಸವನಗುಡಿಯಲ್ಲಿ ಗುಂಡಿನೇಟಿಗೆ ಮಡಿದ ಆ ಅನಾಮಿಕ ದಾಸಪ್ಪನ ಮಗನ ಬಗ್ಗೆ ಯಾರಿಗೂ ತಿಳಿದಿಲ್ಲ.

    Like

  10. ರಾಜಾರಾಮ್ ಅವರೆ, ಮೊದಲ ಮಹಾಯುದ್ಧದಲ್ಲಿ ದುಡಿದ ಭಾರತೀಯ ಯೋಧನೊಬ್ಬನ ಜೀವನದ ದುರಂತವನ್ನು ನಿಮ್ಮ ಮಾತುಗಳಲ್ಲಿ ಬಹಳ ಚೆನ್ನಾಗಿ ಚಿತ್ರಿಸಿದ್ದೀರಿ. ಆ ಸಮಯದಲ್ಲಿ ಬದುಕಿರದ ನಮ್ಮಂತಹವರಿಗೆ, ಅಂದಿನ ಜೀವನ ವೈಖರಿಯನ್ನು ಈ ರೀತಿಯ ಲೇಖನಗಳಲ್ಲೇ ಓದಿ ತಿಳಿಯಬೇಕಾಗಿದೆ. ದಾಸನ ಜೀವನ ನಿಜಕ್ಕೂ ದಯನೀಯ. ಜೀವನದ ಕಡೆಯ ದಿನಗಳನ್ನು ಅಂತಹ ದುರ್ಗತಿಯಲ್ಲಿ ಕಳೆದ ದಾಸನಂತಹ ಯೋಧನ ಕೊಡುಗೆಯನ್ನು ಯಾರಾದರೂ ಜನಗಳಿಗೆ ತಿಳಿಸಬೇಕು. ನಿಮ್ಮ ಲೇಖನ ಆ ಕಾರ್ಯವನ್ನು ಮಾಡಿದೆ. ಧನ್ಯವಾದಗಳು.
    ಉಮಾ ವೆಂಕಟೇಶ್

    Like

  11. Thanks Ramamurthy for your response. Dasappa’s plight refers to the war veterans of the World wars particularly the World war 1. I believe there are no more veterans of the First World war still living in India. I do not know how the second World war veterans in India are cared for now. I have seen disabled wounded Paraplegic WW2 veterans being taken round in wheel chairs in Bangalore especially in the old Cantonment area by the care home called ‘Cheshire Home’, it is still there left by the British. I think it is a part of Global charitable institutions. But I have doctor friends who were my class mates who are the veterans of wars with Pakistan and China who said that the war veterans are well cared for. But I still think that veterans of WW 1 & 2 are still forgotten in India.
    — Rajaram Cavale

    Like

  12. RRC,
    It was a pleasure to read your article but at the same time one can feel a great sadness for people like Dasa who fought in the two wars. Look at how the Chelsea pensioners are cared for in England and it is a matter of regret that there a total apathy in India towards soldiers who sacrificed their lives fighting for their country. As you know some of us in Basingstoke have been taking part in the Remenbrance day to lay a wreath to honour Indians who sacrificed their lives to fight tyranny.

    Like

Leave a comment

This site uses Akismet to reduce spam. Learn how your comment data is processed.